Homeಅಂಕಣಗಳುಜನತಾ ಮನೆಗಳ ನಿರ್ಮಾಣಕ್ಕೆ ದಿನವೊಂದಕ್ಕೆ 70 ಕಿ.ಮೀ ಸೈಕಲ್ ತುಳಿಯುತ್ತಿದ್ದ ದಿನಗಳು - ಪ್ರಸಾದ್ ರಕ್ಷಿದಿ

ಜನತಾ ಮನೆಗಳ ನಿರ್ಮಾಣಕ್ಕೆ ದಿನವೊಂದಕ್ಕೆ 70 ಕಿ.ಮೀ ಸೈಕಲ್ ತುಳಿಯುತ್ತಿದ್ದ ದಿನಗಳು – ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದುಹೋದ ದಿನಗಳು -21

ವಸತಿ ಇಲ್ಲದವರಿಗಾಗಿ ಮನೆಗಳ ಕೆಲಸ ಪ್ರಾರಂಭವಾಗಿತ್ತು. ನನ್ನ ಓಡಾಡ ಮತ್ತಷ್ಟು ಹೆಚ್ಚಿತು. ಮೊದಲು ಮನೆಕಟ್ಟಲು ಸ್ಥಳ ಗುರುತಿಸುವ ಕೆಲಸ ಮಾಡಬೇಕಿತ್ತು. ಆಗ ಹಲವಾರು ಕಡೆಗಳಲ್ಲಿ ಸ್ಥಳೀಯ ಭೂಮಾಲಿಕರಿಂದ ವಿರೋಧ ಪ್ರಾರಂಭವಾಯಿತು. ಅಲ್ಲಿ ಬೇಡ, ಇಲ್ಲಿ ಬೇಡ ಎನ್ನುವವರು. ಹಾಗಾದರೆ ಸ್ಥಳ ನೀವೇ ತೋರಿಸಿ ಎಂದರೆ, ಯಾವುದೂ ಗುಡ್ಡದ ತುದಿಯ ಜಾಗ ತೋರಿಸುವರು. ಇಲ್ಲವೇ ಇಂದು ನಾಳೆ ಎಂದು ಕಾಲಹರಣ ಮಾಡುವರು.

ಕೆಲವರು ಆಗಲೇ ಖಾಲಿ ಇದ್ದ ಸರ್ಕಾರಿ ಜಾಗಕ್ಕೆ ಬೇಲಿ ಸುತ್ತತೊಡಗಿದರು. ಗಣಪಯ್ಯನವರಿಂದ ಉಪಕಾರ ಪಡೆದವರೇ ಕೆಲವರು ಈಗ “ಗಣಪಯ್ಯ ದಲಿತರನ್ನು ಎತ್ತಿಕಟ್ಟುತ್ತಿದ್ದಾರೆ. ಅವರ ತೋಟದಲ್ಲಿ ಮನೆ ಕಟ್ಸಿ ಕೊಡ್ಲಿ” ಎಂದು ಹಿಂದಿನಿಂದ ದೂರತೊಡಗಿದರು.

ಗಣಪಯ್ಯನವರು ರಾಜಕೀಯವಾಗಿಯೂ ಶಕ್ತರಾಗಿದ್ದುದರಿಂದ ಅಧಿಕಾರಿಗಳ ಮಟ್ಟದಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಯಿತು. ಅವರು ಅಧಿಕಾರಿಗಳನ್ನು ಸ್ಥಳಕ್ಕೇ ಕರಸಿಕೊಂಡು ಅವರ ಸಮ್ಮುಖದಲ್ಲೇ ಮನೆ ಕಟ್ಟಲು ಸ್ಥಳ ನಿಗದಿ ಮಾಡುತ್ತ ಹೋದರು. ಹತ್ತು ಇಪ್ಪತ್ತು ಮನೆಗಳ ಗುಂಪುಗಳು ಅಲ್ಲಲ್ಲಿ ರಚನೆಯಾದವು.

ಗಣಪಯ್ಯ ತಮ್ಮ ಕಾರ್ಯಕ್ಷೇತ್ರದಲ್ಲಿ, ಮೊಮ್ಮಕ್ಕಳೊಂದಿಗೆ

ಅಂತೂ ಹೇಗೋ ಮನೆಗಳ ಕೆಲಸ ಪ್ರಾರಂಭವಾಯಿತು. ಹೆಂಚು, ಮತ್ತು ಮರಗಳಿಗೆಂದು ಒಂದು ಸಾವಿರ ಕಳೆದು ಉಳಿದ ಒಂದು ಸಾವಿರ ಹಣವನ್ನು ಕಂತು ಕಂತಾಗಿ ಕೊಡುತ್ತಿದ್ದರು. ಗಣಪಯ್ಯ ಮತ್ತು ರವೀಂದ್ರನಾಥರು ಇರುವುದರಿಂದ ಬಿಲ್ ಆಗುವಾಗ ಅಷ್ಟೂ ಹಣ ಯಾವುದೇ ಕಡಿತಗಳಿಲ್ಲದೆ ಬರುತ್ತಿತ್ತು.

