Homeಮುಖಪುಟಬಂಧನದಲ್ಲೂ ಕಾನೂನು ನೆರವು ನೀಡುವುದನ್ನು ಮುಂದುವರೆಸಿರುವ ಸುರೇಂದ್ರ ಗಾಡ್ಲಿಂಗ್

ಬಂಧನದಲ್ಲೂ ಕಾನೂನು ನೆರವು ನೀಡುವುದನ್ನು ಮುಂದುವರೆಸಿರುವ ಸುರೇಂದ್ರ ಗಾಡ್ಲಿಂಗ್

ಖೈರ್ಲಾಂಜಿ ಹತ್ಯಾಕಾಂಡ, ಜಾವಖೇಡ ಹತ್ಯಾಕಾಂಡ, ಮನೋರಮಾ ಕಾಂಬ್ಳೆ ಹತ್ಯಾಕಾಂಡ, ಕಾವಲೇವಾಡ ಸಂಜಯ್ ಕೋಬ್ರಗಾಡೆ ಕೊಲೆ ಪ್ರಕರಣ, ರಾಮಾಬಾಯಿ ಅಂಬೇಡ್ಕರ್ ನಗರ ಹತ್ಯಾಕಾಂಡ ಪ್ರತಿಭಟನೆ ಪ್ರಕರಣಗಳು, ನಕಲಿ ಎನ್‌ಕೌಂಟರ್‌ಗಳಂತಹ ಪ್ರಕರಣಗಳಲ್ಲಿ ಗಾಡ್ಲಿಂಗ್ ಮುಂಚೂಣಿಯ ನ್ಯಾಯವಾದಿಯಾಗಿದ್ದರು.

- Advertisement -
- Advertisement -

ಸುರೇಂದ್ರ ಅವರು ಮೋಕಾ (MCOCA), ಪೋಟಾ (POTA), ಟಾಡಾ (TADA), ಯುಎಪಿಎ (UAPA) ಗಳಂತ ಕಾಯಿದೆಗಳ ಕುರಿತು ಗಮನಾರ್ಹ ತಿಳುವಳಿಕೆ ಹೊಂದಿದ್ದವರು. ಕಳೆದ 24 ವರ್ಷಗಳಲ್ಲಿ ಹೈಕೋರ್ಟ್ ಮತ್ತು ಅನೇಕ ವೇದಿಕೆಗಳ ಮುಂದೆ ವಿವಿಧ ಪ್ರಕರಣಗಳನ್ನು ನಿರ್ವಹಿಸಿದ್ದರು. ವ್ಯಕ್ತಿಯೊಬ್ಬ ಆರೋಪಿಯಾದರೂ ಸಹ ಆತನ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಆತನ ಪರವಾಗಿ ವಕಾಲತ್ತು ವಹಿಸುವುದು ತಮ್ಮ ವೃತ್ತಿಪರ ಉದ್ಯೋಗದ ಮೂಲಭೂತ ಕರ್ತವ್ಯ ಎಂದು ನಂಬಿದ್ದ ಕಾರಣಕ್ಕಾಗಿ ಪೋಲೀಸ್ ವ್ಯವಸ್ಥೆಯ ಹಗೆತನ ಕಟ್ಟಿಕೊಂಡದ್ದಲ್ಲದೆ, ಹಲವು ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕಾಯಿತು. ಅಲ್ಲಿ ಅನೇಕರು ಹಲವು ಸಂದರ್ಭಗಳಲ್ಲಿ ಇವರಿಗೆ ಬೆದರಿಕೆ ಹಾಕಿದ್ದಿದೆ. ಅವೆಲ್ಲಾ ಟೊಳ್ಳು ಬೆದರಿಕೆಗಳಾಗಿದ್ದವು. ಆ ಮೂಲಕ ಭಯ ಹುಟ್ಟಿಸುವುದು ಹಾಗೂ ಅರ್ಜಿದಾರರು ವಿಚಾರಣೆಯಿಂದ ಹಿಂದಕ್ಕೆ ಸರಿಯುವಂತೆ ಮಾಡುವುದು ಅಥವಾ ವಿಚಲಿತರನ್ನಾಗಿಸುವುದು ಇದರ ಉದ್ದೇಶವಾಗಿತ್ತು. ಆದರೆ ಇವರು ಒಬ್ಬ ಪ್ರಬುದ್ದ ಫಿರ್ಯಾದಿದಾರರಾಗಿದ್ದರಿಂದ ಈ ದಾಳಿಕೋರರನ್ನು ನಿರುತ್ಸಾಹಗೊಳಿಸಿ ಅಲಕ್ಷಿಸುತ್ತಿದ್ದರು

