Homeಅಂಕಣಗಳುರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ

ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ

ಈ ಆಂದೋಲನದ ಆಳ ಅವಿವೇಕಿಗಳಿಗೆ ತಿಳಿದಂತಿಲ್ಲ. ಪಂಜಾಬಿನ ಇಡೀ ಸಾಮಾಜಿಕ-ರಾಜಕೀಯ-ಸಾಹಿತ್ಯ-ಸಾಂಸ್ಕೃತಿಕ-ವೈಚಾರಿಕ ಬದುಕು ಈ ಪ್ರತಿಭಟನೆಗೆ ಧುಮುಕಿದೆ. ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ ಈ ಆಂದೋಲನದ ಬೇರುಗಳಿವೆ.

- Advertisement -
- Advertisement -

ಸುಮಾರು ಎರಡು ಲಕ್ಷ ಮಂದಿ ಪಾಲ್ಗೊಂಡಿರುವ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಐತಿಹಾಸಿಕ ಸ್ವರೂಪದ್ದು. ಪಕ್ಷ ರಾಜಕಾರಣವನ್ನು ದೂರವಿಟ್ಟು ನಡೆಯುತ್ತಿರುವ ಅನನ್ಯ ಶಾಂತಿಯುತ ಆಂದೋಲನ. ವಿಶ್ವವೇ ಗಮನಿಸುತ್ತಿರುವ ವಿದ್ಯಮಾನ.

ಈ ಆಂದೋಲನದ ಆಳ ಅವಿವೇಕಿಗಳಿಗೆ ತಿಳಿದಂತಿಲ್ಲ. ಪಂಜಾಬಿನ ಇಡೀ ಸಾಮಾಜಿಕ-ರಾಜಕೀಯ-ಸಾಹಿತ್ಯ-ಸಾಂಸ್ಕೃತಿಕ-ವೈಚಾರಿಕ ಬದುಕು ಈ ಪ್ರತಿಭಟನೆಗೆ ಧುಮುಕಿದೆ. ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ ಈ ಆಂದೋಲನದ ಬೇರುಗಳಿವೆ. ದೆಹಲಿಯ ಗಡಿಗಳತ್ತ ಸಾಗುವ ಮುನ್ನ ಐವತ್ತೈದು ದಿನಗಳ ಕಾಲ ಕಿಚ್ಚಿನಂತೆ ವ್ಯಾಪಿಸಿದ್ದ ಪ್ರತಿಭಟನೆಯಿದು. ಹಳ್ಳಿ ಹಳ್ಳಿಗಳು ಆಹಾರ ಧಾನ್ಯ, ತರಕಾರಿ, ಹಾಲು, ಹಣ್ಣು, ಹಣವನ್ನು ಸಂಗ್ರಹಿಸಿ ದೆಹಲಿ ಗಡಿಯ ಪ್ರತಿಭಟನೆಗೆ ರವಾನಿಸುತ್ತಿದೆ. ಖಾಸಗಿ ಬಸ್ಸುಗಳು ಕ್ವಿಂಟಾಲ್‌ಗಟ್ಟಲೆ ದಿನಸಿಗಳು ಹಾಲು ಹೈನನ್ನು ಉಚಿತವಾಗಿ ಸಾಗಿಸುತ್ತಿವೆ. ಪಂಜಾಬಿನ ಮದುವೆಗಳಲ್ಲಿ ಉಡುಗೊರೆಗಳ ಬದಲಿಗೆ ವಂತಿಗೆ ಸಂಗ್ರಹಿಸಿ ಕಳಿಸಲಾಗುತ್ತಿದೆ. ಈ ಸತ್ಯಾಗ್ರಹದ ಬೇರುಗಳ ಜನಪದದಲ್ಲಿವೆ. ಅವುಗಳನ್ನು ಕತ್ತರಿಸುವುದು ಸುಲಭವಲ್ಲ. ಸಿಡಿದೆದ್ದಿರುವ ಈ ಭುಗಿಲನ್ನು ಸದ್ಯಕ್ಕಾದರೂ ಶಾಂತಗೊಳಿಸುವ ಏಕೈಕ ಸುಲಭದ ದಾರಿಯೆಂದರೆ ರೈತರ ಬೇಡಿಕೆಗಳನ್ನು ಒಪ್ಪುವುದು.

