Homeಕರ್ನಾಟಕಬಿಜೆಪಿ ವಿರುದ್ಧ ತೆಂಗು ಬೆಳೆಗಾರರ ಆಕ್ರೋಶ

ಬಿಜೆಪಿ ವಿರುದ್ಧ ತೆಂಗು ಬೆಳೆಗಾರರ ಆಕ್ರೋಶ

- Advertisement -
|  ಆಣೆಕಟ್ಟೆ ವಿಶ್ವನಾಥ್ |
ತೆಂಗು ಬೆಳೆಗಾರರ ಸಂಘ
ತೆಂಗು ಬೆಳೆಗಾರರ ಮಟ್ಟಿಗೆ ರಾಜ್ಯದಲ್ಲಿ ಒಂದು ಸಹಕಾರಿ ಚಳವಳಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಸಂಕ್ರಮಣ ಕಾಲ ಇದು. ಇದಕ್ಕೆ ಮುಖ್ಯ ಕಾರಣ ಶ್ರೀ ಟಿ.ಕೆ.ಜೋಶ್ ಎಂಬ ದೂರಗಾಮಿ ದೃಷ್ಟಿ ಹೊಂದಿದ್ದ ಐಎಎಸ್ ಅಧಿಕಾರಿ 2002ರಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಬಂದಿದ್ದು. ಇವರು ಕೇರಳ ಸರ್ಕಾರದಲ್ಲಿ ಕುಟುಂಬಶ್ರೀ ಎಂಬ ಮಹಿಳಾ ಸ್ವ ಸಹಾಯ ಸಂಘಗಳ ಯೋಜನೆ ಪ್ರಾರಂಭಿಸಿ ಯಶಸ್ವಿ ಯಾಗಿದ್ದವರು. ಭಾರತ ದೇಶವನ್ನು ತೆಂಗು ಕ್ಷೇತ್ರದಲ್ಲಿ ಜಾಗತಿಕ ಮುಂದಾಳಾಗಿಸುವ ದೂರದೃಷ್ಟಿ ಹೊಂದಿದ್ದರು. ಅದಕ್ಕಾಗಿ ದೇಶದಾದ್ಯಂತ ತೆಂಗು ಉತ್ಪಾದಕರ ಕಂಪನಿ ಮತ್ತು ಒಕ್ಕೂಟ ಸ್ಥಾಪಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮೌಲ್ಯವರ್ಧನೆ ಮೂಲಕ ಸಶಕ್ತೀಕರಣಕ್ಕೆ ಮುಂದಾಗಿದ್ದರು. ಇವರು ಎಷ್ಟೊಂದು ಸಕಾರಾತ್ಮಕ ವಾಗಿದ್ದರೆಂದರೆ, ಇವರ ಜೊತೆಗೆ ಒಂದು ದಿನ ಕಳೆದರೆ ನಮಗೆಲ್ಲ ಒಂದು ವರ್ಷಕ್ಕಾಗುವಷ್ಟು ಎನರ್ಜಿ ಸಿಗುತ್ತಿತ್ತು. ಕೇರಳ ಸರ್ಕಾರ ನೀರಾ ನೀತಿ ರೂಪಿಸಲು ಉಮ್ಮನ್ ಚಾಂಡಿ ಜೊತೆಗೆ ಸೇರಿ ಯಶಸ್ವಿಯಾಗಿ ಮಾಡಿದ್ದರು. ಕರ್ನಾಟಕದಲ್ಲಿ ನೀರಾ ನೀತಿ ರೂಪಿಸಲು ನಮ್ಮ ಬೆನ್ನು ತಟ್ಟಿ ಸರ್ಕಾರದ ಜೊತೆಯಲ್ಲಿ ಮಾತುಕತೆ ನಡೆಸಲು ಅವಶ್ಯಕ ಎಲ್ಲಾ ಬೆಂಬಲ ನೀಡಿದ್ದರು. ಇದರಿಂದ ಕರ್ನಾಟಕದಲ್ಲಿಯೂ ಸಿಹಿ ನೀರಾ ನೀತಿ ಜಾರಿಗೆ ಬಂತು.
