Homeಕರೋನಾ ತಲ್ಲಣಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

- Advertisement -
- Advertisement -

‘ಮೋದಿಯ ನಾಯಕತ್ವ ಮತ್ತು ಆಡಳಿತ ಶೈಲಿಯೇ ಕೋವಿಡ್ ಉಲ್ಬಣಕ್ಕೆ ಕಾರಣ. ಮೋದಿ ಒಬ್ಬ ‘ಮೆಗಾಲೊಮ್ಯಾನಿಯಾಕ್’ (ತಾನೇ ಶಕ್ತಿವಂತ, ತಾನೆ ಬುದ್ಧಿವಂತ ಎಂಬ ಹುಸಿ ಪ್ರತಿಷ್ಠೆಯ ಮನುಷ್ಯ) ಎಂದು ಭಾವಿಸಿದ್ದಾರೆ…….

ಎರಡು ದಿನದ ಹಿಂದೆ, ಕೋವಿಡ್ ಕುರಿತಂತೆ ಎನ್‌ಡಿಟಿವಿ ಮತ್ತು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಸಿದ್ಧ ಇತಿಹಾಸಕಾರ ಮತ್ತು ರಾಜಕೀಯ ಚಿಂತಹ ರಾಮಚಂದ್ರ ಗುಹಾ ಹೀಗೆ ವಿಶ್ಲೇಷಣೆ ಮಾಡಿದ್ದಾರೆ.

ರಾಜಕೀಯ ವಿಶ್ಲೇಷಕ ಝೈನಬ್ ಸಿಕಂದರ್, ಮೊದಲ ಅಲೆ ತಣ್ಣಗಾದ ನಂತರ ಅದು ತಮ್ಮದೇ ಯಶಸ್ಸು ಎಂಬಂತೆ ಬೀಗಿದ ಮೋದಿ ಸರ್ಕಾರ, ತಜ್ಞರು ಎರಡನೇ ಅಲೆಯ ಬಗ್ಗೆ ಎಚ್ಚರಿಸಿದರೂ, ಚುನಾವಣೆ ಗೆಲ್ಲುವುದೇ ಮುಖ್ಯ ಎಂಬಂತೆ ಉಡಾಫೆ ಮಾಡಿದ್ದೇ 2ನೆ ಅಲೆ ತೀವ್ರವಾಗಲು ಕಾರಣ ಎಂದು ದಿ ಪ್ರಿಂಟ್‌ನಲ್ಲಿ ಬರೆದಿದ್ದಾರೆ.

ರಾಮಚಂದ್ರ ಗುಹಾ ಪ್ರಕಾರ, ಮೋದಿ ಯಾವ ತಜ್ಞರ ಅಭಿಪ್ರಾಯಕ್ಕೂ ಬೆಲೆ ಕೊಡುವುದಿಲ್ಲ. ಅವರು ನೇಮಿಸಿಕೊಂಡ ತಜ್ಞರಲ್ಲಿ ಬಹುಪಾಲು ಜನ ಮೋದಿಯವರ ಮನದಾಳದ ಇಂಗಿತವನ್ನೇ ಸಲಹೆ ಮಾಡುತ್ತಾರೆ, ಮೋದಿ ಖುಷಿಗೊಳ್ಳುತ್ತಾರೆ. ಹೀಗಾಗಿ ಹೊರಗಿನ ಮತ್ತು ಸ್ವತಂತ್ರ ತಜ್ಞರು ಮುಂದಿನ ಅಪಾಯದ ಬಗ್ಗೆ ನವೆಂಬರ್‌ನಿಂದಲೇ ಎಚ್ಚರಿಕೆ ನೀಡುತ್ತಿದ್ದರೂ ಮೋದಿಯವರು ಅದನ್ನು ಕೇರ್ ಮಾಡಲಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ದೆಹಲಿ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತೀವ್ರವಾದ ಮೊದಲ ಅಲೆಗೆ ತತ್ತರಿಸಿ, ಎರಡನೇ ಅಲೆ ಪ್ರವೇಶ ಮಾಡುವ ಹೊತ್ತಿಗೆ ಆರ್ಥಿಕವಾಗಿ ಹೈರಾಣಾಗಿದ್ದವು. ಇದ್ದುದರಲ್ಲಿ ಕೇರಳ ಮತ್ತು ನಂತರದಲ್ಲಿ ದೆಹಲಿ, ಮಹಾರಾಷ್ಟ್ರ ಸರ್ಕಾರಗಳು ತಮ್ಮ ರಾಜ್ಯಕ್ಕೆ ಕಾಡಿದ್ದ ಮೊದಲ ಅಲೆಯನ್ನು ಒಂದು ಹಂತಕ್ಕೆ ತರುವಲ್ಲಿ ಶ್ರಮ ವಹಿಸಿದ್ದವು.

