Homeಅಂತರಾಷ್ಟ್ರೀಯದೇಶಕಾಲಗಳ ಹುಡುಕಾಟದ ನಿರ್ದೇಶಕ ಡೆನಿ ವಿಲೆನವ್

ದೇಶಕಾಲಗಳ ಹುಡುಕಾಟದ ನಿರ್ದೇಶಕ ಡೆನಿ ವಿಲೆನವ್

- Advertisement -
- Advertisement -

ರಾಜಶೇಖರ್ ಅಕ್ಕಿ |

ಹೀಗೊಂದಿಷ್ಟು ಊಹಿಸಿ; ಹುಬ್ಬಳ್ಳಿಯಿಂದ ನೀವು ಮತ್ತು ನಿಮ್ಮ ಸ್ನೇಹಿತೆ ಬೇರೆ ಬೇರೆ ಕಾರುಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದೀರಿ. ನೀವು ಎಂಟು ಗಂಟೆಯಲ್ಲಿ ಬೆಂಗಳೂರಿಗೆ ತಲುಪಿದರೆ ನಿಮ್ಮ ಸ್ನೇಹಿತೆಯ ಕಾರು ಕೆಟ್ಟು ತುಮಕೂರಿನಲ್ಲಿ ನಿಂತಿದ್ದಾಳೆ. ನಿಮಗೆ ವಿಷಯ ತಿಳಿದು ತುಮಕೂರಿಗೆ ಹೋಗುವ ಪ್ಲ್ಯಾನ್ ಮಾಡುತ್ತೀರಿ. ಇದು ಸ್ಪೇಸ್. ನೀವು ಎಲ್ಲಿಂದ ಬಂದಿರೋ ಅಲ್ಲಿಗೆ ಮರಳುವ ಅವಕಾಶವಿದೆ. ಆದರೆ ಹಿಂದಿನ ಸಮಯಕ್ಕೆ ಮರಳುವ ಅವಕಾಶವಿದೆಯಾ? ಅಥವಾ ಮುಂದಿನ ಸಮಯಕ್ಕೆ ಹೋಗಬಲ್ಲಿರಾ? 1980 ರಲ್ಲಿ ಹುಟ್ಟಿದವನು ಇಂದು 40 ವರ್ಷ ವಯಸ್ಸು ಆಗುತ್ತಿರುವಾಗ ನೀವು 80 ವರ್ಷಗಳ ಪ್ರಯಾಣವನ್ನು ಕ್ರಮಿಸಬಲ್ಲಿರಾ? ನಮ್ಮ ಬ್ರಹ್ಮಾಂಡ ಎಷ್ಟು ದೊಡ್ಡದು? ಕೊನೆ ಎನ್ನುವುದು ಎಲ್ಲಾದರೂ ಇರಬೇಕಲ್ವಾ? ಇಲ್ಲವಾದರೇ ನಾನ್ಯಾರು? ನಾನೊಬ್ಬನೇ ಇರುವುದಾ ಈ ಬ್ರಹ್ಮಾಂಡದಲ್ಲಿ? ಇತರ ಜೀವಜಾಲ ಇರದಿರಲು ಹೇಗೆ ಸಾಧ್ಯ? ನಾವು ನಮ್ಮ ಜಗತ್ತನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಪಂಚೇಂದ್ರಿಯಗಳಿಂದ, ಈ ಐದೇ ಏಕೆ? ಇವುಗಳನ್ನು ಹೊರತುಪಡಿಸಿಯೂ ಮತ್ತೇನಾದರೂ ಇರಬೇಕಲ್ವಾ?
ಗೊತ್ತಿಲ್ಲ; ಐನ್‍ಸ್ಟೇನ್‍ನ ಸಾಪೇಕ್ಷ ಸಿದ್ಧಾಂತವನ್ನು ನಾನು ತಿಳಿದುಕೊಂಡಿದ್ದು ಹೀಗೆ ಅಥವಾ ಅದರಿಂದ ಮೂಡಿದ ಪ್ರಶ್ನೆಗಳು ಇಂತವು.
