Homeಆರೋಗ್ಯಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ...

ಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ

ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದಿದೆ.

- Advertisement -
- Advertisement -

ಕೊಕಕೋಲಾದಲ್ಲಿರುವ ಪೌಷ್ಠಿಕಾಂಶಗಳಾವುವು ಎಂದು ಕೇಳಿದಾಗ ಆ ಕಂಪನಿಯವ ಇದರಲ್ಲಿ ಮಾರಾಟವೊಂದೇ ಪೌಷ್ಠಿಕಾಂಶ (marketing is the only nutrient) ಎಂದು ಉತ್ತರಿಸುತ್ತಾನೆ. ಒಂದು ಬಾಟಲಿ ಕೊಕಕೋಲಾ ಅಥವಾ ಪೆಪ್ಸಿಯಲ್ಲಿ ಸುಮಾರು 45 ಗ್ರಾಂ ಸಕ್ಕರೆ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಮತ್ತು ಕೃತಕ ಬಣ್ಣವಷ್ಟೇ ಇರುವುದರಿಂದ ಮಾರಾಟ ತಂತ್ರವೇ ಇದರ ನಿಜವಾದ ಅಸ್ತ್ರ. ಇದಕ್ಕೆ ಮೊದಲು ಜನರನ್ನು ವ್ಯಸನಿಗಳನ್ನಾಗಿಸಲು ಸ್ವಲ್ಪ ಕೊಕೇನ್ ಕೂಡ ಬಳಸಲಾಗುತ್ತಿತ್ತು. ಇದನ್ನು ವ್ಯಾಪಾರ ಜಗತ್ತಿನಲ್ಲಿ ಬ್ರೈನ್ ವಾಷಿಂಗ್ ಬದಲು ಬ್ರ್ಯಾಂಡ್ ವಾಷಿಂಗ್ ಎನ್ನುತ್ತಾರೆ. ಸ್ನೇಹಿತರೊಬ್ಬರು ಮಕ್ಕಳ ಹಾಲಿನ ಪುಡಿ ಮಾಡುವ ಕಂಪೆನಿಯಲ್ಲಿ ವಿಜ್ಞಾನಿಯಾಗಿದ್ದರು. ಅವರಿಗೆ ಮಕ್ಕಳ ಹಾಲಿನ ಪುಡಿಯಲ್ಲಿ ಸಕ್ಕರೆಯನ್ನು (ಸುಕ್ರೋಸ್) ಏಕೆ ಬಳಸುವಿರಿ, ತಾಯಿಯ ಹಾಲಿನಲ್ಲಿ ಇದು ಇಲ್ಲವಲ್ಲ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಇದು: ನಮ್ಮ ಹಾಲಿನ ಪುಡಿಯನ್ನು ಒಮ್ಮೆ ಹಸುಗೂಸುಗಳು ಕುಡಿದ ಮೇಲೆ ತಾಯಿಯ ಹಾಲನ್ನ ಬಯಸುವುದಿಲ್ಲ ಎಂದು.

