Homeಅಂಕಣಗಳುಧರ್ಮಗಳನು ಮೀರಿದ ಈ ಮಾತೃತ್ವ

ಧರ್ಮಗಳನು ಮೀರಿದ ಈ ಮಾತೃತ್ವ

- Advertisement -
- Advertisement -

ಗೌರಿ ಲಂಕೇಶ್
20 ಆಗಸ್ಟ್, 2008 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಸಿನಿಕಳಲ್ಲ. ಆದ್ದರಿಂದ ನಮ್ಮ ದೇಶಕ್ಕೆ ಇನ್ನೂ ಭವಿಷ್ಯವಿದೆ ಇಲ್ಲಿ ಜಾತಿ, ಧರ್ಮ ದಂತಹ ಭೇದಗಳನ್ನು ಮೀರುವ ಜನರಿದ್ದಾರೆ. ಮಮತೆ ಮತ್ತು ಮಾನವೀಯತೆಗೆ ಇನ್ನೂ ಮೌಲ್ಯವಿದೆ ಎಂದು ಸಾರುವ ಒಂದು ನಿಜ ಕಥೆಯನ್ನು ಇಲ್ಲಿ ಹೇಳುತ್ತೇನೆ. ಈ ಕತೆಯ ಕೇಂದ್ರಬಿಂದು ವಿವೇಕ್ ಅಲಿಯಾಸ್ ಮುಜಾಫರ್ ಎಂಬ ಎಂಟು ವರ್ಷದ ಬಾಲಕ. ಮುಖ್ಯಪಾತ್ರಧಾರಿಗಳು ಆತನಿಗೆ ಜನ್ಮಕೊಟ್ಟ ಜಬುನ್ನೀಸಾ ಮತ್ತು ಸಲೀಂ ಎಂಬ ಮುಸ್ಲಿಂ ದಂಪತಿಗಳು ಹಾಗೂ ಆತನನ್ನು ಕಳೆದ ಆರು ವರ್ಷಗಳಿಂದ ಅಕ್ಕರೆಯಿಂದ ಸಾಕಿರುವ ವೀಣಾಪಟ್ನಿ ಎಂಬ ಹಿಂದೂ ತಾಯಿ.
ವಿವೇಕ್ ಅಲಿಯಾಸ್ ಮುಜಾಫರ್‍ನ ಕಥೆ ಪ್ರಾರಂಭವಾಗುವುದು 2002ರಿಂದ. ಅದು ಫೆಬ್ರವರಿ 28. ಹಿಂದಿನ ದಿನವೇ ಗೋದ್ರದಲ್ಲಿ ಸಬರಮತಿ ರೈಲಿನ ಹಲವು ಬೋಗಿಗಳಿಗೆ ಬೆಂಕಿ ಬಿದ್ದು 59 ಅಮಾಯಕರು ಆಹುತಿಯಾಗಿದ್ದರು. ಅದಕ್ಕೆ ಪ್ರತಿಯಾಗಿ ಅಮಾಯಕ ಮುಸಲ್ಮಾನರ ಮೇಲೆ ಹಿಂದುತ್ವವಾದಿಗಳ ದಾಳಿ ಶುರುವಾಗಿತ್ತು.
