Homeಸಿನಿಮಾಸಿನಿ ಸುದ್ದಿಬ್ರೆಝಿಲ್‍ನ ಸುಂಟರಗಾಳಿ ಹೊಸೆ ಪಡಿಲ್ಯಾ

ಬ್ರೆಝಿಲ್‍ನ ಸುಂಟರಗಾಳಿ ಹೊಸೆ ಪಡಿಲ್ಯಾ

- Advertisement -
- Advertisement -

ರಾಜಶೇಖರ್ ಅಕ್ಕಿ |

ಥ್ರಿಲರ್ ಎನ್ನುವುದು ಸಿನೆಮಾದ ಒಂದು ಶೈಲಿ. ಅದರಲ್ಲೂ ಅನೇಕ ಉಪಶೈಲಿಗಳಿವೆ. ಮೂಲತಃ ಅಪರಾಧ, ಸಸ್ಪೆನ್ಸ್, ಪ್ರತೀಕಾರ ಇವುಗಳನ್ನು ಒಳಗೊಂಡು, ನೋಡುಗರು ಆಶ್ಚರ್ಯ, ಶಾಕ್, ಭಾವೋದ್ವೇಗ, ನಿರೀಕ್ಷೆ ಆತಂಕವನ್ನು ಹುಟ್ಟಿಸಿ, ತಮ್ಮ ಸೀಟಿನ ತುದಿಯಲ್ಲಿ ಕುಳಿತಿರುವಂತೆ ಮಾಡುತ್ತವೆ. ಹಾಲಿವುಡ್‍ನ ಅನೇಕರು ಸಿನೆಮಾದ ಈ ಪ್ರಕಾರದಲ್ಲಿ ನಿಷ್ಣಾತರು. ಆದರೆ, ಅನೇಕ ಸಲ ಹಾಲಿವುಡ್‍ನ ಈ ಥ್ರಿಲರ್‍ಗಳಲ್ಲಿ ಮಾನವೀಯ ಅಂಶ ಕಾಣೆಯಾಗುತ್ತದೆ. ಎಷ್ಟೇ ಅನಿರೀಕ್ಷಿತ ತಿರುವುಗಳನ್ನು ಚಿತ್ರ ಪಡೆದರೂ ಥ್ರಿಲರ್ ಸಿನೆಮಾದ ಮಿತಿಯೊಳಗೇ ಇದ್ದು, ಮಿಕ್ಕ ಅಂಶಗಳನ್ನು ಒತ್ತಾಯಪೂರ್ವಕವಾಗಿ ತುರುಕುವುದರಿಂದ ಬಹುತೇಕ ಥ್ರಿಲರ್‍ಗಳು ನೋಡುಗನನ್ನು ಹಿಡಿದಿಡಲು ವಿಫಲವಾಗುತ್ತವೆ.
2007ರಲ್ಲಿ ಬಂದಿದ್ದು ‘ಟ್ರೋಪಾ ದಿ ಎಲೀಟ್’. ಎನ್ನುವ ಪೋರ್ಚುಗೀಸ್ ಭಾಷೆಯ ಬ್ರೆಝಿಲಿನ ಸಿನೆಮಾ. ಈ ಸಿನೆಮಾ ಒಂದು ಥ್ರಿಲರ್‍ನಲ್ಲಿ ಇರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡು, ಬ್ರೆಝಿಲ್‍ನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ನೋಡುಗರೆದುರಿಗೆ ತೆರೆದಿಟ್ಟಿತ್ತಲ್ಲದೆ, ಚಿತ್ರದ ಮಾನವೀಯ ಅಂಶವೂ ಮನಮುಟ್ಟುವಂತಿತ್ತು, ಹಾಗೂ ಈ ಸಿನೆಮಾದ ತೀವ್ರತೆ ಮತ್ತು ಹೊಸತನವು ವಿಶ್ವದೆಲ್ಲೆಡೆ ನೋಡುಗರು ಬೆಚ್ಚಿಬೀಳುವಂತೆ ಮಾಡಿತು. ಈ ಸಿನೆಮಾದ ಕಚ್ಚಾತನವೂ(rawness) ಅದರ ಯಶಸ್ಸಿಗೆ ಕಾರಣವಾಗಿತ್ತು. ಇನ್ನೊಂದು ಕಾರಣ ಅದರ ನಾಯಕನಟ ವಾಗ್ನರ್ ಮೌರಾನ ತೀವ್ರತೆಯಿಂದ ಕೂಡಿದ ಅಭಿನಯ.