ಬ್ಲಾಕ್
PC: PTI

ದೆಹಲಿ-ಹರಿಯಾಣದ ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಮೊನ್ನೆ ಬಹಾದೂರ್‌ಗಢ ಬೈಪಾಸ್ ಹೆದ್ದಾರಿಯುದ್ದದ ವಿಭಜಕದಲ್ಲಿ (ಡಿವೈಡರ್) ಉಳುಮೆ ಮಾಡತೊಡಗಿದರು. ತಮ್ಮ ಅಡುಗೆಗೆ ನಿತ್ಯ ಬೇಕಿರುವ ತರಕಾರಿಗಳು ಮತ್ತು ಸೊಪ್ಪು ಬೆಳೆಯುವುದು ಅವರ ವಿನೂತನ ಪ್ರತಿಭಟನೆಯ ಪರಿ.

ರಾಜಸ್ತಾನ, ಹರಿಯಾಣ, ಪಶ್ಚಿಮೀ ಉತ್ತರಪ್ರದೇಶ, ಮಹಾರಾಷ್ಟ್ರ ಮಾತ್ರವಲ್ಲದೆ ದಕ್ಷಿಣ ರಾಜ್ಯಗಳ ರೈತರೂ ಈ ಪ್ರತಿಭಟನೆಯನ್ನು ಕೂಡಿಕೊಳ್ಳತೊಡಗಿದ್ದಾರೆ. ಮುಂಬರುವ ದಿನಗಳು ಉಬ್ಬರವನ್ನು ಕಾಣುವುವೇ ವಿನಾ ಇಳಿತವನ್ನಲ್ಲ. ಅರ್ಥಾತ್ ’ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’.

ಕೇಂದ್ರ ಸರ್ಕಾರ ಮಾತ್ರವಲ್ಲದೆ, ಅಂಬಾನಿ-ಅದಾನಿಯಂತಹ ಭಾರಿ ಲಾಭಬಡುಕ ಕಾರ್ಪೊರೇಟ್‌ಗಳು ಹಾಗೂ ಕೇಂದ್ರ ಸರ್ಕಾರ ಮತ್ತು ಕಾರ್ಪೊರೇಟುಗಳ ತುತ್ತೂರಿಗಳಾಗಿರುವ ಸಮೂಹ ಮಾಧ್ಯಮಗಳನ್ನು ಈ ಆಂದೋಲನ ಕಟಕಟೆಯಲ್ಲಿ ನಿಲ್ಲಿಸಿದೆ. ರಾಜ್ಯ ಸರ್ಕಾರಗಳು ಮತ್ತು ರೈತ ಸಮುದಾಯಗಳೊಂದಿಗೆ ಸಮಾಲೋಚನೆಯನ್ನೇ ನಡೆಸದೆ ಏಕಪಕ್ಷೀಯವಾಗಿ ಕೃಷಿ ಕಾಯಿದೆಗಳನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರ, ಒಕ್ಕೂಟ ಗಣತಂತ್ರದ ತಿರುಳು ಮತ್ತು ಸತ್ವವನ್ನೇ ಗಾಳಿಗೆ ತೂರಿರುವ ನಡೆಯನ್ನು ಪ್ರಶ್ನಿಸಿರುವ ಚಳವಳಿಯಿದು.

ಜೈ ಜವಾನ್-ಜೈ ಕಿಸಾನ್ ಎಂಬುದು ಭಕ್ತಗಣ ಮತ್ತು ಆಳುವವರ ಪರ ನಿಂತಿರುವ ಜನವಿರೋಧಿ ತಮಟೆ-ತುತ್ತೂರಿ ಮೀಡಿಯಾ ಇತ್ತೀಚಿನವರೆಗೆ ಜಪಿಸುತ್ತಿದ್ದ ಮಂತ್ರ. ಆದರೆ ಕುರುಡುಭಕ್ತಿಗೆ ಇತಿಮಿತಿಗಳು ಹದ್ದುಬಸ್ತುಗಳು ಉಂಟೇನು? ತಮ್ಮ ಚಂಡಪ್ರಚಂಡ ನಾಯಕನಿಗೆ ಎದುರಾಗಿ ನಿಂತರೆಂದು ರೈತರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗಿದೆ. ಖಾಲಿಸ್ತಾನಿಗಳೆಂದು ಸಾರಲಾಗಿದೆ. ದೇಶ ರಕ್ಷಣೆಗೆ ಒರೆಯಿಂದ ಹಿರಿದ ಖಡ್ಗವೆಂದೇ ಪಂಜಾಬನ್ನು ಬಣ್ಣಿಸುವುದುಂಟು. ಅದಕ್ಕೆ ಐತಿಹಾಸಿಕ ಕಾರಣಗಳಿವೆ. ಸೇನೆಯಿಂದ ನಿವೃತ್ತಿಯ ನಂತರ ರೈತಾಪಿಗಳಾಗಿರುವ ಸಾವಿರಾರು ಮಾಜಿ ಯೋಧರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