ಅಂದರೆ ಮಾಡೋದು ಏನು? ಸರಳ ಉತ್ತರ; ಹುಡುಕಾಟ.
ನಾವೆಲ್ಲಾ ನಮ್ಮದೇ ರೀತಿಯಲ್ಲಿ ಹುಡುಕಾಡುತ್ತಿರುತ್ತೇವೆ, ü ನಮ್ಮ ಊಹೆ ಮತ್ತು ಅದಕ್ಕಿಂತ ಮುಖ್ಯವಾಗಿ ಹುಡುಕಾಟದಲ್ಲಿ ನಾವೆಷ್ಟರ ಮಟ್ಟಿಗೆ ತೊಡಗಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಹುಡುಕಾಟದ ಪರಿಧಿ ನಿರ್ಣಯವಾಗುತ್ತದೆ. ಡೆನಿ ವಿಲೆನವ್ (denis villeneuve) ಕೂಡ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ; ತಮ್ಮ ಸಿನೆಮಾಗಳಲ್ಲಿ.
ನಾನು ನೋಡಿದ ಅವರ ಮೊದಲ ಸಿನೆಮಾ ‘ಇನ್ಸೆಂಡಿಯಸ್’ ‘incendies’’. ಇದರಲ್ಲಿಯ ಮುಖ್ಯ ಪಾತ್ರಧಾರಿ ಒಬ್ಬ ಗಣಿತಜ್ಞೆ. ಅವಳ ತಾಯಿ ತೀರಿಕೊಂಡಾಗ ತಾಯಿಯ ಸ್ನೇಹಿತ ಇವಳಿಗೆ ಮತ್ತು ಇವಳ ಅವಳಿ ಸಹೋದರನಿಗೆ ಒಂದು ಪತ್ರವನ್ನು ನೀಡುತ್ತಾನೆ. ಅಸ್ತಿತ್ವದಲ್ಲಿದ್ದಾರೆ ಎಂದು ಇಬ್ಬರಿಗೂ ಗೊತ್ತಿಲ್ಲದ ಇವರ ಅಣ್ಣ ಮತ್ತು ತಂದೆಯನ್ನು ಇವರಿಬ್ಬರೂ ಸೇರಿ ಹುಡುಕಬೇಕಿದೆ. ಈ ಚಿತ್ರ ದೇಶಕಾಲದಲ್ಲಿ ಸಂಚರಿಸುತ್ತದೆ. ನಮಗೆ, ಮುಖ್ಯಪಾತ್ರಧಾರಿಗಳಿಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಬಿಚ್ಚಿಡುತ್ತದೆ. ಇಲ್ಲಿಯ ಸಾಪೇಕ್ಷತೆ ಬರೀ ಸಮಯ ಮತ್ತು ದೇಶಕ್ಕೆ ಸೀಮಿತವಾದುದ್ದಲ್ಲ. ದೇಶ, ಯುದ್ಧ, ಧರ್ಮ, ಹಿಂಸೆಗಳನ್ನು, ಒಂದೊಕ್ಕೊಂದು ಇರುವ ಸಂಬಂಧಗಳನ್ನು ಕೆದಕುವ ಈ ಚಿತ್ರ ಮುನುಷ್ಯನ, ಸಮಾಜದ ಒಳಗಿರುವ ಹಿಂಸೆಯ ಸಾಪೇಕ್ಷತೆಯ ಹುಡುಕಾಟದ ಸಿನೆಮಾ.
