Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ.

- Advertisement -
- Advertisement -

‘ಜನ್ನತ್ ಮೊಹಲ್ಲಾ’ ಮತ್ತೆ ಮತ್ತೆ ಓದಿಸಿಕೊಳ್ಳುವ ಅಬ್ಬಾಸ್ ಮೇಲಿನಮನಿ ಅವರ ಮೊದಲ ಕಾದಂಬರಿ. ದ್ವೇಷ-ಪ್ರೀತಿ, ಹಿಂಸೆ-ಅಹಿಂಸೆ, ಸಿಟ್ಟು-ತಾಳ್ಮೆ, ನಿರಾಶೆ-ಭರವಸೆ ಇವುಗಳ ಮುಖಾಮುಖಿಯಲ್ಲಿ ಪ್ರೀತಿ ಅರಳಿಸುವ, ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನವಾಗಿ ‘ಜನ್ನತ್ ಮೊಹಲ್ಲಾ’ ಮೂಡಿಬಂದಿದೆ.

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ. ಕನಸುಗಳೆಂದರೆ ಅವಾಸ್ತವಿಕ ಭ್ರಮೆಗಳೂ ಆಗಬಹುದು. ಆದರೆ ಇಲ್ಲಿನ ಕನಸುಗಳಿಗೆ ನೆಲದ ಆಳದೊಳಗೆ ಇಳಿದಿರುವ ಬೇರುಗಳಿವೆ. ನೆಲದ ಮೇಲಣ ಕಡುವಾಸ್ತವಗಳ ದಟ್ಟ ಅರಿವಿದೆ. ಕನಸುಗಳನ್ನು ಛಿದ್ರಗೊಳಿಸುವ ಪ್ರಯತ್ನಗಳ ಎಚ್ಚರಿವಿದೆ. ಕನಸು ಕಾಣುವ ಹಂಬಲಕ್ಕೆ ಇವುಗಳನ್ನು ನಿವಾರಿಸಿಕೊಳ್ಳುವ ಮನುಷ್ಯಪ್ರೀತಿ, ವಿವೇಕ, ಜಾಣ್ಮೆಗಳಿವೆ.

ಕಾದಂಬರಿಯ ಭಾಷೆ ಕಾವ್ಯಾತ್ಮಕವಾದುದು. ಕುತೂಹಲ ಕಾಯ್ದುಕೊಂಡು ಸಾಗುವ ನಿರೂಪಣಾ ಶೈಲಿ ಓದುಗನ ಗಮನವನ್ನು ಅತ್ತಿತ್ತ ವಿಚಲಿಸದಂತೆ ಕೂರಿಸುತ್ತದೆ. ಅಧ್ಯಾಯಗಳ ಶೀರ್ಷಿಕೆಯೇ ಕವಿತೆಯ ಸಾಲುಗಳಂತೆ ಓದುಗನನ್ನು ಸೆಳೆಯುತ್ತವೆ: ‘ಜೀವಪ್ರೀತಿಯ ಗೂಡಿನೊಳಗೆ ಹೊಸ ಸೂರ್ಯನ ಕನಸು’, ನೆಲದಾಳಕ್ಕೆ ಬೇರು ಆಕಾಶಕ್ಕೆ ಗರಿಗಳು’, ‘ಕಾಡು ಬೆಕ್ಕಿನ ಉಪದ್ರವೂ ಪಾರಿವಾಳದ ಪ್ರತಿರೋಧವೂ’, ‘ಮೋಹದ ಮಾಯೆ ಪಾರಿಜಾತ ಪ್ರೀತಿ’, ‘ಜಿನ್ ಮೊರೆತ ಹೊಸಗಾಳಿಯ ತುಡಿತ’, ‘ತಮಂಧದಂತರಾಳದಲ್ಲಿ ಬೆಳಕಿನ ಹಣತೆ’, ‘ಮುಂಗಾರು ಮಳೆಗೆ ಗರಿಗೆದರಿ ಕುಣಿದ ನವಿಲು’, ‘ಚಂದ್ರ ದರ್ಶನಕೆ ಕಪ್ಪು ಮೋಡಗಳ ಆತಂಕ’, ’ಕತ್ತಲು ಗೂಡಿನಿಂದ ಬೆಳಕು ಹುಡುಕುತ್ತ..’ ಹೀಗೆ. ಪ್ರೀತಿ, ಕನಸು, ಅನ್ಯಾಯದ ವಿರುದ್ಧ ಪ್ರತಿಭಟನೆ, ಕತ್ತಲೆಯ ಎದುರು ಬೆಳಕಿನ ಭರವಸೆ ಹೀಗೆ ಈ ಶೀರ್ಷಿಕೆಗಳೇ ಕಾದಂಬರಿಯ ಹಂಬಲವನ್ನು ಮನದಟ್ಟು ಮಾಡುತ್ತವೆ.

