Homeಮುಖಪುಟಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

ಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

- Advertisement -
- Advertisement -

ಒಂದೇ ಸಮನೆ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಇನ್ನೊಂದು ದಶಕದಲ್ಲಿ ಅಂದಾಜು ಮಟ್ಟಕ್ಕಿಂತ ಹೆಚ್ಚಾಗಲಿದೆ. ಇದರಿಂದ ಪ್ರಕೃತಿ ವಿಕೋಪವಾಗಿ ಜೀವ ಜಾಲಕ್ಕೆ ಗಂಡಾಂತರ ಎದುರಾಗಲಿದೆಯೆಂದು ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ವರದಿ ಆಘಾತಕಾರಿ ಎಚ್ಚರಿಕೆ ಈಚೆಗಷ್ಟೆ ನೀಡಿತ್ತು. ವಿಶ್ವ ಸಂಸ್ಥೆಯ ಈ ಸಮಿತಿ 1988ರಿಂದ 5-7 ವರ್ಷಕ್ಕೊಮ್ಮೆ ತಾಪಮಾನ ಏರಿಕೆ, ಹಸಿರು ಮನೆ ಅನಿಲ ಪರಿಣಾಮ, ಸಮುದ್ರ ಮಟ್ಟ, ಮಂಜು ಕರಗುವಿಕೆ ಬಗ್ಗೆ ವರದಿ ಕೊಡುತ್ತಿದೆ.

ವಿಶ್ವ ಸಂಸ್ಥೆಯ ಭೂ ತಾಪಮಾನದ ವರದಿ ಆಧರಿಸಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಟಿಸಿರುವ ತನ್ನ 6ನೇ ಮೌಲ್ಯ ಮಾಪನ ವರದಿಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳಿವೆ! ಜಾಗತಿಕ ತಾಪಮಾನ ಏರು ಗತಿಯಲ್ಲಿರುವುದರಿಂದ ಸಮುದ್ರ ಮಟ್ಟದಲ್ಲೂ ದೊಡ್ಡ ಏರಿಕೆಯಾಗುತ್ತಿದೆ. ಹೀಗಾಗಿ ಕಡಲಂಚಿನ ಊರೂರುಗಳನ್ನು ಸಮುದ್ರ ಆಪೋಷನ ಪಡೆಯಲಿದೆ. ಭಾರತದ ಮಂಗಳೂರು, ಮುಂಬೈ, ಕೊಚ್ಚಿ, ವಿಶಾಖಪಟ್ಟಣಂ… ಮುಂತಾದ 12ಕ್ಕಿಂತ ಹೆಚ್ಚು ಮಹಾನಗರಗಳು 2100ರ ಒಳಗಾಗಿ ಸಮುದ್ರ ಪಾಲಾಗಲಿದೆಯೆಂದು ನಾಸಾ ಸ್ಪಷ್ಟವಾಗಿ ಹೇಳಿದೆ.

ಜಗತ್ತಿನಾದ್ಯಂತ ಸಮುದ್ರದಲ್ಲಾಗತ್ತಿರುವ ಏರುಪೇರಿನ ಆಧಾರದಲ್ಲಿ ವರದಿ ಸಿದ್ಧಪಡಿಸಿರುವ ನಾಸಾ, ಸಮುದ್ರದ ಈಗಿನ ಸ್ಥಿತಿ-ಗತಿ ಪ್ರಕಾರ ಸಮುದ್ರ ಏರಿದರೆ ಇನ್ನೆರಡು ಅಡಿ ಏರುತ್ತದೆ ಎಂದಿದೆ. ಶತಮಾನದ ಅಂತ್ಯದೊಳಗೆ ಇದು ಇನ್ನಷ್ಟು ತೀವ್ರಗೊಂಡರೆ 2100ರ ಕೊನೆಗೆ 3 ಅಡಿಯಷ್ಟು ಉಕ್ಕೇರುತ್ತದೆ. ಆಗ ಮಂಗಳೂರು, ಮಂಬೈ, ಮರ್ಮಗೋವಾ, ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್, ಖದೀರ್ಪುರ್, ಚೆನ್ನೈ, ತೂತ್ತುಕುಡಿ, ಕಂಡ್ಲಾ, ಒಖಾ, ಭಾವನಗರ್ ಕಡಲಲ್ಲಿ ಕರಗಲಿವೆ ಎಂಬುದು ನಾಸಾ ಲೆಕ್ಕಾಚಾರವಾಗಿದೆ.

