Homeನ್ಯಾಯ ಪಥಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ನಮ್ಮ ಕಾಲದ ಪ್ರಾಣವಾಯು: ಪ್ರೊ. ಎಂ ಎಸ್ ಆಶಾದೇವಿ

ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ನಮ್ಮ ಕಾಲದ ಪ್ರಾಣವಾಯು: ಪ್ರೊ. ಎಂ ಎಸ್ ಆಶಾದೇವಿ

- Advertisement -
- Advertisement -

ದುರಿತ ಕಾಲವೆಂದರೇನೆನ್ನುವುದನ್ನು ಅದರೆಲ್ಲ ಅರ್ಥಬಾಹುಳ್ಯದಲ್ಲಿ, ಕಾರ್ಯಮಾದರಿಗಳಲ್ಲಿ ಕಂಡುಣ್ಣುತ್ತಿರುವ ದಾರುಣ ಸನ್ನಿವೇಶದಲ್ಲಿ ನಾವಿದ್ದೇವೆ. ಸಾವಿರ ಬಾರಿ ಯೇಟ್ಸ್‌ನ ಈ ಮಾತು ಬುದ್ಧು ಭಾವಗಳಲ್ಲಿ ಅನುರಣಿಸುತ್ತದೆ.

“ಸಜ್ಜನರು ದುರ್ಬಲರಾಗಿಬಿಟ್ಟಿದ್ದಾರೆ
ದುಷ್ಟರೋ ಅವರೆಲ್ಲ ಶಕ್ತಿಯಲ್ಲಿ ಅಟ್ಟಹಾಸ ಮಾಡುತ್ತಿದ್ದಾರೆ”

ಈ ಮಾತು ಸುಳ್ಳು ಎನಿಸುವ ಭರವಸೆ ಮೂಡಿಸುತ್ತಿದ್ದ ಬೆರಳೆಣಿಕೆಯ ವ್ಯಕ್ತಿತ್ವಗಳಲ್ಲಿ ದೊರೆಸ್ವಾಮಿಯವರು ಮೊದಲನೆಯವರು. ಮನುಷ್ಯ ಚೈತನ್ಯದಲ್ಲಿ ಅವರಿಗಿದ್ದ ನಂಬಿಕೆಯ ಮೂಲ ಯಾವುದು ಎನ್ನುವ ಪ್ರಶ್ನೆ ಅವರನ್ನು ನೋಡಿದಾಗಲೆಲ್ಲ ಕಾಡುತ್ತಿತ್ತು. ಲಂಕೇಶರ ದಾರ್ಶನಿಕ ಎನ್ನಬಹುದಾದ ಹೇಳಿಕೆಗಳಲ್ಲಿ ಒಂದೆಂದರೆ, ’ಮನುಷ್ಯ ಮೂಲತಃ ನೀಚ’ ಎನ್ನುವುದು. ಆದರೆ ತನ್ನ, ತನ್ನ ಪರಿಸರದಲ್ಲಿರುವ ಮನುಷ್ಯರ ನೀಚತನವನ್ನು ಮೀರಿಕೊಳ್ಳಲು ಯತ್ನಿಸಬೇಕಾಗಿರುವುದೇ ನಾಗರಿಕತೆಯ ಆದ್ಯ ಕೆಲಸಗಳಲ್ಲೊಂದು ಎನ್ನುವುದನ್ನೂ ಲಂಕೇಶರು ಅಷ್ಟೇ ಗಾಢವಾಗಿ ನಂಬಿದವರಾಗಿದ್ದರು. ದೊರೆಸ್ವಾಮಿಯವರು ಈ ಮಾದರಿಯವರು. ಗಾಂಧಿವಾದ ಎನ್ನುವ ಮಾತನ್ನು ಬಳಸುವುದೇ ಅಪಾರ ಹಿಂಜರಿಕೆಯ ಸಂಗತಿಯಾಗಿರುವ ಈ ಕಾಲದಲ್ಲಿ ದೊರೆಸ್ವಾಮಿಯವರು ನಮ್ಮಲ್ಲಿ ನಮಗೇ ಕಳೆದುಹೋಗುತ್ತಿರುವ ನಂಬಿಕೆಯನ್ನು ಹುಟ್ಟಿಸಬಲ್ಲಷ್ಟು ಅದಮ್ಯ ಆಶಾವಾದಿಯಾಗಿದ್ದರು ಎನ್ನುವುದೊಂದು ಸೋಜಿಗ.

ಅವರ ಹಸನ್ಮುಖವನ್ನು ನೋಡಿದಾಗಲೆಲ್ಲ ’ಅಳು ನುಂಗಿ ನಗು ಒಮ್ಮೆ ಎನ್ನುವ ಬೇಂದ್ರೆಯವರ ಮಾತು ಮನಸ್ಸಿನಲ್ಲಿ ಹಾದುಹೋಗುತ್ತಿತ್ತು. ತೀವ್ರವಾದ ಹೋರಾಟದ ಸಂದರ್ಭದಲ್ಲಿಯೂ ಪರಿಚಿತರನ್ನು ಕಂಡಾಗ ಅವರ ಮುಖದಲ್ಲಿ ಅರಳುತ್ತಿದ್ದ ಮುಗುಳ್ನಗೆಯೇ ಅವರ ವ್ಯಕ್ತಿತ್ವದ ರೂಪಕ. ಎಂಥ ವಿಷಮ ಸನ್ನಿವೇಶವನ್ನೂ ಮನೋಬಲದಿಂದ, ನೈತಿಕ ಬಲದಿಂದ ಎದುರಿಸಬಲ್ಲೆನೆನ್ನುವ ಅಖಂಡ ಆತ್ಮವಿಶ್ವಾಸದಿಂದ ಮಾತ್ರ ಅದು ಹುಟ್ಟುತ್ತದೆಯೇನೋ.

ಅನೇಕ ಕಾರ್ಯಕ್ರಮಗಳಲ್ಲಿ ಅವರೊಡನೆ ಪಾಲ್ಗೊಂಡ ಅನುಭವಗಳನ್ನು ಹಂಚಿಕೊಳ್ಳುವುದೆಂದರೆ, ನಮ್ಮ ಕಾಲದ ಸಾಕ್ಷಿಪ್ರಜ್ಞೆಯ ಎದುರು ನಾವು ಕಕ್ಕಾಬಿಕ್ಕಿಯಾದದ್ದನ್ನು ಹೇಳಿಕೊಳ್ಳುವುದೆಂದೇ ಅರ್ಥ. ನಮ್ಮಲ್ಲಿ ನಮಗೆ ನಾಚಿಕೆ, ಆತ್ಮವಿಮರ್ಶೆ ಹುಟ್ಟುವಂತೆ ಮಾಡುತ್ತಿತ್ತು ಅವರ ಉಪಸ್ಥಿತಿ ಮತ್ತು ಮಾತು. ಕಾರ್ಯಕ್ರಮವೊಂದರಲ್ಲಿ ನಾವಿಬ್ಬರೂ ಮುಖ್ಯ ಅತಿಥಿಗಳು. ಆದರೆ ಆಯೋಜಕರು ಕರೆದಿದ್ದ ಇತರ ’ಗಣ್ಯರ ಮಾತುಗಳು ಮುಗಿಯುತ್ತಲೇ ಇಲ್ಲ. ಒಬ್ಬರಾದ ಮೇಲೊಬ್ಬರು ಮಾತಿನಮಲ್ಲರು, ಮಾತಿನ ಮಳೆ ಸುರಿಸುತ್ತಲೇ ಇದ್ದರು. ಕೊನೆಗೆ ಉಳಿದ ನಮ್ಮಿಬ್ಬರಲ್ಲಿ ಮೊದಲು ದೊರೆಸ್ವಾಮಿಯವರನ್ನು ಆಹ್ವಾನಿಸಿದಾಗ ಈ ಹಿರಿಯರು, ಇರಿ ಮೊದಲು ಆಶಾತಾಯಿಯವರ ಮಾತು ಕೇಳೋಣ ಎಂದು ಒತ್ತಾಯಿಸಿ ನನಗೇ ಮೊದಲು ಮಾತನಾಡಹಚ್ಚಿದರು. ಒಳಗಿದ್ದ ಅಸಹನೆಯನ್ನೆಲ್ಲ ಮಾತಿನಲ್ಲಿ ನಾನು ಹೊರಹಾಕಿದೆ. ಗಾಂಧಿಯವರೇನಾದರೂ ಈ ಸಭೆಯಲ್ಲಿ ಇದ್ದಿದ್ದರೆ, ಅಯ್ಯಾ, ಪುರುಷೋತ್ತಮರಿರಾ,

