Homeಮುಖಪುಟಅದಾನಿಗೆ 6 ವಿಮಾನ ನಿಲ್ದಾಣಗಳ ನಿರ್ವಹಣೆ ನೀಡುವುದರ ವಿರುದ್ಧ ದನಿಯೆತ್ತಿದ್ದ ಹಣಕಾಸು ಇಲಾಖೆ, ನೀತಿ ಆಯೋಗ!...

ಅದಾನಿಗೆ 6 ವಿಮಾನ ನಿಲ್ದಾಣಗಳ ನಿರ್ವಹಣೆ ನೀಡುವುದರ ವಿರುದ್ಧ ದನಿಯೆತ್ತಿದ್ದ ಹಣಕಾಸು ಇಲಾಖೆ, ನೀತಿ ಆಯೋಗ! ಕಾರಣವೇನು?

ಒಂದೇ ವಿಮಾನಯಾನ ಸಂಸ್ಥೆಗೆ ಎರಡಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ನೀಡಬಾರದು. ಅವುಗಳನ್ನು ವಿವಿಧ ಕಂಪನಿಗಳಿಗೆ ನೀಡುವುದರಿಂದ ಆರೋಗ್ಯಕರ ಸ್ಪರ್ಧೆಗೆ ಸಹಕಾರಿಯಾಗುತ್ತದೆ.

- Advertisement -
- Advertisement -

2019ರಲ್ಲಿ ಅಹಮದಾಬಾದ್ ಮೂಲದ ಅದಾನಿ ಗ್ರೂಪ್‌ಗೆ ಆರು ವಿಮಾನ ನಿಲ್ದಾಣಗಳ ನಿರ್ವಹಣೆ ಕಾಮಗಾರಿ ವಹಿಸುವುದನ್ನು ಹಣಕಾಸು ಇಲಾಖೆ ಮತ್ತು ನೀತಿ ಆಯೋಗ ಆಕ್ಷೇಪಿಸಿದ್ದವು ಎಂದು ತನಗೆ ದೊರೆತ ಮಾಹಿತಿಗಳ ಆಧಾರದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕಳೆದ ವರ್ಷ ಆಗಸ್ಟ್ 31 ರಂದು, ಮುಂಬೈನ ದೇಶದ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣದ ನಿಯಂತ್ರಣ ಆಸಕ್ತಿಯನ್ನು ಪಡೆಯಲು ಅದಾನಿ ಗ್ರೂಪ್ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ಇದನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಜನವರಿ 12 ರಂದು ಅಂಗೀಕಾರ ಮಾಡಿದ್ದನ್ನು ಈ ಹಿನ್ನೆಲೆಯಲ್ಲಿ ನೋಡಬೇಕಿದೆ.

6 ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್ ಪಡೆದುಕೊಳ್ಳುವುದರ ವಿರುದ್ಧ ಹಣಕಾಸು ಇಲಾಖೆ ಮತ್ತು ನೀತಿ ಆಯೋಗ ಗಂಭೀರ ಆಕ್ಷೇಪ ಎತ್ತಿದ್ದವು. ಮುಂಬೈ ಜೊತೆಗೆ ಅಹಮದಾಬಾದ್, ಮಂಗಳೂರು, ಲಕ್ನೋ, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ಸೇರಿ ಏಳು ವಿಮಾನ ನಿಲ್ದಾಣಗಳು ಕಳೆದ ಹಣಕಾಸು ವರ್ಷದಲ್ಲಿ (2019-20) 7.90 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿವೆ. ಇದು ದೇಶೀಯ ವಾಯು ಪ್ರಯಾಣಿಕರ ದಟ್ಟಣೆಯ (ಅಂದಾಜು 34 ಕೋಟಿ) ನಾಲ್ಕನೇ ಒಂದು ಭಾಗಕ್ಕೆ ಸಮನಾಗಿದೆ.

