Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ.

- Advertisement -
- Advertisement -

‘ಜನ್ನತ್ ಮೊಹಲ್ಲಾ’ ಮತ್ತೆ ಮತ್ತೆ ಓದಿಸಿಕೊಳ್ಳುವ ಅಬ್ಬಾಸ್ ಮೇಲಿನಮನಿ ಅವರ ಮೊದಲ ಕಾದಂಬರಿ. ದ್ವೇಷ-ಪ್ರೀತಿ, ಹಿಂಸೆ-ಅಹಿಂಸೆ, ಸಿಟ್ಟು-ತಾಳ್ಮೆ, ನಿರಾಶೆ-ಭರವಸೆ ಇವುಗಳ ಮುಖಾಮುಖಿಯಲ್ಲಿ ಪ್ರೀತಿ ಅರಳಿಸುವ, ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನವಾಗಿ ‘ಜನ್ನತ್ ಮೊಹಲ್ಲಾ’ ಮೂಡಿಬಂದಿದೆ.

‘ಜನ್ನತ್’ ಎಂದರೆ ಸ್ವರ್ಗ. ಮೊಹಲ್ಲಾದ ಬದುಕನ್ನು ಸ್ವರ್ಗವಾಗಿಸುವ ಕನಸುಗಳ ಚಿತ್ತಾರವೇ ಈ ಕಾದಂಬರಿ. ಕನಸುಗಳೆಂದರೆ ಅವಾಸ್ತವಿಕ ಭ್ರಮೆಗಳೂ ಆಗಬಹುದು. ಆದರೆ ಇಲ್ಲಿನ ಕನಸುಗಳಿಗೆ ನೆಲದ ಆಳದೊಳಗೆ ಇಳಿದಿರುವ ಬೇರುಗಳಿವೆ. ನೆಲದ ಮೇಲಣ ಕಡುವಾಸ್ತವಗಳ ದಟ್ಟ ಅರಿವಿದೆ. ಕನಸುಗಳನ್ನು ಛಿದ್ರಗೊಳಿಸುವ ಪ್ರಯತ್ನಗಳ ಎಚ್ಚರಿವಿದೆ. ಕನಸು ಕಾಣುವ ಹಂಬಲಕ್ಕೆ ಇವುಗಳನ್ನು ನಿವಾರಿಸಿಕೊಳ್ಳುವ ಮನುಷ್ಯಪ್ರೀತಿ, ವಿವೇಕ, ಜಾಣ್ಮೆಗಳಿವೆ.

ಕಾದಂಬರಿಯ ಭಾಷೆ ಕಾವ್ಯಾತ್ಮಕವಾದುದು. ಕುತೂಹಲ ಕಾಯ್ದುಕೊಂಡು ಸಾಗುವ ನಿರೂಪಣಾ ಶೈಲಿ ಓದುಗನ ಗಮನವನ್ನು ಅತ್ತಿತ್ತ ವಿಚಲಿಸದಂತೆ ಕೂರಿಸುತ್ತದೆ. ಅಧ್ಯಾಯಗಳ ಶೀರ್ಷಿಕೆಯೇ ಕವಿತೆಯ ಸಾಲುಗಳಂತೆ ಓದುಗನನ್ನು ಸೆಳೆಯುತ್ತವೆ: ‘ಜೀವಪ್ರೀತಿಯ ಗೂಡಿನೊಳಗೆ ಹೊಸ ಸೂರ್ಯನ ಕನಸು’, ನೆಲದಾಳಕ್ಕೆ ಬೇರು ಆಕಾಶಕ್ಕೆ ಗರಿಗಳು’, ‘ಕಾಡು ಬೆಕ್ಕಿನ ಉಪದ್ರವೂ ಪಾರಿವಾಳದ ಪ್ರತಿರೋಧವೂ’, ‘ಮೋಹದ ಮಾಯೆ ಪಾರಿಜಾತ ಪ್ರೀತಿ’, ‘ಜಿನ್ ಮೊರೆತ ಹೊಸಗಾಳಿಯ ತುಡಿತ’, ‘ತಮಂಧದಂತರಾಳದಲ್ಲಿ ಬೆಳಕಿನ ಹಣತೆ’, ‘ಮುಂಗಾರು ಮಳೆಗೆ ಗರಿಗೆದರಿ ಕುಣಿದ ನವಿಲು’, ‘ಚಂದ್ರ ದರ್ಶನಕೆ ಕಪ್ಪು ಮೋಡಗಳ ಆತಂಕ’, ’ಕತ್ತಲು ಗೂಡಿನಿಂದ ಬೆಳಕು ಹುಡುಕುತ್ತ..’ ಹೀಗೆ. ಪ್ರೀತಿ, ಕನಸು, ಅನ್ಯಾಯದ ವಿರುದ್ಧ ಪ್ರತಿಭಟನೆ, ಕತ್ತಲೆಯ ಎದುರು ಬೆಳಕಿನ ಭರವಸೆ ಹೀಗೆ ಈ ಶೀರ್ಷಿಕೆಗಳೇ ಕಾದಂಬರಿಯ ಹಂಬಲವನ್ನು ಮನದಟ್ಟು ಮಾಡುತ್ತವೆ.

