Homeಅಂಕಣಗಳುಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. - ಮೋದಿಯ ಹೊಸ ಮಂತ್ರ

ಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. – ಮೋದಿಯ ಹೊಸ ಮಂತ್ರ

- Advertisement -
- Advertisement -

ಮೋದಿ ತನ್ನ ಸಾಧನೆ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತಿಲ್ಲ. ಬದಲಿಗೆ ಗಡಿಯಲ್ಲಿನ ಭಯೋತ್ಪಾದನೆ ಮತ್ತು ದೇಶದೊಳಗಿನ ಮುಸ್ಲಿಮರ ‘ಗುಮ್ಮ’ ತೋರಿಸುತ್ತಿದ್ದಾರೆ. ಅವರ ಪ್ರಕಾರ ಇದು ನಿಜವಾದ ಯುದ್ಧವಂತೆ……

                                                -ಶೇಖರ್ ಗುಪ್ತಾ

ಅಧಿಕಾರದಲ್ಲಿರುವ ವ್ಯಕ್ತಿ ಮರು ಆಯ್ಕೆಗಾಗಿ ಮತದಾರರನ್ನು ಸಹಜವಾಗಿ ಕೇಳಬೇಕಾದ ಮುಖ್ಯ ಪ್ರಶ್ನೆ: ‘ನನಗೆ ವೋಟ್ ಮಾಡಿ ಗೆಲ್ಲಿಸಿದ ಸಂದರ್ಭಕ್ಕಿಂತ ಈಗ ನೀವು ಇನ್ನೂ ಹೆಚ್ಚಿನ ಸೌಖ್ಯದಲ್ಲಿದ್ದೀರಿ ತಾನೇ?’… ಆದರೆ ಮೋದಿಯ ವರಸೆ ಹೀಗಿದೆ: “ನನ್ನನ್ನು ಗೆಲ್ಲಿಸಿದ ನಂತರ ನಿಮಗೆ ಹೆಚ್ಚಿನ ಸುರಕ್ಷತಾ ಭಾವ ಬಂದಿದೆಯಲ್ಲವೇ?’…

ಇದಕ್ಕೆ ಉತ್ತರ ‘ಹೌದು’ ಎಂದಾದರೆ ಮತ್ತೆ ನೀವು ಅಸುರಕ್ಷತೆಯ ಬಗ್ಗೆ ದೂಸರಾ ಮಾತೇ ಎತ್ತುವ ಹಾಗಿಲ್ಲ. ಉತ್ತರ ‘ಇಲ್ಲ’ ಎಂದಾದರೆ, ಮತ್ತೇಕೆ ನಿಮ್ಮನ್ನು ಮರು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ. ಆದರೆ ಮೋದಿ ಜಗತ್ತಿನಲ್ಲಿ ಮೂರನೆಯ ಸಾಧ್ಯತೆಯನ್ನೂ ಸೃಷ್ಟಿಸಬಹುದು. ‘ಹಿಂದಿಗಿಂತ, ಮುಖ್ಯವಾಗಿ, 2008ರ ಮುಂಬೈ ದಾಳಿಯ ಸಂದರ್ಭಕ್ಕಿಂತ ಈಗ ನೀವು ಹೆಚ್ಚು ಅಸುರಕ್ಷಿತರೇ?’ ಎಂಬ ಪ್ರಶ್ನೆಯನ್ನು ಹಾಕಲಾಗುತ್ತದೆ. ಒಬ್ಬ ಸಾಂಪ್ರದಾಯಿಕ ಅಥವಾ ಸಹಜ ವೃತ್ತಿ ರಾಜಕಾರಣಿ ತನ್ನ ಸಾಧನೆ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತಾನೆ. ಆದರೆ ‘ಜಾಣ’ನಾದವನು ತನ್ನ ವಿರೋಧಿಗಳ ವಿಷಯ ಇಟ್ಟುಕೊಂಡು ವೋಟು ಬೇಡುತ್ತಾನೆ. ಈ ವಿಷಯದಲ್ಲಿ ಮೋದಿ ‘ಜಾಣ’ನಲ್ಲದೇ ಇನ್ನೇನು?

