Homeಅನುವಾದಿತ ಲೇಖನಆನೆಗಳಾಯಿತು, ಈಗ ಚಿರತೆಗಳ ಸರದಿ : ಮೈಸೂರಿನಲ್ಲಿ ವನ್ಯ ಪ್ರಾಣಿಗಳಿಗೆ ವಿಷ ಪ್ರಾಶನ

ಆನೆಗಳಾಯಿತು, ಈಗ ಚಿರತೆಗಳ ಸರದಿ : ಮೈಸೂರಿನಲ್ಲಿ ವನ್ಯ ಪ್ರಾಣಿಗಳಿಗೆ ವಿಷ ಪ್ರಾಶನ

- Advertisement -
- Advertisement -

ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷ ತುಂಬಾ ಸುದೀರ್ಘವಾದದ್ದು. ಆರಂಭದಿಂದಲೂ ಮನುಷ್ಯ ಕಾಡು ಪ್ರಾಣಿಗಳ ಆವಾಸಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಲೇ ಮುನ್ನುಗ್ಗುತ್ತಿದ್ದಾನೆ. ಕಾಡನ್ನು ನಾಡು ಮಾಡಿ ಬೃಹತ್‌ ಕಾಂಕ್ರೀಟ್‌ ನಗರಗಳನ್ನು ಕಟ್ಟುತ್ತಿದ್ದಾನೆ. ಆದರೆ ಮನುಷ್ಯನ ಈ ಕಟ್ಟುವಿಕೆ, ನಗರಗಳ ವಿಸ್ತರಿಸುವಿಕೆಗೆ ಕೊನೆಯೆಂಬುದೇನೂ ಇಲ್ಲ. ಕಾಡಿದ್ದ ಜಾಗಗಳಲ್ಲಿ ನಾಡು ಹುಟ್ಟಿಕೊಂಡ ಪರಿಣಾಮವಾಗಿ ಇಂದು ಕಾಡು ಪ್ರಾಣಿಗಳ ಉಪಟಳ ಮನುಷ್ಯನಿಗೆ ಹೆಚ್ಚಾಗಿದೆ. ಆನೆ ಚಿರತೆಗಳು ನಗರಗಳತ್ತ ಆಹಾರ ಹುಡುಕಿ ಬರುವುದು ಸಾಮಾನ್ಯವಾಗಿದೆ. ಒಂದು ಕಾಲದಲ್ಲಿ ಸಮೃದ್ಧ ಕಾಡಿನಿಂದ ಸುತ್ತುವರೆದಿದ್ದ ಬೆಂಗಳೂರು, ಮೈಸೂರು ನಗರಗಳು ಇಂದು ಬಟಾಬಯಲಾಗಿವೆ. ಆದರೆ ಕಾಡು ಪ್ರಾಣಿಗಳು ತಮ್ಮ ಹಳೆಯ ಆವಾಸ ಸ್ಥಾನಗಳನ್ನು ಇನ್ನು ಮರೆತಿಲ್ಲ. ಆಗಾಗ ನಗರಗಳಿಗೆ ಭೇಟಿಕೊಟ್ಟು ತಮ್ಮ ಆಹಾರಗಳನ್ನು ಹುಡುಕುತ್ತವೆ. ಹೀಗಾಗಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಆಗಾಗ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಡು ಪ್ರಾಣಿಗಳು ನಗರಕ್ಕೆ ಬರುವುದನ್ನು ಸಹಿಸದ ಮನುಷ್ಯ ಅವುಗಳನ್ನು ಹೇಗಾದರೂ ಮಾಡಿ ಕೊಲ್ಲಲು ಪ್ರಯತ್ನಿಸುತ್ತಾನೆ. ವಿದ್ಯುತ್‌ ಬೇಲಿಗಳನ್ನು ಹಾಕಿ ಆನೆಗಳನ್ನು ಸಾಯಿಸಲು ಯತ್ನಿಸುತ್ತಾನೆ. ವಿಷ ಹಾಕಿ ಚಿರತೆಗಳನ್ನು ಕೊಲ್ಲುತ್ತಾನೆ. ಜಿಂಕೆಗಳನ್ನು ಭೇಟೆಯಾಡುತ್ತಾನೆ.

