Homeಮುಖಪುಟಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!

ಗಾಂಧಿ ಜಯಂತಿ: ಅಂಕೋಲೆಯ ಆಗೇರ ಮನೆಯಲ್ಲಿ ಗಾಂಧಿಗೆ ನಿತ್ಯವೂ ಪೂಜೆ!!

1957ರಲ್ಲಿ ಗಾಂಧೀಜಿ ಪೂಜೆ ಪ್ರಾರಂಭಿಸಿದ್ದ ಬಲಿಯಾ ಆಗೇರ ತಮ್ಮ ಅಂತ್ಯದವರೆಗೂ ಒಂದು ದಿನವೂ ದೀಪಾರತಿ ತಪ್ಪಿಸಿದವರಲ್ಲ!! ಆ ನಂತರ ಆತನ ಮಕ್ಕಳು ಮತ್ತು ಮೊಮ್ಮಕ್ಕಳು ಈ ಪೂಜೆ ಸಂಪ್ರದಾಯವನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ.

- Advertisement -
- Advertisement -

ಅದು ಸ್ವಾತಂತ್ರ್ಯ ಸಂಗ್ರಾಮದ ಆಚೀಚೆಯ ದಿನ ಮಾನೆ; ಇಡೀ ಕರ್ನಾಟಕದಲ್ಲಿ ಗಾಂಧಿ ಜಿಲ್ಲೆ ಎಂಬ ಪ್ರತೀತಿ ಇದ್ದದ್ದು ಉತ್ತರ ಕನ್ನಡಕ್ಕೆ ಮಾತ್ರ! ಗಾಂಧೀಜಿ ಚಿಂತನೆಗಳಿಂದ ಪ್ರಭಾವಿತವಾಗಿದ್ದ ಜಿಲ್ಲೆ ಜೊತೆ ಗಾಂಧೀಜಿಗೂ ನಿಕಟ ಒಡನಾಟವಿತ್ತು. ಉತ್ತರ ಕನ್ನಡದಲ್ಲಿ ನಡೆದ ಅಸ್ಪೃಶ್ಯತೆ ವಿರುದ್ಧ, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ವಿರುದ್ಧ ಮತ್ತು ಬ್ರಿಟಿಷರ ವಿರುದ್ಧದ ಹಲವು ಹೋರಾಟಗಳಲ್ಲಿ ಗಾಂಧೀಜಿ ಪಾಲ್ಗೊಂಡು ಪ್ರೇರಣೆ ಆಗಿದ್ದರು. ಜಿಲ್ಲೆಯ ಅಂಕೋಲೆಯಂತೂ ಕರ್ನಾಟಕದ ಬಾರ್ಡೋಲಿ ಎಂದೇ ಹೆಸರುವಾಸಿ. ಇಲ್ಲಾಗಿರುವ ಹತ್ತಾರು ಸ್ವಾತಂತ್ರ್ಯ ಚಳುವಳಿಗಳು ಐತಿಹಾಸಿಕ! ಗಾಂಧಿ ಅನುಯಾಯಿಗಳ ದೊಡ್ಡ ದಂಡೇ ಅಂಕೋಲೆಯ ಹಳ್ಳಿ-ಹಳ್ಳಿಗಳಲ್ಲಿ ತಯಾರಾಗಿತ್ತು.

ಅಂಕೋಲೆಯ ಸುತ್ತಮುತ್ತ “ಆಗೇರ” ಎಂದು ಗುರುತಿಸುವ ದಲಿತ ಸಮುದಾಯವೊಂದಿದೆ. ಇವತ್ತಿಗೂ ತೀರ ಹಿಂದುಳಿದಿರುವ ಈ ಜಾತಿ ಜನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದರು. ಅಂಕೋಲೆಯ ವಂದಿಗೆ ಗ್ರಾಮದ ದಲಿತ ಕೇರಿಗೆ 1942ರಲ್ಲಿ ಗಾಂಧೀಜಿ ಬಂದಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಆಗೇರ ಸಮುದಾಯ ಬಲಿಯಾ ಮಾಧು ಆಗೇರಗೆ ಗಾಂಧೀಜಿ ಎಂದರೆ ಸಾಕ್ಷಾತ್ ದೇವರು!! ಗೌಂಡಿ ಉಪಕಸುಬಿನ ಈತ ಕೆಂಪು ಕಡಗಲ್ಲಿನಲ್ಲಿ ಗಾಂಧೀಜಿಯ ಉಬ್ಬುಶಿಲ್ಪ ನಿರ್ಮಿಸಿದ್ದರು. ಮನೆ ಮುಂದೆ ಕಟ್ಟೆಕಟ್ಟಿ ಅದನ್ನಲ್ಲಿ ಪ್ರತಿಷ್ಠಾಪಿಸಿದ್ದರು. ಈ ಗಾಂಧಿ ಪ್ರತಿಮೆಗೆ ಬಲಿಯಾ ಆಗೇರ ದಿನವೂ ಹೂ ಮುಡಿಸಿ ಧೂಪ-ದೀಪದಿಂದ ಪೂಜಿಸುತ್ತಿದ್ದರು.