ತೆಂಗು ಬೆಳೆಗಾರರ ಸಂಘದ ಉದ್ಘಾಟನೆ
ಕರ್ನಾಟಕದ ತೆಂಗು ಕ್ಷೇತ್ರದಲ್ಲಿ ಕೇರಳದಲ್ಲಿ ಆದಂತಹ ಬದಲಾವಣೆ ಆಗಲಿಲ್ಲ. ಅದಕ್ಕೆ ಮುಖ್ಯ ಕಾರಣ ಕರ್ನಾಟಕದ ನಿರ್ದೇಶಕರು ಅಂತಹ ದಕ್ಷ ಅಧಿಕಾರಿಗಳಾಗಿರಲಿಲ್ಲ. ಕೇರಳದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ಕೇಂದ್ರ ಕಛೇರಿ ಇದ್ದದ್ದು ಕೇರಳ ರೈತರಿಗೆ ಪೂರಕವಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಹೋರಾಟದ ಫಲವಾಗಿ ರಾಜ್ಯದಲ್ಲಿ ಸುಮಾರು ಹದಿನಾಲ್ಕು ತೆಂಗು ಉತ್ಪಾದಕರ ಕಂಪನಿಗಳು ನೂರೈವತ್ತಕ್ಕು ಅಧಿಕ ಒಕ್ಕೂಟಗಳು ರಾಜ್ಯದಾದ್ಯಂತ ಸ್ಥಾಪನೆಯಾದವು. ಇವುಗಳ ಅಷ್ಟೊಂದು ಪರಿಣಾಮಕಾರಿಯಾಗಿ  ಕೆಲಸ ಮಾಡಲು ದಕ್ಷ ಅಧಿಕಾರಿಯ ಕೊರತೆಯನ್ನು ಮನಗಂಡು ತನ್ನ ಬಲಗೈನಂತಿದ್ದ ಶ್ರೀ ಹೇಮಚಂದ್ರ ಅವರನ್ನು ಕರ್ನಾಟಕಕ್ಕೆ ನಿರ್ದೇಶಕರಾಗಿ ಶ್ರೀ ಟಿ ಕೆ ಜೋಶ್ ಕಳಿಸಿಕೊಟ್ಟರು.
ಶ್ರೀ ಹೇಮಚಂದ್ರ ಕರ್ನಾಟಕಕ್ಕೆ ಬಂದ ಮೇಲೆ ತೆಂಗು ಬೆಳೆಗಾರರ ಒಕ್ಕೂಟ ಮತ್ತು ಕಂಪನಿಗಳಿಗೆ ಆನೆ ಬಲ ಬಂತು. ಜಾತ್ಯಾತೀತ ವಾಗಿ ಮತ್ತು ಪ್ರದೇಶಾತೀತವಾಗಿ ಎಲ್ಲರ ಬೆನ್ನು ತಟ್ಟಿ ಬೆಂಬಲಿಸಿದರು. ಇದರ ಪರಿಣಾಮವಾಗಿ ತೆಂಗು ಉತ್ಪಾದಕರ ಕಂಪನಿ ಮತ್ತು ಒಕ್ಕೂಟಗಳಿಗೆ ಆನೆ ಬಲ ಬಂತು. ಐತಿಹಾಸಿಕವಾಗಿ ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಅತೀ ಹೆಚ್ಚು ಅನುದಾನ ಹರಿದು ಬಂದವು. ವರ್ಷಕ್ಕೆ ಸರಾಸರಿ ನಾಲ್ಕು ಕೋಟಿ ಬರುತ್ತಿದ್ದ ಅನುದಾನ ಎಂಬತ್ತು ಕೋಟಿಗೆ ಏರಿತು.  ಇದೇ ಸಮಯದಲ್ಲಿ ಟಿಕೆ ಜೋಶ್ ಅವರನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿತು. ಈ ಸ್ಥಾನಕ್ಕೆ ಬಿಜೆಪಿ ವಿಚಾರದಲ್ಲಿ ನಂಬಿಕೆ ಉಳ್ಳ ರಾಜು ನಾರಾಯಣ ಸ್ವಾಮಿ ಅಧಿಕಾರವಹಿಸಿಕೊಂಡರು.
