Homeಮುಖಪುಟನ್ಯಾಯಿಕ ಪರಂಪರೆಗೆ ಜಸ್ಟಿಸ್ ರೋಹಿಂಗ್ಟನ್ ನಾರಿಮನ್ ಅವರ ಕೊಡುಗೆ

ನ್ಯಾಯಿಕ ಪರಂಪರೆಗೆ ಜಸ್ಟಿಸ್ ರೋಹಿಂಗ್ಟನ್ ನಾರಿಮನ್ ಅವರ ಕೊಡುಗೆ

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯದಲ್ಲಿ 7 ವರ್ಷ ಸೇವೆ ಸಲ್ಲಿಸಿ ಜಸ್ಟಿಸ್ ರೋಹಿಂಗ್ಟನ್ ನಾರಿಮನ್ ಅವರು ಆಗಸ್ಟ್ 12ರಂದು ನಿವೃತ್ತಿ ಹೊಂದಿದರು. ಅವರ ನಿವೃತ್ತಿಯ ನಂತರ ಇಂದಿರಾ ಜೈಸಿಂಗ್, ಆನಂದ್ ಗ್ರೋವರ್, ಸಂಜಯ್ ಹೆಗಡೆ ಅವರನ್ನು ಒಳಗೊಂಡಂತೆ ಅನೇಕ ಹಿರಿಯ ವಕೀಲರು ಲೇಖನಗಳನ್ನು ಬರೆದರು ಮತ್ತು ನಾರಿಮನ್ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಸೇವೆಯನ್ನು ಕೊಂಡಾಡಿದರು. ’ಸಹೋದರ ನಾರಿಮನ್ ಅವರ ನಿವೃತ್ತಿಯಿಂದ, ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕಾಯುತ್ತಿದ್ದ ಒಂದು ಸಿಂಹವನ್ನು ಕಳೆದುಕೊಂಡಾಗಿದೆ ಎನಿಸುತ್ತಿದೆ’ ಎಂದು ಹೇಳಿದ್ದು ಮುಖ್ಯ ನ್ಯಾಯಮೂರ್ತಿ ರಮಣ ಅವರು.

ಜಸ್ಟಿಸ್ ನಾರಿಮನ್ ಅವರ ಸೇವೆಗೆ ಬಂದ ಪ್ರಶಂಸೆಯ ಸುರಿಮಳೆಯು ಜಸ್ಟಿಸ್ ಬೋಬಡೆ ಅವರು ನಿವೃತ್ತರಾದಾಗ ಬಂದ ಕಟುಕೆಗಳಿಗೆ ತದ್ವಿರುದ್ಧವಾಗಿತ್ತು. ಈ ವ್ಯತ್ಯಾಸವು ಸರ್ವೋಚ್ಚ ನ್ಯಾಯಾಲಯದ ಎರಡು ವಿಭಿನ್ನ ಅನುಸಂಧಾನದ ಮಾದರಿಗಳನ್ನು ಸೂಚಿಸುತ್ತದೆ. ಇದು ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿ ನಿಲ್ಲುವ ನ್ಯಾಯಾಧೀಶರು ಹಾಗೂ ಸಂವಿಧಾನವನ್ನು ರಕ್ಷಿಸುವ ತಮ್ಮ ಪ್ರತಿಜ್ಞೆಯನ್ನು ಮರೆತು, ’ಕಾರ್ಯಾಂಗಕ್ಕಿಂತ ಹೆಚ್ಚಿನ ಕಾರ್ಯಾಂಗದ ಮನಸ್ಥಿತಿ’ಯವರಾಗಿ ಕೆಲವು ನ್ಯಾಯಾಧೀಶರು ಇರುತ್ತಾರೆ ಎಂದು ತಿಳಿಸುತ್ತದೆ. ಸಂವಿಧಾನದ ರಕ್ಷಣೆಯಲ್ಲಿ ಕಾರ್ಯಾಂಗವನ್ನು ಎದುರುಹಾಕಿಕೊಳ್ಳಲು ಹೆದರದೇ ಇರುವ ನ್ಯಾಯಾಧೀಶರು ಇತಿಹಾಸದಲ್ಲಿ ಸ್ಥಾನ ಪಡೆಯುತ್ತಾರೆ. ತುರ್ತುಪರಿಸ್ಥಿತಿಯನ್ನು ನ್ಯಾಯಸಮ್ಮತಗೊಳಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಭಿನ್ನಮತ (ಡಿಸೆಂಟ್) ತೋರಿದ ಜಸ್ಟಿಸ್ ಖನ್ನಾ ಅವರು ಇತಿಹಾಸ ಸೃಷ್ಟಿಸುತ್ತಾರೆ, ತುರ್ತುಪರಿಸ್ಥಿತಿಯ ಕುಖ್ಯಾತ ತೀರ್ಪನ್ನು ನೀಡಿದ ಜಸ್ಟಿಸ್ ಬೇಗ್ ಅಲ್ಲ.

ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಜಸ್ಟಿಸ್ ಖನ್ನಾ ಅವರಿಗೆ ಇದ್ದ ಬದ್ಧತೆ ಮತ್ತು ಸ್ಪಷ್ಟ ನಿಲುವಿಗೆ ತಮ್ಮ ಮೆಚ್ಚುಗೆಯನ್ನು ಜಸ್ಟಿಸ್ ನಾರಿಮನ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅವರು ತಮ್ಮ ಪ್ರಮುಖ ತೀರ್ಪುಗಳಲ್ಲಿ ಮೂಲಭೂತ ಹಕ್ಕುಗಳ ವಿಸ್ತಾರದ ಪರಿಧಿಯ ನ್ಯಾಯಿಕ ತಿಳಿವಳಿಕೆಯನ್ನು ಗಟ್ಟಿಗೊಳಿಸಿದ್ದಾರೆ. ಅವರು ಬರೆದ ಪ್ರಮುಖ ತೀರ್ಪುಗಳಲ್ಲಿ ಶ್ರೇಯಾ ಸಿಂಘಲ್ (ಮಾಹಿತಿ ತಂತ್ರಜ್ಞಾನದ ಕಾಯಿದೆಯ ಸೆಷನ್ 66ಎಅನ್ನು ರದ್ದುಗೊಳಿಸಿದ್ದು), ಪುಟ್ಟಸ್ವಾಮಿ (ಭಾರತೀಯ ಸಂವಿಧಾನದಲ್ಲಿ ಖಾಸಗಿತನ ಹಕ್ಕು ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುತ್ತದೆ ಎಂದು ಹೇಳಿದ್ದು), ಶಾಯರಾ ಬಾನೊ (ತ್ರಿವಳಿ ತಲಾಕ್ ಅನ್ನು ರದ್ದುಗೊಳಿಸಿದ್ದು), ನವತೇಜ್ ಸಿಂಗ್ ಜೋಹರ್ (ಭಾರತೀಯ ದಂಡಸಂಹಿತೆಯ ಸೆಕ್ಷನ್ 377ಅನ್ನು ಕಡಿತಗೊಳಿಸಿದ್ದು), ಇಂಡಿಯನ್ ಯಂಗ್ ಲಾಯರ್‍ಸ್ ಅಸೋಸಿಯೇಷನ್ (ಕೇರಳದಲ್ಲಿ ಶಬರಿಮಲೈ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿದ್ದು), ಪರಮವೀರ್ ಸಿಂಗ್ ಸೈನಿ (ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ನಿರ್ದೇಶಿಸಿದ್ದು) ಕೆಲವು.

