Homeಮುಖಪುಟನಾಳೆಯಿಂದ ಸಂಸ ಬಯಲು ರಂಗಮಂದಿರದಲ್ಲಿ ಶಂಕರ್‌ ನಾಗ್ ನಾಟಕೋತ್ಸವ!

ನಾಳೆಯಿಂದ ಸಂಸ ಬಯಲು ರಂಗಮಂದಿರದಲ್ಲಿ ಶಂಕರ್‌ ನಾಗ್ ನಾಟಕೋತ್ಸವ!

ನಾಟಕೋತ್ಸವದ ವಿಶೇಷ ಎಂದರೆ "ನಾಗರಕಟ್ಟೆ". ಈ ಕಾರ್ಯಕ್ರಮದಲ್ಲಿ ಶಂಕರ್‌ನಾಗ್‌ ಜತೆ ಕೆಲಸ ಮಾಡಿದವರು, ಸ್ನೇಹಿತರು ಶಂಕರ್‌ನಾಗ್‌ರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ.

- Advertisement -
- Advertisement -

2018ರಿಂದ ಖ್ಯಾತನಟ, ನಿರ್ದೇಶಕ ಶಂಕರ್‌ ನಾಗ್ ನೆನಪಲ್ಲಿ ಪ್ರತಿವರ್ಷದ ಪರಮ ಗುರಿ ಎಂದು ಶಂಕರ್‌ ನಾಗ್ ನಾಟಕೋತ್ಸವ ನಡೆಸುತ್ತಿರುವ ಸಾತ್ವಿಕ ಮತ್ತು ರಂಗಪಯಣ ತಂಡ ಮತ್ತೊಂದು ನಾಟಕೋತ್ಸವಕ್ಕೆ ಸಜ್ಜಾಗಿ, ಕಲಾ ಪ್ರೇಮಿಗಳನ್ನು ಸ್ವಾಗತಿಸುತ್ತಿದೆ.

ರಂಗಕರ್ಮಿಗಳಾದ ರಾಜ್‌ಗುರು ಮತ್ತು ನಯನ ಸೂಡ ಅವರ ಈ ತಂಡಗಳು 2018ರಿಂದ ವಿಶಿಷ್ಟವಾಗಿ ಶಂಕರ್‌ ನಾಗ್ ಅವರ ನೆನಪನ್ನು ಮತ್ತಷ್ಟು ಹಚ್ಚಹಸಿರುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ನವೆಂಬರ್‌ 23 ರಿಂದ 26 ರವರೆಗೆ ನಾಲ್ಕು ದಿನಗಳು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ.

ಪ್ರತಿ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಈ ಬಾರಿ ಕೊರೊನಾ ಕಾರಣದಿಂದ ನವೆಂಬರ್‌ನಲ್ಲಿ ನಡೆಯುತ್ತಿದೆ.

ರಂಗಕರ್ಮಿಗಳಾದ ರಾಜ್‌ಗುರು ಮತ್ತು ನಯನ ಸೂಡ

ಈ ನಾಟಕೋತ್ಸವದಲ್ಲಿ ಬರೀ ನಾಟಕಗಳಷ್ಟೇ ಅಲ್ಲದೆ, ಸಾಹಿತ್ಯ, ಸಂಗೀತ, ಮಹಿಳೆ ಮತ್ತು ರಂಗಭೂಮಿ, ವಿಚಾರ ಸಂಕೀರ್ಣ, ನಿರ್ದೇಶಕರೊಂದಿಗೆ ಸಂವಾದಗಳು ಸೇರಿದಂತೆ ಹತ್ತಾರ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: ’ಆಟೋರಾಜ’ನ ನೆನಪಲ್ಲಿ… ಶಂಕರ್ ‌ನಾಗ್‌ ನಮ್ಮನ್ನಗಲಿ ಇಂದಿಗೆ 30 ವರ್ಷ!

ಹೆಚ್ಚು ಪ್ರಯೋಗಾತ್ಮಕ ಮತ್ತು ಮಹಿಳಾ ಪ್ರಧಾನ ನಾಟಕಗಳನ್ನು ಈ ತಂಡಗಳು ಪ್ರಸ್ತುತ ಪಡಿಸಿವೆ. ಈ ಬಾರಿಯ ಶಂಕರ್ ನಾಗ್ ನಾಟಕೋತ್ಸವದ ಉದ್ಘಾಟನೆಯನ್ನು ಮಹಿಳಾ ನಿರ್ದೇಶಕಿಯರು ಮಾಡಲಿದ್ದಾರೆ. ಪ್ರತಿ ದಿನ ಸಂಜೆ 5.30 ರಿಂದ ಕಾರ್ಯಕ್ರಮಗಳು ಆರಂಭವಾಗಲಿವೆ.

ನವೆಂಬರ್ 23 ರಂದು ಸಂಜೆ ಜಾನ್ ದೇವರಾಜು ಅವರಿಂದ ’ಬ್ಲ್ಯಾಕ್ &ವೈಟ್’, ಬಾಲು ಜಂಬೆ ತಂಡದಿಂದ ’ರಿದಂ’ ಸಾತ್ವಿಕ ರಂಗತಂಡದಿಂದ ’ಸೂಫಿ ನಡಿಗೆ ತತ್ವಪದದೆಡೆಗೆ’ ಎಂಬ ಕಾರ್ಯಕ್ರಮಗಳು ನಡೆಯಲಿವೆ.

