Homeಮುಖಪುಟಸಮುದ್ರದ ಅಲೆ ರಾಜಾಜ್ಞೆಗಾಗಿ ಕಾಯುವುದಿಲ್ಲ - ಅಮಿತ್ ಭಾದುರಿ

ಸಮುದ್ರದ ಅಲೆ ರಾಜಾಜ್ಞೆಗಾಗಿ ಕಾಯುವುದಿಲ್ಲ – ಅಮಿತ್ ಭಾದುರಿ

ಇಟಲಿಯ ಪಾವಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಅಮಿತ್ ಭಾದುರಿಯವರು ರೈತ ಹೋರಾಟದ ಕುರಿತು ನಾನುಗೌರಿ.ಕಾಂಗಾಗಿ ಬರೆದ ವಿಶೇ‍ಷ ಲೇಖನ.

- Advertisement -
- Advertisement -

ತಾನು ಕಂಡ ಜಾಗವನ್ನೆಲ್ಲಾ ಆಳುವ ರಾಜನೆಂದೇ ಆತ ಜನಜನಿತನಾಗಿದ್ದ. ಹೀಗೆ ದಂತಕತೆಯಾಗಿದ್ದ ರಾಜ ಕನೂಟ್, ತನ್ನ ರಾಜಪಾದ ಮತ್ತು ನಿಲುವಂಗಿ ತೊಯ್ಯಬಾರದು ಎಂದು ಉಕ್ಕಿ ಬರುತ್ತಿದ್ದ ಅಲೆಗೆ ವಾಪಸ್ ತೆರಳಲು ಆದೇಶಿಸಿದ. ರಾಜನ ದೈವಿಕ ಶಕ್ತಿಯ ಹೊರತಾಗಿಯೂ, ಸಮುದ್ರದ ಅಲೆ ಆದೇಶವನ್ನು ಪಾಲಿಸದೆ ಇದ್ದುದು, ಆತನ ಆಸ್ಥಾನಿಕರನ್ನೆಲ್ಲ ಮುಜುಗರಕ್ಕೀಡುಮಾಡಿತು. ಈ ದಂತಕತೆಯು ಬದುಕುಳಿಯುತ್ತದೆ, ಏಕೆಂದರೆ ಮುಖಸ್ತುತಿಯಿಂದ ಪೋಷಿಸಲ್ಪಟ್ಟ ಅಹಂಕಾರಕ್ಕೆ ಅದು ಸತ್ಯವನ್ನು ಹೇಳುತ್ತದೆ.

ಆಧುನಿಕ ಪ್ರಜಾಪ್ರಭುತ್ವಗಳು ಪ್ರಜಾತಾಂತ್ರಿಕವಾಗಿ ಚುನಾಯಿತರಾದ ನಾಯಕರಿಗೆ ದೈವಿಕ ಶಕಿಯನ್ನು ದಯಪಾಲಿಸುವುದಿಲ್ಲ. ಆದರೆ ಅದು ಆತನಿಗೆ /ಆಕೆಗೆ ನಿರಂಕುಶಾಧಿಕಾರಿಯಾಗಲು ಅವಕಾಶ ನೀಡುತ್ತದೆ, ಸರ್ವಾಧಿಕಾರಿಯಾಗಲಲ್ಲ. ಸಂಸತ್ತಿನಲ್ಲಿ ಅಂಗೀಕಾರವಾದ ಕಾನೂನಿನ ಪ್ರಕಾರ ಆತ ಪ್ರಜಾತಾಂತ್ರಿಕವಾಗಿ ಆಡಳಿತ ನಡೆಸುತ್ತಾನೆ. ವಿಶೇಷವಾಗಿ ಈ ದಿನಗಳಲ್ಲಿ, ಜಗತ್ತಿನ ವಿವಿಧ ದೇಶಗಳಲ್ಲಿ, ಸಾಂಕ್ರಾಮಿಕದ ಮರೆಯಲ್ಲಿ, ಪ್ರಜಾಪ್ರಭುತ್ವದಲ್ಲಿ ನಿರಂಕುಶ ಪ್ರವೃತ್ತಿಗಳು ಸುಲಭವಾಗಿ ತಲೆಯೆತ್ತುತ್ತಿವೆ. ಅದು ವಿರೋಧವೇ ಇರದ ಭೂತದ ಸಂಸತ್ ರೀತಿಯದ್ದು ಆಗಿರಬಹುದು, ಅದು ಆರೋಗ್ಯ ತುರ್ತು ಪರಿಸ್ಥಿತಿಯ ಹೆಸರಲ್ಲಿ ಅಮಾನತುಗೊಂಡ ಸಂಸತ್ ಆಗಿರಬಹುದು ಅಥವಾ ಮುಂದೆಂದೋ ತಿದ್ದುಕೊಂಡು ಸರಿಹೋಗುವವರೆಗೆ, ಅದು ಸಾಧ್ಯವಾದರೆ, ಅಲ್ಲಿಯವರೆಗೂ ಸಂಸತ್ತಿನಲ್ಲಿ ವಿವೇಚನಾರಹಿತ ಬಹುಮತದ ಪರಿಣಾಮದಿಂದಾಗಿ ರೂಪುಗೊಳ್ಳುವ ಅಭ್ಯಾಸವಾಗಿರಬಹುದು.