PC : Singhstation

ಖಾಲಿಸ್ತಾನಿಗಳ ವಿರುದ್ಧ ಹೋರಾಡಿ ಹುತಾತ್ಮರಾದ ದೇಶಪ್ರೇಮಿಗಳ ರೈತ ಕೂಲಿ ಸಂಘಟನೆ ಇದೆ. ಅದರ ಹೆಸರು ಕೀರ್ತಿ ಕಿಸಾನ್ ಯೂನಿಯನ್. ಖಾಲಿಸ್ತಾನಿಗಳ ಭಯೋತ್ಪಾದನೆಯನ್ನು ಮಾತ್ರವಲ್ಲ, ಅಮಾಯಕರನ್ನು ಭಯೋತ್ಪಾದರೆಂದು ಘೋಷಿಸಿ ಕೊಂದ ಪ್ರಭುತ್ವದ ಭಯೋತ್ಪಾದನೆ, ಸಿಖ್ ಧರ್ಮದ ಸಂಪ್ರದಾಯವಾದವನ್ನೂ ವಿರೋಧಿಸಿದ ಸಂಘಟನೆಯಿದು. ’ಅತಿ ಅಪಾಯಕಾರಿ ವಾರ್ತೆಯೆಂದರೆ ನಮ್ಮ ಕನಸುಗಳು ಕೊನೆಯುಸಿರೆಳೆವುದು…’ ಎಂಬ ಪಂಜಾಬಿನ ಕ್ರಾಂತಿಕಾರಿ ಕವಿ ಅವತಾರ್ ಸಿಂಗ್ ಪಾಶ್ ಅವರ ಕವಿತೆ ಜನಜನಿತ. ಖಾಲಿಸ್ತಾನಿಗಳನ್ನು ವಿರೋಧಿಸಿದ ಅವರು ಅವರಿಂದಲೇ ಹತರಾಗುತ್ತಾರೆ. ಅವರ ಜಮೀನನ್ನು ಯಾರೂ ಉಳುಮೆ ಮಾಡಕೂಡದೆಂದು ಖಾಲಿಸ್ತಾನಿಗಳು ಬೆದರಿಕೆ ಹಾಕಿರುತ್ತಾರೆ. ಆದರೆ ಈ ಬೆದರಿಕೆಗೆ ಬಗ್ಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಪಾಶ್ ಅವರ ಜಮೀನನ್ನು ಉಳುಮೆ ಮಾಡಿ ಬೆಳೆ ಬೆಳೆಯಿತು ಕೀರ್ತಿ ಕಿಸಾನ್ ಯೂನಿಯನ್ ಸಂಘಟನೆ. ಈ ಸಂಘಟನೆಯ ಹದಿಮೂರು ಮಂದಿ ಕಾರ್ಯಕರ್ತರು ಮತ್ತು ಮೂವರು ಅಧ್ಯಕ್ಷರನ್ನು ಕೊಂದು ಹಾಕಿದ್ದರು ಖಾಲಿಸ್ತಾನಿಗಳು. ಈ ಸಂಘಟನೆಯ ಅಧ್ಯಕ್ಷ ರಾಜೇಂದ್ರಸಿಂಗ್ ದೀಪ್ ಸಿಂಗ್ ವಾಲಾ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವ ರೈತ ನಿಯೋಗದ ಅತ್ಯಂತ ಕಿರಿಯ ವಯಸ್ಸಿನ ಸದಸ್ಯ. ಹತ್ತೆಕರೆಗೂ ಕಮ್ಮಿ ಹೊಲಗದ್ದೆಗಳ ರೈತರು ಮತ್ತು ಕೂಲಿಕಾರರ ಕೊರಳ ದನಿಯಾಗಿರುವ ಸಂಘಟನೆಯಿದು. ಅಪಪ್ರಚಾರಕ್ಕೆಂದೇ ನೇಮಕಗೊಂಡಿರುವ ಸೇನೆಯ ಕುರುಡು ಕಣ್ಣುಗಳಿಗೆ ಈ ಸತ್ಯ ಕಾಣುವುದಾದರೂ ಎಂತು?

