Homeಮುಖಪುಟಅವಳ ಹಸಿವನ್ನು ಹಂಗಿಸಿದ ನಿಮಗೆ ನನ್ನ ಧಿಕ್ಕಾರ....!!

ಅವಳ ಹಸಿವನ್ನು ಹಂಗಿಸಿದ ನಿಮಗೆ ನನ್ನ ಧಿಕ್ಕಾರ….!!

ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು...

- Advertisement -
- Advertisement -

ಏನಿಲ್ಲ ಸಾರ್…
ಬರೀ Dolo 650.. ಕೊರೋನಾದವರಿಗೆ ಅದೇ ಸಾರ್….. ಹೀಗೆಂದು ತಿಂಗಳಿಂದೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾಧ್ಯಮದ ಮುಂದೆ ಬೋಲ್ಡ್ ಆಗಿ ಮಾತನಾಡಿದ ಆ ಹದಿ ಹರೆಯದ ಸಹೋದರಿಯ ಮಾತುಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುತ್ತಿವೆ.. ಆಕೆಯ ಮಾತುಗಳಿಗೆ ಮ್ಯೂಸಿಕ್ ಹಾಕಿ ರಿಮಿಕ್ಸ್ ಸಂಗೀತದಂತೆ ಮತ್ತೆ ವೈರಲ್ ಮಾಡಲಾಗುತ್ತಿದೆ..

ದುಡಿವ ಕೈಗಳಿಗೆ ಉದ್ಯೋಗವಿಲ್ಲದ್ದರ ಬಗ್ಗೆ, ಹಸಿದ ಹೊಟ್ಟೆಗಳಿಗೆ ಅನ್ನವಿಲ್ಲದ್ದರ ಬಗ್ಗೆ, ನಾಡ ಜನತೆಯ ಬೇನೆಗೆ ಸೂಕ್ತ ಔಷಧಿ ನೀಡಲಾಗದ ಷಂಡ ಪ್ರಭುತ್ವದ ವಿರುದ್ಧ ಆಕೆ ಮಾತನಾಡಿದ್ದಾಳೆ. ಆಕೆಗೆ ನಿಮ್ಮಂತಹ ಟಾಕು, ಟೀಕಿನ ಇಂಗ್ಲಿಷ್ ಮಿಶ್ರಿತ ಕನ್ನಡವನ್ನು ವಯ್ಯಾರದಿಂದ ಮಾತನಾಡಲು ಬಾರದಿರಬಹುದು. ಆಕೆ ತನ್ನ ಆಡುಭಾಷೆಯಲ್ಲೇ ಪ್ರಭುತ್ವದ ಕ್ರೌರ್ಯವನ್ನು ಪ್ರಶ್ನೆ ಮಾಡಿದ್ದಾಳೆ. ಆ ಮೂಲಕ ಆಕೆ ಸಮಸ್ತ ಅಸಹಾಯಕ ಕನ್ನಡಿಗರ ನೋವಿಗೆ ಧ್ವನಿಯಾಗಿದ್ದಾಳೆ.

ಆಕೆ ಆ ರೀತಿ ತನ್ನದೇ ದಾಟಿಯಲ್ಲಿ ತನ್ನ ಸಿಟ್ಟನ್ನು, ತನ್ನ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ಹೊರಗೆಡಹಿದ್ದಾಳೆ.. ನೀವು ಗೇಲಿ ಮಾಡಬೇಕಿದ್ದು ನನ್ನ ಆ ಸಹೋದರಿಯ ಗ್ರಾಮ್ಯ ಭಾಷೆಯನ್ನಲ್ಲ, ಅವಳ ಆಂಗಿಕ ಚಲನೆಯನ್ನಲ್ಲ… ಯಾವ ಪ್ರಭುತ್ವ, ಯಾವ ವ್ಯವಸ್ಥೆ ಆಕೆಯನ್ನು ಅಂತಹ ಮಾತುಗಳನ್ನಾಡಲು ಅಸಹಾಯಕಳಾಗಿಸಿತೋ ಆ ಪ್ರಭುತ್ವ , ಆ ವ್ಯವಸ್ಥೆಯನ್ನು ನೀವು ಗೇಲಿ ಮಾಡಬೇಕಿತ್ತು.

