Homeಅಂಕಣಗಳುಸರ್ವೋದಯ ಸಮಾಜದ ರಚನೆ

ಸರ್ವೋದಯ ಸಮಾಜದ ರಚನೆ

- Advertisement -
- Advertisement -

ಹೆಚ್.ಎಸ್‍.ದೊರೆಸ್ವಾಮಿ |
ಸ್ವಾತಂತ್ರ್ಯಾ ನಂತರ ಭಾರತ ಎರಡು ಬಗೆಯ ಆರ್ಥಿಕ ವ್ಯವಸ್ಥೆಯನ್ನು ಕಂಡಿದೆ. ಒಂದು ನಿಯಂತ್ರಿತ ಆರ್ಥಿಕ ವ್ಯವಸ್ಥೆ. ಎರಡನೆಯದು ಮುಕ್ತ ಆರ್ಥಿಕ ವ್ಯವಸ್ಥೆ. ನಿಯಂತ್ರಿತ ಆರ್ಥಿಕ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಸರ್ಕಾರದ ಅಧಿಕಾರಿಗಳು ಜನರನ್ನು ಶೋಷಣೆಗೊಳಪಡಿಸಿದರೆ ಮುಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಬಂಡವಾಳಶಾಹಿಗಳು ಜನರನ್ನು ಶೋಷಿಸುತ್ತಾರೆ. ಈ ಎರಡೂ ಬಗೆಯ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಬೇಕಾದರೆ ಇರುವ ಏಕೈಕ ದಾರಿ ಕೇಂದ್ರಿತ ಆರ್ಥಿಕ ವ್ಯವಸ್ಥೆ ಅಂದರೆ ಅದು ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯ ಪರಿಕಲ್ಪನೆ. ಹಿಂದೆ ಪ್ರತಿಯೊಂದು ಗ್ರಾಮವೂ ಸ್ವಸಂಪೂರ್ಣವಾಗಿತ್ತು. ಸ್ವಾವಲಂಬಿ ಗ್ರಾಮವಾಗಿತ್ತು. ಆಯಾ ಗ್ರಾಮದ ಅವಶ್ಯಕತೆಗಳನ್ನು ಅದೇ ಪೂರೈಸುತ್ತಿತ್ತು. ಇಂದು ಕೇಂದ್ರೀಕೃತ ಉತ್ಪಾದನಾ ಪದ್ಧತಿಯಿಂದಾಗಿ ಗ್ರಾಮಗಳು ಪರಾವಲಂಬಿಗಳಾಗಿವೆ. ಗ್ರಾಮಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಗ್ರಾಮಕೇಂದ್ರಿತ ಆರ್ಥಿಕ ವ್ಯವಸ್ಥೆಯನ್ನು ಜಾರಿಗೊಳಸಬೇಕಾಗಿದೆ. ಗ್ರಾಮಗಳು ಆಡಳಿತದ ಮೂಲ ಘಟಕಗಳಾಗಬೇಕು. ಗ್ರಾಮಸಭೆಯೇ ಗ್ರಾಮದ ಅಭಿವೃದ್ಧಿ ಯೋಜನೆಯನ್ನು ರೂಪಿಸಬೇಕು. ಗ್ರಾಮದ ಬೇಕು, ಬೇಡಗಳನ್ನು ನಿರ್ಧರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವು ರೂಪಿಸಿದ ಯೋಜನೆಗಳನ್ನು ಗ್ರಾಮಗಳ ಮೇಲೆ ಹೇರಬಾರದು. ಪ್ರತಿ ಗ್ರಾಮದಲ್ಲಿ ಒಂದು ಗ್ರಾಮಕೋಕ ಇರಬೇಕು. ಪ್ರತಿ ಗ್ರಾಮದಲ್ಲಿ ಪದಾರ್ಥಗಳ ಸಂಸ್ಕರಣ ಕೇಂದ್ರಗಳು ಸ್ಥಾಪನೆಯಾಗಬೇಕು. ರೇಷ್ಮೆಗೂಡನ್ನು ರೇಷ್ಮೆ ನೂಲನ್ನಾಗಿ ಪರಿಷ್ಕರಿಸುವ ಘಟಕಗಳು ಸ್ಥಾಪನೆಯಾಗಬೇಕು. ಹಣ್ಣುಗಳನ್ನು ಸಂಸ್ಕರಣೆ ಮಾಡಿ, ಹಣ್ಣಿನ ರಸ, ಇತ್ಯಾದಿಗಳನ್ನು ತಯಾರಿಸುವ ಘಟಕಗಳು ಆರಂಭವಾಗಬೇಕು. ಎರಡು ಮೂರು ಗ್ರಾಮಗಳ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ನೀಡುವ ಸಣ್ಣ ಕೈಗಾರಿಕಾ ಕೇಂದ್ರ ಸ್ಥಾಪನೆಯಾಗಬೇಕು. ಇಲ್ಲಿ ಉತ್ಪತ್ತಿಯಾಗುವ ಪದಾರ್ಥಗಳನ್ನು ಬೃಹತ್ ಕೈಗಾರಿಕೆಗಳು ಉತ್ಪಾದಿಸದಂತೆ ರೈತರೇ ಮಾರಿಕೊಳ್ಳುವ ಸ್ವಾತಂತ್ರ್ಯವನ್ನು ಹರಣ ಮಾಡಬಾರದು. ಬೀಜೋತ್ಪನ್ನ ಕಂಪನಿಗಳ ಅಡಿಯಾಳಾಗಲು ರೈತರನ್ನು ಬಿಡಬಾರದು.

