ಕೊರೊನಾ ವಿರುದ್ಧದ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ, ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? ಎಂಬ ಪೋಸ್ಟರ್ ಅಂಟಿಸಿದವರ ಬಂಧನ ವಿಚಾರಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ಪೋಸ್ಟರ್ಗಳ ಪ್ರಕರಣದಲ್ಲಿ ದೆಹಲಿ ಪೊಲೀಸರು 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ನಾಯಕರು ಈ ಬಂಧನಗಳ ವಿರುದ್ಧ ಕಾಂಗ್ರೆಸ್ ಅಭಿಯಾನ ಶುರು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೊಫೈಲ್ ಪೋಟೋಗಳನ್ನು ಬದಲಿಸಿ, ಇದೇ ಗೋಡೆಬರಹವನ್ನು ಹಾಕಿದ್ದಾರೆ.
ತಮ್ಮ ಪ್ರೊಫೈಲ್ ಫೋಟೋ ಬದಲಿಸಿಕೊಂಡು, ಭಿತ್ತಿಪತ್ರ ಅಂಟಿಸಿದ್ದಕ್ಕಾಗಿ ಸಾರ್ವಜನಿಕರನ್ನು ಬಂಧಿಸಿರುವ ಸರ್ಕಾರದ ವಿರುದ್ದ ಕಿಡಿಕಾರಿರುವ ರಾಹುಲ್ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು “ನನ್ನನ್ನೂ ಬಂಧಿಸಿ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ಟೀಕಿಸಿ ಪೋಸ್ಟರ್: ‘ನನ್ನನ್ನೂ ಬಂಧಿಸಿ’ ಎಂದ ರಾಹುಲ್ಗಾಂಧಿ
Arrest me too.
मुझे भी गिरफ़्तार करो। pic.twitter.com/eZWp2NYysZ
— Rahul Gandhi (@RahulGandhi) May 16, 2021
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಪ್ರೊಫೈಲ್ ಪೋಟೋ ಬದಲಿಸಿ, ಈ ಅಭಿಯಾನಕ್ಕೆ ಬೆಂಬಲಿಸಿದ್ದಾರೆ.
#NewProfilePic pic.twitter.com/eBM6997yvZ
— Siddaramaiah (@siddaramaiah) May 16, 2021
#NewProfilePic pic.twitter.com/zKoJpdFlQS
— Karnataka Congress (@INCKarnataka) May 16, 2021
ಇದನ್ನೂ ಓದಿ: ಹರಿಯಾಣ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿಚಾರ್ಜ್- ಹಲವರಿಗೆ ಗಾಯ
“ನಾವು ಆಮ್ಲಜನಕವನ್ನು ಕೇಳುತ್ತೇವೆ, ನೀವು ವ್ಯವಹರಿಸುತ್ತಿರಿ..ನಾವು ಲಸಿಕೆ ಕೇಳುತ್ತೇವೆ. ನೀವು ಅದನ್ನು ವ್ಯಾಪಾರ ಮಾಡುತ್ತೀರಿ…ನಂತರ ನಾವು ಪ್ರಶ್ನೆಗಳನ್ನು ಕೇಳುತ್ತೇವೆ…ನೀವು ನಮ್ಮನ್ನು ಬಂಧಿಸುತ್ತೀರ ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.
हम ऑक्सीजन मांगेंगे
तुम ओछा व्यवहार करो
हम वैक्सीन मांगेंगे
तुम उसका व्यापार करो
फिर हम सवाल पूछेंगे
चाहे तुम हमें गिरफ्तार करो#ArrestMeToo pic.twitter.com/J40OEI0Tea— Congress (@INCIndia) May 16, 2021
ಇತ್ತ ಪೋಸ್ಟರ್ಗಳನ್ನು ಅಂಟಿಸಿದ್ದು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಎಂದು ಆಪ್ ಹೇಳಿದೆ. ಜೊತೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ’ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ?’ ಎಂದು ಪ್ರಶ್ನಿಸಿದ್ದಾರೆ.
मोदी जी, हमारे बच्चों की Vaccine विदेश क्यों भेज दिया?
— AAP (@AamAadmiParty) May 15, 2021
ನಮ್ಮ ಕಾರ್ಯಕರ್ತರ ಕೆಲಸಕ್ಕೆ ಅಮಾಯಕರು, ಬಡವರನ್ನು ಹಿಂಸಿಸಬೇಡಿ. ಈ ಪೋಸ್ಟರ್ಗಳನ್ನು ದೆಹಲಿಯಷ್ಟೇ ಅಲ್ಲ ದೇಶಾದ್ಯಂತ ಅಂಟಿಸುತ್ತೇವೆ ಎಂದು ಆಪ್ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಬ್ಲಾಕ್ ಫಂಗಸ್ಗೆ ಇಬ್ಬರು ಬಲಿ- ಪ್ರಕರಣಗಳ ನಿಖರ ಮಾಹಿತಿಯಿಲ್ಲ ಎಂದ ಆರೋಗ್ಯ ಸಚಿವರು!