ಕೆಲವು ಕಾನೂನುಗಳೊಂದಿಗೆ ಸಂಘರ್ಷ ನಡೆಸುತ್ತಿದ್ದ ಹಲವು ಜನರ ಸೇವೆ ಮಾಡುತ್ತಿದ್ದ ಸುರೇಂದ್ರ, ಕೆಲ ಅತಿ ಸೂಕ್ಷ್ಮ ವಿಷಯಗಳನ್ನು ನಿರ್ವಹಿಸಬೇಕಾಗುತ್ತಿತ್ತು ಮತ್ತು ಈ ಕಾರಣಕ್ಕಾಗಿ ಜನರ ನಡುವೆ ಪ್ರಚಾರ ದೊರಕುತ್ತಿತ್ತು ಹಾಗೆಯೆ ಪೋಲೀಸರ ಕೆಂಗಣ್ಣಿಗೂ ಗುರಿಯಾದ್ದಿರು.

ಒಂದು ಬಾರಿ ಮಹಿಳಾ ಸಂಘಟನೆಗಳ ಕೋರಿಕೆಯ ಮೇರೆಗೆ ಇವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿಕೊಂಡಾಗ, ಬಿಗಿಯಾದ ಪೋಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತಿತ್ತು, ಕೋರ್ಟ್‌ನ ಆವರಣವನ್ನು ರಕ್ಷಣಾ ದಳದ ಮೂಲಕ ಸುತ್ತುವರೆಯುತ್ತಿದ್ದರು. ಕೋರ್ಟನಲ್ಲಿ ವಿಚಾರಣೆಯ ದಿನಗಳಂದು ಎಚ್ಚರಿಕೆಯ ನೋಟೀಸು ಹೊರಡಿಸುತ್ತಿದ್ದರು ಮತ್ತು ಇಂತಹ ಪ್ರಕರಣಗಳಲ್ಲಿ ಪೋಲೀಸರು ತಮ್ಮ ನಿರಂಕುಶ ಅಧಿಕಾರವನ್ನು ಪ್ರಯೋಗಿಸುತ್ತಿದ್ದರು. ಇದೆಲ್ಲದರಾಚೆ ಕೋರ್ಟಿಗೆ ವ್ಯಕ್ತಿಗಳ ನಿರ್ದೋಷತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಮತ್ತು ಬಾಲಿಶವಾದ ಆರೋಪಗಳನ್ನು ತಿರಸ್ಕರಿಸುವುದರಲ್ಲಿ ಗಾಡ್ಲಿಂಗ್ ಸಫಲರಾಗುತ್ತಿದ್ದರು. ಯುಎಪಿಎ, ಟಾಡಾ ಕಾಯಿದೆ ಅಡಿಯಲ್ಲಿ ಆರೋಪಿತರಾದ, ಭಯೋತ್ಪಾದಕರು ಅಥವಾ ನಕ್ಸಲೈಟ್‌ರು ಎಂದು ಹಣೆಪಟ್ಟಿ ಕಟ್ಟಿದ್ದ ಅಮಾಯಕರ ಪರವಾಗಿ ವಕಾಲತ್ತು ವಹಿಸುತ್ತಿದ್ದರು. ಸೌಹಾರ್ದ ಸಮಾಜಕ್ಕಾಗಿ ದುಡಿದ ಇಂತಹವರ ಹೆಸರುಗಳು ಇತಿಹಾಸದ ಭಾಗವಾಗುವುದರಲ್ಲಿ ಅನುಮಾನವಿಲ್ಲ.

ಅರುಣ್ ಫೆರೇರ, ಧನೇಂದ್ರ ಭೂರಿಲೆ, ವೆರ್ನನ್ ಗೋನ್ಸಾಲ್ವಿಸ್, ಸುಧೀರ್ ಧಾವಲೆರಂತಹವರ ಪರ ಗಾಂಡ್ಲಿಂಗ್ ವಕಾಲತ್ತು ವಹಿಸಿದ್ದರ ಜೊತೆಗೆ ವಿಭಿನ್ನ ಸಿದ್ಧಾಂತಗಳ ಹಿನ್ನಲೆಯುಳ್ಳಂತಹ ಹೋರಾಟಗಾರರ ಪರವಾಗಿ ಗಾಡ್ಲಿಂಗ್ ಮುಖ್ಯ ಪಾತ್ರವಹಿಸುತ್ತಿದ್ದರು.

