Homeಮುಖಪುಟಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು... ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ.

- Advertisement -
- Advertisement -

| ಅರನಿ ಬಸು | ಸಂಶೋಧನಾ ವಿದ್ಯಾರ್ಥಿ

ಚರಿತ್ರೆಯನ್ನು ಸಂಯೋಜನಗೊಳಿಸುವ ಘಟನೆಗಳು ಇರುತ್ತವೆ. ಬಂಗಾಳದಲ್ಲಿ ಮೇ 23, 2019 ಅಂಥದ್ದೊಂದು. ಬಂಗಾಳದಲ್ಲಿ ಹಿಂದುತ್ವ ಬ್ರಿಗೇಡ್ ದೊಡ್ಡಮಟ್ಟದಲ್ಲಿ ಒಳಹೊಕ್ಕ ಮೇಲೆ, ಬರಲಿರುವ ದಿನಗಳಲ್ಲಿ ಇಲ್ಲಿನ ಸಮಾಜೋ-ಆರ್ಥಿಕ ವಿನ್ಯಾಸವೇ ತ್ವರಿತಗತಿಯಲ್ಲಿ ‘ಬಲ’ಕ್ಕೆ ಶಿಫ್ಟ್ ಆಗಬಹುದು. ಇದೇ ಹೊತ್ತಿಗೆ ಬಿಜೆಪಿಯ ಈ ಕ್ಷಿಪ್ರ ಉದಯವು, ಮಮತಾ ಬ್ಯಾನರ್ಜಿ ಮತ್ತವರ ಪಕ್ಷಕ್ಕೆ ಮರಣಗಂಟೆ ಆಗಲೂಬಹುದು.

ಬಿಜೆಪಿ ಹೀಗೆ ಬಂಗಾಳದಲ್ಲಿ ಗಟ್ಟಿಯಾಗಿ ಮತ್ತು ಅಗ್ರಸಿವ್ ಆಗಿ ನುಗ್ಗುತ್ತದೆ ಎಂದು ನಮ್ಮಲ್ಲಿ ಎಷ್ಟು ಜನ ಕಲ್ಪಿಸಿಕೊಂಡಿದ್ದೆವು? ಇಲ್ಲಿವರೆಗೆ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳು ಹಿಂದುತ್ವದ ಅಲೆಗೆ ವಿಚಲಿತರಾಗಿರಲಿಲ್ಲ. ಆದರೆ ಈಗ ಕೇಸರಿ ಅಲೆ ಬಂಗಾಳ ಹೊಕ್ಕಾಗಿದೆ, ಇದು ನಮಗೆ ಆತ್ಮವಿಮರ್ಶೆಯ ಕಾಲ. ಸದ್ಯಕ್ಕೆ ಇಲ್ಲಿ ಮೂರು ಪ್ರಶ್ನೆಗಳಿವೆ: 1) ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ 18 ಸೀಟು ಗಳಿಸಲು ಸಾಧ್ಯವಾದದ್ದು ಹೇಗೆ? 2) ಮಮತಾ ಬ್ಯಾನರ್ಜಿಗೆ ಕೈಕೊಟ್ಟಿದ್ದೇನು?. 3) ಬಂಗಾಳದಲ್ಲಿ ಮೊದಲ ಬಾರಿಗೆ ಸಿಪಿಎಂಗೆ ಒಂದೂ ಸೀಟು ಸಿಗಲಿಲ್ಲವೇಕೆ?

2019ರ ಫಲಿತಾಂಶಗಳು ಎರಡು ಅಂಶಗಳನ್ನು ಹೊರಹಾಕಿವೆ: ಜನರಿಗೆ ಮಮತಾ ನೇತೃತ್ವದ ಸರ್ಕಾರದ ಬಗ್ಗೆ ಅತೃಪ್ತಿಯಿತ್ತು… ಮತ್ತು ಎರಡನೇದಾಗಿ ಬಂಗಾಳದ ಜನತೆಗೆ ಕೇಸರಿ ಪಡೆಯನ್ನು ಅಪ್ಪಿಕೊಳ್ಳಲು ಯಾವ ಮುಜುಗುರವೂ ಇಲ್ಲ. ಎರಡೇ ಆಯ್ಕೆಗಳ ನಡುವೆ ಸಿಕ್ಕಿಕೊಂಡಾಗ ಸಿಪಿಎಂ ಸಹಜ ಆಯ್ಕೆ. ಆದರೆ ಅದರ ಸಂಘಟನೆಯ ಸತತ ವಿಘಟನೆಯ ಕಾರಣದಿಂದ ಅದು ಸಾಧ್ಯವಿಲ್ಲದ ಆಯ್ಕೆ.

