Homeಮುಖಪುಟಲಖೀಂಪುರ್ ರೈತರ ಹತ್ಯೆ ಮತ್ತು ನಂತರದ ಘಟನೆಗಳ ಸುತ್ತ..

ಲಖೀಂಪುರ್ ರೈತರ ಹತ್ಯೆ ಮತ್ತು ನಂತರದ ಘಟನೆಗಳ ಸುತ್ತ..

- Advertisement -
- Advertisement -

’ಲಖೀಂಪುರ್ ಖೇರಿ ಕಾರ್ ದಾಳಿಯ ಆರೋಪಿ, ಕೇಂದ್ರೀಯ ಮಂತ್ರಿ ಅಜಯ್ ಮಿಶ್ರನನ್ನು ಎಲ್ಲಿಯವರೆಗೆ ವಜಾಗೊಳಿಸುವುದಿಲ್ಲವೋ ಅಲ್ಲಿಯವರೆಗೆ ರೈತರ ಆಂದೋಲನ ವಿಶ್ರಾಂತಿ ಪಡೆಯುವುದಿಲ್ಲ. ಹಾಗೂ ಈ ಬೇಡಿಕೆಯನ್ನಿಟ್ಟುಕೊಂಡು, ಅಕ್ಟೋಬರ್ 15ರಂದು ಇಡೀ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಪ್ರತಿಕೃತಿಯನ್ನು ಸುಡಲಾಗುವುದು, ಅಕ್ಟೋಬರ್ 18ರಂದು ಇಡೀ ದೇಶದಲ್ಲಿ 6 ಗಂಟೆಗಳ ಕಾಲ ರೈಲು ರೋಕೋ ಆಂದೋಲನ ನಡೆಸಲಾಗುವುದು ಹಾಗೂ ಅಕ್ಟೋಬರ್ 26ರಂದು ಲಖನೌನಲ್ಲಿ ಒಂದು ಬೃಹತ್ ಕಿಸಾನ್ ಮಹಾಪಂಚಾಯತ್ ಆಯೋಜಿಸಲಾಗುವುದು’ – ಅಕ್ಟೋಬರ್ 12ರಂದು ಉತ್ತರಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯ ತಿಕೋನಿಯದಲ್ಲಿ ಆಯೋಜಿಸಲಾದ ಅಂತಿಮ ಪ್ರಾರ್ಥನೆ ಸಭೆಯಲ್ಲಿ ಈ ಮಾತುಗಳನ್ನು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಹೇಳಿದರು.

ಅಲ್ಲಿ ರಾಕೇಶ್ ಟಿಕಾಯತ್ ಅವರ ಭಾಷಣದ ಮೇಲೆ ಹೆಚ್ಚಿನ ಗಮನವಿತ್ತು, ಅವರೇ ಈ ಭಯಾನಕ ಘಟನೆಯ ನಂತರ ರೈತರ ಮತ್ತು ಯುಪಿ ಸರಕಾರದ ನಡುವೆ ನಡೆದ ಮಾತುಕತೆಯ ನೇತೃತ್ವ ವಹಿಸಿಕೊಂಡಿದ್ದರು. ರೈತರ ಬೇಡಿಕೆಗಳನ್ನು ಪುನರುಚ್ಚರಿಸುತ್ತ ಟಿಕಾಯತ್ ಅವರು ಆತುರದಲ್ಲಿ ನಡೆದ ಒಪ್ಪಂದದ ಬಗ್ಗೆ ಸ್ಪಷ್ಟೀಕರಣ ನೀಡಿದರು ಹಾಗೂ ರೈತರ ಆಂದೋಲನದಲ್ಲಿ ಬಿರುಕುಗಳನ್ನು ಸೃಷ್ಟಿಸಲು ಪ್ರಯತ್ನ ಮಾಡಲಾಗುತ್ತಿದೆ ಹಾಗೂ ಈ ನಿಟ್ಟಿನಲ್ಲಿ ವದಂತಿಗಳನ್ನು ಹರಿಬಿಡಲಾಗುತ್ತಿದೆ ಎಂದು ಹೇಳಿದರು.

