Homeಕರ್ನಾಟಕಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ರಿಂದ ವಯೋವೃದ್ಧ ದಲಿತನ ಪಿಂಚಣಿಗೆ ಸಂಚಕಾರ

ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ರಿಂದ ವಯೋವೃದ್ಧ ದಲಿತನ ಪಿಂಚಣಿಗೆ ಸಂಚಕಾರ

ಲೋಕಾಯುಕ್ತರಂತವರೆ ಬಡಪಾಯಿ ಶಿವುರ ಸಮಸ್ಯೆ ಪರಿಗಣಿಸದಿರುವಾಗ ಅವರಿಗೆ ಇನ್ನೆಲ್ಲಿ ನ್ಯಾಯ ಸಿಗುತ್ತದೆ?

- Advertisement -
- Advertisement -

ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹೆರಂಗಡಿ ಗ್ರಾಮದ ವಯೋವೃದ್ಧ ದಲಿತ ಶಿವು ಹಳ್ಳೇರ ತುತ್ತಿಗಾಧರವಾದ ವೃದ್ಧಾಪ್ಯ ವೇತನ ಅಧಿಕಾರಿಗಳ ಅಸಡ್ಡೆ, ಹೊಣೆಗೇಡಿತನದಿಂದ ಸರಿಯಾಗಿ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿಯಲೊಂದು ಗುಡಿಸಲೂ ಇಲ್ಲದ ದೇಖರೇಖೆ ನೋಡಿಕೊಳ್ಳಲು ಯಾರೂ ಇಲ್ಲದ ಅವಿವಾಹಿತ ಶಿವುಗೀಗ ಎಂಬತ್ತು ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಅವರಿಗೆ ಕಿವಿಯೂ ಕೇಳಿಸುತ್ತಿಲ್ಲ! ಫೆಬ್ರುವರಿ 2006 ರಿಂದ ಶಿವು ವೃದ್ಧಾಪ್ಯ ಪಿಂಚಣಿ ಮೇಲೆ ಜೀವವಿಟ್ಟು ಜೀವನ ನಡೆಸುತ್ತಿದ್ದರು.

ಹೇಗೋ ದಿನ ಕಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಅಗಸ್ಟ್ 2018ರಲ್ಲಿ ಹೊನ್ನಾವರದ ಅಂದಿನ ತಹಶೀಲ್ದಾರ್ ವಿವೇಕ್ ಶೆಣ್ವಿ ಅಸಾಯಕ ಶಿವು ಹಳ್ಳೇರ ವೃದ್ದಾಪ್ಯ ವೇತನ ರದ್ದುಗೊಳಿಸಿ ಬಿಟ್ಟರು! ಅದಕ್ಕವರು ನೀಡಿದ ಕಾರಣ ಶಿವು ಹೊನ್ನಾವರ ತಾಲ್ಲೂಕಿನಲ್ಲಿ ವಾಸ್ತವ್ಯ ಮಾಡುತ್ತಿಲ್ಲ ಎಂಬುದಾಗಿತ್ತು. ಹೊನ್ನಾವರದ ಕಂದಾಯ ಅಧಿಕಾರಿಗಳು ಶಿವುರ ಅತಿ ಮುಖ್ಯ ದಾಖಲೆಯಾದ ಆಧಾರ ಕಾರ್ಡ್, ಮತದಾರ ಗುರುತಿನ ಚೀಟಿ, ಬಿಪಿಎಲ್ ಪಡಿತರ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್ ಅಥವಾ ಪಿಂಚಣಿ ಸಂದಾಯವಾಗುತ್ತಿದ್ದ ಅಂಚೆ ಇಲಾಖೆಯ ಪಾಸ್ ಬುಕ್‌ನಂಥ ಯಾವ ದಾಖಲೆಯನ್ನೂ ಪರಿಶೀಲಿಸದೆ ಎಡವಟ್ಟು ತೀರ್ಮಾನಕ್ಕೆ ಬಂದಿದ್ದರು! ತಹಶೀಲ್ದಾರರ ವಿವೇಚನಾರಹಿತ ಕ್ರಮವನ್ನು ಅಂದಿನ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಎತ್ತಿ ಹಿಡಿದಿದ್ದು ಶಿವು ಹಳ್ಳಿರಗೆ ಅನ್ಯಾಯ ಮಾಡಿತ್ತು.