ಓರ್ವ ದುಷ್ಟ ರಾಜಕಾರಣಿಯನ್ನು ಗೇಲಿ ಮಾಡುವಂತೆ ನೀವು ಆ ಅಸಹಾಯಕ ಹೆಣ್ಮಗಳನ್ನು ಗೇಲಿ ಮಾಡುತ್ತಿದ್ದೀರಿ.. ಅದನ್ನು ಪ್ರಶ್ನಿಸಿದರೆ ಆಕೆಗೆ ಒಳ್ಳೆಯ ಪ್ರಚಾರ ಸಿಕ್ಕಿತಲ್ಲಾ ಎಂದು ಮತ್ತೆ ವ್ಯಂಗ್ಯವಾಡುತ್ತಿದ್ದೀರಿ.. ಆಕೆಯ ಪರವಾಗಿ ಧ್ವನಿಯೆತ್ತಲು ನ್ಯಾಯಾಂಗದಲ್ಲೋ, ಕಾರ್ಯಾಂಗದಲ್ಲೋ, ಶಾಸಕಾಂಗದಲ್ಲೋ ಯಾರೂ ಇಲ್ಲ ಎಂಬುವುದು ನಿಮ್ಮ ಈ ಧೈರ್ಯಕ್ಕೆ ಕಾರಣವಾಗಿದ್ದರೆ ಅವಳ ಪರವಾಗಿ ಧ್ವನಿಯೆತ್ತಲು ಮಾನವೀಯ ಸಂವೇದನೆಯಿರುವ ನಾವಿದ್ದೇವೆ.

ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ನೀವು ವ್ಯಂಗ್ಯ ಮಾಡಿದ್ದು ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು…

ಹೃದಯ ಸತ್ತ ನಿಮ್ಮಂತವರ ದಾರ್ಷ್ಟ್ಯಕ್ಕೆ ನನ್ನದೊಂದು ಧಿಕ್ಕಾರ…

ಇಸ್ಮತ್ ಪಜೀರ್


ಇದನ್ನೂ ಓದಿ; ಹೋರಾಟಗಾರನ ಫೇಸ್‌ಬುಕ್ ಪೋಸ್ಟ್‌ಗೆ NSA ಪ್ರಕರಣ: ಸಂಜೆಯೊಳಗೆ ಬಿಡುಗಡೆಗೊಳಿಸಿ ಎಂದ ಸುಪ್ರೀಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಯಾರಪ್ಪ ಹಂಗಿಸಿದ್ದು. ಅದು ಮೈಸೂರು ಭಾಗದ ಭಾಷೆ, ಉತ್ತರ ಕರ್ನಾಟಕದ್ದಲ್ಲ. ವೈರಲ್ ಆಗಿರುವುದು ಆ ಹುಡುಗಿಯ ಮಾತಿನ ಲಾಲಿತ್ಯದಿಂದ, ವೈರಲ್ ಮಾಡಿದವರಾರೂ ಅವರನ್ನು ಆಡಿಕೊಂಡಿಲ್ಲ. ಮೆಚ್ಚುಗೆಯಿಂದ ವಿವಿಧ ರೀತಿಯಲ್ಲಿ ತೋರಿಸಿದ್ದಾರೆ. ಕೊಳಕು ಮನಸ್ಸಿನ, ನಕಾರಾತ್ಮಕ‌ ಧೋರಣೆಯ, ಜನರ ಕಷ್ಟವನ್ನೆ ಬಂಡವಾಳ ಮಾಡಿಕೊಂಡು ಹೊಟ್ಟೆ ಹೊರೆಯುವ ನಿಮ್ಮಂತವರಷ್ಟೆ ಅವರ ವಿಡಿಯೊಗಳನ್ನು ಸಹ ಹೊಟ್ಟೆಪಾಡಿಗೆ ಬಳಸಿಕೊಂಡು ಈ ರೀತಿ ಪೋಸ್ಟ್ ಮಾಡಿರುವುದು

  2. ಆಹಾ… ಇವನ ಪ್ರೀತಿ ನೋಡ…
    ಹಸಿವಿನ ಕಾಠಿಣ್ಯವರಿಯದ ನಿನ್ನಂತವರಿಗೆ ಭಾಷೆಯ ಲಾಲಿತ್ಯವನ್ನು ಕೊಂಡಾಡಿದಂತೆ ಕಾಣುತ್ತೆ ಬಿಡು..

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...