ಹೀಗೆ ಮನುಷ್ಯ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಮೈಸೂರಿನಲ್ಲಿ ತಾರಕಕ್ಕೆ ಹೋಗಿದೆ. ಹಿಂದೆ ವಿದ್ಯುತ್‌ ಬೇಲಿಯ ಮೂಲಕ ಮತ್ತು ವಿಷ ಉಣಿಸುವ ಮೂಲಕ ಅನೇಕ ಆನೆಗಳನ್ನು ಸಾಯಿಸಲಾಗಿತ್ತು. ಈಗ ಮತ್ತೆ ಅಂತಹುದೇ ವರದಿ ಬೆಳಕಿಗೆ ಬಂದಿದೆ. ಈ ಸಾರಿ ಜನರ ಕ್ರೌರ್ಯಕ್ಕೆ ಬಲಿಯಾಗಿರುವುದು ಚಿರತೆಗಳು. ಮೈಸೂರಿನ ನಂಜನಗೂಡು ಮತ್ತು ಹೆಚ್‌.ಡಿ.ಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ 20 ದಿನಗಳಲ್ಲಿ 6 ಚಿರತೆಗಳನ್ನು ವಿಷವಿಟ್ಟು ಕೊಲ್ಲಲಾಗಿರುವ ಘಟನೆಗಳು ನಡೆದಿವೆ. ಈ ಘಟನೆಯು ಪರಿಸರ ಪ್ರಿಯಯನ್ನು ಕೆರಳಿಸಿದೆ. ಚಿರತೆಗಳನ್ನು ಸಾಯಿಸುತ್ತಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಅನೇಕರು ಅರಣ್ಯ ಇಲಾಖೆಯ ಮೇಲೆ ಒತ್ತಡ ತರುತ್ತಿದ್ದಾರೆ.

ಇನ್ನು ಓದಿ : ಉದ್ದ ಕೂದಲು ಬಿಟ್ಟ ಕಾರಣಕ್ಕೆ ಪಾಕಿಸ್ತಾನದ ಕಲಾವಿದನನ್ನು ಬಂಧಿಸಿದ ಪೊಲೀಸರು! ತೀವ್ರ ಖಂಡನೆ

2009 ರಲ್ಲಿ ಇದೇ ರೀತಿ ಉಲ್ಲಹಳ್ಳಿ ಕಾಲುವೆಯ ಎಡದಂಡೆಯ ಮೇಲೆ ಏಕಾ ಏಕಿ ನಾಲ್ಕು ಆನೆಗಳ ಮೃತದೇಹ ಕಂಡುಬಂದಿತ್ತು. ಆಗ ಸೈನೆಡ್‌ ಮೂಲಕ ಆನೆಗಳನ್ನು ಕೊಂದಿರುವುದು ತನಿಖೆ ವೇಳೆ ತಿಳಿದುಬಂದಿತ್ತು. ಅಂದು ಕರ್ನಾಟಕ ಹೈಕೋರ್ಟ್‌ ಸಮಿತಿಯೊಂದನ್ನು ನೇಮಿಸಿ ತನಿಖೆ ನಡೆರಸುವಂತೆ ಅರಣ್ಯ ಇಲಾಖೆಗೆ ಆದೇಶಿಸಿತ್ತು. ಆದರೆ 10 ವರ್ಷಗಳ ನಂತರವೂ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯ ನಡೆದಿಲ್ಲ.

ಚಿರತೆಗಳ ಶವದ ಜೊತೆ ಅರ್ಧ ತಿಂದ ನಾಯಿಯ ಮೃತದೇಹ ಕಂಡುಬಂದಿದೆ. ನಾಯಿಗಳಿಗೆ ವಿಷವುಣಿಸಿ ಅವನ್ನು ಚಿರತೆಗೆ ಬಲಿ ಕೊಟ್ಟಿರುವುದು ಮೇಲ್ನೋಟಕ್ಕೆ ತಿಳಿದುಬರುವ ಸಂಗತಿ.  ಅರಣ್ಯ ಇಲಾಖೆ ನಾಯಿಯ ಮೃತದೇಹ ಹಾಗೂ ಚಿರತೆಯ ಮೃತದೇಹ ಎರಡನ್ನೂ ಬೆಂಗಳೂರಿನ ಎನಿಮಲ್‌ ಹೆಲ್ತ್‌ ಎಂಡ್‌ ವೆಟರ್ನರಿ ಬಯೋಲಾಜಿಕಲ್‌ ಇನ್ಸ್‌ಟಿಟ್ಯೂಗೆ ಕಳುಹಿಸಿದೆ. ಬೆಂಗಳೂರು ಬಿಟ್ಟರೆ ಮತ್ತೆ ಹತ್ತಿರದಲ್ಲೆಲ್ಲೂ ಸದ್ಯ ಪ್ರಾಣಿಗಳ ದೇಹವನ್ನು ಪರೀಕ್ಷಿಸುವ ವಿಧಿ ವಿಜ್ಞಾನ ಪ್ರಯೋಗಾಯಲಯವಿಲ್ಲದಿರುವುದು ಇನ್ನೊಂದು ಸಮಸ್ಯೆಯಾಗಿದೆ.