ಸಲೀಂ ತನ್ನ 2 ವರ್ಷದ ಮಗ ಮುಜಾಫರ್‍ನೊಂದಿಗೆ ಅಹಮದಾಬಾದಿನ ಗುಲ್ಬರ್ಗ್ ಸೊಸೈಟಿಗೆ ಹೋಗಿದ್ದರು. ಆಗ ಅಲ್ಲೇ ಇದ್ದ ಕಾಂಗ್ರೆಸ್‍ನ ಮಾಜಿ ಸಂಸದ ಇಶಾನ್ ಜಾಫ್ರಿಯವರ ಮನೆ ಮೇಲೆ ಹಿಂದೂತ್ವವಾದಿಗಳ ಗುಂಪೊಂದು ದಾಳಿ ಇಟ್ಟು, ಜಾಫ್ರಿ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿತ್ತಲ್ಲದೆ, ಅವರ ಮನೆಗೆ ಬೆಂಕಿ ಇಟ್ಟು ಅವತ್ತು ಅವರೊಂದಿಗಿದ್ದ ಎಷ್ಟೋ ಜನರನ್ನು ಕೊಂದು ಹಾಕಿತು. ಇಂತಹ ಅಮಾನುಷ ಗುಂಪಿನಿಂದ ತಪ್ಪಿಸಿಕೊಳ್ಳಲು ಸಲೀಂ ಓಡಿದರು. ಅವರು ವಾಪಸ್ಸು ಬಂದಾಗ, ಹಿಂದುತ್ವವಾದಿಗಳ ಗುಂಪು ಕೊಂದು ಹಾಕಿದ್ದ ಅವರ ಅಜ್ಜಿಯ ಹೆಣ ಇತ್ತೇ ಹೊರತು ಮಗ ಮುಜಾಫರ್‍ನ ಸುಳಿವಿರಲಿಲ್ಲ. ಸುಮಾರು ಎರಡು ತಿಂಗಳ ಕಾಲ ನಡೆದ ಮಾರಣ ಹೋಮದಲ್ಲಿ ಸುಮಾರು ಮೂರು ಸಾವಿರ ಮುಸಲ್ಮಾನರು ಸಾವನ್ನಪ್ಪಿದರೆ, 400ಕ್ಕೂ ಹೆಚ್ಚು ಜನ ಮತ್ತು ಮಕ್ಕಳು ನಾಪತ್ತೆಯಾದರು.
ಅವತ್ತಿನಿಂದ ಮುಜಾಫರ್‍ಗಾಗಿ ತುಂಬಾ ಹುಡುಕಾಡಿದರು, ಪೊಲೀಸರಿಗೆ ದೂರು ನೀಡಿದರು, ತಮ್ಮ ಮಗ ಎಲ್ಲೋ ಸುರಕ್ಷಿತವಾಗಿದ್ದಾನೆ, ಸಿಕ್ಕೇ ಸಿಗುತ್ತಾನೆ ಎಂಬ ಆಶೆಯಲ್ಲಿ ಬದುಕುತ್ತಿದ್ದರು.

veena patni and muzaffar

ಅವರಿಗೆ ಗೊತ್ತಿಲ್ಲದಿದ್ದು ಏನೆಂದರೆ ಪ್ರವೀಣ್ ಪಟ್ನಿ ಎಂಬ ಪೊಲೀಸ್ ಪೇದೆ ತನಗೆ ಸಿಕ್ಕ ಮುಜಾಫರ್‍ನನ್ನು ತನ್ನ ಸಂಬಂಧಿಕರಾದ ವಿಕ್ರಮ್ ಮತ್ತು ವೀಣಾ ಪಟ್ನಿ ಎಂಬ ದಂಪತಿಗಳಿಗೆ ನೀಡಿದ್ದ. ಪಟ್ನಿ ದಂಪತಿಗಳು ಮಕ್ಕಳಿಲ್ಲದವರಾಗಿರಲಿಲ್ಲ, ಹಣವಂತರೂ ಆಗಿರಲಿಲ್ಲ. ಅವರಿಬ್ಬರಿಗೆ ಬೆಳೆದು ನಿಂತಿದ್ದ 4 ಮಕ್ಕಳಿದ್ದರು. ವಿಕ್ರಂ ಕೂಲಿ ಕೆಲಸ ಮಾಡುತ್ತಿದ್ದರೆ, ವೀಣಾ ಮೀನು ಮಾರಿ ಹಣ ಸಂಪಾದಿಸುತ್ತಿದ್ದರು.
ನಾನು ಯಾರು, ಎಲ್ಲಿಂದ ಬಂದೆ ಎಂಬುದು ಗೊತ್ತಿರದ 2 ವರ್ಷದ ಬಾಲಕ ತಮ್ಮ ಸುಪರ್ದಿಗೆ ಬಂದ ನಂತರ ಆತನಿಗೆ ವಿವೇಕ್ ಎಂದು ಮರುನಾಮಕರಣ ಮಾಡಿದ ಪಟ್ನಿ ದಂಪತಿಗಳು ಅವನನ್ನು ಪ್ರೀತಿಯಿಂದಲೇ ಸಲಹಲಾರಂಭಿಸಿದರು. ಆತನಿಗೆ ಕೈತುತ್ತು ನೀಡುತ್ತಾ, ಕೈ ಹಿಡಿದು ನಡೆಸುತ್ತ, ಜೋಗುಳ ಹಾಡುತ್ತಾ, ಆತ ತನಗೆ ಹುಟ್ಟಿದ ಮಗು ಎಂಬಷ್ಟು ಅಕ್ಕರೆಯಿಂದ ವೀಣಾ ಬೆಳೆಸಿದರು.
