Homeಕರ್ನಾಟಕಮೋದಿಯವರು ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ - ದೇವನೂರು

ಮೋದಿಯವರು ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ – ದೇವನೂರು

- Advertisement -
- Advertisement -

ಸಂದರ್ಶನ
| ಡಾ.ಎಸ್ ತುಕಾರಾಂ |

ಪರ್ಯಾಯ ರಾಜಕಾರಣದ ಪ್ರಯತ್ನಗಳನ್ನು ನಡೆಸುತ್ತಾ ಸಕ್ರಿಯವಾಗಿರುವ ಕನ್ನಡದ ಮಹತ್ವದ ಲೇಖಕ ದೇವನೂರ ಮಹಾದೇವ ಅವರನ್ನು ತುಕಾರಾಂ ಅವರು ಸಂಯುಕ್ತ ಕರ್ನಾಟಕಕ್ಕಾಗಿ ಸಂದರ್ಶಿಸಿದ್ದರು. ಆ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಇದನ್ನು ಪ್ರಕಟಿಸಲು ಅನುಮತಿ ಕೊಟ್ಟ ದೇವನೂರ ಮಹಾದೇವ, ತುಕಾರಾಂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಹುಣಸವಾಡಿ ರಾಜನ್ ಅವರಿಗೆ ಧನ್ಯವಾದಗಳು ತಿಳಿಸಲು ಬಯಸುತ್ತೇವೆ.

ನಿಮ್ಮ ಸ್ವರಾಜ್ ಇಂಡಿಯಾ ಪಕ್ಷ ಲೋಕಸಭೆಗೆ ರಾಜ್ಯದಲ್ಲಿ ಯಾವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿಲ್ಲವಲ್ಲ, ಯಾಕೆ?
ರೈತ ಮತ್ತು ದಲಿತ ಸಂಘಟನೆಗಳ ಕೂಡಿಕೆಯ ಸ್ವರಾಜ್ ಇಂಡಿಯಾದ ನೆಲೆ ಇರುವುದು ಜಿಲ್ಲಾ ಪಂಚಾಯ್ತ್, ತಾಲ್ಲೂಕು ಪಂಚಾಯ್ತ್ ಕ್ಷೇತ್ರಗಳಲ್ಲಿ. ಹಾಗಾಗಿ ನಿಲ್ಲಿಸಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರಿಗೆ ಬೆಂಬಲ ನೀಡಿದ್ದೇವೆ.

• ಹಾಗದರೆ ಉಳಿದೆಡೆ ಲೋಕಸಭಾ ಕ್ಷೇತ್ರಗಳಲ್ಲಿ ನಿಮ್ಮ ಕೆಲಸ ಏನು?
ಸ್ವರಾಜ್ ಇಂಡಿಯಾ “ದೇಶಕ್ಕಾಗಿ ನಾವು” ಎಂಬ ಜಾಗೃತಿಯ ಆಂದೋಲನದ ಭಾಗವಾಗಿದೆ. ದೇಶವನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗ, ತತ್ತರಿಸುತ್ತಿರುವ ಕೃಷಿ ಇತ್ಯಾದಿ ವಿಷಯಗಳನ್ನು ಮುನ್ನೆಲೆಗೆ ತಂದು ಚುನಾವಣಾ ಸಂದರ್ಭದಲ್ಲಿ ಚರ್ಚೆಯಾಗುವಂತೆ ವಾತಾವರಣ ಉಂಟುಮಾಡಿದ್ದೇವೆ. ಇದೇನು ಕಮ್ಮಿ ರಾಜಕಾರಣವಲ್ಲ!

