Homeಅಂಕಣಗಳುರಹಸ್ಯ ಭೇದಿಸಿ ಶೋಷಕರಿಗೆ ದಿಗಿಲು ಮೂಡಿಸಿದ್ದ ಅಸ್ಸಾಂಜ್ ಅವರ ವಿಕಿಲೀಕ್ಸ್

ರಹಸ್ಯ ಭೇದಿಸಿ ಶೋಷಕರಿಗೆ ದಿಗಿಲು ಮೂಡಿಸಿದ್ದ ಅಸ್ಸಾಂಜ್ ಅವರ ವಿಕಿಲೀಕ್ಸ್

- Advertisement -
- Advertisement -

ಅಸ್ಸಾಂಜ್ ಗಡಿಪಾರು ಮನವಿ ತಿರಸ್ಕೃತ

ಸದ್ಯಕ್ಕೆ ಬ್ರಿಟಿಷ್ ಪೊಲೀಸರ ವಶದಲ್ಲಿರುವ ಆಸ್ಟ್ರೇಲಿಯಾ ಮೂಲದ ಪತ್ರಕರ್ತ, ವಿಕಿಲೀಕ್ಸ್ ಸಂಸ್ಥಾಪಕ-ಸಂಪಾದಕ ಜೂಲಿಯನ್ ಅಸ್ಸಾಂಜ್ ಅವರ ಗಡಿಪಾರು ಮನವಿಯನ್ನು ಬ್ರಿಟನ್ ನ್ಯಾಯಲಯ ತಿರಸ್ಕರಿಸಿದೆ. ಅಮೆರಿಕದ ರಹಸ್ಯ ದಾಖಲೆಗಳನ್ನು ಬಯಲಿಗೆಳೆದ ಗೂಢಚರ್ಯೆ ಆರೋಪವನ್ನು ಎದುರಿಸುತ್ತಿರುವ ಅಸ್ಸಾಂಜ್ ಅವರು ಮಾಡಿದ ಪತ್ರಿಕೋದ್ಯಮ ಈ ಶತಮಾನದಲ್ಲಿ ಹಲವು ಕಾರಣಗಳಿಗೆ ಪ್ರಮುಖವಾದದ್ದು.

ಇಟಾಲಿಯನ್ ಚಿಂತಕ ದಿವಂಗತ ಅಂಬರ್ಟೋ ಇಕೋ ಅವರು ಗುರುತಿಸುವಂತೆ ಇತ್ತೀಚಿನವರೆಗೂ ಪ್ರಭುತ್ವಗಳು ಮಾತ್ರ ನಾಗರಿಕರ ಮೇಲೆ ಕಣ್ಗಾವಲು ಇರಿಸಬಹುದು ಅದರ ವಿರುದ್ಧದ ಪ್ರಕ್ರಿಯೆ ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ಬುಡಮೇಲು ಮಾಡಿದ್ದು ವಿಕಿಲೀಕ್ಸ್‌ನ ದಾಖಲೆಗಳು ಮತ್ತು ಪತ್ರಿಕೋದ್ಯಮ. ಪ್ರಭುತ್ವದ ಕೆಲಸ ಕಾರ್ಯಗಳ ಮೇಲೆ, ರಹಸ್ಯಗಳ ಮೇಲೆ ನಾಗರಿಕರು ಕೂಡ ಕಣ್ಣಿಡಬಹುದು, ಎಲ್ಲ ನಾಗರಿಕರು ಅಲ್ಲದಿದ್ದರೂ ಅವರ ಪ್ರತಿನಿಧಿಯೊಬ್ಬ ಅದನ್ನು ಮಾಡಿ ಪ್ರಭುತ್ವದ ಕರಾಳತೆಯನ್ನು ಬಯಲಿಗೆಳೆಯಬಹುದು ಎಂದು ತೋರಿಸಿಕೊಟ್ಟಿದ್ದು ಅಸ್ಸಾಂಜ್ ಅವರ ಈ ಎಪಿಸೋಡ್.