ಅಹಮದಾಬಾದ್, ಲಕ್ನೋ, ಮಂಗಳೂರು, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂನಲ್ಲಿನ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕಾಗಿ ಬಿಡ್‌ಗಳನ್ನು ಆಹ್ವಾನಿಸುವ ಮೊದಲು (ಎನ್‌ಡಿಎ ಸರ್ಕಾರದ ಅತಿದೊಡ್ಡ ಖಾಸಗೀಕರಣ ಕಾರ್ಯಕ್ರಮ) ಕೇಂದ್ರದ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೌಲ್ಯಮಾಪನ ಸಮಿತಿ (ಪಿಪಿಪಿಎಸಿ) ನಾಗರಿಕ ವಿಮಾನಯಾನ ಸಚಿವಾಲಯದ ಈ ಪ್ರಕ್ರಿಯೆಯ ಪ್ರಸ್ತಾಪವನ್ನು ಡಿಸೆಂಬರ್ 11, 2018 ರಂದು ಚರ್ಚಿಸಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ದೊರೆತ ಮಿನಟ್‌ಗಳ ಪ್ರಕಾರ, ಚರ್ಚೆಯ ಸಮಯದಲ್ಲಿ, ಆರ್ಥಿಕ ವ್ಯವಹಾರಗಳ ಇಲಾಖೆಯ ಟಿಪ್ಪಣಿ ಹೀಗೆ ಹೇಳಿದೆ: “ಈ ಆರು ವಿಮಾನ ನಿಲ್ದಾಣಗಳ ಯೋಜನೆಗಳು ತೀವ್ರ ಬಂಡವಾಳ-ಕೇಂದ್ರಿತ ಯೋಜನೆಗಳಾಗಿವೆ, ಆದ್ದರಿಂದ ಹೆಚ್ಚಿನ ಷರತ್ತುಗಳನ್ನು ಸೇರಿಸಲು ಸೂಚಿಸಲಾಗಿದೆ. ಹೆಚ್ಚಿನ ಹಣಕಾಸಿನ ಅಪಾಯ ಮತ್ತು ಕಾರ್ಯಕ್ಷಮತೆಯ ಸಮಸ್ಯೆಗಳನ್ನು ಪರಿಗಣಿಸಲಾಗಿ, ಒಂದೇ ವಿಮಾನಯಾನ ಸಂಸ್ಥೆಗೆ ಎರಡಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ನೀಡಬಾರದು ಎಂದು ಸೂಚಿಸುತ್ತಿದ್ದೇವೆ. ಅವುಗಳನ್ನು ವಿವಿಧ ಕಂಪನಿಗಳಿಗೆ ನೀಡುವುದರಿಂದ ಆರೋಗ್ಯಕರ ಸ್ಪರ್ಧೆಗೆ ಸಹಕಾರಿಯಾಗುತ್ತದೆ.”

ಡಿಸೆಂಬರ್ 10, 2018 ರಂದು ಪಿಪಿಪಿಎಸಿಗೆ ಡಿಇಎ ಟಿಪ್ಪಣಿಯನ್ನು ಇಲಾಖೆಯ ಪಿಪಿಪಿ ಸೆಲ್‌ನಲ್ಲಿ ನಿರ್ದೇಶಕರು ಸಲ್ಲಿಸಿದ್ದಾರೆ. ತನ್ನ ವಾದವನ್ನು ಸಮರ್ಥಿಸಲು, ಡಿಇಎ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳ ಪೂರ್ವನಿದರ್ಶನವನ್ನು ಉಲ್ಲೇಖಿಸಿದೆ. ಅಲ್ಲಿ ಜಿಎಂಆರ್ ಮೂಲತಃ ಏಕೈಕ ಅರ್ಹ ಬಿಡ್ಡರ್ ಆಗಿದ್ದರೂ, ಎರಡೂ ವಿಮಾನ ನಿಲ್ದಾಣಗಳನ್ನು ನೀಡಲಾಗಿಲ್ಲ. ಇದು ದೆಹಲಿಯ ವಿದ್ಯುತ್ ವಿತರಣೆಯ ಖಾಸಗೀಕರಣವನ್ನು ಸಹ ಉಲ್ಲೇಖಿಸುತ್ತದೆ. “ದೆಹಲಿ ವಿದ್ಯುತ್ ವಿತರಣೆ ಖಾಸಗೀಕರಣದ ಸಂದರ್ಭದಲ್ಲಿ, ನಗರವನ್ನು ಮೂರು ವಲಯಗಳಾಗಿ ವಿಂಗಡಿಸಿ. ಎರಡು ಕಂಪನಿಗಳಿಗೆ ಅವಕಾಶ ನೀಡಲಾಯಿತು” ಎಂದು ಅದು ಹೇಳಿದೆ.