ಇತ್ತ ತೀಸ್ತಾ ಸೆಟಲ್ವಾಡ್‍ರ ನೆರವಿನೊಂದಿಗೆ ಮಗನಿಗಾಗಿ ಹುಡುಕಾಟವನ್ನು ಸಲೀಂ, ಜಬುನ್ನೀಸಾ ಮುಂದುವರಿಸಿದ್ದರು. ಕೊನೆಗೂ ಮುಜಾಫರ್ ಎಲ್ಲಿದ್ದಾನೆ ಎಂದು ಪತ್ತೆ ಹೆಚ್ಚಿದ ಅವರು ಆತನನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ವಿವೇಕ್ ಅವರ ಮಗ ಎಂಬುದಕ್ಕೆ ಸಾಕ್ಷಿ ಏನೆಂದು ವೀಣಾ ಪ್ರಶ್ನಿಸಿದಾಗ ಸಲೀಂ ಮತ್ತು ವಿವೇಕ್ ಆಲಿಯಾಸ್ ಮುಜಾಫರ್ ಡಿಎನ್‍ಎ ಪರೀಕ್ಷಿಸಲಾಯಿತು. ಅದರಿಂದ ವಿವೇಕ್ ನಿಜವಾಗಲೂ ಸಲೀಂ ಮತ್ತು ಜಬುನ್ನೀಸ್ಸಾರ ಮಗ ಎಂದು ಸಾಬೀತಾಯಿತು.
ಆದರೆ ಆರು ವರ್ಷಗಳ ಕಾಲ ಆತನನ್ನು ತನ್ನ ಮಗನೆಂದು ಬೆಳೆಸಿದ್ದ ವೀಣಾ ಅವನನ್ನು ಹೆತ್ತವರಿಗೆ ಹಿಂದಿರುಗಿಸಲು ಒಪ್ಪಲಿಲ್ಲ. ಆಗ ಸಲೀಂ ಮತ್ತು ಜಬುನ್ನೀಸಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ದುರಂತಕ್ಕೆ ವಿವೇಕನಿಗೆ ತನಗೆ ಜನ್ಮ ನೀಡಿರುವವವರ ನೆನಪೇ ಇರಲಿಲ್ಲ ಮಾತ್ರವಲ್ಲ, ನ್ಯಾಯಾಧೀಶರ ಮುಂದೆ ತಾನು ವೀಣಾ ಅಮ್ಮನೊಂದಿಗೆ ಇರುತ್ತೇನೆ ಎಂದ. ಕಾನೂನಿನ ಪ್ರಕಾರ ಆತ ಹೆತ್ತವರಿಗೆ ಸೇರಬೇಕಿದ್ದರು ಆ ಬಾಲಕನ ಮನಸ್ಸನ್ನು ನೋಯಿಸಬಾರದು ಎಂದು ಅವನನ್ನು ವೀಣಾರೊಂದಿಗೆ ಬಿಡಲಾಯಿತು.
ಸಲೀಂ ಮತ್ತು ಜಬುನ್ನಿಸ್ಸಾರಿಗೆ ತಮ್ಮ ಮಗನ ಮೇಲೆ ವೀಣಾರವರಿಗೆ ಇರುವ ಪ್ರೀತಿ ಅರ್ಥವಾಗುತ್ತದೆ. ಹಾಗಂತ ಹೆತ್ತ ಕುಡಿಯನ್ನು ಮರೆತು ಸುಮ್ಮನಿರಲಾಗುವುದಿಲ್ಲ. ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸುವ ಸಲೀಂ “ವೀಣಾ ನನ್ನ ಮಗನ ದೊಡ್ಡಮ್ಮ ಆಗಿರಲಿ, ನನ್ನ ಹೆಂಡತಿಯೇ ಆತನಿಗೆ ಚಿಕ್ಕಮ್ಮನಾಗಿರಲಿ. ನಾನು ಅವರನ್ನು ಅತ್ತಿಗೆಯಂತೆ ನೋಡಿಕೊಳ್ಳುತ್ತೇನೆ. ಆದರೆ ನಮಗೆ ನಮ್ಮ ಮಗ ಬೇಕು” ಎನ್ನುತ್ತಾರೆ.
