Homeಅಂಕಣಗಳುಬಹುಜನ ಭಾರತ; ಸ್ವತಂತ್ರ ಅಸ್ಮಿತೆಯಲ್ಲಿ ಅರಳಿದ ಶಿವರಾಣಿ ದೇವಿ

ಬಹುಜನ ಭಾರತ; ಸ್ವತಂತ್ರ ಅಸ್ಮಿತೆಯಲ್ಲಿ ಅರಳಿದ ಶಿವರಾಣಿ ದೇವಿ

- Advertisement -
- Advertisement -

ಪ್ರಚಂಡ ಪ್ರಸಿದ್ಧ ಜೀವನ ಸಂಗಾತಿಯ ನೆರಳಿನಲ್ಲಿ ಕಳೆದೇ ಹೋದ ಪತ್ನಿಯರು, ಪತಿಯರಿಗೆ ಲೆಕ್ಕವಿಲ್ಲ.

ಆದರೆ ಹಿಂದೀ ಉರ್ದುವಿನಲ್ಲಿ ಬರೆದ ಮಾನವತಾವಾದಿ ಲೇಖಕ ಮುನ್ಷಿ ಪ್ರೇಮ್ ಚಂದ್ ಅವರ ಪತ್ನಿ ಶಿವರಾಣಿ ದೇವಿ, ಪತಿಯ ಪ್ರಕಾಶಮಯ ಪ್ರಭಾವಳಿಯಲ್ಲೂ ಕಳೆದುಹೋಗದೆ ಹೊಳೆದವರು. ಸ್ವಂತ ಅಸ್ಮಿತೆ ಉಳಿಸಿಕೊಂಡವರು.

’ನಮ್ಮ ಕನಸಿನ ರಾಷ್ಟ್ರೀಯತೆಯಲ್ಲಿ ಜನ್ಮಜಾತ ವರ್ಣಗಳ ಗಂಧಗಾಳಿಗೂ ಅವಕಾಶ ಇರದು. ಅದು ಶ್ರಮಿಕರು ಮತ್ತು ರೈತರ ಸಾಮ್ರಾಜ್ಯ. ಬ್ರಾಹ್ಮಣ ಕಾಯಸ್ಥ ಕ್ಷತ್ರಿಯರು ಅಲ್ಲಿರುವುದಿಲ್ಲ. ಸಮಸ್ತರೂ ಭಾರತವಾಸಿಗಳು. ಈ ಎಲ್ಲ ಲಡಾಯಿ ಬೆರಳೆಣಿಕೆಯ ವ್ಯಕ್ತಿಗಳದು. ಇವರಿಂದ ದೂರವಿರುವ ರಾಷ್ಟ್ರದಲ್ಲಿ ಹಿಂದೂಗಳೂ ಇಲ್ಲ, ಮುಸಲ್ಮಾನರೂ ಇಲ್ಲ. ಅಲ್ಲಿರುವವರೆಲ್ಲ ಶ್ರಮಿಕರು ಮತ್ತು ರೈತರು. ಒಬ್ಬರಿಗಿಂತ ಮತ್ತೊಬ್ಬರು ದೀನ ದರಿದ್ರ ದಲಿತರು ಮತ್ತು ಶೋಷಣೆಯ ಗಾಣದಲ್ಲಿ ಅರೆಯಲ್ಪಟ್ಟವರು. ಆರತಿ ನಮಾಜು-ಹಿಂದೀ-ಉರ್ದು ಸಮಸ್ಯೆಗಳು ಇಲ್ಲಿ ಇರುವುದೇ ಇಲ್ಲ’ ಎಂದು 90 ವರ್ಷಗಳ ಹಿಂದೆಯೇ ಹೇಳಿದ್ದವರು ಪ್ರೇಮ್ ಚಂದ್.

