Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

ಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

- Advertisement -
- Advertisement -

ಜಯಂತ್ ಕಾಯ್ಕಿಣಿ, ವಿವೇಕ್ ಶಾನಬಾಗ್ ಮತ್ತು ಎಂ.ಎಸ್. ಶ್ರೀರಾಮ್ ಈ ಮೂವರೂ ಬರಹಗಾರರ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಕುತೂಹಲ. ಈ ಮೂವರೂ ಹಲವು ಘಟ್ಟಗಳಲ್ಲಿ, ಕರ್ನಾಟಕದಿಂದ ದೂರದಲ್ಲಿ-ದೇಶದ ಹಲವೆಡೆಯಲ್ಲಿ, ದೇಶದಿಂದಾಚೆಗೆ ನೆಲೆಸಿದ್ದು, ಬದಲಾಗುತ್ತಿರುವ ಜಗತ್ತನ್ನು ಕರ್ನಾಟಕದ ಸೊಗಡಿನೊಂದಿಗೆ ಖುದ್ದಾಗಿ ನೋಡಿದವರು. ನನ್ನ ಪ್ರೀತಿಯ ಊರಾದ ಮುಂಬಯಿಯಲ್ಲಿ ಇದ್ದವರು(ಹೀಗೆ ನಾನು ಅಂದುಕೊಂಡಿದ್ದು). ನನ್ನ ಸೀಮಿತ ತಿಳಿವಳಿಕೆಯಲ್ಲಿ ವ್ಯಾಸರಾಯ ಬಲ್ಲಾಳರು ಮತ್ತು ಯಶವಂತ ಚಿತ್ತಾಲರ ನಂತರ ಕಾರ್ಪೋರೆಟ್ ಜಗತ್ತನ್ನು ಖುದ್ದಾಗಿ ನೋಡಿ ಬರೆದವರು ಇವರುಗಳೇ. ಕಾಯ್ಕಿಣಿ ಕಟ್ಟಿಕೊಡುವ ಮುಂಬಯಿಯ ವಿವರ ನನ್ನ ಕಣ್ಣನ್ನು ಅರಳಿಸುತ್ತಿದ್ದವು. ಆದರೆ ನನ್ನ ಮುಂಬಯಿ ಮತ್ತು ಕಾಯ್ಕಿಣಿಯವರ ಮುಂಬಯಿಯಲ್ಲಿ ದೊಡ್ಡ ಅಂತರವಿದೆ. ನಾನು ಮುಂಬಯಿ ಸೇರಿದ ವರ್ಷವೇ ಅವರು ಮುಂಬಯಿ ತೊರೆದಿದ್ದೂ ಅದಕ್ಕೆ ಕಾರಣವಿರಬಹುದು.

ನಮ್ಮ(ಭಾರತದ) ಜಗತ್ತು ಒಂದು ಟ್ರಾನ್ಸಿಷನಲ್ ಅವಧಿಯಲ್ಲಿ ಸಾಗುತ್ತಿದೆ, ಸಂಬಂಧಗಳು ಬದಲಾಗುತ್ತಿವೆ. ಹಿಂದೆ ನೋಡಿದ ಭಾರತವೇನೂ ಕಾಣೆಯಾಗಿಲ್ಲ, (ನಮ್ಮಂಥ ’ಆಧುನಿಕ’ ಜಗತ್ತಿನಲ್ಲಿ ಪ್ರವೇಶಿಸುವವರಿಗೆ ಕಣ್ಮರೆಯಾಗಿದ್ದು ನಿಜ.) ಅದರೊಂದಿಗೆ ಹೊಸ ಜಗತ್ತೊಂದು ಸೃಷ್ಟಿಯಾಗಿದ್ದು, ಅದು ಹಲವರಿಗೆ ಮುಚ್ಚಿದ ಬಾಗಿಲ ಜಗತ್ತಿನಂತೆ ಇದೆ. ಪ್ರವೇಶಾವಕಾಶ ಎಲ್ಲರಿಗೂ ಇದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ, ಹೆಚ್ಚಿನವರಿಗೆ ಅದರ ಬಾಗಿಲು ಮುಚ್ಚಿಯೇ ಇದೆ. ಆ ಜಗತ್ತಿನ ಭಾಷೆ ಇಂಗ್ಲಿಷು. ಭಾಷೆಯೊಂದಿಗೆ ಸಂಸ್ಕೃತಿ ಹೇಗೆ ತಗಲುಹಾಕಿಕೊಂಡಿದೆ ಎಂಬುದು ನಮಗೆಲ್ಲ ತಿಳಿದ ವಿಷಯ. ಈ ’ಸೌತ್ ಬಾಂಬೆ’(ಸೊಬೊ)ಯ ಜಗತ್ತನ್ನು ಭೇದಿಸುವುದು ಕಷ್ಟವಿದ್ದರೂ, ಭೇದಿಸಿದವರೂ ಅನೇಕರಿದ್ದಾರೆ. ಈ ಎರಡೂ ಜಗತ್ತುಗಳಲ್ಲಿ ವಿಹರಿಸಿದ ಇವರ ಸಾಹಿತ್ಯ ಓದಲು ಎಂದಿಗೂ ಕುತೂಹಲಕಾರಿಯಾದದ್ದೇ.