ನಾವೀಗ ಕೊನೆ ಪ್ರಶ್ನೆಯತ್ತ ಗಮನ ಹರಿಸೋಣ. ಒಂದು ಕಾಲಕ್ಕೆ ಇಲ್ಲಿ ಗಟ್ಟಿ ತಳಹದಿ ಹೊಂದಿದ್ದ ಸಿಪಿಎಂಗೆ ಈಗ ನಾಯಕತ್ವದ ಕೊರತೆ, ಯುವಜನರ ಸಂಘಟನೆಯ ಕೊರತೆ ಮತ್ತು ತಳಮಟ್ಟದ ಸಂಪರ್ಕದ ಕೊರತೆ ಕಾಡುತ್ತಿವೆ. ಇಲ್ಲಿ ಲಕ್ಷಾಂತರ ಜನ ತಮ್ಮನ್ನು ಗುರುತಿಸಿಕೊಳ್ಳಬಯಸುವ ಯುವ ನಾಯಕರ ಕೊರತೆ ಸಿಪಿಎಂನಲ್ಲಿ ತುಂಬಾ ಇದೆ. ಈ ಸಲ ಸ್ವಾತಂತ್ರ್ಯಾ ನಂತರ ಅತಿ ಹೆಚ್ಚಿನ ಮತದಾನ (ಶೆ. 67.11) ಆಗಿದೆ. ಈ ದೃಷ್ಟಿಯಲ್ಲಿ ಈ ಲಕ್ಷಾಂತರ ಜನ ಯಾರಿಗೆ ಮತ ಹಾಕಿದರು? ಬಂಗಾಳದಲ್ಲಿ ಎಡಪಕ್ಷಗಳಿಗೆ ಹಾಕಿರುವ ಸಾಧ್ಯತೆಗಳೇ ಇಲ್ಲ. ಯುವ ನಾಯಕರ ಕೊರತೆ ಮತ್ತು ಒಂದು ಸ್ಪಷ್ಟ ಅಜೆಂಡಾದ ಕೊರತೆಯ ಕಾರಣಕ್ಕೆ. ಅದು ದುರಾದೃಷ್ಟ ಅನಿಸಿದರೂ ಬಂಗಾಳದಲ್ಲಿ ಸಿಪಿಎಂ ಒಂದೂ ಸೀಟೂ ಗೆಲ್ಲಲಿಲ್ಲ ಎನ್ನುವುದು ಅತಾರ್ಕಿಕವಂತೂ ಅಲ್ಲ.

ಎರಡನೇ ಪ್ರಶ್ನೆಗೆ ಬರುವುದಾದರೆ, ಯಾವುದೇ ಯೋಜನೆಗಳ ಜಾರಿಯ ಬಗ್ಗೆ ಕಾಳಜಿ ವಹಿಸದೇ ವೋಟ್‍ವ್ಯಾಂಕ್ ರಾಜಕಾರಣವನ್ನು ದೂರದಿಂದ (ಸುರಂಗ ದೃಷ್ಟಿ) ಅರ್ಥೈಸಿಕೊಂಡಿದ್ದೇ ಮಮತಾರಿಗೆ ಮುಳುವಾಯಿತು. ಪಶ್ಚಿಮ ಬಂಗಾಳದಲ್ಲಿ ಒಂದು ಬಲವಾದ ಅಲ್ಪಸಂಖ್ಯಾತ ಸಮುದಾಯವಿದೆ. ಬಾಬ್ರಿ ಮಸೀದಿ ಉರುಳಿದಾಗ ಈ ರಾಜ್ಯದಲ್ಲಿ ಯಾವುದೇ ಕೋಮು ಕಂಪನ ಸಂಭವಿಸಿರಲಿಲ್ಲ. ಆದರೆ ಈ 8-9 ವರ್ಷಗಳಲ್ಲಿ ಟಿಎಂಸಿ ಮಾಡಿದ ಓಲೈಸುವಿಕೆ ರಾಜಕೀಯ ಮತದಾರರಿಗೆ ಇಷ್ಟವಾಗಿಲ್ಲ ಅನಿಸುತ್ತದೆ. ಉದ್ಯೋಗ ಸೃಷಿಯಲ್ಲಿ ವಿಫಲತೆ, ರಾಜ್ಯದ ಒಳಭಾಗಗಳಲ್ಲಿ ದೌರ್ಜನ್ಯ ಮತ್ತು ಹಿಂಸೆಯ ಯತ್ನಗಳಿಂದಾಗಿ ಬೇಸರಗೊಂಡ ಹಿಂದೂಗಳು ಈ ಸಲ ಕೋಮುವಾದಿ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ.

