Homeಕರ್ನಾಟಕಟಿಕೆಟ್ ಬೇಡವೆಂದ ಶ್ಯಾಮನೂರು, ಪಾಠ ಕಲಿಯಬೇಕಾದವರು ಯಾರು?

ಟಿಕೆಟ್ ಬೇಡವೆಂದ ಶ್ಯಾಮನೂರು, ಪಾಠ ಕಲಿಯಬೇಕಾದವರು ಯಾರು?

- Advertisement -
- Advertisement -

ಕೆಪಿಸಿಸಿ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಕಾಲಕಾಲಕ್ಕೆ ಬದಲಾಗುತ್ತಿದ್ದರೂ, ಬದಲಾಗದ ಒಂದು ಹುದ್ದೆ ಇತ್ತು. ಅದು ರಾಜ್ಯ ಖಜಾಂಚಿಯದ್ದು. ದಶಕಗಳ ಕಾಲ ಈ ಹುದ್ದೆಯಲ್ಲಿ ಕೂತಿದ್ದು ಶಾಮನೂರು ಶಿವಶಂಕರಪ್ಪ. ಬಹುಶಃ ಆ ಕಾಲಕ್ಕೆ ಅವರೇ ದುಡ್ಡಿದ್ದ ಧಣಿಯಿದ್ದಿರಬಹುದು. ಇವರು ಕಾಂಗ್ರೆಸ್ಸಿಗೆ ಅಂತಹ ದೊಡ್ಡ ಕೊಡುಗೆ ಏನು ಕೊಟ್ಟರು ಯಾರಿಗೂ ಗೊತ್ತಿಲ್ಲ. ಆದರೆ, ಶಾಮನೂರು ಮಾತ್ರ ದೊಡ್ಡದಾಗುತ್ತಾ ಹೋದರು. ಎರಡೆರಡು ಮೆಡಿಕಲ್ ಕಾಲೇಜುಗಳ ಒಡೆಯರಾದರು. ಒಂದೇ ಮೆಡಿಕಲ್ ಕಾಲೇಜಿನಲ್ಲೂ ಸರ್ಕಾರೀ ಕಾಲೇಜಿಗಿಂತ ಹೆಚ್ಚು ಸೀಟುಗಳನ್ನು ಹೊಂದಿದ್ದರು.

1984ರಿಂದ ಚನ್ನಯ್ಯ ಒಡೆಯರ್  ರಂತಹ ಸಜ್ಜನ ರಾಜಕಾರಣಿ ಮೂರು ಸಾರಿ ಲೋಕಸಭೆ ಸದಸ್ಯರಾಗಿ ಕಾಂಗ್ರೆಸ್ಸಿನಿಂದಲೇ ಗೆದ್ದು ಬಂದಿದ್ದರು. ಯಾವಾಗ ಶಾಮನೂರು ಫ್ಯಾಮಿಲಿಯ ಹಿಡಿತಕ್ಕೆ ದಾವಣಗೆರೆ ಜಿಲ್ಲೆ ಸಂಪೂರ್ಣವಾಗಿ ಹೋಯಿತೋ ಅಲ್ಲಿಂದಾಚೆಗೆ ಒಮ್ಮೆ ಮಾತ್ರ (ಒಂದೇ ವರ್ಷ ಇದ್ದ 12ನೇ ಲೋಕಸಭೆಗೆ) ಶಿವಶಂಕರಪ್ಪನವರು ಆಯ್ಕೆಯಾಗಿದ್ದು ಬಿಟ್ಟರೆ ಉದ್ದಕ್ಕೂ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ.

ಅವರ ಕಣ್ಣೆದುರಿಗೇ ದಾವಣಗೆರೆಯಲ್ಲಿ ಕಾಂಗ್ರೆಸ್ ಕುಸಿಯುತ್ತಾ ಹೋಯಿತು. ಶಾಮನೂರರಿಗೆ ಕಿಂಚಿತ್ತೂ ಬೇಸರವಾಗಲಿಲ್ಲ. ಏಕೆಂದರೆ ಆ ಜಾಗದಲ್ಲಿ ಬೆಳೆದ ಬಿಜೆಪಿಯ ಜಿಲ್ಲಾ ನೇತಾರರು ಇವರ ಬೀಗರೇ ಆಗಿದ್ದರು. ಅವರ ಬೀಗರೂ ಇವರಂತೆಯೇ ಫ್ಯೂಡಲ್ ನಡವಳಿಕೆಯ, ಜಾತೀವಾದಿಗಳಾಗಿದ್ದರು ಬಿಟ್ಟರೆ ಮುಸ್ಲಿಂ ದ್ವೇಷ ತುಂಬಿಕೊಂಡ ಕೋಮುವಾದಿಗಳಾಗಿರಲಿಲ್ಲ. ಆದರೆ, ಇದೇ ಫ್ಯೂಡಲ್ ನಡವಳಿಕೆ, ದೊರೆಗಳಂತಹ ಬದುಕು ಮತ್ತು ಧೋರಣೆಯು ಸಮಾಜದಲ್ಲಿ ಒಳಿತನ್ನೇನೂ ಹುಟ್ಟಿಹಾಕುವುದಿಲ್ಲವಲ್ಲಾ? ಅಂತಹ ಒಳಿತು ಹುಟ್ಟಿಹಾಕಬಹುದಾದ ಕಮ್ಯುನಿಸ್ಟ್ ಚಳವಳಿಯು ಅರ್ಧ ತನ್ನದೇ ತಪ್ಪಿನಿಂದ, ಇನ್ನರ್ಧ ದಾವಣಗೆರೆ ಧಣಿಗಳ ಹುನ್ನಾರದಿಂದ ಕುಸಿದು ಹೋಗಿತ್ತು.

