Homeಮುಖಪುಟಕಾನೂನು ಉಲ್ಲಂಘಿಸುತ್ತಿರುವ ನಮೋ ಟಿವಿ: ಲೈಸೆನ್ಸ್ ಇಲ್ಲದೇ ಉಪಗ್ರಹ ಬಳಕೆ!

ಕಾನೂನು ಉಲ್ಲಂಘಿಸುತ್ತಿರುವ ನಮೋ ಟಿವಿ: ಲೈಸೆನ್ಸ್ ಇಲ್ಲದೇ ಉಪಗ್ರಹ ಬಳಕೆ!

- Advertisement -
- Advertisement -

ಸಾಕಷ್ಟು ವಿವಾದ ಸೃಷ್ಟಿಸಿದ ಪ್ರಧಾನಿಯ ಪ್ರಪಗಂಡಾ ಚಾನೆಲ್ ನಮೋ ಟಿವಿ ಯಾವುದೇ ಲೈಸೆನ್ಸ್ ಪಡೆಯದೇ ತನ್ನ ಸಿಗ್ನಲ್ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್‍ಗೆ ಎನ್‍ಎಸ್‍ಎಸ್-6 ಉಪಗ್ರಹವನ್ನು ಬಳಸುತ್ತಿದೆ. ವ್ಯಕ್ತಿಯೋರ್ವನ ಅಜೆಂಡಾಗಳನ್ನು, ಹಿಕ್ಮತ್ತುಗಳನ್ನು ಪ್ರಸಾರ ಮಾಡಲು ಈ ನೆಲದ ಕಾನೂನನ್ನು ಧಿಕ್ಕರಿಸಿರುವುದು ದೇಶದ್ರೋಹವೇ ಅಲ್ಲವೇ?

ಪ್ರಧಾನಿ ಮತ್ತು ಬಿಜೆಪಿಯ ಚುನಾವಣಾ ಪ್ರಚಾರ ಮಾಡಲೆಂದೇ ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಆರಂಭಗೊಂಡ ನಮೋ ಚಾನೆಲ್, ಪ್ರಸಾರದ ನಿಯಮಗಳನ್ನು ಪಾಲಿಸಿದೆಯೇ ಮತ್ತು ಇದೆಲ್ಲ ಚುಮಾವಣಾ ನೀತಿ ಸಂಹಿತೆಯ ಉಲ್ಲಂಘನೆ ಅಲ್ಲವೇ ಎಂಬ ಪ್ರಶ್ನೆಗಳನ್ನು ಎತ್ತಿವೆ. ಆದರೆ ಮಾಹಿತಿ ಮತ್ತು ಪ್ರಸಾರ ಇಲಾಖೆ ಮತ್ತು ಚುನಾವಣಾ ಆಯೋಗ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಮತ್ತು ಬರುವುದೂ ಇಲ್ಲ.
ವಾರ್ತಾ ಮತ್ತು ಪ್ರಸಾರ ಇಲಾಖೆ ಈಗಾಗಲೇ, ನಮೋ ಟಿವಿ ‘ವಿಶೇಷ ಸೇವೆಯ ಜಾಹಿರಾತು ಚಾನೆಲ್’ ಎಂದು ಘೋಷಿಸಿ, ಇದಕ್ಕೆಲ್ಲ ಲೈಸೆನ್ಸ್ ಅಗತ್ಯವಿಲ್ಲ ಎಂಬ ನಿಯಮವನ್ನು ಮುಂದೆ ಮಾಡಿದೆ. ಆದರೆ ಶುರುವಾದ ದಿನ ನ್ಯೂಸ್ ಚಾನೆಲ್ ಎಂದೇ ನಮೋ ಟಿವಿ ಹೇಳಿಕೊಂಡಿತ್ತು.

ಭಾರತದ ಕಾನೂನಿನ ಪ್ರಕಾರ, ಯಾವುದೇ ಚಾನೆಲ್ ಉಪಗ್ರಹಗಳಿಂದ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡಲು ಪ್ರಸಾರ ಇಲಾಖೆಯ ಅನುಮತಿ ಪಡೆಯಬೇಕು. ಕಂಪನಿಯ ಹಿನ್ನೆಲೆ ಮತ್ತು ಭದ್ರತಾ ವಿಷಯಗಳ ಪರಿಶೀಲನೆ ನಂತರವಷ್ಟೇ ಈ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಇಂತಹ ಯಾವ ಲೈಸನ್ಸ್ ಹೊಂದಿರದ ನಮೋ ಟಿವಿ ಎನ್‍ಎಸ್‍ಎಸ್-6 ಉಪಗ್ರಹದಿಂದ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡುತ್ತಿದೆ.