 

ಈ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು, ಪ್ರಾಣಿ ಹಂತಕರನ್ನು ಬಂಧಿಸದೇ ಇರುವುದರಿಂದ ವನ್ಯ ಪ್ರಾಣಿಗಳನ್ನು ಸಾಯಿಸುವ ಘಟನೆ ಮರುಕಳಿಸುತ್ತಿದೆ. ಅರಣ್ಯ ಇಲಾಖೆ ತನಿಖೆಯನ್ನು ನಡೆಸಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಹಾಗಾಗಿ ಜನರು ಇನ್ನು ಧೈರ್ಯದಿಂದ ವನ್ಯ ಪ್ರಾಣಿಗಳನ್ನು ಸಾಯಿಸಲು ಮುಂದಾಗುತ್ತಿದ್ದಾರೆ ಎಂದು ಪ್ರಾಣಿ ತಜ್ಞ ಡಾ ನಾಗರಾಜ್‌ ತಿಳಿಸುತ್ತಾರೆ. ನಾಗರಾಜ್‌ ಹಿಂದೆ ಅರಣ್ಯ ಇಲಾಖೆಯ ಜೊತೆ ಅನೇಕ ಕಡೆ ಆನೆ ಸೆರೆಹಿಡಿಯುವ ಕೆಲಸದಲ್ಲೂ ಭಗವಹಿಸಿದ್ದಾರೆ. ನಾವು ಹತ್ತಿರದ ಕೃಷಿಕರನ್ನೋ ಅಥವಾ ಹಳ್ಳಿಗರನ್ನು ಚಿರತೆ ಹಂತಕರೆಂದು ಹೇಳಲು ಸಾಧ್ಯವಿಲ್ಲ. ಬೇರೆ ಎಲ್ಲಿಂದಲೋ ವಿಷವುಣಿಸಿದ ನಾಯಿಯಯನ್ನು ಚಿರತೆ ಭೇಟೆಯಾಡಿ ಇಲ್ಲಿಗೆ ಎಳೆದುಕೊಂಡಿರಬಹುದು. ಹಾಗೇ ಯಾರಾದರೂ ಕಿಡಿಗೇಡಿಗಳು ಕೃಷಿಕರಿಗೆ ತೊಂದರೆ ಕೊಡಲು ಹೀಗೆ ಚಿರತೆಯನ್ನು ಸಾಯಿಸಿರಬಹುದು. ತನಿಖೆಯಾಗದೇ ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಡಾ. ನಾಗರಾಜ್‌ ಚಿರತೆಗಳ ಸಾವಿನ ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಹಳ್ಳಿಗರು ಚಿರತೆಯಿಂದ ತಮ್ಮ ಆಡು, ಕುರಿ, ಹಸು ಮೇಯಿಸಲು ಹೆದರಿಕೆಯಾಗುತ್ತಿದೆ. ನಮ್ಮ ಜಾನುವಾರುಗಳನ್ನು ಚಿರತೆ ಹಿಡಿದುಕೊಂಡು ಹೋಗುತ್ತಿದೆ. ನಮಗೆ ಯಾವುದೇ ಪರಿಹಾರ ಬಂದಿಲ್ಲ ಎಂದು ರೈತರು ಚಿರತೆಗಳ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಕಬಿನಿ ಎಡ ಕಾಲುವೆಯ ಮೇಲೆ ನನ್ನ ಆಡಿನ ಹಿಂಡನ್ನು ಮೇಯಿಸುತ್ತಿರುವಾಗ ಚಿರತೆಯೊಂದು ನನ್ನ ಕುರಿಗಳ ಮೇಲೆ ದಾಳಿ ಮಾಡಿತು. ನಾನು ತಕ್ಷಣ ಕಿರುಚಿಕೊಂಡಿದ್ದಕ್ಕೆ ಹಾಗೇ ಕುರಿಗಳನ್ನು ಬಿಟ್ಟು ಓಡಿತು ಎಂದು ಮಾಡನಹಳ್ಳಿಯ ಗೋವಿಂದ್‌ ನಾಯ್ಕ್‌ ಎಂಬ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಾಡು ಹಂದಿ ಮತ್ತು ನವಿಲಿನ ಕಾಟದಿಂದ ನಮ್ಮ ಹೂವಿನ ತೋಟಗಳು ನಾಶವಾಗುತ್ತಿವೆ. ತರಕಾರಿ ತೋಟಗಳಿಗೂ ಕಾಡುಪ್ರಾಣಿಯ ಕಾಟ ತಪ್ಪುತ್ತಿಲ್ಲ ಎಂದು ಗೊಲ್ಲೂರಿನ ಪ್ರಭುದೇವ ಎಂಬ ರೈತರು ವನ್ಯ ಮೃಗಗಳಿಂದಾಗುವ ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಾರೆ. ಲಾಕ್‌ ಡೌನ್‌ ಕಾರಣದಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಕಾಡು ಪ್ರಾಣಿಗಳು ಮನುಷ್ಯರ ವಸತಿ ಪ್ರದೇಶಕ್ಕೆ ನುಗ್ಗುತ್ತಿವೆ ಎಂದು ಪ್ರಾಣಿ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪ್ರಾಣಿತಜ್ಞ ಡಾ. ಪ್ರಯಾಗ್‌ ಹೆಚ್‌.