ಶತಮಾನಗಳಿಂದ ನೀವು ಆಡಿದ್ದು, ಹೆಣ್ಣುಮಕ್ಕಳು ಕೇಳಿದ್ದೇ ಆಯಿತು, ಈಗಲಾದರೂ ಅವರಿಗೆ
ಮೊದಲೇ ಮಾತನಾಡೋಕೆ ಅವಕಾಶ ಮಾಡಿಕೊಡಿ ಅಂತ ಹೇಳುತ್ತಿದ್ದರು ಎನ್ನುವ ಖಾತ್ರಿ ನನಗಿದೆ ಎಂದೆ. ಮಾತು ಮುಗಿಸಿದ ಮೇಲೆ ದೊರೆಸ್ವಾಮಿಯವರು, ನಾನು ಹೇಳಬೇಕು ಅಂದಿದ್ದನ್ನ ನೀವೇ ಹೇಳಿದ್ದು ಒಳ್ಳೆಯದಾಯಿತು ಎಂದರಲ್ಲದೆ, ಆಯೋಜಕರಿಗೆ, ಈ ಪಾಟಿ ಜನರನ್ನು ಯಾಕ್ರಿ ಮಾತನಾಡಿಸ್ತೀರಾ, ಸಮಯ ವ್ಯರ್ಥ ಅಲ್ವಾ ಅಂತ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡರು.

ನಮ್ಮ ಕಾಲೇಜು ವಿಶ್ವವಿದ್ಯಾಲಯವಾಗುವ ಪ್ರಕ್ರಿಯೆ ನಡೆಯುತ್ತಿತ್ತು. ಅದಕ್ಕೆ ಅನೇಕ ತೊಡಕುಗಳು. ದೊರೆಸ್ವಾಮಿಯವರು ಸಿಕ್ಕಾಗೊಮ್ಮೆ, ಇದಕ್ಕೆ ಏನಾದರೂ ಮಾಡಬೇಕು ಅಂದೆ, ’ಅದಕ್ಕೇನು, ನಡಿಯಮ್ಮ, ಯಾವತ್ತು, ಎಲ್ಲಿ, ಎಷ್ಟು ಹೊತ್ತಿಗೆ ಬರಬೇಕು ಹೇಳಿ’ ಅಂತ ನಿಂತ ಕಾಲ ಮೇಲೆ ಹೇಳಿದರು. ಅಲ್ಲಾ, ನಿಮಗೆ ತೊಂದರೆ.. ಅಂತ ನಾನು ತೊದಲಿದರೆ, ’ಇಂಥ ಕೆಲಸಗಳನ್ನ ಮಾಡದೇ ಇದ್ದರೆ ತೊಂದರೆ’ ಎಂದು ನನ್ನ ಸಂಕೋಚವನ್ನು ಅಲ್ಲಿಯೇ ತೊಡೆದರು. ಗೆಳತಿ ಗೌರಿಯ ಹತ್ಯೆಯ ಸಂದರ್ಭದಲ್ಲಿ ಎಲ್ಲರಿಗೂ ಅವರು ತುಂಬಿದ ಧೈರ್ಯದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಒಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಕವಿತಾ, ಶಿವಸುಂದರ್ ಎಲ್ಲರೂ ಯಾರು ಯಾರು ಬರುತ್ತಾರೋ, ಬರುವುದಿಲ್ಲವೋ ಎಂದು ಪ್ರೆಸ್‌ಕ್ಲಬ್‌ನಲ್ಲಿ ಕಾಯುತ್ತಾ ಕೂತಿದ್ದಾಗ,
ಶಿವಸುಂದರ್ ’ಬಂದ್ರಲ್ಲಾ ಎಂದರು. ದೂರದಲ್ಲಿ ದೊರೆಸ್ವಾಮಿಯವರನ್ನು ನೋಡಿದ್ದೇ ಇನ್ನು ಯಾರು ಬಂದರೇನು, ಬಿಟ್ಟರೇನು ಅನ್ನಿಸಿ ಬಿಟ್ಟಿತು ನಮಗೆಲ್ಲ! ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವವನ್ನು ಕುರಿತಂತೆ, ಈ ಹೊತ್ತಿನಲ್ಲಿ ನಾವು ಮೈಮರೆತರೆ ಅನುಭವಿಸಬೇಕಾದ ನರಕದ ಬಗ್ಗೆ ಆಡಿದ ಮಾತುಗಳು, ಅವುಗಳಲ್ಲಿದ್ದ ಕಾಣ್ಕೆ, ಸದ್ಯ ಭಾರತದ ಸಂದರ್ಭವನ್ನು ಕುರಿತಂತೆ ಸತ್ಯದ ನವದರ್ಶನ ಮಾಡಿಸಿತು.

