Homeಕರ್ನಾಟಕಕಾಂಗ್ರೆಸ್‍ಗೆ ಸೇರಿದ ಲಕ್ಷ್ಮೀನಾರಾಯಣ: ಸೋಮಣ್ಣರ ಸೀಕ್ರೆಟ್ ಡೀಲ್

ಕಾಂಗ್ರೆಸ್‍ಗೆ ಸೇರಿದ ಲಕ್ಷ್ಮೀನಾರಾಯಣ: ಸೋಮಣ್ಣರ ಸೀಕ್ರೆಟ್ ಡೀಲ್

- Advertisement -
- Advertisement -

ಇಂದು ಮಹತ್ವದ ಬೆಳವಣಿಗೆಯೊಂದು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದಿದೆ. ಅದರ ಮಹತ್ವವನ್ನು ಬಿಂಬಿಸಲೋ ಎಂಬಂತೆ, ಅದರಲ್ಲಿ ಬೆಂ.ದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್, ವಿಜಯನಗರದ ಶಾಸಕ ಎಂ.ಕೃಷ್ಣಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಖುದ್ದು ಹಾಜರಿದ್ದರು. ಬೆಂಗಳೂರಿನ ಮಾಜಿ ಉಪಮೇಯರ್ ಎಂ.ಲಕ್ಷ್ಮೀನಾರಾಯಣ್ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದೇ ಈ ವಿದ್ಯಮಾನ.

ಇದಕ್ಕೆ ಮಹತ್ವ ಬಂದಿರುವುದು ಸ್ವತಃ ಲಕ್ಷ್ಮೀನಾರಾಯಣ್‍ರ ಸಾಮಥ್ರ್ಯದಿಂದ ಅಷ್ಟೇ ಅಲ್ಲ. ಅವರ ಗುರು ವಿ.ಸೋಮಣ್ಣ ತಮ್ಮ ಅಸಮಾಧಾನದ ಕಾರಣಕ್ಕೆ, ಲಕ್ಷ್ಮೀನಾರಾಯಣರನ್ನು ಕಾಂಗ್ರೆಸ್ಸಿಗೆ ಕಳಿಸಿದ್ದಾರೆಂದು ಭಾವಿಸಲು ಹಲವು ಕಾರಣಗಳಿವೆ. ಹಳೇ ಬಿನ್ನಿಪೇಟೆ ಕ್ಷೇತ್ರದ ವಿ.ಸೋಮಣ್ಣರನ್ನು ವಿಜಯನಗರದ ವೀರಪುತ್ರ, ‘ಸೋಲಿಲ್ಲದ ಸರದಾರ’ (ಆ ನಂತರ ಸೋಮಣ್ಣ ಸೋತರು, ಆ ಮಾತು ಬೇರೆ) ಇತ್ಯಾದಿ ವಿಶೇಷಣಗಳಿಂದ ಕರೆಯಲಾಗುತ್ತಿದ್ದುದಕ್ಕೆ ಕಾರಣಗಳಿವೆ. ಜನತಾದಳದಿಂದ ಮತ್ತು ಕಾಂಗ್ರೆಸ್‍ನಿಂದ ಸತತ ಎರಡು ಬಾರಿ ಹಳೇ ಬಿನ್ನಿಪೇಟೆ ಕ್ಷೇತ್ರದಿಂದ ಗೆದ್ದ ಸೋಮಣ್ಣ, ನಂತರ ಯಾವ ಪಕ್ಷದ ಟಿಕೆಟ್ಟೂ ಬೇಡ ಎಂದು ಪಕ್ಷೇತರವಾಗಿಯೂ ನಿಂತು ಗೆದ್ದಿದ್ದರು!