ಪಿಪಿಪಿಎಸಿ ಸಭೆಯಲ್ಲಿ, ಡಿಇಎ ಎತ್ತಿದ ಈ ಆಕ್ಷೇಪಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಡಿಇಎ ಟಿಪ್ಪಣಿ ಹೊರಡಿಸಿದ ಅದೇ ದಿನ, ನೀತಿ ಆಯೋಗ್ ವಿಮಾನ ನಿಲ್ದಾಣದ ಬಿಡ್ಡಿಂಗ್ ಬಗ್ಗೆ ಪ್ರತ್ಯೇಕ ಕಳವಳವನ್ನು ವ್ಯಕ್ತಪಡಿಸಿತು. ಸರ್ಕಾರದ ಪ್ರಮುಖ ನೀತಿ ಥಿಂಕ್-ಟ್ಯಾಂಕ್‌ನ ಪಿಪಿಪಿ ಸಿದ್ಧಪಡಿಸಿದ ಜ್ಞಾಪಕದಲ್ಲಿ “ಸಾಕಷ್ಟು ತಾಂತ್ರಿಕ ಸಾಮರ್ಥ್ಯದ ಕೊರತೆಯಿರುವ ಬಿಡ್ಡರ್ ಯೋಜನೆಯನ್ನು ಅಪಾಯಕ್ಕೆ ತಳ್ಳಬಹುದು ಮತ್ತು ಸರ್ಕಾರವು ಒದಗಿಸಲು ಬದ್ಧವಾಗಿರುವ ಸೇವೆಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಹುದು” ಎಂದಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಅಂದಿನ ಡಿಇಎ ಕಾರ್ಯದರ್ಶಿ ಎಸ್‌ಸಿ ಗರ್ಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಿಪಿಪಿಎಸಿ – ಸಭೆಯಲ್ಲಿ, ಇಗೋಸ್ (ಕಾರ್ಯದರ್ಶಿಗಳ ಸಶಕ್ತ ಗುಂಪು) ಈಗಾಗಲೇ ವಿಮಾನ ನಿಲ್ದಾಣಗಳ ಬಿಡ್ಡಿಂಗ್‌ಗೆ ನಿರ್ಧರಿಸಿದೆ ಎಂದು ಹೇಳಲಾಗಿತು. “ವಿಮಾನ ನಿಲ್ದಾಣ ನಿರ್ವಹಣೆಯ ಅನುಭವ ಬಿಡ್ಡಿಂಗ್‌ಗೆ ಪೂರ್ವಾಪೇಕ್ಷಿತವಲ್ಲ, ಅಥವಾ ಬಿಡ್ ನಂತರದ ಅವಶ್ಯಕತೆಯೂ ಅಲ್ಲ. ಇದು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬ್ರೌನ್‌ಫೀಲ್ಡ್ ವಿಮಾನ ನಿಲ್ದಾಣಗಳ ಸ್ಪರ್ಧೆಯನ್ನು ವಿಸ್ತರಿಸುತ್ತದೆ ” ಎಂದು ತಿಪ್ಪೆ ಸಾರಿಸಿದರು.

2019 ರ ಜುಲೈನಲ್ಲಿ ಹಣಕಾಸು ಸಚಿವಾಲಯದಿಂದ ವಿದ್ಯುತ್ ಸಚಿವಾಲಯಕ್ಕೆ ವರ್ಗಾವಣೆಯಾಗಿದ್ದ ಮತ್ತು ಈಗ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸಲಹೆಗಾರರಾಗಿರುವ ಗಾರ್ಗ್ ಈ ವಿಷಯದ ಕುರಿತ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆರು ವಿಮಾನ ನಿಲ್ದಾಣಗಳಿಗೆ ಬಿಡ್ ಗೆದ್ದ ಒಂದು ವರ್ಷದ ನಂತರ, ಅದಾನಿ ಗ್ರೂಪ್ 2020 ರ ಫೆಬ್ರವರಿಯಲ್ಲಿ ಅಹಮದಾಬಾದ್, ಮಂಗಳೂರು ಮತ್ತು ಲಕ್ನೋ ವಿಮಾನ ನಿಲ್ದಾಣಗಳಿಗೆ ಅನ್ವಯಿಸಿ, ರಿಯಾಯಿತಿ ಒಪ್ಪಂದಗಳಿಗೆ ಸಹಿ ಹಾಕಿತು.