ಏಷ್ಯಾದ ಸುತ್ತಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಏರುತ್ತಿದೆ. ಈ ರೀತಿಯ ಸಮುದ್ರ ಮಟ್ಟ ಬದಲಾವಣೆ ಸಾಮನ್ಯವಾಗಿ 100 ವರ್ಷಕ್ಕೊಮ್ಮೆ ಆಗುತ್ತಿತ್ತು. ಇನ್ನು ಮುಂದೆ 2050ರ ತನಕ 6ರಿಂದ 9ವರ್ಷಕ್ಕೊಮ್ಮೆ ಸಂಭವಿಸಬಹುದು. 2006ರಿಂದ 2018ರ ತನಕ ನಡೆಸಿದ ಅಧ್ಯಯನ ಅಂದಾಜಿನಂತೆ ಸಮುದ್ರದ ಜಾಗತಿಕ ಸರಾಸರಿ ಮಟ್ಟ ಪ್ರತಿ ವರ್ಷ ಸುಮಾರು 3.7 ಮಿಲಿ ಮೀಟರ್ ನಷ್ಟು ಏರಿಕೆಯಾಗುತ್ತಿದೆ ಎಂದು ನಾಸಾ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ.

ನಾಸಾ ಪ್ರಕಟಪಡಿಸಿರುವ ವರದಿಯಂತೆ ಕರ್ನಾಟಕದ ಬರಿ ಮಂಗಳೂರು ಮಾತ್ರವಲ್ಲ, ಕಡಲಂಚಿನ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಮತ್ತು ಉಡುಪಿ ಜಿಲ್ಲೆಯ ಹಲವು ಪ್ರದೇಶಗಳು ಸಮುದ್ರದಲ್ಲಿ ಲೀನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ! ಸಾರ್ವಜನಿಕರಿಗಾಗಿ ನಾಸಾ ಸ್ಥಳೀಯ ಸಮುದ್ರ ಮಟ್ಟವನ್ನು ತಿಳಿಯುವ ಆನ್‌ಲೈನ್ ಸಾಧನ ಕಂಡುಹಿಡಿದಿದೆ. 2020 ರಿಂದ 2150ರ ಒಳಗಿನ ದಶಕಗಳನ್ನು ಆಯ್ದುಕೊಂಡು ನಮಗೆ ಬೇಕಾದ ಪ್ರದೇಶದ ಸಮುದ್ರ ಮಟ್ಟ ತಿಳಿಯಬಹುದಾಗಿದೆ. ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.

ಮಂಗಳೂರಿನ ಸಮುದ್ರ ಮಟ್ಟ 2100ರ ಒಳಗೆ 1.87 ಅಡಿ ಏರಿಕೆಯಾಗಲಿದೆಯೆಂಬ ಎಚ್ಚರಿಕೆ ಕೊಟ್ಟಿದೆ. ಅಂದರೆ ಕಡಲು ಕ್ರಮೇಣ ಮಂಗಳೂರನ್ನು ಕಬಳಿಸಲಿದೆ ಎಂದರ್ಥ. ನಾಸಾ ವಿಜ್ಞಾನಿಗಳ ಮುಳುಗಡೆ ವರದಿ ಬಗ್ಗೆ ನಾನಾ ನಮೂನೆಯ ಜಿಜ್ಞಾಸೆ ಶುರುವಾಗಿದೆ. ಇದೆಲ್ಲ ಬರಿ ಸುಳ್ಳು; ಹಿಂದೆ ಜಗತ್ತೆ ಮುಳುಗುತ್ತದೆಂದು ಬೊಬ್ಬೆ ಎಬ್ಬಿಸಲಾಗಿತ್ತಲ್ಲ ಹಾಗೇ ಇದೆಂಬ ಅಭಿಪಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಟ್ರೋಲ್‌ಗಳೂ ನಡೆದಿದೆ. ಇನ್ನೊಂದೆಡೆ ನಾಸಾ ವಿಜ್ಞಾನಿಗಳೇಕೆ ಸುಳ್ಳು ಹೇಳುತ್ತಾರೆ; ಇಂಥ ಗಂಭೀರ ವಿಷಯ ಆಳವಾದ ಅಧ್ಯಯನವಿಲ್ಲದೆ ಹೇಳಲು ಸಾಧ್ಯವೇ ಇಲ್ಲ; ನಾಸಾ ವಿಜ್ಞಾನಿಗಳ ಅಭಿಪ್ರಾಯ ಕರಾರುವಾಕ್ ಆಗಿದೆ ಎನ್ನುವ ಚರ್ಚೆ ನಡೆದಿದೆ.