ಅದೇ ಕ್ಷೇತ್ರದ ಲೇಔಟ್ ಕೃಷ್ಣಪ್ಪರಂತಹ ಒಬ್ಬ ಭಾರೀ ಕುಳ ಕಾಂಗ್ರೆಸ್ಸಿನಲ್ಲೇ ಇದ್ದಾಗಲೂ ಬಿನ್ನಿಪೇಟೆ ಕ್ಷೇತ್ರದ ಟಿಕೆಟ್ ಪಡೆಯಲು ಸಾಧ್ಯವೇ ಇಲ್ಲದ ಕಾರಣಕ್ಕೆ ಎಂಎಲ್‍ಸಿಯಷ್ಟೇ ಆದರು. ನಂತರ ಕ್ಷೇತ್ರದ ಪುನರ್‍ವಿಂಗಡಣೆಯಲ್ಲಿ ಗೋವಿಂದರಾಜನಗರದಿಂದ ಸೋಮಣ್ಣ ಮತ್ತು ವಿಜಯನಗರದಿಂದ ಕೃಷ್ಣಪ್ಪ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದಿದ್ದರು. ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಕಮಲಕ್ಕೆ ಒಳಗಾದವರಲ್ಲಿ ಸೋಮಣ್ಣ ಸಹಾ ಒಬ್ಬರು. ಆದರೆ, ಅವರ ವಿರುದ್ಧ ಕೃಷ್ಣಪ್ಪನವರ ಮಗ ಪ್ರಿಯಾಕೃಷ್ಣ ನಿಂತು, ಜೆಡಿಎಸ್‍ನ ಬೆಂಬಲದೊಂದಿಗೆ ಸೋಮಣ್ಣ ಸೋತಿದ್ದರು. ಇದು ಅವರನ್ನು ಹೈರಾಣಾಗಿಸಿ, ಬೇರೆ ಕ್ಷೇತ್ರದ ಹುಡುಕಾಟಕ್ಕೂ ಬಿದ್ದಿದ್ದರು. ಆದರೆ, ಈ ಸಾರಿ ಮತ್ತೆ ಪ್ರಿಯಾಕೃಷ್ಣರನ್ನು ಸೋಲಿಸುವ ಮುಂಚೆ ಸ್ವತಃ ಯಡಿಯೂರಪ್ಪನವರು ಸೋಮಣ್ಣರನ್ನು ಹುಡುಕಿಕೊಂಡು ಬಂದು ಸಮಾಧಾನ ಮಾಡಿ ಪಕ್ಷದಲ್ಲಿ ಉಳಿಸಿಕೊಂಡಿದ್ದರು. ಯಡ್ಡಿ ಸೋಮಣ್ಣರ ನಡುವಿನದ್ದು ಲವ್ & ಹೇಟ್ ಸಂಬಂಧವಾದರೆ, ಅನಂತಕುಮಾರ್‍ರ ಜೊತೆಗೂ ಸೋಮಣ್ಣ ಬಹಳ ಒಳ್ಳೆಯ ಸಂಬಂಧ ಹೊಂದಿದ್ದರು.

ಏಕೆಂದರೆ ಸೋಮಣ್ಣರಿಗಿರುವ ಪ್ರಭಾವ ಅಂಥದ್ದು. ಈ ಕ್ಷೇತ್ರದ ಸಾವಿರಾರು ಜನರನ್ನು ಹೆಸರಿನಿಂದ ಬಲ್ಲ ಸೋಮಣ್ಣ, ಯಾರು ಯಾವುದೇ ಸಮಸ್ಯೆ ತಂದರೂ ಬಗೆಹರಿಸುತ್ತಿದ್ದ ವ್ಯಕ್ತಿ. ಬೆಂಗಳೂರಿನ ಮೇಯರ್ ಸ್ಥಾನಕ್ಕೆ ನೇರ ಚುನಾವಣೆ ನಡೆಯಬೇಕು ಎಂಬ ಚರ್ಚೆಯಿದ್ದಾಗ ಅದಕ್ಕೆ ದೊಡ್ಡ ಮಟ್ಟದಲ್ಲಿ ಕೇಳಿಬಂದ ಹೆಸರು ಸೋಮಣ್ಣರದ್ದೇ.

ಸೋಮಣ್ಣ ತನ್ನ ಮಗನನ್ನು ರಾಜಕಾರಣಕ್ಕೆ ತರುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರಾದರೂ, ತನ್ನ ಆಪ್ತ ಶಿಷ್ಯರಾದ ಎಚ್.ರವೀಂದ್ರ ಮತ್ತು ಲಕ್ಷ್ಮೀನಾರಾಯಣ ಇಬ್ಬರಿಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲೇ ಟಿಕೆಟ್ ಕೊಡಿಸಿದ್ದರು. ಆ ರೀತಿಯಲ್ಲಿ ‘ನಂಬಿದವರನ್ನು ಪೊರೆವ’ ವಿಚಾರದಲ್ಲಿ ಅವರ ಬಗ್ಗೆ ಅಂತಹ ಕೆಟ್ಟ ಹೆಸರಿಲ್ಲ.