ಇತ್ತೀಚೆಗೆ ಸಂಸತ್ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನಾ ಅಲೆಯೇ ಎದ್ದಿರುವುದು ಈಗ ಇತಿಹಾಸ. (ಪ್ರಮುಖವಾಗಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ರೈತರಿಂದ ಮುನ್ನಡೆಸಲ್ಪಡುತ್ತಿರುವ ಈ ಹೋರಾಟದ ಅಲೆಗೆ ಈಗ ದೇಶದ ಇತರ ಭಾಗಗಳ ರೈತರು ಸೇರಿಕೊಳ್ಳುತ್ತಿದ್ದಾರೆ.) ಈ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕೇಳುತ್ತಿರುವ ಅವರು, ಎಲ್ಲ ಅಗತ್ಯ ಕೃಷಿ ಉತ್ಪನ್ನಗಳಿಗೆ ಸಮಂಜಸ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಲಿಖಿತ ಕಾನೂನನ್ನು ಕೇಳುತ್ತಿದ್ದಾರೆಯೇ ಹೊರತು ಅಲಿಖಿತ ಆಶ್ವಾಸನೆಯನ್ನಲ್ಲ. ಆದರೆ ಸರ್ಕಾರಕ್ಕೆ ಇಷ್ಟವಿಲ್ಲ.

ಒಳಕ್ಕೆ ಉಕ್ಕಿ ಹರಿಯುತ್ತಿರುವ ಪ್ರತಿಭಟನೆಗಳ ಉಬ್ಬರವಿಳಿತದ ಅಲೆಯು ಈಗ ಪ್ರಜಾಪ್ರಭುತ್ವ ನಾಯಕನ ಸಿಂಹಾಸನವನ್ನು ತಲುಪಿ, ಆತನ ಪಾದ ಮತ್ತು ನಿಲುವಂಗಿಗಳನ್ನು ಒದ್ದೆ ಮಾಡುವುದರ ಸನಿಹದಲ್ಲಿದೆ, ಆದರೆ ಅದನ್ನು ಬಲಪ್ರಯೋಗದ ಮೂಲಕ ತಡೆಯಲಾಗುತ್ತಿದೆ. ಪೊಲೀಸರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಳವಾದ ಗುಂಡಿಗಳನ್ನು ತೋಡಲು ಮತ್ತು ಬ್ಯಾರಿಕೇಡ್, ಜಲಫಿರಂಗಿ, ಅಶ್ರುವಾಯುಗಳನ್ನು ಬಳಸಲು ಹೇಳಿದ್ದು ರೈತರಲ್ಲ, ಅಧಿಕಾರದಲ್ಲಿರುವ ಸರ್ಕಾರಗಳೇ. ಇಷ್ಟಾದರೂ ಪ್ರತಿಭಟನೆಯ ಅಲೆಗಳು ಸಾಯಲಿಲ್ಲ, ಬದಲಿಗೆ ಅವು ಇನ್ನಷ್ಟು ಎತ್ತರಕ್ಕೆ ಏರುತ್ತ, ರಾಜಧಾನಿಯ ಗಡಿಯ ಆಯ್ದ ಸ್ಥಳಗಳಲ್ಲಿ ಕ್ರೋಢೀಕರಣಗೊಳ್ಳುತ್ತಿವೆ. ಪ್ರತಿರೋಧವು ಬೃಹತ್ ಪ್ರಮಾಣದಲ್ಲಿ ಹೆಚ್ಚುತ್ತಿದೆ ಮತ್ತು ದೇಶದ ಇತರ ಭಾಗಗಳಿಗೂ ಹಬ್ಬುತ್ತಿದೆ.

ತನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಾಯಕ ಹೇಳುತ್ತಾನೆ. ತನ್ನ ನಾಯಕತ್ವವನ್ನು ಅನುಸರಿಸಿದರೆ, ಈ ಕಾನೂನುಗಳು ಸಮೃಧ್ಧಿ ತರುತ್ತವೆ ಮತ್ತು ಕೆಲವೇ ವರ್ಷಗಳಲ್ಲಿ ದ್ವಿಗುಣ ಆದಾಯವನ್ನು ತಂದುಕೊಡಲಿವೆ ಎಂದು ನಾಯಕ ಹೇಳುತ್ತಾನೆ. ಆತನ ಆಸ್ಥಾನಿಕರು ಮತ್ತು ಹಿಂಬಾಲಕರು ಕೂಡ ಮಾರುಕಟ್ಟೆಯ ಮ್ಯಾಜಿಕ್‌ಅನ್ನು ನಂಬುತ್ತಾರೆ. ಕನಿಷ್ಠ ಬೆಂಬಲ ಬೆಲೆ ಸಮೃದ್ಧಿಗೆ ಅಡ್ಡಿಯಾಗಿದೆ, ಕೇವಲ ಮುಕ್ತ ಮಾರುಕಟ್ಟೆ ಮಾತ್ರ ಅದನ್ನು ತಂದು ಕೊಡಬಲ್ಲದು, ಈ ಮೂರು ಕಾಯ್ದೆಗಳ ಉದ್ದೇಶ ಮುಕ್ತ ಮಾರುಕಟ್ಟೆ ಸೃಷ್ಟಿಸುವುದೇ ಆಗಿದೆ ಎನ್ನುತ್ತಿದ್ದಾರೆ. ಅಂಬಾನಿ ತಂಡ ಕೃಷಿ ಉತ್ಪನ್ನಗಳ ತನ್ನ ಚಿಲ್ಲರೆ ಔಟ್‌ಲೆಟ್‌ಗಳನ್ನು ವಿಸ್ತರಿಸುವ ಮುಕ್ತ ಮಾರುಕಟ್ಟೆಯಿದು. ಈಗಾಗಲೇ ನಿರ್ಮಿಸಿರುವ ಗೋದಾಮುಗಳನ್ನು ತುಂಬಿಸಲು ಹತಾಶರಾಗಿ ಕಾಯುತ್ತಿರುವ ಅದಾನಿಯ ಜನರು, ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರೊಂದಿಗೆ ಬೆಳೆ ಬೆಲೆ ಖರೀದಿಗೆ ಚೌಕಾಸಿ ನಡೆಸುವಂತಹ ಮುಕ್ತ ಮಾರುಕಟ್ಟೆಯಿದು. ಇದಲ್ಲದೆ, ಭಿನ್ನಾಭಿಪ್ರಾಯದ ಸಂದರ್ಭದಲ್ಲಿ, ಸಿವಿಲ್ ಕೋರ್ಟ್ ಅಲ್ಲ, ಕಾನೂನನ್ನು ಅಂಗೀಕರಿಸಿದ ಕೇಂದ್ರ ಸರ್ಕಾರ ತೀರ್ಪು ನೀಡುತ್ತದೆ. ಭೌಗೋಳಿಕವಾಗಿ ಜಮೀನು ಹೊಂದಿರುವ ರಾಜ್ಯಗಳಿಗೆ ಕೂಡ ಈ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರ ಇಲ್ಲ. ಕಾನೂನುಗಳನ್ನು ಪಾಸು ಮಾಡುವುದು, ಅವನ್ನು ಕಾರ್ಯಗತಗೊಳಿಸುವುದು ಮತ್ತು ವ್ಯಾಜ್ಯಗಳನ್ನು ಇತ್ಯರ್ಥ – ಇವೆಲ್ಲವನ್ನೂ ಕೇಂದ್ರ ಸರ್ಕಾರವೇ ಮಾಡಲಿದ್ದು, ಭಾರತ ಸಂವಿಧಾನ ರೂಪಿಸಿರುವ ಅಧಿಕಾರ ಹಂಚಿಕೆ ಮತ್ತು ವಿಕೇಂದ್ರೀಕರಣದ ಒಕ್ಕೂಟ ಪ್ರಜಾಪ್ರಭುತ್ವದ ಬದಲು, ಏಕೀಕೃತ ಅಧಿಕಾರವನ್ನು ಸ್ಥಾಪಿಸುವುದು ಕೇಂದ್ರ ಸರ್ಕಾರದ ಹುನ್ನಾರ. ಅಂತಹ ಯಾವುದೇ ಕಾನೂನುಗಳನ್ನು ಒಪ್ಪುವುದಿಲ್ಲ ಎಂದು ರೈತರು ಹೇಳುತ್ತಾರೆ. ಆದರೆ ಮಾಧ್ಯಮಗಳ ಮುಂದೆ ನಾಯಕ ಗಂಭೀರ ಧ್ವನಿಯಲ್ಲಿ ಮತ್ತೆ ಮತ್ತೆ ಹೇಳುತ್ತಾನೆ: ‘ತನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದು.

