Homeನೂರರ ನೋಟಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? - ಎಚ್‌.ಎಸ್ ದೊರೆಸ್ವಾಮಿ

ಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? – ಎಚ್‌.ಎಸ್ ದೊರೆಸ್ವಾಮಿ

- Advertisement -
- Advertisement -

ನಮ್ಮ ಸಂಸ್ಕೃತಿಗೆ ಪೂರಕವಾಗಿ ಪರಿಸರಕ್ಕೆ ಎರವಾಗದಂತೆ ನಮ್ಮ ಪೂರ್ವಿಕರು ಬದುಕಿದರು. ನೆಲ, ಜಲ, ವಾಯು ಎಲ್ಲ ಮಾನವರ ಉಪಯೋಗಕ್ಕೆ ಇದೆ ಎಂಬುದು ನಮ್ಮ ತಲೆಮಾರಿಗೆ ಗೊತ್ತೇ ಇಲ್ಲ. ಹಾಲಿಗೂ, ನೀರಿಗೂ ಒಂದೇ ಬೆಲೆ ಆಗುತ್ತಿದ್ದರೂ ಇದೇಕೆ ಹೀಗಾಯಿತು ಎಂದು ಯಾರು ಚಿಂತಿಸುತ್ತಿಲ್ಲ. ಶಬ್ದವಿಲ್ಲದ ನಿಶ್ಯಬ್ದ ಯುದ್ಧವನ್ನು ನಮ್ಮ ಬಂಡವಾಳಶಾಹಿಗಳು, ಕಾರ್ಪೊರೇಟರ್‌ಗಳು, ಬಹುರಾಷ್ಟ್ರೀಯ ಕಂಪನಿಗಳು ಜನಸಾಮಾನ್ಯರ ಮೇಲೆ ಪ್ರಾರಂಭಿಸಿದ್ದಾರೆ. ಇಂದು ನಾವು ಕೇಳುವ ಸಂಗೀತ, ನೋಡುವ ಸಿನಿಮಾ, ನಮ್ಮ ಉಡುಪು, ಚಿಂತನೆಯ ಮಾದರಿಗಳನ್ನು ಗಮನಿಸಿದರೆ ನಮ್ಮ ಅಭಿವೃದ್ಧಿ ಯಾವ ಜಾಡನ್ನು ಹಿಡಿಯುತ್ತಿದೆ ಎಂಬುದು ನಮಗೆ ಮನವರಿಕೆಯಾಗಬಹುದು.

ಡಿವಿಜಿಯವರು ಹೇಳುತ್ತಾರೆ ಈಗ ಧನಸಂಪತ್ತು ಹೆಚ್ಚಿದೆ. ಧಾನ್ಯಸಂಪತ್ತು ಕುಸಿದಿದೆ. ಸೋಪು, ಪೌಡರ್ ಹೆಚ್ಚಿದೆ. ಮನಸ್ಸಿನ ನಿರ್ಮಲತೆ ಕುಗ್ಗಿದೆ. ಭೋಗ ಹೆಚ್ಚಿದೆ ನೆಮ್ಮದಿ ಕುಗ್ಗಿದೆ ಎಂದು.

ಅನ್ನ ತಿನ್ನುವ ಬಾಯಿಗೆ ನೂಡಲ್ಸ್, ಪಿಜ್ಜಾಗಳನ್ನು ತುರುಕಲಾಗುತ್ತಿದೆ. ಎಳೆನೀರು, ಮಜ್ಜಿಗೆ ಕುಡಿಯುತ್ತಿದ್ದ ಬಾಯಿಗೆ ಕೋಕಕೋಲಾ ಸುರಿಯಲಾಗುತ್ತಿದೆ. ಚಕ್ಕುಲಿ, ಕೋಡ್‌ಬಳೆಯ ಬದಲು ಲೇಸ್, ಕುರ್ಕುರೆ, ಚಿಪ್ಸ್  ಪ್ಯಾಕೇಟ್, ಕೆಂಟಕಿ ಚಿಕನ್ ನೀಡಲಾಗುತ್ತಿದೆ. ಅರಿಶಿನ, ಶ್ರೀಗಂಧ ಬಳಿದುಕೊಳ್ಳುತ್ತಿದ್ದ ಮುಖಕ್ಕೆ ಹತ್ತಾರು ಕ್ರೀಮ್‌ಗಳನ್ನು ಬಳಿದುಕೊಳ್ಳಲಾಗುತ್ತಿದೆ. ಕರಿಯರನ್ನು 15 ದಿನಗಳಲ್ಲಿ ಬಿಳಿಯರನ್ನಾಗಿ ಮಾಡಲು, ಬೊಜ್ಜು ಬೆಳೆದವರನ್ನು 10 ದಿನಗಳಲ್ಲಿ ಸಪೂರರನ್ನಾಗಿ ಮಾಡಲು, ಬೋಳು ತಲೆಯವರಿಗೆ ಕೂದಲು ಚಿಗುರುವಂತೆ ಮಾಡುವ ಜಾಹಿರಾತುಗಳು ಹೊರಬೀಳುತ್ತಿವೆ. ಇಡೀ ರಾತ್ರಿ ಭೋಗಸುಖ ಅನುಭವಿಸುವಂತೆ ಮಾಡಲು ಮಾತ್ರೆಗಳನ್ನು ತಯಾರಿಸಲಾಗಿದೆ ಎಂಬ ಜಾಹಿರಾತು ಹೊರಬೀಳುತ್ತಿದೆ. ಮಧ್ಯಮ ವರ್ಗದ ಜನ ಇದಕ್ಕೆಲ್ಲ ಬಲಿಪಶುಗಳಾಗುತ್ತಿದ್ದಾರೆ.