ಇನ್ಸೆಂಡಿಯಸ್ ಚಿತ್ರವು ಲೆಬಾನಾನ್ ಮೂಲದ ಕೆನಡಾದ ನಾಟಕಕಾರ ವಾಜಿ ಮೊವಾದ್ ಅವರು ಬರೆದ ನಾಟಕದ ಮೇಲೆ ಆಧಾರಿತವಾಗಿತ್ತು. ಮೋವಾದ್ ಅವರು ತುಂಬಾ ಹಿಂಜರಿಕೆಯಿಂದಲೇ ಈ ಕೃತಿಯ ಹಕ್ಕುಗಳನ್ನು ಸಿನೆಮಾ ಮಾಡಲು ವಿಲೆನವ್ ಅವರಿಗೆ ನೀಡುದ್ದರು. ನನಗೆ ವೈಯಕ್ತಿಕವಾಗಿ ನಾಟಕ ಆಧಾರಿತ ಸಿನೆಮಾಗಳೆಂದರೆ ಸಂಭಾಷಣೆಗಳೇ ತುಂಬಿರುತ್ತವೆ ಎನ್ನುವ ಭಾವನೆ ಹಾಗೂ ನಿರಾಸಕ್ತಿ. ಆದರೆ ಒಂದು ನಾಟಕವನ್ನಾಧಾರಿಸಿ ಮಾಡಿದ ಈ ಚಿತ್ರ ನನ್ನನ್ನು ದಂಗುಬಡಿಸಿತು. ನಾಟಕದ ಎಲ್ಲಾ ಮಾಂಸರಕ್ತಗಳನ್ನು ತೆಗೆದುಹಾಕಿ ಬರೀ ಮೂಳೆಗಳನ್ನೇ ಉಳಿಸಿಕೊಂಡು ದೇಶಕಾಲದೊಂದಿಗೆ ಆಟವಾಡಿ ಸಿನೆಮಾ ಮಾಧ್ಯಮದ ಸಾಧ್ಯತೆಯ ಒಂದು ಅದ್ಭುತ ಉದಾಹರಣೆ ಈ ಚಿತ್ರ. ಮೂಲ ನಾಟಕಕಾರ ಮೊವಾದ್ ಕೂಡ ತನ್ನ ನಾಟಕವನ್ನು ಇನ್ನಷ್ಟು ಎತ್ತರಕ್ಕೆ ವಿಲೆನವ್ ತೆಗೆದುಕೊಂಡು ಹೋಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
1967ರಲ್ಲಿ ಕೆನಡಾದ ಕ್ಯುಬೆಕ್‍ನಲ್ಲಿ ಹುಟ್ಟಿದ ವಿಲೆನವ್, ಮೊಂಟ್ರಿಯಿಲ್‍ನಲ್ಲಿ ತಮ್ಮ ಸಿನೆಮಾ ಶಿಕ್ಷಣವನ್ನು ಮುಗಿಸಿ, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿ, 1998ರಲ್ಲಿ ತಮ್ಮ ಮೊದಲ ಚಿತ್ರ ‘ಆಗಸ್ಟ್ 32 ಆನ್ ಅರ್ಥ್’ ನಿರ್ದೇಶಿಸಿದರು. ಈ ಚಿತ್ರದಲ್ಲಿ ಆ ದೇಶದ ಯುವಜನರ ಸಂಬಂಧಗಳ ಬಗ್ಗೆ ಕೆದಕಿದ ವಿಲೆನವ್, 2000ದಲ್ಲಿ ಮೇಲ್‍ಸ್ಟ್ರಾಮ್ ಎನ್ನುವ ಚಿತ್ರ ನಿರ್ದೇಶಿಸಿದರು. ಈ ಚಿತ್ರದ ನಿರೂಪಕ ಒಂದು ದೊಡ್ಡ ಮೀನು. ವಾಸ್ತವ, ಅವಾಸ್ತವ, ಮನುಷ್ಯರ ಬೇಜವಬ್ದಾರಿತನ, ತಪ್ಪಿತಸ್ಥ ಭಾವನೆ ಮತ್ತು ಪ್ರೀತಿಯನ್ನು ಹುಡುಕುವ ಈ ಸಿನೆಮಾದ ಕೊನೆಯಲ್ಲಿ ಜೀವನವೆಂದರೆ ಏನು ಎಂದು ನಿರೂಪಕ ಮೀನು ಹೇಳಬೇಕೆನ್ನುವಷ್ಟರಲ್ಲಿ ಅದನ್ನು ಕೊಲ್ಲಲಾಗುತ್ತದೆ. ವಿಲೆನವ್ ಅವರ ಮುಂಬರುವ ಚಿತ್ರಗಳಲ್ಲಿ ಕಂಡುಬರುವ ಮಾಂತ್ರಿಕತೆಯ ಝಲಕ್ ಈ ಚಿತ್ರದಲ್ಲಿ ಕಂಡುಬರುತ್ತದೆ.