ನೀವು ವಿವರ ತೆಗೆದು ವಾದಿಸಬಹುದು, ಆದರೆ ಈ ಐದು ವರ್ಷಗಳಲ್ಲಿ ಕಾಶ್ಮೀರ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ದೊಡ್ಡ ಭಯೋತ್ಪಾದನಾ ಕೃತ್ಯ ನಡೆದಿಲ್ಲ ಎಂಬುದನ್ನು ಈ ಸರ್ಕಾರ ಮುಂದೆ ಮಾಡುತ್ತದೆ. ಅಂತರಾಷ್ಟ್ರೀಯ ಗಡಿಯಿಂದ ಹಲವು ಮೈಲುಗಳ ದೂರದ ಗುರುದಾಸಪುರ ಮತ್ತು ಪಠಾನಕೋಟ್‍ನಲ್ಲಿ ಎರಡು ವಿಫಲ ದಾಳಿ ನಡೆದದ್ದು ಬಿಟ್ಟರೆ ಬೇರೆಲ್ಲೂ ಅಂತಹ ದಾಳಿ ನಡೆದಿಲ್ಲ. ಯುಪಿಎ ಅವಧಿಯ ದಿನಗಳು ತುಂಬ ಸುರಕ್ಷಿತವಾಗಿದ್ದವು ಎಂಬುದೂ ಸತ್ಯವಲ್ಲ. ಕಾಶ್ಮೀರ ಆಗಲೂ ಸಾಪೇಕ್ಷವಾಗಿ ಶಾಂತವಾಗಿರಲಿಲ್ಲ. ಕಾಂಗ್ರೆಸ್ ಕೂಡ ಇದನ್ನು ಮರೆತಿತ್ತು.

ಮೋದಿ ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ತನ್ನ ಸಾಧನೆ ಇಟ್ಟುಕೊಂಡು ತಮ್ಮ ಪ್ರಚಾರವನ್ನು ಕಟ್ಟುತ್ತಿಲ್ಲ. ಆದರೆ ಅವರು ಇನ್ನಷ್ಟು ಅಭದ್ರತೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಜೈಷ್, ಲಷ್ಕರ್, ಐಎಸ್‍ಐಗಳೆಂಬ ಗುಮ್ಮಗಳನ್ನು ಅವರು ಮುಂದು ಮಾಡಿ ಮತ ಪಡೆಯಲು ಹೊರಟಿದ್ದಾರೆ.

2014ರ ಚುನಾವಣೆಯನ್ನು ಮೋದಿ ಭರವಸೆಗಳ ಆಧಾರದಲ್ಲಿ ಗೆದ್ದರು. 5 ವರ್ಷಗಳ ನಂತರ ಅವರು ಪಾಕಿಸ್ತಾನದ ಕಪ್ಪು ಭಯೋತ್ಪಾದನೆಯ ಭೀತಿಯ ಆಧಾರದಲ್ಲಿ ಮತ್ತೊಂದು ಅವಧಿಗೆ ತಮ್ಮನ್ನು ಆಯ್ಕೆ ಮಾಡಲು ಕೇಳುತ್ತಿದ್ದಾರೆ. ಅದಕ್ಕೇ ಆತ ಮತ್ತೆ ಮತ್ತೆ ಹೇಳುತ್ತಿರುವುದು: ಕೇವಲ ಭಯೋತ್ಪಾದಕರು ಮತ್ತು ಪಾಕಿಸ್ತಾನಿಯರು ತಮ್ಮನ್ನು ಸೋಲಿಸಲು ಬಯಸಿದ್ದಾರೆಂದು! ಅದೇ ಉಸಿರಿನಲ್ಲಿ ಅವರು, ಸೇನಾ ಕಾರ್ಯಾಚರಣೆಗಳ ಯಶಸ್ಸಿನ ಬಗ್ಗೆ ಕೇಳಿದ ವಿದೋಧ ಪಕ್ಷಗಳನ್ನು ಮೂದಲಿಸುತ್ತ, ಸೇನೆಯ ಮನೋಸ್ಥೈರ್ಯವನ್ನು ಕುಂದಿಸುತ್ತಿದ್ದಾರೆ ಎಂದೂ ಅಪಾದಿಸುತ್ತಾರೆ.