ಸಕ್ಕರೆಯನ್ನು ಇಂದು ನೂತನ ತಂಬಾಕು ಎಂದೇ ಆರೋಗ್ಯ ವ್ಯವಸ್ಥೆಯಲ್ಲಿ ಪರಿಗಣಿಸಲಾಗುತ್ತಿದೆ. ರಾಬರ್ಟ್ ಲಸ್ಟಿಕ್ ಸುಮಾರು 10 ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಕ್ಕರೆ ಎಂಬ ಕಹಿ ಸತ್ಯ (sugar, the bitter truth) ಎಂಬ ಭಾಷಣದಲ್ಲಿ ಸಕ್ಕರೆ ತಂದಿರುವ ಅನಾರೋಗ್ಯ ಅವಾಂತರವನ್ನು ವಿಶ್ಲೇಷಿಸಿದ್ದರು. ಇದನ್ನು ಸುಮಾರು 1 ಕೋಟಿಗೂ ಹೆಚ್ಚು ಜನ ಗಮನಿಸಿದ್ದಾರೆ. ಒಂದು ವೈಜ್ಞಾನಿಕ ಪರೀಕ್ಷೆಯಲ್ಲಿ 2 ಗುಂಪಿನ ಇಲಿಗಳನ್ನು ಬಳಸಿ ಒಂದು ಇಲಿಗಳ ಗುಂಪಿಗೆ ಹಣ್ಣು ತರಕಾರಿಗಳನ್ನ ಕೊಟ್ಟು, ಇನ್ನೊಂದು ಗುಂಪಿನ ಇಲಿಗಳಿಗೆ ಸಕ್ಕರೆ ಕೊಟ್ಟು ಪಳಗಿಸಿ, ಸ್ವಲ್ಪ ಕಾಲದ ನಂತರ ಈ ಎರಡೂ ಗುಂಪಿನ ಇಲಿಗಳ ಮೇಲೆ ಮೈ ಸುಡುವ ಲೇಸರ್ ಬೆಳಕನ್ನು ಹಾಯಿಸಿದಾಗ, ಹಣ್ಣು, ತರಕಾರಿ ತಿನ್ನುವ ಇಲಿಗಳು ಜೀವಭಯದಿಂದ, ಜೀವವಿದ್ರೆ ಮುಂದೆ ತಿನ್ನಬಹುದೆಂದು ಚಂಗನೆ ಹಾರಿ ಓಡಿಹೋದವು. ಆದರೆ ಸಕ್ಕರೆಗೆ ಪಳಗಿದ್ದ ಇಲಿಯ ಗುಂಪು ಮೈ ಸುಟ್ಟರೂ ಸಕ್ಕರೆಯನ್ನು ತಿನ್ನುತ್ತಲೇ ಇದ್ದವು. ಈ ಪ್ರಯೋಗದಿಂದ ತಿಳಿದುಬಂದದ್ದೇನೆಂದರೆ ಸಕ್ಕರೆಗೂ ಮಾದಕ ದ್ರವ್ಯಗಳ ವ್ಯಸನಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂದು. ಇದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ನಮ್ಮ ನಿತ್ಯ ಆಹಾರದಿಂದ ಶೇ.10 ಕ್ಕಿಂತ ಹೆಚ್ಚು ಶಕ್ತಿಯನ್ನು ಸಕ್ಕರೆಯಿಂದ ಬರದಂತೆ ನೋಡಿಕೊಳ್ಳಿ ಎಂದು ಹೇಳಿರುವುದಲ್ಲದೆ ಇನ್ನೂ ಉತ್ತಮವಾದ ಮತ್ತು ನಿಜವಾದ ಆರೋಗ್ಯಕ್ಕಾಗಿ ಅದನ್ನು ಶೇ.5ಕ್ಕಿಂತ ಕಮ್ಮಿ ಮಾಡಿಕೊಂಡರೆ ಒಳಿತೆಂದು ಸ್ಪಷ್ಟವಾಗಿ ಹೇಳಿದೆ. ಶೇ.5ರಷ್ಟು ಶಕ್ತಿಯನ್ನು ಸಕ್ಕರೆಯಿಂದಲೇ ಪಡೆಯಲೇಬೇಕೆಂದೇನಲ್ಲ, ಬಳಸಲೇಬೇಕಾದರೂ ಅಷ್ಟರೊಳಗೆ ನಿಯಂತ್ರಿಸಿ ಎನ್ನುವುದಾಗಿದೆ. ಇದರ ಅರ್ಥ ದಿನಕ್ಕೆ 25 ಗ್ರಾಂಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ.

