Homeಮುಖಪುಟ20% ಕಡಿಮೆ ಬೆಲೆ ನೀಡಿ ಸೇಬು ಖರೀದಿಗೆ ಮುಂದಾದ ಅದಾನಿ ಕಂಪನಿ: ರೈತರಿಂದ ಅದಾನಿ ಬಾಯ್ಕಾಟ್...

20% ಕಡಿಮೆ ಬೆಲೆ ನೀಡಿ ಸೇಬು ಖರೀದಿಗೆ ಮುಂದಾದ ಅದಾನಿ ಕಂಪನಿ: ರೈತರಿಂದ ಅದಾನಿ ಬಾಯ್ಕಾಟ್ ಬೆದರಿಕೆ

ಕಳೆದ ವರ್ಷ 88 ರೂ ಗೆ ಒಂದು ಕೆಜಿ ಪ್ರೀಮಿಯಂ ಸೇಬು ಖರೀದಿಸುತ್ತಿದ್ದ ಅದಾನಿ ಕಂಪನಿ ಈಗ ಕೇವಲ 72 ರೂ ಖರೀದಿಸಲು ಮುಂದಾಗಿದೆ.

- Advertisement -
- Advertisement -

ದೆಹಲಿಯಲ್ಲಿ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಬೃಹತ್ ಹೋರಾಟ ಇಂದಿಗೆ 9 ತಿಂಗಳು ಪೂರೈಸಿದೆ. ಸರ್ಕಾರದ ಯಾವುದೇ ಸಂಧಾನ, ಬೆದರಿಕೆಗಳಿಗೆ ಬಗ್ಗದ ರೈತರು ದಿನೇ ದಿನೇ ಹೋರಾಟ ತೀವ್ರಗೊಳಿಸುತ್ತಿದ್ದಾರೆ. ಅವರ ಹೋರಾಟ ನ್ಯಾಯಯುತವಾದುದ್ದು ಎಂಬುದನ್ನು ಹಿಮಾಚಲ ಪ್ರದೇಶದ ಸೇಬು ಬೆಳೆಗಾರರ ಸಂಕಷ್ಟ ಮತ್ತೊಮ್ಮೆ ಸಾಬೀತುಪಡಿಸಿದೆ. ಈ ವರ್ಷ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಮೊದಲೆ ಬೆಳೆ ನಷ್ಟದಿಂದ ಸಂಕಷ್ಟದಿಂದಿದ್ದ ರೈತರ ಮೇಲೆ ಅದಾನಿ ಅಗ್ರಿ ಫ್ರೆಶ್ ಕಂಪನಿ ಗಧಾಪ್ರಹಾರ ನಡೆಸಿದೆ. 20% ಕಡಿಮೆ ಬೆಲೆ ನೀಡಿ ಸೇಬು ಖರೀದಿಗೆ ಮುಂದಾಗಿರುವುದು ರೈತರಲ್ಲಿ ಆಕ್ರೋಶ ಹುಟ್ಟಿಸಿದೆ.

ಹಿಮಾಚಲ ಪ್ರದೇಶದಲ್ಲಿ ಅದಾನಿ ಗ್ರೂಪ್ ಸಿಎ ಸ್ಟೋರ್‌ಗಳಿಗೆ ಸೇಬು ಖರೀದಿಸಲು ಗುರುವಾರ ತನ್ನ ಬೆಲೆಗಳನ್ನು ಘೋಷಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರೀಮಿಯಂ ಸೇಬಿನ ಬೆಲೆಗಳು ಈ ಬಾರಿ ಶೇಕಡಾ 20 ರಷ್ಟು ಕಡಿಮೆಯಾಗಿವೆ. ಕಳೆದ ವರ್ಷ ಪ್ರೀಮಿಯಂ ಸೇಬಿನ ಆರಂಭಿಕ ಬೆಲೆ ಪ್ರತಿ ಕೆಜಿಗೆ 88 ರೂ ಇತ್ತು. ಆದರೆ ಅದನ್ನು ಈ ಬಾರಿ ಅದು ಕೆಜಿಗೆ 72 ರೂಗೆ ಇಳಿಸಲಾಗಿದೆ. ಇದು ಸೇಬು ಬೆಳೆಗಾರರನ್ನು ಕೆರಳಿಸಿದ್ದು ಅವರು ಅದಾನಿ ಕಂಪನಿ ಬಾಯ್ಕಾಟ್ ಮಾಡುವ ಎಚ್ಚರಿಕೆ ನಿಡಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.

