Homeಮುಖಪುಟಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

ಶ್ರದ್ಧಾಂಜಲಿ; ಮರೆಯಾದ ಮಹದೇವ ಪ್ರಕಾಶ್

- Advertisement -
- Advertisement -

ಸುಖಪಡಲು ಎಲ್ಲ ಸವಲತ್ತುಗಳೂ ಚಾಚಿಕೊಂಡು ಬಂದಾಗ ಫಲಾನುಭವಿಯೇ ಪೈಸಲ್ ಎಂಬಂತೆ ನಮ್ಮ ಮಹದೇವ ಪ್ರಕಾಶ್ ಕೊರೊನಾಕ್ಕೆ ಬಲಿಯಾದರು!

ಹಿರಿಯ ಮತ್ತು ಗೌರವಾನ್ವಿತ ಪತ್ರಕರ್ತರಾಗಿದ್ದ ಮಹದೇವ ಪ್ರಕಾಶ್ ಈ ನಾಡು ಕಂಡ ಪ್ರಾಮಾಣಿಕ ಮತ್ತು ದಕ್ಷ ರಾಜಕಾರಣಿಯಾಗಿದ್ದ ವಿರೇಂದ್ರಪಾಟೀಲರು ಆರಂಭಿಸಿದ್ದ ಲೋಕವಾಣಿ ಎಂಬ ಪತ್ರಿಕೆಯಲ್ಲಿದ್ದಾಗ ಪ್ರಾಮಾಣಿಕ ಅಭಿವ್ಯಕ್ತಿಗೆ ಹೆಸರಾಗಿದ್ದರು. ಆದರೂ ಲಂಕೇಶ್ ಬದುಕಿರುವವರೆಗೆ ಪತ್ರಿಕೆ ಆಫೀಸಿಗೆ ಬರಲಾಗಿರಲಿಲ್ಲ. ಲಂಕೇಶ್ ಏನಾದರೂ ಬೈದರೆ ಎಂಬ ಅಳುಕಿತ್ತು. ಈ ಅಳುಕು ಸಕಾರಣವಾಗಿತ್ತು.

ಲಂಕೇಶ್ ತೀರಿಕೊಂಡ ನಂತರ ಅವರ ಮಗಳು ಗೌರಿ ಸಂಪಾದಕಿಯಾದ ಮೇಲೆ ಮಹದೇವ ಪ್ರಕಾಶ್ ಪ್ರಭುದ್ಧ ಸಲಹೆಗಾರರಾಗಿ ಬಂದು ಸೇರಿಕೊಂಡರು. ಆಗ ಗೌರಿ, ಮಹದೇವ ಪ್ರಕಾಶ್ ಹೇಳಿದಂಗೆ ಎಂಬ ಉಪಮೆಯಿಂದ ಮಾತು ಆರಂಭಿಸುತ್ತಿದ್ದರು. ಮಹದೇವ ಪ್ರಕಾಶ್ ಬರವಣಿಗೆ ಕೂಡ ತಣ್ಣನೆ ಶೈಲಿಯ ಸಂಯುಕ್ತ ಕರ್ನಾಟಕದ ಲೇಖನದಂತಿದ್ದವು. ಆದ್ದರಿಂದ ಗೌರಿಯ ತಾತ್ಸಾರಕ್ಕೆ ಒಳಗಾದರು.

ನಂತರ ಈ ಭಾನುವಾರ ಎಂಬ ವಾರಪತ್ರಿಕೆ ನಡೆಸತೊಡಗಿದರು. ಇದೂ ಕೂಡ ಸುಧಾರಿತ ವೈಕುಂಟರಾಜುರವರ ವಾರಪತ್ರಿಕೆಯಂತಿತ್ತು. ಜನ ಕೊಂಡು ಓದದಿದ್ದರೂ, ಪತ್ರಿಕೆ ನಡೆಸುವ ಕುಶಲಕಲೆ ಮಹದೇವ ಪ್ರಕಾಶರಿಗಿತ್ತು. ಸಿದ್ದರಾಮಯ್ಯನವರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಲೇಖನ ಬರತೊಡಗಿದವು. ಮಹದೇವ ಪ್ರಕಾಶ್ ಬರೆದ ಮೇಲೆ ಅದರಲ್ಲಿ ಸತ್ಯಾಂಶಗಳಿರುತ್ತವೆ ಎಂದು ಕೆಲವರು ಓದುತ್ತಿದ್ದರು. ಮುಖ್ಯವಾಗಿ ಯಡಿಯೂರಪ್ಪನವರ ಕಡೆಯವರ ನಡುವೆ ಪತ್ರಿಕೆ ಹೆಚ್ಚು ಚರ್ಚೆಯಾಗುತ್ತಿತ್ತು. ಅದೇ ಸಮಯದಲ್ಲಿ ಮಹದೇವ ಪ್ರಕಾಶ್ ಟಿವಿಯೊಳಗೆ ರಾಜಕೀಯ ವಿಶ್ಲೇಷಕರಾಗಿ ಬಂದು ಕುಳಿತರು. ಅಲ್ಲಿ ಬಂದು ಕುಳಿತ ಮೇಲೆ ನಿರಂತರವಾಗಿ ಮಾತನಾಡಬೇಕಾಗುತ್ತದೆ. ಆದ್ದರಿಂದ ಪೂರ್ವಾಗ್ರಹಗಳಿದ್ದರೆ ಸಾಕು, ಸುಳ್ಳುಗಳು ತಾನಾಗಿಯೇ ಹರಿದು ಬರುತ್ತವೆ.

