Homeಕರ್ನಾಟಕಟಿಕೆಟ್ ಬೇಡವೆಂದ ಶ್ಯಾಮನೂರು, ಪಾಠ ಕಲಿಯಬೇಕಾದವರು ಯಾರು?

ಟಿಕೆಟ್ ಬೇಡವೆಂದ ಶ್ಯಾಮನೂರು, ಪಾಠ ಕಲಿಯಬೇಕಾದವರು ಯಾರು?

- Advertisement -
- Advertisement -

ಕೆಪಿಸಿಸಿ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಕಾಲಕಾಲಕ್ಕೆ ಬದಲಾಗುತ್ತಿದ್ದರೂ, ಬದಲಾಗದ ಒಂದು ಹುದ್ದೆ ಇತ್ತು. ಅದು ರಾಜ್ಯ ಖಜಾಂಚಿಯದ್ದು. ದಶಕಗಳ ಕಾಲ ಈ ಹುದ್ದೆಯಲ್ಲಿ ಕೂತಿದ್ದು ಶಾಮನೂರು ಶಿವಶಂಕರಪ್ಪ. ಬಹುಶಃ ಆ ಕಾಲಕ್ಕೆ ಅವರೇ ದುಡ್ಡಿದ್ದ ಧಣಿಯಿದ್ದಿರಬಹುದು. ಇವರು ಕಾಂಗ್ರೆಸ್ಸಿಗೆ ಅಂತಹ ದೊಡ್ಡ ಕೊಡುಗೆ ಏನು ಕೊಟ್ಟರು ಯಾರಿಗೂ ಗೊತ್ತಿಲ್ಲ. ಆದರೆ, ಶಾಮನೂರು ಮಾತ್ರ ದೊಡ್ಡದಾಗುತ್ತಾ ಹೋದರು. ಎರಡೆರಡು ಮೆಡಿಕಲ್ ಕಾಲೇಜುಗಳ ಒಡೆಯರಾದರು. ಒಂದೇ ಮೆಡಿಕಲ್ ಕಾಲೇಜಿನಲ್ಲೂ ಸರ್ಕಾರೀ ಕಾಲೇಜಿಗಿಂತ ಹೆಚ್ಚು ಸೀಟುಗಳನ್ನು ಹೊಂದಿದ್ದರು.

1984ರಿಂದ ಚನ್ನಯ್ಯ ಒಡೆಯರ್  ರಂತಹ ಸಜ್ಜನ ರಾಜಕಾರಣಿ ಮೂರು ಸಾರಿ ಲೋಕಸಭೆ ಸದಸ್ಯರಾಗಿ ಕಾಂಗ್ರೆಸ್ಸಿನಿಂದಲೇ ಗೆದ್ದು ಬಂದಿದ್ದರು. ಯಾವಾಗ ಶಾಮನೂರು ಫ್ಯಾಮಿಲಿಯ ಹಿಡಿತಕ್ಕೆ ದಾವಣಗೆರೆ ಜಿಲ್ಲೆ ಸಂಪೂರ್ಣವಾಗಿ ಹೋಯಿತೋ ಅಲ್ಲಿಂದಾಚೆಗೆ ಒಮ್ಮೆ ಮಾತ್ರ (ಒಂದೇ ವರ್ಷ ಇದ್ದ 12ನೇ ಲೋಕಸಭೆಗೆ) ಶಿವಶಂಕರಪ್ಪನವರು ಆಯ್ಕೆಯಾಗಿದ್ದು ಬಿಟ್ಟರೆ ಉದ್ದಕ್ಕೂ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ.

ಅವರ ಕಣ್ಣೆದುರಿಗೇ ದಾವಣಗೆರೆಯಲ್ಲಿ ಕಾಂಗ್ರೆಸ್ ಕುಸಿಯುತ್ತಾ ಹೋಯಿತು. ಶಾಮನೂರರಿಗೆ ಕಿಂಚಿತ್ತೂ ಬೇಸರವಾಗಲಿಲ್ಲ. ಏಕೆಂದರೆ ಆ ಜಾಗದಲ್ಲಿ ಬೆಳೆದ ಬಿಜೆಪಿಯ ಜಿಲ್ಲಾ ನೇತಾರರು ಇವರ ಬೀಗರೇ ಆಗಿದ್ದರು. ಅವರ ಬೀಗರೂ ಇವರಂತೆಯೇ ಫ್ಯೂಡಲ್ ನಡವಳಿಕೆಯ, ಜಾತೀವಾದಿಗಳಾಗಿದ್ದರು ಬಿಟ್ಟರೆ ಮುಸ್ಲಿಂ ದ್ವೇಷ ತುಂಬಿಕೊಂಡ ಕೋಮುವಾದಿಗಳಾಗಿರಲಿಲ್ಲ. ಆದರೆ, ಇದೇ ಫ್ಯೂಡಲ್ ನಡವಳಿಕೆ, ದೊರೆಗಳಂತಹ ಬದುಕು ಮತ್ತು ಧೋರಣೆಯು ಸಮಾಜದಲ್ಲಿ ಒಳಿತನ್ನೇನೂ ಹುಟ್ಟಿಹಾಕುವುದಿಲ್ಲವಲ್ಲಾ? ಅಂತಹ ಒಳಿತು ಹುಟ್ಟಿಹಾಕಬಹುದಾದ ಕಮ್ಯುನಿಸ್ಟ್ ಚಳವಳಿಯು ಅರ್ಧ ತನ್ನದೇ ತಪ್ಪಿನಿಂದ, ಇನ್ನರ್ಧ ದಾವಣಗೆರೆ ಧಣಿಗಳ ಹುನ್ನಾರದಿಂದ ಕುಸಿದು ಹೋಗಿತ್ತು.

