Homeಮುಖಪುಟಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!

ಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!

1957ರಲ್ಲಿ ಗಾಂಧೀಜಿ ಪೂಜೆ ಪ್ರಾರಂಭಿಸಿದ್ದ ಬಲಿಯಾ ಆಗೇರ ತಮ್ಮ ಅಂತ್ಯದವರೆಗೂ ಒಂದು ದಿನವೂ ದೀಪಾರತಿ ತಪ್ಪಿಸಿದವರಲ್ಲ!! ಆ ನಂತರ ಆತನ ಮಕ್ಕಳು ಮತ್ತು ಮೊಮ್ಮಕ್ಕಳು ಈ ಪೂಜೆ ಸಂಪ್ರದಾಯವನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ.

- Advertisement -
- Advertisement -

ಅದು ಸ್ವಾತಂತ್ರ್ಯ ಸಂಗ್ರಾಮದ ಆಚೀಚೆಯ ದಿನ ಮಾನೆ; ಇಡೀ ಕರ್ನಾಟಕದಲ್ಲಿ ಗಾಂಧಿ ಜಿಲ್ಲೆ ಎಂಬ ಪ್ರತೀತಿ ಇದ್ದದ್ದು ಉತ್ತರ ಕನ್ನಡಕ್ಕೆ ಮಾತ್ರ! ಗಾಂಧೀಜಿ ಚಿಂತನೆಗಳಿಂದ ಪ್ರಭಾವಿತವಾಗಿದ್ದ ಜಿಲ್ಲೆ ಜೊತೆ ಗಾಂಧೀಜಿಗೂ ನಿಕಟ ಒಡನಾಟವಿತ್ತು. ಉತ್ತರ ಕನ್ನಡದಲ್ಲಿ ನಡೆದ ಅಸ್ಪೃಶ್ಯತೆ ವಿರುದ್ಧ, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ವಿರುದ್ಧ ಮತ್ತು ಬ್ರಿಟಿಷರ ವಿರುದ್ಧದ ಹಲವು ಹೋರಾಟಗಳಲ್ಲಿ ಗಾಂಧೀಜಿ ಪಾಲ್ಗೊಂಡು ಪ್ರೇರಣೆ ಆಗಿದ್ದರು. ಜಿಲ್ಲೆಯ ಅಂಕೋಲೆಯಂತೂ ಕರ್ನಾಟಕದ ಬಾರ್ಡೋಲಿ ಎಂದೇ ಹೆಸರುವಾಸಿ. ಇಲ್ಲಾಗಿರುವ ಹತ್ತಾರು ಸ್ವಾತಂತ್ರ್ಯ ಚಳುವಳಿಗಳು ಐತಿಹಾಸಿಕ! ಗಾಂಧಿ ಅನುಯಾಯಿಗಳ ದೊಡ್ಡ ದಂಡೇ ಅಂಕೋಲೆಯ ಹಳ್ಳಿ-ಹಳ್ಳಿಗಳಲ್ಲಿ ತಯಾರಾಗಿತ್ತು.

ಅಂಕೋಲೆಯ ಸುತ್ತಮುತ್ತ “ಆಗೇರ” ಎಂದು ಗುರುತಿಸುವ ದಲಿತ ಸಮುದಾಯವೊಂದಿದೆ. ಇವತ್ತಿಗೂ ತೀರ ಹಿಂದುಳಿದಿರುವ ಈ ಜಾತಿ ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದರು. ಅಂಕೋಲೆಯ ವಂದಿಗೆ ಗ್ರಾಮದ ದಲಿತ ಕೇರಿಗೆ 1942ರಲ್ಲಿ ಗಾಂಧೀಜಿ ಬಂದಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಆಗೇರ ಸಮುದಾಯ ಬಲಿಯಾ ಮಾಧು ಆಗೇರಗೆ ಗಾಂಧೀಜಿ ಎಂದರೆ ಸಾಕ್ಷಾತ್ ದೇವರು!! ಗೌಂಡಿ ಉಪಕಸುಬಿನ ಈತ ಕೆಂಪು ಕಡಗಲ್ಲಿನಲ್ಲಿ ಗಾಂಧೀಜಿಯ ಉಬ್ಬುಶಿಲ್ಪ ನಿರ್ಮಿಸಿದ್ದರು. ಮನೆ ಮುಂದೆ ಕಟ್ಟೆಕಟ್ಟಿ ಅದನ್ನಲ್ಲಿ ಪ್ರತಿಷ್ಠಾಪಿಸಿದ್ದರು. ಈ ಗಾಂಧಿ ಪ್ರತಿಮೆಗೆ ಬಲಿಯಾ ಆಗೇರ ದಿನವೂ ಹೂ ಮುಡಿಸಿ ಧೂಪ-ದೀಪದಿಂದ ಪೂಜಿಸುತ್ತಿದ್ದರು.

