ಎರಡು ದಶಕದ ರಾಮ ಮಂದಿರ-ಬಾಬ್ರಿ ಮಸೀದಿ ವಿವಾದಕ್ಕೆ ಕಳೆದ ವರ್ಷ ತೆರೆ ಬಿದ್ದು ಈಗ ರಾಮ ಮಂದಿರ ನಿರ್ಮಾಣ ಕಾರ್ಯ ಹುರುಪು ಪಡೆದುಕೊಂಡಿದೆ. ಕೆಲಸಗಳು ಭರದಿಂದ ಸಾಗಿವೆ. ರಾಮ ಮಂದಿರ ನಿರ್ಮಾಣಕ್ಕೆಂದೇ ದೇಶದಾದ್ಯಂತ ದೇಣಿಗೆ ಸಂಗ್ರಹ ನಡೆಯುತ್ತಿದ್ದು, ಬಹತೇಕರು ಹಣ ನೀಡುತ್ತಿದ್ದಾರೆ. ಆದರೆ ಇನ್ನು ಕೆಲವರು ಮತ್ತೆ ಕೋಟ್ಯಾಂತರ ಹಣ ಸಂಗ್ರಹಿಸುವುದಾದರೆ ಅಡ್ವಾಣಿ ನೇತೃತ್ವದಲ್ಲಿ ಸಂಗ್ರಹವಾಗಿದ್ದ ಕೋಟ್ಯಂತರ ರೂ.ಗಳು ಏನಾಯ್ತು? ಎಂದು ಪ್ರಸ್ತಾಪಿಸಿ ಚರ್ಚೆ ಹುಟ್ಟುಹಾಕಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಸಂಗ್ರಹ ಮೆರವಣಿಗೆಯಲ್ಲಿ ಘರ್ಷಣೆ: ಗುಜರಾತಿನಲ್ಲಿ 40 ಜನರ ಬಂಧನ
ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ 1990 ರ ದಶಕದಲ್ಲಿ ದೇಶದಾದ್ಯಂತ ರಥಯಾತ್ರೆ ಆರಂಭಿಸಿ ಪ್ರತಿ ಮನೆಯಿಂದಲೂ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದ್ದರು. ಆದರೆ ಈ ರಾಮ ಜನ್ಮಭೂಮಿ ವಿವಾದ ಅಂದಿನಿಂದಲೂ ಇತ್ಯರ್ಥವಾಗಲೇ ಇಲ್ಲ. ಕೊನೆಗೆ 2014 ರಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ರಾಮ ಮಂದಿರ ನಿರ್ಮಾಣ’ವನ್ನು ಒಂದು ಆದ್ಯತೆಯ ಅಂಶವಾಗಿ ಸೇರಿಸಿತ್ತು. ಜೊತೆಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆದರೆ 2014-2019 ರವರೆಗಿನ ಬಿಜೆಪಿ ಆಡಳಿತದಲ್ಲಿ ರಾಮ ಜನ್ಮಭೂಮಿ ವಿವಾದ ತಾರ್ಕಿಕ ಅಂತ್ಯ ಕಾಣಲಿಲ್ಲ. ಹಾಗಾಗಿ 2019 ರಲ್ಲಿಯೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣದ ಅಂಶವನ್ನು ಪ್ರಸ್ತಾಪಿಸಿತ್ತು. ಕೊನೆಗೂ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ 2020 ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪನ್ನು ಹೊರಹಾಕಿತ್ತು. ಅದು ವಿವಾದಿತ ಜಾಗದಲ್ಲಿ ಮಂದಿರ ಕಟ್ಟಬೇಕೆಂದು ಹೇಳಿತು.
ಈಗ ಮುಖ್ಯ ಪ್ರಶ್ನೆಯಿರುವುದು 20 ವರ್ಷಗಳ ಹಿಂದೆ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹ ಮಾಡಿದ ಹಣದ ಲೆಕ್ಕ ಏನಾಯ್ತು? ಎನ್ನುವುದಾಗಿದೆ.
ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ 500 ಕೋಟಿ ರೂ ದೇಣಿಗೆ ಕೊಟ್ಟರೆ ಮುಖೇಶ್ ಅಂಬಾನಿ? ಸತ್ಯ ಇಲ್ಲಿದೆ…
ರಾಮ ಜನ್ಮಭೂಮಿಯ ವಿವಾದವನ್ನು ಮೊಟ್ಟ ಮೊದಲು ಆರಂಭಿಸಿದ್ದ ನಿರ್ಮೋಹಿ ಅಖಾಡ “ಬಿಜೆಪಿಯು ರಾಮ ಮಂದಿರದ ಹೆಸರಲ್ಲಿ ಸಂಗ್ರಹಿಸಿರುವ ಸುಮಾರು 1,400 ಕೋಟಿ ಹಣವನ್ನು ಗುಳುಂ ಮಾಡಿದೆ. ತನ್ನ ಸ್ವಂತ ಹಿತಾಸಕ್ತಿಗೆ ಬಳಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕ್ಷ್ಯವೂ ಇದೆ. ಅಯೋಧ್ಯೆ ಆಂದೋಲನದಲ್ಲಿ ಭಾಗಿಯಾಗಿದ್ದವರ ಅನೇಕ ಕೊಲೆಗಳೂ ನಿಗೂಢವಾಗಿ ನಡೆದಿವೆ. ಹಾಗಾಗಿ ಇದರ ತನಿಖೆಯಾಗಬೇಕು. ಯಾಕೆಂದರೆ ನಾವು ಬಿಜೆಪಿಯಂತೆ ಹಣಕ್ಕಾಗಿ ರಾಮನನ್ನು ಪ್ರೀತಿಸಲಿಲ್ಲ” ಎಂದು ಪ್ರಬಲವಾದ ಆರೋಪವೊಂದನ್ನು ಮಾಡಿದ್ದರು. ಆದರೆ ನಂತರ ದಿನಗಳಲ್ಲಿ ಈ ವಿಷಯ ಏನಾಯಿತು ಎಂಬುದೂ ನಿಗೂಢ! ಅದರ ವಿಡಿಯೋ ಈ ಕೆಳಗಿನ ಟ್ವೀಟ್ ನಲ್ಲಿದೆ.
People involved from the beginning with the Ayodhya temple movement accuse the BJP of swallowing 1400 Crores collected for the temple, Modi of appropriating 'credit' & more ominously talk of the mysterious 'murder' of several leaders of Ayodhya movement! pic.twitter.com/q9aiOabXHB
— Prashant Bhushan (@pbhushan1) September 9, 2020
ಇತ್ತೀಚೆಗೆ ರಾಮ ಜನ್ಮಭೂಮಿ ಟ್ರಸ್ಟ್ನಲ್ಲಿ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಟ್ರಸ್ಟ್ನ 4 ಜನರನ್ನು ಬಂಧಿಸಲಾಗಿತ್ತು.
ಇರಲಿ, ಈಗ ಪ್ರಸ್ತುತ ವಿಷಯಕ್ಕೆ ಬರೋಣ. ಈಗ ರಾಮ ಮಂದಿರ ನಿರ್ಮಾಣಕ್ಕೆಂದು ಬಿಜೆಪಿ ಮತ್ತು ಸಂಘಪರಿವಾರದಿಂದ ಮತ್ತೆ ದೇಣಿಗೆ ಸಂಗ್ರಹ ಕಾರ್ಯ ಆರಂಭವಾಗಿದೆ. ಇದು ಫೆಬ್ರವರಿ 17 ರವರೆಗೂ ನಡೆಯಲಿದೆ. ಹಾಗಾಗಿ ದೇಶದಾದ್ಯಂತ ಈ ಕಾರ್ಯ ನಡೆಯುತ್ತಿದೆ. ಆದರೆ ಈ ಮೇಲೆ ಹೇಳಿದಂತೆ ಕೆಲವರು ಮಾತ್ರ ಈ ಹಿಂದೆ ರಾಮ ಮಂದಿರಕ್ಕೆಂದು ಸಂಗ್ರಹವಾಗಿದ್ದ ಹಣದ ಬಗ್ಗೆ ಈಗ ಲೆಕ್ಕ ಕೇಳುತ್ತಿದ್ದಾರೆ.
ಇದನ್ನೂ ಓದಿ: ರಾಮಮಂದಿರ ನಿರ್ಮಾಣದ ಜವಾಬ್ದಾರಿಯನ್ನು ನಮಗೆ ಕೊಡಿ: ಮೂರು ಟ್ರಸ್ಟ್ಗಳ ನಡುವೆ ಪೈಪೋಟಿ
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಕಾಂತಿಲಾಲ್ ಭೂರಿಯಾ ಎಂಬುವವರು ಜನವರಿ 1 ರಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಅದರಂತೆ, “ಬಿಜೆಪಿ ನಾಯಕರು ರಾಮ ಮಂದಿರ ನಿರ್ಮಾಣಕ್ಕೆಂದು ಇಷ್ಟು ವರ್ಷಗಳಲ್ಲಿ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು. ಹಗಲಿನಲ್ಲಿ ಹಣ ಸಂಗ್ರಹ ಮಾಡಿ, ರಾತ್ರಿಯಲ್ಲಿ ಮದ್ಯಪಾನ ಮಾಡುತ್ತಾರೆ” ಎಂದು ಆರೋಪಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.
