Homeಅಂಕಣಗಳುಧರ್ಮಗಳನು ಮೀರಿದ ಈ ಮಾತೃತ್ವ

ಧರ್ಮಗಳನು ಮೀರಿದ ಈ ಮಾತೃತ್ವ

- Advertisement -
- Advertisement -

ಗೌರಿ ಲಂಕೇಶ್
20 ಆಗಸ್ಟ್, 2008 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಸಿನಿಕಳಲ್ಲ. ಆದ್ದರಿಂದ ನಮ್ಮ ದೇಶಕ್ಕೆ ಇನ್ನೂ ಭವಿಷ್ಯವಿದೆ ಇಲ್ಲಿ ಜಾತಿ, ಧರ್ಮ ದಂತಹ ಭೇದಗಳನ್ನು ಮೀರುವ ಜನರಿದ್ದಾರೆ. ಮಮತೆ ಮತ್ತು ಮಾನವೀಯತೆಗೆ ಇನ್ನೂ ಮೌಲ್ಯವಿದೆ ಎಂದು ಸಾರುವ ಒಂದು ನಿಜ ಕಥೆಯನ್ನು ಇಲ್ಲಿ ಹೇಳುತ್ತೇನೆ. ಈ ಕತೆಯ ಕೇಂದ್ರಬಿಂದು ವಿವೇಕ್ ಅಲಿಯಾಸ್ ಮುಜಾಫರ್ ಎಂಬ ಎಂಟು ವರ್ಷದ ಬಾಲಕ. ಮುಖ್ಯಪಾತ್ರಧಾರಿಗಳು ಆತನಿಗೆ ಜನ್ಮಕೊಟ್ಟ ಜಬುನ್ನೀಸಾ ಮತ್ತು ಸಲೀಂ ಎಂಬ ಮುಸ್ಲಿಂ ದಂಪತಿಗಳು ಹಾಗೂ ಆತನನ್ನು ಕಳೆದ ಆರು ವರ್ಷಗಳಿಂದ ಅಕ್ಕರೆಯಿಂದ ಸಾಕಿರುವ ವೀಣಾಪಟ್ನಿ ಎಂಬ ಹಿಂದೂ ತಾಯಿ.
ವಿವೇಕ್ ಅಲಿಯಾಸ್ ಮುಜಾಫರ್‍ನ ಕಥೆ ಪ್ರಾರಂಭವಾಗುವುದು 2002ರಿಂದ. ಅದು ಫೆಬ್ರವರಿ 28. ಹಿಂದಿನ ದಿನವೇ ಗೋದ್ರದಲ್ಲಿ ಸಬರಮತಿ ರೈಲಿನ ಹಲವು ಬೋಗಿಗಳಿಗೆ ಬೆಂಕಿ ಬಿದ್ದು 59 ಅಮಾಯಕರು ಆಹುತಿಯಾಗಿದ್ದರು. ಅದಕ್ಕೆ ಪ್ರತಿಯಾಗಿ ಅಮಾಯಕ ಮುಸಲ್ಮಾನರ ಮೇಲೆ ಹಿಂದುತ್ವವಾದಿಗಳ ದಾಳಿ ಶುರುವಾಗಿತ್ತು.