ವಾಗ್ನರ್ ಮೌರಾ ವಿಶೇಷ ಅಪರಾಧ ನಿಗ್ರಹ ಪಡೆಯ ಮುಖ್ಯಸ್ಥ ನಸಿಮೆಂಟೋನ ಪಾತ್ರವನ್ನು ನಿರ್ವಹಿಸಿದ್ದಾರೆ. ಸದ್ಯದಲ್ಲೇ ತಂದೆಯಾಗಲಿರುವ ನಸಿಮೆಂಟೊ ತನ್ನ ಕೆಲಸವನ್ನು ತ್ಯಜಿಸಬೇಕಾದರೆ ಇನ್ನೊಬ್ಬ ಸಶಕ್ತ ಅಧಿಕಾರಿಯನ್ನು ಹುಡುಕಿ, ತರಬೇತಿ ನೀಡಬೇಕಿದೆ. ಹಾಗಾಗಿ ತನ್ನ ಕೊನೆಯ ಕಾರ್ಯಾಚರಣೆಯೊಂದಕ್ಕೆ ಕೈ ಹಾಕಬೇಕಾಗುತ್ತದೆ. ಅದು ಅವನ ಕೊನೆಯ ಕಾರ್ಯಾಚರಣೆಯಾಗುತ್ತದೆಯೇ, ತನ್ನ ಹುದ್ದೆಗೆ ಸರಿಯಾದ ಅಭ್ಯರ್ಥಿ ಸಿಗುತ್ತಾನೆಯೇ ಎನ್ನುವುದು ಈ ಚಿತ್ರದ ಸಾರಾಂಶ. ಬ್ರೆಝಿಲ್‍ನಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿದ ಈ ಚಿತ್ರ, ಆ ದೇಶದ ಅತ್ಯಂತ ಹೆಚ್ಚು ಜನರು ನೋಡಿದ ಸಿನೆಮಾ ಆಯಿತು.

ಹೊಸೆ ಪಡಿಲ್ಯಾ ಬರೀ ಥ್ರಿಲರ್ ಚಿತ್ರಗಳನ್ನೇ ಮಾಡಲಿಲ್ಲ. ಟ್ರೋಪಾ ದಿ ಎಲೀಟ್ ಮಾಡಿದ ಮೇಲೆ ಬ್ರೇಝಿಲ್‍ನ ಒಂದು ಪ್ರದೇಶದಲ್ಲಿ ವ್ಯಾಪಕವಾಗಿರುವ ಬಡತನವನ್ನು ಸೆರೆಹಿಡಿಯುವ ಗರಪಾ ಎನ್ನುವ ಸಾಕ್ಷ್ಯ ಚಿತ್ರವನ್ನು 2009ರಲ್ಲಿ ನಿರ್ದೇಶಿಸಿದರು. ಬಡತನದ ಬೇಗೆಯಲ್ಲಿ ಬಳಲುತ್ತಿರುವ ಮೂರು ಕುಟುಂಬಗಳನ್ನು ಹಲವು ತಿಂಗಳವರೆಗೆ ಚಿತ್ರೀಕರಿಸುತ್ತಾರೆ. ಅಲ್ಲಿ ಯಾವುದೇ ತಜ್ಞರು, ಅಧಿಕಾರಿಗಳು ಅಥವಾ ರಾಜಕಾರಣಿಗಳು ಕಂಡುಬರುವುದಿಲ್ಲ. ಬಡತನದ ಮೂಲಕಾರಣವನ್ನು ಹುಡುಕಲೂ ಪ್ರಯತ್ನಿಸುವುದಲ್ಲ. ಆ ಮೂರೂ ಕುಟುಂಬಗಳ ಮಹಿಳೆಯರು ತಮ್ಮ ಮಕ್ಕಳ ಹೊಟ್ಟೆ ತುಂಬಿಸಲು ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ಮಾತ್ರ ತೋರಿಸಲಾಗಿದೆ. ಆ ಚಿತ್ರ ನೋಡಿದಾಗ ಬಡತನ ಎನ್ನುವುದು ಎಲ್ಲೆಲ್ಲಿಯೂ ಒಂದೇ ತೆರನಾಗಿರುತ್ತದೆ ಅನಿಸುತ್ತದೆ. ಮನೆಯ ಗಂಡಸರ ನಿರುದ್ಯೋಗ, ಕುಡಿತ, ಅಂತಹ ಬಡತನದಲ್ಲಿಯೂ ಮಕ್ಕಳನ್ನು ಹೆರುತ್ತಲೇ ಹೋಗುವುದು, ಹುಟ್ಟಿದ ಮಕ್ಕಳನ್ನು ದೇವರೇ ಬೆಳೆಸುವನು ಎನ್ನುವ ನಂಬಿಕೆ. ಆದರೆ ಆ ಚಿತ್ರವನ್ನು ನೋಡುವಾಗ ನೋಡುಗ ಏನು ಫೀಲ್ ಮಾಡಬೇಕು ಎನ್ನುವುದು ಸ್ಪಷ್ಟವಾಗುವುದಿಲ್ಲ. ಈ ಬಡವರ ಬಗ್ಗೆ ಕರುಣೆ ಪಡಬೇಕೇ? ವ್ಯವಸ್ಥೆಯ ಬಗ್ಗೆ ಸಿಟ್ಟಿಗೇಳಬೇಕೇ? ಬಡತನವನ್ನು ಈ ರೀತಿ ತೋರಿಸುವುದರಿಂದ ಏನಾಗುವುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.

ಗರಪಾ ನಂತರ ಹೊಸೆ ಮತ್ತೆ ಥ್ರಿಲರ್‍ಗೆ ಮರಳಿದರು. ಟ್ರೋಪಾ ದಿ ಎಲೀಟ್‍ನ ಯಶಸ್ಸಿನ ನಂತರ ಅದರ ಮುಂದುವರಿಕೆಯ ಇನ್ನೊಂದು ಚಿತ್ರ ಮಾಡುತ್ತಾರೆ. ಟ್ರೊಪಾ ದಿ ಎಲೀಟ್ 2, ದಿ ಎನೆಮಿ ವಿದಿನ್ (ತನ್ನೊಳಗಿನ ವೈರಿ). ಇದೂ ಅದ್ಭುತ ಯಶಸ್ಸನ್ನು ಕಂಡಿತು. ಮೊದಲ ಚಿತ್ರ ಒಂದು ಮಾದಕ ವಸ್ತುವಿನ ಅಪರಾಧ ಜಗತ್ತಿಗೆ ಸೀಮಿತವಾಗಿದ್ದರೆ, ಎರಡನೇ ಚಿತ್ರ ಬ್ರೇಝಿಲ್‍ನ ರಾಜಕೀಯದ ಬಗ್ಗೆ ಮಾತನಾಡಿತು. ರಾಜಕಾರಣಿ, ಪೊಲೀಸ್ ವ್ಯವಸ್ಥೆ ಮತ್ತು ಮಾಧ್ಯಮಗಳು ಸೇರಿ ದೇಶವನ್ನು ಹೇಗೆ ಕೊಳ್ಳೆಹೊಡಯುತ್ತಿವೆ ಎನ್ನುವುದನ್ನು ಕಣ್ಣುಮುಂದಿಟ್ಟಿತು. ಟಿವಿ ಪರದೆಯ ಮುಂದೆ ಕಿರುಚಾಡುವ, ದೇಶಭಕ್ತಿಯ ಬಗ್ಗೆ ಭಾವೋದ್ರೇಕದಿಂದ ಭಾಷಣ ಬಿಗಿಯುವ ಸುದ್ದಿ ನಿರೂಪಕನನ್ನು ನೋಡಿದರೆ ನಮ್ಮಲ್ಲಿ ಇಂದು ಆಗುತ್ತಿರುವುದು ಆ ದೇಶದಲ್ಲಿ ಮುಂಚೆಯೇ ಆಗಿತ್ತು ಎನ್ನುವುದು ತಿಳಿಯುತ್ತದೆ. ಇದರೊಂದಿಗೆ ಕ್ಯಾಪ್ಟನ್ ನಸಿಮೆಂಟೋನ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲೂ ಅನೇಕ ಬದಲಾವಣೆಗಳಾಗಿವೆ. ಮೊದಲ ಸಿನೆಮಾದಲ್ಲಿ ಮಾದಕವಸ್ತುಗಳ ವ್ಯಾಪಾರ ಮಾಡುವವರೇ ಶತ್ರುಗಳಾಗಿದ್ದರು ಆದರೆ ಇಲ್ಲಿ ಶತ್ರುಗಳು ಇನ್ನಷ್ಟು ಬಲಶಾಲಿಯಾಗಿದ್ದಾರೆ; ವ್ಯವಸ್ಥೆಯೇ ಶತ್ರುವಾಗಿದೆ. ಇವರನ್ನು ಗುರುತಿಸಿ ಸದೆಬಡಿಯಬೇಕಿದೆ. ಥ್ರಿಲರ್ ಅಂಶಗಳನ್ನು ಇಟ್ಟುಕೊಂಡೇ, ಒಂದು ನೈಜ ಕಥೆಯನ್ನು ಹೆಣೆದು ನೋಡುಗರನ್ನು ದಂಗುಬಡಿಸುವಲ್ಲಿ ಹೊಸೆ ಪಡಿಲ್ಯಾ ಯಶಸ್ವಿಯಾದರು.

ಈ ಎರಡು ಚಿತ್ರಗಳ ಯಶಸ್ಸಿನ ನಂತರ ಹಾಲಿವುಡ್ ಅವರನ್ನು ಕರೆಯಿತು. ಸೋನಿ ಪಿಕ್ಚರ್ಸ್ ಅವರಿಗೆ ನಿರ್ದೇಶಿಸಲು ಹಲವಾರು ಆಯ್ಕೆಗಳನ್ನು ನೀಡಿತಾದರೂ, ಅವರ ಆಯ್ಕೆ ಮಾಡಿದ್ದು ರೋಬೋಕಾಪ್ ಎನ್ನುವ 1987 ರಲ್ಲಿ ನಿರ್ಮಿಸಲಾದ ಸೈನ್ಸ್ ಫಿಕ್ಷನ್ ಚಿತ್ರದ ರಿಮೇಕ್ ಮಾಡುವುದನ್ನು. ಇವರ ರೋಬೋಕಾಪ್ 2014ರಲ್ಲಿ ಬಿಡುಗಡೆಯಾಯಿತು. ಮೂಲ ಚಿತ್ರಕ್ಕೆ ಹೋಲಿಸಿ ಕೆಲವರು ಹೊಗಳಿದರೆ ಕೆಲವರು ತೆಗಳಿದರು. ಹೊಸೆ ಪಡಿಲ್ಯಾ ತಮ್ಮೆಲ್ಲ ಕೌಶಲ್ಯವನ್ನು ಬಳಸಿ ಒಂದು ಅದ್ಭುತ ಚಿತ್ರವನ್ನು ನಿರ್ದೇಶಿಸಿದರಾದರೂ ರೋಬೋಕಾಪ್ ಒಂದು ಹಾಲಿವುಡ್ ಚಿತ್ರವಾಗಿಯೇ ಉಳಿಯುತ್ತದೆ. ಹಾಲಿವುಡ್ ಚಿತ್ರಗಳ ಚೌಕಟ್ಟನ್ನು ಹೊಸೆ ಪಡಿಲ್ಯಾ ಮೀರಲಾಗಲಿಲ್ಲ. ನಂತರ ಹಾಲಿವುಡ್‍ನಲ್ಲಿಯೇ ‘ಎಂಟೆಬ್ಬೆ’ ಎನ್ನುವ ಚಿತ್ರವನ್ನು ನಿರ್ದೇಶಿಸಿದರು. 