Homeಕರ್ನಾಟಕಟಿಕೆಟ್ ಬೇಡವೆಂದ ಶ್ಯಾಮನೂರು, ಪಾಠ ಕಲಿಯಬೇಕಾದವರು ಯಾರು?

ಟಿಕೆಟ್ ಬೇಡವೆಂದ ಶ್ಯಾಮನೂರು, ಪಾಠ ಕಲಿಯಬೇಕಾದವರು ಯಾರು?

- Advertisement -
- Advertisement -

ಕೆಪಿಸಿಸಿ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಕಾಲಕಾಲಕ್ಕೆ ಬದಲಾಗುತ್ತಿದ್ದರೂ, ಬದಲಾಗದ ಒಂದು ಹುದ್ದೆ ಇತ್ತು. ಅದು ರಾಜ್ಯ ಖಜಾಂಚಿಯದ್ದು. ದಶಕಗಳ ಕಾಲ ಈ ಹುದ್ದೆಯಲ್ಲಿ ಕೂತಿದ್ದು ಶಾಮನೂರು ಶಿವಶಂಕರಪ್ಪ. ಬಹುಶಃ ಆ ಕಾಲಕ್ಕೆ ಅವರೇ ದುಡ್ಡಿದ್ದ ಧಣಿಯಿದ್ದಿರಬಹುದು. ಇವರು ಕಾಂಗ್ರೆಸ್ಸಿಗೆ ಅಂತಹ ದೊಡ್ಡ ಕೊಡುಗೆ ಏನು ಕೊಟ್ಟರು ಯಾರಿಗೂ ಗೊತ್ತಿಲ್ಲ. ಆದರೆ, ಶಾಮನೂರು ಮಾತ್ರ ದೊಡ್ಡದಾಗುತ್ತಾ ಹೋದರು. ಎರಡೆರಡು ಮೆಡಿಕಲ್ ಕಾಲೇಜುಗಳ ಒಡೆಯರಾದರು. ಒಂದೇ ಮೆಡಿಕಲ್ ಕಾಲೇಜಿನಲ್ಲೂ ಸರ್ಕಾರೀ ಕಾಲೇಜಿಗಿಂತ ಹೆಚ್ಚು ಸೀಟುಗಳನ್ನು ಹೊಂದಿದ್ದರು.

1984ರಿಂದ ಚನ್ನಯ್ಯ ಒಡೆಯರ್  ರಂತಹ ಸಜ್ಜನ ರಾಜಕಾರಣಿ ಮೂರು ಸಾರಿ ಲೋಕಸಭೆ ಸದಸ್ಯರಾಗಿ ಕಾಂಗ್ರೆಸ್ಸಿನಿಂದಲೇ ಗೆದ್ದು ಬಂದಿದ್ದರು. ಯಾವಾಗ ಶಾಮನೂರು ಫ್ಯಾಮಿಲಿಯ ಹಿಡಿತಕ್ಕೆ ದಾವಣಗೆರೆ ಜಿಲ್ಲೆ ಸಂಪೂರ್ಣವಾಗಿ ಹೋಯಿತೋ ಅಲ್ಲಿಂದಾಚೆಗೆ ಒಮ್ಮೆ ಮಾತ್ರ (ಒಂದೇ ವರ್ಷ ಇದ್ದ 12ನೇ ಲೋಕಸಭೆಗೆ) ಶಿವಶಂಕರಪ್ಪನವರು ಆಯ್ಕೆಯಾಗಿದ್ದು ಬಿಟ್ಟರೆ ಉದ್ದಕ್ಕೂ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ.

ಅವರ ಕಣ್ಣೆದುರಿಗೇ ದಾವಣಗೆರೆಯಲ್ಲಿ ಕಾಂಗ್ರೆಸ್ ಕುಸಿಯುತ್ತಾ ಹೋಯಿತು. ಶಾಮನೂರರಿಗೆ ಕಿಂಚಿತ್ತೂ ಬೇಸರವಾಗಲಿಲ್ಲ. ಏಕೆಂದರೆ ಆ ಜಾಗದಲ್ಲಿ ಬೆಳೆದ ಬಿಜೆಪಿಯ ಜಿಲ್ಲಾ ನೇತಾರರು ಇವರ ಬೀಗರೇ ಆಗಿದ್ದರು. ಅವರ ಬೀಗರೂ ಇವರಂತೆಯೇ ಫ್ಯೂಡಲ್ ನಡವಳಿಕೆಯ, ಜಾತೀವಾದಿಗಳಾಗಿದ್ದರು ಬಿಟ್ಟರೆ ಮುಸ್ಲಿಂ ದ್ವೇಷ ತುಂಬಿಕೊಂಡ ಕೋಮುವಾದಿಗಳಾಗಿರಲಿಲ್ಲ. ಆದರೆ, ಇದೇ ಫ್ಯೂಡಲ್ ನಡವಳಿಕೆ, ದೊರೆಗಳಂತಹ ಬದುಕು ಮತ್ತು ಧೋರಣೆಯು ಸಮಾಜದಲ್ಲಿ ಒಳಿತನ್ನೇನೂ ಹುಟ್ಟಿಹಾಕುವುದಿಲ್ಲವಲ್ಲಾ? ಅಂತಹ ಒಳಿತು ಹುಟ್ಟಿಹಾಕಬಹುದಾದ ಕಮ್ಯುನಿಸ್ಟ್ ಚಳವಳಿಯು ಅರ್ಧ ತನ್ನದೇ ತಪ್ಪಿನಿಂದ, ಇನ್ನರ್ಧ ದಾವಣಗೆರೆ ಧಣಿಗಳ ಹುನ್ನಾರದಿಂದ ಕುಸಿದು ಹೋಗಿತ್ತು.

