Homeಅಂಕಣಗಳುಡೇಟಾಖೋಲಿ: ಮಾಧ್ಯಮ ನಲ್ಲರು - ಯಾರ ಕೆಲಸ ಏನು?

ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

- Advertisement -
- Advertisement -

ಈ ವಾರ ಇಡೀ ಜಗತ್ತು ಶಾಂತಿ ಹಾಗೂ ಸಮೃದ್ಧಿಯಿಂದ ತುಂಬಿ ತುಳುಕುತ್ತಿದ್ದಾಗ ಒಂದು ಸುದ್ದಿ ಬಂತು. ಈಗಿನ ಕಾಲದ ಎಲ್ಲ ಒಳ್ಳೆ-ಕೆಟ್ಟ ಸುದ್ದಿಗಳಂತೆ ಅದು ಕೆಲವೇ ನಿಮಿಷದಾಗ ವೈರಲ್ ಆಗಿ ಹೋತು.

ಅದು ಯಾವುದಪಾ ಅಂದರ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವೆ ಜಗಳ ಆಗಿ, ಅದರಾಗ ಕಿರಿಯ ಅಧಿಕಾರಿ ಒಬ್ಬರು ರಾಜೀನಾಮೆ ಕೊಟ್ಟು, ಕಡಿಕೆ ರಾಜ್ಯ ಸರಕಾರ ಇಬ್ಬರನ್ನೂ ವರ್ಗಾವಣೆ ಮಾಡಿದ ಸುದ್ದಿ.

ಅದರಾಗ ಹಿರಿಯ ಅಧಿಕಾರಿ, ’ಇದರ ಹಿಂದೆ ದೊಡ್ಡ ಪಿತೂರಿ ಐತಿ. ರಿಯಲ್ ಎಸ್ಟೇಟ್ ಮಾಫಿಯಾ ಎಲ್ಲ ಇದಕ್ಕ ಕಾರಣ. ನಮ್ಮ ನಡುವಿನ ಭಿನ್ನಾಭಿಪ್ರಾಯ ಎಲ್ಲ ಸಣ್ಣದು ಆಷ್ಟ. ಅದನ್ನ ನೆವ ಮಾಡಿಕೊಂಡು ನಮ್ಮನ್ನ ಇಲ್ಲಿಂದ ಹೊರಗ ಹಾಕಿದರು’ ಅನ್ನೋ ಅರ್ಥ ಬಾರೋ ಹಂಗ ಪ್ರತಿಕ್ರಿಯೆ ಕೊಟ್ಟರು.

ಅಲ್ಲಿಗೆ ಆ ಕತಿ ಮುಗೀತು. ಆದರ ಅದರಗಿಂತ ಕುತೂಹಲಕಾರಿಯಾಗಿದ್ದು ಯಾವುದು ಅಂದರ ಈ ವಿಷಯಕ್ಕ ಸಂಬಂಧ ಪಡದೇ ಇರುವ ಒಬ್ಬ ಐಪಿಎಸ್ಸು ಅಧಿಕಾರಿ ತಮ್ಮ ಫೇಸ್ಬುಕ್ ಗೋಡೆ ಮೇಲೆ ಒಂದು ಬರಹ ಬರದು ಹಾಕಿದರು. ಅದರಾಗ ಅವರು ಏನು ಹೇಳಿದರು ಅಂದರ ಕೆಲವು ಅಧಿಕಾರಿಗಳು ತಾವು ಸಿಂಗಮ್, ಸಿಂಹಿಣಿ ಅಂತ ಎಲ್ಲಾ ಪ್ರಚಾರ ಮಾಡಿಕೊಳತಾರ. ಇದು ಸರಿಯಲ್ಲ. ತಮ್ಮ ಕೆಲಸ ತಾವು ಸುಮ್ಮನೇ ಮಾಡಬೇಕು, ರಾಜಕೀಯದಿಂದ ಅವರು ದೂರ ಇರಬೇಕು, ಒಳ್ಳೆ ಕೆಲಸ ಮಾಡಿದರ ತಮ್ಮ ತಂಡಕ್ಕೆ ಅದರ ಶ್ರೇಯಸ್ಸು ಕೊಡಬೇಕು, ಕೆಟ್ಟ ಕೆಲಸ ಮಾಡಿದರ ಅದರ ತಪ್ಪು ಹೊರಲಿಕ್ಕೆ ತಯಾರು ಇರಬೇಕು, ಅನ್ನುವ ಮಾತು ಹೇಳಿದರು. ಮಜಾ ಅಂದರ ಈ ಅಧಿಕಾರಿ ಹುಬ್ಬಳ್ಳಿ- ಬೆಳಗಾವಿಯೊಳಗ ಕೆಲಸ ಮಾಡಿದಾಗ ಇದೆ ರೀತಿಯ ಮಾಧ್ಯಮ ಪ್ರಚಾರದ ಅನುಕೂಲ ಪಡೆದುಕೊಂಡಿದ್ರು. ಆ ಮಾತು ಬ್ಯಾರೆ.