ರಾಕೇಶ್ ಟಿಕಾಯತ್‌ ‘ಅಲ್ಲಾಹು ಅಕ್ಬರ್ ಎಂದರೆ.. ರೈತರು ಕೋಪದಿಂದ ‘ಹರಹರ ಮಹಾದೇವ’ ಎಂದು ಕೂಗಿದ್ದು ನಿಜವೇ..?
PC: PTI

ಲಖೀಂಪುರ ಖೇರಿ ಘಟನೆಯ ಆರನೆಯ ದಿನದಂದು ರಾಕೇಶ್ ಟಿಕಾಯತ್ ಅವರು ದೆಹಲಿಯಲ್ಲಿ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ, ನಾನು ದೇಶವು ಉರಿದು ಹೋಗುವುದನ್ನು ತಡೆಗಟ್ಟಿದ್ದೇನೆ ಎಂದು ಹೇಳಿದ್ದರು. ವಾಸ್ತವದಲ್ಲಿ, ಅವರು ಅದರ ಮೂಲಕ, ತುಂಬಾ ಕಡಿಮೆ ಸಮಯದಲ್ಲಿ ಅತ್ಯಂತ ಕಡಿಮೆ ಸಾಧನೆಯ ಈ ಒಪ್ಪಂದವನ್ನು ಮಾಡಲಾಗಿದೆ ಎಂದು ಹೇಳಿದ ಟೀಕಾಕಾರರಿಗೆ ಉತ್ತರ ನೀಡಿದ್ದರು.

3ನೇ ಅಕ್ಟೋಬರ್‌ನಂದು ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಯುಪಿಯ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರ ವಿರುದ್ಧ ಪ್ರದರ್ಶನ ಮಾಡುತ್ತಿದ್ದ ರೈತರ ಮೇಲೆ ಸ್ಥಳೀಯ ಎಂಪಿ ಹಾಗೂ ಮೋದಿ ಕ್ಯಾಬಿನೆಟ್‌ನಲ್ಲಿ ಗೃಹ ರಾಜ್ಯ ಮಂತ್ರಿಯಾದ ಅಜಯ್ ಮಿಶ್ರ ಟೇನಿಯ ಮಗ ಆಶೀಶ್ ಮಿಶ್ರ ಟೇನಿಯು ತನ್ನ ವಾಹನವನ್ನು ಚಲಿಸಿದ್ದ ಎಂದು ಆರೋಪಿಸಲಾಗಿದೆ. ಅದರಲ್ಲಿ ನಾಲ್ಕು ರೈತರು ಅತ್ಯಂತ ಭಯಾನಕ ಸಾವನ್ನಪ್ಪಿದ್ದರು.

ಈ ಘಟನೆ ಆದ 24 ಗಂಟೆಗಳಲ್ಲಿ ರೈತರು ಮತ್ತು ಆಡಳಿತದ ನಡುವೆ ಮಾತುಕತೆ ಆಗಿ ಒಪ್ಪಂದವಾಗಿತ್ತು ಹಾಗೂ ಅದರಲ್ಲಿ ಟಿಕಾಯತ್ ಅವರು ನಿರ್ವಹಿಸಿದ ಪಾತ್ರವನ್ನು ಪ್ರಶಂಸಿಸಲಾಗಿತ್ತು. ಇದರ ಅನುಗುಣವಾಗಿ ಮಂತ್ರಿ ಮತ್ತು ಮಂತ್ರಿಯ ಮಗನ ಮೇಲೆ ಕೊಲೆಯ ಪ್ರಕರಣ, ಮಂತ್ರಿಯನ್ನು ವಜಾಗೊಳಿಸುವ ಬೇಡಿಕೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಬೇಡಿಕೆಯು ಒಳಗೊಂಡಿತ್ತು. ಘಟನೆ ಆದ ಒಂದು ವಾರದೊಳಗೆ ಸರಕಾರವು ಸಂತ್ರಸ್ತ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಿದೆ ಹಾಗೂ ಮಂತ್ರಿಯ ಮಗ ಆಶೀಶ್ ಮಿಶ್ರ ಟೇನಿಯನ್ನು ಬಂಧಿಸಲಾಗಿದೆ.