2014ರ ಆಶಾವಾದ ಮತ್ತು 2019ರ ಭೀತಿ- ಈ ಶಿಫ್ಟ್‍ ಗೆ ಕಾರಣವೇನು?

ಮೋದಿ-ಶಾ ಜೋಡಿ ಯಾವುದನ್ನು ನಾವು ‘ಪುಟ್ಟಾಪೂರಾ ಪಾಲಿಟಿಕ್ಸ್’ ( ಕಂಪ್ಲೀಟ್ ಪಾಲಿಟಿಕ್ಸ್) ಎನ್ನುತ್ತವೆಯೋ ಅದರಲ್ಲಿ ನಂಬಿಕೆ ಇಟ್ಟಿದೆ. ಅಂದರೆ ಇದು ರಾಜಕಾರಣವೇ ಮನರಂಜನೆ, ಹುಚ್ಚು ಮತ್ತು 24 ಗಂಟೆಗಳ ಗೀಳು… ಹೀಗಾದಾಗ ರಾಜಕೀಯದ ಹೊರತಾಗಿ ಇಲ್ಲಿ ಬೇರೆ ಯಾವುದಕ್ಕೂ ಜಾಗವೇ ಇಲ್ಲ. ನಿಮ್ಮ ಸಾಧನೆಗಳ ಆಧಾರದಲ್ಲಿ ಹೋದರೆ ಅದು ಅಪಾಯಕಾರಿ. ಏಕೆಂದರೆ, ನೀವು ಮಾಡುವ ಕ್ಲೇಮುಗಳನ್ನು ಜನ ತಮ್ಮ ರಿಯಾಲಿಟಿಯೊಂದಿಗೆ ಇಟ್ಟು ಚೆಕ್ ಮಾಡುತ್ತಾರೆ. ನೀವು ಉದ್ಯೋಗ ಕುರಿತ ಎಲ್ಲ ದತ್ತಾಂಶಗಳನ್ನು ಮುಚ್ಚಿಡಬಹುದು, ಜಿಡಿಪಿ ಲೆಕ್ಕವನ್ನು ಫಿಕ್ಸ್ ಮಾಡಬಹುದು. ಆದರೆ, ನಿಮಗೆ ಹೇಗೆ ಅನಿಸುತ್ತಿದೆ, ಸೌಖ್ಯವೇ ಅಂತ ಕೇಳಿದ ಕೂಡಲೇ ಜನರು ರಿಯಾಲಿಟಿ ಚೆಕ್‍ಗೆ ಇಳಿಯುತ್ತಾರೆ. ನಿಮ್ಮ ಉಜ್ವಲಾ, ಮುದ್ರಾ, ರೈತರಿಗೆ ನೇರ ಹಣ, ಶೌಚಾಲಯ ಯೋಜನೆಗಳ ಫಲಾನುಭವಿಗಳಿರಬಹುದು. ಆದರೆ ಇದೆಲ್ಲದರಿಂದ ಹೊರಗುಳಿದ ಒಂದು ದೊಡ್ಡ ಜನಸಮೂಹವೇ ಇರುತ್ತದೆ. ಇದು ಎಷ್ಟು ಅಪಾಯಕಾರಿ ಎಂದು ತಿಳಿಯಲು, 2004ರ ಶೈನಿಂಗ್ ಇಂಡಿಯಾ ಬಗ್ಗೆ ಅದ್ವಾನಿಗೆ ಕೇಳಿ ನೋಡಿ.

ಮೋದಿಯ ಈಗಿನ ಭಾಷಣಗಳಂತೆ ಮುಂದೆಯೂ ಭಯೋತ್ಪಾದನೆ, ಪಾಕಿಸ್ತಾನ, ರಾಷ್ಟ್ರೀಯ ಸುರಕ್ಷತೆಯ ಕುರಿತಾದ ಭಾಷಣಗಳೇ ಇರುತ್ತವೆ. ಉದ್ಯೋಗ, ಅಭಿವೃದ್ಧಿ, ರೈತರ ಸಂಕಷ್ಟಗಳ ಬಗ್ಗೆ ಅವರು ಮಾತನಾಡಲ್ಲ. ತಮ್ಮನ್ನು ಡಿಫೆಂಡ್ ಮಾಡಿಕೊಳ್ಳುವ ಬದಲು, ವಿರೋಧಿಗಳ ಮೇಲೆ ಹರಿ ಹಾಯುವುದನ್ನೇ ಅವರು ಮುಂದುವರೆಸಲಿದ್ದಾರೆ.

