Homeಮುಖಪುಟನೋಟು ಬಂದಿಯಿಂದ ರೈತರ ಜೀವನ ಬರ್ಬಾದ್: ಒಪ್ಪಿಕೊಂಡ ಮೋದಿ ಸರ್ಕಾರ

ನೋಟು ಬಂದಿಯಿಂದ ರೈತರ ಜೀವನ ಬರ್ಬಾದ್: ಒಪ್ಪಿಕೊಂಡ ಮೋದಿ ಸರ್ಕಾರ

ನೋಟು ಬಂದಿ ತರುವಾಯ ಲಕ್ಷಾಂತರ ರೈತರು ಸಂಕಷ್ಟ ಅನುಭವಿಸಿದ್ದಾರೆ ಎಂದು ಮೋದಿ ಸರ್ಕಾರದ ಕೃಷಿ ಇಲಾಖೆ ಒಪ್ಪಿಕೊಂಡಿದೆ!!

- Advertisement -
- Advertisement -

| ಕೆ.ಪಿ ಸುರೇಶ್ |

ನೋಟು ಬಂದಿ ತರುವಾಯ ಲಕ್ಷಾಂತರ ರೈತರು ಸಂಕಷ್ಟ ಅನುಭವಿಸಿದ್ದಾರೆ ಎಂದು ಮೋದಿ ಸರ್ಕಾರದ ಕೃಷಿ ಇಲಾಖೆ ಒಪ್ಪಿಕೊಂಡಿದೆ!! ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿಗೆ ನೀಡಿದ ವರದಿಯಲ್ಲಿ ಕೃಷಿ ಇಲಾಖೆ ಈ ತಪ್ಪೊಪ್ಪಿಗೆ ವರದಿ ನೀಡಿದೆ. ವ್ಯಂಗ್ಯವೆಂದರೆ ಪ್ರಧಾನ ಚೌಕೀದಾರರು “ಕಾಳ ಧನ ಹತ್ತಿಕ್ಕಲು ನೋಟು ಬಂದಿಯಂಥಾ ಕಹಿ ಗುಳಿಗೆ ಪ್ರಯೋಗಿಸಿದೆ” ಎಂದು ಬೊಗಳೆ ಭಾಷಣ ಮಾಡುತ್ತಿದ್ದ ದಿನವೇ ಈ ವರದಿ ಬಹಿರಂಗವಾಗಿದೆ. ಈ ವರದಿ ಇಂದಿನದ್ದಲ್ಲ!! ಕಳೆದ ವರ್ಷದ ನವಂಬರ್ 20ರದ್ದು!! ಮೂರು ರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ಮೋದಿ ಬೂಸಿ ಭಾಷಣ ಮಾಡುವಾಗ ಈ ವರದಿ ಬಂದಿದ್ದು ಗಮನಾರ್ಹ.

ರೈತರು ಮುಂಗಾರು ಬೆಳೆ ಮಾರಿ ಹಿಂಗಾರು ಬೆಳೆಗೆ ತಯಾರಿ ನಡೆಸುವ ಸಂಕ್ರಮಣ ಘಟ್ಟದಲ್ಲಿ ಬಿದ್ದ ಈ ಹೊಡೆತದಿಂದಾಗಿ ನಗದು ಅಭಾವ ಅನುಭವಿಸಿದ ರೈತರು ಅಪಾರ ಸಂಕಷ್ಟ ಅನುಭವಿಸಬೇಕಾಯಿತು. ದೇಶದ 27 ಕೋಟಿ ರೈತಾಪಿ ವರ್ಗ ಬಹುತೇಕ ನಗದು ಮೂಲಕವೇ ವ್ಯವಹರಿಸುತ್ತಿದ್ದು ಬೀಜ, ಗೊಬ್ಬರ ಕೊಳ್ಳುವುದರಿಂದ ಹಿಡಿದು ಬೇಸಾಯದ ಎಲ್ಲಾ ಕಾರ್ಯಗಳಲ್ಲೂ ತೊಂದರೆ ಅನುಭವಿಸಿದರು. ದೊಡ್ಡ ಜಮೀನುದಾರರೂ ಕೂಲಿ ಸಂಬಳ ಕೊಡಲು ನಗದು ಅಭಾವ ಅನುಭವಿಸಿದರು.

ರಾಷ್ಟ್ರೀಯ ಬೀಜ ನಿಗಮ 1.38 ಲಕ್ಷ ಕ್ವಿಂಟಾಲುಗಳಷ್ಟು ಬಿತ್ತನೆ ಗೋಧಿ ಬೀಜ ಮಾರಾಟ ಮಾಡಲಾರದೇ ಸೋತಿತು. ಹಳೇ ನೋಟು ಬಳಸಬಹುದು ಎಂದು ಸರ್ಕಾರ ಹೇಳಿದ ಮೇಲೂ ಮಾರಾಟ ಹೆಚ್ಚಲಿಲ್ಲ.