• ನೀವು “ದೇಶಕ್ಕಾಗಿ ನಾವು” ಅನ್ನುತ್ತಿದ್ದರೆ ಬಿಜೆಪಿಯವರು “ದೇಶಕ್ಕಾಗಿ ಮೋದಿ” ಅನ್ನುತ್ತಿದ್ದಾರಲ್ಲ!
ಅವರು ಭಾವನಾತ್ಮಕ ವಿಷಯಗಳನ್ನು ಚುನಾವಣಾ ವಿಷಯವಾಗಿ ಮಾಡಲು ಪ್ರಯತ್ನಿಸಿ ವಿಫಲರಾಗಿ ದಿಕ್ಕೆಟ್ಟು ‘ಮೋದಿ ಮೋದಿ’ ಎಂದು ಕಿರುಚುತ್ತಿದ್ದಾರೆ. ಹೀಗೆ ಕಿರುಚುತ್ತಿರುವವರು ಬಹುತೇಕ ನಿರುದ್ಯೋಗ ಯುವಕರು. ನಿರುದ್ಯೋಗ ಕಳೆದ ನಲವತ್ತೈದು ವರ್ಷಗಳಲ್ಲಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರಲಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ. ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ನೀಡುತ್ತೇವೆ ಎಂದು ಜನತೆಗೆ ವಚನ ನೀಡಿ ಅಧಿಕಾರಕ್ಕೆ ಬಂದ ವ್ಯಕ್ತಿಯೊಬ್ಬ ನೀಡುವುದಿರಲಿ, ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ಉದ್ಯೋಗ ನಷ್ಟ ಮಾಡಿಬಿಟ್ಟ. ವಚನಪಾಲಕ ರಾಮನನ್ನು ಈ ವಚನ ಭ್ರಷ್ಟರು ಹೇಗೆ ಉಚ್ಚಾರಣೆ ಮಾಡುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಬಹುಶಃ ಆತ್ಮಸಾಕ್ಷಿ ಅಳುಕು ಇಲ್ಲದವರಿಗೆ ಇದು ಸಾಧ್ಯವಾಗಬಹುದು. ಅದಕ್ಕೇ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮನ್ನು ಅಧಿಕಾರಕ್ಕೆ ತಂದ ತಮ್ಮ ಪ್ರಣಾಳಿಕೆಯ ಚುನಾವಣಾ ಭರವಸೆಗಳನ್ನು `ಚುನಾವಣಾ ಜುಮ್ಲಾ (ಸುಳ್ಳು)’ ಎಂದು ಹೇಳುತ್ತಾರೆ. ಇದು ನಿರ್ಲಜ್ಜತೆಯ ತುಟ್ಟತುದಿ.

• ಆದರೆ ಬಿಜೆಪಿಯವರು ‘ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ’ ಅನ್ನುತ್ತಾರಲ್ಲ?
ಅವರ ನುಡಿ ನೋಡಬೇಡಿ, ನಡೆ ನೋಡಿ. ದೇಶದ ಸಾರ್ವಜನಿಕ ಸಂಪತ್ತನ್ನು ಮಾರುತ್ತಿರುವವರು ಯಾವ ನಾಲಿಗೆಯಲ್ಲಿ ದೇಶ ಮೊದಲು ಅನ್ನುತ್ತಿದ್ದಾರೆ? ಇದು ದೇಶವನ್ನೇ ಮಾರಿದಂತಾಗುವುದಿಲ್ಲವೇ? ಜೊತೆಗೆ ಪ್ರಧಾನ ಮಂತ್ರಿ ಮೋದಿಯವರ ಮಾತುಗಾರಿಕೆಯ ಏರಿಳಿತ, ಹಾವಭಾವ ನೋಡಿದರೆ ಏನನ್ನಿಸುತ್ತದೆ? ಇದು ಹಾರಾಜು ಹಾಕುವವರ ಹಾವಭಾವ, ಮಾತುಗಾರಿಕೆಯಂತೆ ಕಾಣುವುದಿಲ್ಲವೆ? ಇನ್ನು ಪಕ್ಷಕ್ಕೆ ಬಂದರೆ ಬಿಜೆಪಿ ಪಕ್ಷ ಎಲ್ಲಿದೆ? ಅದೊಂದು ಕೂಗುಮಾರಿ ಗುಂಪುಮಂದೆಯಾಗಿದೆ. ಅಲ್ಲಿರುವುದು ಇಬ್ಬರೆ. ಮೂರನೆಯವರಿಗೆ ಸ್ಥಾನವಿಲ್ಲ. ಜೊತೆಗೆ ಕೇಂದ್ರ ಸಚಿವ ಸಂಪುಟವನ್ನೇ ನೋಡಿ- ಅಲ್ಲಿರುವುದು ಒಬ್ಬರೆ! ಉಳಿದ ಸಚಿವರು ಪ್ರಧಾನಮಂತ್ರಿಗಳ ಪರಿಚಾರಕರು. ಬಿಜೆಪಿಯವರು ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ ಅಂತಾರಲ್ಲ ಅದನ್ನು ಮೋದಿಯವರು ತಲೆಕೆಳಗೆ ಮಾಡಿಬಿಟ್ಟರು. ಈ ಸಲದ ಚುನಾವಣಾ ಪ್ರಣಾಳಿಕೆ ನೋಡಿ- ಅಲ್ಲಿ ಮೋದಿಯವರೊಬ್ಬರ ಫೋಟೋ ಮಾತ್ರವಿದೆ.