ಪ್ರೇಮಚಂದ್ ಅವರ 141ನೆಯ ಜಯಂತಿ ಮೊನ್ನೆ ಜುಲೈ 31ರಂದು ಸರಿದುಹೋಯಿತು. ಪತ್ನಿ ಶಿವರಾಣಿ ದೇವಿಯವರ ಬರೆಹದ ಬದುಕಿಗೆ ನೀರೆರೆದು ಮನಸಾರೆ ಪ್ರೋತ್ಸಾಹಿಸಿದ ಪತಿಯಾಗಿದ್ದರು ಅವರು.

ಪ್ರೇಮ್ ಚಂದ್ ಅವರ ಬದುಕು ಬರೆಹಗಳ ಬಿಡಿಸಲಾಗದ ಭಾಗವೇ ಆಗಿಹೋಗಿದ್ದರು ಪತ್ನಿ ಶಿವರಾಣಿದೇವಿ. ಪ್ರೇಮ್ ಚಂದ್ ಎರಡನೆಯ ಮದುವೆಯಲ್ಲಿ ಅವರ ಕೈಹಿಡಿದಾಗ ಶಿವರಾಣಿ ಹನ್ನೊಂದು ವರ್ಷ ವಯಸ್ಸಿನ ಬಾಲವಿಧವೆ. ’ಕಾಯಸ್ಥ ಬಾಲ ವಿಧವಾ ಉದ್ಧಾರಕ ಪುಸ್ತಿಕಾ’ದಲ್ಲಿ ಅಚ್ಚಾಗಿದ್ದ ಜಾಹೀರಾತನ್ನು ಓದಿ ಶಿವರಾಣಿದೇವಿಯವರ ತಂದೆಗೆ ಪತ್ರ ಬರೆದು ಆಕೆಯನ್ನು ವರಿಸಿದ್ದರು ಪ್ರೇಮ್ ಚಂದ್.

ಪತಿಯ ನಿಧನಾನಂತರ ನಲವತ್ತು ವರ್ಷಗಳ ಕಾಲ ಜೀವಿಸಿದ್ದವರು. ಬರವಣಿಗೆಯಲ್ಲಿ ತೊಡಗಿಕೊಂಡವರು. ಅಂದಿನ ಕಾಲಘಟ್ಟದ ಮಹತ್ವದ ಕತೆಗಾರ್ತಿಯಾಗಿದ್ದರು ಆಕೆ. ಸ್ತ್ರೀ ವಿಮುಕ್ತಿಯ ವಿಷಯದಲ್ಲಿ ಪತಿಗಿಂತ ಹೆಚ್ಚು ಮುಂದೆ ಸಾಗಿದ್ದ ಆಲೋಚನೆ ಅವರದಾಗಿತ್ತು.

ಆಕೆಯ ಕಥಾನಾಯಕಿಯರು ಅನ್ಯಾಯದ ವಿರುದ್ಧ ಸಿಡಿದೇಳುವವರು. ದಿಟ್ಟರೂ ಆತ್ಮವಿಶ್ವಾಸಭರಿತರೂ, ಉದ್ಧಟರೂ ಆಗಿರುತ್ತಿದ್ದರು. ಬಾಲವಿಧವೆ ಕಾಂತಿ ತನ್ನ ಗ್ರಾಮದ ಲಂಪಟ ಮೋಹನನ ಮೂಗನ್ನೇ ಕತ್ತರಿಸಿ ಶಿಕ್ಷಿಸುತ್ತಾಳೆ. ನಲವತ್ತರ ವಯಸ್ಸಿನ ನಾಲ್ಕು ಮಕ್ಕಳ ತಂದೆಯನ್ನು ಮದುವೆಯಾಗುವ ಅನಿವಾರ್ಯದ ಕತ್ತರಿಯಲ್ಲಿ ಸಿಕ್ಕಿಹಾಕಿಕೊಳ್ಳುವ ರಾಮ್ ಪ್ಯಾರಿ ಪತ್ರ ಬರೆದು ವರನಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾಳೆ. ಅವನು ಲೆಕ್ಕಿಸುವುದಿಲ್ಲ. ಮದುವೆ ಮಂಟಪದಲ್ಲಿ ಘೂಂಘಟ್ ಕಿತ್ತೆಸೆದು ವರನನ್ನು ಚಪ್ಪಲಿಯಿಂದ ಬಾರಿಸುತ್ತಾಳೆ. ತಂದೆಯತ್ತ ಮತ್ತೊಂದು ಚಪ್ಪಲಿಯನ್ನು ಎಸೆದು ಹೊರನಡೆಯುತ್ತಾಳೆ. ಅವರ ಕತೆಗಳು ಎಂಬತ್ತು ವರ್ಷಗಳ ನಂತರ ಹಿಂದೀ ಓದುಗರಿಗೆ ಇದೀಗ ಲಭಿಸತೊಡಗಿವೆ.