ಇದರ ಜೊತೆಗೆ ಬಿಜೆಪಿಯ ಸಂಘಟನಾ ಶಕ್ತಿ ಟಿಎಂಸಿ ಮತ್ತು ಸಿಪಿಎಂಗಿಂತ ಪ್ರಬಲವಾಗಿತ್ತು. ಹಿಂದುತ್ವ ಎಂಬ ‘ಮೇವನ್ನು’ ಹಿಡಿದು ಬಂದ ಅವರು, ಮತದಾರರ ನಾಡಿಮಿಡಿತವನ್ನು ಸರಿಯಾಗಿಯೇ ಗ್ರಹಿಸಿದರು, ಸರಿಯಾದ ಸಂದರ್ಭಕ್ಕೆ ಅವರನ್ನು ಹಿಡಿದುಕೊಂಡು ಪರಿಸ್ಥಿಯ ಲಾಭ ಪಡೆದುಕೊಂಡರು. ಈ ಐದು ವರ್ಷ ತಾವು ಎಂತಹ ಆಡಳಿತ ಕೊಟ್ಟೆವು ಎಂಬುದನನ್ನೇನೂ ಹೇಳಲಿಲ್ಲ, ಬದಲಿಗೆ ಏಕೀಕೃತ ಭಾರತದ ವಿಷಯವನ್ನು ‘ಮಾರಿದರು’. ಈಗ ಮತ್ತೆ ಮೊದಲ ಪ್ರಶ್ನೆ, ಅಂದರೆ ಬಿಜೆಪಿಗೆ 18 ಸೀಟು ಸಿಕ್ಕಿದ್ದು ಹೇಗೆ ಎಂಬುದಕ್ಕೆ ಬರೋಣ. ಅದಕ್ಕೆ ಕಾರಣ: ಟಿಎಂಸಿಯ ವಿಫಲಗೊಂಡ ಓಲೈಸುವಿಕೆಯ ನೀತಿ-ಕಾರ್ಯಕ್ರಮಗಳು ಮತ್ತು ಸಿಪಿಎಂ ಸಾರ್ವಜನಿಕ ಜೀವನದೊಂದಿಗೇ ಅದೃಶ್ಯವಾದದ್ದು.

ಮುಂದಿನ ದಾರಿಯ ಬಗ್ಗೆ ಯೋಚಿಸಿದಾಗ, ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು… ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ. ಒಮ್ಮೆ ಬಿಜೆಪಿ ಬಂಗಾಳದಲ್ಲಿ ತನ್ನ ಕೋಮು ಭಯೋತ್ಪಾದನೆಯನ್ನು ಶುರು ಮಾಡಿದರೆ, ಆಡಳಿತದ ಬಗ್ಗೆ ಅದರ ನಿಷ್ಠೆ ಎಂಥದ್ದು ಎಂಬುದು ಜನತೆಗೆ ಅರ್ಥವಾಗಲಿದೆ. ಆಗವರು, ಸಾರ್ವಜನಿಕವಾಗಿ ಅಂತಹ ವೇಷವಿಲ್ಲದಿದ್ದರೂ ಅಂತರಾಳದಲ್ಲಿ ಕೋಮುವಾದಿಯೇ ಆಗಿರುವ ಟಿಎಂಸಿಯ ಆಶ್ರಯದ ಮೊರೆ ಹೋಗಲಾರರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...