Homeಅನುವಾದಿತ ಲೇಖನಆನೆಗಳಾಯಿತು, ಈಗ ಚಿರತೆಗಳ ಸರದಿ : ಮೈಸೂರಿನಲ್ಲಿ ವನ್ಯ ಪ್ರಾಣಿಗಳಿಗೆ ವಿಷ ಪ್ರಾಶನ

ಆನೆಗಳಾಯಿತು, ಈಗ ಚಿರತೆಗಳ ಸರದಿ : ಮೈಸೂರಿನಲ್ಲಿ ವನ್ಯ ಪ್ರಾಣಿಗಳಿಗೆ ವಿಷ ಪ್ರಾಶನ

- Advertisement -
- Advertisement -

ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷ ತುಂಬಾ ಸುದೀರ್ಘವಾದದ್ದು. ಆರಂಭದಿಂದಲೂ ಮನುಷ್ಯ ಕಾಡು ಪ್ರಾಣಿಗಳ ಆವಾಸಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಲೇ ಮುನ್ನುಗ್ಗುತ್ತಿದ್ದಾನೆ. ಕಾಡನ್ನು ನಾಡು ಮಾಡಿ ಬೃಹತ್‌ ಕಾಂಕ್ರೀಟ್‌ ನಗರಗಳನ್ನು ಕಟ್ಟುತ್ತಿದ್ದಾನೆ. ಆದರೆ ಮನುಷ್ಯನ ಈ ಕಟ್ಟುವಿಕೆ, ನಗರಗಳ ವಿಸ್ತರಿಸುವಿಕೆಗೆ ಕೊನೆಯೆಂಬುದೇನೂ ಇಲ್ಲ. ಕಾಡಿದ್ದ ಜಾಗಗಳಲ್ಲಿ ನಾಡು ಹುಟ್ಟಿಕೊಂಡ ಪರಿಣಾಮವಾಗಿ ಇಂದು ಕಾಡು ಪ್ರಾಣಿಗಳ ಉಪಟಳ ಮನುಷ್ಯನಿಗೆ ಹೆಚ್ಚಾಗಿದೆ. ಆನೆ ಚಿರತೆಗಳು ನಗರಗಳತ್ತ ಆಹಾರ ಹುಡುಕಿ ಬರುವುದು ಸಾಮಾನ್ಯವಾಗಿದೆ. ಒಂದು ಕಾಲದಲ್ಲಿ ಸಮೃದ್ಧ ಕಾಡಿನಿಂದ ಸುತ್ತುವರೆದಿದ್ದ ಬೆಂಗಳೂರು, ಮೈಸೂರು ನಗರಗಳು ಇಂದು ಬಟಾಬಯಲಾಗಿವೆ. ಆದರೆ ಕಾಡು ಪ್ರಾಣಿಗಳು ತಮ್ಮ ಹಳೆಯ ಆವಾಸ ಸ್ಥಾನಗಳನ್ನು ಇನ್ನು ಮರೆತಿಲ್ಲ. ಆಗಾಗ ನಗರಗಳಿಗೆ ಭೇಟಿಕೊಟ್ಟು ತಮ್ಮ ಆಹಾರಗಳನ್ನು ಹುಡುಕುತ್ತವೆ. ಹೀಗಾಗಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಆಗಾಗ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಡು ಪ್ರಾಣಿಗಳು ನಗರಕ್ಕೆ ಬರುವುದನ್ನು ಸಹಿಸದ ಮನುಷ್ಯ ಅವುಗಳನ್ನು ಹೇಗಾದರೂ ಮಾಡಿ ಕೊಲ್ಲಲು ಪ್ರಯತ್ನಿಸುತ್ತಾನೆ. ವಿದ್ಯುತ್‌ ಬೇಲಿಗಳನ್ನು ಹಾಕಿ ಆನೆಗಳನ್ನು ಸಾಯಿಸಲು ಯತ್ನಿಸುತ್ತಾನೆ. ವಿಷ ಹಾಕಿ ಚಿರತೆಗಳನ್ನು ಕೊಲ್ಲುತ್ತಾನೆ. ಜಿಂಕೆಗಳನ್ನು ಭೇಟೆಯಾಡುತ್ತಾನೆ.