ಶಿವರಾಣಿಯವರ ಕತೆಗಳನ್ನು ಪ್ರೇಮ್ ಚಂದ್ ಬರೆದುಕೊಡುತಿದ್ದರು ಎಂಬ ಓದುಗರ ಸಂದೇಹ ಕಾಲಕ್ರಮೇಣ ನಿವಾರಣೆಯಾಗುತ್ತದೆ. ಅದನ್ನು ನಿವಾರಿಸಲು ಖುದ್ದು ಪ್ರೇಮ್ ಚಂದ್ ಹೆಣಗುತ್ತಾರೆ. ತಮ್ಮ ಕತೆಗಳು ಪತಿಯ ಕತೆಗಳ ಅನುಕರಣೆ ಆಗದಂತೆ ಪ್ರಜ್ಞಾಪೂರ್ವಕವಾಗಿ ಎಚ್ಚರ ವಹಿಸುತ್ತಾರೆ ಶಿವರಾಣಿ.

1956ರಲ್ಲಿ ಪ್ರಕಟವಾದ ಅವರ ’ಪ್ರೇಮ್ ಚಂದ್ ಘರ್ ಮೇಂ’ (ಮನೆಯೊಳಗೆ ಪ್ರೇಮ್ ಚಂದ್) ಎಂಬ ಅವರ ಕೃತಿ, ಸಾಹಿತ್ಯ ಇತಿಹಾಸಕಾರರ ಪಾಲಿನ ಅಮೂಲ್ಯ ನಿಧಿ. ಪ್ರೇಮ್ ಚಂದ್ ಮತ್ತು ಶಿವರಾಣಿಯವರ ಸುತ್ತ ಸುತ್ತುವ ಈ ಕೃತಿ ಅಲ್ಲಲ್ಲಿ ಶಿವರಾಣಿಯವರ ಸಾಹಿತ್ಯಾಸಕ್ತಿ ಮತ್ತು ಅಂದಿನ ರಾಜಕೀಯ ವಾತಾವರಣ ಕುರಿತು ಬೆಳಕು ಚೆಲ್ಲುತ್ತದೆ. ಪ್ರೇಮ್ ಚಂದ್ ಕುರಿತ ಅವರ ಕೃತಿಯಲ್ಲಿ ಅವರ ಮನಸ್ಸಾಕ್ಷಿ ಮಾತಾಡುತ್ತದೆ. ಜಗತ್ತಿನ ಕಣ್ಣಿಗೆ ಕಾಣದಿರುವ ಪ್ರೇಮ್ ಚಂದ್ ಅವರಿಗೆ ಮಡದಿಯ ಕಣ್ಣಿನ ಕನ್ನಡಿಯನ್ನು ಹಿಡಿಯುತ್ತದೆ. ಈ ಕೃತಿಯು ಸ್ತ್ರೀವಾದಿ ಕಣ್ಣೋಟವನ್ನು ಕಟ್ಟಿಕೊಡುವ ದಸ್ತಾವೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೊತ್ತಗೆಯು ಕೇವಲ ಪ್ರೇಮ್ ಚಂದ್ ಅವರ ಜೀವನ ಚರಿತ್ರೆಯಲ್ಲ, ಶಿವರಾಣಿಯವರ ಆತ್ಮಕತೆಯೂ ಹೌದು ಎಂಬ ನಿಷ್ಕರ್ಷೆಗೆ ಬರಲಾಗಿದೆ. ಮೇಲ್ನೋಟಕ್ಕೆ ಈ ಪುಸ್ತಕ ಮನೆವಾರ್ತೆಯ ನೆನಪುಗಳನ್ನು ಆಧರಿಸಿದ್ದೆಂದು ತೋರಬಹುದು. ಆದರೆ ಪ್ರೇಮ್ ಚಂದ್ ಅವರ ಒಳ-ಹೊರಗುಗಳನ್ನು ಇಣುಕಿ ನೋಡಿ ಅರ್ಥ ಮಾಡಿಕೊಳ್ಳಲು ಅನುವಾಗುವ ಪ್ರಾಮಾಣಿಕ ಕಿಟಕಿಯಿದು. ಅವರ ಸಾಹಿತ್ಯಕ ಮತ್ತು ಮಾನವೀಯ ಗುಣಗಳ ಮೇಲೆ ಬೆಳಕು ಚೆಲ್ಲುವ ಕಿಟಕಿ. ಪ್ರೇಮ್ ಚಂದ್ ಅವರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುವ ಬರೆಹವಿದು. ಇಲ್ಲಿನ ಪ್ರತಿಯೊಂದು ಪದ ಪದದ ಮೇಲೂ ಅವರ ವ್ಯಕ್ತಿತ್ವದ ಛಾಪು ಮೂಡಿದೆ ಎಂದು ವಿಮರ್ಶಕರು ಹೇಳಿದ್ದಾರೆ.

