Homeಅಂತರಾಷ್ಟ್ರೀಯದೇಶಕಾಲಗಳ ಹುಡುಕಾಟದ ನಿರ್ದೇಶಕ ಡೆನಿ ವಿಲೆನವ್

ದೇಶಕಾಲಗಳ ಹುಡುಕಾಟದ ನಿರ್ದೇಶಕ ಡೆನಿ ವಿಲೆನವ್

- Advertisement -
- Advertisement -

ರಾಜಶೇಖರ್ ಅಕ್ಕಿ |

ಹೀಗೊಂದಿಷ್ಟು ಊಹಿಸಿ; ಹುಬ್ಬಳ್ಳಿಯಿಂದ ನೀವು ಮತ್ತು ನಿಮ್ಮ ಸ್ನೇಹಿತೆ ಬೇರೆ ಬೇರೆ ಕಾರುಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದೀರಿ. ನೀವು ಎಂಟು ಗಂಟೆಯಲ್ಲಿ ಬೆಂಗಳೂರಿಗೆ ತಲುಪಿದರೆ ನಿಮ್ಮ ಸ್ನೇಹಿತೆಯ ಕಾರು ಕೆಟ್ಟು ತುಮಕೂರಿನಲ್ಲಿ ನಿಂತಿದ್ದಾಳೆ. ನಿಮಗೆ ವಿಷಯ ತಿಳಿದು ತುಮಕೂರಿಗೆ ಹೋಗುವ ಪ್ಲ್ಯಾನ್ ಮಾಡುತ್ತೀರಿ. ಇದು ಸ್ಪೇಸ್. ನೀವು ಎಲ್ಲಿಂದ ಬಂದಿರೋ ಅಲ್ಲಿಗೆ ಮರಳುವ ಅವಕಾಶವಿದೆ. ಆದರೆ ಹಿಂದಿನ ಸಮಯಕ್ಕೆ ಮರಳುವ ಅವಕಾಶವಿದೆಯಾ? ಅಥವಾ ಮುಂದಿನ ಸಮಯಕ್ಕೆ ಹೋಗಬಲ್ಲಿರಾ? 1980 ರಲ್ಲಿ ಹುಟ್ಟಿದವನು ಇಂದು 40 ವರ್ಷ ವಯಸ್ಸು ಆಗುತ್ತಿರುವಾಗ ನೀವು 80 ವರ್ಷಗಳ ಪ್ರಯಾಣವನ್ನು ಕ್ರಮಿಸಬಲ್ಲಿರಾ? ನಮ್ಮ ಬ್ರಹ್ಮಾಂಡ ಎಷ್ಟು ದೊಡ್ಡದು? ಕೊನೆ ಎನ್ನುವುದು ಎಲ್ಲಾದರೂ ಇರಬೇಕಲ್ವಾ? ಇಲ್ಲವಾದರೇ ನಾನ್ಯಾರು? ನಾನೊಬ್ಬನೇ ಇರುವುದಾ ಈ ಬ್ರಹ್ಮಾಂಡದಲ್ಲಿ? ಇತರ ಜೀವಜಾಲ ಇರದಿರಲು ಹೇಗೆ ಸಾಧ್ಯ? ನಾವು ನಮ್ಮ ಜಗತ್ತನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಪಂಚೇಂದ್ರಿಯಗಳಿಂದ, ಈ ಐದೇ ಏಕೆ? ಇವುಗಳನ್ನು ಹೊರತುಪಡಿಸಿಯೂ ಮತ್ತೇನಾದರೂ ಇರಬೇಕಲ್ವಾ?
ಗೊತ್ತಿಲ್ಲ; ಐನ್‍ಸ್ಟೇನ್‍ನ ಸಾಪೇಕ್ಷ ಸಿದ್ಧಾಂತವನ್ನು ನಾನು ತಿಳಿದುಕೊಂಡಿದ್ದು ಹೀಗೆ ಅಥವಾ ಅದರಿಂದ ಮೂಡಿದ ಪ್ರಶ್ನೆಗಳು ಇಂತವು.