ಬ್ಯಾಂಕಿನಲ್ಲಿ ಮಂಜೂರಾಗಿದ್ದ ಸಾಲದ ಮೊತ್ತವನ್ನು ಮೊದಲು ಪಡೆದು ಕೆಲಸ ಪ್ರಾರಂಭಿಸಿದೆವು.

ಕಲ್ಲು, ಸಿಮೆಂಟು, ಮುಂತಾದವುಗಳಿಗೆ ಮಾತ್ರ ಹಣ ಪಾವತಿ ಮತ್ತೆ ಉಳಿದ ಕೆಲಸಗಳಲ್ಲಿ ಮರಗೆಲಸವೊಂದನ್ನು ಬಿಟ್ಟು ಉಳಿದ ಎಲ್ಲ ಕೆಲಸಗಳನ್ನು ಆಯಾ ಗುಂಪಿನವರು ಸೇರಿ ಮಾಡಬೇಕು. ಆ ಕೆಲಸಗಳಿಗೆ ಆಯಾ ದಿನದ ಮಜೂರಿಯನ್ನು ಅವರು ಅದೇ ಹಣದಲ್ಲಿ ಪಡೆದುಕೊಳ್ಳಬೇಕು. ಇದರಿಂದ ಅವರ ಹಣ ಅವರಿಗೇ ಹಿಂದಿರುಗುತ್ತಿತ್ತು ಅಲ್ಲದೆ ಉಳಿತಾಯವಾದರೆ ಅವರಿಗೇ ಸಲ್ಲುತ್ತಿತ್ತು ಇದು ಯೋಜನೆ.

ಪ್ರಾರಂಭದಲ್ಲಿ ಎಲ್ಲರೂ ಉತ್ಸಾಹದಿಂದ ಬಂದರು. ಆದರೆ ಅವರಲ್ಲಿ ಹೆಚ್ಚಿನವರಿಗೆ ಈ ರೀತಿ ಕೆಲಸ ಮಾಡಿದ ಅನುಭವವಾಗಲೀ ಸಹಕಾರಿ ತತ್ವದ ದುಡಿಮೆಯ ಬಗ್ಗೆ ತಿಳುವಳಿಕೆಯಾಗಲೀ ಇಲ್ಲದ್ದರಿಂದ ತನ್ನ ಮನೆ ಕೆಲಸ ಇರುವಾಗ ಬರುವುದು, ಬೇರೆಯವನ ಮನೆಕೆಲಸ ಇದ್ದಾಗ ತಪ್ಪಿಸಿಕೊಳ್ಳುವುದು ಹೀಗೆಲ್ಲ ಮಾಡುತ್ತಿದ್ದರು. ಅದಲ್ಲದೆ ಇವರೆಲ್ಲರೂ ಯಾವಾಗಲೂ ಬೇರೆಯವರ ತೋಟಗಳಿಗೆ ಕೆಲಸಕ್ಕೆ ಹೋಗುವವರು. ಹೆಚ್ಚಿನವರು ಅಲ್ಲಿ ಸಾಲ ಪಡೆದವರೇ ಆಗಿದ್ದುರಿಂದ ಅವರಿಂದಲೂ ಒತ್ತಡವಿರುತ್ತಿತ್ತು. ಈ ಎಲ್ಲ ಕಾರಣಗಳಿಂದ ನಾವು ಯೋಚಿಸಿದಷ್ಟು ಬೇಗನೆ ಕೆಲಸ ಮುಗಿಯುತ್ತಿರಲಿಲ್ಲ.