ನಾಸಾ ವಿಜ್ಞಾನಿಗಳು ಕೊಟ್ಟಿರುವ ಮಾಹಿತಿ ಸರಿಯಾದದ್ದು; ಮುಂದಿನ ದಿನಗಳ ಸಂಭವನೀಯ ಘಟನೆ ಎಂದು ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ-ಸಂಶೋಧಕ ಪ್ರೊ.ಕೆವಿ.ರಾವ್ ಹೇಳುತ್ತಾರೆ. ನಿತ್ಯ ನಗರೀಕರಣ, ಕಾರ್ಖಾನೆಗಳ ಹೆಚ್ಚಳವೇ ಮುಂತಾದ ಕಾರಣದಿಂದ ಜಾಗತಿಕ ಮಾಲಿನ್ಯ ವಿಪರೀತವಾಗುತ್ತಿದೆ. ಇದೇ ಗತಿಯಲ್ಲಿ ಮಾಲಿನ್ಯ ಹೆಚ್ಚಳವಾದರೆ ಮನುಷ್ಯನ ಕೈತಪ್ಪಿ ಜಗತ್ತಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲವೆಂದು ಪ್ರೊ.ರಾವ್ ಅಭಿಪ್ರಾಯ.

ಪ್ರೊ.ಕೆವಿ.ರಾವ್

ಪ್ರಕೃತಿ ನಮಗೆ ಆಕ್ಸಿಜನ್, ನೈಟ್ರೋಜನ್ ಮತ್ತಿತರ ಅನಿಲವನ್ನು ಸಾಕಷ್ಟು ನೀಡುತ್ತಿದೆ. ಪ್ರಕೃತಿ ನೀಡಿರುವ ಪೂರಕ ವಾತಾವರಣವನ್ನು ನಾವೇ ಹಾಳುಮಾಡುತ್ತಿದ್ದೇವೆ; ಕಾಡು ನಾಶವಾಗಿ ನಗರಗಳಾಗಿವೆ; ಇದರಿಂದ ಜಾಗತಿಕ ತಾಪಮಾನ ಹದಗೆಟ್ಟಿ ಪರಿಸರ ಸಂರಕ್ಷಿಸದೇ ಇರುವುದರಿಂದ ಸಾಗರದ ಹಿಮ ಗಡ್ಡೆಗಳು ನಿರೀಕ್ಷೆಗಿಂತ ವೇಗವಾಗಿ ಕರಗುತ್ತಿವೆ. ನಮ್ಮ ಸುತ್ತಲಿನ ಜಾಗವನ್ನು ಕಾಳಜಿಯಿಂದ ಕಾಪಾಡಿಕೊಳ್ಳದಿದ್ದರೆ ವಾತಾವರಣದ ಉಷ್ಣತೆ ಏರಿಕೆಯಾಗಿ ನೀರ್ಗಲ್ಲುಗಳು ಕರಗಿ ಸಮುದ್ರ ಉಕ್ಕೇರುವುದು ಸಹಜ ಪ್ರಕ್ರಿಯೆ; ಆಗ ಕಡಲ ತಡಿಯ ಪ್ರದೇಶ ಸಮುದ್ರದ ಪಾಲಾಗುತ್ತದೆ. ಇದನ್ನೆ ನಾಸಾ ಅಧ್ಯಯನದ ಮೂಲಕ ತಿಳಿಸಿದೆಯೆಂದು ಪ್ರೊ.ರಾವ್ ಹೇಳಿದ್ದಾರೆ.