ಸಚಿವ ಅಜಯ್ ಮಿಶ್ರನನ್ನು ಈ ಕೂಡಲೇ ಮಂತ್ರಿ ಮಂಡಲದಿಂದ ವಜಾಗೊಳಿಸುವುದು ರೈತ ನಾಯಕರ ಬೇಡಿಕೆಯಾಗಿದೆ. ಅದನ್ನು ಇನ್ನೂ ಮಾಡಿಲ್ಲ. ಈ ಒಪ್ಪಂದದ ಅತಿದೊಡ್ಡ ಟೀಕೆ ಏನಿತ್ತೆಂದರೆ, ಇದರ ಮಾತುಕತೆಯಲ್ಲಿ ಯೋಗಿ ಸರಕಾರವು ಟಿಕಾಯತ್ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಅಧಿಕಾರಿಗಳನ್ನು ಮಾತುಕತೆ ನಿರ್ವಹಿಸುವ ಜವಾಬ್ದಾರಿ ನೀಡಿತ್ತು ಎಂಬುದು. ರೈತರ ಕಡೆಯಿಂದಲೂ ತಪ್ಪುಗಳು ಆಗಿವೆ ಎಂಬ ಸಂದೇಶವನ್ನು ಸರಕಾರವು ಆತುರದಲ್ಲಿ ಆದ ಈ ಒಪ್ಪಂದದ ಮೂಲಕ ನೀಡಲು ಪ್ರಯತ್ನ ಮಾಡಿತು. ಏಕೆಂದರೆ, ನಾಲ್ಕು ರೈತರನ್ನು ಹೊರತುಪಡಿಸಿ ಇನ್ನೂ ಐದು ಜನ ಸಾವನ್ನಪ್ಪಿದ್ದರು. ಅದರಲ್ಲಿ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಕೂಡ ಇದ್ದರು. ಶ್ರದ್ಧಾಂಜಲಿ ಸಭೆಯಲ್ಲಿ ಸಂತ್ರಸ್ತ ಕುಟುಂಬದವರನ್ನೂ ಆಹ್ವಾನಿಸಲಾಗಿತ್ತು ಹಾಗೂ ನಾಲ್ಕು ರೈತರ ಜೊತೆಗೆ ರಮಣ್ ಕಶ್ಯಪ್ ಅವರನ್ನೂ ಹುತಾತ್ಮ ಎಂದು ಪರಿಗಣಿಸಲಾಗಿದೆ.

ಕೇಶವ ಪ್ರಸಾದ ಮೌರ್ಯ

ವದಂತಿ ಹಬ್ಬಿಸುವವರು ಟಿಕಾಯತ್ ಅವರು ತಮ್ಮ ವೈಯಕ್ತಿಕ ಸ್ತರದಲ್ಲಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ ಹಾಗೂ ಗಡಿಬಿಡಿ ಮಾಡಿ ಯೋಗಿ ಸರಕಾರಕ್ಕೆ ಒಂದು ದೊಡ್ಡ ವಿಪತ್ತಿನಿಂದ ರಕ್ಷಿಸಿದ್ದಾರೆ ಎಂಬ ಸುಳ್ಳನ್ನು ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರೈತ ನಾಯಕರು ಹೇಳಿದ್ದಾರೆ. ರಾಕೇಶ್ ಟಿಕಾಯತ್ ಅವರ ಈ ’ಉಪಕಾರ’ದದ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಬಹಳಷ್ಟು ಪ್ರಚಾರ ನೀಡಿದವು. ಎಷ್ಟರಮಟ್ಟಿಗೆ ಎಂದರೆ, ಇಂಡಿಯನ್ ಎಕ್ಸ್‌ಪ್ರೆಸ್‌ನ ಒಂದು ಲೇಖನದಲ್ಲಿ ಟಿಕಾಯತ್ ಅವರ ಜೊತೆಗೆ ಮಾತುಕತೆ ನಡೆಸಿದ ಪೊಲೀಸ್ ಅಧಿಕಾರಿಗಳ ಹೆಸರನ್ನೂ ಪ್ರಕಟಿಸಲಾಯಿತು.