ಈ 25 ಗ್ರಾಂ ಸಕ್ಕರೆ ಒಂದು ದಿನಕ್ಕೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರವಾಗಿ ಭಾರತದ 138 ಕೋಟಿ ಜನರಿಗೆ 12 ಮಿಲಿಯನ್ ಟನ್ ಸಕ್ಕರೆ ಬೇಕಾಗುತ್ತದೆ. ಅಥವಾ ಶೇ.10 ರಷ್ಟು ಗರಿಷ್ಠ ಸಕ್ಕರೆಯನ್ನು ಲೆಕ್ಕ ಹಾಕಿದರೂ 24 ಮಿಲಿಯನ್ ಟನ್ ಸಾಕು. ಹನ್ನೆರಡಲ್ಲ 24 ಟನ್ನೂ ಅಲ್ಲ, ನಮ್ಮಲ್ಲಿ ಸುಮಾರು 35 ಮಿಲಿಯನ್ ಟನ್ ಸಕ್ಕರೆಯನ್ನು ಪ್ರತಿವರ್ಷ ಉತ್ಪಾದಿಸುತ್ತೇವೆ. ‘ಬೇಕಾಗಿರುವ’ ಹನ್ನೆರಡು ಮಿಲಿಯನ್ ಟನ್‍ಗಿಂತ ಮೂರು ಪಟ್ಟು ಸಕ್ಕರೆಯ ಉತ್ಪಾದನೆಯಾಗುತ್ತಿದೆ. ಜಗತ್ತಿನ ಮಧುಮೇಹ ರಾಜಧಾನಿಯೆಂದು ಭಾರತವನ್ನು ಕರೆಯುತ್ತಾರೆ. ವಯಸ್ಕರಿಗೆ ಸುಮಾರು ಶೇ.14 ರಷ್ಟು ಜನರಲ್ಲಿ ಮಧುಮೇಹ ರೋಗವಿದೆ. ಸುಮಾರು 40 ವರ್ಷಕ್ಕೆ ಮಧುಮೇಹ ಬಂದರೆ ಸುಮಾರು 10 ಲಕ್ಷ ರೂಪಾಯಿ ಆರೋಗ್ಯಕ್ಕೆ ಖರ್ಚು ಮಾಡಬೇಕಾಗುತ್ತದೆ. ಈ 35 ಮಿಲಿಯನ್ ಟನ್ ಸಕ್ಕರೆಗಾಗಿ 350 ಮಿಲಿಯನ್ ಟನ್ ಕಬ್ಬನ್ನು ಬೆಳೆಯಲು ಸುಮಾರು 5 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಬಳಸಲಾಗುತ್ತಿದೆ. ಮಹಾರಾಷ್ಟ್ರದಂತಹ ರಾಜ್ಯದಲ್ಲಿರುವ ಸುಮಾರು 1800 ಲಕ್ಷ ಕೋಟಿಯಷ್ಟು ಜನರ ತೆರಿಗೆ ಹಣದಿಂದ ಖರ್ಚು ಮಾಡಿ ಕಟ್ಟಿರುವ ಅಣೆಕಟ್ಟಿನಿಂದ ಶೇ.80ರಷ್ಟು ನೀರು ಕೇವಲ ಕಬ್ಬಿನ ಗದ್ದೆಗೆ ಹರಿಯುತ್ತದೆ. Sugar cane is a water guzzler, diabetes inducer. ಕಬ್ಬಿನಿಂದ ಬರುವ ಸಕ್ಕರೆಯಾಗಲಿ ಅಥವಾ ಸಾರಾಯಿಯಾಗಲಿ ಪರಿಸರಕ್ಕೆ ಮತ್ತು ಮನುಕುಲಕ್ಕೆ ಎಲ್ಲಾ ರೀತಿಯಿಂದಲೂ ಮಾರಕವೇ ಆಗಿದೆ.

ಮನುಷ್ಯನ ದೇಹದಲ್ಲಿ ಸುಮಾರು 5 ಲೀಟರ್ ರಕ್ತವಿದ್ದು, ಅದಕ್ಕೆ ಕೇವಲ 5 ಗ್ರಾಂ ಸಕ್ಕರೆಯನ್ನು ಮಾತ್ರ ಶೇಖರಿಸಲು ಸಾಮರ್ಥ್ಯವಿರುವುದು. ನಾವು ಸುಲಭವಾಗಿ ಬಳಸುವ ಸಕ್ಕರೆ ರಕ್ತಕ್ಕೆ ಶೀಘ್ರವಾಗಿ ಪ್ರವಾಹವಾಗಿ ದೇಹದ ಶೇಖರಣಾ ಸಾಮರ್ಥ್ಯವನ್ನು ಮೀರಿದಾಗ ಇನ್ಸುಲಿನ್ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗಿ ಈ ಸಕ್ಕರೆಯ ಪ್ರವಾಹವನ್ನು ಕೊಬ್ಬಾಗಿ ನಿರಂತರವಾಗಿ ಪರಿವರ್ತಿಸಬೇಕಾಗುತ್ತದೆ. ಹೀಗೆ ಸತತವಾಗಿ ದುಡಿದ ಇನ್ಸುಲಿನ್ ಉತ್ಪಾದಿಸುವ ಪ್ಯಾಂಕ್ರಿಯಾಸ್ ಅಥವಾ ಇನ್ಸುಲಿನ್ ಹೇಳಿದ ಮಾತಿನಂತೆ ಸಕ್ಕರೆಯನ್ನು ಬೇರೆಡೆಗೆ ಶೇಖರಿಸುವ ಜೀವಕೋಶಗಳು ಸೋತು ದೇಹದ ಸಂವಾಹಕಗಳು ಹಳಿ ತಪ್ಪಿದಾಗ ಉಂಟಾಗುವುದೇ ಮಧುಮೇಹ ರೋಗ. ಮನುಷ್ಯ ಅನುವಂಶಿಕವಾಗಿ ಸಕ್ಕರೆಯನ್ನು ರಕ್ತದಲ್ಲಿ ಹಿಡಿದಿಡಲು ಸಾಮರ್ಥ್ಯವಿಲ್ಲದಿರುವ ವಿದ್ಯಮಾನ, ಮಂಗನಿಂದ ಮಾನವನಾದ ವಿಕಾಸವಾದ ಅಡಗಿದೆ ಎನ್ನುತ್ತಾರೆ. ಹಣ್ಣು ಹಂಪಲನ್ನು ತಿನ್ನುವ ನಮ್ಮ “ಪೂರ್ವಾಶ್ರಮದಲ್ಲಿ” ಸಕ್ಕರೆಯನ್ನು ಹಿಡಿದಿಡುವ ಪ್ರಮೇಯವೇ ಒದಗಿರಲಿಲ್ಲ. ಅವಶ್ಯಕತೆ ಇಲ್ಲದ್ದು ವಿಕಾಸವಾಗುವ ಅವಕಾಶವಿರಲಿಲ್ಲ. ಹಾಗಾಗಿ ಇಂದಿಗೆ ನಾವು ಹೆಚ್ಚು ಸಕ್ಕರೆ ಬಳಸುವುದು ನಮ್ಮ ದೈಹಿಕ ಚಟುವಟಿಕೆಯ ಕಾರ್ಯವೈಖರಿಯ ಮತ್ತು ಬದುಕಿನ ಜೀವನಶೈಲಿಗೆ ವಿರುದ್ಧವಾದದ್ದು.

