Homeಚಳವಳಿಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

ಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

- Advertisement -
- Advertisement -

ಋಷಿಯಂತೆ ಬದುಕಿ, ಪರಿಸರ ಜಾಗೃತಿ ಮೂಡಿಸಿ, ಅದಕ್ಕಾಗಿ ಪಾದಯಾತ್ರೆ ನಡೆಸಿ ಹೋರಾಟ ಮಾಡಿ ಹಿಮಾಲಯದ ತಪ್ಪಲು ಹಸಿರಾಗಿರುವಂತೆ ನೋಡಿಕೊಂಡ ಸುಂದರಲಾಲ್ ಬಹುಗುಣ ಅವರನ್ನು ಮೇ 21ರಂದು ಕಳೆದುಕೊಂಡೆವು.

ಎಂಟನೆಯ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ’ಚಿಪ್ಕೊ ಚಳವಳಿ’ಯ ಬಗ್ಗೆ ಪಾಠವಿತ್ತು. ಆ ಪಾಠವನ್ನು ಓದಿದ ನನ್ನ ಹಲವಾರು ವಿದ್ಯಾರ್ಥಿಗಳು ಆಡುಕುರಿಗಳಿಗಾಗಿ ಮತ್ತು ಉರುವಲಿಗಾಗಿ ಗಿಡ ಕಡಿಯುವವರೊಂದಿಗೆ ಜಗಳಕ್ಕಿಳಿದು ಪೊಲೀಸ್ ಸ್ಟೇಷನ್ನಿಗೆ ಸುದ್ದಿ ಮುಟ್ಟಿಸಿ ಹಲವಾರು ಗಿಡಗಳ ರಕ್ಷಣೆ ಮಾಡಿದರು. ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂಟಿಯ ದಿನಗಳಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಿದ್ದರು. ಹೊಲ ಮನೆ ಇಲ್ಲದ ನೌಕರರ ಮಕ್ಕಳು ತಮ್ಮ ಸ್ನೇಹಿತರ ಹೊಲಗಳಲ್ಲಿ ಹಣ್ಣಿನ ಗಿಡ ನೆಟ್ಟರು. ಇಂತಹ ಎಲ್ಲ ಪರಿಸರ ರಕ್ಷಣಾ ಚಟುವಟಿಕೆಗೆ ಮೂಲಕಾರಣ ಸುಂದರಲಾಲ್ ಬಹುಗುಣರು. ಗಢವಾಲದ ಈ ಸಂತ ಕರ್ನಾಟಕದ ಮಕ್ಕಳನ್ನು ಈ ರೀತಿ ಗಿಡ ನೆಡಲು ಪ್ರೇರೆಪಿಸಿದ್ದರು.

ಕೆಲವರ್ಷಗಳ ಹಿಂದೆ ’ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನದಲ್ಲಿ ಅವರು ಗೋವೆಗೆ ಬಂದಿದ್ದರು. ಅಲ್ಲಿ ಅವರಾಡಿದ ಮಾತುಗಳು ಇನ್ನೂ ನೆನಪಿನಲ್ಲಿ ಹಸಿರಾಗಿ ಉಳಿದಿವೆ.

’ನಾವು ಶಿವನ ಜಟೆಯಲ್ಲಿ ಗಂಗೆ ವಾಸಿಸಿದ್ದಾಳೆಂದು ನಂಬಿದ್ದೇವೆ. ಶಿವ ಹಿಮಾಲಯವಾಸಿ. ಅವನ ಜಟೆಯೆಂದರೆ ಹಿಮಾಲಯದ ತಪ್ಪಲಿನ ದಟ್ಟ ಅರಣ್ಯದಲ್ಲಿಯ ವೃಕ್ಷರಾಶಿ. ತಮ್ಮ ಬೇರುಗಳ ಮೂಲಕ ನೀರನ್ನು ಭೂಮಿಯ ಅಂತರಾಳಕ್ಕೆ ಇಳಿಸುತ್ತವೆ. ಹೀಗಾಗಿ ಅಂತರ್ಜಲ ಹೆಚ್ಚಾಗಿ ವರ್ಷವಿಡೀ ನಾವು ನೀರು ಪಡೆಯುತ್ತೇವೆ. ನಾವು ಅರಣ್ಯನಾಶದಿಂದ ಶಿವನ ಜಟೆಯನ್ನು ಕತ್ತರಿಸಿದರೆ ಗಂಗೆಯ ವಾಸಸ್ಥಾನವನ್ನು ಹಾಳುಮಾಡಿದಂತಾಗುತ್ತದೆ. ಅರಣ್ಯ ಉಳಿದರೆ ಗಂಗೆ, ಗಂಗೆ ಉಳಿದರೆ ನೀರು’ ಎಂದಿದ್ದರು.