ಆದರೆ ಈ ಒಪ್ಪಂದ ಆದ ಒಂದು ದಿನದಲ್ಲಿಯೇ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಹಾಗೂ ನಾಯಕ ಡಾ. ದರ್ಶನ್ ಪಾಲ್ ಅವರು ವರ್ಕರ್ಸ್ ಯುನಿಟಿ ಡಾಟ್‌ಕಾಂ ಜೊತೆಯ ಮಾತುಕತೆಯಲ್ಲಿ ಈ ನಿರ್ಣಯವನ್ನು ಸಮರ್ಥಿಸಿಕೊಂಡರು. ಈ ಒಪ್ಪಂದವನ್ನು ಸ್ಥಳೀಯ ಎಸ್‌ಕೆಎಂ ತಂಡದ ಸಹಮತದೊಂದಿಗೆ ಮಾಡಲಾಗಿದೆ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಒಂಭತ್ತು ಸದಸ್ಯರ ಸಮಿತಿಯು ಈ ಮಾತುಕತೆಯಲ್ಲಿ ನಿರಂತರವಾಗಿ ಶಾಮೀಲಾಗಿತ್ತು ಎಂದು ಡಾ. ದರ್ಶನ್ ಪಾಲ್ ಅವರು ಹೇಳಿದರು. ಇದರ ಹೊರತಾಗಿಯೂ, ಒಂದು ಪ್ರಶ್ನೆಯನ್ನು ಅನೇಕರು ಇನ್ನೂ ಕೇಳುತ್ತಿದ್ದಾರೆ; ಆರೋಪಿಗಳ ಬಂಧನ ತಕ್ಷಣ ಆಗದೇ ಇರುವುದಕ್ಕೆ ಕಾರಣವೇನು ಹಾಗೂ ಅದಕ್ಕೆ ಈ ಒಪ್ಪಂದ ಕಾರಣವೇ ಎಂಬುದು.

ಅಂದಹಾಗೆ ಈ ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬದ ಸದಸ್ಯರೇ ಈ ವಿಷಯದಲ್ಲಿ ಏನೂ ಹೇಳಿಲ್ಲ. ಪತ್ರಕರ್ತ ರಮಣ ಕಶ್ಯಪ್ ಅವರ ಸಹೋದರ ಸ್ಪಷ್ಟಪಡಿಸಿದ್ದೇನೆಂದರೆ, ತನ್ನ ಸಹೋದರನ ಸಾವು, ವಾಹನವನ್ನು ಅವರ ಮೇಲೆ ಚಲಾಯಿಸಿದ ಕಾರಣದಿಂದಲೇ ಆಗಿದೆ ಎಂದು. ಆದರೆ ಸರಕಾರ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಅವರನ್ನು ರೈತರೇ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ.

ವಾಹನದಲ್ಲಿ ಕುಳಿತಿದ್ದ ಇತರ ನಾಲ್ಕು ಜನರ ಸಾವಿಗೆ ಕಾರಣ ಏನು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಸ್ಥಳೀಯ ರೈತ ನಾಯಕರು ಹೇಳುವುದೇನೆಂದರೆ, ಅವರುಗಳು ವಾಹನದಲ್ಲಿ ಕುಳಿತಿದ್ದ ವ್ಯಕ್ತಿಗಳನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು ಎಂದು.

ಅಜಯ್ ಮಿಶ್ರಾ

ರೈತ ನಾಯಕ ಧರ್ಮೇಂದ್ರ ಮಲಿಕ್ ಅವರು ಹೇಳಿದ್ದೇನೆಂದರೆ, ಸಂತ್ರಸ್ತರ ಕುಟುಂಬದವರು ಮತ್ತು ಸ್ಥಳೀಯ ರೈತರ ನಾಯಕರ ತಂಡದ ಸಹಮತದೊಂದಿಗೆ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು ಹಾಗೂ ಇದಕ್ಕೆ ಸಂಬಂಧಪಟ್ಟ ಯಾವ ವ್ಯಕ್ತಿಯೂ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು.