ಖೈರ್ಲಾಂಜಿ ಹತ್ಯಾಕಾಂಡ, ಜಾವಖೇಡ ಹತ್ಯಾಕಾಂಡ, ಮನೋರಮಾ ಕಾಂಬ್ಳೆ ಹತ್ಯಾಕಾಂಡ, ಕಾವಲೇವಾಡ ಸಂಜಯ್ ಕೋಬ್ರಗಾಡೆ ಕೊಲೆ ಪ್ರಕರಣ, ರಾಮಾಬಾಯಿ ಅಂಬೇಡ್ಕರ್ ನಗರ ಹತ್ಯಾಕಾಂಡ ಪ್ರತಿಭಟನೆ ಪ್ರಕರಣಗಳು, ನಕಲಿ ಎನ್‌ಕೌಂಟರ್‌ಗಳಂತಹ ಪ್ರಕರಣಗಳಲ್ಲಿ ಗಾಡ್ಲಿಂಗ್ ಮುಂಚೂಣಿಯ ನ್ಯಾಯವಾದಿಯಾಗಿದ್ದರು. ಇದರ ಜೊತೆಗೆ ಭೀಮ್ ಕೊರೆಗಾಂವ್ ಗಲಭೆಯ ತನಿಖೆ ನಡೆಸುತ್ತಿದ್ದ ಸತ್ಯಶೋಧನಾ ಸಮಿತಿಯ ಭಾಗವಾಗಿದ್ದರು.

ಇಂತ ಒಂದು ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಮಹಿಳಾ ಸಂಘಟನೆಗಳು ಅರ್ಜಿದಾರರನ್ನೇ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಆಗಿ ನೇಮಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದವು. ನಂತರ ಒತ್ತಡಕ್ಕೆ ಮಣಿದು ಗಾಡ್ಲಿಂಗ್ ಅವರನ್ನು ನೇಮಿಸಿಕೊಳ್ಳಲಾಯಿತು ಮತ್ತು ಪ್ರತಿಕೂಲ ತನಿಖಾ ತಂಡದ ನಡುವೆಯೂ ಆರೋಪಿ ಗಂಡನಿಗೆ ದೋಷಿಯೆಂದು ಸಾಬೀತುಪಡಿಸುವಲ್ಲಿ ಅವರು ಯಶಸ್ವಿಯಾದರು. ಈ ಪ್ರಕರಣದ ಮುಕ್ತಾಯದ ನಂತರ ತನಿಖಾ ತಂಡದ ಪೋಲೀಸರ ಒಡಕುಂಟು ಮಾಡುವ ವರ್ತನೆಯ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒಬ್ಬ ಅರ್ಜಿದಾರ, ಪ್ರಾಸಿಕ್ಯೂಟರ್‌ನ ಹೊಣೆಗಾರಿಕೆಯುಳ್ಳವನಾಗಿ ಹಿರಿಯ ಅಧಿಕಾರಿಗಳಿಗೆ ಪತ್ರವನ್ನು ಬರೆದರು