ಹಲವು ದಶಕಗಳ ಹಿಂದೆಯೇ ಸುಂದರಲಾಲ್ ಬಹುಗುಣರು ಪ್ರವಾಹಗಳ ಪರಿಣಾಮವನ್ನು ಊಹಿಸಿದ್ದರು. ಹಿಮಾಲಯದ ದೇವಧಾರು ಮತ್ತು ಇತ್ಯಾದಿ ಮರಗಳ ನಾಶದಿಂದ ಭೂಮಿಯ ಮೇಲ್ಮೈ ಸಡಿಲಗೊಂಡು ಮಣ್ಣೆಲ್ಲ ಹಳ್ಳ ತೊರೆಗಳ ಮೂಲಕ ನದಿಯನ್ನು ಸೇರುತ್ತದೆ. ನದಿಯ ಆಳ ಕಡಿಮೆಯಾಗಿ ಅಗಲ ಹೆಚ್ಚಾಗುವುದು. ನದಿ ತನ್ನ ಒಡಲನ್ನು ಬಿಟ್ಟು ಸುತ್ತೆಲ್ಲ ಪಸರಿಸಿ ಹರಿಯುತ್ತದೆ. ಊರುಗಳು ಮತ್ತು ಹೊಲಗಳಲ್ಲೆಲ್ಲ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಭೂಮಿಯ ಮೇಲ್ಮೈ ಮಣ್ಣು ನಾಶವಾಗಿ ಭೂಮಿ ಬರಡಾಗುತ್ತದೆ. ಜನರ ಆಹಾರ ಮೂಲವಾದ ಹೊಲಗಳನ್ನು ಕಳೆದುಕೊಳ್ಳುತ್ತಾರೆ. ಗಿಡ ಕಡಿಯುವುದನ್ನು ನಿಲ್ಲಿಸಿ ಪ್ರವಾಹಗಳನ್ನು ತಡೆಯಬೇಕೆಂದು ಆಗಲೇ ಹೇಳಿದ್ದರು. ಸರಕಾರಗಳು ಟಿಂಬರ್ ಮಾಫಿಯಾಗಳ ಪ್ರಭಾವಕ್ಕೆ ಮಣಿನು ಅವರ ಮಾತನ್ನು ನಿರ್ಲಕ್ಷಿಸಿದವು. ಪ್ರತಿಫಲ ಎಲ್ಲರೂ ಅನುಭವಿಸಬೇಕಾಯಿತು.

PC : Sakshi

ಅವರು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ವಿರೋಧಿಸಿದರು. ನಮ್ಮ ಅರಣ್ಯಗಳೇ ನಮ್ಮ ಅಣೆಕಟ್ಟುಗಳು. ಅರಣ್ಯ ಉಳಿಸಿದರೆ ಅಲ್ಲಿಯ ಗಿಡಮರಗಳು ಅಂತರ್ಜಲ ಹೆಚ್ಚಿಸಿ ವರ್ಷವಿಡಿ ನೀರನ್ನು ಹಿಡಿದಿಡುತ್ತವೆ. ನದಿಗಳು ಹನ್ನೆರಡು ತಿಂಗಳು ಹರಿಯುತ್ತವೆ. ಜೀವ ವೈವಿಧ್ಯ ರಕ್ಷಣೆಯಾಗುತ್ತದೆ. ಮಾನವನ ಅವಶ್ಯಕತೆಗಳಾದ Food, Fodder, Fibre, Fertilizer, Furniture ಇತ್ಯಾದಿಗಳು ಸುಲಭವಾಗಿ ದೊರಕುತ್ತವೆ. ಇಂತಹ ದಟ್ಟ ಅರಣ್ಯ ನಾಶಮಾಡಿ ಅಣೆಕಟ್ಟು ಕಟ್ಟಿ ನೀರನ್ನು ಉಳಿಸುವ ಪ್ರಯತ್ನವೆಂದರೆ ಜಲಸಂಪನ್ಮೂಲವನ್ನು ನಾಶ ಮಾಡಿ ಜಲ ಉಳಿಸುವ ಯತ್ನ. ಈ ಜಲಾಶಯಗಳು ಅರ್ಥಹೀನ, ಹಿಮಾಲಯದ ತಪ್ಪಲಿನಲ್ಲಿ ಈ ಜಲಾಶಯಗಳು ಟೈಂಬಾಂಬ್ ಇಟ್ಟಂತೆ ಎಂದು ಹೇಳುತ್ತಿದ್ದರು. ದೊಡ್ಡ ದೊಡ್ಡ ಅಣೆಕಟ್ಟುಗಳು ನಿರ್ಮಾಣದ ವಿರುದ್ಧ ಹೋರಾಟ ಮಾಡಿದರು.