ಅಂದರೆ ಮಾಡೋದು ಏನು? ಸರಳ ಉತ್ತರ; ಹುಡುಕಾಟ.
ನಾವೆಲ್ಲಾ ನಮ್ಮದೇ ರೀತಿಯಲ್ಲಿ ಹುಡುಕಾಡುತ್ತಿರುತ್ತೇವೆ, ü ನಮ್ಮ ಊಹೆ ಮತ್ತು ಅದಕ್ಕಿಂತ ಮುಖ್ಯವಾಗಿ ಹುಡುಕಾಟದಲ್ಲಿ ನಾವೆಷ್ಟರ ಮಟ್ಟಿಗೆ ತೊಡಗಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಹುಡುಕಾಟದ ಪರಿಧಿ ನಿರ್ಣಯವಾಗುತ್ತದೆ. ಡೆನಿ ವಿಲೆನವ್ (denis villeneuve) ಕೂಡ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ; ತಮ್ಮ ಸಿನೆಮಾಗಳಲ್ಲಿ.
ನಾನು ನೋಡಿದ ಅವರ ಮೊದಲ ಸಿನೆಮಾ ‘ಇನ್ಸೆಂಡಿಯಸ್’ ‘incendies’’. ಇದರಲ್ಲಿಯ ಮುಖ್ಯ ಪಾತ್ರಧಾರಿ ಒಬ್ಬ ಗಣಿತಜ್ಞೆ. ಅವಳ ತಾಯಿ ತೀರಿಕೊಂಡಾಗ ತಾಯಿಯ ಸ್ನೇಹಿತ ಇವಳಿಗೆ ಮತ್ತು ಇವಳ ಅವಳಿ ಸಹೋದರನಿಗೆ ಒಂದು ಪತ್ರವನ್ನು ನೀಡುತ್ತಾನೆ. ಅಸ್ತಿತ್ವದಲ್ಲಿದ್ದಾರೆ ಎಂದು ಇಬ್ಬರಿಗೂ ಗೊತ್ತಿಲ್ಲದ ಇವರ ಅಣ್ಣ ಮತ್ತು ತಂದೆಯನ್ನು ಇವರಿಬ್ಬರೂ ಸೇರಿ ಹುಡುಕಬೇಕಿದೆ. ಈ ಚಿತ್ರ ದೇಶಕಾಲದಲ್ಲಿ ಸಂಚರಿಸುತ್ತದೆ. ನಮಗೆ, ಮುಖ್ಯಪಾತ್ರಧಾರಿಗಳಿಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಬಿಚ್ಚಿಡುತ್ತದೆ. ಇಲ್ಲಿಯ ಸಾಪೇಕ್ಷತೆ ಬರೀ ಸಮಯ ಮತ್ತು ದೇಶಕ್ಕೆ ಸೀಮಿತವಾದುದ್ದಲ್ಲ. ದೇಶ, ಯುದ್ಧ, ಧರ್ಮ, ಹಿಂಸೆಗಳನ್ನು, ಒಂದೊಕ್ಕೊಂದು ಇರುವ ಸಂಬಂಧಗಳನ್ನು ಕೆದಕುವ ಈ ಚಿತ್ರ ಮುನುಷ್ಯನ, ಸಮಾಜದ ಒಳಗಿರುವ ಹಿಂಸೆಯ ಸಾಪೇಕ್ಷತೆಯ ಹುಡುಕಾಟದ ಸಿನೆಮಾ.
