Homeಮುಖಪುಟನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

ನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

- Advertisement -
- Advertisement -

| ಎ.ಕೆ.ಸುಬ್ಬಯ್ಯ | ಹಿರಿಯ ಚಿಂತಕರು.

ನರೇಂದ್ರ ಮೋದಿಯ ವ್ಯಕ್ತಿಚಿತ್ರದ ಎದುರಾಗಿ ರಾಹುಲ್ ಗಾಂಧಿಯನ್ನು ನಿಲ್ಲಿಸೋಣ. ರಾಹುಲ್ ಗಾಂಧಿಯನ್ನು ನರೇಂದ್ರ ಮೋದಿಗಿಂತ ಕೆಟ್ಟವನು ಎಂದು ಹೇಳಲು ಸಾಧ್ಯವೇ ಇಲ್ಲ. ಅಥವಾ ನರೇಂದ್ರ ಮೋದಿ ರಾಹುಲ್ ಗಾಂಧಿಯಷ್ಟು ಒಳ್ಳೆಯವನು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ರಾಹುಲ್ ಗಾಂಧಿಯಿಂದ ನರೇಂದ್ರ ಮೋದಿ ಆಗಲು ಸಾಧ್ಯವಿಲ್ಲ. ನರೇಂದ್ರ ಮೋದಿಯಿಂದ ರಾಹುಲ್ ಗಾಂಧಿ ಆಗಲು ಸಾಧ್ಯವಿಲ್ಲ.

ನರೇಂದ್ರ ಮೋದಿಯ ಸ್ಥಾನದಲ್ಲಿ ರಾಹುಲ್ ಗಾಂಧಿ ಇದ್ದಿದ್ದರೆ ಗುಜರಾತ್ ಹತ್ಯಾಕಾಂಡ ನಡೆಯುತ್ತಿತ್ತೇ? ಅದರ ನಂತರ ಸಿಬಿಐ ಅನ್ನು ವಶ ಮಾಡಿಕೊಂಡು ಅದರ ಮೂಲಕ ಕ್ರಿಮಿನಲ್‍ಗಳನ್ನೆಲ್ಲಾ ಪಾರು ಮಾಡುವ ಮಟ್ಟಕ್ಕೆ ರಾಹುಲ್ ಗಾಂಧಿ ಹೋಗುತ್ತಿದ್ದರಾ? ಯಾವ ಕಾರಣದಿಂದಲೂ, ಯಾವ ದೃಷ್ಟಿಕೋನದಿಂದಲೂ ನರೇಂದ್ರ ಮೋದಿಯಷ್ಟು ದುಷ್ಟತನದಿಂದ ಕೂಡಿದ, ಕ್ರೋಧ, ಅಸೂಯೆ, ಪ್ರತಿಕಾರ ಮನೋಭಾವನೆಯಿಂದ ಕೂಡಿದ ಒಬ್ಬ ವ್ಯಕ್ತಿ ಆಗಲು ರಾಹುಲ್ ಗಾಂಧಿಗೆ ಸಾಧ್ಯವೇ ಇಲ್ಲ.

ರಾಹುಲ್ ಗಾಂಧಿ ಎಂದೊಡನೆ ಕುಟುಂಬ ರಾಜಕಾರಣ, ಅಪ್ಪು, ಪಪ್ಪು ಎಂದು ಗೇಲಿ ಮಾಡುತ್ತಾ ಆತನ ನೈತಿಕ ಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆಂದುದನ್ನು ಬಿಟ್ಟರೆ, ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಲು ಬೇರೆನೂ ಇಲ್ಲದೇ ಇದನ್ನೇ ಪದೇ ಪದೇ ಹೇಳುತ್ತಿದ್ದಾರೆ ಎಂದರೆ ಏನು ಅರ್ಥ?


ಭ್ರಷ್ಟಾಚಾರ ವಿರೋಧಿ ನರೇಂದ್ರ ಮೋದಿ ಎಂದು ಹೇಳುತ್ತಿದ್ದಾರಲ್ಲ, ರಾಫೇಲ್ ಪ್ರಕರಣದಲ್ಲಿ ಮೋದಿ ಇಂದು ಬೆತ್ತಲಾಗಿ ಬೀದಿಯಲ್ಲಿ ನಿಂತಿದ್ದಾರಲ್ಲವೇ? ದೇಶದ ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರಲ್ಲವೇ? ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ, ಈ ಹಿಂದೆ ಯುಪಿಎ ಸಂದರ್ಭದಲ್ಲಿ ಜೈಲಿಗೆ ಹೋದ ಹಲವರು ಹೊರಗೆ ಬಂದರು. ಅವರು ರಾಬರ್ಟ್ ವಾದ್ರಾ ಸೇರಿದಂತೆ ಯಾರ್ಯಾರ ಮೇಲೆ ಆರೋಪವನ್ನು ಮಾಡಿದರೋ ಅವರ್ಯಾರೂ ಜೈಲಿಗೆ ಹೋಗಲಿಲ್ಲ.

