Homeಅಂಕಣಗಳುಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ

ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ

- Advertisement -
- Advertisement -

ಹೆಚ್.ಎಸ್.ದೊರೆಸ್ವಾಮಿ |

5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?
ಮುಳುಗು ದೋಣಿ ಮೋದಿಯೂ ನಾಜೂಕು ನಾವಿಕ ಸಂಘವೂ
5 ರಾಜ್ಯಗಳ ಚುನಾವಣೆಯಲ್ಲಿ ಸೋಲುಂಡ ಭಾರತೀಯ ಜನತಾ ಪಕ್ಷ ಅರ್ಥಾತ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕೋಮಾ ತಲುಪಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯ ಭವಿಷ್ಯವನ್ನು ತೀರ್ಮಾನಿಸುವಲ್ಲಿ ಈಗ ನಡೆದ ಚುನಾವಣೆಗಳು ನಿರ್ಣಾಯಕವಾಗಿದ್ದವು. ಜನರಿಗೆ ಮೋದಿ ಬಗೆಗೆ ಭ್ರಮಾನಿರಸನ ಆಗಿರುವುದರ ಮುನ್ಸೂಚನೆ ಇದರಿಂದ ಸಿಕ್ಕಂತಾಗಿದೆ.
ಜನಸಾಮಾನ್ಯರು ಆರೆಸ್ಸೆಸ್ ಅನ್ನು ಜನವಿರೋಧಿ ಸಂಸ್ಥೆ, ಹಿಂದೂತ್ವ ಪ್ರತಿಪಾದಕ ಸಂಸ್ಥೆ ಎಂಬ ಸಂಕುಚಿತ ಅರ್ಥದಲ್ಲಿ ಭಾವಿಸುತ್ತಿರುವುದು ಸ್ವತಃ ಸಂಘದ ಮುಖ್ಯಸ್ಥರಿಗೇ ಮನವರಿಕೆಯಾಗಿರುವುದರಿಂದ ಇನ್ಮುಂದೆ ತಮ್ಮ ಸಂಘಟನೆಗೆ ಭವಿಷ್ಯವಿಲ್ಲವೆಂದು ತಿಳಿದು ಸ್ಥಾಪಕ-ಅಧ್ಯಕ್ಷ ಹೆಡ್ಗೇವಾರರು ಬರೆದ ಪಕ್ಷದ ಸಂವಿಧಾನವನ್ನೇ ಪುನರ್‍ರಚಿಸಲು ತೀರ್ಮಾನ ಕೈಗೊಂಡಂತಿದೆ. ಅದಕ್ಕಾಗೆ ತಮ್ಮ ಪಕ್ಷದ ಸಿದ್ಧಾಂತಕ್ಕೆ ಒಗ್ಗದಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ತಮ್ಮ ಸಮಾರಂಭಕ್ಕೆ ಆಹ್ವಾನಿಸುವ ಮತ್ತು ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಬೈಠಕ್‍ಗೆ ಕರೆಸುವಂತಹ ನಾಟಕಗಳಿಗೆ ಮುಂದಾಗುತ್ತಿದೆ. ಅಂದರೆ ತನ್ನ ಸಿದ್ದಾಂತಗಳಿಂದ ಜನರನ್ನು ತಲುಪಬಹುದೇ ವಿನಾಃ ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾಗದು ಎಂಬುದು ಅರ್ಥವಾಗಿ ಹೀಗೆಲ್ಲಾ ಮಾಡುತ್ತಿದ್ದಾರಾ? ಸ್ಪಷ್ಟವಿಲ್ಲ. ಆದರೆ, ಮೋದಿ ಸವಕಲು ನಾಣ್ಯವಾಗುತ್ತಿರುವುದು ಖಾತ್ರಿಯಾದ ಮೇಲೆ ಒಂದು ರಾಜಕೀಯ ಆಟ ಕಟ್ಟಲು ಆರೆಸ್ಸೆಸ್ ಚಾಣಕ್ಯರು ಹೆಣಗಾಡುತ್ತಿರುವುದು ಮಾತ್ರ ಸತ್ಯ.