ಬ್ಯಾಂಕಿಗೆ ಹೋಗುವುದು, ಬಿಲ್ ಮಾಡಿಸುವುದು, ಅಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿ ಕಛೇರಿಯಿಂದ ಹೆಂಚುಗಳನ್ನು ಪಡೆದುಕೊಳ್ಳುವುದು, ಮಿಲ್ಲಿನಿಂದ ಮರ ಮುಟ್ಟುಗಳನ್ನು ಸಾಗಿಸುವುದು, ಜೊತೆಗೆ ಇವರೆಲ್ಲರ ಕೆಲಸದ ಲೆಕ್ಕವಿಟ್ಟು ಬಟವಾಡೆ ಮಾಡುವುದೂ ನನ್ನ ಕೆಲಸವಾಗಿತ್ತು. ಹಾಗಾಗಿ ನಾನು ಇವರ ಮೇಲೆಲ್ಲಾ ಕೂಗಾಡುವುದೂ ಬೈಯುವುದೂ ಸಮಾಧಾನ ಮಾಡುವುದೂ ಜೊತೆಗೆ ತತ್ವ ಸಿದ್ಧಾಂತಗಳ ಬಗ್ಗೆ ಭಾಷಣ ಮಾಡುವುದೂ ಎಲ್ಲ ಇತ್ತು.

ಅವರಿಗೆಲ್ಲ ತಿಳುವಳಿಕೆಯೇ ಇರಲಿಲ್ಲವೆಂದಲ್ಲ ಅವರೆಲ್ಲ ಈ ರೀತಿ ನಡೆದುಕೊಳ್ಳಲು ಅದಕ್ಕೆ ಹಲವಾರು ಕಾರಣಗಳಿದ್ದವು. ಅದು ನನಗೆ ಮುಂದೆ ತಿಳಿಯಿತು.

ಈ ಮನೆಗಳಲ್ಲಿ ನೂರಾರು ಮನೆಗಳ ಮರಗೆಲಸವನ್ನು ನನ್ನ ರಂಗ ಸಂಗಾತಿ ಉಗ್ಗಪ್ಪ ಮನೆಯೊಂದಕ್ಕೆ ನೂರ ನಲುವತ್ತು ರೂಪಾಯಿಗಳಿಗೆ ಗುತ್ತಿಗೆ ಪಡೆದಿದ್ದ. ಹಾಗಾಗಿ ಆತನೂ ಹಲವು ಸಲ ನನ್ನ ಜೊತೆ ಇರುತ್ತಿದ್ದ. ಆಗ ಇಬ್ಬರೂ ಸೈಕಲ್ಲಿನಲ್ಲಿ ಡಬ್ಬಲ್ ರೈಡ್‌ನಲ್ಲಿ ಬರುತ್ತಿದ್ದೆವು.

ಈ ಕೆಲಸಗಳಿಗಾಗಿ ಬೆಳಗ್ಗಿನ ಡೈರಿ ಸುತ್ತು ಕೆಲಸ ಮತ್ತು ಹಾಲು ಕರೆಯುವುದು ಮುಗಿಸಿ ನಂತರ ಸೈಕಲ್ ತೆಗೆದುಕೊಂಡು ಹೊರಟೆನೆಂದರೆ, ಈ ಮನೆಗಳ ಕೆಲಸ ನಡೆಯುತ್ತಿದ್ದ ಅಗಲಟ್ಟಿ, ಮಾವಿನ ಹಳ್ಳಿ, ಹಾರ್ಲೆ ಕೂಡಿಗೆ, ಗಾಣದಹೊಳೆ, ಕೃಷ್ಣಾಪುರ ಅಲ್ಲಿಂದ ಹೆನ್ನಲಿ, ಹೆಬ್ಬಸಾಲೆ ಮಾರ್ಗವಾಗಿ ಹೇಮಾವತಿ ಹೊಳೆಬದಿಯಲ್ಲೇ ಸಕಲೇಶಪುರದ ರೈಲ್ವೇ ಸ್ಟೇಷನ್‌ಗಾಗಿ ನಗರ ಸೇರುತ್ತಿದ್ದೆ. ಅಲ್ಲಿಂದ ಮುಂದೆ ಹಲವು ಕಛೇರಿಗಳನ್ನು ಮುಖ್ಯರಸ್ತೆಯಲ್ಲೇ ಬಂದು ಕೆಲವು ಸಲ ಹಾರ್ಲೆಗೂ ಹೋಗುತ್ತಿದ್ದೆ. ನಂತರ ಕೆಲವೊಮ್ಮೆ ಪಶು ಚಿಕಿತ್ಸೆಯ ಓಡಾಟಗಳು, ನಮ್ಮ ತಂಡದ ರಂಗ ಚಟುವಟಿಕೆಗಳ ಕೆಲಸಗಳು ಎಲ್ಲ ಸೇರಿ ದಿನವೊಂದಕ್ಕೆ ಎಪ್ಪತ್ತು ಕಿ.ಮೀ ನಷ್ಟು ಸೈಕಲ್ ಸವಾರಿ ಮಾಡಿದ್ದೂ ಇದೆ.