ಜಸ್ಟಿಸ್ ನಾರಿಮನ್ ಅವರ ಆಲೋಚನೆಗಳು ಸ್ಪಷ್ಟಪಡಿಸುವುದೇನೆಂದರೆ, ಬಹುಸಂಖ್ಯಾತರು ಏನೇ ಯೋಚಿಸಲಿ, ಒಬ್ಬ ವ್ಯಕ್ತಿಯ ಘನತೆ, ಖಾಸಗಿತನ ಮತ್ತು ಅಭಿವ್ಯಕ್ತಿಯ ಹಕ್ಕನ್ನು ರಕ್ಷಿಸಲೇಬೇಕೆಂಬುದು. ಏಕೆಂದರೆ ಅದನ್ನೇ ನಮ್ಮ ಸಂವಿಧಾನ ಸ್ಪಷ್ಟವಾಗಿ ಪ್ರತಿಪಾದಿಸುವುದು. ಬಹುಸಂಖ್ಯಾತ ನಿಲುವಿಗೆ ವಿರುದ್ಧವಾಗಿ ಕಾನೂನು ಹೇಗೆ ನಿಲ್ಲುತ್ತದೆ ಎಂಬುದನ್ನು ಅವರು ಸೆಪ್ಟೆಂಬರ್ 2018ರಲ್ಲಿ ನೀಡಿದ ಮೂರು ತೀರ್ಪುಗಳು ಸ್ಪಷ್ಟಪಡಿಸುತ್ತವೆ. ಈ ತೀರ್ಪುಗಳನ್ನು ಇತರ ನ್ಯಾಯಮೂರ್ತಿಗಳಾದ ಜಸ್ಟಿಸ್ ಚಂದ್ರಚೂಡ್, ಮಿಶ್ರಾ, ಖಾನ್ವಿಲಕರ್ ಹಾಗೂ ಮಿಸ್ರ ಅವರು ಸೇರಿ ನೀಡಿದ್ದರು.

2018ರ ನವತೇಜ್ ಸಿಂಗ್ ಜೋಹರ್ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನ್ಯಾಯಾಲಯ ಹೇಳಿದ್ದೇನೆಂದರೆ, ಸಮಲೈಂಗಿಕ ವರ್ತನೆಯನ್ನು ಅಪರಾಧೀಕರಣಗೊಳಿಸುವ ಐಪಿಸಿಯ 377 ಸೆಕ್ಷನ್‌ನಿಂದ ಎಲ್‌ಜಿಬಿಟಿ ವ್ಯಕ್ತಿಗಳ ಘನತೆ ಮತ್ತು ಸ್ವಾತಂತ್ರದ ಹಕ್ಕನ್ನು ಉಲ್ಲಂಘನೆಯಾಗುತ್ತದೆ ಎಂದು. 2018ರ ಜೋಸೆಫ್ ಶೈನ್ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಪುರುಷ ವ್ಯಭಿಚಾರವನ್ನು ಅಪರಾಧೀಕರಣಗೊಳಿಸುವ ಐಪಿಸಿಯ ಸೆಕ್ಷನ್ 497ಅನ್ನು ರದ್ದುಗೊಳಿಸಲಾಯಿತು. ವ್ಯಭಿಚಾರದ ಬಗ್ಗೆ ಇರುವ ಕಾಯಿದೆಯು ಲೈಂಗಿಕತೆಯ ಪಿತೃಪ್ರಧಾನ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಆ ತಿಳಿವಳಿಕೆಯು ’ಸಮಾಜದ ಎಲ್ಲಾ ಸದಸ್ಯರಿಗೆ ಮುಕ್ತ, ಸಮಾನ ಮತ್ತು ಘನತೆಯ ಅಸ್ತಿತ್ವಕ್ಕೆ ಇರುವ ಬದ್ಧತೆಯ ಸಾಂವಿಧಾನಿಕ ನೈತಿಕತೆಗೆ ವ್ಯತಿರಿಕ್ತವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿತು.

