Homeಮುಖಪುಟಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ

ಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ

ಮಹಿಷಾಸುರನ ಲಾಂಛನ ಎಮ್ಮೆಯಾಗಿರುವುದನ್ನು ಗಮನಿಸಬೇಕು. ಕೈಯಲ್ಲಿ ನಾಗರ ಹಾವು ಹಿಡಿದಿರುವುದು ಮಹಿಷನು ದ್ರಾವಿಡ ಪರಂಪರೆಯ ನಾಗಕುಲಕ್ಕೆ ಸೇರಿದವನೆಂಬುದಕ್ಕೆ ಸಾಕ್ಷಿಯಾಗಿದೆ.

- Advertisement -
- Advertisement -

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮತ್ತು ಕಳೆದ ಎಂಟು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಮಹಿಷ ದಸರ ಕುರಿತು ಮನುವಾದಿಗಳಿಗಿಂತ ಬಹುಜನರೇ ಹೆಚ್ಚು ಆತಂಕಕ್ಕೊಳಗಾಗಿರುವಂತೆ ಕಂಡುಬಂದಿದೆ. ನಮ್ಮ ಅನೇಕ ಹೋರಾಟಗಾರ ಸ್ನೇಹಿತರು ಮತ್ತು ಬುದ್ದಿಜೀವಿ ಬಳಗ ಇದೊಂದು ಪುರಾಣದ ಕತೆ, ನಮ್ಮ ಜನರನ್ನು ದಿಕ್ಕುತಪ್ಪಿಸಲು ಕೆಲವರು ಮಹಿಷನನ್ನು ಐತಿಹಾಸಿಕ ಪುರುಷ ಎಂದು ನಂಬಿಸುತ್ತಿದ್ದಾರೆ. ನಾವು ಬೌದ್ದರಾದರೆ ಸಾಕು. ಅದು ಬಿಟ್ಟು ಈ ಮಹಿಷನ ಕತೆ ಕಟ್ಟಿಕೊಂಡು ಏನಾಗಬೇಕಿದೆ? ಎಂದು ಜಾಲತಾಣದಲ್ಲಿ ವಾದಿಸುತ್ತಿದ್ದಾರೆ. ದಯಮಾಡಿ ಯಾರೂ ಗೊಂದಲಕ್ಕೊಳಗಾಗಬೇಡಿ. ಮಹಿಷಾಸುರ ಖಂಡಿತವಾಗಿ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ.

ಮಹಿಷನಾಡು, ಮಹಿಷೂರು ನಂತರ ಮೈಸೂರು ಆಗಿದೆ. ಮೈಸೂರಲ್ಲಿ ಮಹಿಷಾಸುರನ ಹಲವು ಪ್ರತಿಮೆಗಳಿವೆ. ಈಗಿನ ಚಾಮುಂಡಿ ಬೆಟ್ಟ ಹಿಂದೆ ಮಹಿಷಗಿರಿ ಎಂದು ಪ್ರಚಲಿತದಲ್ಲಿತ್ತು ಅದನ್ನು ಮಹಾಬಲ ಬೆಟ್ಟ ಎಂತಲೂ ಕರೆದಿದ್ದಾರೆ.

ಮಹಿಷ ಎಂದರೆ ಎಮ್ಮೆ. ಮೈಸೂರು ಪ್ರಾಂತ್ಯದಲ್ಲಿ ಎಲ್ಲಾ ತರದ ಕೃಷಿ ಚಟುವಟಿಕೆಗಳಿಗೂ ಎಮ್ಮೆಯನ್ನೇ ಬಳಸುತ್ತಿದ್ದರು… ಎಮ್ಮೆ ಈ ಜನರ ಹೆಮ್ಮೆ. ದನಗಳು ಆರ್ಯರ ಜಾನುವಾರುಗಳು.
ಆರ್ಯರು ಎಮ್ಮೆಗಳನ್ನು ಕೀಳು ಮಾಡಿ ತಮ್ಮ ದನಗಳನ್ನು ಶ್ರೇಷ್ಟಗೊಳಿಸಿದರು.

