Homeಕರ್ನಾಟಕಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ರಿಂದ ವಯೋವೃದ್ಧ ದಲಿತನ ಪಿಂಚಣಿಗೆ ಸಂಚಕಾರ

ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ರಿಂದ ವಯೋವೃದ್ಧ ದಲಿತನ ಪಿಂಚಣಿಗೆ ಸಂಚಕಾರ

ಲೋಕಾಯುಕ್ತರಂತವರೆ ಬಡಪಾಯಿ ಶಿವುರ ಸಮಸ್ಯೆ ಪರಿಗಣಿಸದಿರುವಾಗ ಅವರಿಗೆ ಇನ್ನೆಲ್ಲಿ ನ್ಯಾಯ ಸಿಗುತ್ತದೆ?

- Advertisement -
- Advertisement -

ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹೆರಂಗಡಿ ಗ್ರಾಮದ ವಯೋವೃದ್ಧ ದಲಿತ ಶಿವು ಹಳ್ಳೇರ ತುತ್ತಿಗಾಧರವಾದ ವೃದ್ಧಾಪ್ಯ ವೇತನ ಅಧಿಕಾರಿಗಳ ಅಸಡ್ಡೆ, ಹೊಣೆಗೇಡಿತನದಿಂದ ಸರಿಯಾಗಿ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿಯಲೊಂದು ಗುಡಿಸಲೂ ಇಲ್ಲದ ದೇಖರೇಖೆ ನೋಡಿಕೊಳ್ಳಲು ಯಾರೂ ಇಲ್ಲದ ಅವಿವಾಹಿತ ಶಿವುಗೀಗ ಎಂಬತ್ತು ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಅವರಿಗೆ ಕಿವಿಯೂ ಕೇಳಿಸುತ್ತಿಲ್ಲ! ಫೆಬ್ರುವರಿ 2006 ರಿಂದ ಶಿವು ವೃದ್ಧಾಪ್ಯ ಪಿಂಚಣಿ ಮೇಲೆ ಜೀವವಿಟ್ಟು ಜೀವನ ನಡೆಸುತ್ತಿದ್ದರು.

ಹೇಗೋ ದಿನ ಕಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಅಗಸ್ಟ್ 2018ರಲ್ಲಿ ಹೊನ್ನಾವರದ ಅಂದಿನ ತಹಶೀಲ್ದಾರ್ ವಿವೇಕ್ ಶೆಣ್ವಿ ಅಸಾಯಕ ಶಿವು ಹಳ್ಳೇರ ವೃದ್ದಾಪ್ಯ ವೇತನ ರದ್ದುಗೊಳಿಸಿ ಬಿಟ್ಟರು! ಅದಕ್ಕವರು ನೀಡಿದ ಕಾರಣ ಶಿವು ಹೊನ್ನಾವರ ತಾಲ್ಲೂಕಿನಲ್ಲಿ ವಾಸ್ತವ್ಯ ಮಾಡುತ್ತಿಲ್ಲ ಎಂಬುದಾಗಿತ್ತು. ಹೊನ್ನಾವರದ ಕಂದಾಯ ಅಧಿಕಾರಿಗಳು ಶಿವುರ ಅತಿ ಮುಖ್ಯ ದಾಖಲೆಯಾದ ಆಧಾರ ಕಾರ್ಡ್, ಮತದಾರ ಗುರುತಿನ ಚೀಟಿ, ಬಿಪಿಎಲ್ ಪಡಿತರ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್ ಅಥವಾ ಪಿಂಚಣಿ ಸಂದಾಯವಾಗುತ್ತಿದ್ದ ಅಂಚೆ ಇಲಾಖೆಯ ಪಾಸ್ ಬುಕ್‌ನಂಥ ಯಾವ ದಾಖಲೆಯನ್ನೂ ಪರಿಶೀಲಿಸದೆ ಎಡವಟ್ಟು ತೀರ್ಮಾನಕ್ಕೆ ಬಂದಿದ್ದರು! ತಹಶೀಲ್ದಾರರ ವಿವೇಚನಾರಹಿತ ಕ್ರಮವನ್ನು ಅಂದಿನ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಎತ್ತಿ ಹಿಡಿದಿದ್ದು ಶಿವು ಹಳ್ಳಿರಗೆ ಅನ್ಯಾಯ ಮಾಡಿತ್ತು.