ಮೋದಿ ಮತ್ತು ಅಮಿತ್ ಶಾ ಜೋಡಿಯನ್ನು ಪಂಚರಾಜ್ಯ ಫಲಿತಾಂಶಗಳಿಗಿಂತಲೂ ಹೆಚ್ಚು ಕಂಗಾಲು ಮಾಡಿರುವುದು ಸಂಘ ಪರಿವಾರದ ಆಂತರಿಕ ಬೆಳವಣಿಗೆಗಳು. ಸ್ಥಾಪನೆಯ ದಿನದಿಂದಲೂ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷನಾಗಿದ್ದ ತನ್ನನ್ನು ಆ ಸ್ಥಾನದಿಂದ ಕಿತ್ತೊಗೆದುದಕ್ಕೆ ತೊಗಾಡಿಯ ಆರ್.ಎಸ್.ಎಸ್, ಮೋದಿ ವಿರುದ್ಧವೇ ವ್ಯಗ್ರರಾಗಿದ್ದಾರೆ. ಆರೆಸ್ಸೆಸ್ ತನ್ನನ್ನು ತಾನು ಒಂದು ರಾಜಕೀಯೇತರ ಸಂಘಟನೆಯಾಗಿ ಗುರುತಿಸಿಕೊಂಡರು ಅದರ ಮೂಲ ಅಜೆಂಡಾ ರಾಜಕೀಯವೇ ಅನ್ನೋದು ಈಗ ಗೊಂದಲದ ವಿಷಯವೇನಲ್ಲ. ಬಿಜೆಪಿ ಅದರ ರಾಜಕೀಯ ಮುಖವಾಡ ಅಷ್ಟೆ. ಆ ಮುಖವಾಡವನ್ನು ಹೇಗೆ ಬಳಸಿಕೊಳ್ಳಬೇಕು, ಯಾರಿಂದ ದುಡಿಸಿಕೊಳ್ಳಬೇಕು ಎಂಬುದನ್ನು ಅದು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಜೀವದ್ರೋಹಿ ರಥಯಾತ್ರೆಯ ಮೂಲಕ ಬಿಜೆಪಿಗೆ ಕೋಮುಧ್ರುವೀಕರಣ ಮಾಡಿಕೊಟ್ಟರೂ ಅಡ್ವಾಣಿಯವರಿಗೆ ಬದಲು ವಾಜಪೇಯಿಯನ್ನು ಪ್ರಧಾನಿಯಾಗಿ ಮುಂದಿಟ್ಟು ಮೈತ್ರಿಕೂಟದ ಸರ್ಕಾರ ರಚಿಸಿದ್ದಾಗಲಿ, ಕೊನೆಗೆ ಅದೇ ಅಡ್ವಾಣಿಯವರನ್ನೇ ಹೀನಾಯವಾಗಿ ಮೂಲೆಗುಂಪು ಮಾಡಿ ಮೋದಿಯವರನ್ನು ಬೆಳೆಸಿದ್ದಾಗಲಿ ಎಲ್ಲವೂ ಆರೆಸ್ಸೆಸ್‍ನ ರಾಜಕೀಯ ಆಟಗಳೇ ಆಗಿವೆ.
ಯಾರನ್ನು, ಯಾವಾಗ, ಹೇಗೆ `ಮಟ್ಟ’ ಹಾಕಬೇಕೆನ್ನುವ ಸೂತ್ರ ಆರೆಸ್ಸೆಸ್ ಕೈಯಲ್ಲಿರುವುದೇ ಇವತ್ತು ಮೋದಿ-ಶಾ ಜೋಡಿಗೆ ತಲೆನೋವಾಗಲಿದೆ. ಇಷ್ಟು ದಿನ ಹಲವು ಕಾರಣಗಳಿಂದ, ಹತ್ತಾರು ಕುತಂತ್ರಗಳಿಂದ ಮೋದಿ ಈ ದೇಶದಲ್ಲಿ ತನ್ನದೇ ಆದ ಹೈಪ್ ಸೃಷ್ಟಿಸಿಕೊಂಡಿದ್ದರು. ಸಂಘ ಪರಿವಾರಕ್ಕೆ ಆ ಹೈಪ್ ಬೇಕಾಗಿತ್ತು. ನೀರೆರೆದು ಪೋಷಿಸಿತ್ತು. ಸಂಘದ ಈ ಭರಪೂರ ಬೆಂಬಲ ಇದ್ದುದರಿಂದಲೇ ಮೋದಿ ಬಿಜೆಪಿಯೊಳಗೆ ಅಷ್ಟು ಬಲಿಷ್ಠವಾಗಿ, ಹಿರಿಯರನ್ನೇ ನಗಣ್ಯವಾಗಿಸುವಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾದದ್ದು. ಆದರೆ ಈಗ ಅದೇ ಮೋದಿಯ ವರ್ಚಸ್ಸು ಕುಸಿಯುತ್ತಿರುವುದನ್ನು ಪಂಚರಾಜ್ಯ ಚುನಾವಣೆಗಳು ಸಾಬೀತು ಮಾಡಿವೆ. ಇನ್ನು ಮೋದಿಯಂತಹ ಮುಳುಗುದೋಣಿಯನ್ನು ನೆಚ್ಚಿಕೊಂಡು ಕೂರುವಷ್ಟು ಸಂಘದ ಚಾಣಕ್ಯರು ದಡ್ಡರೇನಲ್ಲ. ಪರ್ಯಾಯಕ್ಕೆ ಒಳಗೊಳಗೇ ಸಿದ್ಧ ಮಾಡಿಕೊಳ್ಳತೊಡಗುತ್ತಾರೆ. ಮೋದಿಗೆ ಈ ವಾರ್ನಿಂಗ್ ಸಿಕ್ಕಿರುವುದರಿಂದಲೇ ತನ್ನ ಹಿಂಬಾಲಕರ ಮೂಲಕ ಶತಾಯಗತಾಯ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎನ್ನುವ ಲಜ್ಜೆಗೆಟ್ಟ ಅಭಿಯಾನಗಳನ್ನೆಲ್ಲ ಶುರು ಮಾಡಿಸಿದ್ದಾರೆ. ಇದು ಮುಳುಗುವ ದೋಣಿಯನ್ನು ಕೊನೆಯದಾಗಿ ಸರಿಪಡಿಸುವ ಒಂದು ಪ್ರಯತ್ನವಷ್ಟೆ. ಅದು ಯಶ ಕಾಣದು ಎಂದು ಗೊತ್ತಾದ ಕ್ಷಣವೇ ಮೋದಿಯವರು ಮತ್ತೊಬ್ಬ ಅಡ್ವಾಣಿಯಾಗಲಿದ್ದಾರೆ.
ತಾವು ಬೇರೆಬೇರೆ ಎಂದು ಎಷ್ಟು ಬೊಬ್ಬೆ ಹೊಡೆದುಕೊಂಡರೂ ಬಿಜೆಪಿ ಮತ್ತು ಸಂಘ ಪರಿವಾರವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವು ಬೆಸೆದುಕೊಂಡ ರಚನೆಗಳು. ಆದರೆ ಇದೇ ಮಾತನ್ನು ಮೋದಿ ಮತ್ತು ಸಂಘ ಪರಿವಾರಕ್ಕೆ ಅನ್ವಯಿಸಲಾಗದು. ಮೋದಿಗೆ ಸಂಘ ಅನಿವಾರ್ಯವೇ ಹೊರತು, ಸಂಘಕ್ಕೆ ಮೋದಿ ಅನಿವಾರ್ಯವಲ್ಲ. ಆದರೆ ಮಾತುಗಾರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡಂತೆ ಕಾಣಿಸುವುದಿಲ್ಲ. ಅದು ಅರ್ಥವಾಗುವ ಕಾಲವೂ ದೂರವಿಲ್ಲ..
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದ ಬಹುಭಾಗದಲ್ಲಿ ಪ್ರಚಂಡ ಜಯ ಗಳಿಸಿದ ಅನಂತರ ಆರ್‍ಎಸ್‍ಎಸ್ ಪರಿವಾರಗಳ ಸೊಕ್ಕು ಹೆಚ್ಚಾದದ್ದು ಸುಳ್ಳಲ್ಲ. ಮುಸ್ಲಿಂ ವಿರೋಧಿ ಮನಸ್ಥಿತಿಯ ಅಮಿತ್ ಶಾ ಮತ್ತು ಮೋದಿ ಜೋಡಿ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುತ್ತೇವೆ, ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಅಂತ ಹೊರಟದ್ದು ಕೂಡಾ ಈ ಸೊಕ್ಕಿನಿಂದಲೇ. ಇಂಥಾ ಸೊಕ್ಕಿನ ಮಾತುಗಳು ಜನತೆಗೆ ಹಿಡಿಸಲಿಲ್ಲ ಎಂದು ಆರ್‍ಎಸ್‍ಎಸ್ ಕಾರ್ಯಕರ್ತರೂ ಆಗಿದ್ದ ಹಿರಿಯ ಪತ್ರಕರ್ತರೊಬ್ಬರು ಅಭಿಪ್ರಾಯ ಪಡುತ್ತಾರೆ.