ಮಹಿಷ ಮಂಡಲ ಕೇರಳದ ವೈನಾಡು, ತಮಿಳುನಾಡಿನ ನೀಲಗಿರಿ ಪ್ರಾಂತ್ಯವನ್ನು ಒಳಗೊಂಡಿತ್ತು. ನೀಲಗಿರಿಯಲ್ಲಿ ಇಂದಿಗೂ ವಾಸವಾಗಿರುವ ತೋಡ ಎಂಬ ಗಿರಿಜನ ಮಹಿಷನ ವಂಶಸಂಸ್ಥರು ಎನ್ನಲಾಗಿದೆ. ಅವರು ಈಗಲೂ ಮಹಿಷನನ್ನು ಆರಾಧಿಸುತ್ತಾರೆ.
ನೀಲಗಿರಿ, ವೈನಾಡ್ ಜಿಲ್ಲೆಗಳಲ್ಲಿ ಇಂದಿಗೂ ಎಮ್ಮೆಗಳಿಂದಲೇ ಉಳುಮೆ ಮಾಡುತ್ತಾರೆ.

ಮಹಿಷಾಸುರನ ಲಾಂಛನ ಎಮ್ಮೆಯಾಗಿರುವುದನ್ನು ಗಮನಿಸಬೇಕು. ಕೈಯಲ್ಲಿ ನಾಗರ ಹಾವು ಹಿಡಿದಿರುವುದು ಮಹಿಷನು ದ್ರಾವಿಡ ಪರಂಪರೆಯ ನಾಗಕುಲಕ್ಕೆ ಸೇರಿದವನೆಂಬುದಕ್ಕೆ ಸಾಕ್ಷಿಯಾಗಿದೆ.

ಮಹಿಷ ಮಂಡಲವು ಮೈಸೂರು, ನೀಲಗಿರಿ, ವೈನಾಡು ಇಷ್ಟು ಭೂಪ್ರದೇಶವನ್ನು ಹೊಂದಿತ್ತು. ಇದನ್ನು “ಎರುಮೈನಾಡು” ಎಂದು ಕರೆದಿರುವುದು ಅನೇಕ ಇತಿಹಾಸದ ಸಂಶೋಧನೆಗಳಿಂದ ದೃಢಪಟ್ಟಿದೆ ಮತ್ತು ದಾಖಲಾಗಿದೆ. “ಎರುಮೈ” ಎಂದರೆ ಎಮ್ಮೆ ಎಂದರ್ಥ.

ಆದ್ದರಿಂದ ಮಹಿಷನ ಕುರಿತು ಯಾವುದೇ ಕೀಳರಿಮೆ, ಗೊಂದಲಗಳನ್ನು ನಮ್ಮ ಜನರು ಇಟ್ಟುಕೊಳ್ಳುವ ಅಗತ್ಯವಿಲ್ಲ. ಮಹಿಷ ನಿಶ್ಚಿತವಾಗಿ ದ್ರಾವಿಡ ದೊರೆ, ನಾಗವಂಶದ ರಾಜ ಮತ್ತು ಬೌದ್ದಾನುಯಾಯಿಯಾಗಿದ್ದ ಎಂಬುದಕ್ಕೆ ಅನೇಕ ದಾಖಲೆಗಳು ಲಭ್ಯವಿವೆ.

ಇತ್ತೀಚಗೆ ಗುಲ್ಬರ್ಗದ ಬಳಿ ನಡೆಸಿದ ಐತಿಹಾಸಿಕ ಉತ್ಖನನದಲ್ಲಿ ಮಹಿಷ ನಾಡಿನ ತೋಡರು ಬೌದ್ದವಿಹಾರಗಳಿಗೆ ಹಲವು ಕೊಡುಗೆಗಳನ್ನು ಕೊಟ್ಟಿರುವ ಬೌದ್ಧಶಾಸನಗಳು ದೊರೆತಿವೆ. ಈ ಕುರಿತು ಕಳೆದ ಭಾನುವಾರದ (೩.೧೦.೨೧) ಪ್ರಜಾವಾಣಿಯ ವಾರದ ಪುರವಣಿಯಲ್ಲಿ ಇತಿಹಾಸ ಸಂಶೋಧಕ ಷ.ಶಟರ್ ಅವರು ಬರೆದಿರುವ ಲೇಖನ ಹೆಚ್ಚು ಬೆಳಕು ಚಲ್ಲಿದೆ.

