Homeಮುಖಪುಟಅವಳ ಹಸಿವನ್ನು ಹಂಗಿಸಿದ ನಿಮಗೆ ನನ್ನ ಧಿಕ್ಕಾರ....!!

ಅವಳ ಹಸಿವನ್ನು ಹಂಗಿಸಿದ ನಿಮಗೆ ನನ್ನ ಧಿಕ್ಕಾರ….!!

ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು...

- Advertisement -
- Advertisement -

ಏನಿಲ್ಲ ಸಾರ್…
ಬರೀ Dolo 650.. ಕೊರೋನಾದವರಿಗೆ ಅದೇ ಸಾರ್….. ಹೀಗೆಂದು ತಿಂಗಳಿಂದೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾಧ್ಯಮದ ಮುಂದೆ ಬೋಲ್ಡ್ ಆಗಿ ಮಾತನಾಡಿದ ಆ ಹದಿ ಹರೆಯದ ಸಹೋದರಿಯ ಮಾತುಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುತ್ತಿವೆ.. ಆಕೆಯ ಮಾತುಗಳಿಗೆ ಮ್ಯೂಸಿಕ್ ಹಾಕಿ ರಿಮಿಕ್ಸ್ ಸಂಗೀತದಂತೆ ಮತ್ತೆ ವೈರಲ್ ಮಾಡಲಾಗುತ್ತಿದೆ..

ದುಡಿವ ಕೈಗಳಿಗೆ ಉದ್ಯೋಗವಿಲ್ಲದ್ದರ ಬಗ್ಗೆ, ಹಸಿದ ಹೊಟ್ಟೆಗಳಿಗೆ ಅನ್ನವಿಲ್ಲದ್ದರ ಬಗ್ಗೆ, ನಾಡ ಜನತೆಯ ಬೇನೆಗೆ ಸೂಕ್ತ ಔಷಧಿ ನೀಡಲಾಗದ ಷಂಡ ಪ್ರಭುತ್ವದ ವಿರುದ್ಧ ಆಕೆ ಮಾತನಾಡಿದ್ದಾಳೆ. ಆಕೆಗೆ ನಿಮ್ಮಂತಹ ಟಾಕು, ಟೀಕಿನ ಇಂಗ್ಲಿಷ್ ಮಿಶ್ರಿತ ಕನ್ನಡವನ್ನು ವಯ್ಯಾರದಿಂದ ಮಾತನಾಡಲು ಬಾರದಿರಬಹುದು. ಆಕೆ ತನ್ನ ಆಡುಭಾಷೆಯಲ್ಲೇ ಪ್ರಭುತ್ವದ ಕ್ರೌರ್ಯವನ್ನು ಪ್ರಶ್ನೆ ಮಾಡಿದ್ದಾಳೆ. ಆ ಮೂಲಕ ಆಕೆ ಸಮಸ್ತ ಅಸಹಾಯಕ ಕನ್ನಡಿಗರ ನೋವಿಗೆ ಧ್ವನಿಯಾಗಿದ್ದಾಳೆ.

ಆಕೆ ಆ ರೀತಿ ತನ್ನದೇ ದಾಟಿಯಲ್ಲಿ ತನ್ನ ಸಿಟ್ಟನ್ನು, ತನ್ನ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ಹೊರಗೆಡಹಿದ್ದಾಳೆ.. ನೀವು ಗೇಲಿ ಮಾಡಬೇಕಿದ್ದು ನನ್ನ ಆ ಸಹೋದರಿಯ ಗ್ರಾಮ್ಯ ಭಾಷೆಯನ್ನಲ್ಲ, ಅವಳ ಆಂಗಿಕ ಚಲನೆಯನ್ನಲ್ಲ… ಯಾವ ಪ್ರಭುತ್ವ, ಯಾವ ವ್ಯವಸ್ಥೆ ಆಕೆಯನ್ನು ಅಂತಹ ಮಾತುಗಳನ್ನಾಡಲು ಅಸಹಾಯಕಳಾಗಿಸಿತೋ ಆ ಪ್ರಭುತ್ವ , ಆ ವ್ಯವಸ್ಥೆಯನ್ನು ನೀವು ಗೇಲಿ ಮಾಡಬೇಕಿತ್ತು.