ಆದರೆ ಎರಡನೆ ಅಲೆ ಜೋರಾದಾಗ ಅವು ಸಹಾಯಕ್ಕೆ ಮನವಿ ಮಾಡುತ್ತಿದ್ದರೆ, ಮೋದಿಯವರು ಬಂಗಾಳ ಮತ್ತು ಇತರ ಚುನಾವಣೆಗಳಲ್ಲಿ ನಿರತರಾಗಿದ್ದರು. ಈ ಮೂರು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ ಎಂಬ ಕ್ಷುಲ್ಲಕ ರಾಜಕೀಯ ಅಂಶ ಅವರ ತಲೆಯಲ್ಲಿ ಇದ್ದೇ ಇದೆ. ಅದಿರಲಿ, ಅವರ ಗುಜರಾತ್ ಮತ್ತು ಉತ್ತರಪ್ರದೇಶ ಸರ್ಕಾರಗಳು ತೀವ್ರ ಕೋವಿಡ್ ಹಾನಿ ಅನುಭವಿಸಿಯೂ ಅಂಕಿಅಂಶ ಮುಚ್ಚಿಡುತ್ತ 2ನೆ ಅಲೆ ತೀವ್ರಗೊಳ್ಳಲು ಕಾರಣವಾದ ಮೇಲೂ ಆ ರಾಜ್ಯಗಳಿಗೆ ಕೇಂದ್ರ ಯಾವ ಸಂದೇಶ ಅಥವಾ ಎಚ್ಚರಿಕೆಯನ್ನು ನೀಡಲಿಲ್ಲ.

ಕರ್ನಾಟಕದ ಸರ್ಕಾರದ್ದು ಇನ್ನೊಂದು ಸಮಸ್ಯೆ. ಇದು ಉತ್ತರಪ್ರದೇಶ ಅಥವಾ ಗುಜರಾತಿನಂತೆ ಕೋವಿಡ್ ಸಾವಿನ, ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಿಲ್ಲ. ಆದರೆ ಮೋದಿಯವರಂತೆಯೇ ಈ ಸರ್ಕಾರ ಕೂಡ ತಜ್ಞರ ಮಾತನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆರೋಗ್ಯ ಸಚಿವ ಡಾ. ಸುಧಾಕರ್ ಮೀಡಿಯಾ ಮುಂದೆ ಹೇಳುವ ಯೋಜನೆಗಳು ರಚನಾತ್ಮಕ ಎನಿಸುತ್ತವೆ, ಆದರೆ ಅವೆಂದೂ ಜಾರಿಗೆ ಬರಲಿಲ್ಲ. ಇಲ್ಲೂ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇದ್ದರೂ ರಾಜ್ಯ ಸರ್ಕಾರ ಮಾತ್ರ ಅಡ್ಡಗೋಡೆ ಮೇಲೆ ದೀಪ ಇಡುತ್ತ ಬಂದಿದೆ.

ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಆಕ್ಸಿಜನ್ ಕೊರತೆ, ಲಸಿಕೆ ಕೊರತೆ, ರೆಮ್‌ಡಿಸಿವಿಯರ್ ಕೊರತೆ ಬಗ್ಗೆ ರಾಜ್ಯದ ಪ್ರತಿನಿಧಿ ತಿಳಿಸಿದರು. ಆದರೆ ಈ ಸರ್ಕಾರದ ಸಚಿವರ‍್ಯಾರೂ ಈ ಸತ್ಯವನ್ನು ಒಪ್ಪಿಕೊಳ್ಳುತ್ತಲೇ ಇಲ್ಲ. ಹಾಗೆಯೇ ನಮ್ಮ ಸಂಸದರ‍್ಯಾರೂ ಕೂಡ ರಾಜ್ಯಕ್ಕೆ ಆರೋಗ್ಯ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿ ಎಂಬ ಒಂದೇ ಒಂದು ಬೇಡಿಕೆಯನ್ನೂ ಇವತ್ತಿಗೂ ಇಟ್ಟಿಲ್ಲ!