ಅದೇ ವರ್ಷದ ಇಂಡಿಯನ್ ಯಂಗ್ ಲಾಯರ್ಸ್ ವರ್ಸಸ್ ಸ್ಟೇಟ್ ಆಫ್ ಕೇರಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಶಬರಿಮಲೈ ದೇವಸ್ಥಾನದಲ್ಲಿ 10ರಿಂದ ಐವತ್ತು ವಯಸ್ಸಿನ ಮಹಿಳೆಯರು ಪೂಜೆ ಸಲ್ಲಿಸಬಾರದು ಎಂಬ ನಿಯಮಗಳನ್ನು ರದ್ದುಗೊಳಿಸಿತು. ಆ ತೀರ್ಪಿನಲ್ಲಿ ’ಒಬ್ಬ ಮಹಿಳೆಯ ಮುಟ್ಟಿನ ಸ್ಥಿತಿಯು ಅತ್ಯಂತ ವೈಯಕ್ತಿಕ ಹಾಗೂ ಅವಳ ಖಾಸಗಿತನದ ಅವಿಭಾಜ್ಯ ಅಂಗ’ ಎಂದು ಹಾಗೂ ಅದು ಯಾವುದೇ ರೀತಿಯ ಬಹಿಷ್ಕಾರಕ್ಕೆ ಮತ್ತು ನಿರಾಕರಣೆಗೆ ಆಧಾರವಾಗಬಾರದು ಎಂದು ವಾದಿಸಲಾಗಿತ್ತು. ನ್ಯಾಯಾಲಯ ಸ್ಪಷ್ಟಪಡಿಸಿದ್ದೇನೆಂದರೆ, ’ಆದ್ಯತೆಗಳ ಸಾಂವಿಧಾನಿಕ ಕ್ರಮ’ದಲ್ಲಿ ’ಧರ್ಮದ ಸ್ವಾತಂತ್ರಕ್ಕೆ ಇರುವ ವೈಯಕ್ತಿಕ ಹಕ್ಕು’ ಎಂಬುದು ’ಸಮಾನತೆ’, ಸ್ವಾತಂತ್ರ ಮತ್ತು ವೈಯಕ್ತಿಕ ಸ್ವಾತಂತ್ರಗಳ ಸಾಂವಿಧಾನಿಕ ಪ್ರತಿಪಾದನೆಗಳಿಗೆ ಒಳಪಟ್ಟಿರುತ್ತದೆ.

ಆದರೆ, ’ಸಾಂವಿಧಾನಿಕ ನೈತಿಕತೆ’ ಮತ್ತು ’ಪರಿವರ್ತಕ ಸಂವಿಧಾನಕತೆ’ ಎಂದು ಕರೆಯಲಾದ ಈ ಹೂರಣವನ್ನು ಶೀಘ್ರವೇ ಬದಲಿಸಲಾಯಿತು. ಶಬರಿಮಲೈ ತೀರ್ಪನ್ನು ಮರುವಿಚಾರಣೆ ಅಥವಾ ರಿವ್ಯೂ ಮಾಡಲು ನೇಮಿಸಿದ ನ್ಯಾಯಾಲಯದ ಬೆಂಚ್ ನೀಡಿದ ತೀರ್ಪು, ಸಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯುವ ದಾರಿಯಿಂದ ಅದು ಹಿಂದೆಂದೂ ಕಾಣದಂತ ರೀತಿಯಲ್ಲಿ ಹಿಂದೆ ಸರಿದಿದ್ದು ಸ್ಪಷ್ಟವಾಯಿತು. ಮರುವಿಚಾರಣೆಯ ಪರಿಧಿಯು ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಅತ್ಯಂತ ಚಿಕ್ಕ ಪರಿಧಿಯದ್ದಾಗಿದ್ದು, ’ಅದರಲ್ಲಿ ಒಂದು ದಾಖಲೆಯ/ತೀರ್ಪಿನ ನಿಟ್ಟಿನಲ್ಲಿ ಅತ್ಯಂತ ರಾಚುವಂತೆ ದೋಷ ಇದ್ದರೆ’ ಮಾತ್ರ ನ್ಯಾಯಾಲಯವು ಅದನ್ನು ಪರೀಕ್ಷಿಸುತ್ತದೆ ಹಾಗೂ ಅಂತಹ ರಾಚುವಂತ ದೋಷ ಕಂಡುಬರದೇ ಇದ್ದರೆ ಆ ಮರುವಿಚಾರಣೆಯ ಅರ್ಜಿಯನ್ನು (ರಿವ್ಯೂ ಪೆಟಿಷನ್) ವಜಾಗೊಳಿಸಲಾಗುತ್ತದೆ. ಶಬರಿಮಲೈ ತೀರ್ಪಿನ ಮರುವಿಚಾರಣೆಯನ್ನು ವಜಾಗೊಳಿಸದೇ ಇದ್ದದ್ದು, ಅದರಲ್ಲೂ ಅರ್ಜಿ ಸಲ್ಲಿಸಿದವರು ’ದಾಖಲೆಯ ನಿಟ್ಟಿನಲ್ಲಿ ಅತ್ಯಂತ ರಾಚುವಂತೆ ದೋಷ ಇದೆ’ ಎಂದು ಸಾಬೀತುಪಡಿಸದೇ ಇದ್ದರೂ, ಅದನ್ನು ವಜಾಗೊಳಿಸದೇ ಇದ್ದದ್ದು ನ್ಯಾಯಾಲಯಗಳು ಯಾವ ರೀತಿಯ ರಾಜಕೀಯ ಜರೂರುಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದವು ಎಂಬುದನ್ನು ಸ್ಪಷ್ಟಗೊಳಿಸುತ್ತದೆ.