ಎಸ್‌ ಅವರ ಪ್ರಕಾರ, “ಚಿರತೆಗಳು ರಾತ್ರಿ ಹೊತ್ತಿನಲ್ಲಿ ಹಳ್ಳಿಗಳ ಕಡೆಗೆ ಬರುತ್ತವೆ. ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತುಕೊಳ್ಳುತ್ತವೆ. ಚಿರತೆಗಳನ್ನು ಕಂಡು ಜನರು ಗಾಬರಿಯಾಗುತ್ತಾರೆ. ಅದೇ ಭಯದಿಂದ ಚಿರತೆಗಳಿಗೆ ವಿಷ ಉಣಿಸುವಂತಹ ಕೆಲಸಕ್ಕೆ ಮುಂದಾಗುತ್ತಾರೆ. ಮುನುಷ್ಯ ಕಾಡು ಪ್ರಾಣಿಗಳ ಕುರಿತು ಹೆಚ್ಚು ತಿಳಿದುಕೊಳ್ಳಬೇಕು. ಅವುಗಳ ವರ್ತನೆಯನ್ನು ಅರ್ಥಮಾಡಿಕೊಳ್ಳಬೇಕು. ಅರಣ್ಯ ಇಲಾಖೆ ಸುತ್ತ ಮುತ್ತದ ಹಳ್ಳಿಗಳಲ್ಲಿ ವನ್ಯಪ್ರಾಣಿ ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕು. ಆಗ ಜನರು ಕಾಡು ಪ್ರಾಣಿಗಳನ್ನು ತಮ್ಮ ಶತ್ರುಗಳ ರೀತಿ ನೋಡುವುದು ಕಡಿಮೆಯಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿರತೆಯ ದೇಹದ ಮರಣೋತ್ತರ ಪರೀಕ್ಷೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆ ವರದಿ ಬಂದ ಮೇಲೆ ಘಟನೆ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ. ಸದ್ಯ 5 ಜನ ಶಂಕಿತರ ಮೇಲೆ ಕಣ್ಣಿಟ್ಟಿದ್ದೇವೆ. ಅವರ ವಿಚಾರಣೆಯನ್ನು ನಡೆಸುತ್ತಿದ್ದೇವೆ. ಪ್ರಕರಣವನ್ನು ಬೇಧೀಸುವಂತಹ ಮಾಹಿತಿಗಳು ನಮಗೆ ದೊರೆತಿದೆ ಎಂದು ಡಿಸಿಎಫ್‌ ಪ್ರಶಾಂತ್‌ ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ವನ್ಯಪ್ರಾಣಿ ಮತ್ತು ಮನುಷ್ಯನ ಸಂಘರ್ಷಗಳು ಪದೇ ಪದೇ ಮೈಸೂರು ಸುತ್ತ ಮುತ್ತ ವರದಿಯಾಗುತ್ತಿವೆ. ನಾಗರಹೊಳೆ, ಬಂಡಿಪುರ ಎರಡು ರಾಷ್ಟ್ರೀಯ ಉದ್ಯಾನಗಳಿಂದ ಸುತ್ತು ವರಿದಿರುವ ಮೈಸೂರಿನಲ್ಲಿ ಆದಷ್ಟು ವನ್ಯಮೃಗಗಳ ಹತ್ಯೆ ನಿಲ್ಲಬೇಕಿದೆ.

ಮೂಲ : ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌

ಅನುವಾದ : ರಾಜೇಶ್‌ ಹೆಬ್ಬಾರ್‌ 


ಇದನ್ನೂ ಓದಿ : ಗುಜರಾತ್ ಪರಿಸ್ಥಿತಿ ಈಗ ಬದಲಾಗಲಿದೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಪ್ರಾಧಿಕಾರ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...