ದಿನನಿತ್ಯದ ಬದುಕು ಬಾಳುವೆಯ ಸಹಜ ಸರಳ ಮಾತುಕತೆಗಳಲ್ಲೇ ಪ್ರೇಮ್ ಚಂದ್ ಅವರನ್ನು ಶಿವರಾಣಿ ಸಾಕಾರಗೊಳಿಸಿದ್ದಾರೆ. ’ಅವರು ಉಳಿದೆಲ್ಲರಿಗೂ ಮಹಾನ್ ಆಗಿದ್ದಿರಬಹುದು ಆದರೆ ನನ್ನ ಪಾಲಿಗೆ ನನ್ನವರಾಗಿದ್ದರು, ನಾನು ಅವರವಳಾಗಿದ್ದೆ. ನಮ್ಮಿಬ್ಬರ ನಡುವೆ ಮಹಾನತೆಗೆ ಜಾಗವೆಲ್ಲಿಯದು?’ ಎಂಬ ಅವರ ಮಾತುಗಳು ಅರ್ಥಪೂರ್ಣ.

ಪತಿಯ ಮಾನವೀಯತೆಯನ್ನು ಮೆಚ್ಚುತ್ತಲೇ ಕಟಕಟೆಯಲ್ಲಿ ನಿಲ್ಲಿಸಿ ಆತನ ವಿವಾಹೇತರ ಪ್ರೇಮ ಪ್ರಸಂಗವನ್ನು ಪ್ರಶ್ನಿಸಿದ್ದಾರೆ.