ಹಿಂದೆ ನಮ್ಮ ಸಮಾಜ ಪರಿವರ್ತನ ಪತ್ರಿಕೆಯಲ್ಲಿ ಸಹ ಈ ಕುರಿತು ಅನೇಕ ಲೇಖಕರು ಸರಣಿ ಬರಹಗಳನ್ನು ಬರೆದಿದ್ದಾರೆ. ಮೈಸೂರಿನ ನಮ್ಮ ಲೇಖಕ ಸ್ನೇಹಿತರಾದ ಸಿದ್ದಸ್ವಾಮಿಯವರು “ಮಹಿಷ ಮಂಡಲ” ಎಂಬ ತಮ್ಮ ಸಂಶೋಧಿತ ಕೃತಿಯಲ್ಲಿ ಐತಿಹಾಸಿಕ ವಿಚಾರಗಳೊಡನೆ ವರ್ತಮಾನದ ದಾಖಲೆಗಳನ್ನಿಟ್ಟು ಚರ್ಚಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿಯೇ ನಾವಿಂದು ಎಲ್ಲರೂ ಸೇರಿ ಮಹಿಷ ದಸರ ಆಚರಿಸಿಕೊಂಡು ಚಾರಿತ್ರಿಕ ಅನ್ಯಾಯವನ್ನು ಎತ್ತಿ ಹಿಡಿತುತ್ತಾ ನಮ್ಮ ಅಸ್ಮಿತೆಯನ್ನು ಉಳಿಸಲು ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದ್ದೇವೆ. ಇದರ ಸತ್ಯವು ಗೊತ್ತಿದ್ದೇ ಮನುವಾದಿಗಳು ಬೆಚ್ಚಿದ್ದಾರೆ. ಅವರು ಬೆಚ್ಚಿದ್ದಾರೆ ಎಂದರೆ ವಿಷಯವು ಸ್ಪಷ್ಟವಿದೆ ಎಂದರ್ಥ. ಅವರು ಅದನ್ನು ತಮ್ಮ ಅಧಿಕಾರ ಬಳಸಿ ತಡೆಯಲು ಯತ್ನಿಸುತ್ತಲೇ ಇದ್ದಾರೆ ಎಂದರೆ ಅದು ಸ್ಪಷ್ಟವಾಗಿ ನಮ್ಮ ಸ್ವಾಭೀಮಾನದ ಇತಿಹಾಸ ಎಂಬುದು ಖಚಿತವಾಗುತ್ತದೆ.

ಆದ್ದರಿಂದ ನಮ್ಮೊಳಗೆ ಅವರು ಗೊಂದಲ ಸೃಷ್ಟಿಸಲು ಆರಂಭಿಸಿದ್ದಾರೆ. ನಮ್ಮ ಜನರು ಗೊಂದಲಕ್ಕೊಳಗಾಗಬೇಡಿ. ಸತ್ಯವನ್ನು ಅರಿಯೋಣ. ಸತ್ಯವನ್ನು ಸಾರೋಣ. ಸತ್ಯವನ್ನು ಉಳಿಸೋಣ.

ಬಾಬಾಸಾಹೇಬರ ಬರಹಗಳಲ್ಲೂ ಅಸುರರು, ದಾಸರು, ದಸ್ಯುಗಳ ಕುರಿತ ದಾಖಲೆಗಳಿವೆ. ಮನುವಾದಿಗಳ ಕುತಂತ್ರಕ್ಕೆ ಬಲಿಯಾದ ನಮ್ಮ ವೀರರು ಮತ್ತು ಶೂರರು ಇತಿಹಾಸದಲ್ಲಿ ಅಸುರರೆಂದು, ರಾಕ್ಷಸರೆಂದು ಬಿಂಬಿಸಲ್ಪಟ್ಟಿದ್ದಾರೆ.

ಈ ರೀತಿ ಮಾಡುವ ಮೂಲಕ ನಮ್ಮಿಂದ ನಮ್ಮ ಪೂರ್ವಿಕರನ್ನು ದೂರಮಾಡುವ ಹುನ್ನಾರವೇ ಮನುವಾದಿಗಳದ್ದಾಗಿದೆ. ಆದ್ದರಿಂದಲೇ ನಮ್ಮ ಜನರು ನಮ್ಮ ಪೂರ್ವಿಕರ ಶೌರ್ಯದ ಇತಿಹಾಸ ಮರೆತು ಇದೇ ಮನುವಾದಿಗಳು ಸೃಷ್ಟಿಸಿರುವ ಕಾಲ್ಪನಿಕ ದೇವರುಗಳನ್ನು ನಂಬಿ ಆರಾಧಿಸುತ್ತಾ ಮನುವಾದಿಗಳಿಗೆ ಲಾಭ ಮಾಡುತ್ತಾ ತಮ್ಮ ನೈಜ ಸಂಸ್ಕೃತಿಯನ್ನು ಮರೆತು ಮನುವಾದಿಗಳ ಗುಲಾಮರಾಗಿದ್ದಾರೆ.

