Homeಅಂಕಣಗಳುಟಿವಿ ವಾಹಿನಿಗಳೇ ಲಿಂಚಿಂಗ್ ಕೇಂದ್ರಗಳಾಗಿರುವ ಕಾಲದಲ್ಲಿ... ನಾವೇನು ಮಾಡಬೇಕು?

ಟಿವಿ ವಾಹಿನಿಗಳೇ ಲಿಂಚಿಂಗ್ ಕೇಂದ್ರಗಳಾಗಿರುವ ಕಾಲದಲ್ಲಿ… ನಾವೇನು ಮಾಡಬೇಕು?

ಟಿವಿ ಆಂಕರ್‌ಗಳು ಕಿರುಚುವ ರೀತಿ, ನಿರ್ದಿಷ್ಟ ಸಮುದಾಯ, ಗುಂಪು, ವ್ಯಕ್ತಿಗಳ ವಿರುದ್ಧ ಪ್ರಚೋದಿಸುವ ರೀತಿಯನ್ನು ನೋಡಿದವರಿಗೆ ಸ್ಪಷ್ಟವಾಗುವ ಸಂಗತಿ ಏನೆಂದರೆ, ಅವರು ಲಿಂಚಿಂಗ್ (ಗುಂಪು ಹತ್ಯೆ)ಗೆ ದಾರಿ ಮಾಡಿಕೊಡುತ್ತಿದ್ದಾರೆ.

- Advertisement -
- Advertisement -

ಇದೀಗ ತಾನೇ ಸುಪ್ರೀಂಕೋರ್ಟು ಟಿವಿ ಚಾನೆಲ್‍ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ‘ಯುಪಿಎಸ್‍ಸಿ ಜಿಹಾದ್’ ಹೆಸರಿನಲ್ಲಿ ಸುಳ್ಳು ಮತ್ತು ದ್ವೇಷಪೂರಿತವಾದ ವರದಿ ಪ್ರಸಾರ ಮಾಡಿದ ಸುದರ್ಶನ್ ಟಿವಿಯ ವಿಚಾರದಲ್ಲಿ ಕೆಲವು ಸುಪ್ರೀಂಕೋರ್ಟು ನ್ಯಾಯಾಧೀಶರು ನಿಷ್ಠುರವಾದ ಮಾತುಗಳನ್ನು ಆಡಿದ್ದಾರೆ. ಆದರೆ, ಸಮಸ್ಯೆಯೇನೆಂದರೆ ಮಾಧ್ಯಮಗಳನ್ನು ನಿಯಂತ್ರಣ ಮಾಡಬೇಕೆಂದು ಕೋರ್ಟು ಸೂಚಿಸಿದಲ್ಲಿ, ಆ ನಿಯಂತ್ರಣವನ್ನು ಯಾರು ಮಾಡುತ್ತಾರೆ ಮತ್ತು ಯಾರನ್ನು ಮಾಡುತ್ತಾರೆ ಎಂಬ ಪ್ರಶ್ನೆ ಏಳುತ್ತದೆ. ಏಕೆಂದರೆ ಎಲ್ಲಾ ನಿಯಂತ್ರಕ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ನಿಯಂತ್ರಣಕ್ಕೆ ತೆಗೆದುಕೊಂಡಾಗಿದೆ. ಅಂತಹ ಸಾಧ್ಯತೆಯು ಬೇರೆ ಸರ್ಕಾರಗಳಿರುವಾಗಲೂ ಇದೆ. ಹೀಗಾಗಿ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಯಾರೂ ಇಂತಹ ನಿಯಂತ್ರಣವನ್ನು ಎಂತಹ ಸಂದರ್ಭದಲ್ಲೂ ಒಪ್ಪುವುದಿಲ್ಲ.