ಈ ಮನೆಗಳನ್ನು ಕಟ್ಟುವ ಕೆಲಸದ ಉಸ್ತುವಾರಿಯಲ್ಲಿ ಕೆಲವು ತಮಾಷೆಯ ಪ್ರಸಂಗಗಳು ನಡೆದವು. ಒಬ್ಬಾತ ದ್ಯಾವಯ್ಯ ಅಂತ, ಸ್ವಲ್ಪ ಉಡಾಫೆಯ ಮನುಷ್ಯ ನಮ್ಮೂರ ಪಕ್ಕದಲ್ಲೇ ಒಬ್ಬರ ತೋಟದಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಬೇರೆಯವರದ್ದಿರಲಿ ಆತನದೇ ಮನೆಯ ಯಾವ ಕೆಲಸಕ್ಕೂ ಸರಿಯಾಗಿ ಬರಲೇ ಇಲ್ಲ. ಅಂತೂ ನಾವು ಯಾರು ಯಾರನ್ನೋ ಕರೆದು ಕೆಲಸ ಮುಗಿಸುತ್ತ ಬಂದೆವು. ಕೊನೆಗೆ ನಾನೂ ಉಗ್ಗಪ್ಪನೂ ಮಾತಾಡಿ ಇವನಿಗೆ ಬುದ್ಧಿಕಲಿಸಬೇಕೆಂದು ತೀರ್ಮಾನಿಸಿ, ಏನಾದರೂ ಸರಿ ಇವನ ಮನೆಗೆ ಹೆಂಚು ಹಾಕಬಾರದೆಂದು ಹೆಂಚುಗಳನ್ನು ಹಾಗೇ ಇಟ್ಟೆವು. ರಸ್ತೆ ಬದಿಯಿಂದ ನೂರಡಿ ದೂರ ಹೆಂಚುಗಳನ್ನು ಹೊರಬೇಕಿತ್ತು. ಎಲ್ಲರ ಮನೆಯೂ ಪೂರ್ತಿಯಾಯಿತು. ನಾವು ಕೆಲವು ದಿನ ಕಾದೆವು. ಹೆಂಚುಗಳು ಅಲ್ಲೇ ಇದ್ದವು ಹೊರತು ಆತ ಅದರ ಕಡೆ ತಿರುಗಿ ನೋಡಲೂ ಇಲ್ಲ. ತಮ್ಮ ಮನೆ ಕೆಲಸಕ್ಕೆ ಆತ ಬರದಿದ್ದುದರಿಂದ ಬೇರೆಯವರೂ ಅವನೆ ಮನೆ ಕೆಲಸಕ್ಕೆ ಬರುವುದಿಲ್ಲವೆಂದು ಕುಳಿತರು. ಬಿಲ್ ಮಾಡಿಸಬೇಕಲ್ಲ? ಮನೆ ಪೂರ್ತಿಯಾಗದೆ ಬಿಲ್‌ನ ಹಣ ದೊರೆಯದು. ಕೊನೆಗೆ ನಾನೂ ಉಗ್ಗಪ್ಪನೂ ಸೇರಿ ಆರುನೂರು ಹೆಂಚುಗಳನ್ನು ಹೊತ್ತು ಮಾಡಿಗೇರಿಸಿ ಬಿಲ್ ಮಾಡಿಸಬೇಕಾಯಿತು!

ಮತ್ತೊಮ್ಮೆ ದ್ಯಾವಯ್ಯ ಸಿಕ್ಕಿದಾಗ ನಾನೂ ಉಗ್ಗಪ್ಪನೂ ಸೇರಿ ಬಾಯಿಗೆ ಬಂದಂತೆ ಬೈದೆವು. ಅದಕ್ಕೂ ಅತನೇನು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