ಬಲಿ ಚಕ್ರವರ್ತಿ ಮತ್ತು ನರಕಾಸುರ ಎಂಬ ನಮ್ಮ ಪೂರ್ವಿಕರನ್ನು ಮನುವಾದಿಗಳು ಮೋಸದಿಂದ ಕೊಂದು ರಾಜ್ಯ ಕಬಳಿಸಿ ಅವರನ್ನು ದುಷ್ಟರೆಂದು ಚಿತ್ರಿಸಿ ಪಟಾಕಿ ಸಿಡಿಸಿ ನಮ್ಮಿಂದಲೇ ನಮ್ಮವರ ಸಾವನ್ನು ಸಂಭ್ರಮಿಸುವಂತೆ ಮಾಡಿದ್ದಾರೆ. ಹೀಗೆ ಇತಿಹಾಸದ ಉದ್ದಕ್ಕೂ ನಮ್ಮ ಪರಂಪರೆಯನ್ನು ನಾಶಗೊಳಿಸಿ ನಮ್ಮನ್ನು ದಿಕ್ಕುತಪ್ಪಿಸಿರುವ ಮನುವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ನಾವು ಮಾನಸಿಕವಾಗಿ ಬಿಡುಗಡೆ ಹೊಂದಿದಾಗ ಮಾತ್ರವೇ ಕಳೆದುಕೊಂಡಿರು ಅಧಿಕಾರವನ್ನು ಮರಳಿ ಪಡೆಯಬೇಕಿದೆ. ಇದೇ ನಮ್ಮ ಪರಂಪರೆಯಾಗಿದೆ. ಒಂದು ಸಮುದಾಯವನ್ನು ನಾಶ ಪಡಿಸಬೇಕಿದ್ದರೆ ಅದರ ಪರಂಪರೆಯನ್ನು ನಾಶ ಪಡಿಸಬೇಕು ಎಂಬುದು ಮನುವಾದಿಗಳ ಕುತಂತ್ರವಾಗಿದೆ ಎಂದು ಬಾಬಾಸಾಹೇಬರು ಹೇಳುತ್ತಾರೆ. ನಮ್ಮ ಪರಂಪರೆಯನ್ನು ಹುಡುಕಿ ಮರಳಿ ಪಡೆದರೆ ಮಾತ್ರ ಮನುವಾದಿಗಳ ಪರಂಪರೆಯಿಂದ ಹೊರಬಂದರೆ ಮಾತ್ರ ನಮಗೆ ಅಧಿಕಾರವು ದಕ್ಕಲಿದೆ. ಅಧಿಕಾರದಿಂದ ಮಾತ್ರ ನಮ್ಮ ಹಕ್ಕುಗಳು ದೊರೆಯಲಿವೆ. ಇದೆಲ್ಲವೂ ಬೌದ್ದೀಯತೆಯೇ ಆಗಿದೆ ಎಂಬುದನ್ನು ನೆನಪಿಡಿ.

  • ಡಾ.ಕೃಷ್ಣಮೂರ್ತಿ ಚಮರಂ

(ಡಾ.ಕೃಷ್ಣಮೂರ್ತಿ ಚಮರಂರವರು ಸಾಮಾಜಿಕ ಕಾರ್ಯಕರ್ತರು ಮತ್ತು ಬರಹಗಾರರು. ಲೇಖನದಲ್ಲಿನ ಅಭಿಪ್ರಾಯಗಳು ವೈಯಕ್ತಿಕವಾದವು. ಈ ಕುರಿತು ಚರ್ಚೆಗೆ ಆಹ್ವಾನವಿದೆ. ಮಹಿಷಾಸುರ ಸಂಬಂಧಿತ ಲೇಖನಗಳನ್ನು [email protected] ಗೆ ಕಳಿಸಬಹುದು)


ಇದನ್ನೂ ಓದಿ: ಮಹಿಷ ದಸರಾ: ಅಂಬಾರಿಯಲ್ಲಿ ಗಾಂಧಿ, ಅಂಬೇಡ್ಕರ್, ನಾಲ್ವಡಿ ಫೋಟೊ ಇರಲಿ – ಮಹೇಶ್ ಚಂದ್ರ ಗುರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...