Homeಮುಖಪುಟರಾಮ್‌ರಾಜ್‌ ಪಂಚೆ ಜಾಹೀರಾತಿನಲ್ಲಿ ಗಾಂಧಿ: ಮೆಚ್ಚುಗೆ, ವಿಮರ್ಶೆ

ರಾಮ್‌ರಾಜ್‌ ಪಂಚೆ ಜಾಹೀರಾತಿನಲ್ಲಿ ಗಾಂಧಿ: ಮೆಚ್ಚುಗೆ, ವಿಮರ್ಶೆ

‘ಗಾಂಧೀಜಿಯವರು ಪಂಚೆ ಮಾತ್ರವೇ ತನ್ನ ಉಡುಗೆಯೆಂದು ನಿರ್ಧರಿಸಿ ನೂರು ವರ್ಷವಾಯಿತು’ ಎಂದು ರಾಮ್‌ರಾಜ್‌ ಸಂಸ್ಥೆ ನೀಡಿರುವ ಜಾಹೀರಾತು ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.

- Advertisement -
- Advertisement -

‘ಪಂಚೆ ಮಾತ್ರವೇ ತನ್ನ ಉಡುಗೆಯೆಂದು ಗಾಂಧೀಜಿಯವರು ಘೋಷಿಸಿ ನೂರು ವರ್ಷಗಳಾಯಿತು’ ಎಂದು ರಾಮ್‌ರಾಜ್‌ ಕಾಟನ್‌ ಸಂಸ್ಥೆ ನೀಡಿರುವ ಜಾಹೀರಾತು (ಸೆ.22, ಬುಧವಾರ) ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.

‘ಪ್ರಜಾವಾಣಿ’ ದಿನಪತ್ರಿಕೆಯ ಮುಖಮುಖಪುಟದಲ್ಲಿ ಪ್ರಕಟವಾಗಿರುವ ಜಾಹೀರಾತನ್ನುಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕ ಓದುಗರು, ಜಾಹೀರಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಅನೇಕರು ಇದು ಬಂಡವಾಳಶಾಹಿ ವ್ಯವಸ್ಥೆಯ ವ್ಯಾಪಾರಿ ಗುಣವಷ್ಟೇ ಎಂದು ಟೀಕಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ಬಳಿಯ ಜವಳಿ ನಗರವೆಂದೇ ಖ್ಯಾತವಾದ ತಿರುಪುರದಲ್ಲಿ 1983ರಲ್ಲಿ ಸ್ಥಾಪನೆಯಾದ ರಾಮ್‌ರಾಜ್‌, ಇಂದು ಭಾರತದಲ್ಲಿ ಮನೆಮಾತಾಗಿರುವ ಬ್ರಾಂಡ್‌ಗಳಲ್ಲಿ ಒಂದಾಗಿದೆ. ದೋತಿ, ಅಂಗಿಗಳು, ಒಳ ಉಡುಪುಗಳು ಇತ್ಯಾದಿ ಉತ್ಪನ್ನಗಳಿಗೆ ರಾಮ್‌ರಾಜ್‌ ಅಚ್ಚುಮೆಚ್ಚಾಗಿದೆ. ಇಂದು ನೀಡಿರುವ ಜಾಹೀರಾತಿನಲ್ಲಿ ಗಾಂಧೀಜಿಯವರ ‘ಪಂಚೆ ಪ್ರೀತಿ’ಯನ್ನು ಸ್ಮರಿಸಲಾಗಿದೆ.

ಜಾಹೀರಾತಿನಲ್ಲಿ ಇರುವುದೇನು?

“ಕಳೆದ 100 ವರ್ಷಗಳ ಹಿಂದೆ ಇದೇ ದಿನದಂದು ತಮಿಳುನಾಡಿನ ಮಧುರೈ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಪಂಚೆ ಮಾತ್ರವೇ ಇನ್ನು ತನ್ನ ಉಡುಗೆಯೆಂದು ನಿರ್ಧರಿಸಿದ, ಮಾನವೀಯತೆ ತುಂಬಿದ ಮಹಾನ್‌ ವ್ಯಕ್ತಿ ಮಹಾತ್ಮಾ ಗಾಂಧೀಜಿಯರಿಗೆ ರಾಮ್‌ರಾಜ್‌ನ ಹೆಮ್ಮೆಯ ಸೆಲ್ಯೂಟ್‌”