ಪ್ರತಿಭಟನೆಯನ್ನು ಸೇರಿಕೊಳ್ಳುತ್ತಿರುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ. ಊಟ ತಿಂಡಿ ಮುಂತಾದ ಅನುಕೂಲಗಳು ಹೇರಳ. ಆದರೆ ಸ್ನಾನ ಶೌಚದ ಸಮಸ್ಯೆ ಬಿಗಡಾಯಿಸಿದೆ. ರೈತ ಮಹಿಳೆಯರ ಪಾಡು ಹೇಳತೀರದು. ಹರಿಯಾಣ ಮತ್ತು ಉತ್ತರಪ್ರದೇಶ ಸರ್ಕಾರಗಳು ಮಾಡಿರುವ ಸಂಚಾರಿ ಶೌಚಾಲಯಗಳ ಸಂಖ್ಯೆ ಸಾಲದೇ ಸಾಲದು. ಈ ಶೌಚಾಲಯಗಳು ಕೂಡ ಬಳಸಲಾರದಷ್ಟು ಕೊಳಕಾಗಿವೆ. ಸಮೀಪದ ಹೊಲಗದ್ದೆಗಳು, ಕಾಲುದಾರಿಗಳೇ ಗತಿ. ಹೋಟೆಲುಗಳನ್ನು ಹುಡುಕಿಕೊಂಡು ಹೋಗಬೇಕೆಂದರೆ ಹತ್ತು ಕಿ.ಮೀ.ದೂರ ಕ್ರಮಿಸಬೇಕು. ಉತ್ತರಪ್ರದೇಶ-ದೆಹಲಿಯ ಘಾಜೀಪುರ ಗಡಿಯಲ್ಲಿ ಮುಗಿಲೆತ್ತರ ನಿಂತ ಕಸದ ಹೊಲಸಿನ ಬೆಟ್ಟವೇ ಪ್ರತಿಭಟನಾ ನಿರತ ರೈತರ ನೆರೆಹೊರೆ. ದುರ್ವಾಸನೆಯ ಜೊತೆಗೆ ಸೊಳ್ಳೆಗಳ ಕಾಟ. ದೆಹಲಿಯ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯು ಸೊಳ್ಳೆ ನಿರೋಧಕ ಬತ್ತಿ- ಮುಲಾಮುಗಳು, ಟೂತ್ ಪೇಸ್ಟ್, ಬ್ರಶ್, ಸೋಪು ಹಾಗೂ ಶಾಂಪೂ ಹೊಂದಿದ ಸಾವಿರಾರು ’ಕಿಟ್’ ಗಳನ್ನು ರೈತರಿಗೆ ಹಂಚತೊಡಗಿದೆ. ಕಳೆದ ಎರಡು ವಾರಗಳಲ್ಲಿ ವಿಪರೀತ ಚಳಿಯ ವಾತಾವರಣ ಮತ್ತು ಅಪಘಾತಗಳ ಕಾರಣ ಒಟ್ಟು 14 ಮಂದಿ ಪ್ರತಿಭಟನಕಾರರು ಸಾವಿಗೀಡಾಗಿದ್ದಾರೆ. ಥರಗುಟ್ಟಿಸುವ ಥಂಡಿ ಕೊರೆದು ಕಾಡುವ ಬಯಲಿನಲ್ಲಿ ವಾರಗಟ್ಟಲೆ ಬದುಕುವುದು ಸುಲಭವಲ್ಲ. ಸಾವು ನೋವುಗಳಿಗೆ ನೀಡುವ ಆಹ್ವಾನವದು.

ಏನನ್ನು ಬೇಕಾದರೂ ಜಗಿದು ನುಂಗಿ ಅರಗಿಸಿಕೊಂಡೇವು ಎನ್ನುವ ಪ್ರಚಂಡ ಜೋಡಿಗೆ ಎದುರಾದಂತಿದೆ ಕಬ್ಬಿಣದ ಕಡಲೆ.


ಇದನ್ನೂ ಓದಿ: ರೈತ ಹೋರಾಟ ರಾಷ್ಟ್ರೀಯ ಸಮಸ್ಯೆಯಾಗುವ ಮುನ್ನ ಬಗೆಹರಿಸಿ: ಕೇಂದ್ರಕ್ಕೆ ಸುಪ್ರೀಂ ಸಲಹೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...