Homeಕರ್ನಾಟಕಕಾಂಗ್ರೆಸ್‍ಗೆ ಸೇರಿದ ಲಕ್ಷ್ಮೀನಾರಾಯಣ: ಸೋಮಣ್ಣರ ಸೀಕ್ರೆಟ್ ಡೀಲ್

ಕಾಂಗ್ರೆಸ್‍ಗೆ ಸೇರಿದ ಲಕ್ಷ್ಮೀನಾರಾಯಣ: ಸೋಮಣ್ಣರ ಸೀಕ್ರೆಟ್ ಡೀಲ್

- Advertisement -
- Advertisement -

ಇಂದು ಮಹತ್ವದ ಬೆಳವಣಿಗೆಯೊಂದು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದಿದೆ. ಅದರ ಮಹತ್ವವನ್ನು ಬಿಂಬಿಸಲೋ ಎಂಬಂತೆ, ಅದರಲ್ಲಿ ಬೆಂ.ದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್, ವಿಜಯನಗರದ ಶಾಸಕ ಎಂ.ಕೃಷ್ಣಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಖುದ್ದು ಹಾಜರಿದ್ದರು. ಬೆಂಗಳೂರಿನ ಮಾಜಿ ಉಪಮೇಯರ್ ಎಂ.ಲಕ್ಷ್ಮೀನಾರಾಯಣ್ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದೇ ಈ ವಿದ್ಯಮಾನ.

ಇದಕ್ಕೆ ಮಹತ್ವ ಬಂದಿರುವುದು ಸ್ವತಃ ಲಕ್ಷ್ಮೀನಾರಾಯಣ್‍ರ ಸಾಮಥ್ರ್ಯದಿಂದ ಅಷ್ಟೇ ಅಲ್ಲ. ಅವರ ಗುರು ವಿ.ಸೋಮಣ್ಣ ತಮ್ಮ ಅಸಮಾಧಾನದ ಕಾರಣಕ್ಕೆ, ಲಕ್ಷ್ಮೀನಾರಾಯಣರನ್ನು ಕಾಂಗ್ರೆಸ್ಸಿಗೆ ಕಳಿಸಿದ್ದಾರೆಂದು ಭಾವಿಸಲು ಹಲವು ಕಾರಣಗಳಿವೆ. ಹಳೇ ಬಿನ್ನಿಪೇಟೆ ಕ್ಷೇತ್ರದ ವಿ.ಸೋಮಣ್ಣರನ್ನು ವಿಜಯನಗರದ ವೀರಪುತ್ರ, ‘ಸೋಲಿಲ್ಲದ ಸರದಾರ’ (ಆ ನಂತರ ಸೋಮಣ್ಣ ಸೋತರು, ಆ ಮಾತು ಬೇರೆ) ಇತ್ಯಾದಿ ವಿಶೇಷಣಗಳಿಂದ ಕರೆಯಲಾಗುತ್ತಿದ್ದುದಕ್ಕೆ ಕಾರಣಗಳಿವೆ. ಜನತಾದಳದಿಂದ ಮತ್ತು ಕಾಂಗ್ರೆಸ್‍ನಿಂದ ಸತತ ಎರಡು ಬಾರಿ ಹಳೇ ಬಿನ್ನಿಪೇಟೆ ಕ್ಷೇತ್ರದಿಂದ ಗೆದ್ದ ಸೋಮಣ್ಣ, ನಂತರ ಯಾವ ಪಕ್ಷದ ಟಿಕೆಟ್ಟೂ ಬೇಡ ಎಂದು ಪಕ್ಷೇತರವಾಗಿಯೂ ನಿಂತು ಗೆದ್ದಿದ್ದರು!