LyngSat ನೀಡಿದ ಮಾಹಿತಿ

ಜಗತ್ತಿನ ಸಂವಹನ ಮತ್ತು ಸಂಪರ್ಕ ತಜ್ಞರು ಮಾಹಿತಿಗಾಗಿ LyngSat ವೆಬ್‍ಸೈಟ್ ಫಾಲೋ ಮಾಡುತ್ತಾರೆ. ವಿಶ್ವದ ಉಪಗ್ರಹ ಆಧರಿತ ಪ್ರಸಾರ ಸೇವೆಗಳ ನಿಖರ ಮಾಹಿತಿಯನ್ನು ಈ ತಾಣ ಒಳಗೊಂಡಿದೆ. ಇದರ ಪ್ರಕಾರ, ನಮೋ ಟಿವೆ ಎನ್‍ಎಸ್‍ಎಸ್-6 ಉಪಗ್ರಹ ಸೇವೆ ಬಳಸಿಕೊಳ್ಳುತ್ತಿಯೀ ಉಪಗ್ರಹವು ಲುಕ್ಸೆಂಬರ್ಗ್ ಮೂಲದ ಎಸಿಎಸ್ ವರ್ಲ್ಡ್ ಸ್ಕೈಸ್ ಸಂಸ್ಥೆಗೆ ಸೇರಿದೆ. LyngSat ನಡೆಸುವ ಕ್ರಿಸ್ಟಿನ್ ಲಿಂಗಮಾರ್ಕ್ ಇದನ್ನು ‘ದಿ ವೈರ್’ ಪೋರ್ಟಲ್‍ಗೆ ಸ್ಪಷ್ಟಪಡಿಸಿದ್ದಾರೆ. ವೆಬ್‍ಸೈಟಿನಲ್ಲಿ ನಮೋ ಟಿವಿ ಲಿಸ್ಟ್ ಆಗಿರುವ ಸ್ಕ್ರೀನ್‍ಶಾಟ್ ಅನ್ನು ನೋಡಿ.

LyngSat ಮಾದರಿಯ ಸೇವೆ ಒದಗಿಸುವ ‘ಫ್ಲೈಸ್ಯಾಟ್; ವೆಬ್‍ಸೈಟ್ ಕೂಡ ನಮೋ ಟಿವಿ ಎನ್‍ಎಸ್‍ಎಸ್-6 ಉಪಗ್ರಹವನ್ನು ಬಳಸುತ್ತಿರುವುದನ್ನು ದೃಡಪಡಿಸಿದೆ.
ಸತ್ಯ ಹೀಗಿದ್ದರೂ, ಪ್ರಸಾರ ಇಲಾಖೆ ‘ವಿಶೇಷ ಸೇವೆ’ಯನ್ನಷ್ಟೇ ನೀಡುವ ನಮೋ ಟಿವೆಗೆ ಲೈಸೆನ್ಸ್ ಅಗತ್ಯವಿಲ್ಲ ಎಂದು ಜನರನ್ನು ದಾರಿ ತಪ್ಪಿಸುತ್ತಿದೆ. ಪ್ರಸಾರದ ಲೈಸೆನ್ಸ್ ಪಡೆಯದೇ ನಮೋ ಟಿವಿ ಉಪಗ್ರಹ ಬಳಸಿ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡುತ್ತಿದ್ದು, ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ.

ಇಲ್ಲಿ ಒಂದು ಪ್ರಶ್ನೆ ಎಂದರೆ, ನಾವೇ ನಮೋ ಟಿವಿ ಮಾಲಿಕರು ಎಂದು ಹೇಳಲು ಯಾರೂ ಮುಂದೆ ಬರುತ್ತಿಲ್ಲ! ಪ್ರಸಾರ ಇಲಾಖೆ ತಡಯಾಜ್ಞೆ ಒಡ್ಡಿರುವುದು ಸದ್ಯಕ್ಕೆ ಸಮಾಧಾನದ ಸಂಗತಿ. ಅಧಿಕಾರದ ದುರುಪಯೋಗವನ್ನು ಅದರ ಅತಿ ತಳಮಟ್ಟಕ್ಕೆ ಒಯ್ದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗುತ್ತಿದ್ದಾರೆ.
(ಆಧಾರ: ದಿ ವೈರ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

PTCL ಕಾಯ್ದೆ ಅನುಷ್ಠಾನ ವೈಫಲ್ಯ: ನ್ಯಾಯಾಂಗ ಹಾಗೂ ಸರ್ಕಾರದ ಧೋರಣೆ ಖಂಡಿಸಿ ಜ್ಯೂರಿ ವರದಿ ಬಿಡುಗಡೆ

ದಲಿತ ಸಮುದಾಯಗಳಿಗೆ ಮಂಜೂರಾದ ಭೂಮಿ ಅನ್ಯಯವಾಗುವುದನ್ನು ತಡೆಯುವಲ್ಲಿ ಹಾಗೂ ಪಿಟಿಸಿಎಲ್ (PTCL) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ನ್ಯಾಯಾಂಗ ಮತ್ತು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಜ್ಯೂರಿ ವರದಿಯು ತೀವ್ರವಾಗಿ ಅತೃಪ್ತಿ ವ್ಯಕ್ತಪಡಿಸಿದೆ. ಪಿಟಿಸಿಎಲ್...