ಜಿಯೋ ಟವರ್ ಮೇಲೆ ರೈತರು ಮಾಡಿದ ದಾಳಿಯನ್ನು ಪರೋಕ್ಷವಾಗಿ ಖಂಡಿಸಿದ ಪ್ರಧಾನಿ
Photo Courtesy: DNA India

ಆತನ ಆಸ್ಥಾನಿಕರು ಮತ್ತು ಸಂದಾಯಿತ ಪಂಡಿತರು ದೊಡ್ಡ ಮಾಧ್ಯಮಗಳ ಮೂಲಕ ಉತ್ಸಾಹದಿಂದ ಪುನರಾವರ್ತನೆ ಮಾಡುತ್ತಾರೆ: ‘ನಮ್ಮ ನಾಯಕನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು. ಇದಕ್ಕೆ ಕಾರಣ ಪಾಕಿಸ್ತಾನಿಗಳು, ಖಲಿಸ್ತಾನಿಗಳು, ಮಾವೋವಾದಿಗಳು, ನಗರ ನಕ್ಸಲರು ಇರಬಹುದು, ಬಹುಷಃ ಇವರೆಲ್ಲರೂ ಆ ಪ್ರತ್ಯೇಕವಾದಿ ಎಲಿಮೆಂಟುಗಳ ಮೂಲಕ ಒಳ ನುಸುಳಿದ್ದಾರೆ. ಇವರೆಲ್ಲ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು.

ಇದೇನೂ ಮೊದಲ ಸಲವಲ್ಲ. ಮುಸ್ಲಿಮರು ಸಿಎಎ ಅನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. 370 ವಿಧಿ ಹಿಂಪಡೆದ ಸೌಂದರ್ಯವನ್ನು ಕಾಶ್ಮೀರಿಗಳು ನೋಡಲಿಲ್ಲ. ಜಿಎಸ್‌ಟಿ ಅರ್ಥವಾಗದವರಂತೆ ಮಾರಾಟ ವ್ಯವಸ್ಥೆ ವರ್ತಿಸಿತು. ಹೇಗೋ ಬದುಕುಳಿದಿದ್ದ ಬಡವರು ನೋಟು ಅಮಾನ್ಯೀಕರಣವನ್ನು ಅರ್ಥ ಮಾಡಿಕೊಳ್ಳಲಿಲ್ಲ, ಕೋವಿಡ್ ವೈರಸ್‌ಅನ್ನು ನಾಶ ಮಾಡಲು ಪರಿಣಾಮಕಾರಿಯಾದ ತ್ವರಿತ ಲಾಕ್‌ಡೌನ್ ಅರ್ಥ ಮಾಡಿಕೊಳ್ಳಲು ವಲಸೆ ಕೆಲಸಗಾರರಿಗೆ ಆಗಲಿಲ್ಲ. ಅದೇನೇ ಇರಲಿ, ನಾಯಕ ಮಾತ್ರ ದೃಢ ನಿಶ್ಚಯದಿಂದ ದೇಶ ಮುನ್ನಡೆಸುತ್ತಾನೆ ಎಂಬುದನ್ನೂ ಅರ್ಥ ಮಾಡಿಕೊಳ್ಳಲಿಲ್ಲ. ಇವು ಪುನರಾವರ್ತಿತವಾಗುತ್ತಲೇ ಇವೆ.