ಅಶಿಕ್ಷಿತ-ಅಮಾಯಕ ಶಿವು ಹಳ್ಳೇರ ಏನು ಮಾಡಬೇಕೆಂದು ತಿಳಿಯದೆ ಒದ್ದಾಡುತ್ತಿರುವಾಗ ಊರಿನ ಜಿ.ಎನ್.ಭಟ್ಟರಿಗೆ ವಿಷಯ ತಿಳಿಯುತ್ತದೆ. ಅವರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ರಿಗೆ ಶಿವು ಹಳ್ಳೇರಗಾಗಿರುವ ತೊಂದರೆ ವಿವರಿಸಿ 2018ರ ಆಗಸ್ಟ್‌ನಿಂದ ಪಿಂಚಣಿ ಬಟವಡೆ ಮಾಡುವಂತೆ ಮನವಿ ಮಾಡುತ್ತಾರೆ. ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವ ಶಕ್ತಿ ವಯೋವೃದ್ಧ-ಅಶಿಕ್ಷಿತ ಶಿವುಗೆ ಇಲ್ಲದಿರುವುದರಿಂದ ಮತ್ತು ಅವರಿಗೆ ಕಿವಿ ಕೇಳಿಸದಿರುವುದರಿಂದ ಭಟ್ಟರೆ ಅರ್ಜಿ ಸಲ್ಲಿಸಿದ್ದರು. ಆದರೆ ಆರೆಂಟು ತಿಂಗಳು ಕಳೆದರೂ ತಹಶೀಲ್ದಾರ್ ಸಾಹೇಬರಿಂದ ಕನಿಷ್ಟ ಹಿಂಬರಹವೂ ಬರಲಿಲ್ಲ. ಜಿಲ್ಲಾಧಿಕಾರಿಗಳ ವಾಟ್ಸಪ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ!

ಕಂದಾಯ ಅಧಿಕಾರಿಗಳು ಆಗಿರುವ ಅಚಾತುರ್ಯವನ್ನು ಅರಿತು ಕ್ಷಣಾರ್ಧದಲ್ಲಿ ಪರಿಹರಿಸಬಹುದಾಗಿದ್ದ ಈ ಸಣ್ಣ ಸಮಸ್ಯೆಯನ್ನು ಗೋಜಲುಗೊಳಿಸಲಾಗಿತ್ತು. ಬಡಪಾಯಿ ಶಿವುರ ಗೋಳು ಹೇಳತೀರದಾಗಿತ್ತು. ಆಗ ಅನಿವಾರ್ಯವಾಗಿ ಭಟ್ಟರು 30 ನವೆಂಬರ್ 2019ರಂದು ಬೆಂಗಳೂರಲ್ಲಿರುವ ಲೋಕಾಯುಕ್ತ ಕಚೇರಿಗೆ ಖುದ್ದು ಹೋಗಿ ದೂರು ದಾಖಲಿಸಿದರು. ಆಗಲೂ ತಹಶೀಲ್ದಾರ್ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡಿದರು. ಶಿವುರ ವಾಸ್ತವ್ಯ ಹೊನ್ನಾವರ ತಾಲೂಕಿನಲ್ಲಿಯೇ ಇದೆಯೆಂದು ದೃಢಪಡಿಸುವ ಯಾವ ದಾಖಲೆಯನ್ನೂ ಪರಿಗಣಿಸಲೇ ಇಲ್ಲ. ಫಲಾನುಭವಿ ಹೊನ್ನಾವರ ತಾಲೂಕಿ ಹೆರಂಗಡಿ ವ್ಯಾಪ್ತಿಯಲ್ಲಿಲ್ಲವೆಂದು ತಹಶೀಲ್ದಾರ್ ವರದಿ ತಯಾರಿಸಿದ್ದರು. ಇದನ್ನೆ ಡಿಸಿ ಸಾಹೇಬರು ಕಣ್ಣು ಮುಚ್ಚಿ ಲೋಕಾಯುಕ್ತಕ್ಕೆ ರವಾನಿಸಿಬಿಟ್ಟಿದ್ದರು!