ನರೇಂದ್ರಮೋದಿಯವರು ಮಂತ್ರಿಮಂಡಲದ ಯಾವ ಮಂತ್ರಿಯೂ ಸೊಲ್ಲೆತ್ತದಂತೆ ತಾನೇ ಏಕಮೇವಾದ್ವಿತೀಯ ನಾಯಕನಂತೆ ಬೆಳೆಯಲು ಯತ್ನಿಸಿದ್ದು ಕೂಡಾ ಪ್ರಜಾಪ್ರಭುತ್ವದ ತಂತುಗಳು ಬೆಸೆದುಹೋಗಿರುವ ನಮ್ಮ ದೇಶದ ಜನರಿಗೆ ಇಷ್ಟವಾಗಲಿಲ್ಲ. ಬಿಜೆಪಿಯ ಮಟ್ಟಿಗೆ ಸಮರ್ಥೆ ಎಂದು ಕೊಂಡಾಡಿಸಿಕೊಂಡಿದ್ದ ಸುಷ್ಮಾ ಸ್ವರಾಜ್‍ರಂಥ ವಿದೇಶಾಂಗ ಸಚಿವೆ ಇದ್ದಾಗ್ಯೂ ವಿದೇಶ ಪ್ರವಾಸ, ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಾನೇ ವಿದೇಶಾಂಗ ಮಂತ್ರಿಯಂತೆ ಬಿಂಬಿಸಿಕೊಳ್ಳಲು ಮೋದಿ ಸತತ ಪ್ರಯತ್ನ ಮಾಡಿದ್ದು ಬಿಜೆಪಿಯೊಳಗೇ ಒಂದು ಗುಂಪಿನಿಂದ ಅವರನ್ನು ದೂರ ಮಾಡುತ್ತಾ ಬಂತು.
ಮೋದಿ ಇತರೆ ನಾಯಕರೊಂದಿಗೆ ಸೃಷ್ಟಿಸಿಕೊಳ್ಳುತ್ತಿರುವ ಅಂತರ ಕೇವಲ ಮೇಲ್‍ಸ್ತರದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯಕರ್ತರು ಮತ್ತು ನಾಯಕರುಗಳ ನಡುವೆಯೂ ಬಿಜೆಪಿಯಲ್ಲಿ ಈಗ ಅಂತದ್ದೊಂದು ಅಂತರ ಸೃಷ್ಟಿಯಾಗುತ್ತಿದೆ. ಚುನಾವಣಾ ಸಮಾವೇಶಗಳಷ್ಟೇ ಈಗ ಮೋದಿ ಮತ್ತು ಇತರೆ ನಾಯಕರ ನಡುವೆ ಇರುವ ಸಂಪರ್ಕ ಸೇತುಗಳು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಉಳಿಕೆ ಎರಡನೇ ಹಂತದ, ಮೂರನೇ ಹಂತದ ಹಾಗೂ ಸ್ಥಳೀಯ ನಾಯಕರುಗಳೂ ತಮ್ಮ ಕಾರ್ಯಕರ್ತರಿಂದ ದೂರವೇ ಉಳಿಯುತ್ತಿದ್ದಾರೆ.
ಕಾಲಾಳುಗಳ ಪಡೆ ಮತ್ತು ದಂಡನಾಯಕನ ಮಧ್ಯೆ ಈಗ ಕಂದಕ ಏರ್ಪಟ್ಟಿದೆ. ಬಿಜೆಪಿಯ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಂಘ ಪರಿವಾರದ ಅಂಗಸಂಸ್ಥೆಗಳಾದ ಭಾರತೀಯ ಮಜ್ದೂರ್ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ದುರ್ಗಾವಾಹಿನಿ ಮೊದಲಾದ ಪೂರಕ ಸಂಸ್ಥೆಗಳ ಸಂಪರ್ಕಸೇತು ಈಗ ಮುರಿದು ಬಿದ್ದಿದೆ.