• ಅಂದರೆ ಮೋದಿಯವರು ಏಕವ್ಯಕ್ತಿ ಅಧಿಕಾರ ಕೇಂದ್ರದತ್ತ ನಡೆಯುತ್ತಿದ್ದಾರೆ ಎನ್ನುವುದು ನಿಮ್ಮ ಆರೋಪವೇ?
ಶಾಸ್ತ್ರ ಕೇಳಲೇಬೇಕಾಗಿಲ್ಲ. ಮೋದಿಯವರದು ಏಕವ್ಯಕ್ತಿ ಕೇಂದ್ರಿತ ಅಧಿಕಾರ ಅನ್ನುವ ಮಾತು ಬಿಜೆಪಿ ಪಕ್ಷದ ನಾಯಕರ ಅಸಹಾಯಕ ಪಿಸುನುಡಿಗಳು.

• ಹಾಗಾದರೆ ಈ ಹಿಂದೆ ಇಂದಿರಾಗಾಂಧಿಯವರಿಗೂ ಏಕವ್ಯಕ್ತಿ ಅಧಿಕಾರ ಕೇಂದ್ರಿತ ಎಂಬ ಆರೋಪ ಇತ್ತಲ್ಲ?
ಹೌದು ಇತ್ತು. ಆದರೆ ಈ ಇಬ್ಬರ ನಡುವೆ ಒಂದು ವ್ಯತ್ಯಾಸವಿದೆ. ಇಂದಿರಾ ಅವರ ಆಡಳಿತದಲ್ಲಿ- ಬಡವರು, ಧ್ವನಿ ಇಲ್ಲದವರು, ಅಸಹಾಯಕರು ಉಸಿರಾಡುವಂತಹ ಸುಧಾರಣೆಗಳನ್ನು ತಂದರು. ಆದರೆ ಮೋದಿಯವರ ಆಡಳಿತದಲ್ಲಿ ಕೆಲವೇ ಕೆಲವು ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಬಂಡವಾಳ ಬೆಳವಣಿಗೆಯಾಗುವುದಕ್ಕೆ ದೇಶದ ಪ್ರಧಾನಿ ಮೋದಿಯವರು ಒಬ್ಬ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸಿಬಿಟ್ಟರು. ಅದಕ್ಕಾಗೇ, ಮೋದಿಯವರ ‘ಮನ್ ಕಿ ಬಾತ್‍ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ.

• ನೀವು ವಿದ್ಯಾರ್ಥಿದೆಸೆಯಲ್ಲಿ ಲೋಹಿಯಾ ವಿಚಾರಧಾರೆಯ ಸಮಾಜವಾದಿ ಯುವಜನ ಸಭಾದಲ್ಲಿ ಇದ್ದವರು. ಲೋಹಿಯಾ ಅವರ ‘ಕಾಂಗ್ರೆಸ್ ವಿರೋಧಿ’ (Anti-Congress) ನಿಲುವಿಗೆ ಈಗ ನಿಮ್ಮ ಅಭಿಪ್ರಾಯ?
ಅಕ್ಷರ, ಪದಕ್ಕೆ ಅರ್ಥ ನೀಡಬಾರದು. ಅದರ ಆಂತರ್ಯ (Spirit) ನೋಡಬೇಕು. ಆ ಕಾಲಘಟ್ಟದಲ್ಲಿ ಲೋಹಿಯಾ ಹಾಗೂ ಅಂಬೇಡ್ಕರ್ ಅವರ ‘ಕಾಂಗ್ರೆಸ್ ವಿರೋಧಿ’ ಎಂದರೆ ಅದು ಆಂತರ್ಯದಲ್ಲಿ `ವ್ಯವಸ್ಥೆ ವಿರೋಧಿ’ (Anti- establishment) ಎಂದೇ ಅರ್ಥ. ಈ ಅರ್ಥದಲ್ಲಿ ಇಂದು ‘ವ್ಯವಸ್ಥೆ ವಿರೋಧಿ’ ನಿಲುವು ಎಂದರೆ ಏನು? ಇಂದು ಬಿಜೆಪಿ ದೇಶವನ್ನು ಆಳುತ್ತಿದೆ. ಈಗ ವ್ಯವಸ್ಥೆ ವಿರೋಧಿ ನಿಲುವು ಎಂದರೆ ಅದು ಬಿಜೆಪಿ ವಿರೋಧಿ ನಿಲುವು ಎಂದೇ ಆಗುತ್ತದೆ. ಸಮಾಜದ ಸಾಮರಸ್ಯ ಮತ್ತು ಸಮಾನತೆಗಾಗಿ ಅಂದರೆ ಮುಂಚಲನೆಗಾಗಿ ಬದಲಾವಣೆ ಬೇಕೆಂದಿದ್ದರೆ ಸಮುದಾಯ ಪ್ರಜ್ಞೆ ಯಾವಾಗಲೂ ವ್ಯವಸ್ಥೆ ವಿರೋಧಿ ನಿಲುವನ್ನು ಜಾಗೃತವಾಗಿರಿಸಿಕೊಂಡಿರಬೇಕಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...