ಗ್ರಾಮಗಳ ನಿರ್ವಹಿಸಲಾಗದ ಜವಾಬ್ದಾರಿಗಳನ್ನು ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಹಿಸಿಕೊಳ್ಳಬೇಕು. ಉದಾಹರಣೆಗೆ ನೋಟು ಮುದ್ರಣ, ವಿದೇಶಾಂಗ ನೀತಿ ನಿರ್ವಹಣೆ, ಅಣೆಕಟ್ಟಗಳ ನಿರ್ಮಾಣ ದೇಶ ರಕ್ಷಣೆ ಮುಂತಾದ ಜವಾಬ್ದಾರಿಗಳನ್ನು ಕೇಂದ್ರ ಸರ್ಕಾರ ಹೊರಬೇಕು. ಸಾರಿಗೆ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ರಸ್ತೆ ಕಾಮಗಾರಿ, ಶಿಕ್ಷಣ ನೀತಿ ನಿರೂಪಣೆ ಮುಂತಾದ ಹೊಣೆಗಾರಿಕೆ ರಾಜ್ಯ ಸರ್ಕಾರಗಳದ್ದು. ಗ್ರಾಮಸ್ವರಾಜ್ಯ ಸ್ಥಾಪನೆ ಮಾಡುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದ ಹೊರೆ ಕಡಿಮೆಯಾಗುತ್ತದೆ. ನೌಕರಶಾಹಿಯ ದುರಾಡಳಿತ ಲಂಚರಾಷ್ಟ್ರ ಮತ್ತು ದಬ್ಬಾಳಿಕೆ ಕಡಿಮೆಯಾಗುತ್ತದೆ. ಹಳ್ಳಿಗಳಲ್ಲಿ ಲವಲವಿಕೆ ಉಂಟಾಗುತ್ತದೆ. ಹಳ್ಳಿಗರು ಜವಾಬ್ದಾರಿ ಜನರಾಗುತ್ತಾರೆ. ಗ್ರಾಮಗಳಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಗ್ರಾಮೀಣ ಯುವಕರು, ಕಸುಬುದಾರರು ಹಳ್ಳಿಗಳನ್ನು ತೊರೆದು ಪಟ್ಟಣಗಳಿಗೆ ವಲಸೆ ಹೋಗುವ ಪಿಡುಗು ತಪ್ಪುತ್ತದೆ. ಗ್ರಾಮದ ಕೆರೆಗಳ ರಕ್ಷಣೆ, ಜಲ ಸಂಪನ್ಮೂಲಗಳ ರಕ್ಷಣೆ, ಹಳ್ಳಿಗರ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.