‘ಭಯೋತ್ಪಾದನೆ’ ಶಬ್ದದ ಜೊತೆಗೊಂದು ಇಲ್ಲಿ ಉಪಶಬ್ದವೂ ಇದೆ-‘ಮುಸ್ಲಿಮರು’.  2014ರಲ್ಲಿ ಗೆದ್ದ ನಂತರ ಕ್ಯಾಬಿನೆಟ್ ಸೇರಿದಂತೆ ಯಾವ ಸಾಂವಿಧಾನಿಕ ಸಂಸ್ಥೆಗಳಲ್ಲೂ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲದಂತೆ ನೋಡಿಕೊಂಡರು. ದೇಶದಲ್ಲಿ ಶೇ 14ರಷ್ಟು ಇರುವ ಮುಸ್ಲಿಮರಿಗೆ ಕೇವಲ 7 ಸೀಟು ನೀಡಿ, ಶೇ. 20ರಷ್ಟಿರುವ ಉತ್ತರ ಪ್ರದೇಶದಲ್ಲಿ ಒಂದೂ ಸೀಟು ನೀಡದೇ ಭಾರಿ ದಿಗ್ವಿಜಯ ಸಾಧಿಸಿದ್ದರು. ಈ ತಂತ್ರ ಎಷ್ಟು ಯಶಸ್ವಿಯಾಗಿತ್ತು ಎಂದರೆ, ಈಗಲೂ ಕಾಂಗ್ರೆಸ್ ತನ್ನನ್ನು ಮುಸ್ಲಿಮರ  ಹಿತೈಷಿ ಎಂದು ಬಿಡುತ್ತಾರೇನೋ ಎಂಬ ಭಯದಲ್ಲಿ ಮುಸ್ಲಿಮರಿಗೆ ಟಿಕೆಟು ಕೊಡಲು ಹಿಂಜರಿಯುತ್ತಿದೆ.

ಈಗಲೂ ಅದನ್ನೇ ಮೋದಿ ಮುದುವರೆಸಿದ್ದಾರೆ. ಭಯೋತ್ಪಾದಕರು, ಪಾಕಿಸ್ತಾನಿಯರು ಮತ್ತು ಮುಸ್ಲಿಮರನ್ನು ಗುಮ್ಮನಂತೆ ತೋರಿಸುವುದು, ಭಯೋತ್ಪಾದಕರು, ಪಾಕಿಗಳು ಮತ್ತು ವಿರೋಧ ಪಕ್ಷಗಳು ತಮ್ಮನ್ನು ಸೋಲಿಸಲು ಬಯಸಿವೆ ಎಂದು ಭಾಷಣ ಮಾಡುವುದು. ಮುಸ್ಲಿಮರು ಓಟು ಹಾಕದಿದ್ದರೂ ಪರವಾಗಿಲ್ಲ, ಈ ಕಾರಣಕ್ಕಾಗಿ ಹಿಂದೂಗಳು ಧ್ರುವೀಕರಣ ಆಗುತ್ತಾರೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.

ಇಲ್ಲಿನ ಮುಸ್ಲಿಮರ ವಿರುದ್ಧ ನೇರ ದಾಳಿ ಮಾಡಿದರೆ ವರ್ಕೌಟ್ ಆಗುವುದಿಲ್ಲ ಎಂದು ಅರಿತಿರುವ ಮೋದಿ, ಪಾಕಿಸ್ತಾನ, ಬಾಂಗ್ಲಾ ಮುಸ್ಲಿಮರನ್ನು ವೈರಿಗಳು ಎಂನಂತೆ ಚಿತ್ರಿಸುವ ತಂತ್ರಕ್ಕೆ ಶರಣಾಗಿದ್ದಾರೆ.

 (ಕೃಪೆ: ದಿ ಪ್ರಿಂಟ್)

ಅನುವಾದ: ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...