ಕೊರೊನಾಶಬರಿಮಲೈ ತೀರ್ಪಿನ ನಂತರ ಅದರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ತೀರ್ಪಿನ ವಿರುದ್ಧದ ಪ್ರತಿಭಟನೆಯ ನಾಯಕತ್ವವನ್ನು ಒಕ್ಕೂಟ ಸರ್ಕಾರದ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಅದರ ಹಿಂದಿನ ಶಕ್ತಿಯಾದ ಆರ್‌ಎಸ್‌ಎಸ್ ವಹಿಸಿಕೊಂಡಿದ್ದವು. ಆಗ ಬಿಜೆಪಿಯ ಅಧ್ಯಕ್ಷರಾಗಿದ್ದ ಅಮಿತ ಶಾ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅಸಹಕಾರ ನೀಡುವಂತೆ ಬಹಿರಂಗ ಕರೆ ನೀಡಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ’ನ್ಯಾಯಾಲಯಗಳು ಅನುಷ್ಠಾನಗೊಳಿಸಲಾಗದಂತಹ ತೀರ್ಪುಗಳನ್ನು ನೀಡಬಾರದು’ ಎಂದು ಪುಕ್ಕಟ್ಟೆ ಸಲಹೆಯನ್ನೂ ನೀಡಿದ್ದರು. ಆಡಳಿತ ಪಕ್ಷದ ಅಧ್ಯಕ್ಷನಾಗಿ, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನುಸರಿಸಬಾರದು ಎಂದು ಸಾರ್ವಜನಿಕವಾಗಿ ವಾದಿಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು.

ಇದು ನ್ಯಾಯಾಲಯಗಳಿಗೆ ಒಂದು ರೀತಿಯ ಬೆದರಿಕೆ ಆಗಿತ್ತು; ಬಹುಸಂಖ್ಯಾತರ ಧಾರ್ಮಿಕ ಭಾವನೆಗಳ ಮೇಲೆ ಸಂವಿಧಾನಾತ್ಮಕ ನೈತಿಕತೆಯನ್ನು ಎತ್ತಿಹಿಡಿಯಬಾರದು ಎಂಬುದೇ ಈ ಬೆದರಿಕೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯವು ಗಟ್ಟಿಯಾಗಿ ತನ್ನ ನಿಲುವನ್ನು ಪ್ರತಿಪಾದಿಸುವುದನ್ನು ಬಿಟ್ಟು, ಒತ್ತಡಕ್ಕೆ ಮಣಿಯಿತು. ಜಸ್ಟಿಸ್ ಗೋಗೊಯಿ, ಎ.ಎಂ. ಖಾನ್ವಿಲಕರ್ ಮತ್ತು ಇಂದು ಮಲ್ಹೋತ್ರ ಅವರುಗಳು ಬಹುಸಂಖ್ಯಾತರ ಅಭಿಪ್ರಾಯಕ್ಕೆ ಮಣಿದು, ಮರುವಿಚಾರಣೆಯ ಪರಿಧಿಯನ್ನು ಮೀರಿ ಈ ವಿಷಯವನ್ನು ಮರುಪರಿಶೀಲಿಸಲು ಅವಕಾಶ ನೀಡಿದರು.

