Homeಕರ್ನಾಟಕಬಾಗಲಕೋಟೆ: ಸೋಮಾರಿ ಸಂಸದನ ಗದ್ದುಗೆಗೆ ಆ್ಯಕ್ಟಿವ್ ಹುಡುಗಿಯ ಚಾಲೆಂಜ್!

ಬಾಗಲಕೋಟೆ: ಸೋಮಾರಿ ಸಂಸದನ ಗದ್ದುಗೆಗೆ ಆ್ಯಕ್ಟಿವ್ ಹುಡುಗಿಯ ಚಾಲೆಂಜ್!

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |

ಎಲೆಕ್ಷನ್ ರೌಂಡ್ ಅಪ್: ಬಾಗಲಕೋಟೆ
ಒಂದು ಕಡೆ ಚುನಾವಣೆಗೆ ನಿಲ್ಲಲು ಆಸಕ್ತಿಯೇ ಇರದ ಸಂಸದ ಪಿ.ಸಿ. ಗದ್ದಿಗೌಡರನ್ನು ಬಿಜೆಪಿ ಒತ್ತಾಯದಿಂದ ಕಣಕ್ಕಿಳಿಸಿದೆ. ಇನ್ನೊಂದು ಕಡೆ ಪಾರಂಪರಿಕ ಲೋಕಲ್ ಕಾಂಗ್ರೆಸ್ ನಾಯಕರ ಅಸಡ್ಡೆಯನ್ನು ಮೆಟ್ಟಿ ಹಾಕಿದ ಯುವತಿಯೊಬ್ಬಳು ಗೆಲ್ಲಲೇಬೇಕೆಂದು ಹಟಕ್ಕೆ ಬಿದ್ದು ಫೀಲ್ಡಿಗೆ ಇಳಿದಿದ್ದಾಳೆ. ಗೆಲುವು ಈ ಯುವತಿಯ ಪರವೇ ನಿಂತಂತಿದೆ.

ಬಾಗಲಕೋಟೆ ಕ್ಷೇತ್ರ ಈ ಸಲ ಗಮನ ಸೆಳೆದಿರುವುದು ಮೂರು ಕಾರಣಗಳಿಂದಾಗಿ. ಒಂದು, ಪುಟು ಪುಟು ಓಡಾಡುತ್ತ ಕ್ಷೇತ್ರದ ತುಂಬೆಲ್ಲ ಪ್ರಚಾರ ಮಾಡುತ್ತ ಜನರನ್ನು ಸೆಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶೆಪ್ಪನವರ್. ಎರಡನೇಯದು, ಬಾದಾಮಿ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಗಂಭಿರವಾಗಿ ಪರಿಗಣಿಸಿರುವುದು. ಮೂರನೆಯ ಮತ್ತು ಅತಿ ಮುಖ್ಯ ಕಾರಣ: ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಪರವಿದ್ದ ಪಂಚಮಸಾಲಿ ಸಮಯದಾಯ ಈ ಸಲ ತಮ್ಮದೇ ಸಮುದಾಯದ ವೀಣಾ ಪರ ನಿಂತಿರುವುದು.