ನಿಜವಾದ ದೇಶಭಕ್ತರಿಗೆ ಮಾತ್ರ ನಾಯಕ ಅರ್ಥವಾಗುತ್ತಾನೆ, ದೇಶದ್ರೋಹಿಗಳು ಮಾತ್ರ ನಾಯಕನನ್ನು ವಿರೋಧಿಸುತ್ತಾರೆ. ಈಗ ರೂಪುಗೊಳ್ಳುತ್ತಿರುವ ನಮ್ಮ ಪ್ರಾಚೀನ ಅದ್ಭುತ ಹಿಂದೂ ರಾಷ್ಟ್ರವನ್ನು ತುಂಡು ಮಾಡಲು ಬಯಸುವವರು (ತುಕಡೆ ತುಕ್ಡೆ ಗ್ಯಾಂಗ್) ಮಾತ್ರ ನಾಯಕನನ್ನು ಟೀಕಿಸುತ್ತಾರೆ. ಅವರು ನೈಜವಾಗಿ ಈ ದೇಶಕ್ಕೆ ಸಂಬಂಧಿಸಿದವರೇ ಅಲ್ಲ, ಏಕೆಂದರೆ ಅವರು ಅದರ ಸಂಸ್ಕೃತಿಗೆ ಮತ್ತು ಅದರ ಭವ್ಯವಾದ, ವೈಜ್ಞಾನಿಕ ಸಂಪ್ರದಾಯಕ್ಕೆ ಅನ್ಯರಾಗಿದ್ದಾರೆ. ಎಂತಹ ವೈಜ್ಞಾನಿಕ ಸಂಪ್ರದಾಯ? ಗಣೇಶನ ಮುಖವನ್ನು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಆನೆಯ ಮುಖಕ್ಕೆ ಪರಿವರ್ತಿಸಿದ ವೈಜ್ಞಾನಿಕ ಸಂಪ್ರದಾಯ, ಅಲ್ಲಿ ಪ್ರಾಚೀನ ಬುದ್ಧಿವಂತರು (ಋಷಿಗಳು) ಬಹಳ ಹಿಂದೆಯೇ ಪಾತ್ರೆಗಳಿಂದ ಸದ್ದು ಮಾಡುವ ಮೂಲಕ ಮತ್ತು ಮೇಣದ ಬತ್ತಿಗಳ ಬೆಳಕಿನ ಮೂಲಕ ಸಾಂಕ್ರಾಮಿಕ ರೋಗಗಳ ವಿರುದ್ಧದ ಯುದ್ಧವನ್ನು ಹೇಗೆ ಗೆಲ್ಲಬಹುದು ಎಂಬುದನ್ನು ಕಂಡುಹಿಡಿದಿದ್ದರು.

6 ನೇ ಸುತ್ತಿನ

ಇದನ್ನು ನಾಯಕನ ಎಲ್ಲಾ ಆಸ್ಥಾನಿಕರು, ಮಂತ್ರಿಗಳು, ಪಂಡಿತರು ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಒಪ್ಪುತ್ತವೆಯೇ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಖಂಡಿತವಾಗಿಯೂ ಅವರು ಭಿನ್ನಾಭಿಪ್ರಾಯದ ಯಾವ ಕುರುಹನ್ನೂ ತೋರಲಾರರು. ಅರ್ಥ ಮಾಡಿಕೊಳ್ಳುವಿಕೆಗೆ ಬದಲಾಗಿ ಮುಖಸ್ತುತಿ (ಹೊಗಳುಭಟ್ಟತನ), ಪ್ರಶ್ನಿಸುವ ಗುಣದ ಬದಲಾಗಿ ನಿಷ್ಠೆ, ಭಿನ್ನಾಭಿಪ್ರಾಯದ ಬದಲಾಗಿ ಅಧೀನತೆ… – ರಾಜಕಾರಣದಲ್ಲಿ ಆಡಬೇಕಾದ ಏಕೈಕ ಆಟ ಇದು ಹೇಳಿಕೊಳ್ಳುತ್ತಾ ಮಾಡಲಾಗುತ್ತಿದೆ.