ಎಲ್ಲ ರಾಷ್ಟ್ರೀಯ ಪಕ್ಷಗಳೂ ದೇಶವನ್ನು ಆಳಿದ್ದಾರೆ. ಅಧಿಕಾರ ಅನುಭವಿಸಿದಂತಹ ಪಕ್ಷಗಳೇ ಇರುವುದು. ಇವರೆಲ್ಲರ ಪೈಕಿ ಇಡೀ ದೇಶ ಗುರುತಿಸುವಂತಹ ಒಬ್ಬ ರಾಷ್ಟ್ರ ನಾಯಕ ಅಂದ್ರೆ ಯಾರಿದಾರೆ? ಮೋದಿ, ಮೋದಿಯ ನಂತರ.. .. ರಾಹುಲ್ ಗಾಂಧಿ ಬಿಟ್ಟರೆ ಇನ್ಯಾರಾದರೂ ಕಣ್ಣಿಗೆ ಕಾಣುತ್ತಾರಾ? ಇದ್ದಾರೆ, ವಾಮಪಂಥೀಯರಿದಾರೆ. ಸದ್ಗುಣ ಸಂಪನ್ನರಿದಾರೆ. ಆದರೆ ಅವರು ಸಮಾಜದಲ್ಲಿ ಹೆಚ್ಚು ಚಲಾವಣೆ ಆಗುತ್ತಿಲ್ಲ. ಅವರು ಅವರನ್ನು ತಿದ್ದಿಕೊಂಡು, ಇಡೀ ಇಂಡಿಯಾದ ನೇತೃತ್ವವನ್ನು ತಮ್ಮದಾಗಿಸಿಕೊಳ್ಳುವಂತಹ ಪ್ರಯತ್ನವನ್ನೇ ಮಾಡುವುದಿಲ್ಲವಲ್ಲ. ಈ ರೀತಿ ನಾವು ತುಂಬ ಅಸಹಾಯಕರಾಗಿದ್ದೀವಿ. ಆ ದೃಷ್ಟಿಯಲ್ಲಿ ರಾಹುಲ್ ಗಾಂಧಿಯೇ ನಮಗೆ ಸ್ವೀಕಾರಾರ್ಹ.


ವ್ಯಕ್ತಿಚಿತ್ರವನ್ನು ತೆಗೆದುಕೊಂಡು ರಾಹುಲ್ ಗಾಂಧಿಯನ್ನು ಪದೇ ಪದೇ ಗೇಲಿ ಮಾಡೋದರ ಅರ್ಥ ರಾಹುಲ್ ಗಾಂಧಿ ಅಷ್ಟು ಸಣ್ಣವ ಅಂತಲ್ಲ. ರಾಹುಲ್ ಗಾಂಧಿಯನ್ನು ಸಣ್ಣದು ಮಾಡುವ ಪ್ರಯತ್ನ ಅದು. ಸಣ್ಣದು ಮಾಡುವುದರ ಹಿಂದೆ ಇರುವಂತದ್ದು ಭಯ, ರಾಹುಲ್ ಗಾಂಧಿಯ ಬಗ್ಗೆ ಇರುವ ಭಯ. ಇಷ್ಟೊಂದು ಸಣ್ಣ ವ್ಯಕ್ತಿಯ ಬಗ್ಗೆ ಭಯ ಏಕೆ? ಮೋದಿ ರಾಹುಲ್ ಗಾಂಧಿಯ ಭಜನೆ ಮಾಡದೇ ಯಾವುದಾದರೊಂದು ಭಾಷಣವನ್ನು ಅಂತ್ಯ ಮಾಡುತ್ತಾರಾ? ಒಬ್ಬ ಅಪ್ಪು, ಪಪ್ಪು, ಕೆಲಸಕ್ಕೆ ಬಾರದ ಸಣ್ಣ ವ್ಯಕ್ತಿಯ ಬಗ್ಗೆ ಯಾಕೆ ಭಯ ಪಡಬೇಕು? ಇದು ರಾಹುಲ್ ಗಾಂಧಿಯ ಬಗ್ಗೆ ಒಳಗೆ ಅಡಗಿಸಿಟ್ಟುಕೊಂಡಿರುವ ಭಯ. ಆದ್ದರಿಂದ ಇಡೀ ದೇಶದಲ್ಲಿ ನರೇಂದ್ರ ಮೋದಿಯ ವಿರುದ್ಧ ಗೆಲ್ಲಿಸಬೇಕಾದಂತಹ, ಸ್ವೀಕರಿಸಬೇಕಾದಂತಹ ಏಕೈಕ ವ್ಯಕ್ತಿ, ಎಲ್ಲ ಕೋನಗಳಿಂದ ರಾಹುಲ್ ಗಾಂಧೀ ಎಂದು ನನಗೆ ಅನಿಸುತ್ತದೆ.


ನಾನು ರಾಹುಲ್ ಗಾಂಧಿಯನ್ನು ಭಾರಿ ಪುರುಷೋತ್ತಮ ಎಂದು ಭಾವಿಸುತ್ತಿಲ್ಲ. ಮನುಷ್ಯನಲ್ಲಿ ಅಡಗಿರುವಂತಹ ಕೆಲವು ದೌರ್ಬಲ್ಯಗಳು ಅವನಲ್ಲಿಯೂ ಇವೆ. ಆದರೆ ನರೇಂದ್ರ ಮೋದಿಗೆ ಹೋಲಿಸಿದರೆ ರಾಹುಲ್ ಗಾಂಧಿ ಅಪರಂಜಿಯಾಗಿ ವಿಜೃಂಭಿಸುತ್ತಾನೆ. ಇದನ್ನು ಜನ ಆಳವಾಗಿ ಯೋಚನೆ ಮಾಡಿ, ಚಿಂತನೆ ಮಾಡಿ ಸರಿಕಂಡರೆ ಒಪ್ಪಿಕೊಳ್ಳಿ, ಇಲ್ಲವೆಂದರೆ ಬಿಟ್ಟುಬಿಡಿ. ಆದರೆ ಒಂದಂತೂ ನಿಜ, ನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...