Homeನಿಜವೋ ಸುಳ್ಳೋಮೋದಿಯವರು ಮೋಡದ ಮೇಲೆ ಪಾಕಿಸ್ತಾನಕ್ಕೆ ಹೋಗಿ ಬಂದ ಅಪೂರ್ವ ಕಥಾನಕ

ಮೋದಿಯವರು ಮೋಡದ ಮೇಲೆ ಪಾಕಿಸ್ತಾನಕ್ಕೆ ಹೋಗಿ ಬಂದ ಅಪೂರ್ವ ಕಥಾನಕ

ಪಾಕಿಸ್ತಾನದ ಮೇಲೆ ನಡೆಸಿದ ‘ವಾಯುದಾಳಿ’ ಮೋದಿ ಹೇಳಿಕೆಗೆ ಸೃಜನಾತ್ಮಕ ಪ್ರತಿಕ್ರಿಯೆಗಳು

- Advertisement -
- Advertisement -

ನಿಮಗೆ ಗೊತ್ತಿರಬೇಕಾದ ಎಲ್ಲಾ ಮಾಹಿತಿಗಳು

ನ್ಯೂಸ್ ನೇಷನ್ ಎಂಬ ಟಿವಿ ಚಾನೆಲ್‍ಗೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ನೀಡಿದ ಸಂದರ್ಶನವನ್ನು ಇನ್ನಾವುದಾದರೂ ಸಂದರ್ಶನದ ಜೊತೆ ಹೋಲಿಸಬೇಕೆಂದರೆ, ಅದನ್ನು 2018ರ ಜನವರಿ 22ರಂದು ಜೀ ಟಿವಿಗೆ ನೀಡಿದ ಸಂದರ್ಶನಕ್ಕೆ ಮಾತ್ರ ಹೋಲಿಸಬಹುದು. ಏಕೆಂದರೆ, ಅದರಲ್ಲಿ ಅವರ ಪ್ರಸಿದ್ಧ ‘ಪಕೋಡಾ ಹೇಳಿಕೆ’ ಹೊರಬಂದಿತ್ತು. ಇದೀಗ ನ್ಯೂಸ್ ನೇಷನ್‍ನಲ್ಲಿ ಅವರು ಪಾಕಿಸ್ತಾನದ ಮೇಲೆ ನಡೆಸಿದ ‘ವಾಯುದಾಳಿ’ಯ ಕುರಿತು ಮಾತನಾಡಿದ್ದಾರೆ. ಈ ಸುದ್ದಿ ಪ್ರಸಾರವಾದ ನಂತರ ಇಲ್ಲಿಯವರೆಗೂ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಎಣೆಯೇ ಇಲ್ಲ. ದೇಶದ ಬೇರೆ ಬೇರೆ ಭಾಗಗಳ ಹಲವು ಜನರ ಸೃಜನಶೀಲತೆಯ ಅಭಿವ್ಯಕ್ತಿಯಾಗಿಯೂ ಅದನ್ನು ನೋಡಬಹುದಾಗಿದೆ. ಅದರ ಸಂಪೂರ್ಣ ವಿವರವನ್ನು ಇಲ್ಲಿ ಕೊಡಲಾಗಿದೆ.

ಮೊದಲಿಗೆ, ಮೋದಿಯವರು ಹೇಳಿದ್ದೇನು ನೋಡೋಣ.

ಇದೇ ಸಂದರ್ಭದಲ್ಲಿ ಮೋದಿಯವರ ಬಯೋಗ್ಯಾಸ್‍ಗೆ ಸಂಬಂಧಿಸಿದ ಇನ್ನೊಂದು ಹೇಳಿಕೆಯನ್ನೂ ಹಲವರು ನೆನಪಿಸಿಕೊಂಡಿದ್ದಾರೆ.