ಇಲ್ಲಿಯ ಪಾತ್ರಗಳು ಕಪ್ಪು ಬಿಳುಪಿನದ್ದಲ್ಲ. ಜೀವಪರವಾದ ರೆಹಮಾನ್, ಸೈರಾ, ತಾಹಿರಾ, ಪೇಶ್ ಇಮಾಮರು, ಶಬ್ಬೀರ, ತಸ್ಸೀಮಾ, ರಫೀಕ್, ನೌಷಾದ್, ಮೋಹನ್, ಬಸವಗಂಗ ಸ್ವಾಮಿಗಳಂತೆ ಜೀವವಿರೋಧಿಯಾದ ಮೋದಿನ, ದೌಲಾ, ಲಾಲ್ಯಾ, ಮಸ್ತಾನ, ಸಾಧಿಕನಂತಹವು. ಹೀಗೆ ಎರಡೂ ಮನಸ್ಥಿತಿಯ ಪಾತ್ರಗಳೂ ಇಲ್ಲಿವೆ. ಈ ತದ್ವಿರುದ್ಧ ವ್ಯಕ್ತಿತ್ವಗಳಲ್ಲಿ ಕೆಲವು ಶಾಶ್ವತವಾಗಿಯೇ ಈ ಗುಣಗಳನ್ನು ಹೊಂದಿರುವವು. ಆದರೂ ವಿರಳ ಸಂದರ್ಭಗಳಲ್ಲಿ ಅದರಾಚೆಗೆ ಹೊರಳುವವು. ಬದುಕಿನ ಕಟುವಾದ ಏರಿಳಿತಗಳಲ್ಲಿ ಮನುಷ್ಯರು ಖಳರಾಗುವ ಹೆಜ್ಜೆ ಗುರುತುಗಳನ್ನು ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ. ಖಳನೆನಿಸುವ ಜಿಲಾನಿ, ಇಮಾಮರಂತಹ ಪಾತ್ರಗಳು ಆದ್ರ್ರವಾಗಿ ಮಿಡಿಯುವ ಬದುಕಿನ ವಿಸ್ಮಯಗಳನ್ನು ಅಚ್ಚರಿಯಿಂದ ದಾಖಲಿಸುತ್ತದೆ. ಜಮಾಲನಂತಹ ಕೆಲವು ಪಾತ್ರಗಳು ಕ್ರೂರಿಯಾಗಿ ಕಂಡರೂ ಅವರು ಹಾಗಾಗುವಲ್ಲಿ ಅವರ ಬದುಕಿನ ದುರಂತವಿರುವುದನ್ನು ಕಾಣಿಸುತ್ತದೆ.

ಅಧಿಕಾರ, ಹಣದ ದುರಾಶೆಗಳು ಒಟ್ಟಾಗಿ ಬದುಕುವ ಸಮುದಾಯಗಳ ಜನರ ನಡುವೆ ಧರ್ಮ, ಜಾತಿಗಳ ನೆಲೆಯಲ್ಲಿ ಮನಸ್ಸುಗಳನ್ನು ಒಡೆದು ಹಿಂಸಾಚಾರಕ್ಕೆ ಕಾರಣವಾಗುವುದನ್ನು ನೈಜವೆನಿಸುವ ಘಟನಾವಳಿಗಳ ಮೂಲಕ ಕಾದಂಬರಿ ಕಟ್ಟಿಕೊಡುತ್ತವೆ. ಒಂದು ಕಡೆ ಮೋದಿನ ಇದ್ದರೆ ಇನ್ನೊಂದು ಕಡೆ ಕಲ್ಯಾಣಪ್ಪ ಇದ್ದಾನೆ. ಈ ಅಧಿಕಾರದಾಹಿಗಳು, ದುರಾಶೆಯ ಜನರು ಎಲ್ಲ ಸಮುದಾಯಗಳಲ್ಲಿ ಇರುವವರು. ಅವರಿಗೆ ಹಿಂದೂ, ಮುಸ್ಲಿಂ ಎನ್ನುವ ಗುರುತುಗಳಿವೆ. ಈ ಗುರುತುಗಳನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿ ಸಮುದಾಯದ ಜನರನ್ನು ಬಲಿಕೊಡುತ್ತಾರೆ. ಇದಕ್ಕೆ ಪ್ರತಿಯಾಗಿ ರೆಹಮಾನ್ ಮತ್ತು ಸಂಗನ ಬಸವಸ್ವಾಮಿಗಳಂತಹ ಜಾತಿ-ಧರ್ಮಗಳಾಚೆ ಜನರ ಏಳಿಗೆ ಮತ್ತು ನೆಮ್ಮದಿ ಬಯಸುವ ಮುಂದಾಳುಗಳು ಭರವಸೆಯಾಗುತ್ತಾರೆ. ಆದರೆ ಮೋದಿನ, ಕಲ್ಯಾಣಪ್ಪನಂತವರ ಅರ್ಭಟಗಳೇ ರಾಜಕೀಯ ಶಕ್ತಿಯನ್ನು ಪಡೆಯುತ್ತ ನಾಡನ್ನು ದುರಂತದತ್ತ ತಳ್ಳುತ್ತಿರುವುದು ಲೇಖಕನನ್ನು ದಿಗ್ಭ್ರಮೆಗೊಳಿಸುವ ಸೂಚನೆಗಳು ಕಾದಂಬರಿಯಲ್ಲಿ ಸಿಗುತ್ತವೆ.