ಅದೇ ಕ್ಷೇತ್ರದ ಲೇಔಟ್ ಕೃಷ್ಣಪ್ಪರಂತಹ ಒಬ್ಬ ಭಾರೀ ಕುಳ ಕಾಂಗ್ರೆಸ್ಸಿನಲ್ಲೇ ಇದ್ದಾಗಲೂ ಬಿನ್ನಿಪೇಟೆ ಕ್ಷೇತ್ರದ ಟಿಕೆಟ್ ಪಡೆಯಲು ಸಾಧ್ಯವೇ ಇಲ್ಲದ ಕಾರಣಕ್ಕೆ ಎಂಎಲ್‍ಸಿಯಷ್ಟೇ ಆದರು. ನಂತರ ಕ್ಷೇತ್ರದ ಪುನರ್‍ವಿಂಗಡಣೆಯಲ್ಲಿ ಗೋವಿಂದರಾಜನಗರದಿಂದ ಸೋಮಣ್ಣ ಮತ್ತು ವಿಜಯನಗರದಿಂದ ಕೃಷ್ಣಪ್ಪ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದಿದ್ದರು. ಯಡಿಯೂರಪ್ಪ ಸಿಎಂ ಆದಾಗ ಆಪರೇಷನ್ ಕಮಲಕ್ಕೆ ಒಳಗಾದವರಲ್ಲಿ ಸೋಮಣ್ಣ ಸಹಾ ಒಬ್ಬರು. ಆದರೆ, ಅವರ ವಿರುದ್ಧ ಕೃಷ್ಣಪ್ಪನವರ ಮಗ ಪ್ರಿಯಾಕೃಷ್ಣ ನಿಂತು, ಜೆಡಿಎಸ್‍ನ ಬೆಂಬಲದೊಂದಿಗೆ ಸೋಮಣ್ಣ ಸೋತಿದ್ದರು. ಇದು ಅವರನ್ನು ಹೈರಾಣಾಗಿಸಿ, ಬೇರೆ ಕ್ಷೇತ್ರದ ಹುಡುಕಾಟಕ್ಕೂ ಬಿದ್ದಿದ್ದರು. ಆದರೆ, ಈ ಸಾರಿ ಮತ್ತೆ ಪ್ರಿಯಾಕೃಷ್ಣರನ್ನು ಸೋಲಿಸುವ ಮುಂಚೆ ಸ್ವತಃ ಯಡಿಯೂರಪ್ಪನವರು ಸೋಮಣ್ಣರನ್ನು ಹುಡುಕಿಕೊಂಡು ಬಂದು ಸಮಾಧಾನ ಮಾಡಿ ಪಕ್ಷದಲ್ಲಿ ಉಳಿಸಿಕೊಂಡಿದ್ದರು. ಯಡ್ಡಿ ಸೋಮಣ್ಣರ ನಡುವಿನದ್ದು ಲವ್ & ಹೇಟ್ ಸಂಬಂಧವಾದರೆ, ಅನಂತಕುಮಾರ್‍ರ ಜೊತೆಗೂ ಸೋಮಣ್ಣ ಬಹಳ ಒಳ್ಳೆಯ ಸಂಬಂಧ ಹೊಂದಿದ್ದರು.

ಏಕೆಂದರೆ ಸೋಮಣ್ಣರಿಗಿರುವ ಪ್ರಭಾವ ಅಂಥದ್ದು. ಈ ಕ್ಷೇತ್ರದ ಸಾವಿರಾರು ಜನರನ್ನು ಹೆಸರಿನಿಂದ ಬಲ್ಲ ಸೋಮಣ್ಣ, ಯಾರು ಯಾವುದೇ ಸಮಸ್ಯೆ ತಂದರೂ ಬಗೆಹರಿಸುತ್ತಿದ್ದ ವ್ಯಕ್ತಿ. ಬೆಂಗಳೂರಿನ ಮೇಯರ್ ಸ್ಥಾನಕ್ಕೆ ನೇರ ಚುನಾವಣೆ ನಡೆಯಬೇಕು ಎಂಬ ಚರ್ಚೆಯಿದ್ದಾಗ ಅದಕ್ಕೆ ದೊಡ್ಡ ಮಟ್ಟದಲ್ಲಿ ಕೇಳಿಬಂದ ಹೆಸರು ಸೋಮಣ್ಣರದ್ದೇ.

ಸೋಮಣ್ಣ ತನ್ನ ಮಗನನ್ನು ರಾಜಕಾರಣಕ್ಕೆ ತರುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರಾದರೂ, ತನ್ನ ಆಪ್ತ ಶಿಷ್ಯರಾದ ಎಚ್.ರವೀಂದ್ರ ಮತ್ತು ಲಕ್ಷ್ಮೀನಾರಾಯಣ ಇಬ್ಬರಿಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲೇ ಟಿಕೆಟ್ ಕೊಡಿಸಿದ್ದರು. ಆ ರೀತಿಯಲ್ಲಿ ‘ನಂಬಿದವರನ್ನು ಪೊರೆವ’ ವಿಚಾರದಲ್ಲಿ ಅವರ ಬಗ್ಗೆ ಅಂತಹ ಕೆಟ್ಟ ಹೆಸರಿಲ್ಲ.