ಬೇಸಾಯ ಕುಂಟಿದ ಬಗ್ಗೆ ಕೃಷಿ ಇಲಾಖೆ ವರದಿಯಲ್ಲಿ ಹೇಳಿದೆ. ಆದರೆ ಇದರ ಸಾಮಾಜಿಕ ಪರಿಣಾಮದ ಬಗ್ಗೆ ಅದು ಹೇಳಿಲ್ಲ. ಅತ್ತ ಕಾರ್ಮಿಕ ಸಚಿವಾಲಯ ನೋಟು ಬಂದಿಯಿಂದ ಕಷ್ಟ-ನಷ್ಟ ಉಂಟಾಗಲಿಲ್ಲ ಎಂದು ಹೇಳಿ ಈ ಸಮಿತಿಯಿಂದ ಉಗಿಸಿಕೊಂಡಿದೆ.

ಇದನ್ನು ಓದಿ: ನೋಟು ರದ್ದತಿ : ಬಿಜೆಪಿಯ `ಕ್ಯಾಶ್ ಲೆಸ್’ ಸುಳ್ಳೂ ಇದೀಗ ಬಯಲಾಯ್ತು

ಕೃಷಿ ಕ್ಷೇತ್ರ ಸತತವಾಗಿ ಒಂದೆರಡು ದಶಕಗಳಿಂದ ಕುಂಟುತ್ತಿರುವುದು ಸರ್ಕಾರಕ್ಕೆ ಗೊತ್ತು. ಅಂಥಾ ಸಂದರ್ಭದಲ್ಲಿ ಈ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಿದ ಮೋದಿ ಇಂದಿಗೂ ಈ ಪ್ರಮಾದವನ್ನು ಒಪ್ಪಿಕೊಳ್ಳುತ್ತಿಲ್ಲ. ಗಾಯದ ಮೇಲೆ ಉಪ್ಪು ಸವರಿದ ಹಾಗೆ ರೈತರ ಆದಾಯ ದ್ವಿಗುಣ ಎಂಬ ಬೂಸಿಯನ್ನು ದೇಶದ ಮೇಲೆ ಹೇರುತ್ತಾ ಮೊನ್ನೆ ಮೊನ್ನೆ ವರೆಗೂ ಓಡಾಡುತ್ತಿದ್ದ ಈ ಬೊಗಳೆ ಪ್ರಧಾನಿ ಲೋಕಸಭಾ ಚುನಾವಣೆಯಲ್ಲಿ ಈ ಯಾವ ವಿಷಯವನ್ನೂ ಪ್ರಸ್ತಾಪಿಸದೇ ಕೂತಿದ್ದಾರೆ.

ನಮ್ಮ ದುರಂತವೆಂದರೆ ಎದುರಾಳಿ ಪಕ್ಷಗಳೂ ನಿರುದ್ಯೋಗ, ರೈತ ಸಂಕಷ್ಟದಂಥಾ ವಿಷಯಗಳನ್ನು ಮುಂದೊತ್ತದೇ ಮೋದಿಯೊಬ್ಬರನ್ನೇ ಟಾರ್ಗೆಟ್ ಮಾಡುವ ರಾಜಕೀಯ ಮಾಡುತ್ತಿದ್ದಾರೆ. ಅಷ್ಟೇಕೆ ಮೋದಿ ಸೃಷ್ಟಿಸಿದ ಮರಣಾಂತಿಕ ಗಾಯಗಳಿಗೆ ಪರಿಹಾರ ಏನು ಎಂಬ ನಕಾಶೆಯೂ ಇವರಲ್ಲಿ ಇಲ್ಲ. ಮೇವಿಲ್ಲದ ಹಸುಗಳು ಕೂತಲ್ಲೇ ತೂಕಡಿಸಿ ಒದ್ದಾಡಿ ಸಾಯುತ್ತವೆ. ಪ್ರಾಣಿ ಸಹಜ ಅಸಹಾಯಕತೆ ಅದು. ಒಂದು ವರ್ಗದ ರೈತರು ಈ ಅಸಹಾಯಕತೆಯಲ್ಲಿದ್ದರೆ, ಇನ್ನೊಂದು ವರ್ಗ ಇರುವ ರಾಜಕೀಯ ಪಕ್ಷಗಳ ಮೇಲಾಟವನ್ನೇ ಸಂಭ್ರಮಿಸುತ್ತಾ ಕೂತಿರುವಂತಿದೆ.

ಜಿಂಕೆಯೊಂದು ಹುಲಿಗೆ ಬಲಿಯಾದರೆ ಹಿಂಡಿನ ಉಳಿದ ಜಿಂಕೆಗಳು ಹೋರಾಡಿದ್ದಿಲ್ಲ. ಒಮ್ಮೆ ನೋಡಿ ಮತ್ತೆ ಮೇಯತೊಡಗುತ್ತವೆ. ರೈತರೂ ಇಂಥಾ ಪಶು ಸಹಜ ಮಟ್ಟಕ್ಕೆ ಬಂದಿದ್ದಾರೆ. ಈ ರೂಪಾಂತರಕ್ಕೆ ಮೋದಿಯ ಕೊಡುಗೆ ದೊಡ್ಡದು!

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ನೋಟು ರದ್ದತಿಯ ಸಂದರ್ಭದಲ್ಲಿ 35-40% ಕಮೀಷನ್‍ ಪಡೆದ ಅಮಿತ್‍ಷಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...