1976ರಲ್ಲಿ ಫ್ರಾನ್ಸ್‍ನ ವಿಮಾನವನ್ನು ಪ್ಯಾಲೆಸ್ಟೇನಿನ ಮತ್ತು ಜರ್ಮನಿಯ ಕ್ರಾಂತಿಕಾರಿಗಳು (ಭಯೋತ್ಪಾದಕರು) ಹೈಜಾಕ್ ಮಾಡಿದ್ದು ಹಾಗೂ ಬಂಧಿತರನ್ನು ಬಿಡುಗಡೆಗೊಳಿಸಲು ಇಸ್ರೇಲೀ ಸೈನಿಕರು ಮಾಡಿದ ಕಾರ್ಯಾಚರಣೆಯ ವಾಸ್ತವದ ಸಂಗತಿಗಳ ಆಧಾರದ ಮೇಲೆ ಮಾಡಿದ ಚಿತ್ರ. ಇಸ್ರೇಲಿನ ರಾಜಕೀಯ ಮತ್ತು ಆಗಿನ ನಾಯಕರು ಹಾಸ್ಟೇಜ್, ಸ್ಥಿತಿಯನ್ನು ಹೇಗೆ ನಿಭಾಯಿಸಿದರು ಎನ್ನುವುದನ್ನು ಈ ಚಿತ್ರ ತೋರಿಸುತ್ತದೆ. ಅನೇಕರಿಗೆ ಇದು ಇಸ್ರೇಲ್ ವಿರೋಧಿ ಚಿತ್ರ ಎಂದೂ ಅನಿಸಿದೆ. ಹೈಜಾಕ್ ಮಾಡುವವರ ಮನಸ್ಥಿತಿ, ರಕ್ಷಣಾ ಕಾರ್ಯಾಚರಣೆ ಮಾಡುವವರ ಮನಸ್ಥಿತಿ ಮತ್ತು ವಿಶ್ವ ರಾಜಕೀಯ ಹೇಗೆ ಕೆಲಸ ಮಾಡುತ್ತೆ ಎಂದು ಸೂಚ್ಯವಾಗಿ ತೋರಿಸುವ ಈ ಚಿತ್ರ ಖಂಡಿತವಾಗಿಯೂ ಉತ್ತಮ ಚಿತ್ರವೇ. ಆದರೂ ಈ ಚಿತ್ರದ ಮೂಲಕ ಹೊಸದೇನು ಹೇಳುತ್ತಿದ್ದಾರೆ ಹೊಸೆ ಪಡಿಲ್ಯಾ ಎನ್ನುವ ಪ್ರಶ್ನೆ ಎದುರಾಗುತ್ತದೆ. ಹಾಲಿವುಡ್‍ನಲ್ಲಿ ನಿರ್ಮಿಸಿದ ಈ ಎರಡೂ ಚಿತ್ರಗಳು ಉತ್ತಮವಾಗಿದ್ದರೂ, ಬ್ರೆಝಿಲ್‍ನಲ್ಲಿ ನಿರ್ದೇಶಿಸಿದ ಚಿತ್ರಗಳಲ್ಲಿ ಕಂಡುಬಂದ ಕಚ್ಚಾತನ, ಆ ಎನರ್ಜಿ ಕಂಡುಬರುವುದಿಲ್ಲ. ಹಾಲಿವುಡ್‍ಗೆ ಹೋಗಿ ಹೋಸೆ ತನ್ನತನವನ್ನು ಕಳೆದುಕೊಂಡರೇ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಇವುಗಳೊಂದಿಗೆ ಕೊಲಂಬಿಯಾದ ಮಾದಕವಸ್ತುಗಳ ಸರದಾರ ಪಾಬ್ಲೊ ಎಸ್ಕೋಬಾರ್ ಅವನ ಜೀವನಾಧಾರಿತ ‘ನಾರ್ಕೋಸ್’ ಎನ್ನುವ ಯಶಸ್ವೀ ಟಿವಿ ಸೀರಿಸ್ ಅನ್ನು ನಿರ್ದೇಶಿಸಿದರು. ಈಗ ಮಾರ್ಷಿಯಲ್ ಆರ್ಟ್ ಜ್ಯು-ಜಿಟ್ಸು ಬಗ್ಗೆ ಚಿತ್ರ ನಿರ್ದೇಶಿಸಲಿದ್ದಾರೆಂದು ಸುದ್ದಿ ಬಂದಿದೆ. ನಾನಂತೂ ಕಾಯುತ್ತಿರುವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...