ಹಾಲಿ ವೇಗದಲ್ಲೇ ನೀರ್ಗಲ್ಲುಗಳು ಕರಗುತ್ತ ಹೋದರೆ ಸಮಸ್ಯೆ ಏನಾಗಬಹುದೆಂದು ನಾಸಾ ವಿಜ್ಞಾನಿಗಳು ಲೆಕ್ಕ ಹಾಕಿದಾಗ ನಿರೀಕ್ಷಗಿಂತಲೂ ಆಘಾತಕಾರಿ ಅಂಶಗಳು ಗೋಚರಿಸಿದೆ. ದಕ್ಷಿಣದ ಮಹಾನಗರಗಳಾದ ಮುಂಬೈ, ಮಂಗಳೂರು ಸಮುದ್ರಕ್ಕೆ ಹತ್ತಿರದಲ್ಲಿದೆ. ಸಮುದ್ರದಲ್ಲಿ ಒಂದು ಮೀಟರ್ ನೀರು ಜಾಸ್ತಿಯಾದರೂ ಬಹಳಷ್ಟು ನಗರಗಳು ಮುಳುಗುತ್ತವೆ. ಈ ಕುರಿತು ವಿಶ್ವ ಸಂಸ್ಥೆ, ಜಾಗತಿಕ ಸಂಸ್ಥೆಗಳಲ್ಲಿ ತುಂಬ ಚರ್ಚೆಯಾಗಿದೆ.

ಸಮುದ್ರ ಒಮ್ಮೆ ಮುನ್ನುಗ್ಗಿದರೆ ಮತ್ತೆ ಹಿಂದಕ್ಕೆ ಬರಲಾರದು. ವಾತಾವರಣ, ಪ್ರಕೃತಿಯನ್ನು ಮನುಷ್ಯ ಕಾಪಾಡಿಕೊಳ್ಳದಿದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ. ಈಗಾಗಲೆ ವಾತಾವರಣ ಇದ್ದಕ್ಕಿದ್ದಂತೆ ಅನಾಹುತಕಾರಿಯಾಗಿ ಬದಲಾಗುತ್ತಿದೆ. ಅತಿವೃಷ್ಟಿಯಾಗುತ್ತಿದೆ; ಮೇಘ ಸ್ಪೋಟದಿಂದ ನರೆಯೇರುತ್ತಿದೆ; ಸಮುದ್ರದ ನೀರು ತಂತಾನೆ ಉಕ್ಕಿ ಹರಿಯುವುದು, ಸುನಾಮಿ, ಸೈಕ್ಲೋನ್ ಅಪ್ಪಳಿಸುತ್ತಿರುವುದೆಲ್ಲ ವಾತಾವರಣ ಕಲುಷಿತಗೊಂಡಿರುವುದಕ್ಕೆ ಸಂಕೇತ ಎಂದು ವಾತಾವರಣದ ಅನಾಹುತ ವಿವರಿಸುವ ಪ್ರೊ.ರಾವ್, ಮನು ಕುಲ-ಜೀವ ಸಂಕುಲ ಉಳಿಯಬೇಕೆಂದರೆ ಪರಿಸರ ಸಂರಕ್ಷಣೆ ಆಗಲೇಬೇಕೆನ್ನುತ್ತಾರೆ.

ಜಾಗತಿಕ ತಾಪಮಾನ ಬದಲಾವಣೆಯಿಂದ ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿವೆ; ಕಾರ್ಬನ್ ಡೈಆಕ್ಸೈಡ್‌ ಉಷ್ಣತೆ ಹೆಚ್ಚುತ್ತಿದೆ. ಉಷ್ಣತೆಯಿಂದ ನೀರಾವಿ ಹೆಚ್ಚುತ್ತದೆ. ನೀರಾವಿ ಏರಿಕೆಯಾದರೆ ಹಸಿರು ಮನೆ ಅನಿಲದ ಮೇಲೆ ಪರಿಣಾವಾಗುತ್ತದೆ. ದೇಶದ ಬೆನ್ನೆಲುಬಾದ ಕೃಷಿಯನ್ನು ನಿರ್ಧರಿಸುವ ಮಾನ್ಸೂನ್ ಮಾರುತದ ದಿಕ್ಕನ್ನೇ ತಪ್ಪಿಸಲಿದೆ ಜಾಗತಿಕ ತಾಪಮಾನ ಹೆಚ್ಚಳ. ಇದೆಲ್ಲದರ ಒಟ್ಟೂ ಪರಿಣಾಮವೇ ಹವಾಮಾನ ವೈಪರಿತ್ಯ. ಹೀಗಾಗಿ ಕಡಲಂಚಿನ ಹಲವು ನಗರಗಳು ಮುಳುಗುವ ಆತಂಕ ಎದುರಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ!


ಇದನ್ನೂ ಓದಿ: ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...