ವಿಕಿಲೀಕ್ಸ್ ಹೆಚ್ಚು ಗಮನ ಹರಿಸಿದ್ದು ಮತ್ತು ಗುರಿಯಾಗಿಸಿಕೊಂಡಿದ್ದು ಅಂದಿನ ಅಮೆರಿಕ ಆಡಳಿತ ವ್ಯವಸ್ಥೆ ಮತ್ತು ಅದರ ಯುದ್ಧಪಿಪಾಸು ಸ್ವಭಾವದ ವಿರುದ್ಧ. ಅಮೆರಿಕ ಇರಾಕ್ ಮತ್ತು ಆಫ್ಘಾನಿಸ್ತಾನಗಳಲ್ಲಿ ನಡೆಸುತ್ತಿದ ಯುದ್ಧ ಕ್ರೌರ್ಯಗಳು, ಅಲ್ಲಿ ಆ ಪಡೆಗಳು ಸಾಮಾನ್ಯ ನಾಗರಿಕರ ವಿರುದ್ಧ ನಡೆಸಿದ ದೌರ್ಜನ್ಯಗಳು ಮತ್ತು ಸಾಮಾನ್ಯ ನಿಶ್ಯಸ್ತ್ರ ನಾಗರಿಕರನ್ನು ವಿಡಿಯೋ ಗೇಮ್ ಮಾದರಿಯಲ್ಲಿ ಕೊಂದ ಸಂಗತಿಗಳನ್ನು ವಿಕಿಲೀಕ್ಸ್ ಬಯಲು ಮಾಡಿದ್ದು ಮಾನವೀಯತೆ ಬಗ್ಗೆ ಎಚ್ಚರ ಉಳಿಸಿಕೊಂಡಿದ್ದ ಒಂದು ವಲಯಕ್ಕಾದರೂ ಬೆಚ್ಚಿ ಬೀಳಿಸಿತ್ತು. ಅಮೆರಿಕದ ಇಂತಹ ಕೃತ್ಯಗಳ ಬಗ್ಗೆ ಸಾಮಾನ್ಯ ನಂಬಿಕೆಯೊಂದು ಜನರಲ್ಲಿ ಮನೆಮಾಡಿತ್ತಾದರೂ, ಅದನ್ನು ದೃಢಪಡಿಸಿದ, ಅದಕ್ಕೆ ಪೂರಕ ದಾಖಲೆಗಳನ್ನು ನೀಡಿ ಸಾಬೀತುಪಡಿಸಿದ್ದ ಈ ಪತ್ರಿಕೋದ್ಯಮ ಪ್ರಭುತ್ವಗಳನ್ನು ಮೊಟ್ಟಮೊದಲ ಬಾರಿಗೆ ಈ ಮಟ್ಟದಲ್ಲಿ ಬೆಚ್ಚಿ ಬೀಳಿಸಿತ್ತು.