ಅಶಿಕ್ಷಿತ-ಅಮಾಯಕ ಶಿವು ಹಳ್ಳೇರ ಏನು ಮಾಡಬೇಕೆಂದು ತಿಳಿಯದೆ ಒದ್ದಾಡುತ್ತಿರುವಾಗ ಊರಿನ ಜಿ.ಎನ್.ಭಟ್ಟರಿಗೆ ವಿಷಯ ತಿಳಿಯುತ್ತದೆ. ಅವರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ರಿಗೆ ಶಿವು ಹಳ್ಳೇರಗಾಗಿರುವ ತೊಂದರೆ ವಿವರಿಸಿ 2018ರ ಆಗಸ್ಟ್‌ನಿಂದ ಪಿಂಚಣಿ ಬಟವಡೆ ಮಾಡುವಂತೆ ಮನವಿ ಮಾಡುತ್ತಾರೆ. ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವ ಶಕ್ತಿ ವಯೋವೃದ್ಧ-ಅಶಿಕ್ಷಿತ ಶಿವುಗೆ ಇಲ್ಲದಿರುವುದರಿಂದ ಮತ್ತು ಅವರಿಗೆ ಕಿವಿ ಕೇಳಿಸದಿರುವುದರಿಂದ ಭಟ್ಟರೆ ಅರ್ಜಿ ಸಲ್ಲಿಸಿದ್ದರು. ಆದರೆ ಆರೆಂಟು ತಿಂಗಳು ಕಳೆದರೂ ತಹಶೀಲ್ದಾರ್ ಸಾಹೇಬರಿಂದ ಕನಿಷ್ಟ ಹಿಂಬರಹವೂ ಬರಲಿಲ್ಲ. ಜಿಲ್ಲಾಧಿಕಾರಿಗಳ ವಾಟ್ಸಪ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ!

ಕಂದಾಯ ಅಧಿಕಾರಿಗಳು ಆಗಿರುವ ಅಚಾತುರ್ಯವನ್ನು ಅರಿತು ಕ್ಷಣಾರ್ಧದಲ್ಲಿ ಪರಿಹರಿಸಬಹುದಾಗಿದ್ದ ಈ ಸಣ್ಣ ಸಮಸ್ಯೆಯನ್ನು ಗೋಜಲುಗೊಳಿಸಲಾಗಿತ್ತು. ಬಡಪಾಯಿ ಶಿವುರ ಗೋಳು ಹೇಳತೀರದಾಗಿತ್ತು. ಆಗ ಅನಿವಾರ್ಯವಾಗಿ ಭಟ್ಟರು 30 ನವೆಂಬರ್ 2019ರಂದು ಬೆಂಗಳೂರಲ್ಲಿರುವ ಲೋಕಾಯುಕ್ತ ಕಚೇರಿಗೆ ಖುದ್ದು ಹೋಗಿ ದೂರು ದಾಖಲಿಸಿದರು. ಆಗಲೂ ತಹಶೀಲ್ದಾರ್ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡಿದರು. ಶಿವುರ ವಾಸ್ತವ್ಯ ಹೊನ್ನಾವರ ತಾಲೂಕಿನಲ್ಲಿಯೇ ಇದೆಯೆಂದು ದೃಢಪಡಿಸುವ ಯಾವ ದಾಖಲೆಯನ್ನೂ ಪರಿಗಣಿಸಲೇ ಇಲ್ಲ. ಫಲಾನುಭವಿ ಹೊನ್ನಾವರ ತಾಲೂಕಿ ಹೆರಂಗಡಿ ವ್ಯಾಪ್ತಿಯಲ್ಲಿಲ್ಲವೆಂದು ತಹಶೀಲ್ದಾರ್ ವರದಿ ತಯಾರಿಸಿದ್ದರು. ಇದನ್ನೆ ಡಿಸಿ ಸಾಹೇಬರು ಕಣ್ಣು ಮುಚ್ಚಿ ಲೋಕಾಯುಕ್ತಕ್ಕೆ ರವಾನಿಸಿಬಿಟ್ಟಿದ್ದರು!

