Homeಸಿನಿಮಾಕ್ರೀಡೆಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ

ಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ

- Advertisement -
- Advertisement -

 

 

| ಅಂತಃಕರಣ |

ಅಸ್ಸಾಮ್‍ನ ಆಲ್‍ರೌಂಡರ್ ಆಗಿರುವ ರಿಯಾನ್ ಪರಾಗ್‍ರ ಹೆಸರು ಐಪಿಎಲ್‍ಗೂ ಮೊದಲು ಕ್ರಿಕೆಟ್ ಜಗತ್ತಿಗೆ ಒಂದು ರೀತಿ ಅಪರಿಚಿತವೇ ಆಗಿತ್ತು. 2018ರ ವಿಶ್ವಕಪ್ ಗೆದ್ದಿದ್ದ ತಂಡದ ಭಾಗವಾಗಿ ರಿಯಾನ್‍ರವರಿದ್ದರೂ ಸಹ ಗಾಯದ ಕಾರಣ ಬೆಂಚ್ ಬಿಸಿ ಮಾಡುತ್ತಲೇ ಕಾಲ ಕಳೆದರು. ಅಸ್ಸಾಂಪರ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಕಾರಣ ರಾಜಸ್ಥಾನರಾಯಲ್ಸ್ ತಂಡ ಇವರನ್ನು ಈ ಬಾರಿಯ ಹರಾಜಿನಲ್ಲಿ ಅವರ ಮೂಲಬೆಲೆ 20ಲಕ್ಷ ನೀಡಿ ಖರೀದಿಸಿತು. ರಾಜಸ್ಥಾನ ತಂಡದ ಪರವೂ ಸಹ ಮೊದಲ ಕೆಲವು ಪಂದ್ಯಗಳಲ್ಲಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

ತಂಡದ ಆರನೇ ಪಂದ್ಯದಲ್ಲಿ ರಿಯಾನ್ ಪರಾಗ್ ಫಾರ್ಮ್ ಕಳೆದುಕೊಂಡಿದ್ದ ಕೃಷ್ಣಪ್ಪಗೌತಮ್‍ರವರ ಬದಲಿಗೆ ಆಡಲು ತಂಡದ ಪ್ಲೇಯಿಂಗ್ 11ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಚೆನ್ನೈಸೂಪರ್‍ಕಿಂಗ್ಸ್ ಎದುರಿನ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡದ ಪರ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಿಯಾನ್ ಪರಾಗ್ ಎರಡು ಬೌಂಡರಿಗಳ ಮೂಲಕ 16 ರನ್‍ಗಳಿಸಿ ಶಾರ್ದೂಲ್ ಠಾಕೂರ್‍ರ ಎಸೆತದಲ್ಲಿ ಧೋನಿಯವರಿಗೆ ಕ್ಯಾಚಿತ್ತು ಔಟಾದರು. ವಿಶೇಷವೇನೆಂದರೆ 19 ವರ್ಷಗಳ ಮುಂಚೆ ರಿಯಾನ್ ಪರಾಗ್‍ರ ತಂದೆ ಪರಾಗ್‍ದಾಸ್‍ಕೂಡ ರಣಜಿ ಪಂದ್ಯವೊಂದರಲ್ಲಿ ಧೋನಿಯವರಿಂದ ಸ್ಟಂಪ್ಡ್ ಆಗಿ ಔಟಾಗಿದ್ದರು! ಹೌದು ! 1999-2000ರ ರಣಜಿ ಸೀಸನ್‍ನ ಬಿಹಾರ್ ಹಾಗೂ ಅಸ್ಸಾಮ್ ನಡುವಿನ ಪಂದ್ಯದಲ್ಲಿ ಪರಾಗ್‍ದಾಸ್‍ರನ್ನು ಧೋನಿ ಸ್ಟಂಪ್ಡ್ ಮಾಡಿದ್ದರು. 19 ವರ್ಷಗಳ ನಂತರ ಅವರ ಮಗ ರಿಯಾನ್ ಪರಾಗ್ ಸಹ ಧೋನಿಗೆ ಕ್ಯಾಚಿತ್ತು ಔಟಾಗಿದ್ದು ಒಂದು ಅಚ್ಚರಿಯೇ ಸರಿ.