ಮೊದಲ ಪತ್ನಿ ಇದ್ದಾಗಲೇ ಮತ್ತೊಬ್ಬ ಹೆಣ್ಣುಮಗಳ ಸಂಗ ಮಾಡಿದ್ದೆ. ನೀನು ಬಂದ ನಂತರವೂ ಈ ಸಂಬಂಧ ಮುಂದುವರೆದಿತ್ತು ಎಂದು ಶಿವರಾಣಿಯವರ ಮುಂದೆ ಪ್ರೇಮ್ ಚಂದ್ ತಪ್ಪೊಪ್ಪಿಕೊಂಡಿದ್ದರು. ಆದರೆ ತಾವು ಪ್ರೇಮ್‌ಚಂದ್ ಬದುಕಿನಲ್ಲಿ ಕಾಲಿಟ್ಟ ನಂತರವೂ ಆತ ಮತ್ತೊಬ್ಬ ಹೆಣ್ಣುಮಗಳ ಸಂಗ ಮುಂದುವರೆಸಿದ್ದ ಶಿವರಾಣಿಯವರಿಗೆ ತಿಳಿದಿತ್ತು. ಆದರೆ ಪತಿಯ ಮುಂದೆ ಆ ಬಗ್ಗೆ ಬಾಯಿ ಬಿಡಲಿಲ್ಲ. ಈ ವಿಷಯ ಪ್ರೇಮ್ ಚಂದ್ ಅವರಿಗೆ ಗೊತ್ತಾಯಿತು. ಹೃದಯವಂತಿಕೆಯಲ್ಲಿ ನೀನು ನನಗಿಂತ ದೊಡ್ಡವಳು ಎಂದು ಪ್ರತಿಕ್ರಿಯಿಸುತ್ತಾರೆ.

ಪ್ರೇಮ್ ಚಂದ್ ಅವರ ಮೇಲೆ ಆದ ಗಾಂಧೀ ಪ್ರಭಾವ ಶಿವರಾಣಿಯವರನ್ನೂ ತಾಗುತ್ತದೆ. ಗಾಂಧೀ ಆಂದೋಲನದಲ್ಲಿ ಭಾಗವಹಿಸುತ್ತಾರೆ. ಗೋರಖಪುರಕ್ಕೆ ಗಾಂಧೀ ಬಂದ ವರ್ಷ ಒಡವೆ ಧರಿಸುವುದಿಲ್ಲವೆಂದು ಮಾಡಿದ ಪ್ರತಿಜ್ಞೆಯನ್ನು ಆಕೆ ಕಡೆಯುಸಿರ ತನಕ ಪಾಲಿಸುತ್ತಾರೆ. 1930ರ ದಶಕದಲ್ಲಿ ಲಕ್ನೋದ ಮಹಿಳಾ ಆಶ್ರಮದ ಸಭೆಯೊಂದರಲ್ಲಿ 12 ಸಾವಿರ ಮಂದಿಯನ್ನು ಉದ್ದೇಶಿಸಿ ಸುಡುಗೆಂಡದ ಭಾಷಣ ಮಾಡುತ್ತಾರೆ. ವಿದೇಶೀ ವಸ್ತ್ರ ಸುಟ್ಟಿದ್ದಕ್ಕಾಗಿ ಬಂಧನಕ್ಕೆ ಒಳಗಾಗುತ್ತಾರೆ.

ಇಂತಹ ವಿಶಿಷ್ಟ ವ್ಯಕ್ತಿತ್ವದ ಶಿವರಾಣಿಯವರ ಹೂತು ಹೋಗಿದ್ದ ಕತೆಗಳು ಇದೀಗ ಬೆಳಕಿಗೆ ಬರತೊಡಗಿವೆ.


ಇದನ್ನೂ ಓದಿ: ಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...

ಜೈಲಿನಲ್ಲಿ ಕಂಬಿ ಎಣಿಸುತ್ತಿರುವ 25 ಕ್ರಿಮಿನಲ್‌ಗಳು, ದೆಹಲಿಯ ಜಂತರ್-ಮಂತರ್‌ಗೆ ಬರುಲು ಹೇಗೆ ಸಾಧ? ತನಿಖಾ ವರದಿಯಲ್ಲಿ ಬಯಲಾಯ್ತು ಪೊಲೀಸರ ಕುತಂತ್ರ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS - ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ...

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...