ಹಾಗೆಂದು, ಮಾಧ್ಯಮಗಳ ಮೇಲೆ ಯಾರ ಕಡಿವಾಣವೂ ಇರಬಾರದೇ ಎಂಬ ಪ್ರಶ್ನೆಯು ಏಳದೇ ಇರದು. ಏಕೆಂದರೆ ಇದುವರೆಗೆ ಪ್ರಭಾವಶಾಲಿಗಳಾಗಿರುವ ಟಿವಿ ಚಾನೆಲ್‍ಗಳಲ್ಲಿ ಹಲವು ಮಾಧ್ಯಮ ಸಂಸ್ಥೆಗಳಾಗಿ ಉಳಿದಿಲ್ಲ; ಅವು ಲಿಂಚಿಂಗ್ ಕೇಂದ್ರಗಳಾಗಿವೆ. ಇವು ಟಿವಿ ಚಾನೆಲ್‍ಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಲವಾರು ಪತ್ರಿಕೆಗಳೂ ಅದನ್ನು ಮಾಡಿವೆ. ಪ್ರಜಾತಾಂತ್ರಿಕ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ನಿಷ್ಠುರವಾದ ಅಭಿಪ್ರಾಯವನ್ನು ಮುಂದಿಟ್ಟ ಸಾಹಿತಿಗಳ ಮೇಲೆ ಅಂತಹ ಸಮರವನ್ನು ಕನ್ನಡದ ಪತ್ರಿಕೆಯ ಸಂಪಾದಕರೊಬ್ಬರು ಆರಂಭಿಸಿದ್ದರು. ಓದುಗರ ಅಭಿಪ್ರಾಯದ ಹೆಸರಿನಲ್ಲಿ ಅವರುಗಳ ಮೇಲೆ ವಾಗ್ದಾಳಿಯನ್ನು ನಡೆಸಲಾಯಿತು. ಈ ಓದುಗರ ಅಭಿಪ್ರಾಯ ಎನ್ನುವುದಕ್ಕೊಂದು ಸಾಧ್ಯತೆ ಇರುತ್ತದೆ. ನಿರ್ದಿಷ್ಟವಾದ ರೀತಿಯ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಬಿಂಬಿಸಿ, ತಾವು ಆ ಜನಾಭಿಪ್ರಾಯವನ್ನು ಎತ್ತಿ ಹಿಡಿಯುತ್ತಿದ್ದೇವೆ ಎಂದು ಮಾಡುವುದು. ಹಾಗೆ ಮಾಡುವ ಮೂಲಕ ಇತರ ಓದುಗರಿಗೂ ಇದೇ ಪ್ರಬಲವಾದ ಜನಾಭಿಪ್ರಾಯ ಎಂಬ ಭಾವನೆ ಮೂಡುವಂತಾಗುತ್ತದೆ. ಸಮಾಜದ ಪ್ರಬಲ ಅಭಿಪ್ರಾಯ ಯಾವುದೋ ಅದರ ಜೊತೆಗೆ ತೂರಿಕೊಂಡು ಹೋಗುವ ಮಂದೆ ಸ್ವಭಾವ ಯಾವುದೇ ಸಮಾಜದಲ್ಲಿ ಸಾಕಷ್ಟಿರುವುದರಿಂದ, ನಿರ್ದಿಷ್ಟವಾದ ಜನಾಭಿಪ್ರಾಯವನ್ನು ಆ ಮೂಲಕ ಉತ್ಪಾದಿಸಲಾಗುತ್ತದೆ.

ಇಂತಹುದನ್ನು ಮಾಡಲು ಶುರು ಮಾಡಿದ ಮಾಧ್ಯಮಗಳು ಯಾವ ಮಟ್ಟಕ್ಕೆ ಮುಟ್ಟಿದವೆಂದರೆ, ಕರ್ನಾಟಕದ ಖ್ಯಾತ ವಿದ್ವಾಂಸ ಕಲಬುರ್ಗಿಯವರಿಂದ ಅವರದ್ದಲ್ಲದ ಹೇಳಿಕೆಯನ್ನು ತಪ್ಪೆಂದು ಬಿಂಬಿಸಿ ಅವರಿಂದ ಕ್ಷಮೆಯನ್ನೂ ಕೇಳಿಸಿಬಿಟ್ಟವು. ಅದೇ ಸಂಗತಿಯು ಅವರ ಹತ್ಯೆ ಮಾಡಲು ಹೊರಟ ಕಾಲಾಳುವಿಗೆ ಉತ್ತೇಜಿಸಲು ಅನುಕೂಲ ಮಾಡಿಕೊಟ್ಟಿತು.