ಈ ಸೂಕ್ಷ್ಮ ಬೆಳವಣಿಗೆ ಹೊರಜಗತ್ತಿಗೆ ಅಷ್ಟು ಸುಲಭವಾಗಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ ಮೀಡಿಯಾಗಳು ಮೋದಿಯವರ ಕಬ್ಜಾದಲ್ಲೇ ಇರುವುದರಿಂದ ಅವರಿಗೆ ಡ್ಯಾಮೇಜ್ ಮಾಡಬಹುದಾದ ಇಂತಹ ಸಂಗತಿಗಳನ್ನು ಚರ್ಚಿಸುವ ಗೋಜಿಗೇ ಹೋಗುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದೊಳಗೆ ಎಂಥಾ ಬಿರುಕೂ ಇಲ್ಲ ಎಂಬಂತೆ ಕಾಣಿಸಲಾಗುತ್ತಿದೆ. ಆದರೆ ಒಳಗೇ ಇರುವ ಆರೆಸ್ಸೆಸ್ ಇದರತ್ತ ಕುರುಡಾಗಿರಲು ಸಾಧ್ಯವಿಲ್ಲ. ಕಾರ್ಯಕರ್ತರಿಂದಲೂ ದೂರಾಗಿ, ಜನರಿಗೂ ಬೇಡವಾದ ಮೋದಿಯನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಹೋದರೆ ಸೋಲು ಖಚಿತ ಎನ್ನುವ ಅಭಿಪ್ರಾಯಕ್ಕೆ ಅದು ಬಂದಂತಿದೆ.
ಒಂದುಕಡೆ, ಕಾಂಗ್ರೆಸ್ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಮಹಾಘಟಬಂಧನ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಮೋದಿ ಮತ್ತು ಶಾ ತತ್ತರಿಸುವಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಆಂತರಿಕ ಲೆಕ್ಕಾಚಾರಗಳೂ ಅವರನ್ನು ಕಂಗಾಲಾಗಿಸುತ್ತಿವೆ.
ರಿಜರ್ವ್ ಬ್ಯಾಂಕಿನ ಗೌರ್ನರ್ ದಿಢೀರ್ ರಾಜೀನಾಮೆ ನೀಡಿದ್ದು, ಯೋಜನಾ ಆಯೋಗ ರದ್ದು ಮಾಡಿ ಮೋದಿಯವರು ರಚಿಸಿದ ನೀತಿ ಆಯೋಗ ನಿಷ್ಕ್ರಿಯವಾಗಿ ನಗೆಪಾಟಲಿಗೆ ಈಡಾಗಿರುವುದು, ಒಬ್ಬೊಬ್ಬರಾಗಿ ಪ್ರಧಾನಿ ಆರ್ಥಿಕ ಸಲಹೆಗಾರರು ಜಾಗ ಖಾಲಿ ಮಾಡುತ್ತಿರುವುದೆಲ್ಲ ಮೋದಿ ಒಬ್ಬ ಆಡಳಿತಗಾರನಾಗಿಯೂ ವೈಫಲ್ಯ ಕಂಡಿರೋದನ್ನು ಸಾಬೀತು ಮಾಡುತ್ತಿವೆ. ಇವೆಲ್ಲ ಜನರಿಗೆ ಅರ್ಥವಾಗದೆ ಹೋದರೂ ಕಾಳಧನ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂದಿದ್ದು, ಅಗತ್ಯ ಬೆಲೆಗಳನ್ನು ಇಳಿಸಿ ಅಚ್ಚೇ ದಿನ್ ಮಾಡ್ತೀನಿ ಅಂದಿದ್ದು, ರೈತರ ಕಷ್ಟಗಳಿಗೆ ತಿರುಗಿ ನೋಡದಿದ್ದುದು ಇವೆಲ್ಲವೂ ಮೋದಿಯ ಮಾತು ಜಾಸ್ತಿ ಸಾಧನೆ ಶೂನ್ಯ ಎಂಬುದನ್ನು ಜನರಿಗೆ ಅರ್ಥ ಮಾಡಿಸಿವೆ. ಮೋದಿಗೆ ಮತದಾರರು ತಕ್ಕ ಪಾಠ ಕಲಿಸುವುದು ಅನುಮಾನವಿಲ್ಲ ಎಂಬುದು ಅರ್ಥವಾದ ಮೇಲೂ ಸಂಘ ಪರಿವಾರವೇಕೆ ಅವರನ್ನು ಮುದ್ದಾಡೀತು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...