ಒಬ್ಬ ನ್ಯಾಯವಾದಿ, ಅರ್ಜಿದಾರನಾಗಿ ಹಿಂದುಳಿದ ಸಮುದಾಯಗಳಿಗೆ ಸಂಬಂಧಿಸಿದಂತೆ, ಮೀಸಲಾತಿಯ ಸಮರ್ಥಕನಾಗಿ, ನ್ಯಾಯಾಂಗದ ಸ್ವಾತಂತ್ರ್ಯ ಕುರಿತಂತೆ ಧ್ವನಿಯೆತ್ತಲು ಗಾಡ್ಲಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮಾನವ ಹಕ್ಕುಗಳಿಗೆ ಸಂಬಂದಿಸಿದಂತೆ ಜನರಿಗೆ ಅರಿವು ಮೂಡಿಸುವ ಸಾರ್ವಜನಿಕ ಸಬೆಗಳನ್ನು ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಹಿರಿಯ ನಿವೃತ್ತ ನ್ಯಾಯಾಧೀಶರ ಜೊತೆಗೂಡಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ರಚನೆಗೊಂಡ ಸತ್ಯಶೋಧನ ಸಮಿತಿಗಳ ಭಾಗವಾಗಿದ್ದರು. ಪೋಲಿಸ್ ವ್ಯವಸ್ಥೆಯು ನ್ಯಾಯವಾದಿಗಳಿಗೆ ಉಪದ್ರವ ಕೊಡುವುದನ್ನು ವಿರೋಧಿಸುತ್ತಿದ್ದರು. ಚತ್ತೀಸಘಡದಲ್ಲಿ ಯುಎಪಿಎ ಜಾಲಕ್ಕೆ ಬಲಿಯಾದ ಆದಿವಾಸಿಗಳ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ ಪೀಡಿಸಿ ತೊಂದರೆ ಕೊಟ್ಟ ಪ್ರಕರಣದ ಕುರಿತು ಸತ್ಯಶೋಧನೆ ನಡೆಸಿ ವರದಿಯನ್ನು ಮಂಡಿಸಿದರು

ಸಾಮಾಜಿಕ ಹೋರಾಟಗಾರನಾಗಿ ಇವೇ ಕಾರಣಗಳಿಗೆ ಪೋಲಿಸ್ ಇಲಾಖೆಯಲ್ಲಿನ ಪಟ್ಟಭದ್ರ ಹಿತಾಸಕ್ತಿಗಳಿಗೆ, ಅಧಿಕಾರ ವರ್ಗಕ್ಕೆ ಗಾಡ್ಲಿಂಗ್ ಹಿತಕರನಲ್ಲದ ಅಪ್ರಿಯರಾಗಿದ್ದರು. ಪ್ರತಿವಾದಿ ಪರವಾಗಿ ಅವರು ವಾದಿಸುವುದರ ಮೂಲಕ ಇಡೀ ಪ್ರಕರಣದ ಫಲಿತಾಂಶವನ್ನು ಬದಲಿಸುತ್ತಿದ್ದರು. ಬಾರ್ ಅಸೋಶಿಯೇಶನ್‌ನ ಬಲವಾದ ವಿರೋಧದ ನಡುವೆಯೂ ನಿರ್ಭೀತಿಯಿಂದ ಹಲವು ದಮನಿತರನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಇದರಿಂದ ಮಾಧ್ಯಮಗಳಲ್ಲಿ ನಕರಾತ್ಮಕ ಪ್ರಚಾರ ಮತ್ತು ತನಿಖಾ ತಂಡಗಳಿಂದ ಬಹಿರಂಗವಾಗಿಯೆ ಬೆದರಿಕೆಯ ಕರೆಗಳು ಬರತೊಡಗಿದವು. ನಕ್ಸಲ್‌ರು ಎಂದು ವರ್ಗೀಕರಿಸ್ಪಟ್ಟವರ ಪರವಾಗಿ ವಾದಿಸುವ ಇವರ ನಡೆಯಿಂದ ಪೋಲೀಸರು ಗಾಡ್ಲಿಂಗ್ ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದರು. ಇಂತಹ ಪ್ರಕರಣಗಳನ್ನು ಕೈಗೆತ್ತಿಕೊಳ್ಳವುದಕ್ಕೆ ಅಥವಾ ಈ ಮಾದರಿಯ ಆರೋಪಿಗಳನ್ನು ಪ್ರತಿನಿಧಿಸುವುದನ್ನು ವಿರೋಧಿಸಿ ಪೋಲೀಸ್ ಅದಿಕಾರಿಗಳು ಅನೇಕ ಬಾರಿ ತಮ್ಮ ಅಸಂತುಷ್ಟಿ ವ್ಯಕ್ತಪಡಿಸಿದ್ದರು