ಸಲೀಂ ತನ್ನ 2 ವರ್ಷದ ಮಗ ಮುಜಾಫರ್‍ನೊಂದಿಗೆ ಅಹಮದಾಬಾದಿನ ಗುಲ್ಬರ್ಗ್ ಸೊಸೈಟಿಗೆ ಹೋಗಿದ್ದರು. ಆಗ ಅಲ್ಲೇ ಇದ್ದ ಕಾಂಗ್ರೆಸ್‍ನ ಮಾಜಿ ಸಂಸದ ಇಶಾನ್ ಜಾಫ್ರಿಯವರ ಮನೆ ಮೇಲೆ ಹಿಂದೂತ್ವವಾದಿಗಳ ಗುಂಪೊಂದು ದಾಳಿ ಇಟ್ಟು, ಜಾಫ್ರಿ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿತ್ತಲ್ಲದೆ, ಅವರ ಮನೆಗೆ ಬೆಂಕಿ ಇಟ್ಟು ಅವತ್ತು ಅವರೊಂದಿಗಿದ್ದ ಎಷ್ಟೋ ಜನರನ್ನು ಕೊಂದು ಹಾಕಿತು. ಇಂತಹ ಅಮಾನುಷ ಗುಂಪಿನಿಂದ ತಪ್ಪಿಸಿಕೊಳ್ಳಲು ಸಲೀಂ ಓಡಿದರು. ಅವರು ವಾಪಸ್ಸು ಬಂದಾಗ, ಹಿಂದುತ್ವವಾದಿಗಳ ಗುಂಪು ಕೊಂದು ಹಾಕಿದ್ದ ಅವರ ಅಜ್ಜಿಯ ಹೆಣ ಇತ್ತೇ ಹೊರತು ಮಗ ಮುಜಾಫರ್‍ನ ಸುಳಿವಿರಲಿಲ್ಲ. ಸುಮಾರು ಎರಡು ತಿಂಗಳ ಕಾಲ ನಡೆದ ಮಾರಣ ಹೋಮದಲ್ಲಿ ಸುಮಾರು ಮೂರು ಸಾವಿರ ಮುಸಲ್ಮಾನರು ಸಾವನ್ನಪ್ಪಿದರೆ, 400ಕ್ಕೂ ಹೆಚ್ಚು ಜನ ಮತ್ತು ಮಕ್ಕಳು ನಾಪತ್ತೆಯಾದರು.
ಅವತ್ತಿನಿಂದ ಮುಜಾಫರ್‍ಗಾಗಿ ತುಂಬಾ ಹುಡುಕಾಡಿದರು, ಪೊಲೀಸರಿಗೆ ದೂರು ನೀಡಿದರು, ತಮ್ಮ ಮಗ ಎಲ್ಲೋ ಸುರಕ್ಷಿತವಾಗಿದ್ದಾನೆ, ಸಿಕ್ಕೇ ಸಿಗುತ್ತಾನೆ ಎಂಬ ಆಶೆಯಲ್ಲಿ ಬದುಕುತ್ತಿದ್ದರು.

veena patni and muzaffar

ಅವರಿಗೆ ಗೊತ್ತಿಲ್ಲದಿದ್ದು ಏನೆಂದರೆ ಪ್ರವೀಣ್ ಪಟ್ನಿ ಎಂಬ ಪೊಲೀಸ್ ಪೇದೆ ತನಗೆ ಸಿಕ್ಕ ಮುಜಾಫರ್‍ನನ್ನು ತನ್ನ ಸಂಬಂಧಿಕರಾದ ವಿಕ್ರಮ್ ಮತ್ತು ವೀಣಾ ಪಟ್ನಿ ಎಂಬ ದಂಪತಿಗಳಿಗೆ ನೀಡಿದ್ದ. ಪಟ್ನಿ ದಂಪತಿಗಳು ಮಕ್ಕಳಿಲ್ಲದವರಾಗಿರಲಿಲ್ಲ, ಹಣವಂತರೂ ಆಗಿರಲಿಲ್ಲ. ಅವರಿಬ್ಬರಿಗೆ ಬೆಳೆದು ನಿಂತಿದ್ದ 4 ಮಕ್ಕಳಿದ್ದರು. ವಿಕ್ರಂ ಕೂಲಿ ಕೆಲಸ ಮಾಡುತ್ತಿದ್ದರೆ, ವೀಣಾ ಮೀನು ಮಾರಿ ಹಣ ಸಂಪಾದಿಸುತ್ತಿದ್ದರು.
ನಾನು ಯಾರು, ಎಲ್ಲಿಂದ ಬಂದೆ ಎಂಬುದು ಗೊತ್ತಿರದ 2 ವರ್ಷದ ಬಾಲಕ ತಮ್ಮ ಸುಪರ್ದಿಗೆ ಬಂದ ನಂತರ ಆತನಿಗೆ ವಿವೇಕ್ ಎಂದು ಮರುನಾಮಕರಣ ಮಾಡಿದ ಪಟ್ನಿ ದಂಪತಿಗಳು ಅವನನ್ನು ಪ್ರೀತಿಯಿಂದಲೇ ಸಲಹಲಾರಂಭಿಸಿದರು. ಆತನಿಗೆ ಕೈತುತ್ತು ನೀಡುತ್ತಾ, ಕೈ ಹಿಡಿದು ನಡೆಸುತ್ತ, ಜೋಗುಳ ಹಾಡುತ್ತಾ, ಆತ ತನಗೆ ಹುಟ್ಟಿದ ಮಗು ಎಂಬಷ್ಟು ಅಕ್ಕರೆಯಿಂದ ವೀಣಾ ಬೆಳೆಸಿದರು.