BJP leaders collected thousands of crores over the years in the name of Ram Temple construction. Where did that fund go? They collect donations in day & drink alcohol using the same money at night: Congress MLA Kantilal Bhuria (01.01.2021) pic.twitter.com/AEAZW9XGPT
— ANI (@ANI) February 2, 2021
ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಸಿ ಎಸ್ ದ್ವಾರಕಾನಾಥ್ ಅವರು ಕೂಡ ದೇಣಿಗೆ ಸಂಗ್ರಹಕ್ಕೆ ಬಂದ ಹಿಂದೂ ಕಾರ್ಯಕರ್ತರನ್ನು, ರಾಮ ಮಂದಿರಕ್ಕೆಂದು ಈ ಹಿಂದೆ ಸಂಗ್ರಹಿಸಿದ್ದ ಹಣದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಪಾಪ ಅವರ ಬಳಿಯೂ ಲೆಕ್ಕ ಮತ್ತು ಉತ್ತರ ಎರಡೂ ಇರಲಿಲ್ಲ. ಇದು ಇವರ ಪ್ರಶ್ನೆ ಮಾತ್ರವಲ್ಲ, ಹಲವಾರು ಪ್ರಜ್ಞಾವಂತರ ಪ್ರಶ್ನೆಯೂ ಆಗಿದೆ.
ಜನವರಿ 17 ರವರೆಗೆ ರಾಮಮಂದಿರಕ್ಕಾಗಿ ಸುಮಾರು 100 ಕೋಟಿ ಸಂಗ್ರಹವಾಗಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಇನ್ನು ಕೆಲವರು ರಾಮ ಮಂದಿರಕ್ಕೆಂದು ದೇಣಿಗೆ ಸಂಗ್ರಹ ಮಾಡುವುದಕ್ಕೆ ಬರುವವರು ರಶೀದಿಯನ್ನೂ ಸಹ ಕೊಡುವುದಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೇ ದೇಣಿಗೆ ಸಂಗ್ರಹ ಆರಂಭವಾದ ಕೆಲವೇ ದಿನದಲ್ಲಿ ಲಕ್ಷಗಟ್ಟಲೆ ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ
ಇನ್ನು ದೇಣಿಗೆ ಸಂಗ್ರಹಕ್ಕಾಗಿ ಮನೆಯ ಬಳಿ ಬಂದಾಗ ಒತ್ತಾಯಪೂರ್ವಕವಾಗಿ ಹಣಕ್ಕೆ ಬೇಡಿಕೆಯಿಟ್ಟಿರುವ ಹಲವು ಉದಾಹರಣೆಗಳು ಕಂಡು ಬಂದಿವೆ. ಹಣ ನೀಡದಿದ್ದರೆ ರಸ್ತೆಯಲ್ಲಿ ನಿಂತು, ‘ನೀವು ದೇಶದ್ರೋಹಿಗಳು’ ಎಂದು ಕೂಗಾಡುತ್ತಾ ಹೋಗುತ್ತಾರೆ. ಇನ್ನು ಮನೆಯ ಬಳಿ ಬಂದವರನ್ನು ಹಾಗೇ ಕಳುಹಿಸಬಾರದೆಂದು ಹಲವರು ಪೇಚಾಟಕ್ಕೆ ಸಿಲುಕಿ ಹಣ ನೀಡಿರುವ ಸಂಭವವೂ ಇದೆ. ಹಾಗೆಯೇ ಸ್ಥಳೀಯ ಯುವಕರನ್ನು ಜೊತೆಯಾಗಿಸಿಕೊಂಡು ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಬಿಜೆಪಿ ಪರ ಪ್ರಚಾರವನ್ನೂ ಮಾಡಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ಇನ್ನು ಕೆಲವರು ನಮ್ಮೂರಿನ ಶಾಲೆ-ಆಸ್ಪತ್ರೆ ಕಟ್ಟಲು ದೇಣಿಗೆ ಸಂಗ್ರಹಿಸೋಣ. ಅಯೋಧ್ಯೆಯ ರಾಮ ದೇವಾಲಯವೊಂದಕ್ಕೆ ಸಾವಿರಾರು ಕೋಟಿ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ರಾಮನ ಹೆಸರಿನಲ್ಲಿ ನಡೆಸುವ ರಾಜಕೀಯವನ್ನು ಕೊನೆಗೊಳಿಸುವ ಸಮಯ: ಶಿವಸೇನೆ