ಆ ಪಂದ್ಯದಲ್ಲಿ ಓವರ್ ಬೌಲ್ ಮಾಡಿ ಪರಾಗ್ ಕೇವಲ 24 ರನ್ ಬಿಟ್ಟುಕೊಟ್ಟರು. ನಂತರದ ಎರಡು ಪಂದ್ಯಗಳಲ್ಲಿ ಪರಾಗ್‍ರನ್ನು ರಾಜಸ್ಥಾನ ತಂಡ ಆಡಿಸಲಿಲ್ಲ. ಅವರ ಬದಲಿಗೆ ಕ್ರಮವಾಗಿ ಕರ್ನಾಟಕದ ಗೌತಮ್ ಹಾಗೂ ಬಿನ್ನಿ ಒಂದೊಂದು ಪಂದ್ಯದಲ್ಲಿ ಆಡಿದರು. ಎರಡು ಪಂದ್ಯಗಳ ನಂತರ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಪರಾಗ್ ವಾಪಸಾತಿ ಮಾಡಿದರು. ಆ ಪಂದ್ಯದಲ್ಲಿ ಅವರು ಒಂದು ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 162ರ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ 77ಕ್ಕೆ ಮೂರು ಜನ ಟಾಪ್‍ಆರ್ಡರ್ ಬ್ಯಾಟ್ಸ್‍ಮನ್‍ಗಳನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿತ್ತು. ಆಗ ಕ್ರೀಸ್‍ಗೆ ಬಂದ ಪರಾಗ್ ನಾಯಕ ಸ್ಮಿತ್‍ರೊಂದಿಗೆ ಒಂದು ಅತ್ಯುತ್ತಮ ಜೊತೆಯಾಟವಾಡಿದರು. ಸ್ಮಿತ್ ಹಾಗೂ ಪರಾಗ್ ಆಡಿದ 70 ರನ್‍ಗಳ ಜೊತೆಯಾಟದಲ್ಲಿ ಪರಾಗ್‍ರದ್ದೇ ಸಿಂಹಪಾಲು! ತಮ್ಮ ಎರಡನೇ ಐಪಿಎಲ್ ಇನ್ನಿಂಗ್ಸ್‍ನಲ್ಲಿಯೇ ಮುಂಬೈ ಬೌಲರ್‍ಗಳನ್ನು ಬೆಚ್ಚಿಬೀಳಿಸಿದರು. 29 ಎಸೆತಗಳಲ್ಲಿ 43ರನ್ ಗಳಿಸಿ ಪರಾಗ್ ತಂಡವನ್ನು ಗೆಲುವಿನ ಗಡಿಯವರೆಗೆ ತಂದು ಔಟಾದರು! ಅದರ ಮೂಲಕ ಐಪಿಎಲ್‍ನ ಅತ್ಯಂತ ಕಿರಿಯ ಅರ್ಧಶತಕಧಾರಿಯಾಗುವ ಅವಕಾಶ ತಪ್ಪಿಸಿಕೊಂಡರು. ಪರಾಗ್‍ರ ಸಾಮಥ್ರ್ಯಕ್ಕೆ ಈ ಇನ್ನಿಂಗ್ಸ್ ಒಂದು ಕನ್ನಡಿಯಾಗಿತ್ತು ಅಷ್ಟೇ !ಮುಂದಿನ ಪಂದ್ಯದಲ್ಲಿ ಕೊನೆಗೆ ಬ್ಯಾಟಿಂಗ್‍ಗೆ ಬಂದ ಪರಾಗ್ ಒಂದು ಬೌಂಡರಿ ಹೊಡೆದು ಒಂದು ಉತ್ತಮ ಅಂತ್ಯಕೊಟ್ಟರು.

ಇಲ್ಲಿಯವರೆಗಿನ ಅವರ ಅತ್ಯುತ್ತಮ ಇನ್ನಿಂಗ್ಸ್ ಬಂದಿದ್ದು ನಂತರದ ಪಂದ್ಯದಲ್ಲಿ. ಕೊಲ್ಕತ್ತಾ ನೈಟ್‍ರೈಡರ್ಸ್ ತಂಡ ಮೊದಲು ಬ್ಯಾಟ್ ನಾಯಕ ಕಾರ್ತಿಕ್‍ರ ಅತ್ಯುತ್ತಮ ಆಟದ ಬಲದಿಂದ 175 ರನ್ ಗಳಿಸಿತ್ತು. ಅದಕ್ಕೆ ಉತ್ತರವಾಗಿ ರಾಜಸ್ಥಾನ ಸಹ ಉತ್ತಮ ಆರಂಭ ಹೊಂದಿತು. ರಹಾನೆ ಹಾಗೂ ಸ್ಯಾಮ್ಸನ್ 53 ರನ್‍ಗಳ ಬುನಾದಿಯನ್ನು ರಾಜಸ್ಥಾನಕ್ಕೆ ಹಾಕಿಕೊಟ್ಟರು. ಆದರೆ ನಂತರದ 7ಓವರ್‍ಗಳಲ್ಲಿ ರನ್‍ರೇಟ್ ಕೂಡ ಕಡಿಮೆಯಾಗಿ ರಾಜಸ್ಥಾನ 5ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ಕಷ್ಟವೆನಿಸುತ್ತಿದ್ದ ಚೇಸ್‍ಅನ್ನು ರಿಯಾನ್ ಪರಾಗ್ ಸುಲಭ ಮಾಡಿದರು. ಗೋಪಾಲ್ ಹಾಗೂ ಆರ್ಚರ್‍ರೊಂದಿಗೆ ಜೊತೆಯಾಟಗಳನ್ನು ಮಾಡಿ ಪರಾಗ್ 19ನೇ ಓವರ್‍ನ 5ನೇ ಎಸೆತದಲ್ಲಿ ಹಿಟ್ ವಿಕೆಟ್ ಆಗಿ ಔಟಾದರು. ಈ ಬಾರಿಯೂ ಸಹ ಕೇವಲ 3 ರನ್‍ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. 31ಎಸೆತಗಳಲ್ಲಿ 47 ರನ್‍ಗಳಿಸಿದ ಪರಾಗ್ ರಾಜಸ್ಥಾನದ ಪಾಲಿಗೆ ಹೀರೋ ಆದರು. ಕೊನೆಯ ಓವರ್‍ನಲ್ಲಿ ಆರ್ಚರ್ ತಂಡವನ್ನು ಗೆಲ್ಲಿಸಿದರು.

ಸಾರಾಂಶದ ಮಾತೆಂದರೆ ರಿಯಾನ್ ಪರಾಗ್ ಭಾರತೀಯ ಕ್ರಿಕೆಟ್‍ನ ಸದ್ಯದ ಅತ್ಯುತ್ತಮ ಉದಯೋನ್ಮುಖ ಆಟಗಾರರಲ್ಲಿ ಒಬ್ಬರು ಎನ್ನುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...