ಒಂದು ತಿಂಗಳ ನಂತರ, ಅದಾನಿ ಗ್ರೂಪ್ ಎಎಐನಿಂದ ಮೂರು ವಿಮಾನ ನಿಲ್ದಾಣಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಫೆಬ್ರವರಿ 2021 ರವರೆಗೆ ಸಂಭವಿಸಿದ ವಿಳಂಬವನ್ನು ಕೋವಿಡ್ 19 ಸಾಂಕ್ರಾಮಿಕಕ್ಕೆ ಜೋಡಿಸಿತು. ಕೊನೆಗೆ 2020 ರ ವೇಳೆಗೆ ಈ ಮೂರು ವಿಮಾನ ನಿಲ್ದಾಣಗಳನ್ನು ಸ್ವಾಧೀನಪಡಿಸಿಕೊಳ್ಳಲು ಎಎಐ ಅದಾನಿ ಗ್ರೂಪ್‌ಗೆ ಸೂಚಿಸಿತ್ತು. ಈ ಆರು ವಿಮಾನ ನಿಲ್ದಾಣಗಳಲ್ಲಿ ಮೂರು – ಅಹಮದಾಬಾದ್, ಮಂಗಳೂರು ಮತ್ತು ಲಕ್ನೋ – 2020 ರ ನವೆಂಬರ್‌ನಲ್ಲಿ ಅದಾನಿ ಗ್ರೂಪ್‌ಗೆ ಹಸ್ತಾಂತರವಾದವು. ಇತರ ಮೂರು ವಿಮಾನ ನಿಲ್ದಾಣಗಳಿಗೆ ರಿಯಾಯಿತಿ ಒಪ್ಪಂದಕ್ಕೆ (ಜೈಪುರ , ಗುವಾಹಟಿ ಮತ್ತು ತಿರುವನಂತಪುರಂ) ಸೆಪ್ಟೆಂಬರ್‌ನಲ್ಲಿ ಎಎಐ ಮತ್ತು ಅದಾನಿ ಗ್ರೂಪ್ ನಡುವೆ ಸಹಿ ಹಾಕಲಾಯಿತು.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ಎಎಐನಿಂದ ಹೆಚ್ಚಿನ ಸಮಯವನ್ನು ಕೋರಿದ ಆರು ತಿಂಗಳೊಳಗೆ, ಅದಾನಿ ಗ್ರೂಪ್ ದೇಶದ ಎರಡನೇ ಅತಿದೊಡ್ಡ ನಿಲ್ದಾಣ ಎನಿಸಿದ ಮುಂಬೈ ವಿಮಾನ ನಿಲ್ದಾಣ ಮತ್ತು ನವೀ ಮುಂಬಯಿಯಲ್ಲಿ ಮುಂಬರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಹೈದರಾಬಾದ್ ಮೂಲದ ಜಿವಿಕೆ ಯಿಂದ ನಿಯಂತ್ರಿಸುವ ಹಕ್ಕನ್ನು ಪಡೆದುಕೊಂಡಿತು.

ಎಎಐ ನಡೆಸುವ ಆರು ವಿಮಾನ ನಿಲ್ದಾಣಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ, ಅದಾನಿ ಗ್ರೂಪ್ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಿದೆ. ಅನುಭವಿ ಕಂಪನಿಗಳಾದ ಜಿಎಂಆರ್ ಗ್ರೂಪ್, ಜುರಿಚ್ ಮತ್ತು ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಮತ್ತು ಇತರ ಮೂಲಸೌಕರ್ಯ ಕಂಪನಿಗಳ ಜೊತೆಗೆ ಸ್ಪರ್ಧಿಸಿದ ಅದಾನಿ ಗ್ರೂಪ್ ಎಲ್ಲಾ ಆರು ವಿಮಾನ ನಿಲ್ದಾಣಗಳನ್ನು 50 ವರ್ಷಗಳ ಅವಧಿಗೆ ನಿರ್ವಹಿಸುವ ಹಕ್ಕುಗಳನ್ನು ಪಡೆದುಕೊಂಡಿದೆ.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್


ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ ಇನ್ನು ಮುಂದೆ ಅದಾನಿ ಏರ್‌ಪೋರ್ಟ್ಸ್!: ನೆಟ್ಟಿಗರ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...