ಅವರೊಡನೆಯ ಕೊನೆಯ ಭೇಟಿ ಆನ್‌ಲೈನ್‌ನಲ್ಲಿ ಏಪ್ರಿಲ್ 10ರಂದು ನಡೆದ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ. ನಾವೆಲ್ಲ ಅವರ ಬಗ್ಗೆ ಮಾತನಾಡುತ್ತಿದ್ದರೆ, ಸಂಕೋಚದಿಂದ ಮುದುಡಿದ ದೇಹದಲ್ಲಿ, ಆದರೆ ಆಗಲೂ ಅದೇ ಮುಗುಳ್ನಗೆ ಅವರ ಮುಖದಲ್ಲಿ ಅವರಿದ್ದರು. ನಾನೇನೋ ಬಹಳ ಸಾಧನೆ ಮಾಡಿದವನ ಹಾಗೆ ಇವರೆಲ್ಲ ಮಾತನಾಡುತ್ತಿದ್ದಾರೆ, ಆದರೆ ಇದೆಲ್ಲ ನಾನು, ನಾವು ಮಾಡಲೇಬೇಕಾದ ಕೆಲಸಗಳಲ್ಲವೆ ಎಂದರು. ಅಹಂಕಾರ, ಸ್ವಾರ್ಥ ಸೋಕದ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದರ ಸಾಕಾರ ರೂಪ ದೊರೆಸ್ವಾಮಿಯವರು.

104ರ ವಯಸ್ಸಿನಲ್ಲಿ ತೀರಿಕೊಂಡ ದೊರೆಸ್ವಾಮಿಯವರ ಬಗೆಗೆ ಇದನ್ನು ಬಯಸುವುದು ದುರಾಸೆಯೇನೋ, ಆದರೂ ಕವಿತೆಯ ಆ ಸಾಲು ನೆನಪಾಗುತ್ತದೆ ಅಯಾಚಿತವಾಗಿ..
’ಮಹಾತ್ಮಾ ನೀನಿನ್ನೀಸು ಕಾಲ ಬದುಕಬೇಕಿತ್ತು’

ಪ್ರೊ. ಎಂ.ಎಸ್ ಆಶಾದೇವಿ
ವಿಮರ್ಶಕಿ, ಲೇಖಕಿ ಮತ್ತು ಪ್ರಾಧ್ಯಾಪಕಿ. ಪ್ರಸ್ತುತ ಬೆಂಗಳೂರಿನ
ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಸ್ತ್ರೀಮತವನುತ್ತರಿಸಲಾಗದೆ’, ‘ನಡುವೆ ಸುಳಿವಾತ್ಮ ಅವರ ವಿಮರ್ಶಾ ಕೃತಿಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...