ವಿಕಿಲೀಕ್ಸ್ ಬಯಲು ಮಾಡಿದ ಒಂದು ಮಹತ್ವದ ಪ್ರಕರಣವನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವೆನಿಸುತ್ತದೆ. ಇರಾಕ್ ಮೇಲೆ ಅಮೆರಿಕ ಯುದ್ಧ ನಡೆಸುವ ಸಮಯದಲ್ಲಿ ನಡೆದ ಘಟನೆ ಅದು. ಜುಲೈ 2007ರಲ್ಲಿ ಜರುಗಿದ ಶೂಟಿಂಗ್ ಘಟನೆಯ ಒಂದು ವಿಡಿಯೋ ವಿಕಿಲೀಕ್ಸ್‌ನಲ್ಲಿ ಪ್ರಕಟಗೊಂಡ ಮೇಲೆ ಭಾರಿ ಸದ್ದು ಮಾಡಿತ್ತು. ಅಮೆರಿಕ ಯುದ್ಧ ವಿಮಾನದ ತಂಡ ಸುಳ್ಳು ಸುಳ್ಳೇ ಮಾಹಿತಿ ನೀಡಿ, ಸುಮಾರು 12 ಜನ ಅಮಾಯಕರನ್ನು ಗುಂಡಿಕ್ಕಿ ಕೊಲ್ಲುವ ಮತ್ತು ಹತ್ಯೆ ಮಾಡಿದ ಮೇಲೆ ವಾಯುಪಡೆಯ ಸೈನಿಕರು ಗಹಗಹಿಸಿ ನಗುತ್ತಾ ಮಾತನಾಡುವ ವಿಡಿಯೋ ಇದಾಗಿತ್ತು. ಈ ಶೂಟಿಂಗ್‌ನಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ 22 ವರ್ಷದ ಫೋಟೋ ಜರ್ನಲಿಸ್ಟ್ ನಮೀರ್ ನೂರ್-ಎಲ್ದೀನ್ ಮತ್ತು ಅವರ ಚಾಲಕ 40 ವರ್ಷದ ಸಯೀದ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯ ವಿಡಿಯೋ ಕೋರಿ ಪೆಂಟಗನ್‌ಗೆ ರಾಯ್ಟರ್ಸ್ ಮಾಡಿದ ಮನವಿಯನ್ನು ತಿರಸ್ಕರಿಸಿದ್ದ ಅಮೆರಿಕ ಸರ್ಕಾರ ಅಲ್ಲಿ ನಡೆದಿದ್ದ ಹತ್ಯೆಗಳನ್ನು ಸಮರ್ಥಿಸಿಕೊಂಡಿತ್ತು. ಆದರೆ ಮಿಲಿಟರಿ ಎನ್ಕ್ರಿಪ್ಶನ್ ಮುರಿದು ಈ ವಿಡಿಯೋವನ್ನು ವಿಕಿಲೀಕ್ಸ್ ಪ್ರಕಟ ಮಾಡಿದ ಮೇಲೆ ಅಮೆರಿಕ ಸರ್ಕಾರದ ಧೂರ್ತತನ ಬಟಾಬಯಲಾಗಿತ್ತು. ಇದರ ಪ್ರಕಟಣೆ ಅಮೆರಿಕವನ್ನು ಅತಿಹೆಚ್ಚು ಕೆರಳಿಸಿತು. ಏಕವ್ಯಕ್ತಿ ಅಸ್ಸಾಂಜ್ ವಿರುದ್ಧ ಯುದ್ಧ ಹೂಡಿ ಅವರನ್ನು ಬಂಧಿಸಲು ಅಮೆರಿಕ ಇವತ್ತಿಗೂ ಹವಣಿಸುತ್ತಲೇ ಇದೆ. ಹಲವು ವರ್ಷಗಳ ಕಾಲ ತಲೆಮರೆಸಿಕೊಂಡು ನಂತರ 2012ರಿಂದ ಬ್ರಿಟನ್‌ನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅಸ್ಸಾಂಜ್ ಆಶ್ರಯ ಪಡೆದಿದ್ದರು.

ಈ ರಾಜಕೀಯ ಆಶ್ರಯವನ್ನು ಈಕ್ವೆಡಾರ್ ಹಿಂತೆಗೆದುಕೊಂಡ ನಂತರ, ಅವರನ್ನು ಬ್ರಿಟಿಷ್ ಪೊಲೀಸರು ಜಾಮೀನು ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಈಗ ಅಮೆರಿಕದ ಜೈಲುಗಳಲ್ಲಿ ಸುರಕ್ಷತೆಯ ಕೊರತೆಯ ಕಾರಣದಿಂದಾಗಿ ಗಡಿಪಾರು ಮನವಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಅಸ್ಸಾಂಜ್ ತಮ್ಮನ್ನು ಸ್ವತಂತ್ರಗೊಳಿಸಲು ಅರ್ಜಿ ಹಾಕಲಿದ್ದಾರೆ ಎನ್ನಲಾಗಿದೆ.