ಆದರೆ ಲೋಕಾಯುಕ್ತದಲ್ಲಿದ್ದ ದೂರನ್ನು ಮುಗಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದ ತಹಶೀಲ್ದಾರ್ ಶಿವು ಹಳ್ಳೇರ ರದ್ದಾದ ಪೆನ್‌ಷನ್ ಪುನಃ ಪ್ರಾರಂಭಿಸಬೇಕಾಗಿ ಬಂತು. ಆದರೆ ಇಲ್ಲೂ ಪ್ರಮಾದವಾಗಿತ್ತು. 1 ಅಕ್ಟೋಬರ್ 2020ರಿಂದ ಶಿವುರಿಗೆ ಪಿಂಚಣಿ ಬಟವಡೆ ಮಾಡುವಂತೆ ತಹಶೀಲ್ದಾರ್ ಆದೇಶಿಸಿದ್ದರು. ನ್ಯಾಯ ಕ್ರಮದಂತೆ ಶಿವುರ ಸಾಮಾಜಿಕ ಭದ್ರತಾ ಪಿಂಚಣಿ ವಿನಾ ಕಾರಣ ಸ್ಥಗಿತಗೊಳಿಸಲಾಗಿದ್ದ 2018ರ ಆಗಸ್ಟ್ ತಿಂಗಳಿಂದ ಬಾಕಿಯಿದ್ದ ಮೊತ್ತ ಬರಬೇಕಿತ್ತು. ಕಂದಾಯ ಅಧಿಕಾರಿಗಳ ಈ ಅವಾಂತರವನ್ನು ಮತ್ತೆ ಭಟ್ಟರು ಲೋಕಾಯುಕ್ತರ ಗಮನಕ್ಕೆ ತಂದರು. ಆದರೆ ಲೋಕಾಯುಕ್ತದಿಂದ ಯಾವ ಕ್ರಮವೂ ಆಗಿಲ್ಲ. ಲೋಕಾಯುಕ್ತದ ವಿಫಲತೆ ಶಿವುರನ್ನು ದಿಕ್ಕೆಡಿಸಿಬಿಟ್ಟಿದೆ.

ಲೋಕಾಯುಕ್ತರಂತವರೆ ಬಡಪಾಯಿ ಶಿವುರ ಸಮಸ್ಯೆ ಪರಿಗಣಿಸದಿರುವಾಗ ಅವರಿಗೆ ಇನ್ನೆಲ್ಲಿ ನ್ಯಾಯ ಸಿಗುತ್ತದೆ? ಹರ ಕೊಲ್ಲಲ್ ನರ ಕಾಯ್ವನೆ ಎಂಬಂತಾಗಿದೆಯೆಂದು ಜನರಾಡಿ ಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತಿತರ ಕಂದಾಯ ಅಧಿಕಾಗಳು ಗ್ರಾಮ ವಾಸ್ತವ್ಯ ಮಾಡಿ ಅರ್ಹರಿಗೆ ಸ್ಥಳದಲ್ಲೆ ವೃದ್ದಾಪ್ಯ ಮಂಜೂರಿ ಮಾಡುತ್ತಾರೆ. 60 ವರ್ಷ ಮೀರಿದ ಫಲಾನುಭವಿಗಳಿಗೆ ಪಿಂಚಣಿ ಮನೆ ಬಾಗಿಲಲ್ಲೆ ವಿತರಿಸಲಾಗುತ್ತದೆಂದು ಕಂದಾಯ ಮಂತ್ರಿ ಆರ್.ಅಶೋಕ್ ಹೇಳುತ್ತಾರೆ. ವಿಪರ್ಯಾಸವೆಂದರೆ ಮಂಜೂರಿಯಾಗಿ ಬರುತ್ತಿರುವ ಪಿಂಚಣಿಯನ್ನೆ ಕಿತ್ತುಕೊಳ್ಳುವ ಕ್ರೌರ್ಯ ಇನ್ನೊಂದೆಡೆಯಾಗುತ್ತಿದೆ!


ಇದನ್ನೂ ಓದಿ: ದಲಿತ ಮಹಿಳೆಯರನ್ನು ಕಾನೂನುಬಾಹಿರವಾಗಿ ಸೇವೆಯಿಂದ ವಜಾಗೊಳಿಸಿದ ನಿಮ್ಹಾನ್ಸ್‌: ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...