ಇನ್ನು ಲಕ್ಷ್ಮೀನಾರಾಯಣರ ವಿಚಾರಕ್ಕೆ ಬರುವುದಾದರೆ, ಆವಲಹಳ್ಳಿ ಪಟೇಲರ ಕುಟುಂಬದ ಸಂಬಂಧಿಯಾದ ಅವರು ಭಾರೀ ದೊಡ್ಡ ಕುಳವೇನಾಗಿರಲಿಲ್ಲ. ನಗರದೊಳಗೇ ಇದ್ದರೂ, ಇನ್ನೂ ಹಳ್ಳಿಯ ರೀತಿ ರಿವಾಜುಗಳನ್ನು ಉಳಿಸಿಕೊಂಡಿರುವ ಆವಲಹಳ್ಳಿಯಲ್ಲಿ ಅಲ್ಲಿನ ದೊಡ್ಡ ಕುಳಗಳಿಗೆ ಸೆಡ್ಡು ಹೊಡೆದು ರಾಜಕೀಯ ಬಲ ರೂಪಿಸಿಕೊಂಡವರು ಲಕ್ಷ್ಮೀನಾರಾಯಣ್. ಸಹಜವಾಗಿ ಕಾರ್ಪೋರೇಟರ್ ಚುನಾವಣೆಗೆ ನಿಂತು ಗೆಲ್ಲಲು ಬಯಸಿದ ಅವರನ್ನು ಪೋಷಿಸಿದ್ದು ಸೋಮಣ್ಣರೇ. ನಂತರ ಉಪಮೇಯರ್ ಮಾಡಿದ್ದು, ಎಂಎಲ್‍ಎ ಟಿಕೆಟ್ ಕೊಡಿಸಿದ್ದು ಎಲ್ಲವೂ ಸೋಮಣ್ಣರೇ. ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹಮದ್ ವಿರುದ್ಧ ಸೋತರೂ ಲಕ್ಷ್ಮೀನಾರಾಯಣ್ ಪ್ರಭಾವಿಯೇ.

ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ತಪ್ಪಿಸಿ, ತೇಜಸ್ವಿ ಸೂರ್ಯಗೆ ಕೊಟ್ಟ ನಂತರ ಬಹಿರಂಗವಾಗಿ ಕಿಡಿಕಾರಿದ್ದು ಸೋಮಣ್ಣ. ತನಗೆ ಕೆಲವು ವಿಚಾರಗಳಲ್ಲಿ ಸ್ಪಷ್ಟೀಕರಣ ಸಿಗುವವರೆಗೂ ಪ್ರಚಾರಕ್ಕೂ ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಇಂದು ಕಾರ್ಯಕರ್ತರ ಸಭೆ ಕರೆದು ಪ್ರಚಾರ ಶುರು ಮಾಡಿದ್ದಾರಾದರೂ, ಇಂದೇ ಲಕ್ಷ್ಮೀನಾರಾಯಣ ಕಾಂಗ್ರೆಸ್ ಸೇರಿರುವುದು ಕೇವಲ ಅವರ ವ್ಯಕ್ತಿಗತ ತೀರ್ಮಾನ ಆಗಿರಲಾರದು.

ಸೋಮಣ್ಣರ ಪ್ರಭಾವವಿರುವ ಹಳೇ ಬಿನ್ನಿಪೇಟೆ ಕ್ಷೇತ್ರವ್ಯಾಪ್ತಿಯ ಎಲ್ಲೆಡೆ ಅವರ ಪ್ರತಿನಿಧಿಯಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‍ರ ಪರವಾಗಿ ಲಕ್ಷ್ಮೀನಾರಾಯಣ್ ಕೆಲಸ ಮಾಡುತ್ತಾರೆನ್ನುವುದು ಒಳ ಒಪ್ಪಂದ ಇದ್ದಂತಿದೆ. ಚುನಾವಣಾ ಸಂದರ್ಭದಲ್ಲಿ ಯಾವ ಮೌಲ್ಯಗಳೂ ಉಳಿದುಕೊಂಡಿರದ ರಾಜಕಾರಣದಲ್ಲಿ ಸಿದ್ಧಾಂತಕ್ಕೆ ಬೆಲೆಯೇನೂ ಇರುವುದಿಲ್ಲ. ಹಾಗಾಗಿ ಇಂತಹ ಪಕ್ಷಾಂತರಗಳು, ಒಳಒಪ್ಪಂದಗಳು ಮಾಮೂಲು ಎನ್ನುವಂತಹ ದುರಂತದ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ತೇಜಸ್ವಿ ಸೂರ್ಯ ಅಭ್ಯರ್ಥಿಯಾದ ಕ್ಷಣದಿಂದಲೂ ಎಡವಟ್ಟಿನ ಮೇಲೆ ಎಡವಟ್ಟಾಗುತ್ತಿದೆ. ಅದೇ ಸಂದರ್ಭದಲ್ಲಿ ಹಿಂದಿನಿಂದಲೂ ಬಿಜೆಪಿಯ ಅನಂತಕುಮಾರ್‍ರ ಪರವಾಗಿ ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿಯವರು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಸಾರಿ ಅವರೂ ತೊಡೆತಟ್ಟಿ ನಿಂತಂತಿದೆ. ಇಂದಿನ ಲಕ್ಷ್ಮೀನಾರಾಯಣ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರೂ ಇದ್ದದ್ದು ಅದಕ್ಕೆ ಸಾಕ್ಷಿಯಂತಿದೆ. ಇವೆಲ್ಲಾ ಕಾರಣಗಳಿಂದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸ್ಪರ್ಧೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ತೇಜಸ್ವಿ ಸೋಲಿಸಲು ಸೂಲಿಬೆಲೆ ಸ್ಕೆಚ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...