ಇಂದು ಘೋಷಿಸಿದ ದರಗಳ ಪ್ರಕಾರ, ಶೇ.60 ಕ್ಕಿಂತ ಕಡಿಮೆ ಬಣ್ಣವನ್ನು ಹೊಂದಿರುವ ಸೇಬುಗಳನ್ನು ಪ್ರತಿ ಕೆಜಿಗೆ 12 ರಿಂದ 15ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆಜಿ ಸೇಬಿನ ಉತ್ಪಾದನಾ ವೆಚ್ಚ ಸುಮಾರು 25 ರೂ ಆಗುತ್ತದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಮ್ಲಾದಲ್ಲಿ ಸೇಬು ಖರೀದಿ ಪ್ರಕ್ರಿಯೆ: Photo Courtesy: The Tribune

“ಇದು ತುಂಬಾ ನಿರಾಶಾದಾಯಕವಾಗಿದೆ ಮತ್ತು ಸೇಬು ಬೆಳೆಗಾರರು ಈ ಬಾರಿ ಅದಾನಿ ಕಂಪನಿಯನ್ನು ಬಹಿಷ್ಕರಿಸಬೇಕು” ಎಂದು ಹಣ್ಣು, ತರಕಾರಿ ಮತ್ತು ಹೂ ಬೆಳೆಗಾರರ ​​ಸಂಘದ ಅಧ್ಯಕ್ಷ ಹರೀಶ್ ಚೌಹಾಣ್ ಕರೆ ನೀಡಿದ್ದಾರೆ. “ಅದಾನಿ ಕಂಪನಿಯ ಬೆಲೆ ನಿಗದಿಗೊಳಿಸುವ ಕಾರ್ಯವಿಧಾನವು ಅನಿಯಂತ್ರಿತವಾಗಿದೆ. ಬೆಲೆಗಳನ್ನು ನಿಗದಿಪಡಿಸಿದಾಗ ಯಾವುದೇ ಸರ್ಕಾರಿ ಅಧಿಕಾರಿಯಾಗಲಿ ಅಥವಾ ರೈತರ ಪ್ರತಿನಿಧಿಗಳಾಗಲಿ ಯಾರೂ ಇಲ್ಲ” ಎಂದು ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೇ ದೆಹಲಿಯಲ್ಲಿ ಹೋರಾಟನಿರತ ರೈತರ ವರ್ಷದಿಂದಲೂ ಹೇಳುತ್ತಾ ಬಂದಿರುವುದನ್ನು ನಾವು ಗಮನಿಸಬೇಕು.

ಇನ್ನೊಂದೆಡೆ ಬಿಥಲ್‌ನಲ್ಲಿರುವ ಅದಾನಿ ಸಿಎ ಗೋಡೌನ್ ಪ್ಲಾಂಟ್ ಮುಖ್ಯಸ್ಥ ಮಂಜೀತ್ ಶಿಲು ಮಾತನಾಡಿ, “ನಾವು ನೀಡುತ್ತಿರುವ ಬೆಲೆಗಳು ಉತ್ತಮವಾಗಿವೆ. ಬೆಳೆಗಾರರು ಪ್ಯಾಕಿಂಗ್ ಮತ್ತು ಗ್ರೇಡಿಂಗ್‌ಗೆ ಹಣ ಪಾವತಿಸಬೇಕಾಗಿಲ್ಲ. ನಮ್ಮಲ್ಲಿ ಸುಮಾರು 17,000 ಬೆಳೆಗಾರರ ​​ಗುಂಪು ಇದೆ. ಅವರು ನಮಗೆ ಸೇಬು ಮಾರುತ್ತಾರೆ. ನಾವು ಬೆಲೆಗಳನ್ನು ಘೋಷಿಸಿದಾಗಿನಿಂದ ಯಾರೂ ಆ ಬಗ್ಗೆ ನಮಗೆ ದೂರು ನೀಡಿಲ್ಲ. ಅದಾನಿ ಕಂಪನಿಗೆ ಸೇಬು ನೀಡದ ಬೆಳೆಗಾರರು ಮಾತ್ರ ದೂರು ನೀಡುತ್ತಿದ್ದಾರೆ” ಎಂದಿದ್ದಾರೆ.