ರಾಜಕೀಯ ಪಕ್ಷಗಳ ಹಾವಳಿ ಹಳ್ಳಿಗಳಲ್ಲಿ ತಪ್ಪುತ್ತದೆ. ಪಂಚಾಯ್ತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಭಾಗವಹಿಸುವಂತಿಲ್ಲ, ಮೂಗು ತೂರಿಸುವಂತಿಲ್ಲ ಎಂಬ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಆದರೂ ರಾಜಕೀಯ ಪಕ್ಷಗಳು ಪ್ರಚ್ಛನ್ನವಾಗಿ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಭಾಗವಹಿಸುತ್ತಿವೆ. ಗ್ರಾಮ ಸ್ವರಾಜ್ಯ ಸ್ಥಾಪನೆಯಾದ ಮೇಲೆ ರಾಜಕೀಯ ಪಕ್ಷಗಳು ಗ್ರಾಮಗಳಿಗೆ ನುಸುಳದಂತೆ ಮಾಡುವ ಕಾನೂನನ್ನು ಗ್ರಾಮ ಪಂಚಾಯ್ತಿ ಕೈಗೊಳ್ಳಬಹುದು. ಆರೋಗ್ಯ ಕೇಂದ್ರಗಳನ್ನು, ಕುಡಿಯುವ ನೀರನ್ನು ಪೂರೈಸುವ ಕೆಲಸವನ್ನೂ ಈಗ ಸರ್ಕಾರ ಖಾಸಗಿ ಯುವಕರಿಗೆ ವಹಿಸುತ್ತಿವೆ. ಗ್ರಾಮ ಸ್ವರಾಜ್ಯದಲ್ಲಿ ಇವೆರಡರ ನಿರ್ವಹಣೆಯ ಹೊಣೆಗಾರಿಕೆಯನ್ನು ಪಂಚಾಯ್ತಿಗಳು ನಿರ್ವಹಿಸುತ್ತಿವೆ. ಖಾಸಗಿಯವರ ಶೋಷಣೆಯಿಂದ ಗ್ರಾಮಗಳು ಮುಕ್ತವಾಗುತ್ತವೆ. ಪರದೇಶಗಳ ಕಂಪನಿಗಳು ತಯಾರಿಸುವ ಫೇಸ್ ಪೌಡರ್, ಕುಂಕುಮ, ಸೋಪು, ಟೂತ್‍ಪೇಸ್ಟ್, ಕಾಡಿಗೆ, ಕೃತಕ ನೂಲಿನ ಬಟ್ಟೆಗಳು, ಸಿದ್ಧ ಪಡಿಸಿದ ಉಡುಪುಗಳು, ಪೆಪ್ಸಿ ಕೋಲಾ, ಫ್ರೂಟಿ ಗ್ರಾಮಗಳಿಗೆ ನುಗ್ಗಿಬರುತ್ತಿವೆ ಗ್ರಾಮಸಭೆಯತ್ತ ಗ್ರಾಮ ಪಂಚಾಯ್ತಿಗಳು ಈ ಬಗೆಯ ಶೋಷಣೆಗೆ ಅವಕಾಶ ಕೊಡುವುದಿಲ್ಲ.