ಭಾರತದ ಮಟ್ಟಿಗೂ ಈ ವಿಕಿಲೀಕ್ಸ್ ಹಲವು ವಿಷಯಗಳನ್ನು ಹೊರಹಾಕಿತ್ತು. ರಾಯಭಾರಿ ಕಚೇರಿ ಎಂದರೆ ರಾಜತಾಂತ್ರಿಕ ಸಂಬಂಧಗಳಿಗಾಗಿ ಇರುವುದಲ್ಲ, ಬದಲಾಗಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅಮೆರಿಕದ ಸರ್ಕಾರಕ್ಕೆ ವರದಿ ಮಾಡುವ, ಇಲ್ಲಿ ಔತಣಕೂಟಗಳನ್ನು ಏರ್ಪಡಿಸಿ ಮುಖಂಡರ ಮಾತುಗಳನ್ನು ಕದ್ದಾಲಿಸುವ, ಅವುಗಳನ್ನು ವಾಪಸ್ ತಮ್ಮ ದೇಶಕ್ಕೆ ವರದಿ ಮಾಡುವ, ಇಲ್ಲಿನ ಯೋಜನೆಗಳ ಮೇಲೆ ಹಸ್ತಕ್ಷೇಪ ಮಾಡಲು ಪ್ರಯತ್ನಿಸುವ ಏರ್ಪಾಡುಗಳು ಈ ರಾಯಭಾರಿ ಕಚೇರಿಗಳು ಎಂಬ ಸಾಮಾನ್ಯ ತಿಳಿವಳಿಕೆಯನ್ನು ವಿಕಿಲೀಕ್ಸ್ ದಾಖಲೆಗಳ ಸಮೇತ ಸಾಬೀತುಪಡಿಸಿತ್ತು.

ಹೀಗೆ ಪ್ರಭುತ್ವಗಳ ರಹಸ್ಯಗಳನ್ನು ಹೊರಗೆ ಎಳೆಯುವ (ಹಿಲರಿ ಕ್ಲಿಂಟನ್ ವಿರುದ್ಧ ಅಮೆರಿಕದ ಚುನಾವಣೆಯಲ್ಲಿಯೂ ಇದು ಪ್ರಭಾವ ಬೀರಿತ್ತು ಕೂಡ) ಸಾಧ್ಯತೆಯ ಬಗ್ಗೆ ವಿಕಿಲೀಕ್ಸ್ ನಂಬಿಕೆ ಹುಟ್ಟಿಸಿತ್ತಾದರೂ ಪ್ರಭುತ್ವಗಳ ಕ್ರೂರತನಕ್ಕೆ ಅದು ಸಾಟಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ವಿಸಲ್‌ಬ್ಲೋವರ್‌ಗಳಾದ ಅಸ್ಸಾಂಜ್ ಆಗಲಿ, ಸ್ನೋಡೆನ್ ಆಗಲಿ ತಲೆಮರೆಸಿಕೊಳ್ಳುವ, ಬೇರೊಂದು ದೇಶದಲ್ಲಿ ರಾಜಕೀಯ ಆಶ್ರಯ ಪಡೆಯುವ ಸ್ಥಿತಿಯಿಂದ ಹೊರಬರದ ಪರಿಸ್ಥಿತಿಯಲ್ಲಿ ಇದ್ದಾರೆ. ಇಂತಹ ಸ್ಥಿತಿ ಹೊಸದಾಗಿ ಹುಟ್ಟಿಕೊಳ್ಳಬಹುದಾದ ಜನಪರ ಹ್ಯಾಕರ್‌ಗೆ ಸ್ಫೂರ್ತಿ ನೀಡಲು ಎಲ್ಲಿ ಸಾಧ್ಯವಿದೆ?