ಕನೂಟ್ ರಾಜನು ಸ್ಕ್ಯಾಂಡಿನಿವಿಯಾದ ಹೆಚ್ಚಿನ ಭಾಗವನ್ನು ಆಳಿದನು. ಬಲಪ್ರಯೋಗದಿಂದ ಬ್ರಿಟನ್‌ಅನ್ನು ವಶಪಡಿಸಿಕೊಂಡ. ಬಹಳಷ್ಟು ಇತಿಹಾಸಕಾರರು ಆತ ತುಂಬ ಜಾಣ ಆಡಳಿತಗಾರ ಎನ್ನುತ್ತಾರೆ. ಬಹುಷಃ ಎಷ್ಟೊಂದು ಜಾಣ ಎಂದರೆ ರಾಜನ ಅನಿರ್ಬಂಧಿತ ದೈವಿಕ ಶಕ್ತಿಯಲ್ಲಿ ನಂಬಿಕೆ ಇಡುವಷ್ಟು. ರಾಜನ ಆದೇಶಕ್ಕಿಂತಲೂ ಮಿಗಿಲಾದ ಮತ್ತು ಬಲವಾದ ಒಂದು ಶಕ್ತಿ ಒಳಹರಿವ ಅಲೆಗೆ ನಿರ್ದೇಶನ ನೀಡುತ್ತದೆ ಎಂದು ಅರ್ಥಮಾಡಿಕೊಂಡ. ನಿಜಕ್ಕೂ ಅಂದು ತನ್ನ ಈ ವಿವೇಕವನ್ನು ಪ್ರದರ್ಶಿಸಲು ಸಮುದ್ರದ ಪಕ್ಕವೇ ಅವನ ಸಿಂಹಾಸನವನ್ನು ಇಡಲಾಗಿತ್ತು. ತನ್ನ ವಿವೇಕವನ್ನು ಮರೆಮಾಚುವ ಉದ್ದೇಶದ ಆಸ್ಥಾನಿಕರ ಮುಖಸ್ತುತಿಯು ಆತನಿಗೆ ಅರ್ಥವಾಗಿತ್ತು. ಈ ಸಮುದ್ರ ಬದಿಯ ಪ್ರಕರಣ ಬಹಳ ಸರಳವಾದುದು, ಆದರೂ ಆತನ ಆಸ್ಥಾನಿಕರಿಗೆ ಮತ್ತು ನಾಗರಿಕರಿಗೆ ತನ್ನ ‘ಮನ್ ಕಿ ಬಾತ್’ನ ಒಂದು ಸಶಕ್ತ ಪ್ರದರ್ಶನವಾಗಿತ್ತು. ಹಾಗಾಗಿಯೇ ಅದು ಸಾವಿರಾರು ವರ್ಷಗಳಿಂದ ಇತಿಹಾಸದಲ್ಲಿ ದಂತಕತೆಯಾಗಿ ಉಳಿದಿದೆ. ರಾಜಾಜ್ಞೆಗಿಂತ ಸಮುದ್ರದ ಅಲೆಯು ಪ್ರಬಲ ಎಂಬ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಅವನ ಕಾಲದ ವಿವೇಕವಾಗಿತ್ತು. ನಮ್ಮ ಕಾಲದ ವಿವೇಕವೆಂದರೆ, ಸಂಸತ್ತಿನ ಯಾವುದೇ ಕಾನೂನಿಗಿಂತ, ಜನಪ್ರಿಯವಾದ ಅಲೆಗಳು ಹೆಚ್ಚು ಶಕ್ತಿಯುತವಾಗಿರುತ್ತವೆ ಎಂಬುದನ್ನು ತಿಳಿಯುವುದು. ಇದನ್ನು ಗೌರವಯುತವಾಗಿ ಒಪ್ಪಿಕೊಳ್ಳಲು ನಮ್ಮ ಕಾಲದಲ್ಲಿ ಮತ್ತು ದೇಶದಲ್ಲಿ ವಿವೇಕ ಉಳಿದಿದೆಯೇ?

  • ಪ್ರೊ. ಅಮಿತ್ ಭಾದುರಿ

ಅನುವಾದ: ಮಲ್ಲನಗೌಡರ್

ಪ್ರೊ. ಅಮಿತ್ ಭಾದುರಿ

ಭಾದುರಿ ಅವರು ಪ್ರಸ್ತುತ ಇಟಲಿಯ ಪಾವಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಸಾಮಾಜಿಕ ಅಭಿವೃದ್ಧಿ ಕೌನ್ಸಿಲ್‌ನಲ್ಲಿ ಅತಿಥಿ ಪ್ರಾಧ್ಯಾಪಕರು.


ಇದನ್ನೂ ಓದಿ: Explainer: ಕೃಷಿ ಕಾನೂನುಗಳ ಉದ್ದೇಶಿತ ಮತ್ತು ನಿರುದ್ದೇಶಿತ ಪರಿಣಾಮಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...