ಫ್ಯೂಡಲ್ ಜಾತಿವಾದವು ಮಧ್ಯ ಕರ್ನಾಟಕದಲ್ಲಿ ಕೋಮುವಾದಕ್ಕೆ ನೀರೆರೆದು ಪೋಷಿಸಿತು. ಅದು ತಪ್ಪೆಂದಾಗಲೀ, ಅದನ್ನು ತಡೆಗಟ್ಟಬೇಕೆಂದಾಗಲೀ ‘ಧಣಿ’ಗಳಿಗೆ ಎಂದೂ ಅನಿಸಲಿಲ್ಲ. ಬೀಗರಿಬ್ಬರೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಲೇ ಹೋದರು. ಇದಕ್ಕೆ ಪರ್ಯಾಯವಾಗಿ ಬೇರೆ ನಾಯಕತ್ವ ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಎಂದೂ ಮಾಡಲಿಲ್ಲ. ದಾವಣಗೆರೆ ನಗರದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಶಿವಶಂಕರಪ್ಪನವರಿಗೆ ಟಿಕೆಟ್ ಕೊಟ್ಟು, ಇನ್ನೊಂದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಸೈಫುಲ್ಲಾ ಅವರಿಗೆ ಬಿ.ಫಾರಂ ನೀಡಿದಾಗ, ಅದನ್ನು ಕಸಿದು ನಾಮಿನೇಷನ್ ಹಾಕದಂತೆ ಮಾಡಿದ ಕುಟುಂಬ ಇದು. ಆಗ ಇವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವ ಬದಲು, ಅವರ ಪರವಾಗಿಯೇ ಕಾಂಗ್ರೆಸ್ ಪಕ್ಷವೂ ನಿಂತಿತು.

ಕರಾವಳಿಯಲ್ಲಿ ಬೆಳೆದ ಕೋಮುವಾದದ ಪ್ರಭಾವವು, ಮಲೆನಾಡಿನಿಂದ ಈಗ ಮಧ್ಯಕರ್ನಾಟಕಕ್ಕೆ ಹರಡಿದೆ. ಬಸವಣ್ಣನ ತತ್ವ ಪಾಲಿಸುತ್ತೇವೆಂದು ಹೇಳುವ ಸಮುದಾಯದ ಅಖಿಲ ಭಾರತ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶಾಮನೂರರಿಗೆ ಕೋಮುವಾದ ಮತ್ತು ಬಸವ ತತ್ವದ ನಡುವಿನ ವೈರುಧ್ಯ ಅರ್ಥವಾಗಲು ಸಾಧ್ಯವೇ ಇರಲಿಲ್ಲ. ಬದಲಿಗೆ ಲಿಂಗಾಯಿತ ಚಳವಳಿ ಆರಂಭವಾದಾಗ ಅದರ ವಿರುದ್ಧ ಮಾತಾಡಿದ ವೀರಶೈವ ಮಹಾಸಭಾದ ಅಧ್ಯಕ್ಷರು ಅವರೇ ಆಗಿದ್ದರು. ಈ ರೀತಿಯ ಮನೋಭಾವ ಇರುವವರು ಬಿಜೆಪಿಗೆ ವಿರುದ್ಧವಾದ ಒಂದು ವೈಚಾರಿಕ ನೆಲೆಯನ್ನು ಕಟ್ಟುವುದು ಸಾಧ್ಯವೇ ಇಲ್ಲ.