SIR ಪ್ರಕ್ರಿಯೆಗೆ 6 ತಿಂಗಳ ಕಾಲಾವಕಾಶ ನೀಡಿ: ಸೆಪ್ಟೆಂಬರ್ 1 ರಂದು ‘ಎಲೆಕ್ಷನ್ ಕಮಿಷನ್ ಚಲೋ’ ಗೆ ಒಕ್ಕೂಟ ಕರೆ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅವೈಜ್ಞಾನಿಕ ಧೋರಣೆ ಹಾಗೂ ಗೊಂದಲಮಯ ಕ್ರಮಗಳನ್ನು ತೀವ್ರವಾಗಿ ಖಂಡಿಸಿರುವ 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ', ಮತದಾರರ ಹಕ್ಕುಗಳನ್ನು...

ನೇಪಾಳದಲ್ಲಿ ದಿಢೀರ್ ಪ್ರವಾಹ : 105 ಭಾರತೀಯರು ಸೇರಿದಂತೆ 384 ಮಂದಿ ನಾಪತ್ತೆ

ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿ ಪ್ರಕಾರ, ಬುಧವಾರ (ಆ.26) ಬೆಳಿಗ್ಗೆ ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ 105 ಭಾರತೀಯ ಪ್ರಜೆಗಳು ಸೇರಿದಂತೆ ಕನಿಷ್ಠ 384...

ರಾಜ್ಯದಲ್ಲಿ 102 ತಾಲೂಕುಗಳಲ್ಲಿ ಬರ: ಡಿಸಿಎಂ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, 102 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದೆ. ಕೇಂದ್ರ ಸರ್ಕಾರದ ಮಾನದಂಡಗಳನ್ವಯ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಬರ ಘೋಷಿಸಲಾಗುವುದು ಹಾಗೂ ಪ್ರತಿ ವಾರವೂ...

ಪ. ಬಂಗಾಳ SIR : ನ್ಯಾಯಮಂಡಳಿಗಳಿಂದ ಇದುವರೆಗೆ ಕೇವಲ 2.17% ಮೇಲ್ಮನವಿಗಳ ಇತ್ಯರ್ಥ; ಇನ್ನು 37 ಲಕ್ಷಕ್ಕೂ ಹೆಚ್ಚು ಬಾಕಿ!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಭಗವಾಂಗೋಲಾದ ನಿವಾಸಿಯಾದ ಮೊಹಮ್ಮದ್ ದುವಾಲ್ ಅಲಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಕರ್ತವ್ಯದ ಅವಧಿಯಲ್ಲಿ ಗುಂಡೇಟಿಗೆ ಒಳಗಾಗಿದ್ದರು. ಪ್ರಾಣಾಪಾಯದಿಂದ ಬದುಕುಳಿದ ಅವರು ನಂತರ ಭಾರತೀಯ ರೈಲ್ವೆಯಲ್ಲಿ ಕೆಲಸ...

ಬಂಡಾಯ ಸಂಸದರಿಗೆ ಸಂಕಷ್ಟ: 7 ದಿನಗಳಲ್ಲಿ ಉತ್ತರಿಸಲು ಲೋಕಸಭೆ ಸಚಿವಾಲಯ ತಾಕೀತು

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯವು ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದೆ. ಪಕ್ಷಾಂತರ ಕಾಯ್ದೆಯಡಿ ಸಂಸದರ ಅನರ್ಹತೆ ಪ್ರಕ್ರಿಯೆಗಳನ್ನು...

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ ಮೇಯರ್ ವಿರೋಧ: ಸಂಘದ ‘ಹೊರಗಿಡುವ ದೃಷ್ಟಿಕೋನ’ ಖಂಡಿಸಿದ ಮಮ್ದಾನಿ

ಅಮೆರಿಕದ ನ್ಯೂಯಾರ್ಕ್ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಭಾರತೀಯ ಮೂಲದವರ ಸಮಾವೇಶವು...

ಕರ್ನಾಟಕದಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕರ್ನಾಟಕದಲ್ಲಿ ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಟುಡೇ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ...

ಬೀದಿ ಬದಿ ವ್ಯಾಪಾರಿಗಳ ತೆರವು ಅಕ್ರಮ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

ಮಂಗಳೂರಿನ ಟೌನ್ ಹಾಲ್ ಸಮೀಪ ನಡೆಯುವ ಸಂಡೇ ಬಜಾರ್‌ನಲ್ಲಿ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲಾ...

ತೆಲಂಗಾಂಣ | ಹೈದರಾಬಾದ್‌-ವಿಜಯವಾಡ ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಮಂದಿ ಸಾವು; ಹಲವರಿಗೆ ಗಾಯ

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ (ಆ.26) ಮುಂಜಾನೆ ಖಾಸಗಿ ಎಲೆಕ್ಟ್ರಿಕ್ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 12 ಜನರು ಗಾಯಗೊಂಡಿದ್ದಾರೆ...