ಫ್ಯೂಡಲ್ ಜಾತಿವಾದವು ಮಧ್ಯ ಕರ್ನಾಟಕದಲ್ಲಿ ಕೋಮುವಾದಕ್ಕೆ ನೀರೆರೆದು ಪೋಷಿಸಿತು. ಅದು ತಪ್ಪೆಂದಾಗಲೀ, ಅದನ್ನು ತಡೆಗಟ್ಟಬೇಕೆಂದಾಗಲೀ ‘ಧಣಿ’ಗಳಿಗೆ ಎಂದೂ ಅನಿಸಲಿಲ್ಲ. ಬೀಗರಿಬ್ಬರೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಲೇ ಹೋದರು. ಇದಕ್ಕೆ ಪರ್ಯಾಯವಾಗಿ ಬೇರೆ ನಾಯಕತ್ವ ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡಲಿಲ್ಲ. ದಾವಣಗೆರೆ ನಗರದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಶಿವಶಂಕರಪ್ಪನವರಿಗೆ ಟಿಕೆಟ್ ಕೊಟ್ಟು, ಇನ್ನೊಂದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಸೈಫುಲ್ಲಾ ಅವರಿಗೆ ಬಿ.ಫಾರಂ ನೀಡಿದಾಗ, ಅದನ್ನು ಕಸಿದು ನಾಮಿನೇಷನ್ ಹಾಕದಂತೆ ಮಾಡಿದ ಕುಟುಂಬ ಇದು. ಆಗ ಇವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಬದಲು, ಅವರ ಪರವಾಗಿಯೇ ಕಾಂಗ್ರೆಸ್ ಪಕ್ಷವೂ ನಿಂತಿತು.

ಕರಾವಳಿಯಲ್ಲಿ ಬೆಳೆದ ಕೋಮುವಾದದ ಪ್ರಭಾವವು, ಮಲೆನಾಡಿನಿಂದ ಈಗ ಮಧ್ಯಕರ್ನಾಟಕಕ್ಕೆ ಹರಡಿದೆ. ಬಸವಣ್ಣನ ತತ್ವ ಪಾಲಿಸುತ್ತೇವೆಂದು ಹೇಳುವ ಸಮುದಾಯದ ಅಖಿಲ ಭಾರತ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶಾಮನೂರರಿಗೆ ಕೋಮುವಾದ ಮತ್ತು ಬಸವ ತತ್ವದ ನಡುವಿನ ವೈರುಧ್ಯ ಅರ್ಥವಾಗಲು ಸಾಧ್ಯವೇ ಇರಲಿಲ್ಲ. ಬದಲಿಗೆ ಲಿಂಗಾಯಿತ ಚಳವಳಿ ಆರಂಭವಾದಾಗ ಅದರ ವಿರುದ್ಧ ಮಾತಾಡಿದ ವೀರಶೈವ ಮಹಾಸಭಾದ ಅಧ್ಯಕ್ಷರು ಅವರೇ ಆಗಿದ್ದರು. ಈ ರೀತಿಯ ಮನೋಭಾವ ಇರುವವರು ಬಿಜೆಪಿಗೆ ವಿರುದ್ಧವಾದ ಒಂದು ವೈಚಾರಿಕ ನೆಲೆಯನ್ನು ಕಟ್ಟುವುದು ಸಾಧ್ಯವೇ ಇಲ್ಲ.