ಹೀಗೆ ಮನುಷ್ಯ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಮೈಸೂರಿನಲ್ಲಿ ತಾರಕಕ್ಕೆ ಹೋಗಿದೆ. ಹಿಂದೆ ವಿದ್ಯುತ್‌ ಬೇಲಿಯ ಮೂಲಕ ಮತ್ತು ವಿಷ ಉಣಿಸುವ ಮೂಲಕ ಅನೇಕ ಆನೆಗಳನ್ನು ಸಾಯಿಸಲಾಗಿತ್ತು. ಈಗ ಮತ್ತೆ ಅಂತಹುದೇ ವರದಿ ಬೆಳಕಿಗೆ ಬಂದಿದೆ. ಈ ಸಾರಿ ಜನರ ಕ್ರೌರ್ಯಕ್ಕೆ ಬಲಿಯಾಗಿರುವುದು ಚಿರತೆಗಳು. ಮೈಸೂರಿನ ನಂಜನಗೂಡು ಮತ್ತು ಹೆಚ್‌.ಡಿ.ಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ 20 ದಿನಗಳಲ್ಲಿ 6 ಚಿರತೆಗಳನ್ನು ವಿಷವಿಟ್ಟು ಕೊಲ್ಲಲಾಗಿರುವ ಘಟನೆಗಳು ನಡೆದಿವೆ. ಈ ಘಟನೆಯು ಪರಿಸರ ಪ್ರಿಯಯನ್ನು ಕೆರಳಿಸಿದೆ. ಚಿರತೆಗಳನ್ನು ಸಾಯಿಸುತ್ತಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಅನೇಕರು ಅರಣ್ಯ ಇಲಾಖೆಯ ಮೇಲೆ ಒತ್ತಡ ತರುತ್ತಿದ್ದಾರೆ.

ಇನ್ನು ಓದಿ : ಉದ್ದ ಕೂದಲು ಬಿಟ್ಟ ಕಾರಣಕ್ಕೆ ಪಾಕಿಸ್ತಾನದ ಕಲಾವಿದನನ್ನು ಬಂಧಿಸಿದ ಪೊಲೀಸರು! ತೀವ್ರ ಖಂಡನೆ

2009 ರಲ್ಲಿ ಇದೇ ರೀತಿ ಉಲ್ಲಹಳ್ಳಿ ಕಾಲುವೆಯ ಎಡದಂಡೆಯ ಮೇಲೆ ಏಕಾ ಏಕಿ ನಾಲ್ಕು ಆನೆಗಳ ಮೃತದೇಹ ಕಂಡುಬಂದಿತ್ತು. ಆಗ ಸೈನೆಡ್‌ ಮೂಲಕ ಆನೆಗಳನ್ನು ಕೊಂದಿರುವುದು ತನಿಖೆ ವೇಳೆ ತಿಳಿದುಬಂದಿತ್ತು. ಅಂದು ಕರ್ನಾಟಕ ಹೈಕೋರ್ಟ್‌ ಸಮಿತಿಯೊಂದನ್ನು ನೇಮಿಸಿ ತನಿಖೆ ನಡೆರಸುವಂತೆ ಅರಣ್ಯ ಇಲಾಖೆಗೆ ಆದೇಶಿಸಿತ್ತು. ಆದರೆ 10 ವರ್ಷಗಳ ನಂತರವೂ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯ ನಡೆದಿಲ್ಲ.

ಚಿರತೆಗಳ ಶವದ ಜೊತೆ ಅರ್ಧ ತಿಂದ ನಾಯಿಯ ಮೃತದೇಹ ಕಂಡುಬಂದಿದೆ. ನಾಯಿಗಳಿಗೆ ವಿಷವುಣಿಸಿ ಅವನ್ನು ಚಿರತೆಗೆ ಬಲಿ ಕೊಟ್ಟಿರುವುದು ಮೇಲ್ನೋಟಕ್ಕೆ ತಿಳಿದುಬರುವ ಸಂಗತಿ.  ಅರಣ್ಯ ಇಲಾಖೆ ನಾಯಿಯ ಮೃತದೇಹ ಹಾಗೂ ಚಿರತೆಯ ಮೃತದೇಹ ಎರಡನ್ನೂ ಬೆಂಗಳೂರಿನ ಎನಿಮಲ್‌ ಹೆಲ್ತ್‌ ಎಂಡ್‌ ವೆಟರ್ನರಿ ಬಯೋಲಾಜಿಕಲ್‌ ಇನ್ಸ್‌ಟಿಟ್ಯೂಗೆ ಕಳುಹಿಸಿದೆ. ಬೆಂಗಳೂರು ಬಿಟ್ಟರೆ ಮತ್ತೆ ಹತ್ತಿರದಲ್ಲೆಲ್ಲೂ ಸದ್ಯ ಪ್ರಾಣಿಗಳ ದೇಹವನ್ನು ಪರೀಕ್ಷಿಸುವ ವಿಧಿ ವಿಜ್ಞಾನ ಪ್ರಯೋಗಾಯಲಯವಿಲ್ಲದಿರುವುದು ಇನ್ನೊಂದು ಸಮಸ್ಯೆಯಾಗಿದೆ.