ಬೇಟೆಯಲ್ಲ ಆಟವೆಲ್ಲ ಎಂಬ ಎಂ ಎಸ್ ಶ್ರೀರಾಮ್ ಅವರ ಕಥೆಯೂ ಈ ಜಗತ್ತನ್ನು ಭೇದಿಸಿದವರ ಕಥೆ. ಕಾರ್ಪೋರೇಟ್ ಜಗತ್ತಿನ ಹೆಚ್ಚಿನ ಕಥೆಗಳಂತೆ ಈ ಕಥೆಯೂ ಹೊಸ ಜಗತ್ತಿನಲ್ಲಿ ’ಯಶಸ್ವಿ’ಯಾದವರ ಕಥೆ. ಹೊರಗಿನಿಂದ ಕಾಣುವ ನಮ್ಮಂತವರಿಗೆ, ಮೈಸೂರಿನ ಮೂಲದ ಪಾತ್ರಗಳಿಗೆ ತಮ್ಮ ಬೇರುಗಳನ್ನು ಸಂಪೂರ್ಣವಾಗಿ ಕಳಚಿ, ಪೂರ್ಣಪ್ರಮಾಣದಲ್ಲಿ ’ಸೊಬೊ’ ಆಗಬಹುದಲ್ಲ ಎಂದೆನಿಸುತ್ತಾದರೂ, ಇವರ್‍ಯಾರೂ ಬೇರುಗಳನ್ನು ಕಳಚಿಕೊಳ್ಳುವುದಿಲ್ಲ. ಬಹುಶಃ ಆ ಮಟ್ಟದ ಯಶಸ್ವಿಗಳಾಗಿಲ್ಲವೇನೋ, ಅಥವಾ ಎಷ್ಟೇ ಯಶಸ್ಸು ಕಂಡರೂ ಸಂಪೂರ್ಣವಾಗಿ ಬೇರುಗಳನ್ನು ಕಳಚಿಕೊಳ್ಳಲು ಸಾಧ್ಯವಿಲ್ಲವೇನೋ.

ಸಹಜವಾಗಿಯೇ ಎಲ್ಲಾ ಪಾತ್ರಗಳು ಒಂದು ಟ್ರಾನ್ಸ್‌ಫಾರ್ಮೇಷನ್‌ಗೆ ಒಳಗಾಗಿದ್ದಾರೆ. ಅನಿರುದ್ಧ ಒಬ್ಬ ಆರ್ಥಾಡಾಕ್ಸ್ ವ್ಯಕ್ತಿಯಿಂದ ಅಷ್ಟೇನೂ ಆರ್ಥಾಡಾಕ್ಸ್ ಆಗಿರದ ವ್ಯಕ್ತಿಯಾಗಿ ಬದಲಾದರೆ, ಅವನು ಗೆಳೆಯ ಅಖ್ತರ್ ಹುಸೇನ್‌ನ ರೂಪಾಂತರ ಮೇಲ್ನೋಟಕ್ಕೆ ಅವನ ವಿರುದ್ಧದ ದಿಕ್ಕಿನಲ್ಲಿದೆ. ಸುಜಾತಳ ಟ್ರಾನ್ಸ್‌ಫಾರ್ಮೇಷನ್ ಅತ್ಯಂತ ಡ್ರಾಸ್ಟಿಕ್ ಆಗಿದೆ ಮತ್ತು ಆಕೆ ಎಲ್ಲರಿಗಿಂತ ಯಶಸ್ವಿಯಾಗಿದ್ದಾಗಿದೆ. ಅವರ ಆಳದ ಭಾವಗಳು, ದ್ವಂದ್ವಗಳು, ತೋರಿಕೆಗಳೆಲ್ಲವೂ ಸಹಜವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತವೆ. ಸಹಜವಾಗಿ ತೆರೆದುಕೊಳ್ಳದೇ ಇರುವುದು ಈಗಾಗಲೇ ಆ ಸೊಬೊ ಜಗತ್ತಿನಲ್ಲಿರುವವರ ದ್ವಂದ್ವಗಳು. ಅವರನ್ನು ನೋಡಿದಾಗ ಅನಿಸುವುದು ಹಾಗೆಯೇ, ಎಷ್ಟು ಸಾರ್ಟೆಡ್ ಇದಾರಪ್ಪ, ದ್ವಂದ್ವಗಳೇ ಇಲ್ಲ ಎಂದು. ಶಿವಾನಿ ಆ ಲೋಕವನ್ನು ಪ್ರತಿನಿಧಿಸುತ್ತಾಳೆ. ಅವಳು ನನಗೆ ತಿಳಿಯಲಿಲ್ಲ. ಅವಳ ಬಾಯ್‌ಫ್ರೆಂಡ್ ಚಿನ್ಮಯನಿಗೆ ಅನಿಸಿದಂತೆ ಓದುಗನಿಗೂ ಅವಳು ಕ್ರೂರಿ ಎನಿಸುತ್ತಾಳೆ. ವ್ಯವಹಾರದಲ್ಲಿ ಅವಳು ಕ್ರುಎಲ್ ಆಗಿಯೇ ಮುಂದುವರೆಯಬೇಕಾದ ಅವಶ್ಯಕತೆ ಅವಳಿಗಿರಬಹುದು ಆದರೆ ವೈಯಕ್ತಿಕ ಜೀವನದಲ್ಲಿ? ಹೌದು, ಇರಬಹುದು. ಆದರೂ ಅವಳನ್ನು ಅರಿಯುವ, ಅವಳ ಒಳಜಗತ್ತಿನೊಳಗೆ ಇಣುಕುವ ತವಕವನ್ನು ತಣಿಸುವುದಿಲ್ಲ. ಚಿನ್ಮಯ ಮತ್ತು ಶಿವಾನಿ ನಡುವೆ ಇರಬಹುದಾಗಿದ್ದ ಪ್ಯಾಷನ್ ಓದುಗನಿಗೆ ಕಾಣಿಸುವುದಿಲ್ಲ. ಪ್ಯಾಷನ್ ಇಲ್ಲದೇ ಇರುವ ಸಂಬಂಧವಾಗಿದ್ದರೆ, ಪ್ಯಾಷನ್ ಇಲ್ಲದ, ತಣ್ಣನೆಯ ಸಂಬಂಧದ ಬಗ್ಗೆ ಇರುವ ಕುತೂಹಲವೂ ತಣಿಯುವುದಿಲ್ಲ.