ಇತ್ತ ತೀಸ್ತಾ ಸೆಟಲ್ವಾಡ್‍ರ ನೆರವಿನೊಂದಿಗೆ ಮಗನಿಗಾಗಿ ಹುಡುಕಾಟವನ್ನು ಸಲೀಂ, ಜಬುನ್ನೀಸಾ ಮುಂದುವರಿಸಿದ್ದರು. ಕೊನೆಗೂ ಮುಜಾಫರ್ ಎಲ್ಲಿದ್ದಾನೆ ಎಂದು ಪತ್ತೆ ಹೆಚ್ಚಿದ ಅವರು ಆತನನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ವಿವೇಕ್ ಅವರ ಮಗ ಎಂಬುದಕ್ಕೆ ಸಾಕ್ಷಿ ಏನೆಂದು ವೀಣಾ ಪ್ರಶ್ನಿಸಿದಾಗ ಸಲೀಂ ಮತ್ತು ವಿವೇಕ್ ಆಲಿಯಾಸ್ ಮುಜಾಫರ್ ಡಿಎನ್‍ಎ ಪರೀಕ್ಷಿಸಲಾಯಿತು. ಅದರಿಂದ ವಿವೇಕ್ ನಿಜವಾಗಲೂ ಸಲೀಂ ಮತ್ತು ಜಬುನ್ನೀಸ್ಸಾರ ಮಗ ಎಂದು ಸಾಬೀತಾಯಿತು.
ಆದರೆ ಆರು ವರ್ಷಗಳ ಕಾಲ ಆತನನ್ನು ತನ್ನ ಮಗನೆಂದು ಬೆಳೆಸಿದ್ದ ವೀಣಾ ಅವನನ್ನು ಹೆತ್ತವರಿಗೆ ಹಿಂದಿರುಗಿಸಲು ಒಪ್ಪಲಿಲ್ಲ. ಆಗ ಸಲೀಂ ಮತ್ತು ಜಬುನ್ನೀಸಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ದುರಂತಕ್ಕೆ ವಿವೇಕನಿಗೆ ತನಗೆ ಜನ್ಮ ನೀಡಿರುವವವರ ನೆನಪೇ ಇರಲಿಲ್ಲ ಮಾತ್ರವಲ್ಲ, ನ್ಯಾಯಾಧೀಶರ ಮುಂದೆ ತಾನು ವೀಣಾ ಅಮ್ಮನೊಂದಿಗೆ ಇರುತ್ತೇನೆ ಎಂದ. ಕಾನೂನಿನ ಪ್ರಕಾರ ಆತ ಹೆತ್ತವರಿಗೆ ಸೇರಬೇಕಿದ್ದರು ಆ ಬಾಲಕನ ಮನಸ್ಸನ್ನು ನೋಯಿಸಬಾರದು ಎಂದು ಅವನನ್ನು ವೀಣಾರೊಂದಿಗೆ ಬಿಡಲಾಯಿತು.
ಸಲೀಂ ಮತ್ತು ಜಬುನ್ನಿಸ್ಸಾರಿಗೆ ತಮ್ಮ ಮಗನ ಮೇಲೆ ವೀಣಾರವರಿಗೆ ಇರುವ ಪ್ರೀತಿ ಅರ್ಥವಾಗುತ್ತದೆ. ಹಾಗಂತ ಹೆತ್ತ ಕುಡಿಯನ್ನು ಮರೆತು ಸುಮ್ಮನಿರಲಾಗುವುದಿಲ್ಲ. ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸುವ ಸಲೀಂ “ವೀಣಾ ನನ್ನ ಮಗನ ದೊಡ್ಡಮ್ಮ ಆಗಿರಲಿ, ನನ್ನ ಹೆಂಡತಿಯೇ ಆತನಿಗೆ ಚಿಕ್ಕಮ್ಮನಾಗಿರಲಿ. ನಾನು ಅವರನ್ನು ಅತ್ತಿಗೆಯಂತೆ ನೋಡಿಕೊಳ್ಳುತ್ತೇನೆ. ಆದರೆ ನಮಗೆ ನಮ್ಮ ಮಗ ಬೇಕು” ಎನ್ನುತ್ತಾರೆ.