ಆದರೆ ಘಟನಾಕ್ರಮದ ಪ್ರತ್ಯಕ್ಷ ಸಾಕ್ಷಿಯಾದ ಒಬ್ಬ ಪಿಎಸಿ ಜವಾನ್ ಸಮೀರ್ (ಹೆಸರು ಬದಲಿಸಲಾಗಿದೆ) ಹೇಳಿದ್ದೇನೆಂದರೆ, ತನ್ನ ಜೀಪನ್ನು ಜನರ ಮೇಲೆ ಓಡಿಸಿದ ನಂತರ ಜೀಪಲ್ಲಿ ಕುಳಿತ್ತಿದ್ದ ಮಂತ್ರಿಯ ಮಗ ಆಶಿಶ್ ಮಿಶ್ರ ತನ್ನ ಪಿಸ್ತೂಲಿನಿಂದ ಜನರ ಮೇಲೆ ಗುಂಡು ಹಾರಿಸಿದ ಹಾಗೂ ಈ ಪ್ರಕ್ರಿಯೆಯಲ್ಲಿ ಇಬ್ಬರಿಗೆ ಗುಂಡು ತಗುಲಿತು ಹಾಗೂ ಅದರಲ್ಲಿ ಒಬ್ಬ ವ್ಯಕ್ತಿ ಘಟನಾಸ್ಥಳದಲ್ಲಿಯೇ ಮೃತನಾದ ಎಂದು.

ಸಮೀರ್ ಮುಂದುವರೆಸಿ, ತಿಕೊನಿಯದಲ್ಲಿ ಕೇಶವ ಪ್ರಸಾದ ಮೌರ್ಯ ಆಗಮಿಸಲಿದ್ದ ಹೆಲಿಪ್ಯಾಡ್‌ಅನ್ನು ರೈತರು ವಶಪಡಿಸಿಕೊಂಡಿದ್ದರು ಹಾಗೂ ಅವರು ಬರುವ ಕಾರ್ಯಕ್ರಮ ರದ್ದಾದ ಸುದ್ದಿ ತಿಳಿದ ನಂತರ ಪ್ರತಿಭಟನಾಕಾರರು ವಾಪಸ್ ಮರಳುತ್ತಿದ್ದರು. ಅದೇ ಸಮಯದಲ್ಲಿ ಹೆಲಿಪ್ಯಾಡ್‌ನಿಂದ 200 ಮೀಟರ್ ದೂರದಲ್ಲಿಯ ತನ್ನ ಮನೆಯಿಂದ ಮಂತ್ರಿಯ ಮಗನು ಮೂರು ವಾಹನಗಳ ಬೆಂಗಾವಲಿನಲ್ಲಿ ಅತಿ ಹೆಚ್ಚಿನ ವೇಗದಲ್ಲಿ ಪ್ರತಿಭಟನಾಕಾರರಿಂದ ತುಂಬಿದ ರಸ್ತೆಯ ಕಡೆಗೆ ಚಲಿಸಿದ. ಪ್ರತ್ಯಕ್ಷ ಸಾಕ್ಷಿ ಸಮೀರ್‌ಗೆ ಅದನ್ನು ನೋಡಿ ಅನಿಸಿದ್ದೇನೆಂದರೆ, ಈ ರೀತಿ ಅತಿ ವೇಗದಲ್ಲಿ ಜನದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಓಡಿಸುವುದರ ಹಿಂದೆ ಒಂದು ಸ್ಪಷ್ಟ ಗುರಿ ಇತ್ತು ಹಾಗೂ ಮನೆಯತನಕ ಬಂದ ರೈತರಿಗೆ ಹೆದರಿಸುವ ಗುರಿಯಿಂದ ಈ ಅಪರಾಧವನ್ನು ಎಸಗಲಾಗಿದೆ ಎಂದು ಸಮೀರ್ ಹೇಳಿದರು.