ಬರ್ಟೋಲ್ಡ್ ಬ್ರೆಕ್ಟ್ ರವರ ‘ಕಕೇಶಿಯನ್ ಚಾಕ್ ಸರ್ಕಲ್’ ಎಂಬ ನಾಟಕದಲ್ಲಿ ಹೆತ್ತ ತಾಯಿಯೇ ತನ್ನ ಮಗನನ್ನು ಎಳೆದಾಡಲು ಸಿದ್ಧರಿರುತ್ತಾಳೆ. ಆದರೆ ಆತನನ್ನು ಸಾಕಿ ಸಲುಹಿದ ದತ್ತು ತಾಯಿ ಅವರಿಗೆ ನೋವಾಗಕೂಡದೆಂದು ಅವನನ್ನು ತನ್ನತ್ತ ಎಳೆಯಲು ನಿರಾಕರಿಸುತ್ತಾಳೆ.
ಆದರೆ ಬೈಬಲ್‍ನಲ್ಲಿ ಬರುವ ‘ಜಡ್ಜ್‍ಮೆಂಟ್ ಆಫ್ ಸೋಲಮನ್’ ಪ್ರಸಂಗದಲ್ಲಿ ನ್ಯಾಯಾಧೀಶ ಸೊಲಮನ್ ಮಗುವನ್ನು ಕತ್ತರಿಸಿ ಇಬ್ಬರು ತಾಯಂದಿರಿಗೆ ಹಂಚಲು ತಯಾರಾದಾಗ, ಆತನನ್ನು ಹೆತ್ತ ತಾಯಿ “ತನ್ನ ಮಗುವನ್ನು ಕೊಲ್ಲಬೇಡಿ ಅವಳಿಗೆ ಕೊಡಿ” ಎಂದು ಕಣ್ಣೀರಿಡುತ್ತಾಳೆ.
ಅಂದರೆ ಹೆತ್ತ ತಾಯಿಯ ಪ್ರೀತಿ ದೊಡ್ಡದು, ಸಾಕಿ ಸಲುಹಿದ ತಾಯಿಯ ಮಮತೆ ಹೆಚ್ಚಿನದು ಎಂದು ತೀರ್ಮಾನಿಸುವುದು ಸುಲಭವಲ್ಲ. ಇವತ್ತು ಜಾತಿ, ಧರ್ಮ, ಅಂತಸ್ತು ಎಂದೆಲ್ಲ ಬಹಳಷ್ಟು ಜನ ಅಂಧರಾಗಿರುವಾಗ ಈ ಪುಟ್ಟ ಬಾಲಕ ಮತ್ತು ಆತನ ಇಬ್ಬರು ತಾಯಂದಿರು ಅವುಗಳನ್ನೆಲ್ಲ ಮೀರಿ ಮಾತೃತ್ವ, ಮಮತೆ ಮತ್ತು ಮಾನವೀಯತೆಯ ಪ್ರತಿಬಿಂಬಗಳಾಗಿದ್ದಾರೆ.
ಈಗಾಗಲೇ ಧರ್ಮದ ಹೆಸರಲ್ಲಿ ಸಾಕಷ್ಟು ದ್ವೇಷ ಮತ್ತು ರಕ್ತಪಾತವನ್ನು ಕಂಡಿರುವ ಗುಜರಾತ್ ಈ ಪ್ರಕರಣದಲ್ಲಾದರೂ ತನ್ನ ಅಂತರಾಳದಲ್ಲಿರುವ ಮನುಷ್ಯತ್ವವನ್ನು ಕಂಡುಕೊಳ್ಳುವಂತಾಗಲಿ.
ಹಾಗಾದರೆ ಎಷ್ಟು ಚೆನ್ನ ಅಲ್ಲವೇ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...