ಫ್ಯೂಡಲ್ ಜಾತಿವಾದವು ಮಧ್ಯ ಕರ್ನಾಟಕದಲ್ಲಿ ಕೋಮುವಾದಕ್ಕೆ ನೀರೆರೆದು ಪೋಷಿಸಿತು. ಅದು ತಪ್ಪೆಂದಾಗಲೀ, ಅದನ್ನು ತಡೆಗಟ್ಟಬೇಕೆಂದಾಗಲೀ ‘ಧಣಿ’ಗಳಿಗೆ ಎಂದೂ ಅನಿಸಲಿಲ್ಲ. ಬೀಗರಿಬ್ಬರೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಲೇ ಹೋದರು. ಇದಕ್ಕೆ ಪರ್ಯಾಯವಾಗಿ ಬೇರೆ ನಾಯಕತ್ವ ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡಲಿಲ್ಲ. ದಾವಣಗೆರೆ ನಗರದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಶಿವಶಂಕರಪ್ಪನವರಿಗೆ ಟಿಕೆಟ್ ಕೊಟ್ಟು, ಇನ್ನೊಂದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಸೈಫುಲ್ಲಾ ಅವರಿಗೆ ಬಿ.ಫಾರಂ ನೀಡಿದಾಗ, ಅದನ್ನು ಕಸಿದು ನಾಮಿನೇಷನ್ ಹಾಕದಂತೆ ಮಾಡಿದ ಕುಟುಂಬ ಇದು. ಆಗ ಇವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಬದಲು, ಅವರ ಪರವಾಗಿಯೇ ಕಾಂಗ್ರೆಸ್ ಪಕ್ಷವೂ ನಿಂತಿತು.

ಕರಾವಳಿಯಲ್ಲಿ ಬೆಳೆದ ಕೋಮುವಾದದ ಪ್ರಭಾವವು, ಮಲೆನಾಡಿನಿಂದ ಈಗ ಮಧ್ಯಕರ್ನಾಟಕಕ್ಕೆ ಹರಡಿದೆ. ಬಸವಣ್ಣನ ತತ್ವ ಪಾಲಿಸುತ್ತೇವೆಂದು ಹೇಳುವ ಸಮುದಾಯದ ಅಖಿಲ ಭಾರತ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶಾಮನೂರರಿಗೆ ಕೋಮುವಾದ ಮತ್ತು ಬಸವ ತತ್ವದ ನಡುವಿನ ವೈರುಧ್ಯ ಅರ್ಥವಾಗಲು ಸಾಧ್ಯವೇ ಇರಲಿಲ್ಲ. ಬದಲಿಗೆ ಲಿಂಗಾಯಿತ ಚಳವಳಿ ಆರಂಭವಾದಾಗ ಅದರ ವಿರುದ್ಧ ಮಾತಾಡಿದ ವೀರಶೈವ ಮಹಾಸಭಾದ ಅಧ್ಯಕ್ಷರು ಅವರೇ ಆಗಿದ್ದರು. ಈ ರೀತಿಯ ಮನೋಭಾವ ಇರುವವರು ಬಿಜೆಪಿಗೆ ವಿರುದ್ಧವಾದ ಒಂದು ವೈಚಾರಿಕ ನೆಲೆಯನ್ನು ಕಟ್ಟುವುದು ಸಾಧ್ಯವೇ ಇಲ್ಲ.

