Homeಮುಖಪುಟಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು... ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ.

- Advertisement -
- Advertisement -

| ಅರನಿ ಬಸು | ಸಂಶೋಧನಾ ವಿದ್ಯಾರ್ಥಿ

ಚರಿತ್ರೆಯನ್ನು ಸಂಯೋಜನಗೊಳಿಸುವ ಘಟನೆಗಳು ಇರುತ್ತವೆ. ಬಂಗಾಳದಲ್ಲಿ ಮೇ 23, 2019 ಅಂಥದ್ದೊಂದು. ಬಂಗಾಳದಲ್ಲಿ ಹಿಂದುತ್ವ ಬ್ರಿಗೇಡ್ ದೊಡ್ಡಮಟ್ಟದಲ್ಲಿ ಒಳಹೊಕ್ಕ ಮೇಲೆ, ಬರಲಿರುವ ದಿನಗಳಲ್ಲಿ ಇಲ್ಲಿನ ಸಮಾಜೋ-ಆರ್ಥಿಕ ವಿನ್ಯಾಸವೇ ತ್ವರಿತಗತಿಯಲ್ಲಿ ‘ಬಲ’ಕ್ಕೆ ಶಿಫ್ಟ್ ಆಗಬಹುದು. ಇದೇ ಹೊತ್ತಿಗೆ ಬಿಜೆಪಿಯ ಈ ಕ್ಷಿಪ್ರ ಉದಯವು, ಮಮತಾ ಬ್ಯಾನರ್ಜಿ ಮತ್ತವರ ಪಕ್ಷಕ್ಕೆ ಮರಣಗಂಟೆ ಆಗಲೂಬಹುದು.

ಬಿಜೆಪಿ ಹೀಗೆ ಬಂಗಾಳದಲ್ಲಿ ಗಟ್ಟಿಯಾಗಿ ಮತ್ತು ಅಗ್ರಸಿವ್ ಆಗಿ ನುಗ್ಗುತ್ತದೆ ಎಂದು ನಮ್ಮಲ್ಲಿ ಎಷ್ಟು ಜನ ಕಲ್ಪಿಸಿಕೊಂಡಿದ್ದೆವು? ಇಲ್ಲಿವರೆಗೆ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳು ಹಿಂದುತ್ವದ ಅಲೆಗೆ ವಿಚಲಿತರಾಗಿರಲಿಲ್ಲ. ಆದರೆ ಈಗ ಕೇಸರಿ ಅಲೆ ಬಂಗಾಳ ಹೊಕ್ಕಾಗಿದೆ, ಇದು ನಮಗೆ ಆತ್ಮವಿಮರ್ಶೆಯ ಕಾಲ. ಸದ್ಯಕ್ಕೆ ಇಲ್ಲಿ ಮೂರು ಪ್ರಶ್ನೆಗಳಿವೆ: 1) ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ 18 ಸೀಟು ಗಳಿಸಲು ಸಾಧ್ಯವಾದದ್ದು ಹೇಗೆ? 2) ಮಮತಾ ಬ್ಯಾನರ್ಜಿಗೆ ಕೈಕೊಟ್ಟಿದ್ದೇನು?. 3) ಬಂಗಾಳದಲ್ಲಿ ಮೊದಲ ಬಾರಿಗೆ ಸಿಪಿಎಂಗೆ ಒಂದೂ ಸೀಟು ಸಿಗಲಿಲ್ಲವೇಕೆ?

2019ರ ಫಲಿತಾಂಶಗಳು ಎರಡು ಅಂಶಗಳನ್ನು ಹೊರಹಾಕಿವೆ: ಜನರಿಗೆ ಮಮತಾ ನೇತೃತ್ವದ ಸರ್ಕಾರದ ಬಗ್ಗೆ ಅತೃಪ್ತಿಯಿತ್ತು… ಮತ್ತು ಎರಡನೇದಾಗಿ ಬಂಗಾಳದ ಜನತೆಗೆ ಕೇಸರಿ ಪಡೆಯನ್ನು ಅಪ್ಪಿಕೊಳ್ಳಲು ಯಾವ ಮುಜುಗುರವೂ ಇಲ್ಲ. ಎರಡೇ ಆಯ್ಕೆಗಳ ನಡುವೆ ಸಿಕ್ಕಿಕೊಂಡಾಗ ಸಿಪಿಎಂ ಸಹಜ ಆಯ್ಕೆ. ಆದರೆ ಅದರ ಸಂಘಟನೆಯ ಸತತ ವಿಘಟನೆಯ ಕಾರಣದಿಂದ ಅದು ಸಾಧ್ಯವಿಲ್ಲದ ಆಯ್ಕೆ.

