Homeಸಿನಿಮಾಕ್ರೀಡೆಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ

ಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ

- Advertisement -
- Advertisement -

 

 

| ಅಂತಃಕರಣ |

ಅಸ್ಸಾಮ್‍ನ ಆಲ್‍ರೌಂಡರ್ ಆಗಿರುವ ರಿಯಾನ್ ಪರಾಗ್‍ರ ಹೆಸರು ಐಪಿಎಲ್‍ಗೂ ಮೊದಲು ಕ್ರಿಕೆಟ್ ಜಗತ್ತಿಗೆ ಒಂದು ರೀತಿ ಅಪರಿಚಿತವೇ ಆಗಿತ್ತು. 2018ರ ವಿಶ್ವಕಪ್ ಗೆದ್ದಿದ್ದ ತಂಡದ ಭಾಗವಾಗಿ ರಿಯಾನ್‍ರವರಿದ್ದರೂ ಸಹ ಗಾಯದ ಕಾರಣ ಬೆಂಚ್ ಬಿಸಿ ಮಾಡುತ್ತಲೇ ಕಾಲ ಕಳೆದರು. ಅಸ್ಸಾಂಪರ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಕಾರಣ ರಾಜಸ್ಥಾನರಾಯಲ್ಸ್ ತಂಡ ಇವರನ್ನು ಈ ಬಾರಿಯ ಹರಾಜಿನಲ್ಲಿ ಅವರ ಮೂಲಬೆಲೆ 20ಲಕ್ಷ ನೀಡಿ ಖರೀದಿಸಿತು. ರಾಜಸ್ಥಾನ ತಂಡದ ಪರವೂ ಸಹ ಮೊದಲ ಕೆಲವು ಪಂದ್ಯಗಳಲ್ಲಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

ತಂಡದ ಆರನೇ ಪಂದ್ಯದಲ್ಲಿ ರಿಯಾನ್ ಪರಾಗ್ ಫಾರ್ಮ್ ಕಳೆದುಕೊಂಡಿದ್ದ ಕೃಷ್ಣಪ್ಪಗೌತಮ್‍ರವರ ಬದಲಿಗೆ ಆಡಲು ತಂಡದ ಪ್ಲೇಯಿಂಗ್ 11ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಚೆನ್ನೈಸೂಪರ್‍ಕಿಂಗ್ಸ್ ಎದುರಿನ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡದ ಪರ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಿಯಾನ್ ಪರಾಗ್ ಎರಡು ಬೌಂಡರಿಗಳ ಮೂಲಕ 16 ರನ್‍ಗಳಿಸಿ ಶಾರ್ದೂಲ್ ಠಾಕೂರ್‍ರ ಎಸೆತದಲ್ಲಿ ಧೋನಿಯವರಿಗೆ ಕ್ಯಾಚಿತ್ತು ಔಟಾದರು. ವಿಶೇಷವೇನೆಂದರೆ 19 ವರ್ಷಗಳ ಮುಂಚೆ ರಿಯಾನ್ ಪರಾಗ್‍ರ ತಂದೆ ಪರಾಗ್‍ದಾಸ್‍ಕೂಡ ರಣಜಿ ಪಂದ್ಯವೊಂದರಲ್ಲಿ ಧೋನಿಯವರಿಂದ ಸ್ಟಂಪ್ಡ್ ಆಗಿ ಔಟಾಗಿದ್ದರು! ಹೌದು ! 1999-2000ರ ರಣಜಿ ಸೀಸನ್‍ನ ಬಿಹಾರ್ ಹಾಗೂ ಅಸ್ಸಾಮ್ ನಡುವಿನ ಪಂದ್ಯದಲ್ಲಿ ಪರಾಗ್‍ದಾಸ್‍ರನ್ನು ಧೋನಿ ಸ್ಟಂಪ್ಡ್ ಮಾಡಿದ್ದರು. 19 ವರ್ಷಗಳ ನಂತರ ಅವರ ಮಗ ರಿಯಾನ್ ಪರಾಗ್ ಸಹ ಧೋನಿಗೆ ಕ್ಯಾಚಿತ್ತು ಔಟಾಗಿದ್ದು ಒಂದು ಅಚ್ಚರಿಯೇ ಸರಿ.