ಬಾಗಲಕೋಟೆಯಲ್ಲಿ 2009 ಮತ್ತು 2014ರಲ್ಲಿ ಬಿಜೆಪಿಯಿಂದ ಸಂಸದರಾಗಿರುವ ಗಾಣಿಗ ಸಮುದಾಯದ ಗದ್ದಿಗೌಡರು ಸಂಭಾವಿತರು ಎಂಬ ಬಗ್ಗೆ ಎರಡು ಮಾತಿಲ್ಲ. ಅವರೆಂದೂ ಬಾಗಲಕೋಟೆ ಬಿಜೆಪಿ ಶಾಸಕ ಚರಂತಿಮಠ, ತೇರದಾಳದ ಬಿಜೆಪಿ ಶಾಸಕ ಲಕ್ಷ್ಮಣ ಸವದಿ ತರಹ ಕೋಮು ಉನ್ಮಾದದ ರಾಜಕಾರಣ ಮಾಡಿದವರಲ್ಲ. ಜಮಖಂಡಿ ಶಾಸಕ ಮುರುಗೇಶ ನಿರಾಣಿ, ಹುನಗುಂದದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲರಂತೆ ಬ್ಯುಸಿನೆಸ್ ಇಂಟರೆಸ್ಟ್ ಹೊಂದಿದವರಲ್ಲ. ಆದರೆ, ಅವರು ಮಹಾ ಸೋಮಾರಿ. ಚುನಾವಣೆಯಲ್ಲಿ ಮುಖ ತೋರಿಸುವ ಗದ್ದಿಗೌಡರು ನಂತರ ಎಲ್ಲೂ ಕಾಣಿಸಿಕೊಳ್ಳುವುದೇ ಇಲ್ಲ. ಪಕ್ಷದ ಸಾರ್ವಜನಿಕ ಸಭೆಗಳಲ್ಲೂ ಅವರಿಗೆ ಆಸಕ್ತಿ ಇಲ್ಲವೇ ಇಲ್ಲ. ಇದಕ್ಕಿಂತ ಮಿಗಿಲಾಗಿ 10 ವರ್ಷಗಳಲ್ಲಿ ಬಾಗಲಕೋಟೆಗೆ ಅವರು ಕೊಟ್ಟಿದ್ದು ಶೂನ್ಯ.

ಗದ್ದಿಗೌಡರ್ ನಿರುಪ್ರದವಿ ಇರಬಹುದು, ಆದರೆ ಸೋಮಾರಿ ಎಂಬುದು ಈ ಸಲ ಹೈಟಾಗಲು ಕಾರಣ ಎದುರಿಗೆ ನಿಂತಿರುವ ಯುವತಿ ಹುಮ್ಮಸ್ಸಿನಿಂದ ಪುಟಿದೇಳುವ, ರಾಜಕೀಯವನ್ನು ಜನಸೇವೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿರುವ ಯುವತಿ.

ಬಾಗಲಕೋಟೆ ಕ್ಷೇತ್ರದಲ್ಲಿ ಗದಗ ಜಿಲ್ಲೆಯಾ ನರಗುಂದವೂ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದುಬಿಜೆಪಿಗೆ ವರವಾಗಬಹುದೇ ಎಂಬ ಪ್ರಶನೆ ಸಹಜ. 2014ರಲ್ಲಿ ಕಾಂಗ್ರಸ್‍ನಿಂದ ಇಲ್ಲಿ 7 ಶಾಸಕರಿದ್ದರೂ ಗದ್ದಿಗೌಡರ್ ಇಲ್ಲಿ 5,220 ಮತಗಳಿಂದ ಗೆದ್ದಿದ್ದರು. ಆಗ ಮೋದಿಯ ಸೃಷ್ಟಿತ ಹವಾ ಇತ್ತು. ಅದಕ್ಕೂ ಮುಖ್ಯವಾಗಿ ಇಲ್ಲಿ ಸದಾ ಜಾತಿ ರಾಜಕಾರಣವೇ ರ್ಮಯಲುಗೈ ಪಡೆದಿದ್ದು ಬಿಜೆಪಿಗೆ ವರದಾನವಾಗಿತ್ತು.

ಇಲ್ಲಿ ಲಿಂಗಾಯತ/ವೀರಶೈವ ಜಾತಿಗೆ ಸೇರಿದ ಗಾಣಿಗರು, ಪಂಚಮಸಾಲಿಗಳು ಮತ್ತು ರೆಡಿಗಳು ತಲಾ ಒಂದೂವರೆ ಲಕ್ಷದಷ್ಟು ಮತಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ರಡ್ಡಿಗಳ ಟಿಕೆಟ್ ಕೊಟ್ಟ ಪರಿಣಾಮ, ಗಾಣಿಗರು ಮತ್ತು ಪಂಚಮಸಾಲಿಗಳು ಒಟ್ಟಾಗಿ ಬಿಜೆಪಿ ನೆರವಿಗೆ ಬರುತ್ತಿದ್ದರು. ಈ ಸಲ ಪಂಚಮಸಾಲಿಗೆ ಸೇರಿದ ಮಹಿಳಾ ಅಭ್ಯರ್ಥಿ ಕಣದಲ್ಲಿ ರಂಗು ಎಬ್ಬಿಸುವ ಮೂಲಕ ಹೊಸ ಜಾತಿ ಸಂಇಕರಣದ ಗೆಲುವಿನತ್ತ ಮುನ್ನುಗುತ್ತಿದ್ದಾರೆ.

