Homeನಿಜವೋ ಸುಳ್ಳೋಮೋದಿಯವರು ಮೋಡದ ಮೇಲೆ ಪಾಕಿಸ್ತಾನಕ್ಕೆ ಹೋಗಿ ಬಂದ ಅಪೂರ್ವ ಕಥಾನಕ

ಮೋದಿಯವರು ಮೋಡದ ಮೇಲೆ ಪಾಕಿಸ್ತಾನಕ್ಕೆ ಹೋಗಿ ಬಂದ ಅಪೂರ್ವ ಕಥಾನಕ

ಪಾಕಿಸ್ತಾನದ ಮೇಲೆ ನಡೆಸಿದ ‘ವಾಯುದಾಳಿ’ ಮೋದಿ ಹೇಳಿಕೆಗೆ ಸೃಜನಾತ್ಮಕ ಪ್ರತಿಕ್ರಿಯೆಗಳು

- Advertisement -
- Advertisement -

ನಿಮಗೆ ಗೊತ್ತಿರಬೇಕಾದ ಎಲ್ಲಾ ಮಾಹಿತಿಗಳು

ನ್ಯೂಸ್ ನೇಷನ್ ಎಂಬ ಟಿವಿ ಚಾನೆಲ್‍ಗೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ನೀಡಿದ ಸಂದರ್ಶನವನ್ನು ಇನ್ನಾವುದಾದರೂ ಸಂದರ್ಶನದ ಜೊತೆ ಹೋಲಿಸಬೇಕೆಂದರೆ, ಅದನ್ನು 2018ರ ಜನವರಿ 22ರಂದು ಜೀ ಟಿವಿಗೆ ನೀಡಿದ ಸಂದರ್ಶನಕ್ಕೆ ಮಾತ್ರ ಹೋಲಿಸಬಹುದು. ಏಕೆಂದರೆ, ಅದರಲ್ಲಿ ಅವರ ಪ್ರಸಿದ್ಧ ‘ಪಕೋಡಾ ಹೇಳಿಕೆ’ ಹೊರಬಂದಿತ್ತು. ಇದೀಗ ನ್ಯೂಸ್ ನೇಷನ್‍ನಲ್ಲಿ ಅವರು ಪಾಕಿಸ್ತಾನದ ಮೇಲೆ ನಡೆಸಿದ ‘ವಾಯುದಾಳಿ’ಯ ಕುರಿತು ಮಾತನಾಡಿದ್ದಾರೆ. ಈ ಸುದ್ದಿ ಪ್ರಸಾರವಾದ ನಂತರ ಇಲ್ಲಿಯವರೆಗೂ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಎಣೆಯೇ ಇಲ್ಲ. ದೇಶದ ಬೇರೆ ಬೇರೆ ಭಾಗಗಳ ಹಲವು ಜನರ ಸೃಜನಶೀಲತೆಯ ಅಭಿವ್ಯಕ್ತಿಯಾಗಿಯೂ ಅದನ್ನು ನೋಡಬಹುದಾಗಿದೆ. ಅದರ ಸಂಪೂರ್ಣ ವಿವರವನ್ನು ಇಲ್ಲಿ ಕೊಡಲಾಗಿದೆ.

ಮೊದಲಿಗೆ, ಮೋದಿಯವರು ಹೇಳಿದ್ದೇನು ನೋಡೋಣ.

ಇದೇ ಸಂದರ್ಭದಲ್ಲಿ ಮೋದಿಯವರ ಬಯೋಗ್ಯಾಸ್‍ಗೆ ಸಂಬಂಧಿಸಿದ ಇನ್ನೊಂದು ಹೇಳಿಕೆಯನ್ನೂ ಹಲವರು ನೆನಪಿಸಿಕೊಂಡಿದ್ದಾರೆ.