ಅಂದರೆ ಇಲ್ಲಿ ಮೋದಿ ಮತ್ತು ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು, ಕಳೆದ 4 ತಿಂಗಳಿಂದ ‘ಎಲ್ಲವೂ ಸರಿಯಾಗಿದೆ’ ಎಂಬ ಹುಸಿ ಸಂತೃಪ್ತಿಕರ ಭಾವವನ್ನು ವ್ಯಕ್ತಪಡಿಸುತ್ತ ಜನರನ್ನೂ ದಾರಿ ತಪ್ಪಿಸುತ್ತ ಬಂದವು. ತೊಂದರೆಯಲ್ಲಿದ್ದ ಬಿಜೆಪಿಯೇತರ ರಾಜ್ಯಗಳ ಬೇಡಿಕೆಗಳನ್ನು ಕೇಂದ್ರ ನಿರ್ಲಕ್ಷಿಸುತ್ತ ಬಂದಿತು. ಈಗಲೂ ಅದಕ್ಕೆ ಬಂಗಾಳ ಚುನಾವಣೆಯೇ ಮುಖ್ಯವಾಗಿದೆ. ದೆಹಲಿ ಹೈಕೋರ್ಟ್ ಸತತ ಎರಡು ದಿನಗಳ ಕಾಲ ತರಾಟೆಗೆ ತೆಗೆದುಕೊಂಡ ನಂತರವೂ ಕೇಂದ್ರ ಸರ್ಕಾರಕ್ಕೆ ಅದು ಅವಮಾನ ಅನಿಸಿಯೇ ಇಲ್ಲ ಎಂಬಂತೆ ಕಾಣುತ್ತಿದೆ.

ಝೂನಬ್ ಸಿಕಂದರ್ ಬರೆಯುತ್ತಾರೆ, ‘ಚಪ್ಪಾಳೆಯಿಂದ ಮೋದಿ ಕುರುಡರಾದರು. ಅವರದೇ ಅಭಿಮಾನಿಗಳ ಪ್ರಶಂಸೆಗಳಿಂದ ಉಬ್ಬಿ ಹೋದರು. ಜಾಗತಿಕ ಪ್ರಶಂಸೆಯನ್ನು ಮೋದಿ ಎಷ್ಟು ಪ್ರೀತಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಎಲ್ಲಿಗೆ ಹೋದರೂ ಅದನ್ನು ಪ್ರಭಾವಲಯದಂತೆ ಧರಿಸುತ್ತಾರೆ, ಅವರು ಭಾರತವಲ್ಲ, ನಿಜವಾದ ವಿಶ್ವ ಗುರು ಎಂದು ಮತದಾರರಿಗೆ ಮನವರಿಕೆ ಮಾಡಲು ಬಯಸುತ್ತಾರೆ. ಸಮುಂದರ್ ಪೆ ಚರ್ಚಾ ಫೋಟೋ-ಶೂಟ್‌ಗಾಗಿ ವಿಶ್ವ ನಾಯಕರನ್ನು ತಬ್ಬಿಕೊಂಡು ಅವರೊಂದಿಗೆ ಬೀಚ್‌ನಲ್ಲಿ ನಡೆಯುವಾಗ ಇಂತಹ ವಿಶ್ವಗುರು ಭ್ರಮೆಯಲ್ಲಿ ಅವರು ಇರುತ್ತಾರೆ. ಅವರ ಈ ನಡವಳಿಕೆಯೇ ಇವತ್ತಿನ ಈ ಬಿಕ್ಕಟ್ಟಿನ ಮೂಲವಾಗಿದೆ…..

ಆದ್ದರಿಂದ, ಹೊಸ ರೂಪಾಂತರವು ಭಾರತಕ್ಕೆ ಬಂದಿದೆ ಮತ್ತು ‘ಇಂಡಿಯನ್’ ರೂಪಾಂತರದ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳಿದ್ದನ್ನು ಮೋದಿ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದ್ದರ ಪರಿಣಾಮವೇ ಇವತ್ತಿನ ದುರಂತಕ್ಕೆ ಕಾರಣ….’