ಇಲ್ಲಿಯ ಪಾತ್ರಗಳು ಕಪ್ಪು ಬಿಳುಪಿನದ್ದಲ್ಲ. ಜೀವಪರವಾದ ರೆಹಮಾನ್, ಸೈರಾ, ತಾಹಿರಾ, ಪೇಶ್ ಇಮಾಮರು, ಶಬ್ಬೀರ, ತಸ್ಸೀಮಾ, ರಫೀಕ್, ನೌಷಾದ್, ಮೋಹನ್, ಬಸವಗಂಗ ಸ್ವಾಮಿಗಳಂತೆ ಜೀವವಿರೋಧಿಯಾದ ಮೋದಿನ, ದೌಲಾ, ಲಾಲ್ಯಾ, ಮಸ್ತಾನ, ಸಾಧಿಕನಂತಹವು. ಹೀಗೆ ಎರಡೂ ಮನಸ್ಥಿತಿಯ ಪಾತ್ರಗಳೂ ಇಲ್ಲಿವೆ. ಈ ತದ್ವಿರುದ್ಧ ವ್ಯಕ್ತಿತ್ವಗಳಲ್ಲಿ ಕೆಲವು ಶಾಶ್ವತವಾಗಿಯೇ ಈ ಗುಣಗಳನ್ನು ಹೊಂದಿರುವವು. ಆದರೂ ವಿರಳ ಸಂದರ್ಭಗಳಲ್ಲಿ ಅದರಾಚೆಗೆ ಹೊರಳುವವು. ಬದುಕಿನ ಕಟುವಾದ ಏರಿಳಿತಗಳಲ್ಲಿ ಮನುಷ್ಯರು ಖಳರಾಗುವ ಹೆಜ್ಜೆ ಗುರುತುಗಳನ್ನು ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ. ಖಳನೆನಿಸುವ ಜಿಲಾನಿ, ಇಮಾಮರಂತಹ ಪಾತ್ರಗಳು ಆದ್ರ್ರವಾಗಿ ಮಿಡಿಯುವ ಬದುಕಿನ ವಿಸ್ಮಯಗಳನ್ನು ಅಚ್ಚರಿಯಿಂದ ದಾಖಲಿಸುತ್ತದೆ. ಜಮಾಲನಂತಹ ಕೆಲವು ಪಾತ್ರಗಳು ಕ್ರೂರಿಯಾಗಿ ಕಂಡರೂ ಅವರು ಹಾಗಾಗುವಲ್ಲಿ ಅವರ ಬದುಕಿನ ದುರಂತವಿರುವುದನ್ನು ಕಾಣಿಸುತ್ತದೆ.

ಅಧಿಕಾರ, ಹಣದ ದುರಾಶೆಗಳು ಒಟ್ಟಾಗಿ ಬದುಕುವ ಸಮುದಾಯಗಳ ಜನರ ನಡುವೆ ಧರ್ಮ, ಜಾತಿಗಳ ನೆಲೆಯಲ್ಲಿ ಮನಸ್ಸುಗಳನ್ನು ಒಡೆದು ಹಿಂಸಾಚಾರಕ್ಕೆ ಕಾರಣವಾಗುವುದನ್ನು ನೈಜವೆನಿಸುವ ಘಟನಾವಳಿಗಳ ಮೂಲಕ ಕಾದಂಬರಿ ಕಟ್ಟಿಕೊಡುತ್ತವೆ. ಒಂದು ಕಡೆ ಮೋದಿನ ಇದ್ದರೆ ಇನ್ನೊಂದು ಕಡೆ ಕಲ್ಯಾಣಪ್ಪ ಇದ್ದಾನೆ. ಈ ಅಧಿಕಾರದಾಹಿಗಳು, ದುರಾಶೆಯ ಜನರು ಎಲ್ಲ ಸಮುದಾಯಗಳಲ್ಲಿ ಇರುವವರು. ಅವರಿಗೆ ಹಿಂದೂ, ಮುಸ್ಲಿಂ ಎನ್ನುವ ಗುರುತುಗಳಿವೆ. ಈ ಗುರುತುಗಳನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿ ಸಮುದಾಯದ ಜನರನ್ನು ಬಲಿಕೊಡುತ್ತಾರೆ. ಇದಕ್ಕೆ ಪ್ರತಿಯಾಗಿ ರೆಹಮಾನ್ ಮತ್ತು ಸಂಗನ ಬಸವಸ್ವಾಮಿಗಳಂತಹ ಜಾತಿ-ಧರ್ಮಗಳಾಚೆ ಜನರ ಏಳಿಗೆ ಮತ್ತು ನೆಮ್ಮದಿ ಬಯಸುವ ಮುಂದಾಳುಗಳು ಭರವಸೆಯಾಗುತ್ತಾರೆ. ಆದರೆ ಮೋದಿನ, ಕಲ್ಯಾಣಪ್ಪನಂತವರ ಅರ್ಭಟಗಳೇ ರಾಜಕೀಯ ಶಕ್ತಿಯನ್ನು ಪಡೆಯುತ್ತ ನಾಡನ್ನು ದುರಂತದತ್ತ ತಳ್ಳುತ್ತಿರುವುದು ಲೇಖಕನನ್ನು ದಿಗ್ಭ್ರಮೆಗೊಳಿಸುವ ಸೂಚನೆಗಳು ಕಾದಂಬರಿಯಲ್ಲಿ ಸಿಗುತ್ತವೆ.