ಪ್ರ್ರೊ. ಜಿ.ಎನ್. ಸಾಯಿಬಾಬ ಅವರ ವಿಚಾರಣೆಯ ಸಂದರ್ಭದಲ್ಲಿ ಆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಬವಾಚೆ ಅವರು ಒಮ್ಮೆ ಸಾಯಿಬಾಬಾರನ್ನು ಜೈಲಿಗೆ ಕಳುಹಿಸಿದ ನಂತರ ವಕೀಲ ಸುರೇಂದ್ರ ಗಾಡ್ಲಿಂಗ್ ಅವರ ಸರದಿ ಎಂದು ಬಹಿರಂಗವಾಗಿ ಕೋರ್ಟ್ ಆವರಣದಲ್ಲಿ ಹೇಳಿದ್ದರು. ಗಾಡ್ಲಿಂಗ್ ಅವರ ಜ್ಯೂನಿಯರ್/ಸಹಾಯಕರ ಮುಂದೆಯೆ ಈ ಬಹಿರಂಗ ಬೆದರಿಕೆ ನೀಡಿಲಾಗಿತ್ತು. ಪ್ರತಿವಾದಿಯು ಮುಕ್ತ ಮನಸ್ಸಿನಿಂದ, ನಿರ್ಭೀತಿಯಿಂದ ವಕಾಲತ್ತು ಮುಂದುವರೆಸುವುದನ್ನು ನಿರ್ಭಂಧಿಸುವುದೇ ಈ ಬೆದರಿಕೆಯ ಉದ್ದೇಶವಾಗಿತ್ತು. ಈ ಹೆದರಿಸುವ ತಂತ್ರಕ್ಕೆ ಪೂರಕವಾಗಿ ಶರಣಾಗತನಾದ ನಕ್ಸಲೈಟ್ ಒಬ್ಬ ಗಾಡ್ಲಿಂಗ್ ವಿರುದ್ದ 164 ಹೇಳಿಕೆಗಳನ್ನು ನೀಡಿ ಬಾಲಿಶವಾದ ಅಪಾದನೆಗಳನ್ನು ಹೊರೆಸಿದ್ದ. ಈ ಪ್ರಸಕ್ತ ತನಿಖೆಯ ಅಧಿಕೃತ ಭಾಗವಾಗಿಲ್ಲದಿದ್ದರೂ ಇದೇ ಅಧಿಕಾರಿಯು ಇನ್ನೂ ಹಲವು ಅಪರಿಚಿತ ಅಧಿಕಾರಿಗಳ ಜೊತೆಯೊಂದಿಗೆ ಈ ತನಿಖೆಯನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದರು. 1990ರ ದಶಕದಿಂದಲೂ ಗಾಡ್ಲಿಂಗ್ ಅವರು ಈ ಬೆದರಿಕೆಗಳಿಗೆ ಜಗ್ಗಲಿಲ್ಲವಾದರೂ ಸಹ ತನ್ನ ಮದುವೆಯ ದಿನ ಜೇಬಿನಲ್ಲಿ ನಿರೀಕ್ಷಣಾ ಜಾಮೀನಿನ ಪ್ರತಿಯನ್ನಿಟ್ಟುಕೊಂಡಿದ್ದರು. ಆದಾಗ್ಯೂ ಪೋಲೀಸರು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷದ ಜೊತೆ ಸೇರಿ ತಾತ್ಕಲಿಕವಾಗಿ ಗಾಡ್ಲಿಂಗ್ ಅವರನ್ನು ಮೌನಗೊಳಿಸಲು ಸಫಲರಾದರು.

ಆದರೆ ಹುಟ್ಟಾ ಹೋರಾಟಗಾರನನ್ನು ಮೌನಗೊಳಿಸಲು ಸಾದ್ಯವಿಲ್ಲ. ಯೆರವಾಡ ಜೈಲಿನಲ್ಲಿ ಬಂಧಿಸಿಟ್ಟರೂ ಸಹ ಗಾಡ್ಲಿಂಗ್ 10 ಖೈದಿಗಳಿಗೆ ಕಾನೂನು ನೆರವು ನೀಡುವುದರ ಮೂಲಕ ಅವರು ಜೈಲಿನಿಂದ ಬಿಡುಗಡೆಯಾಗಲು ನೆರವಾದರು. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ತಲೋಜಾದಲ್ಲಿನ ಅವರ ವಾಸವನ್ನು ಅಹಿತಕರವಾಗಿಸಲಾಗಿದೆ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಬಿ. ಶ್ರೀಪಾದ ಭಟ್


ಇದನ್ನೂ ಓದಿ: ಬಡಜನರಿಗೆ ವಕೀಲೆಯಾಗಿದ್ದಕ್ಕೆ ಜೈಲಿಗೆ ಹೋದ ಐಐಟಿ ಪದವೀಧರೆ ಸುಧಾ ಭಾರದ್ವಾಜ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...