ಇಲ್ಲಿ ಮುಖ್ಯವಾದ ವಿಷಯ ಏನು ಅಂದರ ನಮ್ಮ ಭವ್ಯ ಭಾರತದ ಮಾನ್ಯ ಮತದಾರ ಬಂಧುಗಳಿಗೆ ನಮ್ಮ ಘನ ಸರಕಾರದ ಒಳಗ ಯಾರಿಗೆ ಯಾವ ಕೆಲಸ, ಯಾವ ಜವಾಬುದಾರಿ ಅನ್ನೋದು ಸರಿಯಾಗಿ ಗೊತ್ತಿಲ್ಲ. ರಾಜಕಾರಣಿಯ ಕೆಲಸ ಏನು, ಅಧಿಕಾರಿಗಳ ಕೆಲಸ ಏನು ಅನ್ನೋದು ಗೊತ್ತಿಲ್ಲ.

PC : Wikipedia, (ಪ್ರತಾಪ್ ಸಿಂಗ್ ಖೈರೋಂ)

ಇದರ ಬಗ್ಗೆ ಒಂದು ರಸವತ್ತಾದ ಕತೆ ಇದೆ. ಪ್ರತಾಪ್ ಸಿಂಗ್ ಖೈರೋಂ ಅವರು 50ನೇ ದಶಕದೊಳಗ ಪಂಜಾಬ್‌ನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆಗ ಒಬ್ಬ ದಕ್ಷಿಣ ಭಾರತ ಮೂಲದ ಐಎಎಸ್ ಅಧಿಕಾರಿ ಪಂಜಾಬಿನ ಮುಖ್ಯ ಕಾರ್ಯದರ್ಶಿ ಆಗಿದ್ದರು. ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿಯನ್ನು ಕೇಳಿದರಂತ – ಅಲ್ರೀ, ನಿಮ್ಮ ಕೆಲಸ ಏನು, ನನ್ನ ಕೆಲಸ ಏನು? ಅಂತ. ಆಗ ಆ ಐಎಎಸ್ ಅಧಿಕಾರಿ ಸರ್, ನಿಮ್ಮ ಕೆಲಸ ಸರಕಾರದ ಕಾನೂನು, ನೀತಿನಿಯಮ ರೂಪಿಸುವುದು. ನನ್ನ ಕೆಲಸ ದಿನನಿತ್ಯದ ಆಡಳಿತ ನಿರ್ವಹಣೆ ಮಾಡೋದು, ಅಂತ. ಹೌದಾ, ಹಂಗಾರ ನಾಳೆಯಿಂದ ನನ್ನ ಕೆಲಸ ನೀವು ಮಾಡ್ರಿ, ನಿಮ್ಮ ಕೆಲಸ ನಾನು ಮಾಡತೆನಿ ಅಂತ ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಹೇಳಿದರಂತ.

ಖೈರೋಂ ಅವರು ಪ್ರಾಮಾಣಿಕರು, ಸರಳ ಮನುಷ್ಯರು. ಹಿಂಗಾಗಿ ಅವರು ಅಧಿಕಾರಿನ ಕರೆದು ಮಾತಾಡಿದರು. ಬ್ಯಾರೆ ರಾಜಕಾರಣಿಗಳು ಸಹಿತ ಇದೆ ಕೆಲಸ ಮಾಡ್ತಾ ಇದಾರೆ, ಅದರ ಅದನ್ನ ಮುಕ್ತವಾಗಿ ಒಪ್ಪಿಕೊಳ್ಳೋದಿಲ್ಲ.

ಈಗ ಮತ್ತ ನಮ್ಮ ರಾಜ್ಯದ ಅಧಿಕಾರಿಗಳಿಗೆ ಬರೋಣ. ಮೈಸೂರಿನ ಇಬ್ಬರು ಅಧಿಕಾರಿಗಳು ಜಗಳ ಅಡಿದರ, ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರದ ಜಿಲ್ಲಾಧಿಕಾರಿಗೆ ಭಿನ್ನಾಭಿಪ್ರಾಯ ಬಂದರ, ಅವರ ಮ್ಯಾಲೆ ಒಬ್ಬ ಪ್ರಾದೇಶಿಕ ಆಯುಕ್ತ ಅಂತ ಒಬ್ಬ ಅಧಿಕಾರಿ ಇದ್ದ ಇರತಾನ. ಆ ಪುಣ್ಯಾತ್ಮ ಈ ಅಧಿಕಾರಿಗಳ ಮೇಲೆ ನಿಗರಾಣಿ ವಹಿಸಿ ಅವರು ಸರಿಯಾಗಿ ಕೆಲಸ ಮಾಡುವ ಹಂಗ ಯಾಕ್ ಮಾಡಲಿಲ್ಲ ಅಂತ ಯಾವ ಮಾಧ್ಯಮದವರು ಕೇಳಲಿಲ್ಲ, ರಾಜಕಾರಣಿನು ಕೇಳಲಿಲ್ಲ.