ಗಾಂಧಿ
ಬಲಿಯಾ ಆಗೇರ ಕೆತ್ತಿ ದಿನವೂ ಪೂಜಿಸುತ್ತಿದ್ದ ಉಬ್ಬುಗಲ್ಲಿನ ಗಾಂಧಿ ಪ್ರತಿಮೆ

ಗಾಂಧಿ ಜಯಂತಿ, ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವದಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದ ಬಲಿಯಾ ಸುತ್ತಲಿನವರಿಗೆ ಅಂದು ಸಿಹಿ ಹಂಚುತ್ತಿದ್ದರು. 1957ರಲ್ಲಿ ಗಾಂಧೀಜಿ ಪೂಜೆ ಪ್ರಾರಂಭಿಸಿದ್ದ ಬಲಿಯಾ ಆಗೇರ ತಮ್ಮ ಅಂತ್ಯದವರೆಗೂ ಒಂದು ದಿನವೂ ದೀಪಾರತಿ ತಪ್ಪಿಸಿದವರಲ್ಲ!! ಆ ನಂತರ ಆತನ ಮಕ್ಕಳು ಮತ್ತು ಮೊಮ್ಮಕ್ಕಳು ಈ ಪೂಜೆ ಸಂಪ್ರದಾಯವನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ. ಬಲಿಯಾ ಆಗೇರರ ಮಕ್ಕಳಾದ ಲಿಂಗು ಮತ್ತು ಥಾಕು ಇವತ್ತಿಗೂ ದೇವರಿಗೆ ಪೂಜಿಸುವಷ್ಟೇ ಭಕ್ತಿ-ಗೌರವದಿಂದ ಗಾಂಧಿ ಪ್ರತಿಮೆಗೂ ಆರತಿ ಎತ್ತುತ್ತಿದ್ದಾರೆ.

ನೌಕರಿ-ವ್ಯವಹಾರ ನಿಮಿತ್ತ ಊರಿಂದ ಹೊರಗಿರುವ ಬಲಿಯಾ ಆಗೇರರ ಮೊಮ್ಮಕ್ಕಳು ಮತ್ತು ಪರಿವಾರದವರು ಗಾಂಧಿ ಜಯಂತಿಯಂದು ಮಾತ್ರ ತಪ್ಪದೆ ಊರಿಗೆ ಬರುತ್ತಾರೆ. ಗಾಂಧಿ ಶಿಲ್ಪದ ಮುಂದೆ ಒಟ್ಟಾಗಿ ನಿಂತು ಗೌರವ ಸಲ್ಲಿಸುತ್ತಾರೆ. ಅಂದು ಈ ಆಗೇರ ಕುಟುಂಬದಲ್ಲಿ ವಿಶೇಷ ಪೂಜೋತ್ಸವ; ಹಬ್ಬದ ಸಡಗರ; ನೆಂಟರಿಷ್ಟರಿಗೆಲ್ಲಾ ಸಿಹಿ ಹಂಚಿಕೆ.

ಗಾಂಧಿ
ಬಲಿಯಾ ಆಗೇರ

ಇಲ್ಲಿ ದಾಖಲಿಸಬೇಕಾದ ಮತ್ತೊಂದು ಮಹತ್ವದ ಸಂಗತಿಯಿದೆ. ಕಟ್ಟಾ ಗಾಂಧಿವಾದಿಯಾಗಿದ್ದ ಬಲಿಯಾ ಆಗೇರ ತನಗೆ ಸರ್ಕಾರಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಸೌಲಭ್ಯ ಕೊಡಲು ಬಂದಾಗ ಬೇಡವೆಂದು ನಿರಾಕರಿಸಿದ್ದರು! ತಾನು ಮಾಡಿದ ಹೋರಾಟ ತನ್ನ ಜನ್ಮಭೂಮಿಗಾಗಿ; ಗಾಂಧೀಜಿಗಾಗಿ ಎಂಬ ಅರ್ಪಣಾಭಾವ ಬಲಿಯಾ ಆಗೇರರದಾಗಿತ್ತು; ಇದಕ್ಕೆಲ್ಲಾ ಇನಾಮು ಯಾಕೆಂದು ಆತ ಕೇಳುತ್ತಿದ್ದರು. ಗಾಂಧಿಯನ್ನು ಮತೋನ್ಮತ್ತರಾಗಿ ದ್ವೇಷಿಸುವವರಿಗೆ ಬಲಿಯಾ ಆಗೇರ ಅರ್ಥವಾಗದ ಒಗಟೇ ಬಿಡಿ!! ಗಾಂಧೀಜಿಯನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರನೆಂದು ಮೂದಲಿಸುವ ಬಾಯಿ ಹರುಕ ಧರ್ಮಾತ್ಮ ಸಂಸತ್ತಿನಲ್ಲಿ ಪ್ರತಿನಿಧಿಸುವ ಉತ್ತರಕನ್ನಡಲ್ಲಿ ಅದೇ ಗಾಂಧಿಯನ್ನು ತಲತಲಾಂತರದಿಂದ ಶ್ರದ್ಧೆಯಿಂದ ಪೂಜಿಸುವ ದಲಿತ ಕುಟುಂಬ ಒಂದಿದೇ ಎಂಬುದೇ ಅದ್ಭುತ!!!

  • ಶುದ್ದೋಧನ. ಪತ್ರಕರ್ತರು, ಉತ್ತರ ಕನ್ನಡ.

ಇದನ್ನೂ ಓದಿ: ಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? – ಜಿ.ಎನ್‌. ನಾಗರಾಜ್

Also Read: When Godse´s Children Rule India, Gandhi is Crucified Everyday

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...