ಎಂ ಎಂ ಕಲಬುರ್ಗಿ. ಚಿತ್ರಕೃಪೆ: Deccan Herald

ಇಂಥದ್ದೇ ಕೆಲಸವನ್ನು ಉಮರ್ ಖಾಲಿದ್, ಕನ್ಹಯ್ಯ ಕುಮಾರ್ ಥರದ ಜೆಎನ್‍ಯು ವಿದ್ಯಾರ್ಥಿಗಳ ಮೇಲೂ ಮಾಡಲಾಯಿತು. 8-10 ತಿಂಗಳ ಕೆಳಗೆ ಅಮೂಲ್ಯ ಎಂಬ ವಿದ್ಯಾರ್ಥಿನಿಯು ತನ್ನ ಬಾಲಿಶತನದ ಕಾರಣಕ್ಕಾಗಿ, ಸಾರ್ವಜನಿಕ ಸಭೆಯೊಂದರಲ್ಲಿ ಏನೋ ಹೇಳಲು ಹೋಗಿ ಇನ್ನೇನೋ ಹೇಳಿದಾಗಲೂ ಅದೇ ನಡೆಯಿತು. ಅಂದು ಕನ್ನಡದ ಟಿವಿ ಚಾನೆಲ್‍ನಲ್ಲಿ ಆಂಕರ್ ಕೂಗಿದ್ದನ್ನು ಕೇಳಿದ ಅಧಿಕಾರಿಯೊಬ್ಬರು ಗಾಬರಿಯಾಗಿ ಫೋನ್ ಮಾಡಿದರು.He  is asking for her blood, how can he do like that? Something has to be done about it ಎಂದಿದ್ದರು.

ತೀರಾ ಇತ್ತೀಚೆಗೆ ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ರಾಜೀವ್ ತ್ಯಾಗಿಯವರು ಟಿವಿ ಚಾನೆಲ್ಲೊಂದರಲ್ಲಿ ಪ್ಯಾನೆಲ್ ಚರ್ಚೆ ಮುಗಿಸಿಕೊಂಡು ಮನೆಗೆ ಹೋಗಿ ಹೃದಯಾಘಾತದಿಂದ ತೀರಿಕೊಂಡರು. ಸಾಯುವ ಮುನ್ನ ಟಿವಿ ಆಂಕರ್‌ಗಳ ಕುರಿತು ಅವರಾಡಿದ ಕೊನೆ ಮಾತೆಂದರೆ, ‘ಇವರು ನನ್ನನ್ನು ಅವಹೇಳನ ಮಾಡಿದರು, ನನ್ನನ್ನು ಕೊಂದುಬಿಟ್ಟರು’. ಇದನ್ನು ಕೇಳಿದ ಇನ್ನೊಬ್ಬ ಕಾಂಗ್ರೆಸ್ ವಕ್ತಾರ ಪ್ರೊ.ಗೌರವ್ ವಲ್ಲಭ್, ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್‍ರಿಗೆ ‘ಟಿವಿಗೊಂದು ನೀತಿ ಸಂಹಿತೆ ರೂಪಿಸಲು’ ಆನ್‍ಲೈನ್ ಪಿಟಿಷನ್ ಆರಂಭಿಸಿದ್ದಾರೆ.