ಯಾವ ಕೊಡುಗೆ ಇಲ್ಲದಿದ್ದರೂ ಹಳೆಯ ಫ್ಯೂಡಲ್ ಕುಟುಂಬಗಳಿಗೆ ಮಣೆ ಹಾಕುತ್ತಾ ಬಂದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಶಾಮನೂರು ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ. ಕಳೆದ ಸಾರಿ, ಮೋದಿ ಅಲೆಯ ಹೊರತಾಗಿಯೂ ಕೇವಲ 17,000 ಮತಗಳ ಅಂತರದಲ್ಲಿ ಮಗ ಶಾಮನೂರು ಸೋತಿದ್ದರು. ವಿಧಾನಸಭಾ ಚುನಾವಣೆಯಲ್ಲೂ ಸೋತು ಕುಳಿತಿರುವ ಮಲ್ಲಿಕಾರ್ಜುನ್ ತಾನು ಸ್ಪರ್ಧಿಸುವ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುತ್ತಿದ್ದರು. ಅವರಿಗಿಂತ ತಂದೆ ಶಾಮನೂರರಿಗೆ ಕೊಟ್ಟರೆ ಗೆಲುವಿನ ಸಾಧ್ಯತೆ ಹೆಚ್ಚೆಂದು ಬಗೆದ ನಾಯಕರು ಅವರ ಹೆಸರು ಘೋಷಣೆ ಮಾಡಿದರು. ಇದೀಗ ಶಿವಶಂಕರಪ್ಪನವರು ಕುಟುಂಬದಲ್ಲಿ ಯಾರೂ ಸ್ಪರ್ಧಿಸಲ್ಲ. ತಾನು ಸೂಚಿಸುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಟಿಕೆಟ್ ಕೊಡಿ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆ.ಎಚ್.ಪಟೇಲರ ಸಂಬಂಧಿ, ರೈತ ಹೋರಾಟಗಾರ ತೇಜಸ್ವಿ ಪಟೇಲ್‍ರಿಗೆ ಟಿಕೆಟ್ ಕೊಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಬೇರೆ ಯಾರಿಗೇ ಆದರೂ, ಮುತುವರ್ಜಿ ವಹಿಸಿ ಪ್ರಚಾರ ಮಾಡಲು ಶಾಮನೂರು ಫ್ಯಾಮಿಲಿ ಮುಂದಾಗುವುದು ಅಸಾಧ್ಯ.

ಶಾಮನೂರರಂತೆ ಫ್ಯೂಡಲ್ ಕುಟುಂಬದಿಂದ ಬಂದಿರದಿದ್ದರೂ, ಬಹಳ ಉಡಾಫೆಯಿಂದ ವರ್ತಿಸುತ್ತಿದ್ದ ಅಂಬರೀಷ್‍ರ ವಿಚಾರದಲ್ಲೂ ಕಾಂಗ್ರೆಸ್ ಪೆಟ್ಟು ತಿಂದಿತು. 2013ರ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದ ಅಂಬರೀಷ್ ಜನರ ಮನ್ನಣೆ ಕಳೆದುಕೊಂಡಿದ್ದರು. ಅವರು ಮತ್ತೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿಗೂ ಗೊತ್ತಿತ್ತು; ಅಂಬರೀಷ್‍ಗೂ ಗೊತ್ತಿತ್ತು. ಅವರು ಟಿಕೆಟ್ ಬೇಕು ಎಂದು ಅರ್ಜಿಯೂ ಹಾಕಲಿಲ್ಲ; ಕೇಳಲೂ ಇಲ್ಲ. ಆದರೆ, ಅವರ ಮನೆ ಬಾಗಿಲಿಗೇ ಬಿ.ಫಾರಂ ತೆಗೆದುಕೊಂಡು ಹೋಗಿ ಕೊಡಲಾಯಿತು. ಅದನ್ನು ಅಂಬರೀಷ್ ತಿರಸ್ಕರಿಸಿದರು.

ವ್ಯಕ್ತಿಗಳಿಗಿಂತ ಪಕ್ಷ ಮುಖ್ಯ ಎನ್ನುವುದು ಕಾಂಗ್ರೆಸ್ ಪಕ್ಷದಲ್ಲೇ ಇಲ್ಲ. ಅದರ ಅತ್ಯಂತ ತುದಿಯಲ್ಲಿರುವ ಕುಟುಂಬವು ಪಕ್ಷಕ್ಕಿಂತ ಮುಖ್ಯ ಎಂದು ಹಲವು ಸಾರಿ ಸಾಬೀತಾಗಿದೆ. ರಾಹುಲ್‍ಗಾಂಧಿ ರಾಜ್ಯ ಪದಾಧಿಕಾರಿಗಳು ಮತ್ತು ಇತರ ಹಿರಿಯ ನಾಯಕರ ಅಭಿಪ್ರಾಯಗಳಿಗೆ ಹೆಚ್ಚಿನ ಗೌರವ ಕೊಡುತ್ತಾರೆಂದೂ, ಅದೇ ಕಾರಣಕ್ಕೆ ತನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿ ದೆಹಲಿ ಮತ್ತು ಪ.ಬಂಗಾಳಗಳಲ್ಲಿ ಮೈತ್ರಿಯಾಗಲಿಲ್ಲವೆಂದೂ ಹೇಳಬಹುದು. ಆದರೆ, ಇದು ಎಷ್ಟು ದಿನ ಉಳಿಯುತ್ತದೆ ಕಾದು ನೋಡಬೇಕು.

ಸಂಘಟನಾ ಶಕ್ತಿಯನ್ನು ಕಟ್ಟಿಕೊಳ್ಳದ, ತನ್ನದೇ ಆದ ವೈಚಾರಿಕ ನೆಲೆಯನ್ನು ಪಕ್ಷದಲ್ಲೂ, ಸಮಾಜದಲ್ಲೂ ತರದ ಪಕ್ಷವೊಂದು ಹೇಗೆ ತಾನೇ ದೀರ್ಘಕಾಲ ಉಳಿದುಕೊಂಡೀತು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...