ಅದಾನಿ ಕಂಪನಿ ದರಗಳು ಅತ್ಯಂತ ಕಳಪೆ ಮಟ್ಟದ್ದಾಗಿವೆ. ಎಪಿಎಂಸಿ ಮಂಡಿಗಳಲ್ಲಿ ಇದಕ್ಕಿಂತ ಹೆಚ್ಚಿನ ಬೆಲೆ ರೈತರಿಗೆ ಸಿಗುತ್ತಿದೆ ಎಂದು ಪ್ರಗತಿಪರ ಬೆಳೆಗಾರರ ​​ಸಂಘದ ಅಧ್ಯಕ್ಷ ಲೋಕಿಂದರ್ ಬಿಶ್ತ್ ಹೇಳಿದ್ದಾರೆ. ಅದಾನಿ ಕಂಪನಿಯ ಸಿಎ ಸ್ಟೋರ್‌ಗಳನ್ನು ಸ್ಥಾಪಿಸಲು ಸರ್ಕಾರದಿಂದ ದೊಡ್ಡ ಸಬ್ಸಿಡಿಗಳನ್ನು ಪಡೆದಿದ್ದು ಈಗ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಈ ಕಂಪನಿಗಳ ಮೋಸಜಾಲದಿಂದ ರೈತರು ಬಿಡುಗಡೆ ಹೊಂದಲು ಸರ್ಕಾರವು ಕೋಲ್ಡ್‌ ಸ್ಟೋರೇಜ್‌ಗಳನ್ನು ರೈತರಿಗೆ ನಿರ್ಮಿಸಿಕೊಡಬೇಕು. ಇದರಿಂದ ರೈತರು ಬೆಲೆಕುಸಿತ ಉಂಟಾದಾಗ ಅತಿ ಕಡಿಮೆ ಬೆಲೆಗೆ ಸೇಬು ಮಾರುವುದು ತಪ್ಪುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರವು ಗಣನೀಯ ಪ್ರಮಾಣದ ಸೇಬುಗಳನ್ನು ಸಮಂಜಸವಾದ ಬೆಲೆಯಲ್ಲಿ ಖರೀದಿಸಿದರೆ, ಕಾಶ್ಮೀರದ ನಾಫೆಡ್‌ನಂತೆ ಮಾರುಕಟ್ಟೆಯು ಹೆಚ್ಚು ಕಡಿಮೆ ಸ್ಥಿರವಾಗಿರುತ್ತದೆ ಮತ್ತು ಮಾರುಕಟ್ಟೆ ಶಕ್ತಿಗಳು ಬೆಳೆಗಾರರನ್ನು ಶೋಷಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ಅವರು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕುಲದೀಪ್ ರಾಥೋರ್ ಅದಾನಿ ಕಂಪನಿಯ ರೈತ ವಿರೋಧಿ ಧೋರಣೆಯನ್ನು ಖಂಡಿಸಿದ್ದಾರೆ. ಸರ್ಕಾರದ ಮೌನ ಅನುಮೋದನೆಯೊಂದಿಗೆ ಅದಾನಿ ಕಂಪನಿಗೆ ಸೇಬು ಬೆಲೆಯನ್ನು ಕಡಿಮೆ ಮಾಡಿದೆ. ಈಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಮತ್ತು ಅದಾನಿ ಕಂಪನಿ ಹೆಚ್ಚು ಬೆಲೆ ನೀಡುವಂತೆ ತಾಕೀತು ಮಾಡಬೇಕೆಂದು ಒತ್ತಾಯಿಸಿದ್ದಾರೆ.

1984 ರಿಂದ ರಾಜ್ಯ ಸರ್ಕಾರಗಳು ರೈತರಿಗೆ ಕೃಷಿ ಉಪಕರಣಗಳ ಜೊತೆಗೆ ಕೀಟನಾಶಕ, ಶಿಲೀಂಧ್ರನಾಶಕ ಮತ್ತು ಇತರ ಔಷಧಿಗಳ ಮೇಲೆ ಸಬ್ಸಿಡಿಗಳನ್ನು ನೀಡುತ್ತಿವೆ ಆದರೆ ಬಿಜೆಪಿ ಸರ್ಕಾರವು ಈ ಎಲ್ಲಾ ಸಬ್ಸಿಡಿಗಳನ್ನು ನಿಲ್ಲಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ವರ್ಷ 88 ರೂ ಗೆ ಒಂದು ಕೆಜಿ ಪ್ರೀಮಿಯಂ ಸೇಬು ಖರೀದಿಸುತ್ತಿದ್ದ ಅದಾನಿ ಕಂಪನಿ ಈಗ ಕೇವಲ 72 ರೂ ಖರೀದಿಸಲು ಮುಂದಾಗಿದೆ. ರೈತರು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡ ಕಾರಣ ನಷ್ಟವಾದರೂ ಅಲ್ಲಿಯೇ ಮಾರಬೇಕಾಗಿದೆ. ಇನ್ನೊಂದೆಡೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅವನ್ನ ನಿರ್ನಾಮ ಮಾಡಲಾಗುತ್ತಿದೆ. ಈ ರೀತಿಯಾಗಿ ರೈತರು ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗಬೇಕಾಗುತ್ತದೆ. ಹಾಗಾಗಿ ಕೃಷಿ ಕಾನೂನುಗಳು ಬೇಡ ಮತ್ತು ಎಪಿಎಂಸಿಗಳು ಗಟ್ಟಿಯಾಗಬೇಕು, ಅಲ್ಲಿನ ಭ್ರಷ್ಟಾಚಾರ ನಿಲ್ಲಬೇಕು ಎಂಬುದು ರೈತರ ಆಗ್ರಹವಾಗಿದೆ. ಅದಕ್ಕಾಗಿಯೇ ದೆಹಲಿಯಲ್ಲಿ ತೀವ್ರ ಹೋರಾಟ ನಡೆಸುತ್ತಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ: ತಾಳ್ಮೆ, ಬದ್ಧತೆ, ಶಿಸ್ತಿನ ಐತಿಹಾಸಿಕ ಹೋರಾಟಕ್ಕೆ 9 ತಿಂಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...