 

ಈ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು, ಪ್ರಾಣಿ ಹಂತಕರನ್ನು ಬಂಧಿಸದೇ ಇರುವುದರಿಂದ ವನ್ಯ ಪ್ರಾಣಿಗಳನ್ನು ಸಾಯಿಸುವ ಘಟನೆ ಮರುಕಳಿಸುತ್ತಿದೆ. ಅರಣ್ಯ ಇಲಾಖೆ ತನಿಖೆಯನ್ನು ನಡೆಸಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಹಾಗಾಗಿ ಜನರು ಇನ್ನು ಧೈರ್ಯದಿಂದ ವನ್ಯ ಪ್ರಾಣಿಗಳನ್ನು ಸಾಯಿಸಲು ಮುಂದಾಗುತ್ತಿದ್ದಾರೆ ಎಂದು ಪ್ರಾಣಿ ತಜ್ಞ ಡಾ ನಾಗರಾಜ್‌ ತಿಳಿಸುತ್ತಾರೆ. ನಾಗರಾಜ್‌ ಹಿಂದೆ ಅರಣ್ಯ ಇಲಾಖೆಯ ಜೊತೆ ಅನೇಕ ಕಡೆ ಆನೆ ಸೆರೆಹಿಡಿಯುವ ಕೆಲಸದಲ್ಲೂ ಭಗವಹಿಸಿದ್ದಾರೆ. ನಾವು ಹತ್ತಿರದ ಕೃಷಿಕರನ್ನೋ ಅಥವಾ ಹಳ್ಳಿಗರನ್ನು ಚಿರತೆ ಹಂತಕರೆಂದು ಹೇಳಲು ಸಾಧ್ಯವಿಲ್ಲ. ಬೇರೆ ಎಲ್ಲಿಂದಲೋ ವಿಷವುಣಿಸಿದ ನಾಯಿಯಯನ್ನು ಚಿರತೆ ಭೇಟೆಯಾಡಿ ಇಲ್ಲಿಗೆ ಎಳೆದುಕೊಂಡಿರಬಹುದು. ಹಾಗೇ ಯಾರಾದರೂ ಕಿಡಿಗೇಡಿಗಳು ಕೃಷಿಕರಿಗೆ ತೊಂದರೆ ಕೊಡಲು ಹೀಗೆ ಚಿರತೆಯನ್ನು ಸಾಯಿಸಿರಬಹುದು. ತನಿಖೆಯಾಗದೇ ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಡಾ. ನಾಗರಾಜ್‌ ಚಿರತೆಗಳ ಸಾವಿನ ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಹಳ್ಳಿಗರು ಚಿರತೆಯಿಂದ ತಮ್ಮ ಆಡು, ಕುರಿ, ಹಸು ಮೇಯಿಸಲು ಹೆದರಿಕೆಯಾಗುತ್ತಿದೆ. ನಮ್ಮ ಜಾನುವಾರುಗಳನ್ನು ಚಿರತೆ ಹಿಡಿದುಕೊಂಡು ಹೋಗುತ್ತಿದೆ. ನಮಗೆ ಯಾವುದೇ ಪರಿಹಾರ ಬಂದಿಲ್ಲ ಎಂದು ರೈತರು ಚಿರತೆಗಳ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಕಬಿನಿ ಎಡ ಕಾಲುವೆಯ ಮೇಲೆ ನನ್ನ ಆಡಿನ ಹಿಂಡನ್ನು ಮೇಯಿಸುತ್ತಿರುವಾಗ ಚಿರತೆಯೊಂದು ನನ್ನ ಕುರಿಗಳ ಮೇಲೆ ದಾಳಿ ಮಾಡಿತು. ನಾನು ತಕ್ಷಣ ಕಿರುಚಿಕೊಂಡಿದ್ದಕ್ಕೆ ಹಾಗೇ ಕುರಿಗಳನ್ನು ಬಿಟ್ಟು ಓಡಿತು ಎಂದು ಮಾಡನಹಳ್ಳಿಯ ಗೋವಿಂದ್‌ ನಾಯ್ಕ್‌ ಎಂಬ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಾಡು ಹಂದಿ ಮತ್ತು ನವಿಲಿನ ಕಾಟದಿಂದ ನಮ್ಮ ಹೂವಿನ ತೋಟಗಳು ನಾಶವಾಗುತ್ತಿವೆ. ತರಕಾರಿ ತೋಟಗಳಿಗೂ ಕಾಡುಪ್ರಾಣಿಯ ಕಾಟ ತಪ್ಪುತ್ತಿಲ್ಲ ಎಂದು ಗೊಲ್ಲೂರಿನ ಪ್ರಭುದೇವ ಎಂಬ ರೈತರು ವನ್ಯ ಮೃಗಗಳಿಂದಾಗುವ ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಾರೆ. ಲಾಕ್‌ ಡೌನ್‌ ಕಾರಣದಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಕಾಡು ಪ್ರಾಣಿಗಳು ಮನುಷ್ಯರ ವಸತಿ ಪ್ರದೇಶಕ್ಕೆ ನುಗ್ಗುತ್ತಿವೆ ಎಂದು ಪ್ರಾಣಿ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪ್ರಾಣಿತಜ್ಞ ಡಾ. ಪ್ರಯಾಗ್‌ ಹೆಚ್‌.