ಅವು ಗ್ರಾಮಗಳಿಗೆ ಪ್ರವೇಶಿಸದಂತೆ ಕಾನೂನು ಕಟ್ಟಳೆ ಮಾಡಲಾಗುತ್ತದೆ. ಊರಿನಲ್ಲಿ ನಡೆಯುವ ಕಳ್ಳತನ, ಹಾದರ, ಮೋಸ, ದಾಂಧಲೆ ಇವುಗಳನ್ನೆಲ್ಲ ತಡೆಯಲು ಸ್ವತಂತ್ರ ಪೊಲೀಸ್ ವ್ಯವಸ್ಥೆ ಗ್ರಾಮಮಟ್ಟದ ನ್ಯಾಯಾಲಯಗಳನ್ನು ಸ್ಥಾಪಿಸಿಕೊಳ್ಳಲಾಗುತ್ತದೆ. ಭಾರಿ ಕೊಲೆ, ವಂಚನೆ ಮುಂತಾದ ಅಪರಾಧಗಳನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತದೆ. ಗ್ರಾಮಸಭೆ ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ನಡೆಯಬೇಕು. ಹಳ್ಳಿಯ ಅಸೆಂಬ್ಲಿ ಅದಾಗಬೇಕು. ಗ್ರಾಮಸಭೆ ಎರಡು ದಿನ ನಡೆಯಬೇಕು. ಮೊದಲನೆಯ ದಿನ ವರದಿ ಮಂಡನೆ ಅದರ ಮೇಲೆ ಚರ್ಚೆ ನಡೆಯಬೇಕು. ನಡೆದಿರುವ ದುವ್ರ್ಯವಹಾರಗಳ ಕೂಲಂಕಶ ಚರ್ಚೆಯಾಗಿ ಅದನ್ನೇ ನಡೆಸಿದವರ ಮೇಲೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ನಿರ್ಣಯ ರೂಪದಲ್ಲಿ ಮಂಡಿಸಿ ಸಭೆಯ ಸಮ್ಮತಿ ಪಡೆದುಕೊಳ್ಳಬೇಕು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಬರುವ ಹಣ ಮನೆಗಂದಾಯ, ಭೂ ಕಂದಾಯದಿಂದ ಬಂದ ಹಣ ಕಾರ್ಖಾನೆಗಳು, ಹೋಟೆಲ್ ಮುಂತಾದ ಉದ್ಯಮಗಳು ಬಸ್‍ಸ್ಟಾಂಡಿನ ನಿರ್ವಹಣೆ ತೆರಿಗೆ ಟೋಲ್, ನೀರಿನ ಸೆಸ್ ಮುಂತಾದ ಬಾಬತ್ತುಗಳಿಂದ ಬರುವ ವರಮಾನ ನಾನಾ ಬಾಬುಗಳಿಂದ ಸಂಗ್ರಹವಾಗುವ ಹಣ ಗ್ರಾಮದ ಸಂಪನ್ಮೂಳ ಇದನ್ನು ಪಾರದರ್ಶಕವಾಗಿ ನಿರ್ವಹಿಸುವ ಜವಾಬ್ದಾರಿ ಪಂಚಾಯ್ತಿಯದು. ಆದ್ಯತೆಯ ಮೇಲೆ ಬಡತನ ನಿವಾರಣೆ ಯೋಜನೆಗಳನ್ನು ರೂಪಿಸಬೇಕು. ಈ ಕೆಲಸ ಅಂತ್ಯೋದಯದಿಂದ ಆರಂಭ ಆಗಬೇಕು. ಮೊದಲ ಆದ್ಯತೆ ಹಳ್ಳಿಯ ಕಟ್ಟಕಡೆಯ ವ್ಯಕ್ತಿಯನ್ನು ಬಡತನದಿಂದ ಪಾರು ಮಾಡುವುದು ಹೀಗೆ ಗ್ರಾಮದ ಎಲ್ಲರಿಗೂ ಊಟ, ಉದ್ಯೋಗ, ವಿದ್ಯೆ ಇರಲು ಮನೆ ಒದಗಿಸುವುದು ಸರ್ವೋದಯದ ಗುರಿ.

ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಪಂಚಾಯ್ತಿಯ ಆದ್ಯ ಕರ್ತವ್ಯವಾಗಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...