ಓರ್ವ ದುಷ್ಟ ರಾಜಕಾರಣಿಯನ್ನು ಗೇಲಿ ಮಾಡುವಂತೆ ನೀವು ಆ ಅಸಹಾಯಕ ಹೆಣ್ಮಗಳನ್ನು ಗೇಲಿ ಮಾಡುತ್ತಿದ್ದೀರಿ.. ಅದನ್ನು ಪ್ರಶ್ನಿಸಿದರೆ ಆಕೆಗೆ ಒಳ್ಳೆಯ ಪ್ರಚಾರ ಸಿಕ್ಕಿತಲ್ಲಾ ಎಂದು ಮತ್ತೆ ವ್ಯಂಗ್ಯವಾಡುತ್ತಿದ್ದೀರಿ.. ಆಕೆಯ ಪರವಾಗಿ ಧ್ವನಿಯೆತ್ತಲು ನ್ಯಾಯಾಂಗದಲ್ಲೋ, ಕಾರ್ಯಾಂಗದಲ್ಲೋ, ಶಾಸಕಾಂಗದಲ್ಲೋ ಯಾರೂ ಇಲ್ಲ ಎಂಬುವುದು ನಿಮ್ಮ ಈ ಧೈರ್ಯಕ್ಕೆ ಕಾರಣವಾಗಿದ್ದರೆ ಅವಳ ಪರವಾಗಿ ಧ್ವನಿಯೆತ್ತಲು ಮಾನವೀಯ ಸಂವೇದನೆಯಿರುವ ನಾವಿದ್ದೇವೆ.

ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ನೀವು ವ್ಯಂಗ್ಯ ಮಾಡಿದ್ದು ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು…

ಹೃದಯ ಸತ್ತ ನಿಮ್ಮಂತವರ ದಾರ್ಷ್ಟ್ಯಕ್ಕೆ ನನ್ನದೊಂದು ಧಿಕ್ಕಾರ…

ಇಸ್ಮತ್ ಪಜೀರ್


ಇದನ್ನೂ ಓದಿ; ಹೋರಾಟಗಾರನ ಫೇಸ್‌ಬುಕ್ ಪೋಸ್ಟ್‌ಗೆ NSA ಪ್ರಕರಣ: ಸಂಜೆಯೊಳಗೆ ಬಿಡುಗಡೆಗೊಳಿಸಿ ಎಂದ ಸುಪ್ರೀಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಯಾರಪ್ಪ ಹಂಗಿಸಿದ್ದು. ಅದು ಮೈಸೂರು ಭಾಗದ ಭಾಷೆ, ಉತ್ತರ ಕರ್ನಾಟಕದ್ದಲ್ಲ. ವೈರಲ್ ಆಗಿರುವುದು ಆ ಹುಡುಗಿಯ ಮಾತಿನ ಲಾಲಿತ್ಯದಿಂದ, ವೈರಲ್ ಮಾಡಿದವರಾರೂ ಅವರನ್ನು ಆಡಿಕೊಂಡಿಲ್ಲ. ಮೆಚ್ಚುಗೆಯಿಂದ ವಿವಿಧ ರೀತಿಯಲ್ಲಿ ತೋರಿಸಿದ್ದಾರೆ. ಕೊಳಕು ಮನಸ್ಸಿನ, ನಕಾರಾತ್ಮಕ‌ ಧೋರಣೆಯ, ಜನರ ಕಷ್ಟವನ್ನೆ ಬಂಡವಾಳ ಮಾಡಿಕೊಂಡು ಹೊಟ್ಟೆ ಹೊರೆಯುವ ನಿಮ್ಮಂತವರಷ್ಟೆ ಅವರ ವಿಡಿಯೊಗಳನ್ನು ಸಹ ಹೊಟ್ಟೆಪಾಡಿಗೆ ಬಳಸಿಕೊಂಡು ಈ ರೀತಿ ಪೋಸ್ಟ್ ಮಾಡಿರುವುದು

  2. ಆಹಾ… ಇವನ ಪ್ರೀತಿ ನೋಡ…
    ಹಸಿವಿನ ಕಾಠಿಣ್ಯವರಿಯದ ನಿನ್ನಂತವರಿಗೆ ಭಾಷೆಯ ಲಾಲಿತ್ಯವನ್ನು ಕೊಂಡಾಡಿದಂತೆ ಕಾಣುತ್ತೆ ಬಿಡು..

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...