ಇನ್ಸೆಂಡಿಯಸ್ ಚಿತ್ರವು ಲೆಬಾನಾನ್ ಮೂಲದ ಕೆನಡಾದ ನಾಟಕಕಾರ ವಾಜಿ ಮೊವಾದ್ ಅವರು ಬರೆದ ನಾಟಕದ ಮೇಲೆ ಆಧಾರಿತವಾಗಿತ್ತು. ಮೋವಾದ್ ಅವರು ತುಂಬಾ ಹಿಂಜರಿಕೆಯಿಂದಲೇ ಈ ಕೃತಿಯ ಹಕ್ಕುಗಳನ್ನು ಸಿನೆಮಾ ಮಾಡಲು ವಿಲೆನವ್ ಅವರಿಗೆ ನೀಡುದ್ದರು. ನನಗೆ ವೈಯಕ್ತಿಕವಾಗಿ ನಾಟಕ ಆಧಾರಿತ ಸಿನೆಮಾಗಳೆಂದರೆ ಸಂಭಾಷಣೆಗಳೇ ತುಂಬಿರುತ್ತವೆ ಎನ್ನುವ ಭಾವನೆ ಹಾಗೂ ನಿರಾಸಕ್ತಿ. ಆದರೆ ಒಂದು ನಾಟಕವನ್ನಾಧಾರಿಸಿ ಮಾಡಿದ ಈ ಚಿತ್ರ ನನ್ನನ್ನು ದಂಗುಬಡಿಸಿತು. ನಾಟಕದ ಎಲ್ಲಾ ಮಾಂಸರಕ್ತಗಳನ್ನು ತೆಗೆದುಹಾಕಿ ಬರೀ ಮೂಳೆಗಳನ್ನೇ ಉಳಿಸಿಕೊಂಡು ದೇಶಕಾಲದೊಂದಿಗೆ ಆಟವಾಡಿ ಸಿನೆಮಾ ಮಾಧ್ಯಮದ ಸಾಧ್ಯತೆಯ ಒಂದು ಅದ್ಭುತ ಉದಾಹರಣೆ ಈ ಚಿತ್ರ. ಮೂಲ ನಾಟಕಕಾರ ಮೊವಾದ್ ಕೂಡ ತನ್ನ ನಾಟಕವನ್ನು ಇನ್ನಷ್ಟು ಎತ್ತರಕ್ಕೆ ವಿಲೆನವ್ ತೆಗೆದುಕೊಂಡು ಹೋಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
1967ರಲ್ಲಿ ಕೆನಡಾದ ಕ್ಯುಬೆಕ್‍ನಲ್ಲಿ ಹುಟ್ಟಿದ ವಿಲೆನವ್, ಮೊಂಟ್ರಿಯಿಲ್‍ನಲ್ಲಿ ತಮ್ಮ ಸಿನೆಮಾ ಶಿಕ್ಷಣವನ್ನು ಮುಗಿಸಿ, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿ, 1998ರಲ್ಲಿ ತಮ್ಮ ಮೊದಲ ಚಿತ್ರ ‘ಆಗಸ್ಟ್ 32 ಆನ್ ಅರ್ಥ್’ ನಿರ್ದೇಶಿಸಿದರು. ಈ ಚಿತ್ರದಲ್ಲಿ ಆ ದೇಶದ ಯುವಜನರ ಸಂಬಂಧಗಳ ಬಗ್ಗೆ ಕೆದಕಿದ ವಿಲೆನವ್, 2000ದಲ್ಲಿ ಮೇಲ್‍ಸ್ಟ್ರಾಮ್ ಎನ್ನುವ ಚಿತ್ರ ನಿರ್ದೇಶಿಸಿದರು. ಈ ಚಿತ್ರದ ನಿರೂಪಕ ಒಂದು ದೊಡ್ಡ ಮೀನು. ವಾಸ್ತವ, ಅವಾಸ್ತವ, ಮನುಷ್ಯರ ಬೇಜವಬ್ದಾರಿತನ, ತಪ್ಪಿತಸ್ಥ ಭಾವನೆ ಮತ್ತು ಪ್ರೀತಿಯನ್ನು ಹುಡುಕುವ ಈ ಸಿನೆಮಾದ ಕೊನೆಯಲ್ಲಿ ಜೀವನವೆಂದರೆ ಏನು ಎಂದು ನಿರೂಪಕ ಮೀನು ಹೇಳಬೇಕೆನ್ನುವಷ್ಟರಲ್ಲಿ ಅದನ್ನು ಕೊಲ್ಲಲಾಗುತ್ತದೆ. ವಿಲೆನವ್ ಅವರ ಮುಂಬರುವ ಚಿತ್ರಗಳಲ್ಲಿ ಕಂಡುಬರುವ ಮಾಂತ್ರಿಕತೆಯ ಝಲಕ್ ಈ ಚಿತ್ರದಲ್ಲಿ ಕಂಡುಬರುತ್ತದೆ.