ಯಾವ ಕೊಡುಗೆ ಇಲ್ಲದಿದ್ದರೂ ಹಳೆಯ ಫ್ಯೂಡಲ್ ಕುಟುಂಬಗಳಿಗೆ ಮಣೆ ಹಾಕುತ್ತಾ ಬಂದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಶಾಮನೂರು ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ. ಕಳೆದ ಸಾರಿ, ಮೋದಿ ಅಲೆಯ ಹೊರತಾಗಿಯೂ ಕೇವಲ 17,000 ಮತಗಳ ಅಂತರದಲ್ಲಿ ಮಗ ಶಾಮನೂರು ಸೋತಿದ್ದರು. ವಿಧಾನಸಭಾ ಚುನಾವಣೆಯಲ್ಲೂ ಸೋತು ಕುಳಿತಿರುವ ಮಲ್ಲಿಕಾರ್ಜುನ್ ತಾನು ಸ್ಪರ್ಧಿಸುವ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುತ್ತಿದ್ದರು. ಅವರಿಗಿಂತ ತಂದೆ ಶಾಮನೂರರಿಗೆ ಕೊಟ್ಟರೆ ಗೆಲುವಿನ ಸಾಧ್ಯತೆ ಹೆಚ್ಚೆಂದು ಬಗೆದ ನಾಯಕರು ಅವರ ಹೆಸರು ಘೋಷಣೆ ಮಾಡಿದರು. ಇದೀಗ ಶಿವಶಂಕರಪ್ಪನವರು ಕುಟುಂಬದಲ್ಲಿ ಯಾರೂ ಸ್ಪರ್ಧಿಸಲ್ಲ. ತಾನು ಸೂಚಿಸುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಟಿಕೆಟ್ ಕೊಡಿ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆ.ಎಚ್.ಪಟೇಲರ ಸಂಬಂಧಿ, ರೈತ ಹೋರಾಟಗಾರ ತೇಜಸ್ವಿ ಪಟೇಲ್‍ರಿಗೆ ಟಿಕೆಟ್ ಕೊಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಬೇರೆ ಯಾರಿಗೇ ಆದರೂ, ಮುತುವರ್ಜಿ ವಹಿಸಿ ಪ್ರಚಾರ ಮಾಡಲು ಶಾಮನೂರು ಫ್ಯಾಮಿಲಿ ಮುಂದಾಗುವುದು ಅಸಾಧ್ಯ.

ಶಾಮನೂರರಂತೆ ಫ್ಯೂಡಲ್ ಕುಟುಂಬದಿಂದ ಬಂದಿರದಿದ್ದರೂ, ಬಹಳ ಉಡಾಫೆಯಿಂದ ವರ್ತಿಸುತ್ತಿದ್ದ ಅಂಬರೀಷ್‍ರ ವಿಚಾರದಲ್ಲೂ ಕಾಂಗ್ರೆಸ್ ಪೆಟ್ಟು ತಿಂದಿತು. 2013ರ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದ ಅಂಬರೀಷ್ ಜನರ ಮನ್ನಣೆ ಕಳೆದುಕೊಂಡಿದ್ದರು. ಅವರು ಮತ್ತೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿಗೂ ಗೊತ್ತಿತ್ತು; ಅಂಬರೀಷ್‍ಗೂ ಗೊತ್ತಿತ್ತು. ಅವರು ಟಿಕೆಟ್ ಬೇಕು ಎಂದು ಅರ್ಜಿಯೂ ಹಾಕಲಿಲ್ಲ; ಕೇಳಲೂ ಇಲ್ಲ. ಆದರೆ, ಅವರ ಮನೆ ಬಾಗಿಲಿಗೇ ಬಿ.ಫಾರಂ ತೆಗೆದುಕೊಂಡು ಹೋಗಿ ಕೊಡಲಾಯಿತು. ಅದನ್ನು ಅಂಬರೀಷ್ ತಿರಸ್ಕರಿಸಿದರು.

ವ್ಯಕ್ತಿಗಳಿಗಿಂತ ಪಕ್ಷ ಮುಖ್ಯ ಎನ್ನುವುದು ಕಾಂಗ್ರೆಸ್ ಪಕ್ಷದಲ್ಲೇ ಇಲ್ಲ. ಅದರ ಅತ್ಯಂತ ತುದಿಯಲ್ಲಿರುವ ಕುಟುಂಬವು ಪಕ್ಷಕ್ಕಿಂತ ಮುಖ್ಯ ಎಂದು ಹಲವು ಸಾರಿ ಸಾಬೀತಾಗಿದೆ. ರಾಹುಲ್‍ಗಾಂಧಿ ರಾಜ್ಯ ಪದಾಧಿಕಾರಿಗಳು ಮತ್ತು ಇತರ ಹಿರಿಯ ನಾಯಕರ ಅಭಿಪ್ರಾಯಗಳಿಗೆ ಹೆಚ್ಚಿನ ಗೌರವ ಕೊಡುತ್ತಾರೆಂದೂ, ಅದೇ ಕಾರಣಕ್ಕೆ ತನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿ ದೆಹಲಿ ಮತ್ತು ಪ.ಬಂಗಾಳಗಳಲ್ಲಿ ಮೈತ್ರಿಯಾಗಲಿಲ್ಲವೆಂದೂ ಹೇಳಬಹುದು. ಆದರೆ, ಇದು ಎಷ್ಟು ದಿನ ಉಳಿಯುತ್ತದೆ ಕಾದು ನೋಡಬೇಕು.

ಸಂಘಟನಾ ಶಕ್ತಿಯನ್ನು ಕಟ್ಟಿಕೊಳ್ಳದ, ತನ್ನದೇ ಆದ ವೈಚಾರಿಕ ನೆಲೆಯನ್ನು ಪಕ್ಷದಲ್ಲೂ, ಸಮಾಜದಲ್ಲೂ ತರದ ಪಕ್ಷವೊಂದು ಹೇಗೆ ತಾನೇ ದೀರ್ಘಕಾಲ ಉಳಿದುಕೊಂಡೀತು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....