ಶ್ರದ್ಧಾಂಜಲಿ ಸಭೆಯಲ್ಲಿ ರಾಕೇಶ್ ಟಿಕಾಯತ್ ಅವರೂ ಹೇಳಿದ್ದೇನೆಂದರೆ, ಅಲ್ಲಿ ಚಲಿಸಲಾದ ಜೀಪಿನಲ್ಲಿ 4ಬೈ4 ಗೀಯರ್ ಅಳವಡಿಸಲಾಗಿತ್ತು. ಈ ವಾಹನಗಳಿಗೆ ನಾಲ್ಕೂ ಗಾಲಿಗಳಲ್ಲಿ ಪವರ್ ಇರುತ್ತೆ ಹಾಗೂ ಗೀಯರ್ ಹಾಕಿದ ನಂತರ ಈ ವಾಹನಗಳು ಸ್ಲಿಪ್ ಆಗದೇ ಓಡುತ್ತವೆ. ಹಾಗಾಗಿ ರೈತರ ಮೇಲೆ ಹಾಯಿಸಿದ ನಂತರವೂ ವಾಹನ ಬ್ಯಾಲೆನ್ಸ್ ತಪ್ಪದೇ ಮುಂದುವರೆಯಬೇಕು ಎಂಬ ಉದ್ದೇಶದೊಂದಿಗೆ ಈ ಕೃತ್ಯವನ್ನು ಎಸಗಿದ್ದು ಸ್ಪಷ್ಟ ಎಂದು ರಾಕೇಶ್ ಹೇಳಿದರು. ಹಾಗೂ ಇದರ ತನಿಖೆ ಆಗಬೇಕು ಎಂದರು.

ವಾಸ್ತವದಲ್ಲಿ ಲಖೀಂಪುರ್ ಖೇರಿ ಪ್ರದೇಶದಲ್ಲಿ ದಬಂಗ್ ಎಂದು ಕರೆದುಕೊಳ್ಳುವ ಅಜಯ್ ಮಿಶ್ರ, ಈ ಘಟನೆಯ ಎಂಟು ದಿನ ಮುಂಚೆ, ಸೆಪ್ಟೆಂಬರ್ 25ರಂದು, ಇಲ್ಲಿಂದ 50 ಕಿಲೊಮೀಟರ್ ದೂರದಲ್ಲಿಯ ಒಂದು ಗುರುದ್ವಾರದ ಎದುರಿಗೆ ಪ್ರಚೋದನಕಾರಿ ಭಾಷಣ ಮಾಡಿ ತಮ್ಮ ಉದ್ದೇಶ ಸ್ಪಷ್ಟಪಡಿಸಿದ್ದರು. ಆಗ ತುಂಬಿದ ಸಭೆಯಲ್ಲಿ ಏನಿಯ ರೈತರಿಗೆ ಪಾಠ ಕಲಿಸಲಾಗುವುದು ಹಾಗೂ ಪರೋಕ್ಷ ರೂಪದಲ್ಲಿ 6 ರೈತರನ್ನು ಲಖೀಂಪುರ್ ಖೇರಿಯಿಂದ ಹೊರಗೆ ಹಾಕುವುದಾಗಿ ಬೆದರಿಕೆ ನೀಡಿದ್ದರು. ಅದರ ವಿಡಿಯೋ ನಂತರ ವೈರಲ್ ಆಯಿತು. ವಾಸ್ತವದಲ್ಲಿ ಸಂಘರ್ಷ ಇಲ್ಲಿಂದಲೇ ಶುರುವಾಗಿತ್ತು. ಕೃಷಿ ಕಾನೂನುಗಳ ವಿರುದ್ಧ ಶುರುವಾದ ಸಮಯದಿಂದ ಈ ಪ್ರದೇಶದ ಸಿಖ್ ರೈತರು ಬಿಜೆಪಿ ನಾಯಕರ ವಿರೋಧ ಮಾಡುತ್ತಿದ್ದಾರೆ.