ಗೋಧಿ, ಅಕ್ಕಿಯನ್ನು ಬೆಳೆಯಲು ಬಹಳ ನೀರು ಬೇಕು. ಅದರ ಬದಲಿಗೆ ಕಡಿಮೆ ನೀರು ಬೇಡುವ ತೃಣಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಿದರು. ತಾವು ಗೋಧಿ ಮತ್ತು ಅಕ್ಕಿಯನ್ನು ಉಣ್ಣುವುದನ್ನೇ ಬಿಟ್ಟರು.

ಅವರು ಕರ್ನಾಟಕದ ಲಕ್ಷವೃಕ್ಷ ಆಂದೋಲನ, ಅಪ್ಪಿಕೊ ಚಳವಳಿ ಇತ್ಯಾದಿಗಳಲ್ಲಿ ಭಾಗವಹಿಸಿದ್ದರು. ಇಲ್ಲಿಯ ಬಹಳಷ್ಟು ಶಾಲಾಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿದರು. ಗಿಡಮರ ನೆಡಲು ಪ್ರೇರೇಪಿಸಿದರು.

ಆ ಹಿರಿಯ ಜೀವ ತನ್ನ ಮುಂದಿನ ಜನಾಂಗಗಳ ಬಗೆಗೆ ಹೊಂದಿದ್ದ ಕಾಳಜಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಭೂಮಿಯ ಮೇಲಿನ ಹಸಿರು ಹೊದಿಕೆ ಉಳಿಸಿಕೊಳ್ಳಬೇಕು. ಈ ಮುಖಾಂತರ ಸುಂದರಲಾಲ್ ಬಹುಗುಣರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು.

ಆರ್ ಜಿ ತಿಮ್ಮಾಪುರ
ನಿವೃತ್ತ ಶಿಕ್ಷಕರು, ಪರಿಸರಾಸಕ್ತರು ಮತ್ತು ಪ್ರಸ್ತುತ ಸಾವಯವ ಕೃಷಿಕರು


ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...

ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆ: ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸಿ, ಅವುಗಳನ್ನು ಹಿಂಪಡೆಯುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರವು ಆರು ಮಂದಿ ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸರ್ಕಾರದ ಅಧಿಕೃತ...

ಉದ್ಯಾನವನ ನುಂಗುವ ಕಾಯ್ದೆ ತಿದ್ದುಪಡಿ : ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿಗರು

ಕರ್ನಾಟಕ ವಿಧಾನಮಂಡಲವು ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಬಳಸಲು ಅನುಮತಿಸುವ ಕಾಯ್ದೆ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ, ಬೆಂಗಳೂರಿನ ಉದ್ಯಾನವನಗಳು ಹೊಸ ರಾಜಕೀಯ ಮತ್ತು ಪರಿಸರ ವಿವಾದದ...

ನೇಪಾಳ–ಟಿಬೆಟ್ ಭೀಕರ ಪ್ರವಾಹ: ನೇಪಾಳದಲ್ಲಿ 734 ಸಾವು, 2,498 ಮಂದಿ ನಾಪತ್ತೆ; ಒಟ್ಟು ಸಾವಿನ ಸಂಖ್ಯೆ 750ಕ್ಕೆ ಏರಿಕೆ!

ನೇಪಾಳ–ಚೀನಾ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಅವಶೇಷ ಪ್ರವಾಹದಲ್ಲಿ ನೇಪಾಳದಲ್ಲಿ ಇದುವರೆಗೆ 734 ಮಂದಿ ಮೃತಪಟ್ಟಿದ್ದು, 2,498 ಮಂದಿ ನಾಪತ್ತೆಯಾಗಿದ್ದಾರೆ. ಚೀನಾದ ಟಿಬೆಟ್ ಪ್ರದೇಶದಲ್ಲಿ 16 ಮಂದಿ...

“ಇಂತಹ ಸೌಹಾರ್ದತೆಯ ಮಾತುಗಳನ್ನು ಅಮೆರಿಕಾದಲ್ಲಲ್ಲ, ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಹೇಳಿ!” – ಭಾಗವತ್‌ಗೆ ವಿರೋಧ ಪಕ್ಷಗಳ ಸವಾಲು

ನ್ಯೂಯಾರ್ಕ್/ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೀಡಿರುವ ಸೌಹಾರ್ದತೆಯ ಹೇಳಿಕೆ ಈಗ ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಣ್ಣಿನಲ್ಲಿ ಮುಸ್ಲಿಂ ಸಮುದಾಯದ ಪರವಾಗಿ...

ಸ್ವದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಒಳಗೊಳ್ಳುವಿಕೆ ಮಂತ್ರ : ಆರ್‌ಎಸ್‌ಎಸ್‌ ದ್ವಂದ್ವ ನಿಲುವು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

"ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ" ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ...

ಮಹಾರಾಷ್ಟ್ರ | ಬುಡಕಟ್ಟು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ...

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...