ಬರ್ಟೋಲ್ಡ್ ಬ್ರೆಕ್ಟ್ ರವರ ‘ಕಕೇಶಿಯನ್ ಚಾಕ್ ಸರ್ಕಲ್’ ಎಂಬ ನಾಟಕದಲ್ಲಿ ಹೆತ್ತ ತಾಯಿಯೇ ತನ್ನ ಮಗನನ್ನು ಎಳೆದಾಡಲು ಸಿದ್ಧರಿರುತ್ತಾಳೆ. ಆದರೆ ಆತನನ್ನು ಸಾಕಿ ಸಲುಹಿದ ದತ್ತು ತಾಯಿ ಅವರಿಗೆ ನೋವಾಗಕೂಡದೆಂದು ಅವನನ್ನು ತನ್ನತ್ತ ಎಳೆಯಲು ನಿರಾಕರಿಸುತ್ತಾಳೆ.
ಆದರೆ ಬೈಬಲ್‍ನಲ್ಲಿ ಬರುವ ‘ಜಡ್ಜ್‍ಮೆಂಟ್ ಆಫ್ ಸೋಲಮನ್’ ಪ್ರಸಂಗದಲ್ಲಿ ನ್ಯಾಯಾಧೀಶ ಸೊಲಮನ್ ಮಗುವನ್ನು ಕತ್ತರಿಸಿ ಇಬ್ಬರು ತಾಯಂದಿರಿಗೆ ಹಂಚಲು ತಯಾರಾದಾಗ, ಆತನನ್ನು ಹೆತ್ತ ತಾಯಿ “ತನ್ನ ಮಗುವನ್ನು ಕೊಲ್ಲಬೇಡಿ ಅವಳಿಗೆ ಕೊಡಿ” ಎಂದು ಕಣ್ಣೀರಿಡುತ್ತಾಳೆ.
ಅಂದರೆ ಹೆತ್ತ ತಾಯಿಯ ಪ್ರೀತಿ ದೊಡ್ಡದು, ಸಾಕಿ ಸಲುಹಿದ ತಾಯಿಯ ಮಮತೆ ಹೆಚ್ಚಿನದು ಎಂದು ತೀರ್ಮಾನಿಸುವುದು ಸುಲಭವಲ್ಲ. ಇವತ್ತು ಜಾತಿ, ಧರ್ಮ, ಅಂತಸ್ತು ಎಂದೆಲ್ಲ ಬಹಳಷ್ಟು ಜನ ಅಂಧರಾಗಿರುವಾಗ ಈ ಪುಟ್ಟ ಬಾಲಕ ಮತ್ತು ಆತನ ಇಬ್ಬರು ತಾಯಂದಿರು ಅವುಗಳನ್ನೆಲ್ಲ ಮೀರಿ ಮಾತೃತ್ವ, ಮಮತೆ ಮತ್ತು ಮಾನವೀಯತೆಯ ಪ್ರತಿಬಿಂಬಗಳಾಗಿದ್ದಾರೆ.
ಈಗಾಗಲೇ ಧರ್ಮದ ಹೆಸರಲ್ಲಿ ಸಾಕಷ್ಟು ದ್ವೇಷ ಮತ್ತು ರಕ್ತಪಾತವನ್ನು ಕಂಡಿರುವ ಗುಜರಾತ್ ಈ ಪ್ರಕರಣದಲ್ಲಾದರೂ ತನ್ನ ಅಂತರಾಳದಲ್ಲಿರುವ ಮನುಷ್ಯತ್ವವನ್ನು ಕಂಡುಕೊಳ್ಳುವಂತಾಗಲಿ.
ಹಾಗಾದರೆ ಎಷ್ಟು ಚೆನ್ನ ಅಲ್ಲವೇ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...