ಒಮ್ಮೆ ಅವರು ಟಿವಿಯಲ್ಲಿ ಮಾತಾನಾಡುತ್ತ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಯತೀಂದ್ರನನ್ನು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡುತ್ತ ಶಾಂತವೇರಿ ಗೋಪಾಲಗೌಡರು ತಾವು ಅನಾರೋಗ್ಯಕ್ಕೆ ತುತ್ತಾದಾಗ ತಮ್ಮ ಮಗಳನ್ನು ಅಭ್ಯರ್ಥಿಯನ್ನಾಗಿ ಮಾಡುವುದರ ಬದಲು ಬೆಸ್ತ ಜನಾಂಗದ ಕೊಣಂದೂರು ಲಿಂಗಪ್ಪನವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಅಂತಹ ತ್ಯಾಗಮಯಿ ರಾಜಕಾರಣಿ ಎಲ್ಲಿ, ಈ ಸಿದ್ದರಾಮಯ್ಯನೆಲ್ಲಿ ಎಂದರು. ಆಗ ನಾನು ಗೌರಿ ಎದುರು ಕುಳಿತಿದ್ದೆ. ಅವರು ಹೇಳಿದ ಸುಳ್ಳನ್ನು ಗೌರಿಗೆ ಹೇಳಿದೆ. ಫೋನ್ ಮಾಡಲು ನಂಬರ್ ಕೊಟ್ಟಳು. ತುಸು ಹೊತ್ತಾದ ನಂತರ ಮಹದೇವ ಪ್ರಕಾಶ್‌ಗೆ ಫೋನ್ ಮಾಡಿ:

ಏನ್ ಸಾರ್ ಈ ತರ ಸುಳ್ಳು ಹೇಳ್ತಾ ಇದ್ದೀರಿ ಎಂದೆ.

ನಾನ್ಯಾವ ಸುಳ್ಳು ಹೇಳಿದೆ ಅಂದ್ರು.

ನೋಡಿ ಗೋಪಾಲಗೌಡ್ರು ಅನಾರೋಗ್ಯದಲ್ಲಿದ್ದು, ತೀರ್ಥಹಳ್ಳಿ ಕ್ಷೇತ್ರ ಬಿಟ್ಟುಕೊಟ್ಟಾಗ, ಅವರ ಮಗಳಿಗೆ ಐದಾರು ವರ್ಷ ಇರಬಹುದು. ಇನ್ನು ಕೊಣಂದೂರು ಲಿಂಗಪ್ಪ ಬೆಸ್ತರ ಪೈಕಿ ಅಲ್ಲ, ಬೋವಿ ಪೈಕಿ. ನಿಮ್ಮಂಥವರು ಟಿವಿ ಒಳಗಡೆ ಕುಂತುಗಂಡು ಚೆಡ್ಡಿಗಳ ತರ ಸುಳ್ಳು ಹೇಳಬಾರ್ದು ಎಂದೆ.

ಚಂದ್ರೇಗೌಡ್ರೆ ತಪ್ಪಿದ್ರೆ ಹೇಳಿ ತಿದ್ದಿಕೊಳ್ಳೋಣ ಆದ್ರೆ ಚೆಡ್ಡಿಗಳು ಅನ್ನಬೇಡಿ ಎಂದರು.