ಎಲ್ಲಾ ಜಾತಿ ಧರ್ಮಗಳಲ್ಲಿಯೂ ಮಹಿಳೆ ಶೋಷಿತಳು. ಮುಸ್ಲಿಂ ಧರ್ಮದಲ್ಲಿಯೂ ಇದು ಎದ್ದು ಕಾಣುತ್ತದೆ. ಈ ಬಗ್ಗೆ ಕಾದಂಬರಿ ಮಹಿಳೆಯರನ್ನು ಘನತೆಯಿಂದ ಕಾಣುತ್ತದೆ. ಖತೀಜಾಬೀಬಿ, ತಾಹಿರಾ, ಸೈರಾರಂಥ ಮಹಿಳೆಯರನ್ನು ಕಾದಂಬರಿ ಉತ್ಸಾಹದಲ್ಲಿ ಚಿತ್ರಿಸುತ್ತದೆ. ಸಾಂಪ್ರದಾಯಿಕ ಬದುಕಿನೊಳಗಿನಿಂದಲೇ ವ್ಯಕ್ತವಾಗುವ ಈ ಮಹಿಳೆಯರ ದಿಟ್ಟತನಗಳನ್ನು ಅವರ ಬದುಕಿನ ಕಥನಗಳ ಮೂಲಕವೇ ಓದುಗನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸುತ್ತದೆ.

ಇದನ್ನು ಓದುವ ಈಗಿನ ತಲೆಮಾರು ಇದನ್ನೊಂದು ಮುಸ್ಲಿಂ ಬದುಕನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಕಾದಂಬರಿ ಎಂಬ ತೀರ್ಮಾನಕ್ಕೆ ಬರಬಹುದಾದ ಅಪಾಯವಿದೆ. ಯಾಕೆಂದರೆ ಮೋಹನ, ಸಂಗನಬಸವನ ಸ್ವಾಮಿಗಳು, ಕಲ್ಯಾಣಪ್ಪನಂತಹ ನಾಲ್ಕೈದು ಪಾತ್ರಗಳು ಮಾತ್ರ ಮುಸ್ಲೀಮೇತರರದ್ದಾಗಿವೆ. ಆದರೆ ಇದು ಮುಸ್ಲಿಂ ಬದುಕಿನ ಕಷ್ಟ ಸುಖಗಳನ್ನು ಚಿತ್ರಿಸುವ ಕಾದಂಬರಿಯಲ್ಲ. ಇಲ್ಲಿನ ಪಾತ್ರಗಳ ಹೆಸರು ಬದಲಿಸಿದರೆ ಅದು ಹಿಂದೂ, ಕ್ರಿಶ್ಚಿಯನ್ ಅಥವಾ ಜಗತ್ತಿನ ಯಾವುದೇ ಸಮಾಜದ ಬದುಕೇ ಆಗಿರುತ್ತವೆ.

ಜನ್ನತ್ ಮೊಹಲ್ಲಾವನ್ನು ನಮ್ಮೆದುರಿಟ್ಟು ದಿಢೀರನೇ ಕಣ್ಮರೆಯಾದ ಅಬ್ಬಾಸ್ ಮೇಲಿನಮನಿಯವರು ರಹಮಾನನ ಸಮುದಾಯಪ್ರಜ್ಞೆ, ಇಮಾಮರ ಸ್ವಚ್ಚ ಧಾರ್ಮಿಕಮನಸ್ಸು, ಶಬ್ಬೀರನ ಜೀವನೋತ್ಸಾಹ, ಜಿಲಾನಿಯು ತನ್ನನ್ನು ಮೀರಿ ಕಾಣುವ ದಾರ್ಶನಿಕ ರೂಪದಲ್ಲಿ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ.

  • ಡಾ.ಸರ್ಜಾಶಂಕರ್ ಹರಳಿಮಠ

ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...