ಉದಾಹರಣೆಗೆ ವಿಜಯ ಕರ್ನಾಟಕದ ಅಂಕಣಕಾರರಾಗಿದ್ದ ಚಿಂತಕ ಕೆ.ಪಿ.ಸುರೇಶ್‍ರವರು ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

https://m.facebook.com/story.php?story_fbid=1474653089338603&id=100003817783883

ಇದಕ್ಕೆ ಸಂಬಂಧಿಸಿದ ಹಳೆಯ ಕಾರ್ಟೂನ್ ಸಹಾ ಇಲ್ಲಿದೆ ನೋಡಿ

ಉದ್ಯಮಿ ರಾಜಾರಾಂ ತಲ್ಲೂರು ಅವರು ಮೋದಿಯವರ ಎಂಟೈಲ್ ಪೊಲಿಟಿಕಲ್ ಸೈನ್ಸ್ ಡಿಗ್ರಿಯನ್ನು ತಾವು ಪಡೆದುಕೊಂಡಿರದೇ ಇರುವುದಕ್ಕೆ ‘ಬೇಸರ ವ್ಯಕ್ತಪಡಿಸಿ’ ಈ ಪೋಸ್ಟ್ ಹಾಕಿದ್ದಾರೆ.

ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‍ನ ಮುಖಂಡ ಓಮರ್ ಅಬ್ದುಲ್ಲಾರು ಟ್ವೀಟಿಸಿದ್ದು ಹೀಗೆ.

ವಾಯುಪಡೆಯಲ್ಲಿದ್ದ ಅಧಿಕಾರಿ (ಈಗ ಮೋದಿಯವರ ಟೀಕಾಕಾರ) ರಾಜೀವ್ ತ್ಯಾಗಿಯವರಿಗೆ ತುಂಬಾ ಸಿಟ್ಟು ಬಂದಿದ್ದರೂ, ವೈಜ್ಞಾನಿಕವಾಗಿ ಮೋಡಗಳಿಗೂ ವಾಯುದಾಳಿಗೂ ಇರುವ ಸಂಬಂಧದ ಬಗ್ಗೆ ವಿವರಿಸಿದ್ದಾರೆ. ಅವರ ಪ್ರಕಾರ ಬೇರೆ ಬೇರೆ ಬಗೆಯ ಮೋಡಗಳಿರುತ್ತವೆ ಮತ್ತು ಆ ಮೋಡಗಳಿದ್ದಾಗ ಒಂದೋ ಅವು ಏನೂ ಸಮಸ್ಯೆ ಮಾಡುವುದಿಲ್ಲ, ಇಲ್ಲವೇ ಶತ್ರುಪಡೆಯ ರಾಡಾರ್‍ನ ಅಗತ್ಯವೇ ಇಲ್ಲದೇ ಅವೇ ಧ್ವಂಸಗೊಳ್ಳುತ್ತವೆ. ಇವೆಲ್ಲಾ ವಾಯುಪಡೆಗಳಿಗೆ ಗೊತ್ತಿರುವ ಸಂಗತಿ. ಆದರೆ, ಇದಕ್ಕೆ ವಿರುದ್ಧವಾದ ಸಂಗತಿಯನ್ನು ಒಬ್ಬ ಅನಕ್ಷರಸ್ಥನಿಂದ ಕೇಳಬೇಕಾದ ದುರ್ಗತಿ ವಾಯುಪಡೆಗೆ ಬಂದಿತಲ್ಲಾ ಎಂದು ಕಿಡಿಕಾರಿದ್ದಾರೆ.

https://m.facebook.com/story.php?story_fbid=10161734759650176&id=817450175

ವೈದ್ಯರಾದ ಡಾ.ಅಶೋಕ್ ಕೆ.ಆರ್ ಅವರು ಮೊದಲು ಇದು ಯಾರೋ ಸುಳ್ಳೇ ಸೃಷ್ಟಿ ಮಾಡಿರುವುದು ಎಂದುಕೊಂಡರಂತೆ. ನಂತರ ನಿಜ ಎಂದು ಗೊತ್ತಾಯಿತು ಎಂದಿದ್ದಾರೆ. ಅವರಿಗೆ ಪ್ರತಿಕ್ರಿಯಿಸಿರುವ ಡಾ.ಸುಶಿ ಕಾಡನಕುಪ್ಪೆ ಸಹಾ ಅದೇ ಅಭಿಪ್ರಾಯವನ್ನು ಕಮೆಂಟಿಸಿದ್ದಾರೆ.

ಹಾಗೆಯೇ ಇನ್ನೊಬ್ಬ ನೆಟ್ಟಿಗರು ಹೀಗೆ ಹೇಳುತ್ತಾರೆ.

‘ಇದರಲ್ಲಿ ತಮಾಶೆ ಏನೂ ಇಲ್ಲ. ನಮ್ಮ ಮೋದಿಜಿಗೆ ಮತ್ತೆ ಅಧಿಕಾರ ಸಿಕ್ಕರೆ ಸೂರ್ಯನಿಗೂ ಮನುಷ್ಯರನ್ನು ಕಳಿಸುತ್ತಾರೆ. ಮೊದಲ ಬಾರಿ ಸೂರ್ಯಯಾನಕ್ಕೆ ತನ್ನ ಶಿಷ್ಯಂದಿರಾದ ಸಂಬಿತ್ ಪಾತ್ರ ಮತ್ತು ತೇಜಸ್ವಿ ಸೂರ್ಯಗಳನ್ನು ಕಳಿಸಬಹುದು. ಪಬ್ಲಿಸಿಟಿ ಜಾಸ್ತಿ ಸಿಗೋದರಿಂದ ತಾನೇ ಹೋದರೂ ಹೋಗಬಹುದು.’

ಎಲ್ಲಕ್ಕಿಂತ ಸತೀಶ್ ಆಚಾರ್ಯ ಅವರ ಕಾರ್ಟೂನು ಮೋದಿಯವರನ್ನು ವ್ಯಂಗ್ಯ ಮಾಡುವುದರಲ್ಲಿ ಸಾಕಷ್ಟು ಮುಂದೆ ಹೋಗಿದೆ. ಇಸ್ರೋದ ವಿಜ್ಞಾನಿಗಳಿಗೆ ಸೂರ್ಯಯಾನಕ್ಕೆ ತಯಾರಿ ಮಾಡಲು ಸೂಚಿಸುವ ಮೋದಿ, ನಾವು ಸೂರ್ಯನಲ್ಲಿಗೆ ರಾತ್ರಿ ಹೋದರಾಯಿತು ಎನ್ನುತ್ತಿದ್ದಾರೆ.

ಇನ್ನು ಚಂದ್ರಯಾನವನ್ನೂ ನೆಟ್ಟಿಗರು ಬಿಟ್ಟಿಲ್ಲ. ಚಂದ್ರನ ಮೇಲೆ ಲ್ಯಾಂಡ್ ಆಗಲು ಕಡಿಮೆ ಜಾಗವಿದೆ ಎಂದು ಹೇಳುವ ವಿಜ್ಞಾನಿಗಳಿಗೆ, ‘ಹುಣ್ಣಿಮೆಯ ದಿನ ಹೋದರೆ ಚಂದ್ರ ದೊಡ್ಡದಾಗಿರುತ್ತಾನೆ’ ಎಂಬ ಸಲಹೆ ನೀಡುತ್ತಾರಂತೆ.

ಇದಲ್ಲದೇ ಮತ್ತೊಂದು ಪೋಸ್ಟ್ ಹೀಗೆ ಹೇಳುತ್ತದೆ.

‘ಮೋದಿಯವರು ವಿಮಾನಗಳಿಗೆ ರಿವರ್ಸ್ ಗೇರ್‍ನಲ್ಲಿ ಹೋಗಲು ಸೂಚಿಸಿದ್ದರಂತೆ. ಅದರಿಂದ ಪಾಕಿಸ್ತಾನಕ್ಕೆ ವಿಮಾನಗಳು ಬರುತ್ತಿವೆಯಾ, ಹೋಗುತ್ತಿವೆಯಾ ಎಂದು ಗೊತ್ತಾಗಲಿಲ್ಲ’

ಇನ್ನು ಮೋಡವೆಂದರೆ, ರಾಡಾರ್ ಎಂದರೆ ಮೋದಿಯವರು ಏನು ತಿಳಿದುಕೊಂಡಿರಬಹುದು ಎಂಬ ಕುರಿತೂ ಹಲವು ಕಾರ್ಟೂನ್‍ಗಳು ಬಂದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...