ನೀವು ಇದುವರಿಗೂ ಹೇಳಿರೋ ಸುಳ್ಳುಗಳ ಲೆಕ್ಕಹಾಕಿದ್ರೆ ಚೆಡ್ಡಿಗಳು ಮಾತ್ರ ಇಷ್ಟು ಸುಳ್ಳೇಳಕ್ಕೆ ಸಾಧ್ಯ. ಮುಂದಿನ ವಾರ ಹೈಕಮಾಂಡು ಬಂದು ಸಿದ್ದರಾಮಯ್ಯನ್ನ ಇಳಸತ್ತೆ ಅಂತ ಮೂರು ತಿಂಗಳಿಂದ ಹೇಳ್ತ ಇದ್ದೀರಿ ಎಂದು ಆ ಕಡೆಯ ಯಾವ ವಿವರವನ್ನ ಕೇಳಿಸಿಕೊಳ್ಳದೆ ದಾಳಿ ಮಾಡಿದೆ. ಗೌರಿ ನಗುತ್ತ ಹೋಗ್ಲಿ ಬುಡ್ರಿ ಎಂದಳು. ಆಗ ಮನಸ್ಸಿಗೆ ಎಂತದೊ ಸಮಾಧಾನವಾಯ್ತು!

ಮಹದೇವ ಪ್ರಕಾಶರ ಟಿವಿ ವಿಶ್ಲೇಷಣೆ ಮತ್ತು ಭಾನುವಾರ ಪತ್ರಿಕೆ ಸತತವಾಗಿ ಸಿದ್ದರಾಮಯ್ಯನ ಸರಕಾರವನ್ನು ಟೀಕಿಸಿದ್ದು ಫಲ ಕೊಟ್ಟಿತ್ತು. ಯೆಡಿಯೂರಪ್ಪನವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡರು. ಎಂದಿನಂತೆ ಯಡಿಯೂರಪ್ಪ ಯಾರ್‍ಯಾರಿಗೆ ಆಶ್ವಾಸನೆ ಕೊಟ್ಟಿದ್ದರೋ ಏನೋ ಸಲಹೆಗಾರನಾಗಿ ಮಹದೇವ ಪ್ರಕಾಶರ ಅಲ್ಪ ಅವಧಿ ಮುಗಿಯಿತು.

ತೀರಿಕೊಂಡವರ ಬಗ್ಗೆ ಹಗುರವಾಗಿ ಮಾತನಾಡಬಾರದಂತೆ. ಆದರೂ ಒಂದು ಕಾಲದ ಗೌರವಾನ್ವಿತ ವ್ಯಕ್ತಿಯಾಗಿದ್ದ ಮಹದೇವರು ಹೀಗಾಗುವ ಅಗತ್ಯವಿರಲಿಲ್ಲ ಎಂಬುದು ಹಗುರವಾದ ಮಾತಲ್ಲ.


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಂಚಾರ್ ಸಾಥಿ ಆ್ಯಪ್’ ಕಡ್ಡಾಯವಲ್ಲ, ಅಳಿಸಬಹುದು: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ  

‘ಸಂಚಾರ್ ಸಾಥಿ’ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಕಡ್ಡಾಯವಲ್ಲ, ನಿಮಗೆ ಬೇಡವೆಂದಾಗ ಅದನ್ನು ಅಳಿಸಬಹುದು ಎಂದು ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.  ನವೆಂಬರ್ 28 ರಂದು, ಟೆಲಿಕಾಂ ಇಲಾಖೆ ಭಾರತದಲ್ಲಿ...

ಉತ್ತರ ಪ್ರದೇಶ| ಊಟದ ಕೌಂಟರ್‌ನಲ್ಲಿ ‘ಬೀಫ್‌ ಕರಿ’ ಲೇಬಲ್‌’; ಮದುವೆ ಆರತಕ್ಷತೆ ಅಸ್ತವ್ಯಸ್ತ

ಉತ್ತರ ಪ್ರದೇಶದ ಅಲಿಘರ್‌ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ವಿವಾಹದ ಆರತಕ್ಷತೆಯಲ್ಲಿ ಇಬ್ಬರು ಅತಿಥಿಗಳು, ಆಹಾರ ಕೌಂಟರ್‌ನಲ್ಲಿ ಬರೆದಿದ್ದ 'ಬೀಫ್‌ ಕರಿ' ಎಂಬ ಲೇಬಲ್‌ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಸಮಾರಂಭ...

‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯ | ಕೇಂದ್ರದ ಆದೇಶ ವಿರೋಧಿಸಲು ಮುಂದಾದ ಆ್ಯಪಲ್ : ವರದಿ

ಸ್ಮಾರ್ಟ್‌ಫೋನ್ ತಯಾರಕರು ಎಲ್ಲಾ ಹೊಸ ಮೊಬೈಲ್‌ ಫೋನ್‌ಗಳಲ್ಲಿ ಸರ್ಕಾರಿ ಸ್ವಾಮ್ಯದ 'ಸಂಚಾರ್ ಸಾಥಿ' ಆ್ಯಪ್ ಪ್ರಿ ಇನ್‌ಸ್ಟಾಲ್ (Pre-Install) ಮಾಡಬೇಕು ಮತ್ತು ಬಳಕೆದಾರರು ಅದನ್ನು ಡಿಲಿಟ್ ಮಾಡದಂತೆ ನೋಡಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ...