ಉದಾಹರಣೆಗೆ ವಿಜಯ ಕರ್ನಾಟಕದ ಅಂಕಣಕಾರರಾಗಿದ್ದ ಚಿಂತಕ ಕೆ.ಪಿ.ಸುರೇಶ್‍ರವರು ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

https://m.facebook.com/story.php?story_fbid=1474653089338603&id=100003817783883

ಇದಕ್ಕೆ ಸಂಬಂಧಿಸಿದ ಹಳೆಯ ಕಾರ್ಟೂನ್ ಸಹಾ ಇಲ್ಲಿದೆ ನೋಡಿ

ಉದ್ಯಮಿ ರಾಜಾರಾಂ ತಲ್ಲೂರು ಅವರು ಮೋದಿಯವರ ಎಂಟೈಲ್ ಪೊಲಿಟಿಕಲ್ ಸೈನ್ಸ್ ಡಿಗ್ರಿಯನ್ನು ತಾವು ಪಡೆದುಕೊಂಡಿರದೇ ಇರುವುದಕ್ಕೆ ‘ಬೇಸರ ವ್ಯಕ್ತಪಡಿಸಿ’ ಈ ಪೋಸ್ಟ್ ಹಾಕಿದ್ದಾರೆ.

ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‍ನ ಮುಖಂಡ ಓಮರ್ ಅಬ್ದುಲ್ಲಾರು ಟ್ವೀಟಿಸಿದ್ದು ಹೀಗೆ.

ವಾಯುಪಡೆಯಲ್ಲಿದ್ದ ಅಧಿಕಾರಿ (ಈಗ ಮೋದಿಯವರ ಟೀಕಾಕಾರ) ರಾಜೀವ್ ತ್ಯಾಗಿಯವರಿಗೆ ತುಂಬಾ ಸಿಟ್ಟು ಬಂದಿದ್ದರೂ, ವೈಜ್ಞಾನಿಕವಾಗಿ ಮೋಡಗಳಿಗೂ ವಾಯುದಾಳಿಗೂ ಇರುವ ಸಂಬಂಧದ ಬಗ್ಗೆ ವಿವರಿಸಿದ್ದಾರೆ. ಅವರ ಪ್ರಕಾರ ಬೇರೆ ಬೇರೆ ಬಗೆಯ ಮೋಡಗಳಿರುತ್ತವೆ ಮತ್ತು ಆ ಮೋಡಗಳಿದ್ದಾಗ ಒಂದೋ ಅವು ಏನೂ ಸಮಸ್ಯೆ ಮಾಡುವುದಿಲ್ಲ, ಇಲ್ಲವೇ ಶತ್ರುಪಡೆಯ ರಾಡಾರ್‍ನ ಅಗತ್ಯವೇ ಇಲ್ಲದೇ ಅವೇ ಧ್ವಂಸಗೊಳ್ಳುತ್ತವೆ. ಇವೆಲ್ಲಾ ವಾಯುಪಡೆಗಳಿಗೆ ಗೊತ್ತಿರುವ ಸಂಗತಿ. ಆದರೆ, ಇದಕ್ಕೆ ವಿರುದ್ಧವಾದ ಸಂಗತಿಯನ್ನು ಒಬ್ಬ ಅನಕ್ಷರಸ್ಥನಿಂದ ಕೇಳಬೇಕಾದ ದುರ್ಗತಿ ವಾಯುಪಡೆಗೆ ಬಂದಿತಲ್ಲಾ ಎಂದು ಕಿಡಿಕಾರಿದ್ದಾರೆ.

https://m.facebook.com/story.php?story_fbid=10161734759650176&id=817450175

ವೈದ್ಯರಾದ ಡಾ.ಅಶೋಕ್ ಕೆ.ಆರ್ ಅವರು ಮೊದಲು ಇದು ಯಾರೋ ಸುಳ್ಳೇ ಸೃಷ್ಟಿ ಮಾಡಿರುವುದು ಎಂದುಕೊಂಡರಂತೆ. ನಂತರ ನಿಜ ಎಂದು ಗೊತ್ತಾಯಿತು ಎಂದಿದ್ದಾರೆ. ಅವರಿಗೆ ಪ್ರತಿಕ್ರಿಯಿಸಿರುವ ಡಾ.ಸುಶಿ ಕಾಡನಕುಪ್ಪೆ ಸಹಾ ಅದೇ ಅಭಿಪ್ರಾಯವನ್ನು ಕಮೆಂಟಿಸಿದ್ದಾರೆ.