ಜಸ್ಟಿಸ್ ಚಂದ್ರಚೂಡ್ ಮತ್ತು ನಾರಿಮನ್ ಅವರ ಅಲ್ಪಸಂಖ್ಯಾತ ಅಭಿಪ್ರಾಯವನ್ನು ನೋಡಿದರೆ, ಶಬರಿಮಲೈ ತೀರ್ಪನ್ನು ಮರಪರಿಶೀಲಿಸಲು ಯಾವ ರೀತಿಯ ಒತ್ತಡ ಹೇರಲಾಗಿತ್ತು ಎಂಬುದು ಗೊತ್ತಾಗುತ್ತದೆ. ಈ ಇಬ್ಬರು ನ್ಯಾಯಾಧೀಶರು ಹೇಳಿದ್ದೇನೆಂದರೆ, ’ನಂಬಿಕೆ ಮತ್ತು ಶ್ರದ್ಧೆಯ ವಿಷಯಗಳು ನ್ಯಾಯಾಲಯಗಳಿಂದ ಪರಿಶೀಲಿಸುವುದು ಸಾಧ್ಯವಿಲ್ಲ’ ಎಂದು ಕೆಲವು ನುರಿತ ವಕೀಲರು ಅತ್ಯಂತ ತೀವ್ರತೆಯ ವಾದಗಳನ್ನು ಮಂಡಿಸಿದ್ದಾರೆ. ಹಾಗೂ ಇಂತ ವಾದಗಳನ್ನು ತಿರಸ್ಕರಿಸಬೇಕಿದೆ ಏಕೆಂದರೆ ಅವುಗಳು ’ಆರ್ಟಿಕಲ್ 25’ ರ ಉಲ್ಲಂಘನೆಯಾಗುತ್ತವೆ. ಈ ನ್ಯಾಯಾಧೀಶರು ಆರ್ಟಿಕಲ್ 25ರಲ್ಲಿ ಹೇಳಿದ್ದನ್ನೇ ಪ್ರತಿಪಾದಿಸಿದರು; ಅದರ ಅನುಗುಣವಾಗಿ ಒಬ್ಬ ವ್ಯಕ್ತಿಗೆ ತನ್ನ ಇಚ್ಛೆಯ ಧರ್ಮದ ಅನುಸರಿಸಲು, ಆಚರಿಸಲು, ಪ್ರಚಾರ ಮಾಡುವ ಸಂವಿಧಾನಾತ್ಮಕ ಹಕ್ಕನ್ನು ಹೊಂದಿದ್ದಾಳೆ/ನೆ ಹಾಗೂ ಇಂತಹ ಹಕ್ಕು ಸಮಾನತೆಯ ಮತ್ತು ಘನತೆಯ ಹಕ್ಕಿನಂತೆ ಮೂಲಭೂತ ಹಕ್ಕಿನಂತೆ ಪರಿಗಣಿಸಬೇಕು ಎಂದು ಹೇಳಿದ್ದರು.

ಈ ಅಲ್ಪಸಂಖ್ಯಾತ ತೀರ್ಪಿನ ಅರ್ಥ ಅತ್ಯಂತ ಸ್ಪಷ್ಟವಾಗಿತ್ತು; ರಾಜಕೀಯ ಕಾರ್ಯಾಂಗವು ಹೇಳುತ್ತಿರುವ ಅಭಿಪ್ರಾಯವು ಅತ್ಯಂತ ಸ್ಪಷ್ಟವಾಗಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಹಾಗಾಗಿ ಅದು ತಿರಸ್ಕರಿಸಲು ಅರ್ಹ. ಮುಂದೆ ಬರೆಯುತ್ತ, ’ಶಬರಿಮಲೈ ದೇವಸ್ಥಾನದಲ್ಲಿ ಪೂಜಿಸಲು ಇರುವ ಮೂಲಭೂತ ಹಕ್ಕನ್ನು ಚಲಾಯಿಸಲು ಆಗದಂತೆ 10ರಿಂದ 50ರ ವಯಸ್ಸಿನ ಮಹಿಳೆಯನ್ನು ತಡೆದಿರುವ ಈ ಸನ್ನಿವೇಶದಲ್ಲಿ ಈ ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳನ್ನು ಪುನರ್‌ಸ್ಥಾಪಿಸಬೇಕು. ಯಾರೆಲ್ಲ ಈ ತೀರ್ಪಿನ ಅನುಗುಣವಾಗಿ ನಡೆಯುವುದಿಲ್ಲವೋ, ಸಚಿವರು, ರಾಜ್ಯದ ಮತ್ತು ಒಕ್ಕೂಟದ ಹಾಗೂ ಎಂಪಿ ಮತ್ತು ಶಾಸಕರಿಗೆ ಸಂಬಂಧಿಸಿದಂತೆ, ಈ ತೀರ್ಪಿನ ಅನುಗುಣವಾಗಿ ನಡೆಯದಿದ್ದರೆ, ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ, ಸಂರಕ್ಷಿಸುವ ಹಾಗೂ ರಕ್ಷಿಸಲು ಅವರುಗಳು ತೆಗೆದುಕೊಂಡ ಸಂವಿಧಾನಾತ್ಮಕ ವಚನದ ಉಲ್ಲಂಘನೆಯಾಗುತ್ತದೆ’ ಎಂದಿತ್ತು.