ಹೇಮಚಂದ್ರ ಅವರು ತಮ್ಮ ಕೆಲಸಗಳನ್ನು ಪ್ರಾಮಾಣಿಕ ವಾಗಿ ನಡೆಸುತ್ತಿದ್ದರು. ನಮಗೆ ಟಿಕೆ ಜೋಶ್ ಇಲ್ಲ ಎಂಬ ಭಾವನೆ ಬರದಂತೆ ವೈಯಕ್ತಿಕವಾಗಿ ನಮ್ಮ ಜೊತೆ ನಿಂತರು. ಯಾವುದೇ ಒಕ್ಕೂಟ ಕಂಪನಿ ಯಾವುದೇ ಕೆಲಸ ಕಾರ್ಯ ಕೇಳಿದರೂ ಪ್ರಾಮಾಣಿಕವಾಗಿ ಬೆಂಬಲ ನೀಡುತ್ತಿದ್ದರು. ಯೋಜನೆಗಳ ಅನುಷ್ಠಾನದಲ್ಲಿ ಇದ್ದ ನ್ಯೂನತೆಗಳನ್ನು ನಿವಾರಿಸಲು ಅನೇಕ ಬಗೆಯ ಬದಲಾವಣೆ ತಂದರು.
ಹೇಮಚಂದ್ರ
ಇದೇ ಸಮಯದಲ್ಲಿ ಬಿಜೆಪಿಯ ಕಣ್ಣು ಇವರ ಮೇಲೆ ಬಿತ್ತು. ಬಿಜೆಪಿಯ ಮಾಜಿ ಎಂಎಲ್ ಸಿ ಮನೋಹರ ಮಸ್ಕಿ ಗುಂಪು ಇವರ ಮೇಲೆ ಒತ್ತಡ ಹೇರಿ ತಮಗೆ ಬೇಕಾದಂತೆ ಲಾಬಿ ನಡೆಸಲು ಪ್ರಯತ್ನಿಸಿದರು. ಇದ್ಯಾವುದಕ್ಕೂ ಜಗ್ಗದ ಹೇಮಚಂದ್ರ “ತೆಂಗು ಅಭಿವೃದ್ಧಿ ಮಂಡಳಿಯ ಕಛೇರಿಯನ್ನು ಬಿಜೆಪಿಯ ಕಛೇರಿಯನ್ನಾಗಿ ಮಾಡಿಕೊಳ್ಳಲು ಬಿಡೆನು” ಎಂಬ ಸಂದೇಶ ರವಾನಿಸಿದರು. ಇದರ ಪರಿಣಾಮವಾಗಿ ಮನೋರ ಮಸ್ಕಿಯವರು (ಇವರ ಬಗ್ಗೆ ತಿಳಿಯಲು ಆರ್ ಎಸ್ ಎಸ್ ಹಿರಿಯರಾದ ಬೇಳೂರು ಸುದರ್ಶನ ಅವರನ್ನು ಕೇಳಿರಿ. ಅವರು ತಮ್ಮ ಮಿತ್ರಮಾಧ್ಯಮ ವೆಬ್ ಸೈಟ್ ನಲ್ಲಿ ಮಸ್ಕಿಯ ಸ್ಕೀಮುಗಳ ಬಗ್ಗೆ ಬರೆದಿದ್ದಾರೆ. ) ಚಿಕ್ಕನಾಯಕನಹಳ್ಳಿ ಎಮ್.ಎಲ್.ಎ ಜೆ.ಸಿ ಮಾಧುಸ್ವಾಮಿ ಜೊತೆ ಸೇರಿ ಹೇಮಚಂದ್ರ ವಿರುದ್ಧ ತಿರುಗಿ ಬಿದ್ದರು.
ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಮೂಲಕ ಹೇಮಚಂದ್ರ ವಿರುದ್ಧ ಪಿತೂರಿ ನಡೆಸಿ ಅವರನ್ನು ಅಮಾನತುಗೊಳಿಸುವಲ್ಲಿ ಯಶಸ್ವಿಯಾದರು. ಈ ವಿಚಾರವನ್ನು ಸ್ವತಃ ಮಾಧುಸ್ವಾಮಿಯೇ  ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಇಲ್ಲಿಂದ ತೆಂಗು ಬೆಳೆಗಾರರ ಯಶಸ್ಸಿಗೆ ದುಡಿಯುತ್ತಿದ್ದ ಮಹಾಚೇತನವೊಂದು ನಮ್ಮಿಂದ ದೂರವಾಯಿತು. ಈಗ ಇದರ ವಿರುದ್ಧ ತೆಂಗು ಬೆಳೆಗಾರರು ಚಳವಳಿ ನಡೆಸುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವ ಪಣ ತೊಟ್ಟಿದ್ದಾರೆ. ಕರ್ನಾಟಕದ ತೆಂಗು ಬೆಳೆಗಾರರ ಅಸ್ಮಿತೆಯಂತಿದ್ದ ಹೇಮಚಂದ್ರ ಮರಳಿ ಬರಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...