ಹಾಗೆಯೇ ಇನ್ನೊಬ್ಬ ನೆಟ್ಟಿಗರು ಹೀಗೆ ಹೇಳುತ್ತಾರೆ.

‘ಇದರಲ್ಲಿ ತಮಾಶೆ ಏನೂ ಇಲ್ಲ. ನಮ್ಮ ಮೋದಿಜಿಗೆ ಮತ್ತೆ ಅಧಿಕಾರ ಸಿಕ್ಕರೆ ಸೂರ್ಯನಿಗೂ ಮನುಷ್ಯರನ್ನು ಕಳಿಸುತ್ತಾರೆ. ಮೊದಲ ಬಾರಿ ಸೂರ್ಯಯಾನಕ್ಕೆ ತನ್ನ ಶಿಷ್ಯಂದಿರಾದ ಸಂಬಿತ್ ಪಾತ್ರ ಮತ್ತು ತೇಜಸ್ವಿ ಸೂರ್ಯಗಳನ್ನು ಕಳಿಸಬಹುದು. ಪಬ್ಲಿಸಿಟಿ ಜಾಸ್ತಿ ಸಿಗೋದರಿಂದ ತಾನೇ ಹೋದರೂ ಹೋಗಬಹುದು.’

ಎಲ್ಲಕ್ಕಿಂತ ಸತೀಶ್ ಆಚಾರ್ಯ ಅವರ ಕಾರ್ಟೂನು ಮೋದಿಯವರನ್ನು ವ್ಯಂಗ್ಯ ಮಾಡುವುದರಲ್ಲಿ ಸಾಕಷ್ಟು ಮುಂದೆ ಹೋಗಿದೆ. ಇಸ್ರೋದ ವಿಜ್ಞಾನಿಗಳಿಗೆ ಸೂರ್ಯಯಾನಕ್ಕೆ ತಯಾರಿ ಮಾಡಲು ಸೂಚಿಸುವ ಮೋದಿ, ನಾವು ಸೂರ್ಯನಲ್ಲಿಗೆ ರಾತ್ರಿ ಹೋದರಾಯಿತು ಎನ್ನುತ್ತಿದ್ದಾರೆ.

ಇನ್ನು ಚಂದ್ರಯಾನವನ್ನೂ ನೆಟ್ಟಿಗರು ಬಿಟ್ಟಿಲ್ಲ. ಚಂದ್ರನ ಮೇಲೆ ಲ್ಯಾಂಡ್ ಆಗಲು ಕಡಿಮೆ ಜಾಗವಿದೆ ಎಂದು ಹೇಳುವ ವಿಜ್ಞಾನಿಗಳಿಗೆ, ‘ಹುಣ್ಣಿಮೆಯ ದಿನ ಹೋದರೆ ಚಂದ್ರ ದೊಡ್ಡದಾಗಿರುತ್ತಾನೆ’ ಎಂಬ ಸಲಹೆ ನೀಡುತ್ತಾರಂತೆ.

ಇದಲ್ಲದೇ ಮತ್ತೊಂದು ಪೋಸ್ಟ್ ಹೀಗೆ ಹೇಳುತ್ತದೆ.

‘ಮೋದಿಯವರು ವಿಮಾನಗಳಿಗೆ ರಿವರ್ಸ್ ಗೇರ್‍ನಲ್ಲಿ ಹೋಗಲು ಸೂಚಿಸಿದ್ದರಂತೆ. ಅದರಿಂದ ಪಾಕಿಸ್ತಾನಕ್ಕೆ ವಿಮಾನಗಳು ಬರುತ್ತಿವೆಯಾ, ಹೋಗುತ್ತಿವೆಯಾ ಎಂದು ಗೊತ್ತಾಗಲಿಲ್ಲ’

ಇನ್ನು ಮೋಡವೆಂದರೆ, ರಾಡಾರ್ ಎಂದರೆ ಮೋದಿಯವರು ಏನು ತಿಳಿದುಕೊಂಡಿರಬಹುದು ಎಂಬ ಕುರಿತೂ ಹಲವು ಕಾರ್ಟೂನ್‍ಗಳು ಬಂದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...