ಆ ಪಂದ್ಯದಲ್ಲಿ ಓವರ್ ಬೌಲ್ ಮಾಡಿ ಪರಾಗ್ ಕೇವಲ 24 ರನ್ ಬಿಟ್ಟುಕೊಟ್ಟರು. ನಂತರದ ಎರಡು ಪಂದ್ಯಗಳಲ್ಲಿ ಪರಾಗ್‍ರನ್ನು ರಾಜಸ್ಥಾನ ತಂಡ ಆಡಿಸಲಿಲ್ಲ. ಅವರ ಬದಲಿಗೆ ಕ್ರಮವಾಗಿ ಕರ್ನಾಟಕದ ಗೌತಮ್ ಹಾಗೂ ಬಿನ್ನಿ ಒಂದೊಂದು ಪಂದ್ಯದಲ್ಲಿ ಆಡಿದರು. ಎರಡು ಪಂದ್ಯಗಳ ನಂತರ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಪರಾಗ್ ವಾಪಸಾತಿ ಮಾಡಿದರು. ಆ ಪಂದ್ಯದಲ್ಲಿ ಅವರು ಒಂದು ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 162ರ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ 77ಕ್ಕೆ ಮೂರು ಜನ ಟಾಪ್‍ಆರ್ಡರ್ ಬ್ಯಾಟ್ಸ್‍ಮನ್‍ಗಳನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿತ್ತು. ಆಗ ಕ್ರೀಸ್‍ಗೆ ಬಂದ ಪರಾಗ್ ನಾಯಕ ಸ್ಮಿತ್‍ರೊಂದಿಗೆ ಒಂದು ಅತ್ಯುತ್ತಮ ಜೊತೆಯಾಟವಾಡಿದರು. ಸ್ಮಿತ್ ಹಾಗೂ ಪರಾಗ್ ಆಡಿದ 70 ರನ್‍ಗಳ ಜೊತೆಯಾಟದಲ್ಲಿ ಪರಾಗ್‍ರದ್ದೇ ಸಿಂಹಪಾಲು! ತಮ್ಮ ಎರಡನೇ ಐಪಿಎಲ್ ಇನ್ನಿಂಗ್ಸ್‍ನಲ್ಲಿಯೇ ಮುಂಬೈ ಬೌಲರ್‍ಗಳನ್ನು ಬೆಚ್ಚಿಬೀಳಿಸಿದರು. 29 ಎಸೆತಗಳಲ್ಲಿ 43ರನ್ ಗಳಿಸಿ ಪರಾಗ್ ತಂಡವನ್ನು ಗೆಲುವಿನ ಗಡಿಯವರೆಗೆ ತಂದು ಔಟಾದರು! ಅದರ ಮೂಲಕ ಐಪಿಎಲ್‍ನ ಅತ್ಯಂತ ಕಿರಿಯ ಅರ್ಧಶತಕಧಾರಿಯಾಗುವ ಅವಕಾಶ ತಪ್ಪಿಸಿಕೊಂಡರು. ಪರಾಗ್‍ರ ಸಾಮಥ್ರ್ಯಕ್ಕೆ ಈ ಇನ್ನಿಂಗ್ಸ್ ಒಂದು ಕನ್ನಡಿಯಾಗಿತ್ತು ಅಷ್ಟೇ !ಮುಂದಿನ ಪಂದ್ಯದಲ್ಲಿ ಕೊನೆಗೆ ಬ್ಯಾಟಿಂಗ್‍ಗೆ ಬಂದ ಪರಾಗ್ ಒಂದು ಬೌಂಡರಿ ಹೊಡೆದು ಒಂದು ಉತ್ತಮ ಅಂತ್ಯಕೊಟ್ಟರು.

ಇಲ್ಲಿಯವರೆಗಿನ ಅವರ ಅತ್ಯುತ್ತಮ ಇನ್ನಿಂಗ್ಸ್ ಬಂದಿದ್ದು ನಂತರದ ಪಂದ್ಯದಲ್ಲಿ. ಕೊಲ್ಕತ್ತಾ ನೈಟ್‍ರೈಡರ್ಸ್ ತಂಡ ಮೊದಲು ಬ್ಯಾಟ್ ನಾಯಕ ಕಾರ್ತಿಕ್‍ರ ಅತ್ಯುತ್ತಮ ಆಟದ ಬಲದಿಂದ 175 ರನ್ ಗಳಿಸಿತ್ತು. ಅದಕ್ಕೆ ಉತ್ತರವಾಗಿ ರಾಜಸ್ಥಾನ ಸಹ ಉತ್ತಮ ಆರಂಭ ಹೊಂದಿತು. ರಹಾನೆ ಹಾಗೂ ಸ್ಯಾಮ್ಸನ್ 53 ರನ್‍ಗಳ ಬುನಾದಿಯನ್ನು ರಾಜಸ್ಥಾನಕ್ಕೆ ಹಾಕಿಕೊಟ್ಟರು. ಆದರೆ ನಂತರದ 7ಓವರ್‍ಗಳಲ್ಲಿ ರನ್‍ರೇಟ್ ಕೂಡ ಕಡಿಮೆಯಾಗಿ ರಾಜಸ್ಥಾನ 5ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ಕಷ್ಟವೆನಿಸುತ್ತಿದ್ದ ಚೇಸ್‍ಅನ್ನು ರಿಯಾನ್ ಪರಾಗ್ ಸುಲಭ ಮಾಡಿದರು. ಗೋಪಾಲ್ ಹಾಗೂ ಆರ್ಚರ್‍ರೊಂದಿಗೆ ಜೊತೆಯಾಟಗಳನ್ನು ಮಾಡಿ ಪರಾಗ್ 19ನೇ ಓವರ್‍ನ 5ನೇ ಎಸೆತದಲ್ಲಿ ಹಿಟ್ ವಿಕೆಟ್ ಆಗಿ ಔಟಾದರು. ಈ ಬಾರಿಯೂ ಸಹ ಕೇವಲ 3 ರನ್‍ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. 31ಎಸೆತಗಳಲ್ಲಿ 47 ರನ್‍ಗಳಿಸಿದ ಪರಾಗ್ ರಾಜಸ್ಥಾನದ ಪಾಲಿಗೆ ಹೀರೋ ಆದರು. ಕೊನೆಯ ಓವರ್‍ನಲ್ಲಿ ಆರ್ಚರ್ ತಂಡವನ್ನು ಗೆಲ್ಲಿಸಿದರು.

ಸಾರಾಂಶದ ಮಾತೆಂದರೆ ರಿಯಾನ್ ಪರಾಗ್ ಭಾರತೀಯ ಕ್ರಿಕೆಟ್‍ನ ಸದ್ಯದ ಅತ್ಯುತ್ತಮ ಉದಯೋನ್ಮುಖ ಆಟಗಾರರಲ್ಲಿ ಒಬ್ಬರು ಎನ್ನುವುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...