ಎಲ್ಲಾ ಜಾತಿ ಧರ್ಮಗಳಲ್ಲಿಯೂ ಮಹಿಳೆ ಶೋಷಿತಳು. ಮುಸ್ಲಿಂ ಧರ್ಮದಲ್ಲಿಯೂ ಇದು ಎದ್ದು ಕಾಣುತ್ತದೆ. ಈ ಬಗ್ಗೆ ಕಾದಂಬರಿ ಮಹಿಳೆಯರನ್ನು ಘನತೆಯಿಂದ ಕಾಣುತ್ತದೆ. ಖತೀಜಾಬೀಬಿ, ತಾಹಿರಾ, ಸೈರಾರಂಥ ಮಹಿಳೆಯರನ್ನು ಕಾದಂಬರಿ ಉತ್ಸಾಹದಲ್ಲಿ ಚಿತ್ರಿಸುತ್ತದೆ. ಸಾಂಪ್ರದಾಯಿಕ ಬದುಕಿನೊಳಗಿನಿಂದಲೇ ವ್ಯಕ್ತವಾಗುವ ಈ ಮಹಿಳೆಯರ ದಿಟ್ಟತನಗಳನ್ನು ಅವರ ಬದುಕಿನ ಕಥನಗಳ ಮೂಲಕವೇ ಓದುಗನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸುತ್ತದೆ.

ಇದನ್ನು ಓದುವ ಈಗಿನ ತಲೆಮಾರು ಇದನ್ನೊಂದು ಮುಸ್ಲಿಂ ಬದುಕನ್ನು ಹೊರಜಗತ್ತಿಗೆ ಅನಾವರಣಗೊಳಿಸುವ ಕಾದಂಬರಿ ಎಂಬ ತೀರ್ಮಾನಕ್ಕೆ ಬರಬಹುದಾದ ಅಪಾಯವಿದೆ. ಯಾಕೆಂದರೆ ಮೋಹನ, ಸಂಗನಬಸವನ ಸ್ವಾಮಿಗಳು, ಕಲ್ಯಾಣಪ್ಪನಂತಹ ನಾಲ್ಕೈದು ಪಾತ್ರಗಳು ಮಾತ್ರ ಮುಸ್ಲೀಮೇತರರದ್ದಾಗಿವೆ. ಆದರೆ ಇದು ಮುಸ್ಲಿಂ ಬದುಕಿನ ಕಷ್ಟ ಸುಖಗಳನ್ನು ಚಿತ್ರಿಸುವ ಕಾದಂಬರಿಯಲ್ಲ. ಇಲ್ಲಿನ ಪಾತ್ರಗಳ ಹೆಸರು ಬದಲಿಸಿದರೆ ಅದು ಹಿಂದೂ, ಕ್ರಿಶ್ಚಿಯನ್ ಅಥವಾ ಜಗತ್ತಿನ ಯಾವುದೇ ಸಮಾಜದ ಬದುಕೇ ಆಗಿರುತ್ತವೆ.

ಜನ್ನತ್ ಮೊಹಲ್ಲಾವನ್ನು ನಮ್ಮೆದುರಿಟ್ಟು ದಿಢೀರನೇ ಕಣ್ಮರೆಯಾದ ಅಬ್ಬಾಸ್ ಮೇಲಿನಮನಿಯವರು ರಹಮಾನನ ಸಮುದಾಯಪ್ರಜ್ಞೆ, ಇಮಾಮರ ಸ್ವಚ್ಚ ಧಾರ್ಮಿಕಮನಸ್ಸು, ಶಬ್ಬೀರನ ಜೀವನೋತ್ಸಾಹ, ಜಿಲಾನಿಯು ತನ್ನನ್ನು ಮೀರಿ ಕಾಣುವ ದಾರ್ಶನಿಕ ರೂಪದಲ್ಲಿ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ.

  • ಡಾ.ಸರ್ಜಾಶಂಕರ್ ಹರಳಿಮಠ

ಇದನ್ನೂ ಓದಿ: ಪುಸ್ತಕ ವಿಮರ್ಶೆ: ಜಾತಿ ಬಂತು ಹೇಗೆ? ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...