ನನ್ನ ಜೀವನದ ಹಾದಿಯಲ್ಲಿ ನಾನು ತೆಗೆದುಕೊಂಡ ಎಲ್ಲಾ ಬದಲಾವಣೆಗಳೂ ಮುಖ್ಯವಾದ ಘಟನೆಳಿಂದಲೇ ನಡೆದಿವೆ. ಈ ನಿರ್ಣಯಗಳು ಆಳವಾದ ಆಲೋಚನೆಯ ನಂತರ ತೆಗೆದುಕೊಂಡವುಗಳು. ಆದುದರಿಂದ ನಾನು ಬೇಸರಗೊಳ್ಳ ಬೇಕಾದುದೇನೂ ಇಲ್ಲ. ನನ್ನಿಂದ ಮಾಡಲು ಸಾಧ್ಯವಾದ ಒಂದೇ ಒಂದು ಸಹಾಯ ನಾನು ತೆಗೆದುಕೊಂಡ ಈ ನಿರ್ಧಾರವೇ. ಮಧುರೈಯಲ್ಲಿ ನನ್ನ ಉಡುಪಿನಲ್ಲಿ ನಾನು ತೆಗೆದುಕೊಂಡ ಈ ಬದಲಾವಣೆಯ ಪರಿಣಾಮವಾಗಿ ನಂತರ ಪಂಚೆ ನನ್ನ ಗುರುತಾಗಿಯೇ ಪರಿಣಮಿಸಿತು.

– ಗಾಂಧೀಜಿ

‘ಪಂಚೆ ನನ್ನ ಗುರುತು’ ಎಂದು ನೀವು ಹೇಳಿದ ನುಡಿಯನ್ನೇ ವೇದವಾಕ್ಯದಂತೆ ಅನುಸರಿಸಿ, 40 ವರ್ಷಗಳಿಂದಲೂ ಪಂಚೆಯನ್ನು ಭಾರತದ ಗುರುತನ್ನಾಗಿಸಿದ್ದು ಮಾತ್ರವಲ್ಲದೆ, ಸಾವಿರಾರು ನೇಕಾರರ ಜೀವನಾಧಾರವನ್ನೂ ಉನ್ನತಮಟ್ಟಕ್ಕೇರಿಸಿದ, ‘ರಾಮ್‌ರಾಜ್‌’ ಎನ್ನುವ ಹೆಮ್ಮೆಯನ್ನು ನಿಮ್ಮ ಪಾದಕಮಲಗಳಿಗೆ ಅರ್ಪಿಸುತ್ತೇವೆ.

– ಇದು ‘ಪ್ರಜಾವಾಣಿ’ಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಸಾರಾಂಶ.

ಜನರ ಪ್ರತಿಕ್ರಿಯೆ

ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತಿನ ಪೋಟೋ ಹಂಚಿಕೊಂಡು, “ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಜಾಹೀರಾತು
ಯಾಕೋ ನನಗಿಷ್ಟವಾಯಿತು
” ಎಂದು ಚಿಂತಕ, ಕಲಾವಿದ ಗಿರಿಧರ್‌ ಕಾರ್ಕಳ ಅವರು ತಮ್ಮ ಎಫ್‌.ಬಿ. ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ನನಗೂ ಖಷಿಯಾಯಿತು ಗಿರಿಧರ್. ಅದರೇ ಸಲ್ಪ ಭಯವೂ ಆಯಿತು, ಎಲ್ಲದರೂ ಗಡ್ಡಪ್ಪನ ಪೋಟೋ ಇರಬಹುದೋ ಎಂದು, ಆದರೆ ಇರಲಿಲ್ಲ ಬಚಾವ್’ ಎಂದು ಉದ್ಯಾವರ ನಾಗೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಲಿಂಗ ಸಮಾನತೆ ಸಾರಿದ ಕ್ಯಾಡ್‌ಬರಿ ಡೈರಿಮಿಲ್ಕ್‌ ಜಾಹೀರಾತಿಗೆ ಭರಪೂರ ಮೆಚ್ಚುಗೆ

“ಎಲ್ಲಿ ಸ್ವಲ್ಪ ಸುಳ್ಳು ಕೂಡಾ ಇದೆ . ಅದು 100% ಖಾದಿ ಅಲ್ವಾ? ರಾಮ್‌ರಾಜ್ ಆ ಬಗೆಯದ್ದೇ?” ಎಂದು ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ ಪ್ರತಿಕ್ರಿಯಿಸಿದ್ದು, “ಪಂಚೆ ಎಂದಷ್ಟೇ ಉಲ್ಲೇಖಿಸಿರೋದ್ರಿಂದ ನಾವೂ ಪಂಚೆಯ ಕುರಿತೇ ಪಂಚಾತಿಕೆ ಮಾಡೋಣ ಅಲ್ವಾ?” ಎಂದು ಗಿರಿಧರ್‌ ಪ್ರತಿಕ್ರಿಯಿಸಿದ್ದಾರೆ.

ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರ ಸಂತತಿ ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದಾರೆ. ಹೀಗಾಗಿ ರಾಮ್‌ರಾಮ್‌ ಜಾಹೀರಾತು ದುರಿತ ಕಾಲದ ಹೊಸ ಭರವಸೆ ಎಂಬುದು ಅನೇಕರ ಮನದಾಳ.

ಜಾಹೀರಾತಿನ ಕುರಿತು ಆಕ್ಷೇಪಗಳೂ ವ್ಯಕ್ತವಾಗಿವೆ. “ಬಂಡವಾಳಶಾಹಿ ಗುಣ ಅದು. ಚಾಲ್ತಿಯಲ್ಲಿರುವ ಎಲ್ಲ ಸಾಂಕೇತಿಕ ಭಾಷೆಗಳನ್ನು, ಸಂಕೇತಗಳನ್ನು ಮತ್ತು ರೂಪಕಗಳನ್ನು ತನ್ನದಾಗಿಸಿಕೊಳ್ಳುತ್ತಾ ವಿಸ್ತರಿಸಿಕೊಳ್ಳುವುದು ಬಂಡವಾಳದ ಲಕ್ಷಣ. ರಾಮರಾಜ್ ಅದನ್ನೇ ಮಾಡಿದೆ ನಾಳೆ ಅದಾನಿ ಅಂಬಾನಿ ಸಹ ಇದನ್ನೇ ಅನುಕರಿಸುತ್ತಾರೆ” ಎಂದು ಚಿಂತಕ ನಾ.ದಿವಾಕರ್‌ ಅಭಿಪ್ರಾಯ ತಾಳಿದ್ದಾರೆ.

ಲೈಂಗಿಕ ರೋಗಗಳ ತಜ್ಞರಾದ ನಡಹಳ್ಳಿ ವಸಂತ್‌ ಪ್ರತಿಕ್ರಿಯಿಸಿದ್ದು, “ವಿಪರ್ಯಾಸವೆಂದರೆ ಗಾಂಧೀಜಿಯೂ ಕಾರ್ಪೋರೇಟ್‌ ಆಸ್ತಿಯಾಗುತ್ತಿದ್ದಾರೆ. ಕೈಮಗ್ಗವನ್ನು ಸ್ವಾಭಿಮಾನದ ಆರ್ಥಿಕ ಸ್ವಾವಲಂಬನೆಯ ಗುರುತಾಗಿ ಪ್ರಾರಂಭಿಸಿದ್ದರು ಗಾಂಧೀಜಿ. ಇವರ ಹೆಸರನ್ನು ಯಂತ್ರಗಳಿಂದ ತಯಾರಿಸುವ ಕಾರ್ಪೋರೇಟ್‌ಗಳು ಬಳಸುತ್ತಿದ್ದಾರೆ. ಎಲ್ಲರೂ ದುರಪಯೋಗ ಪಡಿಸಿಕೊಂಡಮೇಲೂ ಗಾಂಧಿ ಎನ್ನುವ ಹೆಸರು ಪರಿಶುದ್ಧವಾಗಿಯೇ ಉಳಿಯುತ್ತದೆ’ ಎಂದಿದ್ದಾರೆ.

ಒಟ್ಟಾರೆ ಜಾಹೀರಾತಿಯ ಸಂದೇಶ ತಾತ್ವಿಕವಾಗಿ ಒಳ್ಳೆಯದಿದ್ದರೂ ವ್ಯಾಪಾರಿ ಮನೋಭಾವದ ಆಯಾಮಗಳನ್ನು ಅಲ್ಲಗಳೆಯುವಂತಿಲ್ಲ. ಗ್ರಾಮಸ್ವರಾಜ್ಯದ ಕಲ್ಪನೆಯಲ್ಲಿ ಕಾರ್ಪೊರೇಟ್‌ ವ್ಯವಸ್ಥೆಯನ್ನು ಗಾಂಧಿ ಒಪ್ಪುವುದಿಲ್ಲ ಎನ್ನುವವರ ವಾದದಲ್ಲಿ ಉರುಳಿದೆ.


ಇದನ್ನೂ ಓದಿ: ಸರಕಾರಿ ಜಾಹೀರಾತು 100% ಕಡಿತ: ಸಿಎಎ ಪ್ರತಿಭಟನೆಗಳ ವರದಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆಯೇ ವಾರ್ತಾಭಾರತಿ ಕನ್ನಡ ದೈನಿಕ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...