ಇಲ್ಲಿಯ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಆ ಒಂದು ತೀವ್ರವಾದ ಪ್ಯಾಷನ್ ಕಾಣಿಸುವುದಿಲ್ಲ. ಅನಿರುದ್ಧ ಕವಿತಾಳ ಸಂಬಂಧದಲ್ಲೂ ಅದು ಉಳಿದಿಲ್ಲ. ಸುಜಾತಾ ಮುಕುಂದನ ಸಂಬಂಧದಲ್ಲಿ ಅದು ಕಾಣಿಸದಿದ್ದರೂ, ಮುಕುಂದ ಮತ್ತು ಶಿವಾನಿಯ ಸಂಬಂಧವನ್ನು ಕೆದಕದೇ ಹೋಗಿದ್ದು ಆಶ್ಚರ್ಯ.

ಸಂಬಂಧಗಳು ಬದಲಾಗುತ್ತಿರುವ ಸಮಯದಲ್ಲಿ ಬದಲಾಗುತ್ತಿರುವ ರಾಜಕೀಯವನ್ನು ಎಲ್ಲೂ ತುರುಕುವ ಪ್ರಯತ್ನ ಮಾಡದೇ, ಈ ಪಾತ್ರಗಳು ಸವೆಸುವ ಪಯಣದಲ್ಲಿಯೇ ರಾಜಕೀಯದಲ್ಲಾದ ಸೂಕ್ಷ್ಮ ಬದಲಾವಣೆಗಳನ್ನು, ಅವುಗಳು ಬೀರುತ್ತಿರುವ ಪರಿಣಾಮಗಳನ್ನೂ ಅಷ್ಟೇ ಆಳವಾಗಿ ಸೂಕ್ಷ್ಮವಾಗಿ ಕಂಡಿದ್ದಾರೆ. ಈ ಟ್ರಾನ್ಸಿಷನ್‌ನ ಪರ್ವ ಎಂದರೆ ಅದರ ಪ್ರಮುಖ ಅಂಶ ಗೊಂದಲ. ಈ ಗೊಂದಲಗೋಜಲುಗಳನ್ನು ಲೀಲಾಜಾಲವಾಗಿ ಹಿಡಿದಿಟ್ಟು, ಕಥೆಯೂ ಒಂದಿಷ್ಟು ಗೊಂದಲಗಳನ್ನು ಸೃಷ್ಟಿಸಿ ನಮ್ಮ ಕಾಲದ ಒಂದು ಅತ್ಯಂತ ಪ್ರಮುಖ ಕೃತಿಯನ್ನು ಶ್ರೀರಾಮ್ ರಚಿಸಿದ್ದಾರೆ. ನಮ್ಮೆಲ್ಲರನ್ನು ಆವರಿಸುವ ಈ ಸುಂದರ ಗೊಂದಲಗೋಜಲುಗಳನ್ನು ಅನಾವರಣಗೊಳಿಸುವ-ಬಿಡಿಸುವ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹೆಚ್ಚೆಚ್ಚು ಮೂಡಲಿ.

ರಾಜಶೇಖರ ಅಕ್ಕಿ
ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಕಿ ಅಭಿನಯ, ಚಿತ್ರಕಥೆ ಬರಹ ಕಲಿಸಿಕೊಡುತ್ತಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...