ರಾಜೀವ್ ತ್ಯಾಗಿ:Photo Courtesy: National Herald

ಟಿವಿ ಆಂಕರ್‌ಗಳು ಕಿರುಚುವ ರೀತಿ, ನಿರ್ದಿಷ್ಟ ಸಮುದಾಯ, ಗುಂಪು, ವ್ಯಕ್ತಿಗಳ ವಿರುದ್ಧ ಪ್ರಚೋದಿಸುವ ರೀತಿಯನ್ನು ನೋಡಿದವರಿಗೆ ಸ್ಪಷ್ಟವಾಗುವ ಸಂಗತಿ ಏನೆಂದರೆ, ಅವರು ಲಿಂಚಿಂಗ್ (ಗುಂಪು ಹತ್ಯೆ)ಗೆ ದಾರಿ ಮಾಡಿಕೊಡುತ್ತಿದ್ದಾರೆ. ಬೇರೆ ಬೇರೆ ರೀತಿಯ ಲಿಂಚಿಂಗ್‍ಗೆ ಸಮ್ಮತಿಯನ್ನು ಉತ್ಪಾದಿಸುತ್ತಿದ್ದಾರೆ. ಇದರಲ್ಲಿ ಸಂದೇಹವೇ ಇಲ್ಲ.

ಎಂದಿನಂತೆ ಪ್ರಶ್ನೆಯಿರುವುದು ಇದರ ಕುರಿತು ಇನ್ನಷ್ಟು ವಿಶ್ಲೇಷಣೆ ಮಾಡುವುದರಲ್ಲಲ್ಲ. ಬದಲಿಗೆ ಇದನ್ನು ಹೇಗೆ ಬದಲಿಸುತ್ತೇವೆ ಎಂಬುದರಲ್ಲಿ. ಇಂದಿನ ಪರಿಸ್ಥಿತಿಯಲ್ಲಿ ಟಿವಿ ಚಾನೆಲ್‍ಗಳ ಮೇಲೆ ನಿಯಂತ್ರಣ ಹೇರಿ ಎಂದು ಸರ್ಕಾರ ಅಥವಾ ನ್ಯಾಯಾಲಯದ ಮೊರೆ ಹೋಗುವುದು ಮೂರ್ಖತನದ ಕೆಲಸವಾದೀತು. ಬದಲಿಗೆ ಪ್ರಜಾತಾಂತ್ರಿಕವಾದ ಮಾಧ್ಯಮ ಸಾಧ್ಯತೆಗಳನ್ನು ಅವಿಷ್ಕರಿಸಿ ವ್ಯಾಪಕವಾದ ಮತ್ತು ಬೃಹತ್ತಾದ ಪ್ರಮಾಣದಲ್ಲಿ ಜಾರಿಗೊಳಿಸುವುದು ಮಾತ್ರ ಇದನ್ನು ತಡೆಯಬಲ್ಲುದು ಮತ್ತು ಇಂದಿನ ಮುಖ್ಯವಾಹಿನಿಯನ್ನು ಅಪ್ರಸ್ತುತಗೊಳಿಸಬಲ್ಲದು. ಆ ನಿಟ್ಟಿನಲ್ಲಿ ಈಗಾಗಲೇ ದೇಶದ ಕೆಲವೆಡೆ ಸೃಜನಶೀಲವಾದ ಪ್ರಯತ್ನಗಳು ನಡೆಯುತ್ತಿದೆ. ಗೌರಿ ಮೀಡಿಯಾ ಸಹಾ ಅದಕ್ಕೆ ಪೂರಕವಾದ ಕೆಲಸದಲ್ಲಿ ತೊಡಗಿದೆ. ನಮ್ಮ ಪ್ರಜ್ಞಾವಂತ ಓದುಗರೂ ಜೊತೆಯಾಗುತ್ತಾರೆಂಬ ವಿಶ್ವಾಸವಿದೆ.


ಇದನ್ನೂ ಓದಿ: ಸುದರ್ಶನ ಟಿವಿಯ ವಿವಾದಾತ್ಮಕ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...