ಬಾಂಗ್ಲಾದೇಶಿಗರು ಎಂಬ ಆರೋಪ : ಬಂಗಾಳದ ನಾಲ್ವರು ಮುಸ್ಲಿಂ ವ್ಯಾಪಾರಿಗಳಿಗೆ ಒಡಿಶಾ ತೊರೆಯಲು 72 ಗಂಟೆಗಳ ಗಡುವು

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ಮುಸ್ಲಿಂ ವ್ಯಾಪಾರಿಗಳನ್ನು ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ವಲಸಿಗರು ಎಂದು ಆರೋಪಿಸಿ ಒಡಿಶಾದ ನಯಾಗಢವನ್ನು ತೊರೆಯಲು 72 ಗಂಟೆಗಳ ಗಡುವು ನೀಡಲಾಗಿದೆ ಎಂದು ದಿ ಟೆಲಿಗ್ರಾಫ್ ಮಂಗಳವಾರ...

‘ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಒಗ್ಗಟ್ಟಿನಿಂದ ಇದ್ದೇವೆ: ನಾನು, ಡಿ.ಕೆ. ಶಿವಕುಮಾರ್ ಸಹೋದರರಿದ್ದಂತೆ’: ಸಿಎಂ ಸಿದ್ದರಾಮಯ್ಯ

‘ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ, 2028ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 2, ಮಂಗಳವಾರ ಉಪಮುಖ್ಯಮಂತ್ರಿ...

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಚಾರಣೆಗೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಎಫ್‌ಟಿಎಸ್‌ ವಿಶೇಷ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಹಾಗೂ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌...

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಗಾಂಧಿ ಕುಟುಂಬದ ವಿರುದ್ಧ ಹೊಸ ಎಫ್‌ಐಆರ್‌ ದಾಖಲಿಸಿದ ಇಡಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹೊಸ ಎಫ್‌ಐಆರ್‌ ದಾಖಲಿಸಿದೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು,...

‘ಸಂಚಾರ ಸಾಥಿ’ ಆ್ಯಪ್‌ ಕಡ್ಡಾಯ: ಬಿಜೆಪಿ ದೇಶವನ್ನು ಸರ್ವಾಧಿಕಾರ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿದೆ ಎಂದ ಪ್ರಿಯಾಂಕಾ ಗಾಂಧಿ 

ಮೊಬೈಲ್ ಫೋನ್ ತಯಾರಕರು ಹೊಸ ಹ್ಯಾಂಡ್‌ಸೆಟ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಸ್ಥಾಪಿಸುವಂತೆ ಟೆಲಿಕಾಂ ಇಲಾಖೆ ಕೇಳಿಕೊಂಡಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ಇದನ್ನು "ಗೂಢಚಾರಿ ಅಪ್ಲಿಕೇಶನ್" ಎಂದು ಕರೆದಿದ್ದಾರೆ....

ಎಸ್‌ಐಆರ್ ಚರ್ಚೆಗೆ ಬಿಗಿಪಟ್ಟು ಹಿಡಿದ ಪ್ರತಿಪಕ್ಷಗಳು, ಉಭಯ ಸದನಗಳಲ್ಲಿ ಕೋಲಾಹಲ ; ಕಲಾಪ ಮುಂದೂಡಿಕೆ

ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದೂ (ಡಿ.2) ಕೂಡ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆಗೆ ಪಟ್ಟು ಹಿಡಿದು ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದೆ....

ಆಂಧ್ರಪ್ರದೇಶ| ‘ನೀವು ಕೊಳಕು ಜಾತಿಗೆ ಸೇರಿದವರು..’ ಎಂದು ದಲಿತ ವಿದ್ಯಾರ್ಥಿಗಳನ್ನು ನಿಂದಿಸಿದ ಇಂಗ್ಲಿಷ್ ಶಿಕ್ಷಕ

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಿಂದ ಆಘಾತಕಾರಿ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯಂಡಪಲ್ಲಿ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕರು ದಲಿತ ಸಮುದಾಯದ ವಿದ್ಯಾರ್ಥಿಗಳ ವಿರುದ್ಧ ಜಾತಿ ನಿಂದನೆ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ ಎಂದು...