ನಮ್ಮ ಮಾಧ್ಯಮಗಳು ಈ ಜಾಹಿರಾತುದಾರರ ಏಜೆಂಟರುಗಳಂತೆ ಕೆಲಸ ಮಾಡುತ್ತಿವೆ. ಉಳ್ಳವರ ಹಿಡಿ ಜನರ ನೆಮ್ಮದಿಯ ಬದುಕಿಗಾಗಿ ಲಕ್ಷಾಂತರ ಜನ ಬಡವರ ಬದುಕನ್ನು ಕಿತ್ತುಕೊಳ್ಳುವ ಸಾಧನೆ ಈ ಅಭಿವೃದ್ಧಿಯಂತ್ರವಾಗಿದೆ.

ಕೋಟ್ಯಂತರ ಜನಕ್ಕೆ ಬದುಕು ದುರ್ಭರವಾಗಿದೆ ಆದರೆ 120 ಕೋಟಿ ಜನರ ಕೈಗೆ ಮೊಬೈಲ್ ನೀಡಲಾಗಿದೆ. ಭಾರತದ ಅಭಿವೃದ್ಧಿಯನ್ನು ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಅಳೆಯೋಣವೇ? ಬಡತನ ಯಾರಿಂದ ಸೃಷ್ಟಿಯಾಗಿದೆ? ಜನ ಬಡವರಾಗಲು ಬಯಸಿ ಬಡತನ ಅನುಭವಿಸುತ್ತಿದ್ದಾರೆಯೆ? ಬಡತನ ಸರ್ಕಾರದಿಂದ ಸೃಷ್ಟಿಯಾಗುತ್ತದೆ. ಶ್ರೀಮಂತರನ್ನ ಓಲೈಸುವ ಸರ್ಕಾರದ ಧೋರಣೆಯಿಂದ ಬಡತನ ಸೃಷ್ಟಿಯಾಗುತ್ತದೆ. ಮಲತಾಯಿ ಧೋರಣೆಯಿಂದ ಬಡವರನ್ನು ಸರ್ಕಾರ ನೋಡುವುದರಿಂದ ಬಡತನ ಸೃಷ್ಟಿಯಾಗುತ್ತದೆ ಎಂಬ ಕಟುಸತ್ಯವನ್ನು ಮೋದಿ ಮಹಾಶಯ ಒಪ್ಪುವುದೇ ಇಲ್ಲ. ನಮ್ಮ ರಾಜ್ಯಾಂಗ ಸಮಾಜವಾದವನ್ನು ಪ್ರತಿಪಾದಿಸುತ್ತದೆ. ಆದರೆ ನಮ್ಮ ಸರ್ಕಾರಗಳು ಸಮಾಜವಾದದಿಂದ ದೂರ ಸರಿಯುತ್ತಿವೆ. ಬಂಡವಾಳಶಾಹಿ ಪದ್ಧತಿಗೆ ಜಾರುತ್ತಿವೆ.

ಕೆಲವರು ಹೇಳುತ್ತಾರೆ ಸರ್ಕಾರ ನಡೆಸುವವರು ರಿಲಾಯನ್ಸ್ ಕಂಪೆನಿಯವರು ಮತ್ತು ಅದಾನಿ ಎಂದು. ಅದೂ ನಿಜ ಇರಬಹುದು. ಈ ಕಳೆದ 25ವರ್ಷಗಳಲ್ಲಿ ಖಾಸಗಿ ಸೆಕ್ಟರಿನ ಪ್ರಭಾವ ತುಂಬ ಬೆಳೆದಿದೆ. ಸರ್ಕಾರ ಅವರು ಹೇಳಿದಂತೆ ಶಿರಸಾವಹಿಸಿ ಕೆಲಸ ಮಾಡುತ್ತದೆ.

ಸರ್ಕಾರ ಧರ್ಮಛತ್ರವಲ್ಲ. ಕಲ್ಲಿದ್ದಲು ಗಣಿ ಹರಾಜು ಹಾಕುವುದು, ಹಲವು ರೈಲ್ವೆ ಮಾರ್ಗಗಳನ್ನು ದೀರ್ಘಕಾಲದ ಗುತ್ತಿಗೆ ಆಧಾರದ ಮೇಲೆ ಖಾಸಗಿಗೆ ಬಿಟ್ಟುಕೊಡುವುದು, ಆ ಮೂಲಕ ತನ್ನ ಜವಾಬ್ದಾರಿಯಿಂದ ಕಳಚಿಕೊಳ್ಳುವುದು ಆಡಳಿತ ನಡೆಸುವವರ ಹೊಣೆಗೇಡಿತನವನ್ನು ಸೂಚಿಸುತ್ತದೆ. ಸಾರ್ವಜನಿಕ ಜೀವನದಲ್ಲಿ
hypocrisy ಬೆಳೆಸುವ ಹುನ್ನಾರ ಕಾಲಕ್ರಮದಲ್ಲಿ ತಿರುಗುಬಾಣವಾಗಿಬಿಡುವ ಸಾಧ್ಯತೆಗಳಿವೆ.


ಇದನ್ನೂ ಓದಿ: ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ: ಹೊಸ ಬಾಟಲ್‌ನಲ್ಲಿ ಹಳೆ ಮದ್ಯ -ಎಚ್.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...