ಹಣ್ಣಿನಿಂದ ಸಕ್ಕರೆ ಬರುವಾಗ ಇಂತಹ ಸಮಸ್ಯೆ ಇರದಿರಲು ಕಾರಣ ಹಣ್ಣಿನಲ್ಲಿರುವ ಅಂಶ ಸುಮಾರು ಶೇ.10 ರಷ್ಟು ಸಕ್ಕರೆ ಜೊತೆ ಸುಮಾರು 85 ರಿಂದ 90 ರಷ್ಟು ನೀರೆ ಆಗಿರುತ್ತದೆ. ಹೀಗಾಗಿ ಹೊಟ್ಟೆ ತುಂಬಿ ಹೆಚ್ಚು ತಿನ್ನಲಾಗದು. ತಿನ್ನುವ ಆಹಾರವೇ ನಿಮ್ಮನ್ನು ನಿಯಂತ್ರಿಸುತ್ತದೆ. ಇದೇ ಕಬ್ಬಿನಿಂದ ಜಗಿದು ರಸದಲ್ಲಿರುವ ಸಕ್ಕರೆಯನ್ನು ತೆಗೆದುಕೊಳ್ಳಬೇಕಾದರೆ 10 ಗ್ರಾಂ ಸಕ್ಕರೆಗೆ 100 ಗ್ರಾಂ ಕಬ್ಬನ್ನು ಜಗಿದು ರಸ ಹೀರಲು ಕಾಲು ಗಂಟೆ ಬೇಕಾಗಬಹುದು – ಹಲ್ಲು ಗಟ್ಟಿ ಇದ್ದರೆ. ಅದೇ ನಾವು 2 ಚಮಚ ಸಕ್ಕರೆ ಹಾಕಿಕೊಳ್ಳಲು ಯಾವುದೇ ಆಲೋಚನೆ ಮಾಡುವುದಿಲ್ಲ. ಯಾವುದೇ ಆಹಾರ ಪದಾರ್ಥ ಶುದ್ಧವಾದಾಗ ಸತ್ವ ಹೀನವಾಗುತ್ತದೆ. Pure is junk. ಅದು ಆಹಾರಕ್ಕೂ ಮತ್ತು ಶುದ್ಧ ಮನುಷ್ಯರಿಗೂ ಅನ್ವಯ.