ರಾಮಚಂದ್ರ ಗುಹಾ ಪ್ರಕಾರ, ಹಿಂದೆಲ್ಲ ಸರ್ಕಾರಗಳು ದಕ್ಷ, ದೂರದೃಷ್ಟಿಯುಳ್ಳ ಅಧಿಕಾರಿಗಳನ್ನು ಪ್ರಮುಖ ಸ್ಥಾನಕ್ಕೆ ನೇಮಿಸುತ್ತಿದ್ದವು. ಅಲ್ಲಿ ಪಕ್ಷನಿಷ್ಠೆ ಅಥವಾ ವ್ಯಕ್ತಿನಿಷ್ಠೆ ನೋಡುತ್ತಿರಲಿಲ್ಲ. ಆದರೆ 2014ರ ನಂತರ ಮೋದಿಯವರು ಗುಜರಾತಿ ಅಧಿಕಾರಿಗಳನ್ನು ದೆಹಲಿಗೆ ಕರೆ ತಂದರು. ಇವರೆಲ್ಲ ವ್ಯಕ್ತಿಪೂಜೆಯ ಆರಾಧಕರು, ಪಿಎಂಒ ಕೂಡ ಅಂತಹವರಿಂದಲೇ ತುಂಬಿತು… ಹೀಗಾಗಿ ಅಲ್ಲಿ ತಜ್ಞತೆಗೆ, ಆಡಳಿತ ದಕ್ಷತೆಗೆ ಅವಕಾಶವೇ ಇಲ್ಲವಾಯಿತು’ ಎನ್ನುತ್ತಾರೆ.

ವಾಷಿಂಗ್ಟನನ್ ಪೋಸ್ಟ್ ಮತ್ತು ದಿ ಗಾರ್ಡಿಯನ್ ಈ ಎರಡು ದಿನಗಳಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ಭಾರತದಲ್ಲಿನ 2ನೆ ಉಲ್ಬಣಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಟೈಟಲ್ಲಿನಲ್ಲಿಯೇ ಸಾರಿವೆ.

ಇವತ್ತು ಬಂಗಾಳದಲ್ಲಿ 6ನೆ ಹಂತದ ಮತದಾನ ಆರಂಭವಾದ ಕೂಡಲೇ ಮೊದಿ ಟ್ವೀಟ್ ಮಾಡಿ, ಎಲ್ಲರೂ ಮತ ಚಲಾಯಿಸಿ ಎನ್ನುತ್ತ ತಮ್ಮ ಸಣ್ಣ ಬುದ್ಧಿ ಪ್ರದರ್ಶಿಸಿದ್ದಾರೆ. ಅವರ ಮೂಗಿನಡಿಯೇ ಜನ ಆಮ್ಲಜನಕ ಅಂದರೆ O2 ಕೊರತೆಯಿಂದ ಸಾಯುವಾಗ ಅವರು ಟ್ವೀಟಿನಲ್ಲಿ ಓಟಿನ ಬೇಟೆಯಾಡುತ್ತಿದ್ದರು. ಈ ಒಂದು ಅಂಶವೇ ಸಾಕು ಅವರ ಹುಚ್ಚು ಶೈಲಿಯ, ಒಣ ಧಿಮಾಕಿನ ಆಡಳಿತ ಶೈಲಿಗೆ ಅಲ್ಲವೇ?

ಒಂದೆಡೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವಾಗ ಬಂಗಾಳದ ಅಸ್ಸನೋಲ್‌ನಲ್ಲಿ ಮೋದಿ ಬೃಹತ್ ರ್ಯಾಲಿ ನಡೆಸುತ್ತಾರೆ. ಇಷ್ಟೊಂದು ಜನಸಂದಣಿ ನಾನು ನೋಡಿಯೇ ಇಲ್ಲ ಎಂದು ಉದ್ಘರಿಸುತ್ತಾರೆ. ಅಲ್ಲದೇ ನಾಳೆ ಬಂಗಾಳದಲ್ಲಿ ಮತ್ತೆ ಮೋದಿಯವರ ರ‍್ಯಾಲಿಗಳಿವೆ. ಅಲ್ಲಿ ಅಪಾರ ಜನಸಂದಣಿ ಸೇರುತ್ತದೆ ಅಥವಾ ಸೇರಿಸುತ್ತಾರೆ. ಹಾಗಾದರೆ ಮೊನ್ನೆ ಮಂಗಳವಾರ 8.45ಕ್ಕೆ ಅವರು ಹೇಳಿದ್ದೇನು? ಈ ಆಷಾಢಭೂತಿತನವೇ ಇವತ್ತಿನ ಕೋವಿಡ್ ದುರಂತದ ಮೂಲ ಅಲ್ಲವೇ?

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಬೆಡ್‌ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್‌ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...