ಇದಕ್ಕೆ ಕಾರಣವೂ ಇತ್ತು. ಸಾಮಾನ್ಯವಾಗಿ ಇಂಥ ಮನೆಗಳನ್ನು ಕಟ್ಟುವಾಗ ಯಾರಾದರೂ ರಾಜಕೀಯ ವ್ಯಕ್ತಿಗಳು ತಮ್ಮ ಕಡೆಯವರಿಗೆ ಕಂಟ್ರಾಕ್ಟ್ ಕೊಡಿಸಿ ಅವರು ಒಂದು ಮನೆಯ ಆಕಾರದ ಕಟ್ಟಡವನ್ನು ಕಟ್ಟಿ ಇವರಿಂದ ರುಜುಪಡೆದು ಮನೆಯನ್ನು ಇವರಿಗೆ ಒಪ್ಪಿಸಿ ತಾವೊಂದಷ್ಟು ಕಮಾಯಿ ಮಾಡುವ ಕ್ರಮ ಅಗಲೇ ಪ್ರಾರಂಭವಾಗಿತ್ತು. ಆದ್ದರಿಂದ ಗಣಪಯ್ಯನವರ ಸ್ವಾವಲಂಬಿ ನಿರ್ಮಾಣ ಕ್ರಮ ಅರ್ಥವಾಗದೆ ಇದರಲ್ಲಿ ಇವರಿಗೇನೋ ಲಾಭವಿದೆ ಆದ್ದರಿಂದ ಇವರೇ ಮಾಡಿಸಲಿ ಎಂದು ತಿಳಿಯುತ್ತಿದ್ದರು.

ಮತ್ತೊಂದು ಕಡೆ ಇದೇ ರೀತಿ ಮನೆಗಳನ್ನು ಕಟ್ಟುವಾಗ ಕೆಲವು ಮನೆಗಳಿಗೆ ಬರಬೇಕಾದ ಹೆಂಚುಗಳು ಸಮಯಕ್ಕೆ ಸರಿಯಾಗಿ ಬರಲಿಲ್ಲ. ಸರ್ಕಾರದ ಟೆಂಡರಿಗೆ ಹೆಂಚಿನ ಕಾರ್ಖಾನೆಗಳು ಸ್ಪರ್ಧೆಯಿಂದ ಕಡಿಮೆಗೆ ಬಿಡ್ ಮಾಡಿ ಕಳಪೆ ಹೆಂಚುಗಳನ್ನು ಕೊಡುತ್ತಿದ್ದರು ಇದಕ್ಕಾಗಿ ನಾವು ದೂರು ಸಲ್ಲಿಸಿದ್ದರಿಂದ ಅದನ್ನೂ ಸಮಯಕ್ಕೆ ಕೊಡದೆ ಸತಾಯಿಸಿದರು. ಮಳೆಗಾಲ ಪ್ರಾರಂಭವಾದರೂ ಹೆಂಚುಗಳು ಬರುವ ಲಕ್ಷಣಗಳು ಕಾಣಿಸಲಿಲ್ಲ. ಕೊನೆಗೆ ಹಾರ್ಲೆಯಲ್ಲಿ ಒಂದು ಕಟ್ಟಡ ರಿಪೇರಿಗೆಂದು ಬಿಚ್ಚಿದ ಸುಮಾರು ನಾಲ್ಕು ಸಾವಿರ ಹೆಂಚುಗಳಿದ್ದವು. ಅವು ಹಳೆಯದಾದರೂ ಉತ್ತಮ ಗುಣ ಮಟ್ಟದ ಬಾಸೆಲ್ ಮಿಷನ್ ಹೆಂಚುಗಳು. ಅದನ್ನೇ ತೆಗೆದುಕೊಂಡು ಹೋಗುವಂತೆ ಗಣಪಯ್ಯ ಹೇಳಿದರು.

ನಾವು ಆ ಹೆಂಚುಗಳನ್ನು ಒಯ್ದು ಬಾಕಿ ಉಳಿದಿದ್ದ ಮನೆಗಳಿಗೆ ಹೊದೆಸಿ ಗೋಡೆಗಳು ಬೀಳದಂತೆ ರಕ್ಷಿಸಿದೆವು. ಅದನ್ನು ನೋಡಿ ಕೆಲವರು “ಗಣಪಯ್ಯ ಹೊಸ ಹೆಂಚು ತೋಟಕ್ಕೆ ಸಾಗಿಸಿ ಹಳೆ ಹೆಂಚು ಇವರ ತಲೆಗೆ ಕಟ್ಟಿದ್ದಾರೆ” ಎಂದು ಪ್ರಚಾರ ಮಾಡಿದರು.

ಈ ನೆಲ-ಮನೆಗಳ ಯೋಜನೆ ಕೆಲಸಗಳಿಗಾಗಿ ಗಣಪಯ್ಯ ತಮ್ಮ ಸ್ವಂತ ಹಣ ಖರ್ಚು ಮಾಡಿದ್ದು ಅಂದಿನ ಕಾಲದಲ್ಲೇ ಲಕ್ಷಗಳಲ್ಲಿತ್ತು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ‘ನಮ್ಮ ಎಲುಬುಗಳ ಮೇಲೆ’ – ನಾವು ಪ್ರದರ್ಶಿಸಿದ ಮೊದಲ ನಾಟಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...