ಈಗ ಸಕ್ಕರೆಯ ಪರವಾಗಿ ವಕಾಲತ್ತು ವಹಿಸಲು ಹುಟ್ಟುಹಾಕಲಾಗಿರುವ ಮೀಟಾ.ಆರ್ಗ್ ಈ ಎಲ್ಲಾ ನಗ್ನ ಸತ್ಯಗಳ ವಿರುದ್ಧ ಹಿಂದೆ ಹೇಗೆ ತಂಬಾಕು ಲಾಬಿ ಸಿಗರೇಟಿನ ಪರ ಅಪಾರವಾದ ಪ್ರಚಾರ ಮಾಡಿತ್ತೋ ಹಾಗೆಯೇ ಮುಂದುವರಿಯುತ್ತಿದೆ. ತಂಬಾಕು ಲಾಬಿ ಸಿಗರೇಟಿಗೂ ಕ್ಯಾನ್ಸರ್‌ಗೂ ಸಂಬಂಧವೇ ಇಲ್ಲವೆಂದು ಸುಮಾರು 100 ವರ್ಷಗಳ ಕಾಲ “ವೈಜ್ಞಾನಿಕ” ಸಂಶೋಧನೆಗಳನ್ನು ಮಾಡಿ ಪ್ರಕಟಿಸಿತು. ಅನೇಕ ಲಾಬಿಗಳನ್ನು ಸೃಷ್ಟಿಮಾಡಿತ್ತು. ತಂಬಾಕಿನ ಪರವಾಗಿ ಅನೇಕ ಪುಸ್ತಕಗಳನ್ನು ಬರೆಯಲಾಯಿತು. ಡನ್‍ಹಿಲ್ ಎಂಬುವ ವ್ಯಕ್ತಿ ಜಂಟಲ್ ಆರ್ಟ್ ಆಫ್ ಸ್ಮೋಕಿಂಗ್ ಎನ್ನುವ ಪುಸ್ತಕ ಬರೆದ. ಕೊಕಕೋಲಾ ಕಂಪೆನಿಯವರು ಸಕ್ಕರೆ ಪರ ಇದೇ ರೀತಿಯ ವಕಾಲತ್ತನ್ನು ವಹಿಸುತ್ತಾರೆ. ಅನೇಕ ಬಾರಿ ಇಂತಹ ಲಾಬಿಗಳಿಗೆ ಕೊಕಕೋಲಾ ಮತ್ತು ಪೆಪ್ಸಿಯಂತಹ ಕಂಪೆನಿಗಳಿಂದ ಹಣ ಹೂಡಿಕೆಯಾಗುತ್ತದೆ. ಕೋಲಾ ಕಂಪೆನಿಗಳು ಹೇಳುವುದು ನಮ್ಮ ಕೋಲಾ ಕುಡಿದು ಸುಮಾರು 2 ಕಿ.ಮೀ ಓಡಿದರೆ ಯಾವ ಬೊಜ್ಜು ಬರುವುದಿಲ್ಲ ಎಂದು. ಸೋಮಾರಿಗಳು ಕೊಕಕೋಲಾ ಕುಡಿದು ಬೇಜವಾಬ್ದಾರಿಯಿಂದ ಕೊಕಕೋಲಾದಿಂದ ಬೊಜ್ಜು ಬರುತ್ತದೆ ಎಂದು ಹೇಳುತ್ತಾರೆ ಎನ್ನುವುದು ಅವರ ವಾದ. ಹೊರನೋಟಕ್ಕೆ ಸರಿ ಕಂಡರೂ ಅವರ ದೂರ್ತ ಆಲೋಚನೆ ಮತ್ತು ಅವರ ದುರುದ್ದೇಶ ಸ್ಪಷ್ಟವಾಗಿ ಗೋಚರವಾಗುತ್ತದೆ.

ಸಕ್ಕರೆ ಮತ್ತು ಕಬ್ಬನ್ನು ಮುಕ್ಕಾಲು ಭಾಗ ಕಮ್ಮಿ ಮಾಡಿ ಭಾರತೀಯರ ಆರೋಗ್ಯ, ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ, ಪರಿಸರ ಪಾಲನೆಗಾಗಿ ಎಲ್ಲರೂ ಒಟ್ಟಾಗಿ ಚರ್ಚೆ ನಡೆಸಿ ಆರೋಗ್ಯಕರ ಕ್ರಮಗಳಿಗೆ ಮುಂದಾಗಬೇಕಿರುವ ತುರ್ತು ನಮ್ಮ ಮುಂದಿದೆ.


ಇದನ್ನೂ ಓದಿ: ಕನ್ನಡಕ್ಕೆ ಕನ್ನಡದ್ದೆ ಊಟ ಉಂಟಾ? ಡಾ. ಕೆ.ಸಿ ರಘು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...