ನಾವೀಗ ಕೊನೆ ಪ್ರಶ್ನೆಯತ್ತ ಗಮನ ಹರಿಸೋಣ. ಒಂದು ಕಾಲಕ್ಕೆ ಇಲ್ಲಿ ಗಟ್ಟಿ ತಳಹದಿ ಹೊಂದಿದ್ದ ಸಿಪಿಎಂಗೆ ಈಗ ನಾಯಕತ್ವದ ಕೊರತೆ, ಯುವಜನರ ಸಂಘಟನೆಯ ಕೊರತೆ ಮತ್ತು ತಳಮಟ್ಟದ ಸಂಪರ್ಕದ ಕೊರತೆ ಕಾಡುತ್ತಿವೆ. ಇಲ್ಲಿ ಲಕ್ಷಾಂತರ ಜನ ತಮ್ಮನ್ನು ಗುರುತಿಸಿಕೊಳ್ಳಬಯಸುವ ಯುವ ನಾಯಕರ ಕೊರತೆ ಸಿಪಿಎಂನಲ್ಲಿ ತುಂಬಾ ಇದೆ. ಈ ಸಲ ಸ್ವಾತಂತ್ರ್ಯಾ ನಂತರ ಅತಿ ಹೆಚ್ಚಿನ ಮತದಾನ (ಶೆ. 67.11) ಆಗಿದೆ. ಈ ದೃಷ್ಟಿಯಲ್ಲಿ ಈ ಲಕ್ಷಾಂತರ ಜನ ಯಾರಿಗೆ ಮತ ಹಾಕಿದರು? ಬಂಗಾಳದಲ್ಲಿ ಎಡಪಕ್ಷಗಳಿಗೆ ಹಾಕಿರುವ ಸಾಧ್ಯತೆಗಳೇ ಇಲ್ಲ. ಯುವ ನಾಯಕರ ಕೊರತೆ ಮತ್ತು ಒಂದು ಸ್ಪಷ್ಟ ಅಜೆಂಡಾದ ಕೊರತೆಯ ಕಾರಣಕ್ಕೆ. ಅದು ದುರಾದೃಷ್ಟ ಅನಿಸಿದರೂ ಬಂಗಾಳದಲ್ಲಿ ಸಿಪಿಎಂ ಒಂದೂ ಸೀಟೂ ಗೆಲ್ಲಲಿಲ್ಲ ಎನ್ನುವುದು ಅತಾರ್ಕಿಕವಂತೂ ಅಲ್ಲ.

ಎರಡನೇ ಪ್ರಶ್ನೆಗೆ ಬರುವುದಾದರೆ, ಯಾವುದೇ ಯೋಜನೆಗಳ ಜಾರಿಯ ಬಗ್ಗೆ ಕಾಳಜಿ ವಹಿಸದೇ ವೋಟ್‍ವ್ಯಾಂಕ್ ರಾಜಕಾರಣವನ್ನು ದೂರದಿಂದ (ಸುರಂಗ ದೃಷ್ಟಿ) ಅರ್ಥೈಸಿಕೊಂಡಿದ್ದೇ ಮಮತಾರಿಗೆ ಮುಳುವಾಯಿತು. ಪಶ್ಚಿಮ ಬಂಗಾಳದಲ್ಲಿ ಒಂದು ಬಲವಾದ ಅಲ್ಪಸಂಖ್ಯಾತ ಸಮುದಾಯವಿದೆ. ಬಾಬ್ರಿ ಮಸೀದಿ ಉರುಳಿದಾಗ ಈ ರಾಜ್ಯದಲ್ಲಿ ಯಾವುದೇ ಕೋಮು ಕಂಪನ ಸಂಭವಿಸಿರಲಿಲ್ಲ. ಆದರೆ ಈ 8-9 ವರ್ಷಗಳಲ್ಲಿ ಟಿಎಂಸಿ ಮಾಡಿದ ಓಲೈಸುವಿಕೆ ರಾಜಕೀಯ ಮತದಾರರಿಗೆ ಇಷ್ಟವಾಗಿಲ್ಲ ಅನಿಸುತ್ತದೆ. ಉದ್ಯೋಗ ಸೃಷಿಯಲ್ಲಿ ವಿಫಲತೆ, ರಾಜ್ಯದ ಒಳಭಾಗಗಳಲ್ಲಿ ದೌರ್ಜನ್ಯ ಮತ್ತು ಹಿಂಸೆಯ ಯತ್ನಗಳಿಂದಾಗಿ ಬೇಸರಗೊಂಡ ಹಿಂದೂಗಳು ಈ ಸಲ ಕೋಮುವಾದಿ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ.