ಸೆಪ್ಟೆಂಬರ್ 25ರಂದು ಕೆಲವು ದೊಡ್ಡ ಸಿಖ್ ರೈತರು ಮಹಂಗಾಪುರ್ ಗುರುದ್ವಾರದಲ್ಲಿ ಮಂತ್ರಿ ಅಜಯ್ ಮಿಶ್ರ ಟೇನಿಯ ಸ್ವಾಗತ ಕಾರ್ಯಕ್ರಮ ಮಾಡಲು ಇಚ್ಛಿಸಿದ್ದರು, ಅದಕ್ಕೆ ಗುರುದ್ವಾರದಿಂದ ಅನುಮತಿ ದೊರಕಲಿಲ್ಲ ಹಾಗೂ ಸ್ಥಳೀಯ ಸಿಖ್ ರೈತರೂ ಅದಕ್ಕೆ ವಿರೋಧ ಮಾಡಿದರು. ಅದರ ನಂತರ ಮಂತ್ರಿಯ ಕಾರ್ಯಕ್ರಮವು ಗುರುದ್ವಾರದ ಹೊರಗಡೆ ರಸ್ತೆಯಲ್ಲಿ ಮಾಡಲಾಯಿತು ಹಾಗೂ ಅಲ್ಲಿ ಹಲವಾರು ರೈತರು ಮಂತ್ರಿಗೆ ಕಪ್ಪು ಬಟ್ಟೆ ಬೀಸಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಮಂತ್ರಿಯು ಗುರುದ್ವಾರದ ಎದರುಗಡೆಯಿಂದ ಹೊರಡುವಾಗ ಥಂಬ್ಸ್ ಡೌನ್ ತೋರಿಸುತ್ತಿರುವ ಒಂದು ವಿಡಿಯೋ ಕೂಡ ಹೊರಬಂದಿದೆ. ಅದರ ನಂತರ ಪ್ರದೇಶದಲ್ಲಿ ಆದ ಇತರ ಸಭೆಗಳಲ್ಲಿ ಮಂತ್ರಿ ಅಜಯ ಮಿಶ್ರ ಬಹಿರಂಗವಾಗಿ ಬೆದರಿಕೆ ನೀಡಿದ್ದರು.

ಆಶೀಶ್ ಮಿಶ್ರ

ಮಂತ್ರಿಯ ಹೇಳಿಕೆಯ ನಂತರ ರೈತರಲ್ಲಿ ಅಸಮಾಧಾನ ಹೆಚ್ಚಿತ್ತು ಹಾಗೂ ಅಲ್ಲಿಯ ರೈತ ಯುನಿಯನ್‌ನ ಮುಖಂಡ ತೇಜಿಂದರ್ ವಿರ್ಕ್ ಅವರು ಮಂತ್ರಿಗೆ ಸವಾಲು ಹಾಕಿದ್ದರು. ಸ್ಥಳೀಯ ಜನರು ಹೇಳುವುದೇನೆಂದರೆ, ಅಜಯ್ ಮಿಶ್ರ ಆ ಪ್ರದೇಶದಲ್ಲಿ ದಬಂಗ್ ಆಗಿ ಕಾಣಿಸಿಕೊಳ್ಳುತ್ತಾನೆ ಹಾಗೂ ತನ್ನನ್ನು ತಾನು ಟೇನಿಯ ಮಹಾರಾಜ ಎಂದು ಕರೆದುಕೊಳ್ಳುತ್ತಾನೆ. ತನ್ನ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿ ರೈತರು ಪ್ರದರ್ಶನ ಮಾಡಿದ್ದು, ಅವರ ವರ್ಚಸ್ಸಿಗೆ ಧಕ್ಕೆ ತಂದಿತ್ತು. ರೈತರನ್ನು ಹೆದರಿಸುವ ಸಲುವಾಗಿ ಈ ಕುಕೃತ್ಯವನ್ನು ಮಾಡಲಾಗಿದೆ ಎಂದು ಅಲ್ಲಿಯ ಜನರು ಹೇಳುತ್ತಾರೆ.