ಯಾವ ಕೊಡುಗೆ ಇಲ್ಲದಿದ್ದರೂ ಹಳೆಯ ಫ್ಯೂಡಲ್ ಕುಟುಂಬಗಳಿಗೆ ಮಣೆ ಹಾಕುತ್ತಾ ಬಂದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಶಾಮನೂರು ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ. ಕಳೆದ ಸಾರಿ, ಮೋದಿ ಅಲೆಯ ಹೊರತಾಗಿಯೂ ಕೇವಲ 17,000 ಮತಗಳ ಅಂತರದಲ್ಲಿ ಮಗ ಶಾಮನೂರು ಸೋತಿದ್ದರು. ವಿಧಾನಸಭಾ ಚುನಾವಣೆಯಲ್ಲೂ ಸೋತು ಕುಳಿತಿರುವ ಮಲ್ಲಿಕಾರ್ಜುನ್ ತಾನು ಸ್ಪರ್ಧಿಸುವ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುತ್ತಿದ್ದರು. ಅವರಿಗಿಂತ ತಂದೆ ಶಾಮನೂರರಿಗೆ ಕೊಟ್ಟರೆ ಗೆಲುವಿನ ಸಾಧ್ಯತೆ ಹೆಚ್ಚೆಂದು ಬಗೆದ ನಾಯಕರು ಅವರ ಹೆಸರು ಘೋಷಣೆ ಮಾಡಿದರು. ಇದೀಗ ಶಿವಶಂಕರಪ್ಪನವರು ಕುಟುಂಬದಲ್ಲಿ ಯಾರೂ ಸ್ಪರ್ಧಿಸಲ್ಲ. ತಾನು ಸೂಚಿಸುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಟಿಕೆಟ್ ಕೊಡಿ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆ.ಎಚ್.ಪಟೇಲರ ಸಂಬಂಧಿ, ರೈತ ಹೋರಾಟಗಾರ ತೇಜಸ್ವಿ ಪಟೇಲ್‍ರಿಗೆ ಟಿಕೆಟ್ ಕೊಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಬೇರೆ ಯಾರಿಗೇ ಆದರೂ, ಮುತುವರ್ಜಿ ವಹಿಸಿ ಪ್ರಚಾರ ಮಾಡಲು ಶಾಮನೂರು ಫ್ಯಾಮಿಲಿ ಮುಂದಾಗುವುದು ಅಸಾಧ್ಯ.

ಶಾಮನೂರರಂತೆ ಫ್ಯೂಡಲ್ ಕುಟುಂಬದಿಂದ ಬಂದಿರದಿದ್ದರೂ, ಬಹಳ ಉಡಾಫೆಯಿಂದ ವರ್ತಿಸುತ್ತಿದ್ದ ಅಂಬರೀಷ್‍ರ ವಿಚಾರದಲ್ಲೂ ಕಾಂಗ್ರೆಸ್ ಪೆಟ್ಟು ತಿಂದಿತು. 2013ರ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದ ಅಂಬರೀಷ್ ಜನರ ಮನ್ನಣೆ ಕಳೆದುಕೊಂಡಿದ್ದರು. ಅವರು ಮತ್ತೆ ಗೆಲ್ಲುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿಗೂ ಗೊತ್ತಿತ್ತು; ಅಂಬರೀಷ್‍ಗೂ ಗೊತ್ತಿತ್ತು. ಅವರು ಟಿಕೆಟ್ ಬೇಕು ಎಂದು ಅರ್ಜಿಯೂ ಹಾಕಲಿಲ್ಲ; ಕೇಳಲೂ ಇಲ್ಲ. ಆದರೆ, ಅವರ ಮನೆ ಬಾಗಿಲಿಗೇ ಬಿ.ಫಾರಂ ತೆಗೆದುಕೊಂಡು ಹೋಗಿ ಕೊಡಲಾಯಿತು. ಅದನ್ನು ಅಂಬರೀಷ್ ತಿರಸ್ಕರಿಸಿದರು.

ವ್ಯಕ್ತಿಗಳಿಗಿಂತ ಪಕ್ಷ ಮುಖ್ಯ ಎನ್ನುವುದು ಕಾಂಗ್ರೆಸ್ ಪಕ್ಷದಲ್ಲೇ ಇಲ್ಲ. ಅದರ ಅತ್ಯಂತ ತುದಿಯಲ್ಲಿರುವ ಕುಟುಂಬವು ಪಕ್ಷಕ್ಕಿಂತ ಮುಖ್ಯ ಎಂದು ಹಲವು ಸಾರಿ ಸಾಬೀತಾಗಿದೆ. ರಾಹುಲ್‍ಗಾಂಧಿ ರಾಜ್ಯ ಪದಾಧಿಕಾರಿಗಳು ಮತ್ತು ಇತರ ಹಿರಿಯ ನಾಯಕರ ಅಭಿಪ್ರಾಯಗಳಿಗೆ ಹೆಚ್ಚಿನ ಗೌರವ ಕೊಡುತ್ತಾರೆಂದೂ, ಅದೇ ಕಾರಣಕ್ಕೆ ತನ್ನ ಅಭಿಪ್ರಾಯಕ್ಕೆ ವಿರುದ್ಧವಾಗಿ ದೆಹಲಿ ಮತ್ತು ಪ.ಬಂಗಾಳಗಳಲ್ಲಿ ಮೈತ್ರಿಯಾಗಲಿಲ್ಲವೆಂದೂ ಹೇಳಬಹುದು. ಆದರೆ, ಇದು ಎಷ್ಟು ದಿನ ಉಳಿಯುತ್ತದೆ ಕಾದು ನೋಡಬೇಕು.

ಸಂಘಟನಾ ಶಕ್ತಿಯನ್ನು ಕಟ್ಟಿಕೊಳ್ಳದ, ತನ್ನದೇ ಆದ ವೈಚಾರಿಕ ನೆಲೆಯನ್ನು ಪಕ್ಷದಲ್ಲೂ, ಸಮಾಜದಲ್ಲೂ ತರದ ಪಕ್ಷವೊಂದು ಹೇಗೆ ತಾನೇ ದೀರ್ಘಕಾಲ ಉಳಿದುಕೊಂಡೀತು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...