ಇದರ ಜೊತೆಗೆ ಬಿಜೆಪಿಯ ಸಂಘಟನಾ ಶಕ್ತಿ ಟಿಎಂಸಿ ಮತ್ತು ಸಿಪಿಎಂಗಿಂತ ಪ್ರಬಲವಾಗಿತ್ತು. ಹಿಂದುತ್ವ ಎಂಬ ‘ಮೇವನ್ನು’ ಹಿಡಿದು ಬಂದ ಅವರು, ಮತದಾರರ ನಾಡಿಮಿಡಿತವನ್ನು ಸರಿಯಾಗಿಯೇ ಗ್ರಹಿಸಿದರು, ಸರಿಯಾದ ಸಂದರ್ಭಕ್ಕೆ ಅವರನ್ನು ಹಿಡಿದುಕೊಂಡು ಪರಿಸ್ಥಿಯ ಲಾಭ ಪಡೆದುಕೊಂಡರು. ಈ ಐದು ವರ್ಷ ತಾವು ಎಂತಹ ಆಡಳಿತ ಕೊಟ್ಟೆವು ಎಂಬುದನನ್ನೇನೂ ಹೇಳಲಿಲ್ಲ, ಬದಲಿಗೆ ಏಕೀಕೃತ ಭಾರತದ ವಿಷಯವನ್ನು ‘ಮಾರಿದರು’. ಈಗ ಮತ್ತೆ ಮೊದಲ ಪ್ರಶ್ನೆ, ಅಂದರೆ ಬಿಜೆಪಿಗೆ 18 ಸೀಟು ಸಿಕ್ಕಿದ್ದು ಹೇಗೆ ಎಂಬುದಕ್ಕೆ ಬರೋಣ. ಅದಕ್ಕೆ ಕಾರಣ: ಟಿಎಂಸಿಯ ವಿಫಲಗೊಂಡ ಓಲೈಸುವಿಕೆಯ ನೀತಿ-ಕಾರ್ಯಕ್ರಮಗಳು ಮತ್ತು ಸಿಪಿಎಂ ಸಾರ್ವಜನಿಕ ಜೀವನದೊಂದಿಗೇ ಅದೃಶ್ಯವಾದದ್ದು.

ಮುಂದಿನ ದಾರಿಯ ಬಗ್ಗೆ ಯೋಚಿಸಿದಾಗ, ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು… ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ. ಒಮ್ಮೆ ಬಿಜೆಪಿ ಬಂಗಾಳದಲ್ಲಿ ತನ್ನ ಕೋಮು ಭಯೋತ್ಪಾದನೆಯನ್ನು ಶುರು ಮಾಡಿದರೆ, ಆಡಳಿತದ ಬಗ್ಗೆ ಅದರ ನಿಷ್ಠೆ ಎಂಥದ್ದು ಎಂಬುದು ಜನತೆಗೆ ಅರ್ಥವಾಗಲಿದೆ. ಆಗವರು, ಸಾರ್ವಜನಿಕವಾಗಿ ಅಂತಹ ವೇಷವಿಲ್ಲದಿದ್ದರೂ ಅಂತರಾಳದಲ್ಲಿ ಕೋಮುವಾದಿಯೇ ಆಗಿರುವ ಟಿಎಂಸಿಯ ಆಶ್ರಯದ ಮೊರೆ ಹೋಗಲಾರರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...