ನವೆಂಬರ್‌ 24 ರಂದು ಸಂಜೆ 5.30ಕ್ಕೆ ಲಂಕೇಶ್ ಅವರ ವಿಚಾರಗಳು ಮತ್ತು ನಾವು ಎಂಬ ವಿಚಾರಗೋಷ್ಠಿ ನಡೆಯಲಿದೆ. ನಾಗರಕಟ್ಟೆ ಮತ್ತು ಸಂಜೆ 7.45ಕ್ಕೆ ಶ್ರದ್ಧಾ ನಾಟಕ ಆರಂಭವಾಗಲಿದೆ.

ನಾಳೆಯಿಂದ ಸಂಸ ಬಯಲು ರಂಗಮಂದಿರದಲ್ಲಿ ಶಂಕರ್‌ ನಾಗ್ ನಾಟಕೋತ್ಸವ!
PC:Nayana sooda

ನವೆಂಬರ್‌ 25 ರಂದು ’ಬದುಕು ಕಲಿಸಿದ ಬೇಂದ್ರೆ’ ವಿಚಾರಗೋಷ್ಠಿ, ನಾಗರಕಟ್ಟೆ ಮತ್ತು ’ಸೋಮಾಲಿಯಾ ಕಡಲ್ಗಳ್ಳರು’ ಎಂಬ ನಾಟಕ ನಡೆಯಲಿದೆ.

ನವೆಂಬರ್‌ 26 ರಂದು ಶಂಕರ್‌ ನಾಗ್ ಅಭಿನಯಿಸಿದ್ದ ನಾಟಕಗಳ ರಂಗಗೀತೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಜೊತೆಗೆ ಶಂಕರ್‌ ನಾಗ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇವುಗಳ ನಂತರ 8 ಗಂಟೆಗೆ ಬಿದ್ದರೂರಿನ ಬಿಗ್‌ಬೆನ್ ನಾಟಕ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನಿ ಆಡಳಿತದ ನಡುವಿನ ತಿಕ್ಕಾಟ: ಟೊಯೋಟಾದಲ್ಲಿ ನಡೆಯುತ್ತಿರುವುದೇನು?

ನಾಟಕೋತ್ಸವದ ವಿಶೇಷ ಎಂದರೆ “ನಾಗರಕಟ್ಟೆ”. ಈ ಕಾರ್ಯಕ್ರಮದಲ್ಲಿ ಶಂಕರ್‌ ನಾಗ್ ಅವರ ನೆನಪುಗಳು ನಿಮ್ಮನ್ನು ಕಾಡುತ್ತವೆ. ಕಾರ್ಯಕ್ರದಲ್ಲಿ ಶಂಕರ್‌ನಾಗ್‌ ಜತೆ ಕೆಲಸ ಮಾಡಿದವರು, ಸ್ನೇಹಿತರು, ಒಡನಾಡಿಗಳು, ಅವರ ಪರಿಚಿತರು ಶಂಕರ್‌ನಾಗ್‌ರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ.

“ಕಾಲೇಜಿನ ದಿನಗಳಲ್ಲಿ ರಂಗಶಂಕರದ ವೇದಿಕೆಯಲ್ಲಿ ನಾನು ಅಭಿನಯಿಸುವಾಗ ಮುಂದಿನ ಸಾಲಿನಲ್ಲಿ ಕೂತಿದ್ದ ಅರುಂಧತಿ ಅಮ್ಮ “ನೀನು ಶಂಕ್ರನ ಥರಾ ಬಿಹೇವ್ ಮಾಡ್ತಿಯಾ ಕಣೋ” ಅಂದಿದ್ರು, ಈಗದು ಅವರಿಗೆ ನೆನಪಿನಲ್ಲಿರುತ್ತದೊ ಇಲ್ಲವೋ ಗೊತ್ತಿಲ್ಲಾ. ಆದರೆ, ಸತತ 15 ವರ್ಷಗಳಿಂದ ಶಂಕ್ರಣ್ಣ ನನ್ನ ಸಾತ್ವಿಕ ಮತ್ತು ರಂಗಪಯಣ ತಂಡಗಳನ್ನು ಹೇಗೆ ಆವರಿಸಿದ್ದಾರೆ ಎಂದರೆ… ಸಾತ್ವಿಕದಲ್ಲಿ “S” ಮೊದಲಕ್ಷರ, ರಂಗಪಯಣದಲ್ಲಿ “NA” ಕೊನೆ ಅಕ್ಷರ ಎರಡು ತಂಡದ ಪ್ರಾರಂಭದಿಂದ ಅಂತ್ಯದವರೆಗೂ ಅವರಿದ್ದಾರೆ” –  ರಾಜ್‌ಗುರು, ರಂಗಕರ್ಮಿ

ನಾಟಕೋತ್ಸವದ ಸಿದ್ಧತೆಯಲ್ಲಿ ರಂಗತಂಡದ ಸದಸ್ಯರು

“ನಾಟಕೋತ್ಸವದಲ್ಲಿ ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಕಾರ್ಯಕ್ರಮ ನಡೆಸಲಾಗುತ್ತಿದೆ. ಈಗಾಗಲೇ ನಾಟಕೋತ್ಸವಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಟಕೋತ್ಸವಕ್ಕೆ ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ, ಹಾಗಾಗಿಯೇ ಪಾಸ್‌ಗಳನ್ನು ವಿತರಿಸಲಾಗಿದೆ. ಮಾಸ್ಕ್, ದೈಹಿಕ ಅಂತರ ಕಡ್ಡಾಯ” ಎಂದು ನಾಟಕೋತ್ಸವದ ನಿರ್ವಹಣೆ ನೋಡಿಕೊಳ್ಳುತ್ತಿರುವ ರಂಗಕರ್ಮಿ ನಯನ ಸೂಡ ತಿಳಿಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...