ಅಷ್ಟೇ ಅಲ್ಲ, ಬ್ಲ್ಯಾಕ್‌ವಾಟರ್ ಯುದ್ಧ ಅಪರಾಧ ಎಂದೇ ಕುಖ್ಯಾತವಾದ ಪ್ರಕರಣವನ್ನು ಕೂಡ ವಿಕಿಲೀಕ್ಸ್ ಪ್ರಕಟಿಸಿತ್ತು. ಇರಾಕ್ ಯುದ್ಧದಲ್ಲಿ ಖಾಸಗಿ ರಕ್ಷಣಾ ಪಡೆಯನ್ನು ಅಮೆರಿಕ ಬಳಸಿಕೊಂಡಿತ್ತು. ಈ ಬ್ಲ್ಯಾಕ್‌ವಾಟರ್ ಪಡೆ ಸೆಪ್ಟಂಬರ್ 2007ರಲ್ಲಿ ಬಾಗ್ದಾದ್‌ನ ನಿಸ್ಸೋರ್ ವೃತ್ತದಲ್ಲಿ 17 ಸಾಮಾನ್ಯ ನಾಗರಿಕರ ಮಾರಣಹೋಮ ನಡೆಸಿತ್ತು. ಇಂತಹ ಸುಮಾರು 14 ಪ್ರತ್ಯೇಕ ಬ್ಲ್ಯಾಕ್‌ವಾಟರ್ ಕ್ರೌರ್ಯಗಳ ಬಗ್ಗೆ ವಿಕಿಲೀಕ್ಸ್ ಇರಾಕ್ ಫೈಲ್ಸ್ ವರದಿ ಮಾಡಿತ್ತು. ಇಂತಹ ಒಂದು ಪ್ರಕರಣದ ವಿಚಾರಣೆಯಾಗಿ ಬ್ಲ್ಯಾಕ್‌ವಾಟರ್‌ನ ನಾಲ್ಕು ಜನ ಸದಸ್ಯರಿಗೆ ಅಮೆರಿಕದ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಈಗ ಅಧ್ಯಕ್ಷ ಸ್ಥಾನ ತೊರೆಯುತ್ತಿರುವ ಡೊನಾಲ್ಡ್ ಟ್ರಂಪ್, ತಮ್ಮ ಇತ್ತೀಚಿನ ಆದೇಶದಲ್ಲಿ ಈ ನಾಲ್ವರಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದ್ದಾರೆ. ಅಮೆರಿಕ ಆಡಳಿತ ವ್ಯವಸ್ಥೆಯ ಈ ಪ್ರಹಸನ ಅಲ್ಲಿನ ಎಷ್ಟು ನಾಗರಿಕರಿಗೆ ಆಕ್ರೋಶ ತರಿಸದೆಯೋ ತಿಳಿಯದು!

ಇವೆಲ್ಲಾ ಹಿನ್ನಡೆಗಳ ಹೊರತಾಗಿಯೂ ಎಲ್ಲೋ ಯಾವುದೋ ಮೂಲೆಯಲ್ಲಿ ಜಗತ್ತಿನ ಎಲ್ಲ ಪ್ರಭುತ್ವಗಳ ಕ್ರೌರ್ಯಗಳನ್ನು ಕಣ್ಗಾವಲಿನಲ್ಲಿ ಇರಿಸಿರುವ ಯಾರೋ ಒಬ್ಬ ಹ್ಯಾಕರ್ ಖಂಡಿತಾ ಇದ್ದಾನೆ. ಹೆಚ್ಚು ಜನರೂ ಇರಬಹುದು. ಅಸ್ಯಾಂಜ್ ಅಂತಹ ಸ್ನೋಡೆನ್ ಅಂತಹ ವ್ಯಕ್ತಿಗಳ ಧೈರ್ಯ ಅವರಿಗೆ ಒಂದು ದಿನ ಸ್ಫೂರ್ತಿ ತರಬಲ್ಲದು. ನಿರಂಕುಶಪ್ರಭುತ್ವದ ಅಹಂಕಾರಕ್ಕೆ ಪೆಟ್ಟು ನೀಡಲು ಅವರೆಲ್ಲಾ ಕಾಯುತ್ತಿದ್ದಾರೆ. ಈ ಭಯ ಆ ಪ್ರಭುತ್ವಗಳಿಗೂ ಇದೆ ಎಂಬುದಂತೂ ನಿಜ.


ಇದನ್ನೂ ಓದಿ: ಅಂದು ಟ್ಯಾಗೋರ್ ದ್ವೇಷ, ಇಂದು ಅವರನ್ನೇ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಯತ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...