ಯಾಕೆ ಅಂದ್ರ ಮಾಧ್ಯಮದವರಿಗೆ ಸಹಿತ ಯಾರದ್ದು ಯಾವ ಕೆಲಸ ಅಂತ ಹೇಳಿ ಸರಿಯಾಗಿ ಗೊತ್ತಿಲ್ಲ. ಅಥವಾ ಗೊತ್ತಿದರೂ, ಟಿಆರ್‌ಪಿ ಆಸೆಗೆ, ಮಾರುಕಟ್ಟೆ, ಜಾಹೀರಾತು ಆಸೆಗೆ, ಅವರು ಬಹು ಚರ್ಚಿತ ವಿಷಯಗಳನ್ನ ತೋರಿಸ್ತಾರ ಹೊರತು, ಕೇಳಲೇಬೇಕಾದ ಪ್ರಶ್ನೆ ಕೇಳಿ, ಸರಿಯಾದ ಉತ್ತರ ಹುಡುಕುವ ಪ್ರಯತ್ನ ಮಾಡೋದಿಲ್ಲ.

ಈ ರೀತಿಯ ಸುದ್ದಿ ಅಥವಾ ಚರ್ಚೆ, ಜನರಿಗೆ ಬೇಕೋ ಬೇಡವೋ? ಪ್ರತಿ ದಿನ ಮುಂಜಾನೆದೊಳಗಿನ ಸುದ್ದಿಯ ಹೆಡ್‌ಲೈನ್ ಓದಿ ಪೇಪರ್ ಮುಚ್ಚಿ ಇಡುವ ನಮ್ಮ ಜನರಿಗೆ ಸುದ್ದಿಯ ಅಳಕ್ಕೆ ಹೋಗೋದು ಬೇಕೋ ಬ್ಯಾಡವೋ?

ಇದರಾಗ ನಾಯಕರ ತಪ್ಪೂ ಐತಿ. ಈಗಿನ ನಾಯಕರು ಮುಂದಿನ ಚುನಾವಣೆ ಬಗ್ಗೆ ಮಾತ್ರ ವಿಚಾರ ಮಾಡತಾರ ಹೊರತು ಅವರಿಗೆ ಬೇರೆ ಮುಂದಾಲೋಚನೆ, ದೂರದೃಷ್ಟಿತ್ವ ಅನ್ನೋದು ಇರೋದಿಲ್ಲ.

ಬಹಳ ಹಿಂದೆ ರಾಮಚಂದ್ರಪ್ಪ ಅಂತ ಬೆಂಗಳೂರಿನ ಮೇಯರ್ ಇದ್ದರು. ಅವರು ಜಾಸ್ತಿ ಓದಿರಲಿಲ್ಲ, ಆದ್ದರಿಂದ ಅವರನ್ನ ಬೆಂಗಳೂರಿನ ಕೆಲವು ಪತ್ರಕರ್ತರು ಮೇಯರ್ ಮುತ್ತಣ್ಣ ಅಂತ ಕರಿತಿದ್ದರು. ಅವರು ಬಹಳ ಸರಳ ಭಾಷೆಯೊಳಗ ಭಾಷಣ ಮಾಡ್ತಿದ್ದರು. ಪಾಲಿಕೆಯ ಆಯುಕ್ತರು ಬದಲಾವಣೆ ಆದಾಗ ಅವರು ಒಂದು ಸ್ವಾಗತ ಭಾಷಣ ಮಾಡಿದ್ದರು. ಅದರಲ್ಲಿ ಒಂದು ಮರೆಯಲಾರದಂತಹ ಮಾತು ಹೇಳಿದರು.

’ನೋಡಿ ಸ್ವಾಮಿ, ನಮ್ಮ ಅಧಿಕಾರಿಗಳು ಕುದುರೆಗಳು ಇದ್ದಂತೆ. ಅವರು ಯಾವ ದಿಕ್ಕಿನಲ್ಲಿ ಓಡುತ್ತಾರೆ ಅನ್ನುವುದು ಅವರನ್ನು ಓಡಿಸುವ ಸವಾರರ ಮೇಲೆ ಇರುತ್ತದೆ. ಆಯುಕ್ತರು ಸವಾರರು ಇದ್ದಂತೆ. ನೀವು ಒಳ್ಳೆಯವರಾದರೆ, ಅವರು ಒಳ್ಳೆಯವರು’, ಅಂತ ಹೇಳಿ ಮಾತು ಮುಗಿಸಿದ್ದರು.

ಈ ರೀತಿಯ ಸ್ಪಷ್ಟತೆ ಈಗಿನ ನಾಯಕರಲ್ಲಿ ಬಂದರೆ, ಅದು ಜನರಿಗೆ ತಿಳಿದರೆ, ಆಡಳಿತ ಅನ್ನುವುದು ಸರಿಯಾದ ದಾರಿಯಲ್ಲಿ ನಡೆದೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...