2013ರಲ್ಲಿ ಬಂದ ಪ್ರಿಸನರ್ಸ್ ಮತ್ತು ಎನಿಮಿ ಚಿತ್ರಗಳೆರಡೂ ಮನುಷ್ಯನ ಆಳವನ್ನು ಪರಿಶೀಲಿಸುತ್ತವೆ. ಪ್ರಿಸನರ್ಸ್‍ನಲ್ಲಿ ಮನುಷ್ಯನ ಒಳಗೆ ಅಡಗಿರುವ ಹಿಂಸೆಯನ್ನು ಕೆದಕಿದರೆ, ಎನಿಮಿ ಚಿತ್ರದಲ್ಲಿ ಒಬ್ಬ ವ್ಯಕ್ತಿಯು ತನ್ನೊಳಗಿರುವ ಇನ್ನೊಬ್ಬನನ್ನು ಹುಡುಕುತ್ತಾನೆ. ಆ ಇನ್ನೊಬ್ಬ ತಾನೋ ಅಥವಾ ಇನ್ನಾರೋ ಎನ್ನುವುದು ಪ್ರೇಕ್ಷಕರ ಊಹೆಗೆ ಬಿಡಲಾಗಿದೆ. 2015ರಲ್ಲಿ ಸಿಕಾರಿಯೋ ಎನ್ನುವ ಕ್ರೈಮ್ ಥ್ರಿಲರ್ ನಿರ್ದೇಶಿಸಿದ ವಿಲೆನವ್ 2016ರಲ್ಲಿ ಅರೈವಲ್ (Arrival) ಎನ್ನುವ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಸಾಪೇಕ್ಷ ಸಿದ್ಧಾಂತವನ್ನು ಒರೆಗೆ ಹಚ್ಚಿದರು. ಹೊರಜಗತ್ತಿನಿಂದ ಭೂಮಿಯ ಬೇರೆ ಬೇರೆ ಭಾಗದಲ್ಲಿ ಬಂದಿಳಿದ ಹನ್ನೆರಡು ಬೃಹತ್ ಅಪರಿಚಿತ ಗಗನನೌಕೆಗಳು, ಅದರೊಂದಿಗೆ ಬಂದ ಜೀವಿಗಳು. ಭಾಷಾಶಾಸ್ತ್ರಜ್ಞೆಯೊಬ್ಬಳು ಆ ಜೀವಿಗಳೊಂದಿಗೆ ಸಂಭಾಷಿಸಿ ಭೂಮಿಗೆ ಒದಗಿರುವ ಗಂಡಾಂತರದಿಂದ ಪಾರು ಮಾಡಬೇಕಿದೆ. ಮನುಷ್ಯನಿಗಿರುವ ಪಂಚೇಂದ್ರಿಯಗಳು ಮತ್ತು ಭಾಷೆಯಿಂದ ಹೊರಜೀವಿಗಳೊಂದಿಗೆ ಮಾತನಾಡಿಸಲಾಗುವುದೇ? ಆ ಜೀವಿಗಳು ಬರೀ ಸ್ಪೇಸ್ ಅಷ್ಟೇ ಅಲ್ಲದೇ ವಿವಿಧ ಸಮಯಗಳಿಗೂ ಸಂಚರಿಸಬಲ್ಲವೇ? ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವ ಈಕೆ ಭವಿಷ್ಯವನ್ನು ನೋಡಬಲ್ಲಳೇ? ಹೀಗೆ ಉತ್ತರಿಸಲಾಗದ ಪ್ರಶ್ನೆಗಳನ್ನು ಈ ಚಿತ್ರ ಕೆದಕುತ್ತದೆ. ಹುಡುಕಾಟ ಮುಂದುವರೆಯುತ್ತದೆ. ಈ ಚಿತ್ರದ ನಂತರ ವಿಲೆನವ್ ಅವರು ಬ್ಲೇಡ್ ರನರ್ 2049 ಎನ್ನುವ ಮತ್ತೊಂದು ಸೈನ್ಸ್ ಫಿಕ್ಷನ್ ಸಿನೆಮಾ ನಿರ್ದೇಶಿಸಿದರು. ಈ ಚಿತ್ರದಲ್ಲೂ ಮನುಷ್ಯನ ಊಹೆಯ ಪರಿಧಿಯನ್ನು ವಿಸ್ತರಿಸುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ ವಿಲೆನವ್ ಈಗ ಫ್ರ್ಯಾಂಕ್ ಹರ್ಬರ್ಟ್ ಅವರ ಪ್ರಸಿದ್ಧ ಸೈನ್ಸ್ ಫಿಕ್ಷನ್ ಕೃತಿ ‘ಡ್ಯೂನ್’ ಅನ್ನು ತೆರೆಗೆ ತರುತ್ತಿದ್ದಾರೆ.
ಸಿನೆಮಾ ಎನ್ನುವುದು ನಮ್ಮ ನೆರಳುಗಳನ್ನು ಅನ್ವೇಷಿಸುವ ಒಂದು ಸಾಧನ ಎಂದು ಹೇಳಿದ ವಿಲೆನವ್ ನಮ್ಮ ವಿಶ್ವದ ಅನೇಕ ಪ್ರಶ್ನೆಗಳಿಗೆ ಸಿನೆಮಾ ಮಾಧ್ಯಮದಿಂದ ನಿರಂತರ ಹುಡುಕಾಟದಲ್ಲಿದ್ದಾರೆ.
ಸಾಪೇಕ್ಷ ಸಿದ್ಧಾಂತ, ಹುಡುಕಾಟ ಇವುಗಳೇ ಡನಿ ವಿಲೆನವ್ ಅವರ ಚಿತ್ರಗಳ ಪ್ರಮುಖ ಥೀಮ್ ಎಂದು ಅನೇಕರಿಗೆ ಅನಿಸದೇ ಇರಬಹುದು, ಸ್ವತಃ ವಿಲೆನವ್ ಕೂಡ ಈ ವಿಷಯಗಳನ್ನು ಬೇರೊಂದು ರೀತಿಯಲ್ಲೇ ಕಾಣುತ್ತಿರಬಹುದು. ಆದರೆ ಒಂದು ಸಿನೆಮಾ ನೋಡಿದ ಎಲ್ಲರೂ ತಮ್ಮದೇ ಆದ ಬೇರೆ ಬೇರೆ ದೃಷ್ಟಿಯಲ್ಲಿ ನೋಡಿದರೆ ಅದೇ ಆ ಶಿಲ್ಪಿಯ ಸಾರ್ಥಕತೆಯಲ್ಲವೇ?
ವಿಲೆನವ್ ಅವರ ಸಿನೆಮಾಗಳಂತೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಹುಡುಕಾಟದಲ್ಲಿದ್ದೇವೆ. ಕೆಲವೊಮ್ಮೆ ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರ ಸಿಕ್ಕರೆ ಅನೇಕ ಬಾರಿಯ ಉತ್ತರ- ಹುಡುಕಾಟ. 2020 ರಲ್ಲಿ ಬಿಡುಗಡೆಯಾಗಲಿರುವ ‘ಡ್ಯೂನ್’ ಈ ನಮ್ಮ ಹುಡುಕಾಟವನ್ನು ಎಲ್ಲಿಗೆ ಕೊಂಡೊಯ್ಯುವುದು ಎನ್ನುವ ಕಾತರದಲ್ಲಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...