ಆದರೆ ಲೋಕಾಯುಕ್ತದಲ್ಲಿದ್ದ ದೂರನ್ನು ಮುಗಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದ ತಹಶೀಲ್ದಾರ್ ಶಿವು ಹಳ್ಳೇರ ರದ್ದಾದ ಪೆನ್‌ಷನ್ ಪುನಃ ಪ್ರಾರಂಭಿಸಬೇಕಾಗಿ ಬಂತು. ಆದರೆ ಇಲ್ಲೂ ಪ್ರಮಾದವಾಗಿತ್ತು. 1 ಅಕ್ಟೋಬರ್ 2020ರಿಂದ ಶಿವುರಿಗೆ ಪಿಂಚಣಿ ಬಟವಡೆ ಮಾಡುವಂತೆ ತಹಶೀಲ್ದಾರ್ ಆದೇಶಿಸಿದ್ದರು. ನ್ಯಾಯ ಕ್ರಮದಂತೆ ಶಿವುರ ಸಾಮಾಜಿಕ ಭದ್ರತಾ ಪಿಂಚಣಿ ವಿನಾ ಕಾರಣ ಸ್ಥಗಿತಗೊಳಿಸಲಾಗಿದ್ದ 2018ರ ಆಗಸ್ಟ್ ತಿಂಗಳಿಂದ ಬಾಕಿಯಿದ್ದ ಮೊತ್ತ ಬರಬೇಕಿತ್ತು. ಕಂದಾಯ ಅಧಿಕಾರಿಗಳ ಈ ಅವಾಂತರವನ್ನು ಮತ್ತೆ ಭಟ್ಟರು ಲೋಕಾಯುಕ್ತರ ಗಮನಕ್ಕೆ ತಂದರು. ಆದರೆ ಲೋಕಾಯುಕ್ತದಿಂದ ಯಾವ ಕ್ರಮವೂ ಆಗಿಲ್ಲ. ಲೋಕಾಯುಕ್ತದ ವಿಫಲತೆ ಶಿವುರನ್ನು ದಿಕ್ಕೆಡಿಸಿಬಿಟ್ಟಿದೆ.

ಲೋಕಾಯುಕ್ತರಂತವರೆ ಬಡಪಾಯಿ ಶಿವುರ ಸಮಸ್ಯೆ ಪರಿಗಣಿಸದಿರುವಾಗ ಅವರಿಗೆ ಇನ್ನೆಲ್ಲಿ ನ್ಯಾಯ ಸಿಗುತ್ತದೆ? ಹರ ಕೊಲ್ಲಲ್ ನರ ಕಾಯ್ವನೆ ಎಂಬಂತಾಗಿದೆಯೆಂದು ಜನರಾಡಿ ಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತಿತರ ಕಂದಾಯ ಅಧಿಕಾಗಳು ಗ್ರಾಮ ವಾಸ್ತವ್ಯ ಮಾಡಿ ಅರ್ಹರಿಗೆ ಸ್ಥಳದಲ್ಲೆ ವೃದ್ದಾಪ್ಯ ಮಂಜೂರಿ ಮಾಡುತ್ತಾರೆ. 60 ವರ್ಷ ಮೀರಿದ ಫಲಾನುಭವಿಗಳಿಗೆ ಪಿಂಚಣಿ ಮನೆ ಬಾಗಿಲಲ್ಲೆ ವಿತರಿಸಲಾಗುತ್ತದೆಂದು ಕಂದಾಯ ಮಂತ್ರಿ ಆರ್.ಅಶೋಕ್ ಹೇಳುತ್ತಾರೆ. ವಿಪರ್ಯಾಸವೆಂದರೆ ಮಂಜೂರಿಯಾಗಿ ಬರುತ್ತಿರುವ ಪಿಂಚಣಿಯನ್ನೆ ಕಿತ್ತುಕೊಳ್ಳುವ ಕ್ರೌರ್ಯ ಇನ್ನೊಂದೆಡೆಯಾಗುತ್ತಿದೆ!


ಇದನ್ನೂ ಓದಿ: ದಲಿತ ಮಹಿಳೆಯರನ್ನು ಕಾನೂನುಬಾಹಿರವಾಗಿ ಸೇವೆಯಿಂದ ವಜಾಗೊಳಿಸಿದ ನಿಮ್ಹಾನ್ಸ್‌: ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...