ಆದಾಗ್ಯೂ, ಮೋದಿ ಸರಕಾರದ ವರ್ತನೆಯನ್ನು ನೋಡಿದರೆ, ಮಂತ್ರಿಯನ್ನು ವಜಾಗೊಳಿಸುವ ಮೂಡಿನಲ್ಲಿ ಇದ್ದಾರೆ ಎಂದು ತೋರುವುದಿಲ್ಲ. ಆದರೆ, ರೈತರ ಸಂಘಟನೆಗಳು ಯುಪಿಯಲ್ಲಿ ಒತ್ತಡವನ್ನು ಹೆಚ್ಚಿಸುವ ತಂತ್ರವನ್ನು ಇನ್ನಷ್ಟು ಗಟ್ಟಿಯಾಗಿ ಮುಂದುವರೆಸುವ ಗುರಿಯನ್ನು ಹೊಂದಿದ್ದಾರೆ ಹಾಗೂ ಇದರ ಬಗ್ಗೆ ಘೋಷಣೆಗಳನ್ನೂ ಮಾಡಲಾಗಿದೆ.

ಯುಪಿಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ಜರುಗಲಿದೆ. ಇಲ್ಲಿ ಈಗ ಬಿಜೆಪಿಯ ಬಹುಮತದ ಸರಕಾವಿದೆ ಹಾಗೂ ರೈತರ ಆಂದೋಲನದಿಂದ ಹೆಚ್ಚುತ್ತಿರುವ ಒತ್ತಡದಿಂದ ತಲೆಬಾಗಿಸಬೇಕಾಗಿ ಬರಬಹುದು. ಯೋಗಿ ಸರಕಾರದ ವರ್ತನೆಯನ್ನು ನೋಡಿದರೆ ಹಾಗೆಯೇ ಆಗುವ ಸಂಕೇತಗಳು ಸ್ಪಷ್ಟವಾಗಿ ಕಾಣುತ್ತಿ ವೆ. ಈ ಕಾರಣದಿಂದ ಬಿಜೆಪಿಯ ಆಂತರಿಕ ಸಂಘರ್ಷಗಳೂ ಕಾಣಿಸಿಕೊಳ್ಳಬಹುದು.

ಯುಪಿಯ ಮುಖ್ಯಮಂತ್ರಿ ಯೋಗಿ ಹಾಗೂ ಒಕ್ಕೂಟ ಸರಕಾರದ ಗೃಹರಾಜ್ಯ ಮಂತ್ರಿ ಅಜಯ್ ಮಿಶ್ರನ ನಡುವೆ ಒಳ್ಳೆಯ ಸಂಬಂಧ ಇಲ್ಲ ಹಾಗೂ ಯೋಗಿಗೆ ಒಂದು ಮಾತು ಕೇಳದೇ ಮಿಶ್ರನನ್ನು ಕೇಂದ್ರದಲ್ಲಿ ಸಚಿವನನ್ನಾಗಿಸಲಾಯಿತು ಎಂದು ಹೇಳಲಾಗುತ್ತಿದೆ. ಈ ಘಟನೆಯ ನಂತರ ಅಜಯ ಮಿಶ್ರ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಭೇಟಿಯಾದಾಗ, ಮಿಶ್ರ ಸಚಿವಾಯಲಯದ ಕೆಲಸವನ್ನು ಮುಂಚೆಯ ಹಾಗೆ ಮುಂದುವರೆಸಲು ಸೂಚಿಸಲಾಗಿದ್ದನ್ನು ಗಮನಿಸಬೇಕಿದೆ.

ಸಂದೀಪ್ ರೌಜಿ಼, ಸಂಸ್ಥಾಪಕ ಸಂಪಾದಕ, ವರ್ಕರ್ಸ್ ಯುನಿಟಿ
ಕನ್ನಡಕ್ಕೆ: ರಾಜಶೇಖರ್ ಅಕ್ಕಿ


ಇದನ್ನೂ ಓದಿ: ಲಖಿಂಪುರ್: ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ; ಇನ್ನಿಬ್ಬರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...