ಗಾಂಧಿ
ಬಲಿಯಾ ಆಗೇರ ಕೆತ್ತಿ ದಿನವೂ ಪೂಜಿಸುತ್ತಿದ್ದ ಉಬ್ಬುಗಲ್ಲಿನ ಗಾಂಧಿ ಪ್ರತಿಮೆ

ಗಾಂಧಿ ಜಯಂತಿ, ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವದಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದ ಬಲಿಯಾ ಸುತ್ತಲಿನವರಿಗೆ ಅಂದು ಸಿಹಿ ಹಂಚುತ್ತಿದ್ದರು. 1957ರಲ್ಲಿ ಗಾಂಧೀಜಿ ಪೂಜೆ ಪ್ರಾರಂಭಿಸಿದ್ದ ಬಲಿಯಾ ಆಗೇರ ತಮ್ಮ ಅಂತ್ಯದವರೆಗೂ ಒಂದು ದಿನವೂ ದೀಪಾರತಿ ತಪ್ಪಿಸಿದವರಲ್ಲ!! ಆ ನಂತರ ಆತನ ಮಕ್ಕಳು ಮತ್ತು ಮೊಮ್ಮಕ್ಕಳು ಈ ಪೂಜೆ ಸಂಪ್ರದಾಯವನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದ್ದಾರೆ. ಬಲಿಯಾ ಆಗೇರರ ಮಕ್ಕಳಾದ ಲಿಂಗು ಮತ್ತು ಥಾಕು ಇವತ್ತಿಗೂ ದೇವರಿಗೆ ಪೂಜಿಸುವಷ್ಟೇ ಭಕ್ತಿ-ಗೌರವದಿಂದ ಗಾಂಧಿ ಪ್ರತಿಮೆಗೂ ಆರತಿ ಎತ್ತುತ್ತಿದ್ದಾರೆ.

ನೌಕರಿ-ವ್ಯವಹಾರ ನಿಮಿತ್ತ ಊರಿಂದ ಹೊರಗಿರುವ ಬಲಿಯಾ ಆಗೇರರ ಮೊಮ್ಮಕ್ಕಳು ಮತ್ತು ಪರಿವಾರದವರು ಗಾಂಧಿ ಜಯಂತಿಯಂದು ಮಾತ್ರ ತಪ್ಪದೆ ಊರಿಗೆ ಬರುತ್ತಾರೆ. ಗಾಂಧಿ ಶಿಲ್ಪದ ಮುಂದೆ ಒಟ್ಟಾಗಿ ನಿಂತು ಗೌರವ ಸಲ್ಲಿಸುತ್ತಾರೆ. ಅಂದು ಈ ಆಗೇರ ಕುಟುಂಬದಲ್ಲಿ ವಿಶೇಷ ಪೂಜೋತ್ಸವ; ಹಬ್ಬದ ಸಡಗರ; ನೆಂಟರಿಷ್ಟರಿಗೆಲ್ಲಾ ಸಿಹಿ ಹಂಚಿಕೆ.

ಗಾಂಧಿ
ಬಲಿಯಾ ಆಗೇರ

ಇಲ್ಲಿ ದಾಖಲಿಸಬೇಕಾದ ಮತ್ತೊಂದು ಮಹತ್ವದ ಸಂಗತಿಯಿದೆ. ಕಟ್ಟಾ ಗಾಂಧಿವಾದಿಯಾಗಿದ್ದ ಬಲಿಯಾ ಆಗೇರ ತನಗೆ ಸರ್ಕಾರಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಸೌಲಭ್ಯ ಕೊಡಲು ಬಂದಾಗ ಬೇಡವೆಂದು ನಿರಾಕರಿಸಿದ್ದರು! ತಾನು ಮಾಡಿದ ಹೋರಾಟ ತನ್ನ ಜನ್ಮಭೂಮಿಗಾಗಿ; ಗಾಂಧೀಜಿಗಾಗಿ ಎಂಬ ಅರ್ಪಣಾಭಾವ ಬಲಿಯಾ ಆಗೇರರದಾಗಿತ್ತು; ಇದಕ್ಕೆಲ್ಲಾ ಇನಾಮು ಯಾಕೆಂದು ಆತ ಕೇಳುತ್ತಿದ್ದರು. ಗಾಂಧಿಯನ್ನು ಮತೋನ್ಮತ್ತರಾಗಿ ದ್ವೇಷಿಸುವವರಿಗೆ ಬಲಿಯಾ ಆಗೇರ ಅರ್ಥವಾಗದ ಒಗಟೇ ಬಿಡಿ!! ಗಾಂಧೀಜಿಯನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರನೆಂದು ಮೂದಲಿಸುವ ಬಾಯಿ ಹರುಕ ಧರ್ಮಾತ್ಮ ಸಂಸತ್ತಿನಲ್ಲಿ ಪ್ರತಿನಿಧಿಸುವ ಉತ್ತರಕನ್ನಡಲ್ಲಿ ಅದೇ ಗಾಂಧಿಯನ್ನು ತಲತಲಾಂತರದಿಂದ ಶ್ರದ್ಧೆಯಿಂದ ಪೂಜಿಸುವ ದಲಿತ ಕುಟುಂಬ ಒಂದಿದೇ ಎಂಬುದೇ ಅದ್ಭುತ!!!

  • ಶುದ್ದೋಧನ. ಪತ್ರಕರ್ತರು, ಉತ್ತರ ಕನ್ನಡ.

ಇದನ್ನೂ ಓದಿ: ಇಂದು ನಾವು ಗಾಂಧೀಜಿಯವರನ್ನೇಕೆ ನೆನೆಯಬೇಕು? – ಜಿ.ಎನ್‌. ನಾಗರಾಜ್

Also Read: When Godse´s Children Rule India, Gandhi is Crucified Everyday

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...