ಶಬರಿಮಲೈ ಮರುಪರಿಶೀಲನೆಯ ಅರ್ಜಿಯಲ್ಲಿ ಬಂದ ಜಸ್ಟಿಸ್ ನಾರಿಮನ್ ಅವರ ಭಿನ್ನಾಭಿಪ್ರಾಯಗಳು ಅವರ ಬಗ್ಗೆ ಹೇಳುವುದೇನೆಂದರೆ, ಅವರು ತಮ್ಮ ನ್ಯಾಯಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವಾಗ ಕಾರ್ಯಾಂಗ ಒತ್ತಡಗಳಿಗೆ ಮಣಿಯುತ್ತಿದ್ದಿಲ್ಲ. ಬಹುಸಂಖ್ಯಾತರ ಭಾವನೆಗಳು ತಾರಕಕ್ಕೆ ಏರಿದಾಗ ಒಬ್ಬ ವ್ಯಕ್ತಿಯ ಘನತೆ ಮತ್ತು ಖಾಸಗಿತನಕ್ಕೆ ಇರುವ ಗೌರವದ ಸಂವಿಧಾನಾತ್ಮಕ ಮೌಲ್ಯಗಳ ಬಗ್ಗೆ ಅವರು ಗಟ್ಟಿಯಾಗಿ ನಂಬಿ ಪ್ರತಿಪಾದಿಸುತ್ತಿದ್ದರು. ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ ಅವರು ನೀಡಿದ ಅಭಿಪ್ರಾಯವು ಬಹುಸಂಖ್ಯಾತವಾದಿ ಪರಿಸರದಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಒಬ್ಬ ನ್ಯಾಯಾಧೀಶರ ಪಾತ್ರ ಏನಿರಬೇಕು ಎಂಬುದನ್ನು ಅದ್ಭುತವಾಗಿ ಹೇಳಲಾಗಿದೆ. ಅವರು ಹೇಳುವುದು:

“ಭಾರತದ ಸಂವಿಧಾನದಲ್ಲಿ ಇರುವ ಮೂಲಭೂತ ಹಕ್ಕುಗಳ ಅಧ್ಯಾಯದ ಉದ್ದೇಶವೇನು ಎಂದರೆ, ಒಬ್ಬ ವ್ಯಕ್ತಿಯ ಸ್ವಾತಂತ್ರ ಮತ್ತು ಘನತೆಯ ವಿಷಯವನ್ನು ಬಹುಸಂಖ್ಯಾತವಾದಿ ಸರಕಾರಗಳ ಕೈಗೆ ಸಿಗದಂತೆ ದೂರದಲ್ಲಿ ಇರಿಸುವುದು ಮತ್ತು ಅದರಿಂದ ಸಂವಿಧಾನಾತ್ಮಕ ನೈತಿಕತೆಯನ್ನು ನ್ಯಾಯಾಲಯಗಳಿಂದ ಅನ್ವಯಗೊಳಿಸಲಾಗಿ, ಜೊತೆಗೆ ’ಪ್ರತ್ಯೇಕವಾದ ಮತ್ತು ಹೆಚ್ಚು ಒಳಗೊಳ್ಳದೆ ಹೋದ’ ಅಲ್ಪಸಂಖ್ಯಾತರ ಹಕ್ಕುಗಳೊಂದಿಗೆ, ಈ ಎಲ್ಲರ ಹಕ್ಕುಗಳನ್ನು ಪರಿಣಾಮಕಾರಿಯಾಗುವಂತೆ ಮಾಡುವುದು. ಇಂತಹ ಒಂದು ಅಲ್ಪಸಂಖ್ಯಾತ ಸಮುದಾಯ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ತಟ್ಟಿದೆ, ಈ ನ್ಯಾಯಾಲಯವು ಪ್ರಜೆಗಳ ಮೂಲಭೂತ ಹಕ್ಕುಗಳ ಸುಪರ್ದುದಾರನಾಗಿದೆ. ಈ ಮೂಲಭೂತ ಹಕ್ಕುಗಳು ಚುನಾವಣೆಯ ಫಲಿತಾಂಶದ ಮೇಲೆ ಅವಲಂಬಿತವಾಗಿಲ್ಲ. ಹಾಗೂ ಸಾಮಾಜಿಕ ನೈತಿಕತೆಯ ವಿಷಯಗಳಲ್ಲಿ ಯಾವುದು ಸಾಂಪ್ರದಾಯಿಕ ಎಂಬುದನ್ನು ತಿಳಿಸಲು ಬಹುಸಂಖ್ಯಾತವಾದಿ ಸರಕಾರಗಳಿಗೆ ಅವಕಾಶವಿರುವುದಿಲ್ಲ. ಭಾರತದಲ್ಲಿ
ಸಂವಿಧಾನಿಕತೆಯ ಬ್ರಹ್ಮಾಂಡದಲ್ಲಿ ಮೂಲಭೂತ ಹಕ್ಕುಗಳ ಅಧ್ಯಾಯವು ಉತ್ತರ ನಕ್ಷತ್ರ ಇದ್ದಂತೆ. ಸಂವಿಧಾನಿಕ ನೈತಿಕತೆಯು ಎಂದಿಗೂ ಬೇರೆ ಬೇರೆ ಬಹುಸಂಖ್ಯಾತವಾದಿ ಆಳ್ವಿಕೆಗಳ ಮೇಲೆ ಹಾಗೂ ಸಾಮಾಜಿಕ ನೈತಿಕತೆಯನ್ನು ಬದಲಿಸುವ ನಿರ್ದಿಷ್ಟ ನೋಟಗಳನ್ನು ಹೇರುವುದರ ಮೇಲೆ ಜಯ ಸಾಧಿಸುತ್ತದೆ”.

ಮೂಲಭೂತ ಹಕ್ಕುಗಳ ಅಧ್ಯಾಯವನ್ನು ’ಉತ್ತರ ನಕ್ಷತ್ರ’ ಎಂದು ನೋಡುವ ನಾರಿಮನ್ ಅಂತಹ ನ್ಯಾಯಾಧೀಶರು ನಮಗೆ ಬೇಕಿದ್ದಾರೆ ಹಾಗೂ ನಮ್ಮ ಸಂವಿಧಾನ ಹೇಳುತ್ತದೆ ಎಂಬ ಕಾರಣಕ್ಕೆ ಬಹುಸಂಖ್ಯಾತರು ಏನೇ ಅಂದುಕೊಳ್ಳಲಿ ಅಲ್ಪಸಂಖ್ಯಾತರಿಗೆ ಘನತೆ ಮತ್ತು ತನ್ನತನ ರಕ್ಷಿಸಲು ಗಟ್ಟಿಯಾಗಿ ನಿಲ್ಲುವ ನ್ಯಾಯಾಧೀಶರ ಅಗತ್ಯ ಖಂಡಿತವಾಗಿಯೂ ಇದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನುವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು


ಇದನ್ನೂ ಓದಿ: RSS ತಾಲಿಬಾನ್‌ನಂತೆ ಆಡಳಿತ ನಡೆಸಲು ಬಯಸುತ್ತದೆ: ನಟ ಚೇತನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...