ಇನ್ನು ಲಕ್ಷ್ಮೀನಾರಾಯಣರ ವಿಚಾರಕ್ಕೆ ಬರುವುದಾದರೆ, ಆವಲಹಳ್ಳಿ ಪಟೇಲರ ಕುಟುಂಬದ ಸಂಬಂಧಿಯಾದ ಅವರು ಭಾರೀ ದೊಡ್ಡ ಕುಳವೇನಾಗಿರಲಿಲ್ಲ. ನಗರದೊಳಗೇ ಇದ್ದರೂ, ಇನ್ನೂ ಹಳ್ಳಿಯ ರೀತಿ ರಿವಾಜುಗಳನ್ನು ಉಳಿಸಿಕೊಂಡಿರುವ ಆವಲಹಳ್ಳಿಯಲ್ಲಿ ಅಲ್ಲಿನ ದೊಡ್ಡ ಕುಳಗಳಿಗೆ ಸೆಡ್ಡು ಹೊಡೆದು ರಾಜಕೀಯ ಬಲ ರೂಪಿಸಿಕೊಂಡವರು ಲಕ್ಷ್ಮೀನಾರಾಯಣ್. ಸಹಜವಾಗಿ ಕಾರ್ಪೋರೇಟರ್ ಚುನಾವಣೆಗೆ ನಿಂತು ಗೆಲ್ಲಲು ಬಯಸಿದ ಅವರನ್ನು ಪೋಷಿಸಿದ್ದು ಸೋಮಣ್ಣರೇ. ನಂತರ ಉಪಮೇಯರ್ ಮಾಡಿದ್ದು, ಎಂಎಲ್‍ಎ ಟಿಕೆಟ್ ಕೊಡಿಸಿದ್ದು ಎಲ್ಲವೂ ಸೋಮಣ್ಣರೇ. ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹಮದ್ ವಿರುದ್ಧ ಸೋತರೂ ಲಕ್ಷ್ಮೀನಾರಾಯಣ್ ಪ್ರಭಾವಿಯೇ.

ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ತಪ್ಪಿಸಿ, ತೇಜಸ್ವಿ ಸೂರ್ಯಗೆ ಕೊಟ್ಟ ನಂತರ ಬಹಿರಂಗವಾಗಿ ಕಿಡಿಕಾರಿದ್ದು ಸೋಮಣ್ಣ. ತನಗೆ ಕೆಲವು ವಿಚಾರಗಳಲ್ಲಿ ಸ್ಪಷ್ಟೀಕರಣ ಸಿಗುವವರೆಗೂ ಪ್ರಚಾರಕ್ಕೂ ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಇಂದು ಕಾರ್ಯಕರ್ತರ ಸಭೆ ಕರೆದು ಪ್ರಚಾರ ಶುರು ಮಾಡಿದ್ದಾರಾದರೂ, ಇಂದೇ ಲಕ್ಷ್ಮೀನಾರಾಯಣ ಕಾಂಗ್ರೆಸ್ ಸೇರಿರುವುದು ಕೇವಲ ಅವರ ವ್ಯಕ್ತಿಗತ ತೀರ್ಮಾನ ಆಗಿರಲಾರದು.

ಸೋಮಣ್ಣರ ಪ್ರಭಾವವಿರುವ ಹಳೇ ಬಿನ್ನಿಪೇಟೆ ಕ್ಷೇತ್ರವ್ಯಾಪ್ತಿಯ ಎಲ್ಲೆಡೆ ಅವರ ಪ್ರತಿನಿಧಿಯಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‍ರ ಪರವಾಗಿ ಲಕ್ಷ್ಮೀನಾರಾಯಣ್ ಕೆಲಸ ಮಾಡುತ್ತಾರೆನ್ನುವುದು ಒಳ ಒಪ್ಪಂದ ಇದ್ದಂತಿದೆ. ಚುನಾವಣಾ ಸಂದರ್ಭದಲ್ಲಿ ಯಾವ ಮೌಲ್ಯಗಳೂ ಉಳಿದುಕೊಂಡಿರದ ರಾಜಕಾರಣದಲ್ಲಿ ಸಿದ್ಧಾಂತಕ್ಕೆ ಬೆಲೆಯೇನೂ ಇರುವುದಿಲ್ಲ. ಹಾಗಾಗಿ ಇಂತಹ ಪಕ್ಷಾಂತರಗಳು, ಒಳಒಪ್ಪಂದಗಳು ಮಾಮೂಲು ಎನ್ನುವಂತಹ ದುರಂತದ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ತೇಜಸ್ವಿ ಸೂರ್ಯ ಅಭ್ಯರ್ಥಿಯಾದ ಕ್ಷಣದಿಂದಲೂ ಎಡವಟ್ಟಿನ ಮೇಲೆ ಎಡವಟ್ಟಾಗುತ್ತಿದೆ. ಅದೇ ಸಂದರ್ಭದಲ್ಲಿ ಹಿಂದಿನಿಂದಲೂ ಬಿಜೆಪಿಯ ಅನಂತಕುಮಾರ್‍ರ ಪರವಾಗಿ ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿಯವರು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಸಾರಿ ಅವರೂ ತೊಡೆತಟ್ಟಿ ನಿಂತಂತಿದೆ. ಇಂದಿನ ಲಕ್ಷ್ಮೀನಾರಾಯಣ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರೂ ಇದ್ದದ್ದು ಅದಕ್ಕೆ ಸಾಕ್ಷಿಯಂತಿದೆ. ಇವೆಲ್ಲಾ ಕಾರಣಗಳಿಂದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸ್ಪರ್ಧೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ತೇಜಸ್ವಿ ಸೋಲಿಸಲು ಸೂಲಿಬೆಲೆ ಸ್ಕೆಚ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...