2013ರಲ್ಲಿ ಬಂದ ಪ್ರಿಸನರ್ಸ್ ಮತ್ತು ಎನಿಮಿ ಚಿತ್ರಗಳೆರಡೂ ಮನುಷ್ಯನ ಆಳವನ್ನು ಪರಿಶೀಲಿಸುತ್ತವೆ. ಪ್ರಿಸನರ್ಸ್‍ನಲ್ಲಿ ಮನುಷ್ಯನ ಒಳಗೆ ಅಡಗಿರುವ ಹಿಂಸೆಯನ್ನು ಕೆದಕಿದರೆ, ಎನಿಮಿ ಚಿತ್ರದಲ್ಲಿ ಒಬ್ಬ ವ್ಯಕ್ತಿಯು ತನ್ನೊಳಗಿರುವ ಇನ್ನೊಬ್ಬನನ್ನು ಹುಡುಕುತ್ತಾನೆ. ಆ ಇನ್ನೊಬ್ಬ ತಾನೋ ಅಥವಾ ಇನ್ನಾರೋ ಎನ್ನುವುದು ಪ್ರೇಕ್ಷಕರ ಊಹೆಗೆ ಬಿಡಲಾಗಿದೆ. 2015ರಲ್ಲಿ ಸಿಕಾರಿಯೋ ಎನ್ನುವ ಕ್ರೈಮ್ ಥ್ರಿಲರ್ ನಿರ್ದೇಶಿಸಿದ ವಿಲೆನವ್ 2016ರಲ್ಲಿ ಅರೈವಲ್ (Arrival) ಎನ್ನುವ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಸಾಪೇಕ್ಷ ಸಿದ್ಧಾಂತವನ್ನು ಒರೆಗೆ ಹಚ್ಚಿದರು. ಹೊರಜಗತ್ತಿನಿಂದ ಭೂಮಿಯ ಬೇರೆ ಬೇರೆ ಭಾಗದಲ್ಲಿ ಬಂದಿಳಿದ ಹನ್ನೆರಡು ಬೃಹತ್ ಅಪರಿಚಿತ ಗಗನನೌಕೆಗಳು, ಅದರೊಂದಿಗೆ ಬಂದ ಜೀವಿಗಳು. ಭಾಷಾಶಾಸ್ತ್ರಜ್ಞೆಯೊಬ್ಬಳು ಆ ಜೀವಿಗಳೊಂದಿಗೆ ಸಂಭಾಷಿಸಿ ಭೂಮಿಗೆ ಒದಗಿರುವ ಗಂಡಾಂತರದಿಂದ ಪಾರು ಮಾಡಬೇಕಿದೆ. ಮನುಷ್ಯನಿಗಿರುವ ಪಂಚೇಂದ್ರಿಯಗಳು ಮತ್ತು ಭಾಷೆಯಿಂದ ಹೊರಜೀವಿಗಳೊಂದಿಗೆ ಮಾತನಾಡಿಸಲಾಗುವುದೇ? ಆ ಜೀವಿಗಳು ಬರೀ ಸ್ಪೇಸ್ ಅಷ್ಟೇ ಅಲ್ಲದೇ ವಿವಿಧ ಸಮಯಗಳಿಗೂ ಸಂಚರಿಸಬಲ್ಲವೇ? ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವ ಈಕೆ ಭವಿಷ್ಯವನ್ನು ನೋಡಬಲ್ಲಳೇ? ಹೀಗೆ ಉತ್ತರಿಸಲಾಗದ ಪ್ರಶ್ನೆಗಳನ್ನು ಈ ಚಿತ್ರ ಕೆದಕುತ್ತದೆ. ಹುಡುಕಾಟ ಮುಂದುವರೆಯುತ್ತದೆ. ಈ ಚಿತ್ರದ ನಂತರ ವಿಲೆನವ್ ಅವರು ಬ್ಲೇಡ್ ರನರ್ 2049 ಎನ್ನುವ ಮತ್ತೊಂದು ಸೈನ್ಸ್ ಫಿಕ್ಷನ್ ಸಿನೆಮಾ ನಿರ್ದೇಶಿಸಿದರು. ಈ ಚಿತ್ರದಲ್ಲೂ ಮನುಷ್ಯನ ಊಹೆಯ ಪರಿಧಿಯನ್ನು ವಿಸ್ತರಿಸುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ ವಿಲೆನವ್ ಈಗ ಫ್ರ್ಯಾಂಕ್ ಹರ್ಬರ್ಟ್ ಅವರ ಪ್ರಸಿದ್ಧ ಸೈನ್ಸ್ ಫಿಕ್ಷನ್ ಕೃತಿ ‘ಡ್ಯೂನ್’ ಅನ್ನು ತೆರೆಗೆ ತರುತ್ತಿದ್ದಾರೆ.
ಸಿನೆಮಾ ಎನ್ನುವುದು ನಮ್ಮ ನೆರಳುಗಳನ್ನು ಅನ್ವೇಷಿಸುವ ಒಂದು ಸಾಧನ ಎಂದು ಹೇಳಿದ ವಿಲೆನವ್ ನಮ್ಮ ವಿಶ್ವದ ಅನೇಕ ಪ್ರಶ್ನೆಗಳಿಗೆ ಸಿನೆಮಾ ಮಾಧ್ಯಮದಿಂದ ನಿರಂತರ ಹುಡುಕಾಟದಲ್ಲಿದ್ದಾರೆ.
ಸಾಪೇಕ್ಷ ಸಿದ್ಧಾಂತ, ಹುಡುಕಾಟ ಇವುಗಳೇ ಡನಿ ವಿಲೆನವ್ ಅವರ ಚಿತ್ರಗಳ ಪ್ರಮುಖ ಥೀಮ್ ಎಂದು ಅನೇಕರಿಗೆ ಅನಿಸದೇ ಇರಬಹುದು, ಸ್ವತಃ ವಿಲೆನವ್ ಕೂಡ ಈ ವಿಷಯಗಳನ್ನು ಬೇರೊಂದು ರೀತಿಯಲ್ಲೇ ಕಾಣುತ್ತಿರಬಹುದು. ಆದರೆ ಒಂದು ಸಿನೆಮಾ ನೋಡಿದ ಎಲ್ಲರೂ ತಮ್ಮದೇ ಆದ ಬೇರೆ ಬೇರೆ ದೃಷ್ಟಿಯಲ್ಲಿ ನೋಡಿದರೆ ಅದೇ ಆ ಶಿಲ್ಪಿಯ ಸಾರ್ಥಕತೆಯಲ್ಲವೇ?
ವಿಲೆನವ್ ಅವರ ಸಿನೆಮಾಗಳಂತೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಹುಡುಕಾಟದಲ್ಲಿದ್ದೇವೆ. ಕೆಲವೊಮ್ಮೆ ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರ ಸಿಕ್ಕರೆ ಅನೇಕ ಬಾರಿಯ ಉತ್ತರ- ಹುಡುಕಾಟ. 2020 ರಲ್ಲಿ ಬಿಡುಗಡೆಯಾಗಲಿರುವ ‘ಡ್ಯೂನ್’ ಈ ನಮ್ಮ ಹುಡುಕಾಟವನ್ನು ಎಲ್ಲಿಗೆ ಕೊಂಡೊಯ್ಯುವುದು ಎನ್ನುವ ಕಾತರದಲ್ಲಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...