ಎಸ್‌ ಅವರ ಪ್ರಕಾರ, “ಚಿರತೆಗಳು ರಾತ್ರಿ ಹೊತ್ತಿನಲ್ಲಿ ಹಳ್ಳಿಗಳ ಕಡೆಗೆ ಬರುತ್ತವೆ. ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತುಕೊಳ್ಳುತ್ತವೆ. ಚಿರತೆಗಳನ್ನು ಕಂಡು ಜನರು ಗಾಬರಿಯಾಗುತ್ತಾರೆ. ಅದೇ ಭಯದಿಂದ ಚಿರತೆಗಳಿಗೆ ವಿಷ ಉಣಿಸುವಂತಹ ಕೆಲಸಕ್ಕೆ ಮುಂದಾಗುತ್ತಾರೆ. ಮುನುಷ್ಯ ಕಾಡು ಪ್ರಾಣಿಗಳ ಕುರಿತು ಹೆಚ್ಚು ತಿಳಿದುಕೊಳ್ಳಬೇಕು. ಅವುಗಳ ವರ್ತನೆಯನ್ನು ಅರ್ಥಮಾಡಿಕೊಳ್ಳಬೇಕು. ಅರಣ್ಯ ಇಲಾಖೆ ಸುತ್ತ ಮುತ್ತದ ಹಳ್ಳಿಗಳಲ್ಲಿ ವನ್ಯಪ್ರಾಣಿ ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕು. ಆಗ ಜನರು ಕಾಡು ಪ್ರಾಣಿಗಳನ್ನು ತಮ್ಮ ಶತ್ರುಗಳ ರೀತಿ ನೋಡುವುದು ಕಡಿಮೆಯಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿರತೆಯ ದೇಹದ ಮರಣೋತ್ತರ ಪರೀಕ್ಷೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆ ವರದಿ ಬಂದ ಮೇಲೆ ಘಟನೆ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ. ಸದ್ಯ 5 ಜನ ಶಂಕಿತರ ಮೇಲೆ ಕಣ್ಣಿಟ್ಟಿದ್ದೇವೆ. ಅವರ ವಿಚಾರಣೆಯನ್ನು ನಡೆಸುತ್ತಿದ್ದೇವೆ. ಪ್ರಕರಣವನ್ನು ಬೇಧೀಸುವಂತಹ ಮಾಹಿತಿಗಳು ನಮಗೆ ದೊರೆತಿದೆ ಎಂದು ಡಿಸಿಎಫ್‌ ಪ್ರಶಾಂತ್‌ ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ವನ್ಯಪ್ರಾಣಿ ಮತ್ತು ಮನುಷ್ಯನ ಸಂಘರ್ಷಗಳು ಪದೇ ಪದೇ ಮೈಸೂರು ಸುತ್ತ ಮುತ್ತ ವರದಿಯಾಗುತ್ತಿವೆ. ನಾಗರಹೊಳೆ, ಬಂಡಿಪುರ ಎರಡು ರಾಷ್ಟ್ರೀಯ ಉದ್ಯಾನಗಳಿಂದ ಸುತ್ತು ವರಿದಿರುವ ಮೈಸೂರಿನಲ್ಲಿ ಆದಷ್ಟು ವನ್ಯಮೃಗಗಳ ಹತ್ಯೆ ನಿಲ್ಲಬೇಕಿದೆ.

ಮೂಲ : ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌

ಅನುವಾದ : ರಾಜೇಶ್‌ ಹೆಬ್ಬಾರ್‌ 


ಇದನ್ನೂ ಓದಿ : ಗುಜರಾತ್ ಪರಿಸ್ಥಿತಿ ಈಗ ಬದಲಾಗಲಿದೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...