ಸುಮಾರು ಎರಡೂವರೆ ಲಕ್ಷದಷ್ಟಿರು ದಲಿತ ಮತಗಳು ಹೆಚ್ಚೂ ಕಡಿಮೆ ಕಾಂಗ್ರೆಸ್ ಪರವೇ ಇವೆ. ಒಂದು ಲಕ್ಷದಷ್ಟಿರುವ ಎಸ್‍ಟಿ ಮತಗಳಲ್ಲಿ ಎರಡೂ ಪಾರ್ಟಿಗಳು ಸಮಾನವಾಗಿ ಮತ ಪಡೆಯಬಹುದೇನೋ? ಎರಡೂವರೆ ಲಕ್ಷದಷ್ಟಿರುವ ಮುಸ್ಲಿಮರು ಕಾಂಗ್ರೆಸ್ ಪರವೇ. ಎರಡೂವರೆ ಲಕ್ಷದಷ್ಟಿರುವ ಕುರುಬರು ಮತ್ತು ಒಂದೂವರೆ ಲಕ್ಷದಷ್ಟಿರುವ ನೇಕಾರರು ಈ ಸಲ ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಪರ ನಿಲ್ಲುವ ದಟ್ಟ ಸಾಧ್ಯತೆ ಇವೆ. ಸಿದ್ದರಾಮಯ್ಯ ಒಂದು ದಿನ ಮತ್ತು ಸತೀಶ ಜಾರಕಿಹೊಳಿ ಎರಡು ದಿನ ಇಲ್ಲಿ ಪ್ರಚಾರ ಮಾಡಲಿದ್ದು ಅದು ಕಾಂಗ್ರೆಸ್ ಗೆಲುವಿಗೆ ದೊಡ್ಡ ‘ಬೂಸ್ಟ್’

ಜಾತಿ ಮೀರಿದ ಜಾಣೆ
ಜಿಪಂ ಸದಸ್ಯೆ ಆಗಿರುವ ವೀಣಾ ಕಾಶಪ್ಪನವರ್ ಹುನಗುಂದದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಪತ್ನಿ. ವಿಜಯಾನಂದನ ಹುಂಬ ಕ್ಯಾರೆಕ್ಟರ್‍ಗೆ ಈಕೆ ತದ್ವಿರುದ್ಧ. ಎಲ್ಲ ಜನರೊಡನೆ ಆತ್ಮೀಯತೆಯಿಂದ ಬೆರೆಯುವ, ಯುಜನತೆಯ ಮಧ್ಯದಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ವೀಣಾ ಮಾಡಿದ್ದಾರೆ. ಈಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಅವರು ಮಾಡಿರುವ ಕೆಲಸಗಳು ಗಮನ ಸೆಳೆದಿವೆ. ನೀರಾವರಿ, ಕುಡಿಯುವ ನೀರಿಗೆ ಆದ್ಯತೆ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಹಾಸ್ಟೇಲ್‍ಗಳ ನಿರ್ವಹಣೆಯಲ್ಲಿ ಗುಣಮಟ್ಟ ತಂದ ಹಿರಿಮೆಯೂ ಅವರಿಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳಲ್ಲಿ ವಿಶೇಷ ಆಸಕ್ತಿ ತೋರಿದ್ದರಿಂದ ಅವರಿಗೆ ಮಹಿಳಾ ಮತದಾರರೂ ಒಲಿದಿದ್ದಾರೆ.
ಹೀಗಾಗಿ, ಈ ಸಲ ಗದ್ದಿಗೌಡರ ಗದ್ದುಗೆಯನ್ನು ಈ ಯುವತಿ ಕಿತ್ತುಕೊಳ್ಳುವ ಚಾನ್ಸ್ ಜಾಸ್ತಿನೇ ಇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...